PDF at
https://archive.org/details/dli.osmania.4196
Text below
note: the following items are not proof read
1.ಶಂಕರಕಥಾಸಾರ
2.ಕನ್ನಡ ಸಾಹಿತ್ಯ ಪರಿಷತ್ತು
3.ಬೆನಕ ಮಹಿಮೆ
UNIVERSAL LIBRARY
OL
200254
LIBRARY
UNIVERSAL
ಕಾದಂಬರೀ ಸಂಗ್ರಹ'.
ಸುಲಭ ಶೈಲಿಯಿಂದ ನೀತಿಗ್ರಂಥವನ್ನು ಪ್ರಕಟಿಸುವ
ಕನ್ನಡ ಮಾಸಪತ್ರಿಕೆ.
ಚತುರ್ಥ ಸಂಪುಟ:
ಇದರಲ್ಲಿ ಮೂರು ಉತ್ತಮ ಗ್ರಂಥಗಳಿರುವುವು.
Edited by
C Venkataramana Sastry.
ರಾಯಲ್ ಪ್ರೆಸ್ನಲ್ಲಿ ಮುದ್ರಿಸಲ್ಪಟ್ಟಿತು
----
1915 -16
ಬೆಲೆ. ೧-೮-೦
PRINTED BY B. V. Narasimha Iyengar,
AT THE ROYAL PRESS,
MYSORE.
-------------------------------------------
https://archive.org/details/dlihttps://archive.org/details/dli.osmania.4196
UNIVERSAL LIBRARY
OL
200254
LIBRARY
UNIVERSAL
ಕಾದಂಬರೀ ಸಂಗ್ರಹ'.
ಸುಲಭ ಶೈಲಿಯಿಂದ ನೀತಿಗ್ರಂಥವನ್ನು ಪ್ರಕಟಿಸುವ
ಕನ್ನಡ ಮಾಸಪತ್ರಿಕೆ.
ಚತುರ್ಥ ಸಂಪುಟ:
ಇದರಲ್ಲಿ ಮೂರು ಉತ್ತಮ ಗ್ರಂಥಗಳಿರುವುವು.
Edited by
C Venkataramana Sastry.
ರಾಯಲ್ ಪ್ರೆಸ್ನಲ್ಲಿ ಮುದ್ರಿಸಲ್ಪಟ್ಟಿತು
----
1915 -16
ಬೆಲೆ. ೧-೮-೦
PRINTED BY B. V. Narasimha Iyengar,
AT THE ROYAL PRESS,
MYSORE.
-------------------------------------------
ಕಾದಂಬರೀಸಂಗ್ರಹ ಗ್ರಂಥಮಾಲಾ ನಂ.25,
ನನ್ನ ಸಂಸಾರ.
ಸಿ. ವೆಂಕಟರಮಣಶಾಸ್ತ್ರಿ
ರಾಯಲ್ ಪ್ರಿಂಟಿಂಗ್ ಪ್ರೆಸ್,
ಮೈಸೂರು.
1915.
Price 5 Annas.
-------------------------------------------------
ಪೀಠಿಕೆ.
ಇದೊಂದು ಸಂಸಾರಚಿತ್ರವನ್ನು ವಿವರಿಸುವ ವಿವರಿಸುವ ಕಾದಂಬರಿ. ಹಿಂದೂ ಸಂಸಾರ
ದಲ್ಲಿ ಸಂಭವಿಸುವ ಅನೇಕ ಗೃಹಚ್ಛಿದ್ರಗಳ ವಿಚಾರವು ಈ ಗ್ರಂಥದಲ್ಲಿ ವಿವರಿಸಲ್ಪ
ಟ್ಟಿದೆ ಮತ್ತು ಸಮಯಾನುಸಾರವಾಗಿ ಸ್ತ್ರೀಯರು ತಿಳಿದಿರಬೇಕಾದ ಅನೇಕ ಧರ್ಮ ನೀತಿಗಳೂ ಇಲ್ಲಿ ಅತಕವಾಗಿದೆ. ಗ್ರಾಹಕ ಮಹಾಶಯರು ನನ್ನ ಇತರ ಗ್ರಂಥ
ಗಳಂತೆ ಇದನ್ನ ಆದರಿಸಬೇಕಾಗಿ ಪ್ರಾರ್ಥನೆ
ಸಜ್ಜನಸೇವಕ .
ವೆಂಕಟರಮಣಶಾಸ್ತ್ರಿ.
-----------------------------------------------
ನನ್ನ ಸಂಸಾರ
ನಾನು ರಂಗಪುರದಲ್ಲಿ ಹುಟ್ಟಿದನು. ನಮ್ಮ ಪೂರ್ವಿಕರು ಶ್ರೋತ್ರಿಯರೆಂದು
ಕೇಳಿ ಬಲ್ಲೆನು, ಆರು ಬಹು ದಿನದ ಮಾತು. ಸುಮಾರು ನೂರಾರು ವರ್ಷ ಕಳೆದು
ಹೋಗಿರ ಬಹುದು. ಈಗಿನ ಸ್ಥಿತಿಯಲ್ಲಿ ಅದನ್ನು ಇಲ್ಲಿಂದ ಹೇಳಿದರೆ ಸಾಕಾಗಿದೆ.
ನಾನು ಈಗಿನ ಹುಡುಗಿ, ನನಗೆ ಅದೆಲ್ಲಾ ತಿಳಿಯದು. ನನಗೆ ತಿಳಿಯುವಷ್ಟನ್ನು ಮಾತ್ರ
ನಮ್ಮ ಸೋದರಿಯರಿಗೆ ವಂಚನೆಯಿಲ್ಲದೆ ಹೇಳಿಬಿಡುವೆನು. ನನ್ನ ಹೆಸರು ಮಹಾಲಕ್ಷ್ಮಿ.
ನಮ್ಮ ತಂದೆ ವಿಷ್ಣು ಮಿತ್ರರೆಂದು ನಾಮಧೇಯವು, ನಮ್ಮ ಪಿತಾಮಹರು
ಕೃಷ್ಣಮಿತ್ರರೆಂದು ಪ್ರಸಿದ್ಧರಾದರು. ನಮ್ಮ ಮುತ್ತಾತಂದರ ಕಾಲದಲ್ಲಿ ನಮ್ಮ
ಮನೆಯಲ್ಲಿ ಸರ್ವದಾ ಐಶ್ವರ್ಯ ಲಕ್ಷ್ಮಿಯು ತಾಂಡವ ವಾಡುತ್ತಿದ್ದಳಂತೆ? ಆ ಕಾಲ
ದಲ್ಲಿ ಮನೆಯಲ್ಲಿ ಬಹುಮಂದಿ ಶಿಷ್ಯರು ಪಾಠಪ್ರವಚನ ಮಾಡುತ್ತಾ ನಮ್ಮ ಮನೆ
ಯಲ್ಲೇ ವಾಸಮಾಡಿಕೊಂಡಿದ್ದರಂತೆ? ಕರಾವುಗಳು ಬಹಳವಾಗಿದ್ದುವಂತೆ? ಧಾನ್ಯದ
ರಾಶಿಯು ಯಾವಾಗ ನೋಡಿದರೂ ಮೂಲೆಮೂಲೆಯಲ್ಲಿ ಸುರಿದಿರುತ್ತ ಇದ್ದುದಂತೆ?
ಅತಿಥಿ ಅಭ್ಯಾಗತರ ಸೇವೆಯೂ ವೇದಾಧ್ಯನ ಘೋಷವೂ ಅಗ್ನಿಹೋತ್ರ್ಯಾದಿಗಳ
ಸಮರಭವೂ ನಮ್ಮ ಮನೆಯ ಶಾಂತಿಯನ್ನುವಿಷೇಷತಃ ಅಭಿವೃದ್ಧಿ ಪಡಿಸುತ್ತಿದ್ದ
ವಂತೆ ! ಈಗಣ ಕಾಲದಲ್ಲಿ ನಾನೆಲ್ಲಿಯೂ ಇದನ್ನು ನೋಡಿದವಳೇ ಅಲ್ಲ. ಈಗಲೂ
ಅಂತಹ ಪುಣ್ಯವಂತರು ಅಲ್ಲಲ್ಲಿಯೇ ಇರುವುರೆಂದು ಕೇಳುತ್ತೇನೆ-ಅಂತಹ ಮಹಾತ್ಮನಿಗೆ
ಸಹಸ್ರಶಃ ನಮಸ್ಕಾರ ಮಾಡುತ್ತೇನೆ,
ಈಗ ನಮ್ಮ ಮನೆಯಲ್ಲಿ ಆ ಭಾಗವು ಇಲ್ಲ. ಆ ಐಶ್ವರ್ಯಕಲ್ಷ್ಮಿಯ, ನಾನು
ಜನ್ಮಿಸುವದಕ್ಕಿಂತ ಐವತ್ತು ವರ್ಷಗಳ ಹಿಂದೆಯೇ ನನ್ನ ಮನೆಯನ್ನು ಬಿಟ್ಟು ಪ್ರಯಾ
ಣಮಾಡಿ ಬಿಟ್ಟಳಂತೆ ! ನಮ್ಮ ತಾತ ಕೃಷ್ಣ ಮಿತ್ರರು ಬಡವರಾದಾಗ್ಯೂ, ಅವರಲ್ಲಿ
ಪೂರ್ವಿಕರ ಸದ್ಗುಣಗಳು ರಾರಾಜಿಸುತ್ತಿದ್ದುವು. ನಾನು ಚಿಕ್ಕ ಮಗುವಾಗಿದ್ದಾಗ,
ಅವರುಸಾಯಂಕಾಲದಹೊತ್ತು ನನ್ನನ್ನು ತಮ್ಮ ಬಳಿಯಲ್ಲಿ ಕುಳ್ಳಿರಿಸಿಕೊಂಡು ಶ್ಲೋಕ
ಗಳನ್ನು ಹೇಳಿಕೊಡುತ್ತಿದ್ದರು. ಆಗಾಗ್ಗೆ ಅವರು ತಮ್ಮ ಪೂರ್ವಿಕರ ಮಹಿಮೆಯನ್ನೂ
------------------------------------------
೨
ಅಗಣ ವೈಭವವನ್ನೂ ಅಟ್ಟಹಾಸವನ್ನೂ ನನ್ನೊಡನೆ ಕಥಾರೂಪವಾಗಿ ಹೇಳಿಕೊಡುತ್ತಾ
ಕಣ್ಣಿನಲ್ಲಿ ನೀರು ತಂದುಕೊಳ್ಳುತ್ತಿದ್ದರು. ನಾನು ಆಗ, ಅಜ್ಜಯ್ಯ ! ನೀನೇಕೆ
ಅಳಿತ್ತೀಯಪ್ಪಾ! ನಿನಗೇನಾದೂ ತಿಂಡಿಕೊಡಲೇ ? ಎಂದು ಹೇಳಿ ಕೂಡಲೇ
ನಮ್ಮ ಅಜ್ಜಿಯ ಬಳಿಗೆ ಹೋಗಿ, ಅಜ್ಜಿ! ಅಜ್ಜಯ್ಯನು ಆಳುತ್ತಿದ್ದಾನೆ ! ಪಾಪ!
ಅವನಿಗೇನಾದರೂ ತಿಂಡಿ ಇದ್ದರೆ ಕೊಡೆ, ಎಂದು ಪೀಡಿಸಿ ಒಂದಿಷ್ಟು ಹುರಿಟ್ಟನ್ನೋ,
ಅರಳನ್ನೋ, ಅವಲಕ್ಕಿಯನ್ನೋ ಈಸಿತಂದು ಅವನ ಮಡುಲಿಗೆ ಕಟ್ಟಿ, ಅಜ್ಜಯ್ಯ! ಅಳಬೇ
ಡಪ್ಪ! ಇದನ್ನು ತಿನ್ನು. ಎ೦ದುಹೇಳಿಬಿಡುತ್ತಿದ್ದೆನು . ನನ್ನ ಈ ವಿಚಿತ್ರವಾದ ಆಟ
ವನ್ನು ನೋಡಿ ಮನೆಯಲ್ಲರೂ ನಗುತ್ತಿದ್ದರಲ್ಲದೆ ನನ್ನನ್ನು ವಿಶೇಷವಾಗಿ ಮುದ್ದಿ
ಸುತ್ತಲೂ ಇದ್ದರು. ಅಜ್ಜಯ್ಯನಾದರೋ ಕಥೆಯನ್ನು ಅಷ್ಟಕ್ಕೆ ಸಾಕುಮಾಡಿ ನನ್ನ
ಆಟಕ್ಕಾಗಿ ಸಂತೋಷಿಸಿ, ನನ್ನನ್ನು ಮುದ್ದಿಸಿ ಪುನಃ ಬಾಯಿ ಪಾಠ ಹೇಳಿಕೊಡುವುದಕ್ಕೆ
ಆರಂಭಿಸುತ್ತಿದ್ದನು. ನಾನೂಬೇಜಾರಾಗುವದುಗೆ ಹೇಳಿಸಿಕೊಳ್ಳುತ್ತ ಇಷ್ಟು ಬೇಜಾರಾದ
ಮೇಲೆ ಅಜ್ಜಯ್ಯನನ್ನು ಲಕ್ಷಿಸದೆ ಅಡಿಗೆ ಮನೆಯ ಕಡೆ ಓಡಿಹೋಗಿ ನನ್ನ ಅಮ್ಮನನ್ನು
ಹಿಂಸೆ ಮಾಡಲಾರಂಭಿಸಿ ಏನಾದರೂ ಹಟದಿಂದ ಚಂಡಿಹಿಡಿದು ಅಳುತ್ತಿದ್ದೆನು.
ಆಗ ನಮ್ಮ ಮನೆಯಲ್ಲಿ ಮಗುವು ನಾನೇ. ನನ್ನನ್ನು ಎತ್ತಿಕೊಳ್ಳುವದಕ್ಕೆ
ಯಾರಾದ:ಬ್ಬರು ಸಿದ್ದವಾಗಿಯೇ ಇರುತ್ತಿದ್ದರು. ನಮ್ಮ ಅಪ್ಪನಂತೂ ನನ್ನನ್ನು
ದಿನದಿನಲ್ಲೂ ಬೆಳಗ್ಗೆ ಎಂಟುಗಂಟೆಗೆ ಎತ್ತಿಕೊಂಡುಹೋಗಿ ನಮ್ಮ ಊರಿನಲ್ಲಿನ
ಪ್ರಸಿದ್ಧವಾದ ಅಪ್ಪಯ್ಯನ ಹೋಟಲಿನಲ್ಲಿ ಒಂದು ರವೆ ದೋಸೆಯನ್ನೂ ಅರ್ಧ ಲೋಟ
ಕಾಪಿಯನ್ನು ಕೊಡಿಸುತ್ತಿದ್ದನು. ಇದಲ್ಲದೆ ನನ್ನನ್ನು ಯಾರು ಎತ್ತಿಕೊಂಡಾಗ್ಯೂ
ಏನಾದರೂ ಒಂದಿಷ್ಟು ರುಚಿಯಾದ ತಿಂಡಿಯನ್ನು ತಿನ್ನಿಸುತ್ತಿದ್ದರು. ನಾನಂತೂ
ತಂಗಳನ್ನು ತಿಂದವಳೇಅಲ್ಲ. ಈ ರೀತಿ ಮೇಲೆಮೇಲೆ ನಾನು ತಿಡಿ ತಿಂದುಬಿಡು
ತ್ತಿದ್ದುದರಿಂದ ಬೆಳಗೆದ್ದರೆ ನನಗೆ ಅಜೀರ್ಣವೂ, ಜ್ವರವೂ, ಆಮಶಂಕೆಯೂ, ಭೇದಿಯೂ
ಪ್ರಾಪ್ತವಾಗಿ ಬದುಕುವುದೇ ಕಷ್ಟವಾಗಿ ಹೋಗುತ್ತಿತ್ತು, ಅಂತಹ ಸಮಯದಲ್ಲೆಲ್ಲಾ
ನಮ್ಮ ತಾಯಿಯು ನನಗೆ ಚಿಟಿಕಿ ಹಾಕಬೇಕೆಂದು ಮುಷ್ಟರಮಾಡಿ (ಎಕ್ಕಡರ ಬಾರನ್ನು
ಬೆಂಕಿಯಲ್ಲಿ ಚೆನ್ನಾಗಿ ಕಾಯಿಸಿ ಹುಬ್ಬುಗಳ ನಡುವೆ, ತಲೆಗಳ ಎರಡುಕ್ಕ, ಇನ್ನೆ
ಲ್ಲಾದರೂ ಒಂದೆರಡು ಕಡೆ ರಕ್ಷೆಯನ್ನು ಹಾಕುವುದಕ್ಕೆ ಚಿಟಕಿಎದು ಹೆಸರು.)
ಈ ಚಿಟಿಕಿ ಚಿಕೆತ್ಸೆಯನ್ನು ತಪ್ಪದೆ ಮಾಡುತ್ತಿದ್ದರು, ಹೀಗೆ ಪದೇ ಪದೇ ಪ್ರಾಪ್ತ
ವಾಗುತ್ತಿದ್ದುದರಿಂದ ನನಗೆ ಔಷದಸೇವನ ಚಿಟಕಿಚಿಕಿತ್ಸೆ, ಇವುಗಳ ಪ್ರಯೋಗದಿಂದ
ಕ್ರಮಕ್ರಮವಾಗಿ ನಿಶ್ಶಕ್ತಿಯಾಗುತ್ತ ಬಂದಿತ್ತಲ್ಲದೆ ನಾನು ನಿತ್ಯ ರೋಗಿಯಾಗಿ ನರಳು
---------------------------------------------
ನನ್ನ ಸಂಸಾರ ೩
ತ್ತಲೇ ಇದ್ದೆನು. ಹೀಗೆಯೇ ನನಗೆ ಏಂಟುವರ್ಷ ಕಳೆದು ಹೋಯಿತು. ಇಷ್ಟು
ಹೊತ್ತಿಗೆ ನನಗೆ ಸ್ವಬುದ್ದಿಯು ಸ್ವಲ್ಪಸ್ವಲ್ಪವಾಗಿ ತಿಳಿಯುತ್ತ ಬಂತು. ನಮ್ಮ ತಾತನು
ನನ್ನನ್ನು ವಿದ್ಯಾಭ್ಯಾಸಕ್ಕಾಗಿ ಪಾಠಶಾಲೆಗೆ ಒರಡು ವರ್ಷಕಾಲಕಳುಹಿಸುತ್ತಿದ್ದರು.
ಹತ್ತು ವರ್ಷ ತುಂಬದೊಡನೆಯೇ ನನ್ನನ್ನು ಆ ಪಾಠಶಾಲೆಯಿಂದ ತಪ್ಪಿಸಿಬಿಟ್ಟರು.
ಇಷ್ಟು ಹೊತ್ತಿಗೆಯಾಗಿ ನಮ್ಮ ಗೃಹಕೃತ್ಯದಲ್ಲಿ ಅನೇಕ ಸಂಕಟಗಳು ಪ್ರಾಪ್ತವಾ
ದುವು. ಮೊದಲು ನಮ್ಮ ಅಜ್ಜಿ ಹೋಗಿಬಿಟ್ಟಳು. ಆಹಾರ ಎರಡು ತಿಂಗಳ ಮೇಲೆ
ನಮ್ಮ ಸೋದರತ್ತೆಯೊಬ್ಬಳು ಗತಿಸಿಹೋದರು. ಇದು ಆದ ಆರುತಿ:ಗಳಿಗೆ ನನ್ನ
ಚಿಕ್ಕಪ್ಪನೂ ಅದು ಕಳೆದ ಎಂಟು ತಿಂಗಳಿಗೆ ನನ್ನ ದೊಡ್ಡಪ್ಪನೂ ಪರಲೋಕಕ್ಕೆ
ಪ್ರಯಾಣ ಬೆಳಸಿಬಿಟ್ಟರು. ಈ ಸಮಯದಲ್ಲಿ ನಮ್ಮ ತಾತನಿಗೆ ಎಷ್ಟು ಮಟ್ಟಿನ
ಮನಶ್ಶಾಂತಿ ಯಿರಬಹುದೋ ವಾಚಕರೇ ಊಹಿಸಿ ನೋಡಬೇಕು. ಸತ್ತವರಿಗೆ
ಕರ್ಮಾಂತರಗಳನ್ನು ಮಾಡಿ ನಮ್ಮ ತಾನು ಚೇತರಿಸಿಕೊಳ್ಳುವ ಹೊತ್ತಿಗೆ ಎರಡುವ
ರ್ಷಕಾಲ ಕಳೆದುಹೋಯಿತು. ಮನಸ್ಸಂತಾಪದಿಂದಲೂ, ದಾರಿದ್ರ್ಯದಿಂದಲೂ,
ಅವಶ್ಯಕವಾಗಿ ಆಗಬೇ:ಕಾಗಿದ್ದ ಕೆಲಸಗಳಿಗಾಗಿ ವಿಶೇಷ ಸಾಲಮಾಡಿದುದರಿಂದ
ನಮ್ಮ ತಾತನು ಕೊರಗಿ ಆರ್ಥವಾಗಿ ಹೋದನು.
ಈಗ ನಮ್ಮ ಮನೆಯಲ್ಲುಳಿದವರು, ನಾನು, ನಮ್ಮ ತಂದೆ, ನನ್ನ ತಾಯಿ,
ನಮ್ಮ ತಾತ, ಈ ನಾಲ್ಕು ಮಂದಿ ಮಾತ್ರ. ಈ ಮಧ್ಯದಲ್ಲಿ ನಮ್ಮ ತಾಯಿಯು ನನ್ನ
ಹಿಂದೆ ಎರಡು ಮೂರು ಮಕ್ಕಳನ್ನು ಪ್ರಸವಿಸಿ, ಅವು ಒಂದೊಂದು ವರ್ಷ ಜೀವಿಸಿದ್ದು
ಮೃತವಾಗಿ ಹೋಗಿರುವ ಈ ಕಾರಣಗಳಿಂದ ನನ್ನ ತಂದೆಗೂ ತಾತನಿಗೂ ವಿಶೇಷ
ದುಃಖಪ್ರಾಪ್ತಿಯಾದುದಲ್ಲದೆ ಕ್ರಮವಾಗಿ ವೈರಾಗ್ಯವು ತಲೆದೋರಲಾರಂಭಿಸಿತು. ಆ
ಸಮಯದಲ್ಲಿ ನಮ್ಮ ತಾತನು ಕೋರ್ಟಿನಲ್ಲಿ ಹನ್ನೆರಡು ರೂಪಾಯಿ ತಲುಬುಳ್ಳ
ಒಂದು ನೌಕರಿಯಲ್ಲಿದ್ದನು. ನಮ್ಮ ತಂದೆಗೂ ಹದಿನೈದು ರೂಪಾಯಿ ತಲುಬುಳ್ಳ ಒಂದು
ಹುದ್ದೆ ಇದ್ದಿತು. ನಮ್ಮ ತಂದೆಗೆ ಬರುತ್ತಿದ್ದುದು ಹದಿನೈದು ರೂಪಾಯಿಗಳಾದರೂ ಅವರ
ತಿಂಗಳುಗಟ್ಲೆ ವೆಚ್ಚ ಮೂವತ್ತು ರೂಪಾಯಿಗಳಿಗೆ ಮೀರಿ ಹೋಗುತ್ತಿತ್ತು. ಇವುಗ
ಳಲ್ಲಿ ಮುಕ್ಕಾಲು ಪಾಲು ಹಣವು ಅವರ ಉಡುಪಿಗೂ ತಿಂಡಿಗೂ ಖರ್ಚಾಗುತ್ತಿತ್ತು.
ಉಳಿದ ಕಾಲುಪಾಲು ಹಣವನ್ನು ಅವರು ಮನೆಗೆ ಗೃಹಕೃತ್ಯಕ್ಕೆಂದು ನಾಲ್ಕು ತಿಂಗಳಿ
ಗೊಮ್ಮ ಯಾವಾಗಲೋ ಒಂದು ಬಾರಿ ತಂದು ಕೊಡುತ್ತಿದ್ದರು.
ಈ ಕಾರಣದಿಂದ ಕುಟುಂಬ ರಕ್ಷಣಭಾರವು ನಮ್ಮ ತಾತನ ತಲೆಯ ಮೇಲೆಯೇ
ವಿಶೇಷವಾಗಿ ಬೀಳುತ್ತಿತ್ತು. ನಮ್ಮ ತಂದೆಯು ಇಷ್ಟು ದುಂದುವೆಚ್ಚವನ್ನು ಮಾಡುತ್ತಿ
----------------------------------------------
೪ ಕಾದಂಬರಿ ಸಂಗ್ರಹ
ದ್ದರೂ ನಮ್ಮ ತಾತನು ಒಂದುದಿನವಾದರೂ ಅವರನ್ನು ಗದರಿಸಿಕೊಳ್ಳುತಲಿರಲಿಲ್ಲ. ಏಕಂ
ದರೆ ಅವರು ಸಂಸಾರದಲ್ಲಿ ಬಲು ನೊಂದುಹೋಗಿದ್ದರು ಈ ಒಬ್ಬ ಮಗನಿಗಾಗಿ
ಪ್ರಾಣವನ್ನಿಟ್ಟುಕೊಂಡಿದ್ದರು. ಆದುದರಿಂದ, ಅವನು ಹೇಗೆ ಬೇಕಾದರೂ ಇದ್ದುಕೊ
ಳ್ಳಲಿ ! ಜೀವದೊರಸೆ ಇದ್ದರೆ ಸಾಕೆಂದು ಹೇಳಿಬಿಡುತ್ತಿದ್ದರು. ನಮ್ಮ ತಾಯಿಗೆ ಪಿತ್ರಾ
ರ್ಜಿತವಾದ ನಾಲ್ಕು ಎಕರೆ ತರೀಜಮೀನಿನಲ್ಲಿ ನಾಲ್ವತ್ತು ಖಂಡುಗ ಭತ್ತವು ಬರುತ್ತಿ
ದ್ದುದರಿಂದ ನಮ್ಮ ಸಂಸಾರ ನಿರ್ವಹಣಕ್ಕಾಗಿ ಅಷ್ಟೇನೂ ಶ್ರಮಪಡಬೇಕಾದ ಅಗತ್ಯ
ವಿರಲಿಲ್ಲ. ನಮ್ಮ ತಾತನಿಗೆ ಸಾಲಗಾರರ ಬಾಧೆ ಹೆಚ್ಚಾದುದರಿಂದ ತಮ್ಮ ಪೂರ್ವಪಿತೃ
ಗಳಿಂದಾರ್ಜಿಸಲ್ಪಟ್ಟ ಭೂಧನದಲ್ಲಿ ಎರಡು ಎಕರೆಗಳನ್ನು ಮಾರಿ ಸಾಲವನ್ನು ತೀರಿಸಿ
ಬಿಟ್ಟರು. ಸಾಲತೀರಿದ ಮೇಲೆ ನಮ್ಮ ತಾತನಿಗೆ ನನಗೆ ಒಂದು ಬಗೆಯರ ತಾ೦ತಿ
ಯುಂಟಾಯಿತು. ಇದು ನಡೆಡ ಕಾಲದಲ್ಲಿ ನಮ್ಮ ತಾತನಿಗೆ ಐವತ್ತು ವರ್ಷವ
ಯಸ್ಸು. ನಮ್ಮ ತಾತ ದಿನೇದಿನೆ ವೈರಾಗ್ಯವು ಹೆಚ್ಚುತ್ತ ಬರಲು ತಮ್ಮ ಉದ್ಯೋ
ಗಕಾಲದಲ್ಲಿ ಕಷ್ಟ ಸಮಯಗಳನ್ನೆಲ್ಲಾ ಸಾಧು ಸತ್ಪುರುಷ ಸಂಭಾಷನಾದಿಗಳಿo
ದಲೂ ಈಶ್ವರ ನಾಮಸ್ಮರಣೆಯಿಂದ ನೂಕುತ್ತಿದ್ದರು. ಕೇವಲರಸಿಕರಾದ ನಮ್ಮ
ತಂದೆಯವರಿಗೆ ನಮ್ಮ ತಾತನ ಈನಡಿವಳಿಕೆ ಸರಿದೋರಲಿಲ್ಲ. ನಿಷ್ಕಾರಣವಾಗಿ ನಮ್ಮ
ತಾತನನ್ನು ಏನಾದರೊಂದು ನೆವದಿಂದ ಜಗಳಕ್ಕೆ ಕರೆಯುತ್ತಲೇ ಇದ್ದರು. ನಮ್ಮ
ತಾತ ಒಂದುನ್ನೂ ಮನಸ್ಸಿಗೆ ಹಚ್ಚಿಕೊಳ್ಳದೆ ತಮಗೆ ಬಂದ ಸಂಬಳವನ್ನು ಮಗನವ
ಶಕ್ಕೆ ಕೊಟ್ಟು ಬಿಟ್ಟು ತಾವು ಅಡಿಗೆಯಾಗುವಹೊತ್ತಿಗೆ ಸ್ನಾನಾನ್ಹಿಕ, ದೇವತಾ
ರ್ಚನೆ ವೈಶ್ವದೇವಗಳನ್ನು ಭಕ್ತಿಯಿಂದ ಆಚರಿಸಿ ಎಲ್ಲರೊಡನೆ ತಾವು ಭೋಜನಮಾಡಿ
ಪುನಃ ತಮ್ಮ ವ್ಯಾಸಂಗದಲ್ಲಿ ನಿರತರಾಗುತ್ತಿದ್ದರು. ಈ ಮಧ್ಯದಲ್ಲಿ ನಮ್ಮ ತಾಯಿಯು
ಗರ್ಭಿಣಿಯಾಗಿ, ಏಕಾದಶಮಾಸ ಸಂಪೂರ್ಣವಾದ ಒಳ ಒಂದು ಗಂಡುಕೂಸನ್ನು
ಪ್ರಸುವಿದ್ದರು. ಆ ಮಗುವಿಗೆ ಈಗ ಒಂದು ವರ್ಷ ತುಂಬುತ್ತಿದ್ದಾಗ್ಯೂ ನಮ್ಮ
ತಾಯಿಗೆ ಬಾಣಂತಿತನ ಮಾತ್ರ ಪೂರ್ಣವಾಗಿರಲಿಲ್ಲ. ಮನೆಯಲ್ಲಿ ಮಾಡುವ
ರಾರೂದಿಕ್ಕಿಲ್ಲದ್ದರಿಂದ ಸಮಸ್ತ ಗೃಹಕೃತ್ಯವನ್ನು ನಾನೇ ನಡಿಸಿಕೊಂಡು ಹೋಗಬೇ
ಕಾಗಿ ಬಂದಿತು. ಮನೆಯಲ್ಲಿ ಅನ್ನಕ್ಕೆ ಇಷ್ಟು ಕಷ್ಟವಾದುದನ್ನೂ ಗೃಹಕೃತ್ವದ ತೊಂದ
ರೆಯನ್ನೂ ನೋಡಿ ನನ್ನ ತಾತನು ಬೇರೆ ಒಂದು ಕಡೆಯಲ್ಲಿ ಊಟ ಮಾಡುತ್ತಿದ್ದರು.
ನಮ್ಮ ತಂದೆಯಂತೂ ಮನೆಗೆ ಬರುತ್ತಿರಲಿಲ್ಲ. ನಮ್ಮ ತಾತನು ಆಗಾಗ್ಗೆ ಗೃಹಕೃತ್ಯಕ್ಕೆ
ಬೇಕಾಗುವ ಸಾಮಾನುಗಳನ್ನು ತಂದು ಹಾಕುತ್ತ ಮನೆ ಜೋಗಕ್ಷೇಮವನ್ನು ವಿಚಾರಿಸಿ
ಕೊಂಡು ಹೋಗುತ್ತಾ ಇದ್ದರು. ನಾನಾದರೋ ಗೊಣಗುಟ್ಟಿ ಕೊಂಡು, ಮೂಗಿಗೆ ಕವಡೆ
-----------------------------------------------
ನನ್ನ ಸಂಸಾರ ೫
ಕಟ್ಟಿಕೊಡು ದುಡಿದ ಎತ್ತಿನಂತೆ ದುಡಿಯುತ್ತಿದ್ದೆನು. ನಮ್ಮ ತಾಯಿಗೆ ದೇಹಸ್ಥಿತಿಯೇ
ಸರಿಯಾಗಿರಲಿಲ್ಲ. ಈ ಕಾರಣದಿಂದ ನನ್ನ ತಾಯಿಯನ್ನು ನನ್ನ ಮಾತಾಮಹನು ತಮ್ಮ
ಊರಾದ "ಸರ್ವಂಸಗಾಗ್ರಾಮ " ಕ್ಕೆ ಕರೆದುಕೊಂಡು ಹೋದನು. ಅಲ್ಲಿಗೆ ಹೊದ
2-3 ತಿಂಗಳಲ್ಲೇ ನನ್ನ ತಾಯಿಗೆ ಸಂಪೂರ್ಣವಾಗಿ ಆರೋಗವುಂಟಾಯಿತು. ಇಷ್ಟು
ಹೊತ್ತಿಗೆ ಸರಿಯಾಗಿ ನಾನು ಖಾಯಿಲೆ ಬಿದ್ದುಕೊಂಡೆನು. ನನಗೆ ವಾಸಿಯಾಗುವುದೂ
ಆರುತಿಂಗಳು ಹಿಡಿಯಿತು. ಈ ವಿಧವಾದ ನಿತ್ಯರೋಗದಿಂದ ನಾನು ದಿನೇದಿನೇ ಕಂಗೆಟ್ಟು
ಕೃಶಳಾಗುತ್ತೆ ಬಂದೆನು.
ವಾಚಕರೇ ! ಇನ್ನು ನಾನು ಈ ರಗಳೆಗಳನ್ನೇ ಮುಂದೆಯೂ ಬರೆಯುತ್ತ
ಹೋದರೆ ನಿಮಗೆ ಬಹುವಾಗಿ ಬೇಸರವುಂಟಾಗಬಹುದು. ಆದುದರಿಂದ ನನ್ನ
ವಿವಾಹಕ್ಕಾಗಿ ನಡೆದ ಪ್ರಯತ್ನಗಳನ್ನು ಸ್ವಲ್ಪ ಪ್ರಸ್ತಾಪಿಸುವೆನು.
ನನಗೆ ಈಗ ಹನ್ನೆರಡು ವರ್ಷತುಂಬಿದ ಮೇಲೆ ಆರು ತಿಂಗಳು ಕಳೆದು ಹೋಗಿ
ದ್ದಿತು. ನಮ್ಮ ಹಿಂದೂ ಸಮಾಜದಲ್ಲಿ ಅದರಲ್ಲೂ ಬ್ರಾಂಹ್ಮಣವೃಂದದಲ್ಲಿ, ಹೆಣ್ಣು
ಮಕ್ಕಳಿಗೆ ಎಂಟು ವರ್ಷಕ್ಕೆ ಸರಿಯಾಗಿ ವಿವಾಹಮಾಡದಿದ್ದರೆ ಅಂತಹ ಕನ್ಯಾ ಪಿತನು
ಕಂಡವರ ಬಾಯಿಗೆ ಬೀಳಬೇಕಾದವರೆಂಬ ವಿಷಯ ನಿಮಗೆಲ್ಲಾ ತಿಳಿದೇ ಇದೆ.
ಇದಿರಲಿ. ಈಗಣ ಕಾಲದಲ್ಲಿ ಪುರುಷ ಸಂಖ್ಯೆಗಿಂತಲೂ ಸ್ತ್ರೀಸಂಖ್ಯೆಯು ನಾಲ್ಕರಷ್ಟು
ಹೆಚ್ಚಾಗುತ್ತಾ ಬಂದಿದೆ ಅದರಲ್ಲೂ, ನಮ್ಮ ಬ್ರಾಹ್ಮಣ ವೃಂದದಲ್ಲಿ ವಿವಾಹಕ್ಕೆ ನೆರೆ
ದಿರುವ ಕನ್ಯಾಸಂಖ್ಯೆ ಅತ್ಯಧಿಕ. ಈ ಕನ್ಯೆಯರಿಗೆಲ್ಲಾ ಅನುರೂಪರೂ, ಶ್ರೇಷ್ಟರೂ ಆದ,
ಪತಿಗಳು ದೊರೆವು ತುಂಬಾ ಅಸಂಭವ. ಭಾಗ್ಯವಂತರ ಮನೆ ಮಕ್ಕಳ ಗತಿಯೇ
ಹೀಗಾದಮೇಲೆ ಗರ್ಭದರಿದ್ರರಾದವರ ಮನೆಯ ಹೆಣ್ಣುಗಳನ್ನು ಕೇಳುವರಾರು ?
ಅವರ ಮನೆಯ ಕಡೆ ಸುಳಿವುದೂ ಸಹ ಇಲ್ಲ. ಈ ವಿಧವಾರ ವರಾಭಾವದಿಂದಲೇ
ವೃದ್ದ ವಿವಾಹವು ವಿಶೇಷತಃ ಜಾರಿಯಲ್ಲಿ ಬರಲು ಕಾರಣವಾಯಿತು. ಸರಿಯಾದ
ವರನು ಸಿಕ್ಕಲಿಲ್ಲವಲ್ಲಾ, ಎಂಬ ಚಿಂತೆಯಿಂದಲೂ, ಹುಡುಗಿಯು ಎಲ್ಲಿ ಬೇಗ ದೊಡ್ಡ
ವಳಾಗಿಬಿಡುವಳೋ ಎಂಬ ಭಯದಿಂದಲೂ, ಯಾವನಾದರೂ ಒಬ್ಬ ಪ್ರರುಷಮಾತ್ರನು
ಸಿಕ್ಕಿದರೆ ಸಾಕೆಂದು ಹೀನವರನಿಗೋ ವೃದ್ದವರನಿಗೋ ಕನ್ನೆಯರನ್ನು ಕೊಟ್ಟು ಮದುವೆ
ಮಾಡುವದು ಪ್ರಚಾರಕ್ಕೆ ಬರಬೇಕಾಯಿತು. ಉಪಪನ್ನ ರಾದವರ, ಯೋಗ್ಯ ರಾದವರ,
ವಿದ್ಯಾವಂತರ ಮನೆಗೆ ಹೋಗೋಣವೆಂದರೆ ಅವರ ಜಂಭವು ಆ ಸಮಯದಲ್ಲಿ ವಿವರಿಸ
ಲಸದಳ, ಒಂದು ಸಾವಿರವೋ--ಎರಡು ಸಾವಿರವೋ ವರದಕ್ಷಣೆಯನ್ನು ಕೊಟ್ಟರೆ ತಾವು ತಮ್ಮ
ಹುಡುಗನಿಗೆ ತಂದುಕೊಳ್ಳುವೆಂದೂ ಇಲ್ಲವಾದರೆ ಆ ಮಾತೇ ಬೇಡ
----------------------------------------
೬ ಕಾಂಬರಿ ಸಂಗ್ರಹ
ವೆಂದೂ ಖಂಡಿತವಾಗಿ ಹೇಳುವರು. ಇಂತಹ ಹೊಟ್ಟೆತುಂಬದವರ ಮನೆಗೆ ಅಷ್ಟು
ಹಣಕೊಟ್ಟು ಕನ್ಯಾದಾನ ಮಾಡುವಯೋಗ್ಯತೆ ಇದ್ದವರು ಮಾಡುತ್ತಾರೆ. ರಿಕ್ತ ರಾದವರು
ಮರುಮಾತಾಡದೆ ಬೇರೆ ಕಡೆ ಮಗಳಿಗೆ ವರರನ್ನು ಹುಡುಕಿ-ಪ್ರಾಪ್ತ ವಯಸ್ಕಳಾಗುವ
ವರೆಗೂ-ಹುಡುಕಿಹುಡುಕಿ ಕೊನೆಗೆ ಬೇಸತ್ತು ಯಾವನಾದರೊಬ್ಬನು ಸಿಕ್ಕಿ ನನ್ನ ಮಗ
ಳಿಗೆ ಮದುವೆಯಾದರೆ ಸಾಕೆಂದು ಎಂಥವನೋ ಒಬ್ಬನಿಗೆ ಕೊಟ್ಟು ಮದುವೆಮಾಡಿ
ಬಿಡುವರು. ಇಂತಹ ತೊಂದರೆಗಳು ಯಾವಾಗ ಪರಿಹಾರವಾಗುವುವೋ ಬಡವರಾದ
ಕನ್ಯಾಪಿತೃಗಳು ಅದೆಂದು ದುಃಖಸಾಗರದಿಂದ ಸಮುತ್ತೀರ್ಣರಾಗುವರೋ--ವರದಕ್ಷಿಣೆ
ಯೆಂಬ ದುರಾಶಾಪಿಶಾಚವು ಅದೆಂದು ನಾಶವಾಗಿ ಹೋಗುವುದೋ--ಪ್ರಪಂಚ
ವೆಲ್ಲವೂ ಅನುರೂಪರಾದ ಭಾರ್ಯಾಭರ್ತರಿಂದಕೂಡಿ ಯಾವಾಗ ಕಂಗೊಳಿಸುವುದೋ,
ಉಹಿಸಿ ಹೇಳಬಲ್ಲವರಾರು? ಆದು ಸದ್ಯಃ ಅಸಂಭವವೆಂದೇ ತೋರುವುದು.
ನನಗೆ ವರವನ್ನು ಹುಡುಕುವ ತೊಂದರೆಯನ್ನು ನಮ್ಮ ತಂದೆಯವರು ವಿಶೇಷ
ವಾಗಿ ಮನಸ್ಸಿಗೆ ಹಚ್ಚಿಕೊಳ್ಳದಿದ್ದರೂ ನಮ್ಮ ತಾತನವರಂತೂ ನನಗೆ ಎಂಟು
ವರ್ಷ ತುಂಬಿದಾಗಿನಿಂದಲೂ ಅದೇ ಪ್ರಯತ್ನದಲ್ಲಿ ಇದ್ದರು. ಈ ವಿಚಾರವನ್ನು ನಮ್ಮ ತಂದೆ
ಯಸಂಗಡವೂ ಆಲೋಚಿಸಿ ನಮ್ಮ ಬಂಧುಗಳಲ್ಲಿ ಯೋಗ್ಯವಾದ ವರಗಳೆಲ್ಲೆಲ್ಲಿರುವು
ವೆಂಬುದನ್ನೂ ವಿಚಾರಿಸಿವಿಚಾರಿಸಿ ಅಲ್ಲಿಗೆಲ್ಲಾ ಒಂದೊಂದು ಕಾಗದವನ್ನು ಬರೆದು
ಹಾಕಿ ಜಾತಕಗಳ ತರಿಸಿಕೊಳ್ಳುತ್ತಿದ್ದರು. ಹೀಗೆ ತರಿಸಿಕೊಂಡ ಜಾತಕಗಳು ಮೂವ
ತ್ತೊಂಬತ್ತು. ಈಗಲೂ ನಮ್ಮ ತಂದೆಯಬಳಿಯಲ್ಲಿದೆ ಇವುಗಳಲ್ಲಿಗೆ ಹತ್ತುಜಾತಕ
ಗಳಿಗೆ ನಕ್ಷತ್ರಾನುಕೂಲವಾದರೋ ಬಹಳ ಚೆನ್ನಾಗಿತ್ತಂತೆ? ಅವರುಗಳಿಗೆ ಲಗ್ನ ವಿಚಾರ
ದಲ್ಲಿ ಕಾಗದ ಬರೆಯಲು ಅವರು ಅವರು ಅಂಗೀಕಾರ ಸೂಚಕ ಪತ್ರಗಳನ್ನೇ ಬರೆದು
ಬಿಟ್ಟರು. ಇಷ್ಟೇ ಅಲ್ಲದೆ ದ್ವಿತೀಯ ತೃತೀಯ ಸಂಬಂಧದ ೧೦-೫
ಮೊದಲುಗೊಂಡು ೧೫ ರವರೆಗೂ ವಯಸ್ಸನ್ನು ಕಮ್ಮಿ ಮಾಡಿಕೊಂಡು ಜಾತಕವನ್ನು
ತಯಾರಿಸಿ ತಮ್ಮ ದೇಹವನ್ನು ನವಯುವಕರೆಂದು ತಿಳಿಯುವಂತೆ ಮುಖಾದಿಗಳನ್ನು
ಶೃಂಗರಿಕೊಂಡು ಬಂದು ಕನ್ಯೆಯನ್ನು ಕೊಡಿರೆಂದು ಕೇಳುತ್ತಿದ್ದರು.
ನನ್ನ ತಾತನವರಿಗೆ ನನ್ನ ಭವಿಷ್ಯತ್ಸು ವಿಷಯದಲ್ಲಿ ತುಂಬಾ ಯೊಚನೆಯಿ
ದ್ದುದರಂದ ಹೇಗಾದರೂಮಾಡಿ ನನ್ನನ್ನು ಉಪಪನ್ನರ ಮತ್ತು, ಕುಲೀನರ ವಂಶದಲ್ಲಿ
ಹುಟ್ಟಿದ ಪೂರ್ಣವಯಸ್ಕನೂ ಸುಗುಣಿಯೂ ವಿದ್ಯಾವಂತನೂ ಅದ ವರನಿಗೇ ಕೊಟ್ಟು
ಮದುವೆ ಮಾಡಬೇಕೆಂದು ದೃಡಸಂಕಲ್ಪ ಮಾಡಿ ಬಿಟ್ಟಿದ್ದರು. ನಮ್ಮ ತಾತನವರ ಅಭಿಲಾ
ಷೆಯು ನೆರವೇರುವುದು ಮುಕ್ಕಾಲುಪಾಲು ಅನುಮಾನವೇ ಆಗಿದ್ದರೂ ಅವರ ಮನೋ
------------------------------------------------
7
ಧಾರ್ಢವೇ ಅವರ ಸಂಕಲ್ಪವನ್ನು ಸಫಲವನ್ನಾಗಿ ಮಾಡಿತು. ಆದರೆ ಅದು ನೆರವೇರಲು
ಬಹುಕಾಲ ವಿಳಂಬವಾಯಿತು.
ಈಗ ನನಗೆ ಹದಿನಾಲ್ಕು ವರ್ಷವು ತುಂಬುತ್ತ ಬಂದಿದೆ. ಈಗ ನನ್ನನ್ನು ವಿಶೇಷ
ವಾಗಿ ಮನೆಬಿಟ್ಟು ಹೊರಕ್ಕೆ ಕಳುಸುತ್ತಲೆ ಇರಲಿಲ್ಲ. ನನಗೂ ಮನೆ ಹೊರಗೆ ಹೊರಗೆ ಹೊರ
ಡುವದಕ್ಕೆ ತುಂಬಾನಾಚಿಕೆ. ಅಕಸ್ಮಾತ್ತಾಗಿ ಎಂದಾದರೊಂದು ದಿನ ಯಾರಮನೆಗಾದರೂ
ಆರ್ತಿಯಕ್ಷತೆಗಳಿಗೆ ಹೋದರೆ ಊರ ಹೆಂಗಸರೆಲ್ಲರೂ ನನ್ನ ಮದುವೆಯ ಸುದ್ದಿಯನ್ನೇ
ಆಡುವರು, ಇನ್ನು ಕೆಲವರು ನನ್ನನ್ನು ಬೆರಳಿನಿಂದ ನಿರ್ದೆಶಿಸುತ್ತಾ ಈ ಹುಡುಗಿಗೆ
ಇನ್ನೂ ಹದಿನಾಲ್ಕು ವರ್ಷ ತುಂಬುತ್ತಿದ್ದರೂ ಮದುವೆಮಾಡದೆ ನಿಲ್ಲಿಸಿಕೊಂಡಿದ್ದಾರೆ.
ಏನು ಧೈರ್ಯವಪ್ಪ." ಅಂದುಕೊಳ್ಳುವರು. ನನಗಂತೂ ನನ್ನ ಜತೆಹುಡುಗಿಯರನ್ನು
ನೋಡಿದಾಗ ಎಷ್ಟು ಅವಮಾನಮಾನವಾಗುತ್ತಿತ್ತೊ ಅದನ್ನು ಹೇಳಲಾರೆ. ಅದನ್ನು ನನ್ನಂತೆ
14 ವರ್ಷವಾದರೂ ಮದುವೆಯಾಗದ ತಂಗಿಯರು ಊಹಿಸಿಕೊಳ್ಳಬಹುದು.
--- II ---
ನಮ್ಮರಿಗೆ ನಾಲ್ಕು ಗಾವುದ ದೂರದಲ್ಲಿ ಹರಪುರವೆಂಬ ಗ್ರಾಮವೊಂದಿದೆ.
ಅಲ್ಲಿಯ ಸ್ಥಳನಿವಾಸಿಗಳು ತು೦ಬಾದೊಡ್ಡ ಮನುಷ್ಯರೂ ವೈದೇಕರೂ ಆದ ನೀಲ
ಕಂಠಶಾಸ್ತ್ರಿಗಳೆಂಬುವರಿಗೆ ಈಗ ಎಪ್ಪತ್ತೈದು ವಯಸ್ಸು. ಅವರಂತ ಪ್ರಸಿದ್ದ ಪಂಡಿತರು
ಪ್ರಪಂಚದಲ್ಲೇ ಇಲ್ಲವೆಂದು ಹೆಸರಾಗಿತ್ತು. ಇದರ ಪ್ರಸಿದ್ಧಿಯನ್ನು ಕೇಳಿ ಶ್ರೀನಗರದ
ದೊರೆಯಾದ ಶ್ರೀಪತಿರಾಜನು ಇವರನ್ನು ತನ್ನ ಆಸ್ಥಾನಕ್ಕೆ ಬರಮಾಡಿಕೊಂಡು ತನ್ನ
ಆಸ್ಥಾನದಲ್ಲಿ ಅಮಗೆ ಧರ್ಮಾಧಕಾರಪದವಿಯನ್ನು ದಯಪಾಲಿಸಿದನು. ನೀಲಕಂಠಶಾಸ್ತ್ರಿ
ಗಳು ಒಳ್ಳೆಯ ಉಪಪನ್ನರಾದಾಗ್ಯೂ ರಾಜಾಜ್ಞೆಯನ್ನು ಮೀರಲಾರದೆ ಶ್ರೀನಗರದಲ್ಲೇ
ವಾಸಮಾಡಬೇಕಾಗಿಬಂತು. ಇವರಿಗೆ ಸಂಸಾರದ ಬಹಳ ದುಃಖಗಳು ಪ್ರಾಪ್ತವಾಗಿ
ದ್ದುವು. ಮೂವರು ಗಂಡು ಮಕ್ಕಳು ೧೫-೨೦-೪೫ ವರ್ಷಗಳು ಬದುಕಿ ಮೃತರಾಗಿ
ಹೋಗಿದ್ದರು. ಈಗ ಇವರ ಸಂಸಾರದಲ್ಲಿ ನಾಲ್ವತ್ತು ವರ್ಷದ ಸೊಸೆಯೊಬ್ಬರೂ; ಇಬ್ಬರು
ಪೌತ್ರರೂ (ಮಗನಮಕ್ಕಳೂ) ಇರುವರು. ಇನ್ನೂ ಇದಲ್ಲದೆ ಕೆಲವುಮಂದಿ ಹೆಣ್ಣು
ಮಕ್ಕಳು ಪತಿಗೃಹದಲ್ಲಿ ಸುಖವಾಗಿರುವರು. ಇವರ ಎರಡನೆಯ ಮೊಮ್ಮಕ್ಕಳು
ಇಪ್ಪತ್ತೊಂದು ವರ್ಷ ವಯಸ್ಸುಳ್ಳ ವಾಸುದೇವಶಾಸ್ತ್ರಿಗಳೆ೦ಬುವರಿಗೆ ಇದೇ ಸಮಯ
ದಲ್ಲಿಯೇ ದುರದೃಷ್ಟದಿಂದ ಪತ್ನಿ ನಿಯೋಗವಾರ ದಂದು ನಮ್ಮ ತಾತನಿಗೆ ತಿಳಿದು
ಬಂದಿತು. ನಮ್ಮ ತಾತನವರ ತಂದೆಯೂ ನೀಲಕಂಠಶಾಸ್ತ್ರಿಗಳ ತಂದೆಯೂ ಬೀಗಬೀಗ
ರಂತೆ ! ಈ ಪೂರ್ವಬಾಂಧವ್ಯವನ್ನು ಯೋಚಿಸಿ ನಮ್ಮ ತಾತನವರು ಅವರ ಮನೆಗೆ
------------------------------------------------
೮ ಕಾದಂಬರಿ ಸಂಗ್ರಹ
ನನ್ನನ್ನು ಕೊಡಬೇಕೆಂದು ಒಂದು ಕಾಗದವನ್ನು ಬರದು ಹಾಕಿದರು. ಆದರೆ ಅವರು
ತುಂಬಾ ಪ್ರಸಿದ್ದಿಯುಳ್ಳ ದೊಡ್ಡ ಮನುಷ್ಯರಾಗಿದ್ದುದುಂದ ಈ ಕಾಗದವನ್ನು ಮೊದಲು
ಲಕ್ಷ್ಯಮಾಡಲಿಲ್ಲ. ಹರಪುರದ ಜಮೀನ್ ದಾರರು ಪ್ರಸಿದ್ಧರಾದ ವಿನಾಯಕಶಾಸ್ತ್ರಿ
ಗಳೆಂಬುವರು ತಮ್ಮ ಏಕಮಾತ್ರ ಪುತ್ರಿಯಾದ ಲಕ್ಷ್ಮೀದೇವಿಯೆಂಬ ಕನ್ನೆಯನ್ನು ನೀಲ
ಕಂಠಶಾಸ್ತ್ರಿಗಳ ಮನೆಗೆ ಕೊಡಬೇಕೆಂದು ಸಂಕಲ್ಪಿಸಿ ಅದೇ ಸಮಯದಲ್ಲಿಯೇ ವಾಸು
ದೇವಶಾಸ್ತ್ರಿಗಳ ಜಾತಕವನ್ನು ತರಿಸಿನೋಡಿದರು. ದಾಂಪತ್ಯಾನುಕೂಲವು ಬಹಳ ಅನು
ಕೂಲವಾಗಿದ್ದಿತು, ಇಂತಹ ಅನುಕೂಲವಾದವರನನ್ನು ಈಗ ಉದಾಸೀನ ಮಾಡಿಬಿಟ್ಟರೆ
ಮುಂದೆ ತಮಗೆ ಇಷ್ಟು ಅನುಕೂಲವಾದ ಬಾಂಧವ್ಯವು ದೊರೆವದೋ ಇಲ್ಲವೋ
ಎಂದು ಅವರು ಈ ಲಗ್ನವು ಆದಷ್ಟು ತ್ವರೆಯಿಂದ ನೆರವೇರಿಸಬೇಕೆಂದು ಬಲವಂತ
ಮಡತೊಡಗಿದರು. ನೀಲಕಂಠಶಾಸ್ತ್ರಿಗಳೂ ಕೂಡ, ಇಂತಹ ಯೋಗ ಮನೆತನದ
ಕನ್ನಿಕೆಯು ಎರಡನೆಯ ಸಂಬಂಧಕ್ಕೆ ದೊರೆತುದು ಪುಣ್ಯೋದಯವೆಂದೂ, ನಾವು ಈಗ
ಅವರು ಹೆಣ್ಣು ಕೊಡುವೆವೆಂದು ಹೇಳುವಾಗಲೇ ಉದಾಸೀನಮಾಡಿದರೆ ಮುಂದೆ
ಅವರ ಮನಸ್ಸು ಹೇಗೆ ಬದಲಾಯಿಸುವದೋ, ಆದುದುಂದ ಈ ಲಗ್ನವನ್ನು
ಮಾಘಾದಿ ಪಂಚಕಕ್ಕೆ ಮುಂಚೆಯೇ ನೆರವೇರಿಸಿ ಬಿಡಬೇಕೆಂದೂ ವಿನಾಯಕ
ಗಳಿಗೆ ಹೇಳಿ ಕಳುಹಿಸಿದರು. "ರೋಗಿ ಬಯಸಿದುದು ಹಾಲನ್ನ, ವೈದ್ಯ ಹೇಳಿದುದೂ
ಹಾಲನ್ನ '' ಇಬ್ಬರ ಮನಸ್ಸೂ ಒಂದೇ ವಿಧ ಭಾವನೆಯಲ್ಲಿದ್ದಿತು.
ವಾಸುದೇವ ಶಾಸ್ತ್ರಿಗಳಿಗೆ ಪ್ರಥಮಪತ್ನೀವಿಯೋಗವಾದುದು ಸೌಮ್ಯ ಸಂ||ದ
ವೈಶಾಖಶುದ್ಧ ಸಪ್ತಮಿ ಸೋಮವಾರದದಿನ. ವಿನಾಯಕ ಶಾಸ್ತ್ರಿಗಳ ಮಗಳನ್ನು
ಕೊಟ್ಟು ಲಗ್ನ ಬೆಳೆಸಲೇರ್ಪಾಡಾದುದು ಶ್ರಾವಣ ಶುದ್ಧ ದಶಮಿಯದಿನ. ಬೀಗರಿಬ್ಬರೂ
ಒಳ್ಳೆಯ ಉಪಪನ್ನರಾದವರೇ. ಇಬ್ಬರಿಗೂ ಉತ್ಸಾಹವೂ ಇಮ್ಮಡಿಯಾಗಿಯೇ
ಇದ್ದುದು. ವಿನಾಯಕ ಶಾಸ್ತ್ರಿಗಳ ಮಗಳು ರೂಪಿನಲ್ಲಿ ಬಹುಚಲುವೆಯಾಗಿಯೂ
ಇದ್ದಳು. ನೀಲಕಂಠಶಾಸ್ತ್ರಿಗಳ ಮನೆಯಲ್ಲಿ ಇದು ದ್ವಿತೀಯ:ವಿವಾಹವೆಂದು ಹೇಳುವುದ
ಕ್ಕಾಗುತ್ತಿರಲಿಲ್ಲ. ಒಬ್ಬರು ಒಂದು ಸಾವಿರರೂಪಾಯಿಗಳಿಗೆ ಮೀರಿದವೆಚ್ಚ
ವನ್ನೇ ಮಾಡಿದರು. ನೀಲಕಂಠಶಾಸ್ತ್ರಿಗಳು ತಮ್ಮ ಮೊಮ್ಮಗನ ಕೈಲ ವಿವಾಹಾಗ್ನಿ
ಯನ್ನೇ ಧಾರ್ಯಾಗ್ನಿಯನ್ನಾಗಿ ಇಡಿಸಿ ಒಂದು ದರ್ಶಸ್ಥಾಲೀಪಾಕವನ್ನೂ ಒಂದು
ಪೌರ್ಣಮಾಸೀಸ್ಥಾಲೀಪಾಕವನ್ನೂ ಮಾಡಿಸಿ ತನ್ಮುಖೇನ ವೈಶ್ವದೇವವನ್ನು ಆರಂಭಮಾ
ಡಿಸಿದರು. ಈ ವಿಜೃಂಭಣೆಗಳೆಲ್ಲಾ ಭಾದ್ರಪದ ಶುದ್ಧ ಪ್ರತಿಪತ್ತಿನವರಿಗೂ ನಡೆಯಿತು.
ಅಷ್ಟು ಹೊತ್ತಿಗೆ ಹರಪುರದಲ್ಲಿ ಅಲ್ಲಲ್ಲಿಯೇ ಒಂದೊಂದು ಇಲಿಗಳು ಸಾಯುತ್ತಾ
--------------------------------------------
ನನ್ನ ಸಂಸಾರ ೯
ಹಾಗೆಯೇ ಪ್ಳೇಗಿನಿಂದ ಒಬ್ಬೊಬ್ಬರು ಸಾಯುವದಕ್ಕೂ ಆರಂಭವಾಗಿತ್ತು. ವಿನಾ
ಯಕಶಾಸ್ತ್ರಿಗಳು ಪ್ರೇಗಿಗೆ ಹೆದುರಿ ಭಾದ್ರಪದ ಶುದ್ಧ ಬಿದಿಗೆದಿನ ಸಾಯಂಕಾಲ ಹರಪು
ರಕ್ಕೆ ಆರುಮೈಲಿ ದೂರದಲ್ಲಿದ್ದ ತಮ್ಮ ಗ್ರಾಮವಾದ ಕ್ಷೀರಪುರಕ್ಕೆ ಪ್ರಯಾಣಮಾಡಿ
ಕೊಂಡು ಹೊರಟುಹೋದರು. ಇವರು ಪ್ರಯಾಣಮಾಡುವುದಕ್ಕೆ ಮೂರುದಿನಮುಂ
ಚೆಯೇ ಮದುವೆಯಾದ ಮನೆಯಲ್ಲಿ ಎರಡು ಇಲಿಗಳು ಸತ್ತುಹೋಗಿದ್ದವು. ಆದುದ
ರಿಂದಲೇ ಅವರು ಅಷ್ಟು ತ್ವರೆಯಾಗಿಯೇ ಊರು ಬಿಟ್ಟು ಹೋದರು. ಭಾದ್ರಪದ ಶುದ್ಧ
ತದಿಗೆ ಚೌತಿ ಇವೆರಡುದಿನವೂ ಊರಿನಲ್ಲೆಲ್ಲರ ಮನೆಯಲ್ಲೂ ಗೌರಿ-ಗಣೇಶ ಹಬ್ಬದ
ಸಮಾರಂಭ, ಗಣಪತಿಯನ್ನು ಕೂರಿಸಿದ ಮೇಲೆ ವಿಘ್ನೇಶ್ವರನಿಗೆ ಮಂಗಳಾರತಿ ಮಾಡಿ
ಬಿಟ್ಟ ಹೊರತು ಮನೆಬಿಟ್ಟು ಹೋಗುವಹಾಗಿಲ್ಲ. ಊರಿನಲ್ಲಾದರೋ ಪ್ಳೇಗು ದಿನೇ
ದಿನೇ ಹೆಚ್ಚುತ್ತ ಬಂದು ಬ್ರಾಹ್ಮಣಕೇರಿಯಲ್ಲೇ ದಿನವೊಂದಕ್ಕೆ ಎರಡು ಮೂರು ಹೆಣ
ಗಳು ಹೋಗಲಾರಂಭವಾಯಿತು. ಜನಗಳಿಗೆ ಬಹು ಗಾಬರಿಯಾದ್ದರಿಂದ ಎಲ್ಲರೂ
ಊರ ಹೊರಗೆ ಎರಡು ಮೈಲಿ ದೂರದಲ್ಲಿ ಮಟ್ಟೇ ಜೋಪಡಿಗಳನ್ನು ಕಟ್ಟಿಕೊಂಡು
ಅಲ್ಲಿಗೆ ವಾಸಕ್ಕೆ ಹೊರಟುಹೋದರು. ಭಾದ್ರಪದ ಶುದ್ಧ ದಶಮಿಹೊತ್ತಿಗೆಊರೆಲ್ಲವೂ
ಖಾಲಿಯಾದುವು, ನೀಲಕಂಠಶಾಸ್ತ್ರಿಗಳ ಮನೆಯವರೂ ತಮ್ಮ ಮನೆಗೆ ಬೀಗ ಹಾಕಿ
ಕೊಂಡು ಗುಡಿಸಲಿಗೇ ವಾಸಕ್ಕೆ ಹೊರಟುಹೋದರು.
ವಿನಾಯಕ ಶಾಸ್ತ್ರಿಗಳ ಮನೆಯವರು ಕ್ಷೀರಪ್ರರಕ್ಕೆ ಪ್ರಯಾಣ ಮಾಡಿದ
ವಿಷಯವನ್ನು ಹಿಂದೆಯೇ ಬರೆದಿದೆಯಷ್ಟೆ? ಅವರು ಅಲ್ಲಿಗೆ ಹೋದ ಮೇಲೆ ಒಂದು
ತಿಂಗಳಮಗೆ ಕ್ಷೇಮವಾಗಿಯೇ ಇದ್ದರು. ಇಷ್ಟು ಹೊತ್ತಿಗೆ ನವರಾತ್ರಿ ಹಬ್ಬ ಬಂದಿದ್ದಿತು.
ನವರಾತ್ರಿ ಪಾಡ್ಯದದಿನ ರಾತ್ರಿಯೇ ವಿನಾಯಕ ಶಾಸ್ತ್ರಿಗಳು ಒಕ್ಕಲಿದ್ದ ಮನೆಯಲ್ಲಿ
ಒಂದು ಇಲಿ ಸತ್ತುಹೋಯಿತು. ಮನೆಯವರಿಗೆ ಇದನ್ನು ನೋಡಿ ಬಹುಗಾಬರಿಯಾಗಿ
ಹೋಯಿತು. ಮಾರನೇ ದಿನವೇ ಬೇರೊಂದು ಮನೆಗೆ ವಾಸಕ್ಕೂ ಹೊರಟು ಹೋದರು.
ಅದೇ ದಿನ ಸಾಯಂಕಾಲ ಐದು ಗಂಟೆ ಸಮಯದಲ್ಲಿ ಹೊಸ ಮದವಣಗಿತ್ತಿ
ಲಕ್ಷ್ಮೀದೇವಮ್ಮನಿಗೆ ಜ್ವರವೂ ತಲೆನೋವೂ ಕಾಣಿಸಿ ಕೊಂಡಿತು. ಮನೆಯವರ ಹೆದರಿ
ಕೆಯನ್ನು ಕೇಳಬೇಕೆ ? ವಿನಾಯಕ ಶಾಸ್ತ್ರಿಗಳು ಪೂರ್ವಭಾವಿಯಾಗಿಯೇ ಪ್ಳೇಗಿನ
ಔಷಧಗಳನ್ನು ಬೇಕಾದಹಾಗೆ ತರಿಸಿಟ್ಟು ಕೊಂಡಿದ್ದರು. ಅದನ್ನೆಲ್ಲಾ ಜ್ವರ ಬಂದ ಹುಡು
ಗಿಗೆ ಕೊಟ್ಟುದಾಯಿತು. ಮಾರನೇದಿನ ಲಕ್ಷ್ಮಿದೇವಮ್ಮನಿಗೆ ಕಂಕುಳು ಸಂದಿಯಲ್ಲಿ
ಎರಡು ಗೆಡ್ಡೆಗಳು ಕಾಣಿಸಿಕೊಂಡವು. ಆ ಗ್ರಾಮದವರು ಇದನ್ನು ತಿಳಿದು ಒಟ್ಟು
ಗೂಡಿ ಒಂದು ಕ್ಷಣವೂ ತಮ್ಮೂರಿನಲ್ಲಿರಲಾಗದೆಂದು ವಿನಾಯಕ ಶಾಸ್ತ್ರಿಗಳ ಮನೆಯ
----------------------------------------------
10 ಕಾದಂಬರಿ: ಸಂಗ್ರಹ
ವರನ್ನು ಸ್ನೇಗು ತಗಲಿದ ಹುಡುಗಿಯೊಡನೆ ಬಲವಂತವಾಗಿ ಊರು ಬಿಟ್ಟು ಹೊರ
ಡಿಸಿ ಬಿಟ್ಟರು. ಅವರು ಧೈರ್ಯವನ್ನು ಹೊಂದಿ ಕ್ಷೀರಪುರಕ್ಕೆ ಮೂರು ಮೈಲಿ
ದೂರದಲ್ಲಿದ್ದ ನಾಗಪುರಕ್ಕೆ ತಮ್ಮನೆಂಟರೊಬ್ಬರ ಮನೆಗೆಹೋಗೋಣವೆಂದುಹೊರಟರು.
ನಾಗಪುರಕ್ಕೂ ಬಂದದ್ದಾಯಿತು. ಇವರು ಅಲ್ಲಿಗೆ ಹೋದುದು ಮಹಾನವಮಿಯ
ದಿನ ಮಧ್ಯಾಹ್ನ ನಾಲ್ಕು ಘಂಟೆ ಸಮಯ. ಇವರು ಬಂದ ವಿಷಯವನ್ನು ಎಷ್ಟೋ
ಗುಟ್ಟಿನಲ್ಲಿಟ್ಟಿರಬೇಕೆಂದು ಮಾಡಿ ಕೊಂಡಿದ್ದಾಗ್ಯೂ ಸಾಯಂಕಾಲ ೮ ಘಂಟೆಯೊಳಗಾಗಿ
ಊಗೆಲ್ಲವೂ ಈ ಸುದ್ದಿ ತಿಳಿದೇ- ಹೋಯಿತು. ಮೊದಲು ವಿನಾಯಕ ಶಾಸ್ತ್ರಿಗಳು
ಇಳಿದುಕೊಳ್ಳಲಿಕ್ಕೆ ತಕ್ಕ ಸ್ಥಳವೇ ದೊರೆಯಲಿಲ್ಲ, ಹೇಗೋ ಕಷ್ಟಪಟ್ಟು ಸಾಯಂಕಾಲ
ಏಳುಗಂಟೆ ಹೊತ್ತಿಗೆ ಬಂಧುವೊಬ್ಬನ ಮನೆಯ ಬೀದಿ ಬಾಗಲಲ್ಲಿ ರೋಗಿಯನ್ನು ಮಲಗಿ
ಸಿಕೊಂಡು ತಾವೂ ಕುತಕೊಂಡರು. ೯ ಘಂಟೆ ಹೊತ್ತಿಗೆ ಇವರಿಳಿದಿದ್ದ ಮನೆ ಬಾಗ
ಲಿಗೆ ದೊಣ್ಣೆಗಳನ್ನು ಹಿಡಿದುಕೊಂಡು ಒಂದು ಭಯಂಕರವಾದ ಮನುಷ್ಯರ ಗುಂಪು
ಬಂದಿತು. ಅವರಲ್ಲಿ ಒಬ್ಬೊಬ್ಬರು ಒಂದೊಂದು ರೀತಿ ಗಳಹುವುದಕ್ಕಾರಂಭಿಸಿದರು. ಹತ್ತು
ಘಂಟಿಯೊಗಾಗಿ ಈ ಊರನ್ನು ಒಟ್ಟು ರೋಗಿಯನ್ನು ಹೊರಕ್ಕೆ ತೆಗೆದುಕೊಂಡು
ಹೋದರೆ ಸರಿ. ಇಲ್ಲವಾದರೆ ಒಳ ಅನರ್ಥವಾಗುವುದೆಂದು ಗುಂಪಿಗೆ ಗುಂಪೇ ಕೂಗ
ತೊಡಗಿತು. ವಿನಾಯಕ ಶಾಸ್ತ್ರಿಗಳ ಮನೆಯವರ ಮನಸ್ಸು ಈಗ ಹೇಗಿದೆಯೆಂಬುದು
ಅನುಭವದುನಹ ಗೊತ್ತಾಗಲಾರದಾದ್ದರಿಂದ ಅದನ್ನು ಹೇಳುವುದಿಲ್ಲ. ಅಂತು ವಿನಾಯಕ
ಶಾಸ್ತ್ರಿಗಳು ಆ ಊರ ಬಿಟ್ಟು ಹೊರರಲೇಬೇಕಾಯಿತು. ಅವರ ಕಷ್ಟ ಜಗದೀಶ್ವರನೊ
ಬ್ಬಬಲ್ಲ. ಅವರಿಗೆ ಏನೂ ತೋರದೆ ಹಣೆಯಲ್ಲಿ ಬರೆದಂತಾಗಲೆಂದು ಯೋಚಿಸಿ ಸ್ವಸ್ಥ
ಳವಾದ ಹರಪುರಕ್ಕೆ ಪ್ರಯಾಣ ಮಾಡಲು ನಿಷ್ಕರ್ಷಿಸಿದರು. ರಾತ್ರಿ ಹನ್ನೆರಡು ಗಂಟೆ
ಹೊತ್ತಿಗೆ ವಿನಾಯಕ ಶಾಸ್ತ್ರಿಗಳು ಎರಡು ಬಂಡಿಗಳನ್ನು ಹೊಡಿಸಿಕೊಂಡು ಬಂದು ಅದ
ರಲ್ಲೊಂದರಲ್ಲಿ ರೋಗಿಯನ್ನೂ ಸಮೀಪದಲ್ಲಿ ತಮ್ಮ ತಾಯಿಯನ್ನೂ ಕುಳ್ಳಿರಿಸಿ
ಇನ್ನೊಂದರಲ್ಲಿ ಕಡಮೆಯ ವರೆಲ್ಲರೂ ಕು?ಳು ಪ್ರಯಾಣ ಮಾಡಿದರು.
ಗಾಡಿಯು ಮೆಲ್ಲ ಮೆಲ್ಲನೆ ಹೋಗುತ್ತಿತ್ತು. ರೋಗಿಯ ಸಂಕಟವೂ ಆರ್ತ
ನಾದವೂ ಕ್ಷಣೇಕ್ಷಣೇ ಹೆಚ್ಚುತ್ತಿತ್ತು, ಈ ಭಯಂಕರ ಘಟನೆಯನ್ನು ನೋಡಿದವರ
ಎದೆಯ ಒಡೆದು ಹೋಗುವಂತಿತ್ತು. ನಾಗಪುರಕ್ಕೂ ಹರಪುರಕ್ಕೂ ಹತ್ತು ಮೈಲು
ದೂರ, ವಿಜಯದಶಮಿಯದಿನ ಬೆಳಗಿನಝಾವ ನಾಲ್ಕು ಗಂಟೆ ಸಮಯದಲ್ಲಿ ಈ ಪ್ರಯಾ
ಣಿಕರ ಬಂಡಿಗಳು ನಾಗಪುರ ಹರಪುರಗಳ ಮಧ್ಯ ದಾರಿಯಲ್ಲಿರುವ ಒಂದು ಕೆರೆಯ
ಏರಿಯ ಮೇಲೆ ಬರುತ್ತಿದ್ದಾಗ ಲಕ್ಷ್ಮಿ ದೇವಿಯು ಈ ಭೂಲೋಕವನ್ನು ಬಿಟ್ಟು
----------------------------------------------
ನನ್ನ ಸಂಸಾರ 11
ಪ್ರಯಾಣಮಾಡಿದಳು. ವಿನಾಯಕ ಶಾಸ್ತ್ರಿಗಳು ಗಡಿಯ ಮೇಲೆಯೇ ಮೂರ್ಛಿತರಾಗಿ
ಬಿಟ್ಟರು. ರೋಗಿಯು ಮೃತಳಾದಸ್ಥಳಕ್ಕೂ ಹರಪ್ರರದ ಸ್ಮಶಾನ ಭೂಮಿಗೂ ಮೂರು
ಮೈಲಿದೂರವಿತ್ತು. ಬೆಳಗ್ಗೆ ಆರುಗಂಟೆಗೆ ವಿನಾಯಕ ಶಾಸ್ತ್ರಿಗಳ ಮನೆಯವರೆಲ್ಲರೂ
ಸ್ಮಶಾನದಲ್ಲಿ ಬಂದಿಳಿದು ನಡೆದ ವರ್ತಮನವನ್ನು ನೀಲಕಂಠಶಾಸ್ತ್ರಿಗಳ ಮನೆಗೆ ಹೇಳಿ
ಕಳುಹಿಸಿದರು. ನೀಲಕಂಠ ಶಾಸ್ತ್ರಿಗಳು ಆಗ ಊರಲ್ಲಿರಲಿಲ್ಲ. ಅವಶ್ಯವಾಗಿ ಸ್ಮಶಾನಕ್ಕೆ
ಹೋಗಬೇಕಾದವರು ಹೋಗಿದ್ದುದೂ ಆಯಿತು. ಅಲ್ಲಿ ಲಕ್ಷ್ಮಿದೇವಿಯ ದೇಹವನ್ನು
ಸಂಸ್ಕಾರಮಾಡಿ ಎಲ್ಲರೂ ಹಿಂತಿರುಗಿ ಮನೆಗೆ ಬಂದುದೂ ಆಯಿತು. ಅಂತು ಎರಡು
ತಿಂಗಳು ಕಳೆವುದರೊಳಗಾಗಿ ಇಷ್ಟು ಕಥೆ ಕದುಹೋಯಿತು.
ನಾನೇನೋ ಮದುವೆ ವಿಷಯವನ್ನು ಬರೆಯ ತೊಡಗಿ ಮಧ್ಯದಲ್ಲಿ ಇಂತಹ
ಅಮಂಗಳವನ್ನು ಬರೆದುದಕ್ಕಾಗಿ ಪಾಠಕಿಯರು ನನ್ನ ಮೇಲೆ ಆಗ್ರಹಪಡಬಹುದು.
ಆದರೆ ನಡೆದವಿಷಯವೆಲ್ಲವನ್ನೂ ಬರೆದು ಬಿಡಬೇಕಾಗಿರುವುದರಿಂದ ಎಲ್ಲರೂ ನನ್ನನ್ನು
ಮನ್ನಿಸಬೇಕು. ಈ ಪ್ರಪಂಚದಲ್ಲಿ ಮಂಗಳಾಮಂಗಳಗಳು ಬರುವುದೂ ಗೊತ್ತಿಲ್ಲ.
ಹೋಗುವುದೂ ಗೊತ್ತಿಲ್ಲ. ಇದೆಲ್ಲಾ ನಾಟಕವಾಡಿದ ಪಗೆ, ನಾವು ರಾತ್ರಿ ಹೊತ್ತು
ಮಲಗಿಕೊಂಡು ಕನಸನ್ನು ಕಂಡು ಹೇಗೋ ಅದರಂತೆಯೇ ಈ ಲೋಕದ ಸುಖ
ದುಃಖಗಳು.
III
ನನಗೆ ಹದಿನಾಲ್ಕು ವರ್ಷ ತಂಬುವುದಕ್ಕೆ ಇನ್ನು ಆರೇ ತಿಂಗಳು ಉಳಿದಿತ್ತು.
ನಮ್ಮ ತಾತನಂತೂ ನನಗೆ ಮದುವೆ ಮಾಡದೆ ತಾನೆಲ್ಲ ಸತ್ತುಹೋಗುವೆನೋ ಎಂದು
ಕೊರಗಿಕೊರಗಿ ಕೃಶನಾಗಿದ್ದನು. ಕೊನೆಗೆ ನೀಲಕಂಠಶಾಸ್ತ್ರಿಗಳಿಗೂ ನಮ್ಮ ತಾತನ
ನಮಗೂ ಪತ್ರ ವ್ಯವಹಾರ ಬೆತದ ಮೇಲೆ ನೀಲಕಂಠಶಾಸ್ತ್ರಿಗಳು ದಯವಿಟ್ಟು ನಮ್ಮ
ಮನೆ ಸಂಬಂಧಮಾಡುವುದಕ್ಕೆ ಒಪ್ಪಿಕೊಂಡರು. ನಮ್ಮ ತಾತನ ಸಂತೋಷವು ವಿವರಿ
ಲಸದಳ.
ಮನ ಬಹುಳ ಬಿದಿಗೆ ದಿನ ನನಗೆ ಮದುವೆಯಾಯಿತು. ಮದುವೆಗಾಗಿ ಬಂ
ದಿದ್ದ ಬೀಗರು ಹರಪುರಕ್ಕೆ ಪ್ರಯಾಣ ಬೆಳೆಸಿದರು. ಅವರು ಪ್ರಯಾಣಮಾಡುವಾಗ
ನಮ್ಮ ತಾತನು ನೀಲಕಂಠಶಾಸ್ತ್ರಿಗಳನ್ನು ಕುರಿತು " ಸ್ವಾಮಿ ! ತಾವು ದೊಡ್ಡ ಮನ
ಸ್ಸು ಮಾಡಿ ನನ್ನನ್ನು ಕನ್ಯಾದಾಯದಿಂದಉದ್ಧಾರಮಾಡಿದುದಕ್ಕಾಗಿ ನಾನು ತಮಗೆ
ಜೀವಾವಧಿ ಕೃತಜ್ಞನಾಗಿದ್ದೇನೆ. ನನ್ನ ಮನಸ್ಸಿನಲ್ಲಿ ಪೂರ್ವವಯಸ್ಕನೂ, ಸತ್ಕುಲ
ಪ್ರಸೂತನೂ, ವಿದ್ಯಾವ:ತನೂ ಆದ ವರನಿಗೆ ಹುಡುಗಿಯನ್ನು ಕೊಡಬೇಕೆಂಬ ಆಶೆ
-------------------------------------------
12 ಕಾದಂಬರಿ ಸಂಗ್ರಹ
ಬಹಳವಾಗಿತ್ತು. ಅದನ್ನು ತಾವು ಸಾಫಲ್ಯಗೊಳಿಸಿದಿರಿ. ಇನ್ನು ನಾನು ಕೃತಾರ್ಥನಾ
ದೆನು. ತಾವು ನಾಲ್ಕಾರು ತಿಂಗಳು ಬಿಟ್ಟು ಕೊಂಡು ಹುಡುಗಿಯನ್ನು ನಿಮ್ಮ ಮನೆಗೆ
ಕರೆದುಕೊಂಡು ಹೋಗಿ ನಿಮ್ಮ ಮನೆ ಆಚಾರ ವ್ಯವಹಾರ ಪದ್ಧತಿ, ಮಾನಮರ್ಯಾದೆ
ಗಳನ್ನು ಕಲಿಸಿಕೊಡಿ, ಈ ಹುಡಿಗಿಯನ್ನು ಪ್ರೀತಿಯಿಂದ ಸಾಕಿರುವೆನು. ನನ್ನ ಮಗನು
ವಿವೇಕಶಾಲಿಯಾಗಿ ಮಗಳಿಗೆ ಬುದ್ಧಿವಾದ ಹೇಳಿಕೊಡುವಷ್ಟು ಗುಣವಂತನಲ್ಲ. ನೀವು
ನಮ್ಮನ್ನು ಮುಂದೆ ಯಾವ ವಿಧದಲ್ಲಿಯೂ ಆಕ್ಷೇಪಣೆ ಮಾಡದಿರಬೇಕಾದರೆ ನಿಮ್ಮ
ಮನೆಯಲ್ಲಿಟ್ಟುಕೊಂಡು ನಿಮ್ಮ ಮನೆಸಂಪ್ರದಾಯಗಳನ್ನು ಹೇಳಿಕೊಡಬೇಕು.”
ಎಂದು ಹೇಳಿ ಅವರನ್ನು ಪ್ರಯಾಣಮಾಡಿಸಿ ಕಳುಹಿಸಿಕೊಟ್ಟನು.
ನನಗೆ ಮದುವೆಯಾದ ಆರುತಿಂಗಳಿಗೆ ನಮ್ಮ ತಾತನು ಇಹಲೋಕವನ್ನು
ತ್ಯಜಿಸಿ ಪರಲೋಕಕ್ಕೆ ಪ್ರಯಾಣಮಾಡಿದರು. ನಮ್ಮ ತಂದೆಯು ತಾತನ ಉತ್ತರಕ್ರಿಯೆ
ಗಳನ್ನು ಮಾಡುವುದಕ್ಕಾಗಿ ಇನ್ನೂರು ರೂಪಾಯಿ ಸಾಲಮಾಡಬೇಕಾಯಿತು. ಎಲ್ಲಾ
ಮುಗಿದಮೇಲೆ ನನ್ನನ್ನು ನಮ್ಮ ತಂದೆಯು ಕೆಲವು ದಿನಗಳ ಮಟ್ಟಿಗೆ ಪತಿಗೃಹಕ್ಕೆ
ಕಳುಹಿಸಿಕೊಟ್ಟರು.
ನಾನಿನ್ನೂ ಅರಿಯದ ಹುಡುಗಿ ಪರಗೃಹದಲ್ಲಿದ್ದವಳಲ್ಲ. ಮೊದಮೊದಲು
ನನಗೆ ಪತಿಗೃಹಕ್ಕೆ ಬಂದಾಗ ಏನೋ ಒಂದು ವಿಧವಾಗಿ ಕಣ್ಣ ಕಟ್ಟಿದಂತಾಗಿತ್ತು.
ತಂದೆ ತಾಯಿಗಳನ್ನು ನಾನೆಂದೂ ಬಿಟ್ಟಿದ್ದವಳಲ್ಲ, ಅದಲ್ಲದೆ ನಾನು ಪತಿಗೃಹಕ್ಕೆ
ಬಂದಮೇಲೆ ಅಲ್ಲಿನ ನಡವಳಿಕೆ ಆಚಾರ, ಸಂಪ್ರದಾಯಗಳನ್ನು ನಮ್ಮ ಅತ್ತೆಯೂ
ನಮ್ಮ ಅಕ್ಕನೂ(ಓರಗಿತ್ತಿ) ನನಗೆ ಬೋಧಿಸುತ್ತಿದ್ದರು.
ನಮ್ಮ ಬ್ರಾಹ್ಮಣವೃಂದದಲ್ಲಿ ಹೆಂಡತಿ ದೊಡ್ಡವಳಾಗಿ ಗಂಡನ ಮನೆಗೆ
ಹೋಗುವ ವರೆವಿಗೂ ಗಂಡಹೆಂಡರು ಮಾತನಾಡುವುದೆಂದರೆ ಬಹು ಸಂಕೋಚವೂ
ಅಪಹಾಸ್ಯವೂ ವಾಮಾನಿಕೆಯ ಆದ ಪದ್ಧತಿಯಂತೆ, ಈ ಪದ್ದತಿಯು ಪೂರ್ವಕಾಲ
ದಲ್ಲಿ ವಿಶೇಷವಾಗಿ ಆಚರಣೆಯಲ್ಲಿದ್ದಿತು. ಆಗಣಕಾಲದಲ್ಲಿ ಒಂದೆರಡು ಮಕ್ಕಳಾದ
ಮೇಲೂ ಹೆಂಡತಿಯಾದವಳು, ಗಂಡನೊಡನೆ ಧೈರ್ಯದಿಂದ ಬಹಿರಂಗದಲ್ಲಿ ಮಾತನಾ
ಡುವುದಕ್ಕೆ ಹೆದರಿಕೊಳ್ಳುತ್ತಿದ್ದಳು. ಅದರಲ್ಲೂ ಅತ್ತೆ, ಮಾವ, ಭಾವ, ಅತ್ತಿಗೆ, ನಾದಿನಿ
ಯದಿರಿಗೆ, ಗಂಡನ ಸಂಗಡ ಮಾತಾಡುವುದೆಂದರೆ ಬಹುಕಷ್ಟ ತರವಾದ ಸಂಗತಿಯೇ ಸರಿ.
ಒಂದುವೇಳೆ ಪ್ರತ್ಯಕ್ಷವಾಗಿ ಮಾತನಾಡಿಬಿಟ್ಟಳೆಂದರೆ, ಆ ವಿಚಾರವು ಮಾರನೆಯದಿನವೇ
ಊರಲ್ಲೆಲ್ಲಾ ಹರಡಿ ಹೋಗುತ್ತಿದ್ದುದಲ್ಲದೆ, ಅಂತಹವಳಿಗೆ ಗಂಡುಬೀರಿಯೆಂಬ ಬಿರಿದು
ಸಹ ಬಂದು ಬಿಡುತ್ತಿದ್ದಿತು.
----------------------------------------
ನನ್ನ ಸಂಸಾರ ೧೩
ನೀಲಕಂಠಶಾಸ್ತ್ರಿಗಳ ಕಿರೀಮೊಮ್ಮಕ್ಕಳಾದ ವಾಸುದೇವಶಾ. . ... ......
ಆಹಾ ! ಮರೆತುಬಿಟ್ಟೆನು, ಏನೋಜ್ಞಾನದಿಂದ ನನ್ನ ಸ್ವಾಮಿಯ ಹೆಸರನ್ನು ಬಾಯಿಂದ
ಮರೆತು ಹೇಳುಬಿಡುತ್ತಿದ್ದೆನು. ವಾಚಕಿಯರು ದಯವಿಟ್ಟು ಕ್ಷಮಿಸಬೇಕು. ಈಗ ಈ
ಗ್ರಂಥದಲ್ಲಿ ಇನ್ನು ಮುಂದೆ ನನ್ನ ಜೀವಿತಸರ್ವಸ್ವರಾದ ಸ್ವಾಮಿಯವರ ಹೆಸರನ್ನು
ಆಗಾಗ್ಗೆ ಉಚ್ಚರಿಸ ಬೇಕಾಗುತ್ತದೆ. ಆದುದರಿಂದ ಅವರಿಗೆ ಯಾವ ಹೆಸರಿಟ್ಟು ಕರೆಯ
ಬೇಕೋ ತಿಳಿಯದು ನೀವಾದರೂ ಐದು ಮಂದಿ ಮುತ್ತೈದೆಯರು ಸೇರಿ ನನಗೆ ಈ ವಿಷ
ಯದಲ್ಲಿ ಬುದ್ದಿವಾದವನ್ನು ಹೇಳಿಕೊಡಬೇಕು, ನಾ ನಿನ್ನ ಮಾತನ್ನು ಮೀರುವವ
ಳಲ್ಲ. ಲೋಕನ್ಯಾಯದಂತೆ ನಾನು ವರ್ತಿಸುವವಳೇ ವಿನಹ ಅನ್ಯಥಾ ಇಲ್ಲ. "ನಮ್ಮ !
ಮನೆಯವರೆಂದು ಕರೆಯಲೆ? ಅಥವಾ ಪ್ರಾಣನಾಯಕ ; ಪ್ರಾಣಪ್ರಿಯ ! ಪ್ರಿಯನಾಥ
ಪ್ರಾಣಕಾಂತ ! ಮುಂತಾದ ಯಾವುದಾದರೊಂದು ಹೆಸರಿನಿಂದ ಕೂಗಲೆ ? ಅಥವಾ
My Dear Husband ಎಂದು ಕರೆಯುತ್ತಾ ಬರಲೇ? ಉಹು-ಇದಾವುದೂ
ಸರಿಯಲ್ಲ. ಏನೆಂದು ಕರೆದರೂ ಆಕ್ಷೇಪಣೆ ಮೂಡುವವರು ಮೂಡಿಯೇಮಾಡುತ್ತಾರೆ.
ಆದುದರಿಂದ ನಮ್ಮ ಸೋದರಿಮಣಿಯರು ಈಗ ವರ್ತಿಸುತ್ತಿರುವಂತೆ ನಾನೂಸಹ
ನಮ್ಮ ಯಜಮಾನರೆಂದು ಸಂಬೋಧಿಸುತ್ತಾ ಬರುವೆನು. ಇದರಲ್ಲೇನೂ ದೋಷ
ವಿರುವಂತೆ ತೋರದು.
ಒಂದುದಿನ ನನ್ನ ಯಜಮಾನರು ನನ್ನನ್ನು ತಮ್ಮ ಚಿಕ್ಕ ಮನೆಗೆ ಕರೆದು
ನನ್ನೆರಡು ಕೈಗಳನ್ನೂ ಹಿಡಿದುಕೊಂಡು ನನ್ನ ಗಲ್ಲವನ್ನು ಮುದ್ದಿಟ್ಟು,ಪ್ರಿಯಳೆ! ಈಗ
ನೀನು ನನ್ನ ಸಂಗಡ ಮಾತನಾಡಲು ನಾಚಿಕೆ ಪಡಬೇಡ; ನೀನು ಪುಸ್ತಕಗಳನ್ನೋದು
ವುದನ್ನು ಬಲ್ಲೆಯಾ? ಎಂದು ಕೇಳಿದರು. ನನ್ನನ್ನು ಅವರು ಮುಟ್ಟುತ್ತಲೇ ನನಗೆ
ಮೈಯೆಲ್ಲಾ ನಡುಗಿಹೋಯಿತು. ಅವರು ಕೇಳಿದ ಪ್ರಶ್ನೆಗೆ ಉತ್ತರ ಕೊಡಬೇಕೆಂದು
ಪ್ರಯತ್ನ ಪಟ್ಟೆನು. ಆದರೆ ಆ--ಹಾಳು ನಾಚಿಕೆಯೊಂದು ಅಡ್ಡವಾಗಿ ಬಂದು ನನ್ನನ್ನು
ಮಾತನಾಡಗೊಡಿಸದೆ ಹೋಯಿತು. ಅರ್ಧ ಗಂಟೆವರಿಗೆ ನಮ್ಮ ಯಜಮಾನರು
ನನ್ನನ್ನು ವಿವಿಧವಾಗಿ ಕೇಳಿದರೂ ನಾನು ಯಾವಮಾತನ್ನಾಡಲೂ ಶಕ್ತಳಾಗಲಿಲ್ಲ.
ಕೊನೆಗೆ ಅವರಿಗೆ ಬೇಸರವಾಗಿ ನನ್ನನ್ನು ಬಿಟ್ಟು ಬಿಟ್ಟು, ಇಂತಹ ಮೂಢತನವನ್ನು
ನೀನು ಇನ್ನು ಮೇಲೆ ಬಿಟ್ಟು ನನ್ನೊಡನೆ ಸರಿಯಾಗಿ ಮಾತನಾಡದಿದ್ದರೆ ನನಗೆ ಬಹು
ಕೋಪ ಬರುವುದೆಂದು ಹೇಳಿಬಿಟ್ಟರು. ಅವರು ನನ್ನ ಕೈಬಿಟ್ಟೊಡನೆಯೇ ನಾನು ಆ ಸ್ಥಳ
ವನ್ನು ಬಿಟ್ಟು ಒಳಕ್ಕೆ ಹೊರಟು ಹೋದೆನು. ಒಳಕ್ಕೆ ಹೋದ ಮೇಲೆ ನನ್ನನ್ನು ನಾನೇ
ನಿಂದಿಸಿಕೊಳ್ಳ ಬೇಕಾಯಿತು. ನನ್ನನ್ನು ಯಜಮಾನರು ಆದರದಿಂದ ಮಾತನಾಡಿಸಿದರೂ
-----------------------------------------------
14 ಕಾದಂಬರಿ ಸಂಗ್ರಹ
ನಾನು ಮಾತನಾಡದೆ ಹೋದೆನಲ್ಲಾ ! ಎಂಬ ವ್ಯಥೆಯು ನನ್ನ ಮನಸ್ಸನ್ನು ವ್ಯಗ್ರ
ಮಾಡಿಬಿಟ್ಟಿತು. ಇನ್ನೆಂದಾದರೂ ಮಾತಾಡಿಸಿದರೆ ಮಾತನಾಡಿಬಿಡುವೆನೆಂದು ನಿರ್ಧರಿಸಿ
ಕೊಂಡೆನು. ಆದರೆ ಪುನಃ ನನ್ನ ಮುಗ್ನ ವಯಸ್ಸಿನಲ್ಲಿ ಅಂತಹ ಸಂಭವವೇ ಉಂಟಾಗ
ಲಿಲ್ಲ. ಇಷ್ಟರಲ್ಲೇ ನನ್ನ ತಂದೆಯು ಬಂದು ನನ್ನನ್ನು ರಂಗಪುರಕ್ಕೆ ಕರೆದು ಕೊಂಡು
ಹೊರಟು ಹೋದರು.
ನಾನು ಮದುವೆಯಾದ ಮೇಲೆ ನಾಲ್ಕು ತಿಂಗಳು ಪತಿಗೃಹಕ್ಕೆ ಹೋಗಿದ್ದೆನು.
ನನ್ನ ತಂದೆಯ ಪತಿಗೃಹದಿಂದ ನನ್ನನ್ನು ರಂಗಪುರಕ್ಕೆ ಕರೆದುಕೊಂಡು ಬಂದ ಆರುತಿಂ
ಗಳಿಗೇ ನಾನು ದೊಡ್ಡವಳಾದೆನು. ಆಗ ನನಗೆ ಹದಿನೈದು ವರ್ಷ ತುಂಬಿ ಮೇಲೆ ಆರು
ತಿಂಗಳಾಗಿದ್ದಿತು. ನಾನು ದೊಡ್ಡವಳಾದ ಹದಿನಾರು ದಿನದೊಳಗಾಗಿ ಋತುಶಾಂತಿ
ಯನ್ನು ಮಾಡಿಕೊಡಲು ನನ್ನ ತಂದೆಗೆ ಸಾಕಾದಷ್ಟು ಅನುಕೂಲವಿರಲಿಲ್ಲ. ಆದುದ
ರಿಂದ ಹರಪ್ರರಕ್ಕೆ ಬರದ ಕಾಗದದಲ್ಲಿ ಕಾಲವಿಳಂಬವನ್ನು ಸೂಚಿಸುವ ಅಭಿಪ್ರಾಯ
ವನ್ನು ತೋರಿಸಿ ಪತ್ರವನ್ನು ಬರೆದು ಹಾಕಿದರು.
ನಮ್ಮ ತಾತನವರಾದ ನೀಲಕಂಠಶಾಸ್ತ್ರಿಗಳು ನಮ್ಮ ತಂದೆಯ ಕಾಗದವ
ನ್ನೋದಿ ಕೋಪಗೊಂಡರು. ಋತು ಶಾಂತಿಯನ್ನು ಸಾವಕಾಶವಾಗಿಡಲು ಅವರಿಗೆ ಮನ
ಸ್ಸಿರಲಿಲ್ಲ. ನಮ್ಮ ತಂದೆಯ ಪತ್ರಕ್ಕೆ ಬದುಲಾಗಿ ಅವರು. "ನಿಮ್ಮ ಕಾಗದವನ್ನು
ನೋಡಿ ಸಂತೋಷವಾಯಿತು. ತಾವು ಈ ಕಾಗದ ಕಂಡೊಡನೆಯೇ ಸಕುಟುಂಬರಾಗಿ
ಹುಡುಗಿಯನ್ನೂ ಕರೆದುಕೊಂಡು ಇಲ್ಲಿ ಬರಬೇಕು. ಲಗ್ನವನ್ನು ಹದಿನಾರು ದಿನ
ದೊಳಗೇ ನಿಷ್ಕರ್ಷೆ ಮಾಡಿಸುತ್ತೇವೆ,'' ಎಂದು ಬರೆದು ಕಳುಹಿಸಿದರು. ನಮ್ಮ
ತಂದೆಗೆ ಆ ಕಾಗದವನ್ನು ನೋಡಿ ತುಂಬಾಯೊಜನೆಗೆ ಪ್ರಾರಂಭವಾಯಿತು, ಪುನಃ,
" ನಾನು ಬಡವನಾದರೂ ಚಿಂತೆಯಿಲ್ಲ. ತಾವು ಸರ್ವರೊಡನೆ ರಂಗಪುರಕ್ಕೆ ದಯ
ಮಾಡಿ ಅಗ್ನವನ್ನು ಬೆಳಸಿಕೊಂಡು ಹೋಗಬಹುದು" ಎಂದು ಪುನಃ ನಮ್ಮ ತಂದೆಯು
ಹರಪುರಕ್ಕೆ ಪತ್ರವನ್ನು ಬರದು, ಸಾಹುಕಾರರಲ್ಲಿ ನೂರು ರೂಪಾಯಿ ಸಾಲಮಾಡಿ
ನಿಷೇಕಲಗ್ನಕ್ಕೆ ತಕ್ಕ ಸಾಹಿತ್ಯಗಳನ್ನು ಅಣಿಮಾಡಿಕೊಂಡರು.
ನಿರ್ದಿಷ್ಟ ದಿನಕ್ಕೆ ಸುಯಾಗಿ ಎಲ್ಲರೂ ರಂಗಪುರಕ್ಕೆ ಬಂದರು. ನಿಷೇಕದ ದಿವಸ
ಹಗಲು ಹವನ ಹೋಮಾದಿಗಳೆಲ್ಲವೂ ಬೆಳೆದುವು, ಹಸೆಯ ಮೇಲೆ ಕುಳಿತು ಕೊಳ್ಳು
ವಾಗ ನನಗೆ ಬಹುಕಡೆ ಎರವಲಾಗಿ ತಂದ ಅಸಂಖ್ಯಾತವಾದ ವಿಧ ವಿಧ ಆಭರಣಗಳನ್ನು
ಅಲಂಕಾರ ಮಾಡಿದರು. ನನಗೆ ಒಡವೆಗಳ ಭಾರವನ್ನು ಹೊರುವುದು ಬಹು ಕಷ್ಟವಾಗಿ
ಹೋಯಿತು. ಆದರೆ ಆ ಕಷ್ಟವೂ ಹೆಂಗಸುಗೆ ಅದೊಂದು ವಿಧವಾದ ಆನಂದವೇ ಸರಿ.
-----------------------------------------------
ನನ್ನ ಸಂಸಾರ 15.
ಆದಿನ ಎರಡು ಬಾರಿ ಆರತಕ್ಷತೆಗಳಾದುವು. ರಾತ್ರಿ ಹನ್ನೆರಡು ಘಂಟೆಗೆ ನಾನು ನನ್ನ
ಸ್ವಾಮಿಯೊಡನೆ ಶಯನಗ್ರಹಕ್ಕೆ ಪ್ರವೇಶ ಮಾಡಿದನು. ಅಲ್ಲಿಗೆ ಪ್ರವೇಶ ಮಾಡಿದ
ಎರಡು ಗಳಿಗೆಯವರಿಗೂ ಫಲದಾನವೇ ಮುಂತಾದ ಶಾಸ್ತ್ರಗಳು ನಡೆಯುತ್ತಿದ್ದುವು.
ಪುರೋಹಿತರು ಬಂದು ನಾಲ್ಕಾರು ವೇದಋಕ್ಕುಗಳನ್ನು ನಮ್ಮ ಯಜಮಾನಂದ ಹೇಳಿಸಿ
ಹೊರಟು ಹೋದರು. ಶಯನ ಗೃಹಕ್ಕೆ ಪ್ರವೇಶಿಸಿದ್ದ ಸುವಾಸಿನಿಯರು ಯಥಾಯಥ
ವಾಗಿ ಹೊರಟು ಹೋದರು. ಈಗ ಶಯನ ಗೃಹದಲ್ಲಿ ನಾನೂ ನನ್ನ ಸ್ವಾಮಿಯ ವಿನಹ
ಇತರರಾರೂ ಇರಲಿಲ್ಲ.
ನಮ್ಮ ಯಜಮಾನರು ನನ್ನನ್ನು ಆದಿನ ಆದರ ಪೂರ್ವಕವಾಗಿ ಕುಶಲಪ್ರಶ್ನೆ
ಯನ್ನು ಮಾಡಿದರು. ನಾನೂ ಬಳುಸಂಕೋಚದಿಂದ ಅವರ ಪ್ರಶ್ನೆಗಳಿಗೆ ಉತ್ತರಕೊ
ಟ್ಟೆನು, ನಮ್ಮ ಯಜಮಾನರು ಸತೀ ಧರ್ಮವನ್ನು ಕುರಿತು ಬಹುಹೊತ್ತಿನವರಿಗೆ ಉಪ
ನ್ಯಾಸ ಮಾಡಿದರು. ಅವರ ನೀತಿಗಳನ್ನು ಕೇಳಿ ನನಗೂ ಬಹಳ ಸಂತೋಷವಾಯಿತು.
ಅವರ ಉಪನ್ಯಾಸದಿಂದ ತಿಳಿದು ಬಂದುದೇನಂದರೆ; --- ಗೃಹಿಣಿಯಾದವಳಿಗೆ, ಪತಿವಿ
ನಹ ಬೇರೆ ದೇವಲ್ಲ, ಬೇರೇವ್ರತವಿಲ್ಲ. ಬೇರೆ ಉಪವಾಸಗಳಿಲ್ಲ. ಪ್ರತ್ಯೇಕವಾದ
ತೀರ್ಥಯಾತ್ರೆಗಳಿಲ್ಲ. ಇತರವಾದ ಪುಣ್ಯಕ್ಷೇತ್ರಗಳೂ ಇಲ್ಲ. ಪತಿಗಿಂತಲೂ ಸ್ವರ್ಗ
ಸುಖವಿಲ್ಲ; ಹೀಗೆಯೇ ಮಾತನಾಡುತ್ತಿದ್ದಾಗಲೇ ಬೆಳಗಿನಝಾವದ ಕೋಳಿಯು
ಕೂಗಿಬಿಟ್ಟಿತು.
ಗೃಹಿಣಿಯರಾದ ಸೋದುಯರಿರಾ: ಈ ದಿನ ನಾನು ಎಷ್ಟು ಆನಂದದಿಂದಿರು
ವೆನೆಂಬುದನ್ನು ಅನುಭವಿಗಳಾದ ನೀವೇ ಊಹಿಸಿಕೊಳ್ಳಬೇಕಲ್ಲದೆ ಅದನ್ನು ಮಾತಿನಿಂದ
ಹೇಳಲಾಗುವುದಿಲ್ಲ. ಯಾವ ರಮಣಿಯು, ಪತಿಯ ಆದರಕ್ಕೆ ಪಾತ್ರಳಾಗಿ, ಪತಿಯೇ
ಸರ್ವಸ್ವವೆಂದು ನಂಬಿ ಪತಿದೇವನನ್ನು ಅನವರತವೂ ಎಡೆಬಿಡದೆ ಪತಿಭಕ್ತಿಪರಾಯಣ
ಳಾಗಿರುವಳೋ ಅಂತಹ ರಮಣಿಯಸುಖದ ಮುಂದೆ ಇತರ ವಿಧವಾದ ಪ್ರಾಪಂಚಿಕ
ಸುಖಗಳನ್ನು ತೃಣದಂತೆ ಭಾವಿಸಬೇಕು.
IV
ಪ್ರಸ್ತವಾದಮೇಲೆ ಹದಿನೈದು ದಿನ ನಾನು ತೌರುಮನೆಯಲ್ಲಿಯೇ ಇದ್ದೆನು.
ಇನ್ನೆಷ್ಟು ದಿನ ತಾನೇ ಹೆಣ್ಣು ಮಕ್ಕಳು ತೌರುಮನೆಯಲ್ಲಿರುವುದಕ್ಕಾದೀತು ? ಹೆಣ್ಣು
ಮಕ್ಕಳು ಹುಟ್ಟುವುದು ಪರರ ಮನೆಯಲ್ಲಿರುವುದಕ್ಕಾಗಿಯೇ. ಗಂಡನ ಮನೆಗೆ
ಹೋದಮೇಲೂ ಹೆಣ್ಣು ಮಕ್ಕಳಿಗೆ ತೌರುಮನೆಯ ಆಶೆಯಿದ್ದೇ ಇರುತ್ತದೆ. ಅದಕ್ಕಾ
ಗಿಯೇ ಗಂಡನ ಮನೆಯಲ್ಲಿ ಸಂಸಾರಮಾಡುತ್ತಿರುವ ಹೆಣ್ಣುಮಕ್ಕಳನ್ನು ತಂದೆತಾಯಿ
---------------------------------------------
16 ಕಾದಂಬರಿ ಸಂಗ್ರಹ
ಗಳು ಆಗಾಗ್ಗೆ ಕರೆದುಕೊಂಡು ಹೋಗುತ್ತಲೇ ಇರುತ್ತಾರೆ. ಆದರೆ ಇನ್ನೊಂದು
ವಿಶೇಷವುಂಟು; ಯಾರಿಗಾದರೂ ಆಗಲಿ, ತನ್ನ ಮಗಳನ್ನು ಒಬ್ಬನಿಗೆ ಕೊಟ್ಟ ಮೇಲೆ
ಮಗಳೂ ಅಳಿಯನೂ ತಮ್ಮ ಮನೆಯಲ್ಲಿಯೇ ಇರಬೇಕೆಂಬ ಆಶೆ ಅವರಿಗೆ ಬಹಳವಾ
ಗಿ ಇದ್ದೇ ಇರುತ್ತದೆ. ಮತ್ತು ಇದರಲ್ಲೂ ಧನಿಕರಾದವರಿಗಂತೂ ಈ ವಿಧವಾದ
ಆಶೆಯು ಖಂಡಿತವಾಗಿ ಇದ್ದೇ ಇರುತ್ತದೆ. ಈ ಕಾರಣದಿಂದ ಮಗಳ ಮೇಲೆ ತಂದೆತಾ
ಯಿಗಳ ಪ್ರೀತಿಯು ಎಷ್ಟಿರಬಹುದೆಂಬುದನ್ನು ನಮ್ಮ ವಾಚಕರು ತಮ್ಮ ತಮ್ಮ ಹೃದ
ಯದಲ್ಲಿ ಭಾವಿಸಿಕೊಳ್ಳಲಿ? ಆದರೇನು ? ಈಶ್ವರನಿಯಾಮಕವನ್ನು ತಪ್ಪಿಸುವದಕ್ಕೆ
ಆರಕೈಲೂ ಸಾಗಲಾರದು. ತಂದೆತಾಯಿಗಳಿಗೆ ಮಕ್ಕಳ ಮೇಲೆ ಅದೆಷ್ಟು ಪ್ರೀತಿ
ಇದ್ದಾಗ್ಯೂ ಗೃಹಿಣಿಯಾಗಲರ್ಹಳಾದ ಮಗಳನ್ನು ಎಂದಾದರೊಂದುದಿನ ಪತಿಗೃಹಕ್ಕೆ
ಕಳುಹಿಸಿಯೇ ಬಿಡಬೇಕಲ್ಲವೆ ? ಚಿಕ್ಕಂದಿನಿಂದ ಸಾಕಿದ ಮಗಳನ್ನು ತಮ್ಮ ಮನೆಯಿಂದ
ಶಾಶ್ವತವಾಗಿ ಸತಿಗೃಹವಾಸಕ್ಕೆಂದು ಪ್ರಯಾಣಮಾಡಿ ಕಳುಹಿಸುವ ಸಮಯದಲ್ಲಿ
ಮಾತಾಪಿತೃಗಳಿಗೆ ಎಷ್ಟು ವ್ಯಸನವಾಗಬಹುದು ? ಅದರೆ ಅವರು ಆಗಣಸ್ಥಿತಿಯಲ್ಲಿ
ವ್ಯಸನಪಡುವುದು ಸರಿಯಾದುದಲ್ಲ. ಮಗಳೂ ಅಳಿಯನೂ ಅನ್ನೋನ್ಯವಾಗಿ ಸುಖ
ದಿಂದಿರಲೆಂದೂ ಸತ್ಸಂತಿಯ ಅವರಿಗೆ ಪ್ರಾಪ್ತವಾಗಿ ಆಯುರಾರೋಗ್ಯೈಶ್ವರ್ಯಾದಿ
ಗಳಿಂದ ಅವರು ಚಿರಕಾಲ ಜೀವಿಸಬೇಕೆಂದೂ ಹರಸಿ ಮಗಳಿಗೆ, ಸತೀಧರ್ಮಗಳನ್ನುಪ
ದೇಶಿಸಿ ಕಳುಹಿಸಿಕೊಡುವುದು ಅವರ ಮುಖ್ಯ ಕರ್ತವ್ಯ. ಆದರೆ ಹೆಣ್ಣು ಮಗಳು
ಪ್ರಯಾಣಮಾಡಿಕೊಂಡು ಪತಿಗೃಹಕ್ಕೆ ಹೋಗುವಾಗ ತಂದೆತಾಯಿಗಳು ಪಡುವ
ವ್ಯಸನವು ಎಂತಹ ವ್ಯಸನವೆಂಬುದನ್ನು ಆಲೋಚಿಸೋಣ. ನಮಗೆ ರುಃಖಕಾಲದಲ್ಲಾ
ಗಲೀ ವಿಶೇಷ ಸಂತೋಷಕಾಲದಲ್ಲಾಗಲೀ ಸ್ವಭಾವವಾಗಿ ಕಣ್ಣೀರು ಸುರಿವುದು ಸ್ವಭಾ
ವವಷ್ಟೆ. ದುಃಖದಿಂದ ಸುರಿವ ಕಣ್ಣೀರಿಗೆ ಶೋಕಬಾಷ್ಪವೆಂದೂ ಆನಂದದಿಂದ ಸುರಿವ
ಕಣ್ಣೀರಿಗೆ ಆನಂದಬಾಷ್ಪವೆಂದೂ ಹೆಸರು ಕೊಡಲ್ಪಟ್ಟಿರುವುದು. ಮಗಳನ್ನು ಕಳುಹಿ
ಸುವಾಗ ಸುರಿವ ಕಣ್ಣೀರು ಎರಡು ವಿಧವಾದ ಬಾಷ್ಪಗಳಿಗೂ ಸಂಬಂಧಿಸಲ್ಪಟ್ಟುದು.
ಮಗಳನ್ನು ಕಳುಹಿಸಬೇಕಲ್ಲಾ, ಎಂಬ ವ್ಯಸನವೂ; ನನ್ನ ಮಗಳು ಇನ್ನು ಮುಂದೆ
ಪತಿಯೊಡನೆ ಸಂಸಾರ ಮಾಡಿಕೊಂಡು ಸುಖಿಸುವಳಲ್ಲಾ ಎಂಬ ಸಂತೋಷವೂ ಮಿಳಿತ
ವಾಗುವುದರಿಂದ ಆಗಣಕಾಲದ ಚಿಂತೆಯು ಅಪರಿಮಿತವಾದುದೇಸರಿ.
ನಮ್ಮ ತಂದೆತಾಯಿಗಳು ನನ್ನನ್ನು ಹರಪುರಕ್ಕೆ ಕರೆದುಕೊಂಡು ಬಂದು ಪತಿ
ಗೃಹದಲ್ಲಿ ಬಿಟ್ಟು ವಿಹಿತವಾದ ನೀತಿಗಳನ್ನುಪದೇಶಿಸಿ ರಂಗಪುರಕ್ಕೆ ಪ್ರಯಾಣಮಾಡಿ
ದರು. ಇಂದು ನನಗೆ ಬಹು ದುಃಖವಾಯಿತು. ನಮ್ಮ ತಾಯಿತಂದೆಗಳನ್ನು ನಾನೊಂದು
------------------------------------------------
ನನ್ನ ಸಂಸಾರ 17
ದಿನವೂ ಬಿಡಲಾರದಿದ್ದವಳು ಇಂದು ಅವರನ್ನು ಅಗಲಿರಬೇಕಾಗಿ ಬಂದಿತು. ಆದರೆ
ಆ ನನ್ನ ದುಃಖವು ಬಹು ಕ್ಷಣಿಕವಾದುದಾಗಿದ್ದಿತು. ನಮ್ಮ ಯಜಮಾನರು ನನಗೆ
ಎಷ್ಟೋ ಸಮಾಧಾನಗಳನ್ನು ಹೇಳಿ ನನ್ನ ವ್ಯಸನವನ್ನು ಕಮ್ಮಿ ಮಾಡಿದರು. ನಾನು
ಕ್ರಮವಾಗಿ ಮನೆಗೆಲಸಗಳನ್ನು ಮಾಡುತ್ತಾ, ಮನೆಯವರೆಲ್ಲರಿಂದಲೂ ಒಳ್ಳೆಯವ
ಳೆಂದು ಹೇಳಿಸಿಕೊಳ್ಳುತ್ತಿದ್ದೆನು. ನನಗೆ ಪತಿಗೃಹದಲ್ಲಿ ವಾಸಮಾಡುವದೂ ಅಲ್ಲಿ
ಕಷ್ಟಪಟ್ಟು ಗೃಹಕಾರ್ಯಗಳನ್ನು ಚಟುವಟಿಕೆಯಿಂದ ಮಾಡುವುದೂ ಸ್ವರ್ಗಸುಖಕ್ಕೆ
ಸಮಾನವಾದ ಸುಖವೇ ಸರಿ. ನಮ್ಮ ಮನೆಯಲ್ಲಿ ಈಗ ನಮ್ಮ ಅಮ್ಮನವರೂ ನಮ್ಮ
ಭಾವನವರೂ (ಯಜಮಾನರ ಅಣ್ಣಂದಿರು) ನಮ್ಮ ಅಕ್ಕ (ಭಾವನವರ ಕುಟುಂಬ)
ಮತ್ತು ಅವರ ಮಕ್ಕಳು, ನಮ್ಮ ತಾತನವರು, (ಇನ್ನು ಮೇಲೆ ನಮ್ಮ ತಾತನವರೆಂದರೆ
ನೀಲಕಂಠಶಾಸ್ತ್ರಿಗಳು) ನಾವಿಬ್ಬರು, ಇಷ್ಟು ಮಂದಿ ಇದೇವೆ. ನಾನೇ ನಮ್ಮ ಅತ್ತೆಗೆ
ಕಿರೀಸೊಸೆಯಾದ್ದರಿಂದ ಕೆಲಸಗಳನ್ನು ಚೆನ್ನಾಗಿ ಮಾಡುತ್ತಿದ್ದುದರಿಂದಲೂ ನನ್ನನ್ನು
ಕಂಡರೆ ಅವರಿಗೆ ದಿನೇದಿನೆ: ಪ್ರೀತಿಯು ಹೆಚ್ಚುತ್ತಿತ್ತು. ಕಡಮೆಯವರೂ ನನ್ನ ವಿಷಯ
ದಲ್ಲಿ ಎಷ್ಟೋ ಪ್ರೀತಿಯನ್ನಿಟ್ಟು ಕೊಂಡಿದ್ದರು. ನಾನು ಪ್ರತಿದಿನವೂ ಬೆಳಗಿನ ಐದು
ಘಂಟೆಗೇ ಎದ್ದು ಕಸ, ಮುಸರೆ, ಉಪಕರಣಗಳ ಕೆಲಸಗಳನ್ನು ಏಳು ಘಂಟೆಯೊಳ
ಗಾಗಿ ಮಾಡಿಕೊಂಡು ಆ ಮೇಲೆ ಊಟದ ಎಲೆಯನ್ನು ಹಚ್ಚುತ್ತ ಕುಳಿತುಕೊಳ್ಳು
ವೆನು. ಮಧ್ಯಾಹ್ನ ಊಟವಾದ ನಂತರ ಎಲೆ ಎತ್ತಿ ಗೋಮಯವನ್ನು ಹಚ್ಚಿ ನಮ್ಮ
ಅತ್ತೆಯವರೊಡನೆ ಕೊಳಕ್ಕೆ ಹೋಗಿ ಸೀನೀರನ್ನು ತುಂಬಿಕೊಂಡು ಮನೆಗೆ ಬರುವೆನು.
ಬಳಿಕ ಒಂದೆರಡು ಘಳಿಗೆ ವಿಶ್ರಮಿಸಿಕೊಂಡ ಬಳಿಕ ನಮ್ಮ ಯಜಮಾನರು ನನಗೆ
ಯಾವುದಾದರೂ ಪುಸ್ತಕವನ್ನು ತಂದು ಕೊಟ್ಟು ಒಂದೆರಡು ಪಾತಗಳನ್ನು ಹೇಳಿ
ಕೊಡುವರು. ಸಾಯಂಕಾಲವಾದ ನಂತರ ದೇವರ ಮನೆಗೆ ದೀಪವನ್ನು ಹತ್ತಿಸಿ
ದೇವರ ಸ್ತೋತ್ರಗಳನ್ನು ಹೇಳುತ್ತಿದ್ದು ಮನೆಯವರಿಗೆಲ್ಲರಿಗೂ ಊಟವಾದ ನಂತರ
ನಾನೂ ಊಟಮಾಡಿ ರಾತ್ರಿ ಹತ್ತು ಘಂಟೆಯಾದ ಬಳಿಕ ಮಲಗುತ್ತಿದ್ದೆನು. ರಾತ್ರಿ
ಮಲಗುವುದಕ್ಕೆ ಮುಂಚೆ ನಮ್ಮ ಯಜಮಾನರು ಯಾವುದಾದರೂ ಅಪೂರ್ವವಾದ,
ಸತೀಧರ್ಮ ಬೋಧಕವಾದ ಉಪಾಖ್ಯಾನಗಳನ್ನು ಓದಿ ಹೇಳುತ್ತಿದ್ದರು. ನಾವು
ಬಳಿಕ ದೈವಭಕ್ತಿಯುತವಾದ ನಿರ್ಮಲ ಮನಸ್ಸಿನಿಂದ ನಿದ್ದೆ ಮಾಡುವೆವು.
ಈ ರೀತಿಯಾಗಿ ನಾವು ಸುಖದಿಂದ ಆರು ತಿಂಗಳುಕಾಲ ಅನ್ಯೋನ್ಯವಾಗಿ
ಸಂಸಾರವನ್ನು ನಡೆಸಿಕೊಂಡು ಹೋಗುತ್ತಿದ್ದೆವು. ಇಷ್ಟು ಹೊತ್ತಿಗೆ ನಾನು ಅಂತರ್ವತ್ನಿ
ಗರ್ಭಿಣಿಯಾಗಿರುವೆನೆಂಬ ವಿಷಯವು ನಮ್ಮ ತಾಯಿತಂದೆಗಳಿಗೆ ತಿಳಿದು ಅವರು ನನ್ನನ್ನು
-----------------------------------------------
18 ಕಾದಂಬರಿ: ಸಂಗ್ರಹ
ಕರೆವುದಕ್ಕೆ ಬಂದರು. ಲೋಕಾಚಾರಕ್ರಮವಾಗಿ ನಮ್ಮ ತಾತನವರೂ, ನನ್ನನ್ನು
ತೌರುಮನೆಗೆ ಪ್ರಯಾಣಮಾಡಿಸಿ ಕಳುಹಿಸಿಕೊಟ್ಟರು. ನನಗೇನೋ ತೌರುಮನೆಗೆ
ಹೋಗುವೆನೆಂಬ ಸಂತೋಷವು ಪೂರ್ಣವಾಗಿದ್ದಿತಾದರೂ ಸತಿದೇವನನ್ನು ಅಗಲಿ ಇರ
ಬೇಕಾಗುವುದಲ್ಲಾ, ಎಂಬ ಚಿಂತೆಯೊಂದು ನನ್ನ ಮನಸ್ಸಿನಲ್ಲಿ ಸ್ಥಾನಮಾಡಿಕೊಂಡಿ
ದ್ದಿತು. ಇದಕ್ಕಾಗಿ ನಾನು ನನ್ನ ಸ್ವಾಮಿಯನ್ನು ರಂಗಪುರಕ್ಕೆ ಬಂದಿರಬೇಕೆಂದು
ಪ್ರಾರ್ಥಿಸಿಕೊಂಡೆನು. ಅವರು ಅದಕ್ಕೆ ಒಪ್ಪಲಿಲ್ಲ. ಆಗಿಂದಾಗ್ಗೆ ರಂಗಪುರಕ್ಕೆ ಬರು
ತ್ತಿರುವೆನೆಂದು ಅವರು ಹೇಳಿದ ಮೇಲೆ ನನಗೆ ಮನಸ್ಸಮಾಧಾನವಾಯಿತು. ನಾನು
ಸಂತೋಷದಿಂದ ತೌರುಮನೆಗೆ ಪ್ರಯಾಣಮಾಡಿದೆನು. ಅಲ್ಲಿ ನನ್ನ ತಾಯಿತಂದೆಗಳು
ನನ್ನನ್ನು ಬಹು ಪ್ರೀತಿಯಿಂದ ಆದರಿಸುತ್ತಲೂ ನಾನು ಕೇಳಿದ್ದನ್ನು ತಂದುಕೊಡು
ತ್ತಲೂ ಇದ್ದರು. ಬಳೆ ತೊಡಿಸುವುದು, ಅಕ್ಷತೆ, ಸೀಮಂತ ಮುಂತಾದ ಕಲಾಸಗಳು
ವಿಹಿತವಾಗಿ ನೆರವೇರಿದುವು. ಎಂಟು ತಿಂಗಳು ತುಂಬುತ್ತಿದ್ದ ಹಾಗೆಯೇ ನನಗೆ ಸುಂದರ
ವಾದ ಒಂದು ಗಂಡು ಮಗುವು ಜನಿಸಿತು. ನಮ್ಮ ತಂದೆತಾಯಿಗಳ ಆನಂದಕ್ಕೆ
ಪಾರವೇ ಇಲ್ಲ. ನನಗೋಸ್ಕರ-ನನ್ನ ಸುಖಕ್ಕೋಸ್ಕರ-ನನ್ನ ಆರೋಗ್ಯಕ್ಕೋಸ್ಕರ
ನೂರಾರು ರೂಪಾಯಿಗಳನ್ನು ವೆಚ್ಚ ಮಾಡಿದರು. ಈ ಶಿಶುಜನನವಿಚಾರವನ್ನು ಹರ
ಪುರಕ್ಕೆ ತಿಳಿಸಿದಮೇಲೆ ಅಲ್ಲಿ ನಮ್ಮ ಮನೆಯವರು ತುಂಬಾ ಸಂತೋಷಪಟ್ಟು
ಕೊಂಡರು. ಮತ್ತು ಬಯ ದ್ರವ್ಯ ವ್ಯಯದಿಂದ, ಜಾತಕರ್ಮ ನಾಮಕರಣಾದಿಗಳು
ನೆರವೇರಿಸಲ್ಪಟ್ಟುವು. ಆದರೆ ಮಗುವ ಎರಡು ಮೂರು ದಿನ ಹಾಲನ್ನೇ ಕುಡಿಯಲಿಲ್ಲ.
ಮನೆಯವರು ಬಹು ಗಾಬರಿಪಟ್ಟು ಏನೇನೋ ಔಷಧಿಗಳನ್ನೂ, ಸುವಾಸಿನೀ ಪ್ರಾರ್ಥನೆ
ಯನ್ನೂ ಮಾಡಿದ ಮೇಲೆ ಮಗುವು ಸ್ವಚ್ಛವಾಗಿ ಆಡಿಕೊಂಡಿದ್ದಿತು.
ನಾನು ಬಾಣಂತಿಯಾಗಿದ್ದಾಗ ನನ್ನ ತೌರುಮನೆಯಲ್ಲಿ ಅನೇಕ ಅನರ್ಥಗಳು
ನಡೆದುಹೋದುವು. ಏನೆಂದರೆ ನಾನು ಎರಡು ತಿಂಗಳ ಬಾಣಂತಿಯಾಗಿದ್ದಾಗ ನನಗೆ
ಜ್ವರಛಳಿಗಳು ಬರುವುದಕ್ಕೆ ಆರಂಭವಾಗಿ ಅನ್ನವೇ ಸೇರದೆ ಸುಸ್ತಾಗಿ ಮಲಗಿಬಿಡು
ತ್ತಿದ್ದೆನು. ಮಗುವಿಗೂ ಆಗಿಂದಾಗ್ಗೆ ಆಲಸ್ಯವಾಗುತ್ತಲೇ ಇತ್ತು. ಮಗುವಿಗೆ ಆಲಸ್ಯ
ವಾದಾಗಲೆಲ್ಲಾ ನನ್ನ ತಾಯಿಯು ಚಿಟಿಕಿಯನ್ನು ಹಾಕುತ್ತಿದ್ದರು. ನನಗೆ ಬಾಣಂತಿ
ಯಲ್ಲಿ ಪ್ರಾಪ್ತವಾಗುತ್ತಿದ್ದ ಕಾಯಿಲೆಗಳನ್ನು ನೋಡಿ ಮೂಢರಾದ ನಮ್ಮ ತಂದೆ
ತಾಯಿಗಳು ಇದು ದೈವದ ಕಾಟವೆಂದೂ ಸವತಿಯರು ಈ ರೀತಿ ಕಾಡುತ್ತಿದಾರೆಂದೂ
ನಿರ್ಧರಿಸಿಬಿಟ್ಟರು. ಇವರ ಈ ಊಹೆಯು ನನಗೆ ಬಹು ಕಷ್ಟಕ್ಕೆ ಕಾರಣವಾಯಿತು.
ಬೆಳಗೆದ್ದರೆ, ಆ ಮಂತ್ರವಾದಿ, ಈ ಮಂತ್ರವಾದಿ, ಈ ಔಷದ ಆ ವೈದ್ಯ, ಈ ದೇವರ
-------------------------------------------
ನನ್ನ ಸಂಸಾರ 19
ಹರಿಕೆ, ಮುತ್ತೈದೆಯ ಪ್ರಾರ್ಥನೆ, ಇತ್ಯಾದಿ ಹಗರಣಗಳಿಂದ ನನಗೆ ದಿಕ್ಕೇ ತೋಚದೆ
ಹೋಯಿತು. ನನಗೆ ದಿನೇದಿನೇ ನಿಶ್ಯಕ್ತಿಯೇ ಹೆಚ್ಚುತ್ತ ಬಂತು, ಮಗುವಿನ ವಿಷಯ
ವಂತೂ ಹೇಳಲಶಕ್ಯ. ಈ ರೀತಿಯಾದ ಕಟಪಟೆಯಿಂದ ನನ್ನ ಬಾಣಂತನವು ಬೇಗ
ಮುಗಿಯಲೇ ಇಲ್ಲ. ಮೂರನೇ ತಿಂಗಳಲ್ಲಿ, ಐದನೇ ತಿಂಗಳಲ್ಲಿ, ಏಳನೇ ತಿಂಗಳಲ್ಲಿ,
ಕಳುಹಿಸಿಕೊಡಬೇಕೆಂದು ಹರಪುರದಿಂದ ಕಾಗದ ಬರುತ್ತಲೇ ಇತ್ತು. ಏಳು ತಿಂಗಳಾ
ಗುವವರೆಗೂ ನನ್ನ ಬಾಣಂತನವೂ ಮುಗಿಯಲಿಲ್ಲ. ಹರಪುರಕ್ಕೂ ಹೋಗಲಿಲ್ಲ.
ನನ್ನ ಔಷಧಪಥ್ಯಗಳಿಗಾಗಿ ನಮ್ಮ ತಂದೆಗೆ ಬಹಳ ದ್ರವ್ಯವು ವ್ಯಯವಾಯಿತು. ಸಾಲ
ದುದಕ್ಕೆ ಇದೇ ಸಮಯದಲ್ಲಿ ನಮ್ಮ ತಂದೆಯು ನೋಡುತ್ತಿದ್ದ ಕೆಲಸವೂ ತಪ್ಪಿ
ಹೋಯಿತು. ಈಗ ನಮ್ಮ ತಂದೆತಾಯಿಗಳಿಗೆ ಜೀವನಕ್ಕೆ ಬಹು ತೊಂದರೆಯೂ
ಪ್ರಾಪ್ತವಾಯಿತು. ಅವರ ಕಷ್ಟವನ್ನು ನೋಡಲಾರದೆ ನನ್ನ ವಶಕ್ಕೆ ನಮ್ಮ ಮನೆಯ
ವರು ಕೊಟ್ಟಿದ್ದ ಕೆಲವು ರೂಪಾಯಿಗಳನ್ನು ಕೊಟ್ಟು ಅವರ ತೊಂದರೆಯನ್ನು ತಪ್ಪಿಸ
ಬೇಕಾಯಿತು. ಅಲ್ಲದೆ ನಮ್ಮ ತಂದೆಗೆ ಆಗ ಅನುಕೂಲವಿರಲಿಲ್ಲವಾದ್ದರಿಂದ ಮಗು
ವಿಗೆ ನಾನೇ ಒಂದೆರಡು ಒಡವೆಗಳನ್ನು ನಮ್ಮ ಯಜಮಾನರ ಹಣದಿಂದಲೇ ಮಾಡಿಸಿ
ಇಟ್ಟೆನು. ಇಂತಹ ಕಷ್ಟಕಾಲವು ನಮ್ಮ ತಂದೆಗೆ ಸಂಭವಿಸಿದ್ದಾಗ್ಯೂ ನಮ್ಮ ತಾಯಿಯು
ಮಾತ್ರ ಕಷ್ಟದಲ್ಲಿ ಸಹಾಯವಾಗಲೆಂದು ಐವತ್ತೈದು ರೂಪಾಯಿಗಳನ್ನು ಯಾರಿಗೂ
ಕಾಣದಂತೆ ಇಟ್ಟುಕೊಂಡಿದ್ದರು. ನನ್ನನ್ನು ಒಂಭತ್ತನೇ ತಿಂಗಳಲ್ಲಿ ನಮ್ಮ ಯಜಮಾ
ನರೇ ಬಂದು ನಮ್ಮ ತಂದೆತಾಯಿಗಳನ್ನು ನನ್ನೊಡನೆ ಒಟ್ಟಿಗೆ ಹರಪುರಕ್ಕೆ ಕರೆದು
ಕೊಂಡುಹೋದರು. ಹರಪುರಕ್ಕೆ ಬಂದಮೇಲೆ ನಮ್ಮ ತಾಯಿಯು ತಮ್ಮ ವಶದಲ್ಲಿದ್ದ
ಐವತ್ತೈದು ರೂಪಾಯಿಗಳನ್ನು " ಯಾರಿಗೂ ತಿಳಿಯದಂತೆ ನಿನ್ನ ವಶದಲ್ಲಿಟ್ಟು
ಕೊಂಡಿರು" ಎಂದು ಹೇಳಿ ನನ್ನ ಕೈಗೆ ಕೊಟ್ಟರು. ನಾನೂ ಅದನ್ನು ಬಹು ಗೂಢವಾಗಿ
ನನ್ನ ಪೆಟ್ಟಿಗೆಯಲ್ಲಿಟ್ಟು ಕೊಂಡೆನು.
V
ಶ್ರೀನಗರವು ಸುಪ್ರಸಿದ್ದವಾದ ಪಟ್ಟಣ. ಈ ಪಟ್ಟಣದ ಸೌಂದರ್ಯವು ಪ್ರೇಕ್ಷ
ಕರ ಕಣ್ಮನಗಳನ್ನು ಮುಗ್ಧಮಾಡುತ್ತಿರುವುದು. ಈ ಊರಿನ ಸುತ್ತಳತೆಯು ಹತ್ತು
ಮೈಲಿಯಾಗುವುದು. ಊರಿನ ಮಧ್ಯದಲ್ಲಿ ವಿಸ್ತಾರವಾದ ಧೂಮಶಕಟಮಂದಿರ
(ರೈಲ್ವೆಸ್ಟರ್ಷ ) ವೊಂದುಂಟು. ಹರಪುರದಲ್ಲಿ ಬೆಳಗಿನ ಏಳು ಘಂಟೆಗೆ ಧೂಮಶಕಟವ
ನ್ನೇರಿದರೆ ಹತ್ತು ಘಂಟೆ ಹೊತ್ತಿಗೆ ಶ್ರೀನಗರಕ್ಕೆ ತಲಪಬಹುದು. ಶ್ರೀನಗರದಲ್ಲಿ ಇಳಿ
ಯದೆ ಮುಂದಕ್ಕೆ ಪ್ರಯಾಣಮಾಡಿದರೆ ಹನ್ನೆರಡು ಘಂಟೆಗೆ ರಂಗಪುರಿಗೆ ಹೋಗ
------------------------------------------
20 ಕಾದಂಬರಿ ಸಂಗ್ರಹ
ಬಹುದು. ಈ ವಿಧವಾದ ಪ್ರಯಾಣಸೌಕರ್ಯವನ್ನು ಕಲ್ಪಿಸಿರುವವರು ಚಿರಸ್ಮರಣೀ
ಯರೇ ಸರಿ. ಈ ಧೂಮಶಕಟವು ನಮ್ಮ ದೇಶಕ್ಕೆ ಬರುವುದಕ್ಕೆ ಮುನ್ನ ನಮ್ಮ
ದೇಶೀಯರ ಪ್ರಯಾಣಸ್ಥಿತಿಗಳು ಅತ್ಯಂತ ಕಷ್ಟಕರಗಳಾಗಿದ್ದುವು. ಒಂದೂರಿನಿಂದ
ಇನ್ನೊಂದೂರಿಗೆ ಹೋಗಬೇಕಾದರೆ ಮಾರ್ಗಗಳೇ ಸರಿಯಾಗಿರಲಿಲ್ಲ. ಒಂದೊಂದು
ಗಾಡಿಗೆ ಎಷ್ಟೋ ಬಾಡಿಗೆಯನ್ನು ಕೊಡಬೇಕಾಗುತ್ತಿದ್ದಿತು. ಇಷ್ಟು ಕಷ್ಟದಿಂದ
ಪ್ರಯಾಣಮಾಡಿಕೊಂಡು ಹೋಗುವಾಗ ಮಧ್ಯಮಾರ್ಗದಲ್ಲಿ ಕಳ್ಳಕಾಕರ ಭೀತಿ
ಬೇರೆ. ಮತ್ತು ವಿಶೇಷವಾದ ಪದಾರ್ಥಗಳನ್ನು ದೂರ ದೇಶಕ್ಕೆ ಸಾಗಿಸುವುದಕ್ಕೆ ಆಗು
ತ್ತಲೇ ಇರಲಿಲ್ಲ. ಈ ಕಾರಣದಿಂದ ಅಲ್ಲಲ್ಲಿ ಬೆಳೆದ ಧಾನ್ಯಾದಿಗಳು ಅಲ್ಲಲ್ಲಿಯೇ
ಉಳಿದುಕೊಳ್ಳುತ್ತಿದ್ದುವಲ್ಲದೆ ನಮಗೆ ಆವಶ್ಯಕವಾಗಿ ಬೇಕಾಗುವ, ದೂರದೇಶದಲ್ಲಿ
ದೊರೆವ ಪದಾರ್ಥಗಳು ನಮಗೆ ದೊರಿಯುವುದು ಕಷ್ಟವಾಗಿದ್ದಿತು. ಮತ್ತು ದೂರ
ದೇಶದೊಡನೆ ಆಗ ವ್ಯಾಪಾರವೆಂಬುದು ಶಶವಿಷಾಣ ಪ್ರಾಯವಾಗಿದ್ದಿತು. ಕ್ಷಾಮಡಾ
ವುರಾದಿಗಳು ದೇಶದಲ್ಲಿ ಪ್ರಾಪ್ತವಾದಾಗ ಆಗಣಕಾಲದ ಕಷ್ಟವನ್ನು ವರ್ಣಿಸತೀರದು.
ಜನರಿಗೆ ಯಾವ ವಿಧದಲ್ಲಿಯೂ ಸರಿಯಾದ ಅನುಕೂಲ್ಯಗಳಿರಲಿಲ್ಲ. ಅಂಚೆಮನೆ
ಬಂದಮೇಲೂ ಗಾಡಿಯ ರಸ್ತೆ ಬಂದಮೇಲೆಯೂ ಮೇಲೆ ವಿವರಿಸಿದ ಕಷ್ಟಗಳು ಸ್ವಲ್ಪ
ಮಟ್ಟಿಗೆ ಕಮ್ಮಿಯಾದುವು. ಸರ್ವತ್ರವಿಸ್ತೃತಗತಿಯುಳ್ಳ ಈ ಧೂಮಶಕಟವು ಬಂದ
ಮೇಲಂತೂ ದೇಶಕ್ಕೆ ಎಷ್ಟೋ ಸುಖವುಂಟಾಯಿತು. ದೇಶದ ಮೇಲೆ ವ್ಯಾಪಾರಾದಿ
ಗಳು ವಿಶೇಷವಾಗಿ ಅಭಿವೃದ್ಧಿಯಾದುವು. ವಾಚಕರೆ ! ಪ್ರಪಂಚದ ಎಲ್ಲಾ ಕಡೆ
ಯಲ್ಲೂ ದೊರೆಯಬಹುದಾದ ಸಮಸ್ತ ವಿಧವಾದ ಪದಾರ್ಥಗಳೂ ಒಂದೇ ಊರಿನಲ್ಲಿ
ಯಾವಕಾಲದಲ್ಲಿಯೂ ಸಿಕ್ಕ ಬಹುದಾದ ಚಮತ್ಕಾರವು ಧೂಮಶಕಟದ ಮಹಿಮೆ
ಯಲ್ಲವೆ ! ಆಸೇತ ಹಿಮಾಚಲಪರ್ಯಂತವಾಗಿ ಪ್ರಸರಿಸಿರತಕ್ಕ ಹಳ್ಳಿ-ನಗರಗಳಲ್ಲೆಲ್ಲೆ
ಲ್ಲಿಯೂ ಒಂದೇ ವಿಧವಾಗಿ ಪದಾರ್ಥಗಳ ಧಾರಣೆಯು ಮಾರ್ಪಟ್ಟಿರುವುದು ಹೊಗೇ
ಗಾಡಿಯ ಪ್ರಚಾರದಿಂದಲೇ ಅಲ್ಲವೆ ? ಮೈಲಿಯೊಂದಕ್ಕೆ ಎರಡೇ ಕಾಸಿನಂತೆ ದೇಶದ
ಯಾವ ಕಡೆಯಲ್ಲಿ ಸುತ್ತುವುದಕ್ಕೂ ಅನುಕೂಲವನ್ನುಂಟುಮಾಡಿರುವುದು ರೈಲೇ
ಅಲ್ಲವೆ ? ಯಾವನಾದರೂ ಪೂರ್ವಕಾಲದಲ್ಲಿ ಕಾಶೀ ಯಾತ್ರೆ ಮಾಡುವುದೆಂದರೆ ಅವನು
ಪರಲೋಕಕ್ಕೆ ಹೋದಂತೆಯೇ ಸರಿ. ಏಕೆಂದರೆ ಯಾತ್ರಿಕರು ಕಾಲುನಡಗೆಯಲ್ಲಿ
ವರ್ಷಾಂತರಕಾಲ ಕಷ್ಟ ಪಟ್ಟು ಕಾಶಿಗೆ ಸೇರಬೇಕಾಗಿದ್ದಿತು. ಮಾರ್ಗಮಧ್ಯದಲ್ಲಿ
ಎಷ್ಟೋ ಭಯಂಕರವಾದ ದುಃಖಗಳಿದ್ದುವು. ಇಂತಹ ದುರ್ಗಮವಾದ ಕ್ಷೇತ್ರ
ಪ್ರಯಾಣದಿಂದ ಹಿಂತಿರುಗುವುದು ಎಷ್ಟು ಹಿಂಸೆಯ ವಿಚಾರವಿರಬಹುದು. ಇಂಥಾ
----------------------------------------------
ನನ್ನ ಸಂಸಾರ 21
ಅವರ್ಣನೀಯ ವ್ಯಥೆಗಳನ್ನು ತಪ್ಪಿಸಿ ಸ್ವಲ್ಪವೇ ವೆಚ್ಚದಿಂದ ಒಂದೇ ಒಂದು ತಿಂಗಳೊ
ಳಗಾಗಿ ಮಹಾಯಾತ್ರೆಗಳನ್ನು ಮಾಡಿಸಿ ಜನರನ್ನು ಪ್ರತಿಕ್ಷಣವೂ ಮುಕ್ಕ್ಯಂಗನಾ
ಲಿಂಗನ ಸುಖಕ್ಕೆ ಭಾಗಿಗಳನ್ನಾಗಿ ಮಾಡುತ್ತಿರುವುದಾವುದು? ರೈಲುಗಾಡಿಯಲ್ಲವೋ ?
ಇಂತಹ ರೈಲುಗಾಡಿಯನ್ನು ಕಂಡುಹಿಡಿದು ಲೋಕೋಪಕಾರಮಾಡಿದಂತಹ ಮಹಾ
ತ್ಮನ ಬುದ್ಧಿಶಕ್ತಿಯು ಎಷ್ಟಿರಬಹುದು ? ಅರ್ಥಸಾಧನೆಗೆ ಮೂಲ ಮಂತ್ರದಂತಿರುವ
ಧೂಮಶಕಟನಿರ್ಮಾಣ ಕ್ರಮವನ್ನು ಕುರಿತು ನಮ್ಮ ಸೋದರರು ವಿಮರ್ಶೆ ಮಾಡಲಿ !
ಇದರಂತೆಯೇ ಜಲಪಾತಗಳ ಮೂಲಕ ವಿದ್ಯುಚ್ಛಕ್ತಿಯನ್ನಾಕರ್ಷಿಸಿ ಹೊಗೆ ಹೊರಡ
ದಿರುವ, ಎಣ್ಣೆಯನ್ನು ತುಂಬುವ ಮತ್ತು ಬತ್ತಿಯನ್ನಿಡುವ ಶ್ರಮವನ್ನು ಹೊಂದದೆ,
ಒಬ್ಬರು ಹತ್ತಿಸಬೇಕೆಂಬ ತೊಂದರೆಯನ್ನುಂಟುಮಾಡದಿರುವ ದೀಪಗಳನ್ನು ನೋಡಿದರೆ
ಬುದ್ದಿಗೆ ಎಂತಹ ಶಕ್ತಿ ಇದೆಯೆಂಬುದು ಎಲ್ಲರಿಗೂ ಗೊತ್ತಾಗುವುದಲ್ಲವೆ ? ಇಂತಹ
ಸರ್ವೋತ್ತಮವಾಗ ಬುದ್ದಿಯನ್ನು ಪರಮಾತ್ಮನು ಸಮಸ್ತ ಮನುಷ್ಯರಿಗೂ ದಯಪಾಲಿ
ಸಿರುವಾಗ ಅಂತಹ ಬುದ್ದಿಯಿಂದ ಎಷ್ಟು ಲೋಕೋಪಕಾರಮಾಡಬಹುದೆಂಬುದು
ಸರ್ವರ ಗಮನಕ್ಕೂ ಬರಲಿ. ಅಸಂಖ್ಯ ಜನಸಂಖ್ಯೆಯುಳ್ಳ ಈ ಭೂಲೋಕದಲ್ಲಿ
ಕೋಟಿಗೊಬ್ಬ ಮನುಷ್ಯನ ಬುದ್ದಿಯಾದರೂ, ರೈಲ್ವೆ, ವಿದ್ಯುಚ್ಛಕ್ತಿ ಮುಂತಾದ
ನಿರ್ಮಾಣಕ್ರಮವನ್ನು ಹೊಸಹೊಸ ರೀತಿಯಿಂದ ವಿಧವಿಧ ವಸ್ತು ಜಾತದಿಂದ ಕಂಡು
ಹಿಡಿವ ಶಕ್ತಿಯನ್ನು ಹೊಂದಿದುದಾದರೆ ಲೋಕದ ಪುಣ್ಯಕ್ಕೆ ಎಣೆಯೇ ಇಲ್ಲ.
ಇಂತಹ ಸಮಸ್ತ ಕಲಾ ಕೌಶಲ್ಯದಿಂದ ಶ್ರೀನಗರವು ತುಂಬಲ್ಪಟ್ಟಿತು.
ಅಲ್ಲದೆ ಇದು ರಾಜಧಾನಿ. ಮನೋಹರವಾದೀ ಪಟ್ಟಣದ ಮಧ್ಯಭಾಗದಲ್ಲಿ ಇಂದ್ರನ
ಅರಮನೆಯನ್ನು ಮೀರಿಸುವ ಅರಮನೆಯೊಂದಿರುವುದು. ಚಂದ್ರಕಾಂತ ಶಿಲಾನಿರ್ಮಿತ
ವಾದೀ ಅರಮನೆಯ ಮಹಾದ್ವಾರದ ಮುಂದುಗಡೆ ಒಂದು ಕ್ಷಣ ಯಾವನಾದರೂ
ನಿಂತು ನೋಡಿದರೆ ಆ ಮನುಷ್ಯನ ಮನಸ್ಸಿನಲ್ಲಿ ಎಷ್ಟು ಯೋಚನೆಗಳಿದ್ದರೂ ಅವೆಲ್ಲವೂ
ಮಲಿನವಾಗಿ ಅರಮನೆಯ ಸೌಂದರ್ಯವನ್ನು ಕುರಿತು ಯೋಚಿಸಲಾರಂಭವಾಗುವುದು.
ಚಂದ್ರಕಾಂತ ಶಿಲೆಯಲ್ಲಿ ಕೆತ್ತಲ್ಪಟ್ಟು ಸುಂದರವಾಗಿ ಬಿಡಿಸಿ ನಿರ್ಮಿಸಿರುವ ವಿಧ ವಿಧ
ದೇವ ಮೂರ್ತಿಗಳು ಮನಸ್ಸನ್ನು ಅಪಹಾರ ಮಾಡುವುವು. ಅರಮನೆಯ ಹೊರ ಸೊಬಗೇ
ಇಂತಿರುವಲ್ಲಿ ಒಳಗಣ ವೈಭವವನ್ನು ಏನು ಹೇಳೊಣ, ಸುವರ್ಣ ಮಯಸ್ತಂಭಗ
ಳಿಂದಲೂ ರತ್ನಮಯಕುಟ್ಟಮಗಳಿಂದಲೂ ವಿವಿಧ ಚಿತ್ರಗಳನ್ನೊಳಗೊಂಡಿರುವ ಮಹಾ
ರಜತಮಯ ಭಿತ್ತಿಗಳಿಂದಲೂ, ಎಲ್ಲೆಲ್ಲಿ ನೋಡಿದರೂ ರತ್ನ ವೈಡೂರ್ಯ ಮರಕತ ವಿಕಾ
ರಗಳಾದ ಪ್ರಾಂತಗಳೇ ಕಂಗೊಳಿಸುವ ಆಸ್ಥಾನವೂ, ಇದಕ್ಕಿಂತ ಶತಾಧಿಕ ಪ್ರಕಾಶಗ
-----------------------------------------------
೨೨ ಕಾದಂಬರಿ ಸಂಗ್ರಹ
ಳುಳ್ಳ ಅಂತಃಪುರಗಳಿಂದಲೂ, ಕಿರುಮನೆಗಳಿಂದಲೂ ಕೂಡಿದ ವಿಲಾಸ ಭವನಗಳೂ,
ಶಿಲ್ಪಿಯ ಕಲಾನೈಪುಣ್ಯವನ್ನು ಚೆನ್ನಾಗಿ ವ್ಯಕ್ತಪಡಿಸುತ್ತಿದ್ದುವು. ಅರಮನೆಯ ಮುಂಗಡೆ
ವಿವಿಧ ಫಲ ಪೂಷ್ಪದ್ರುಮಗಳಿಂ ಕಂಗೊಳಿಸುವ ಉದ್ಯಾನವನವೊಂದುಂಟು. ಇಂತಹ
ಅರಮನೆಯ ಸುತ್ತಲೂ ದುರ್ಭೇದ್ಯವಾದ ಕೋಟೆಯಿರುವುದು. ಕೋಟೆಯ ಸುತ್ತಲೂ
ಇರುವ ಪ್ರಾಂತಗಳಲ್ಲೆಲ್ಲಾ ಅಂಗಡಿಬೀದಿಗಳು, ಬ್ರಾಹ್ಮಣರ ಅಗ್ರಹಾರಗಳೂ, ಅಗ್ರಹಾ
ರಗಳಿಗೆ ದೂರವಾಗಿ ಇತರ ಜಾತಿಯವರ ಬೀದಿಗಳೂ ಇರುವುವು. ಅಲ್ಲದೆ ಧನಿಕರನೇಕರ
ವಿಲಾಸ ಭವನಗಳೂ ಮಹೋನ್ನತ ಹರ್ಮ್ಯಗಳಿ೦ ವಿರಾಜಿತವಾದ ಮಂದಿರಗಳೂ ಈ
ಪಟ್ಟಣದಲ್ಲಿ ಅಸಂಖ್ಯಾಕವಾಗಿ ರಾರಾಜಿಸುತ್ತಿರುವುವು.
ಇಂತಹ ನಗರದಲ್ಲಿ ವಾಸಮಾಡಲು ಆರಿಗೆ ತಾನೆ ಇಷ್ಟವಿರದು? ಯಾರು
ತಾನೇ ಈ ನಗರದ ಸೌಂದರ್ಯಕ್ಕೆ ಬೆರಗಾಗದಿದ್ದಾರು? ಯಾರಿಗೆತಾನೇ ವಿಲಾಸಗಳಲ್ಲಿ
ಅಭಿಲಾಷೆಯಿಲ್ಲ? ಸರ್ವಸಂಗಪರಿತ್ಯಾಗ ಮಾಡಿದ ವಿರಾಗಿಯೇ ಈ ವಿಧವಾದ ವಿಲಾಸಗ
ಳಿಗೆ ಸೋತುಬಿಡುವನೆಂದ ಮೇಲೆ ಅಜಿತೇಂದ್ರಿಯರಾದವರ ಪಾಡು ಹೇಗಿರಬಹುದು?
"ಏಕೋವಾಸಃ ಸತ್ಯನೇವಾ ವನೇವಾ. ''
ನಮ್ಮ ತಂದೆ ತಾಯಿಗಳು ನಮರಿನಲ್ಲಿ (ಹರಪುರದಲ್ಲಿ) ಒಂದೆರಡು ತಿಂಗ
ಳಿದ್ದು ರಂಗಪುರಕ್ಕೆ ಪ್ರಯಾಣ ಮಾಡಿದರು. ಅವರು ಹರಪುರದಲ್ಲಿದ್ದಾಗಲೇ ನಮ್ಮ
ಮನೆಯಲ್ಲಿ ಕೊಂಚ ಕೊಂಚ ಗೃಹ ಕಲಹಗಳಿಗೆ ಅಂಕುರವಾಗಿದ್ದಿತು. ನನ್ನ ತಂದೆ
ತಾಯಿಗಳು ಪ್ರಯಾಣ ಮಾಡಿದಮೇಲೆ ಆ ಅಂಕುರವು ಸಣ್ಣ ಸಸಿಯಾಗಿ ಪರಿಣಮಿಸಿತು.
(ನನ್ನ ಓರಗಿತ್ತಿಯನ್ನು ಇನ್ನು ಮೇಲೆ ಅಕ್ಕನೆಂದು ಸಂಬೋಧಿಸುತ್ತಾ ಬರುವೆನು.) ನನ್ನ
ಅಕ್ಕನಿಗೆ ಎರಡು ಗಂಡುಮಕ್ಕಳುಗಳಿವೆ. ನನ್ನ ಮಗುವಿಗೂ ಈಗ ಹತ್ತು ತಿಂಗಳಾಗಿದೆ
ಯೆಂಬುದು ನಮ್ಮ ಸೋದರಿಯರಿಗೆ ತಿಳಿದೇ ಇದೆ. ನಮ್ಮ ಅಮ್ಮನವರು ನಮ್ಮ ತಾತನ
ವರ ಸಹಾಯಕ್ಕಾಗಿ ಅವರ ಜತೆಯಲ್ಲೇ ಯಾವಾಗಲೂ ಇರಬೇಕಾಗಿದ್ದುದರಿಂದಲೂ,
ತಾತನವರು ನಿಯತವಾಗಿ ಶ್ರೀ ನಗರದಲ್ಲಿ ವಾಸಮಾಡಬೇಕಾಗಿದ್ದುದರಿಂದಲೂ,
ಇದುವರಿಗೆ ನಮ್ಮ ಅಕ್ಕನು ಒಬ್ಬಂಟಿಗರಾಗಿದ್ದುದರಿಂದಲೂ, ನಮ್ಮ ಅತ್ತಮ್ಮನವರು
ಶ್ರೀ ನಗರದಲ್ಲೂ ನಮ್ಮ ಅಕ್ಕನು ಹರಪುರದಲ್ಲೂ, ವಸಿಸುತ್ತಾ ಆಗಿಂದಾಗ್ಗೆ ಇಬ್ಬರೂ
ಒಂದೊಂದು ಕಾಲದಲ್ಲಿ ಒಂದೇ ಕಡೆಯಲ್ಲೇ ಇರುತ್ತಲೂ ಇದ್ದರು. ನಮ್ಮ ತಾತನವರು
ಆಗಿಂದಾಗ್ಗೆ ಶ್ರೀ ನಗರದಿಂದ ಹರಪುರಕ್ಕೆ ಬರಬೇಕಾಗುತ್ತಿದ್ದುದರಿಂದ ಸಂಸಾರ
ಸ್ಥಿತಿಯು ಹೀಗೆಯೇ ಇತ್ತು.
----------------------------------------------
ನನ್ನ ಸಂಸಾರ ೨೩
ನಮ್ಮ ತಾತನವರಿಗೆ ಶ್ರೀ ನಗರದಲ್ಲಿ ಈಗ ಐವತ್ತು ರೂಪಾಯಿ ತಲಬು ಬರು
ತಿತ್ತು. ನಮ್ಮ ಭಾವನವರಿಗೆ ಹರಪುರದಲ್ಲಿ ಮೂವತ್ತು ರೂಪಾಯಿಗಳು ತಲಬುಳ್ಳ
ಪ್ರಧಾನೋಪಾಧ್ಯಾಯರ ಕೆಲಸವಿದ್ದಿತು. ನಮ್ಮ ಯಜಮಾನರಿಗೆ ಹತ್ತು ರೂಪಾಯಿ
ಗಳುಳ್ಳ ಸಣ್ಣ ನೌಕರಿಯೊಂದಿದ್ದಿತು. ನಾನೂ ನನ್ನ ಅಕ್ಕನೂ ಹರಪುರದಲ್ಲಿ ಸಂಸಾರ
ಮಾಡುತ್ತಿದ್ದಾಗ ಒಬ್ಬರಮರ್ಜಿ ಇನ್ನೊಬ್ಬಳಿಗೆ ಸರಿಬೀಳುತ್ತಿರಲಿಲ್ಲ. ಆಹಾರ ವ್ಯವ
ಹಾರಗಳಲ್ಲೂ ಶಿಶು ಪೋಷಣಾದಿ ಕಾರ್ಯಗಳಲ್ಲೂ ನಮ್ಮ ಅಕ್ಕನು ವಿಶೇಷ ಪಕ್ಷ
ಪಾತ ಮಾಡುತಿದ್ದರು. ನಾನು ಕಿರೀ ಸೊಸೆಯಾದ್ದರಿಂದ ಅಷ್ಟು ಸ್ವಾತಂತ್ರವಿ
ಲ್ಲದ್ದರಿಂದಲೂ ನನ್ನ ಅಕ್ಕನು ಹೇಳಿದಂತೆ ಕೇಳುತಿದ್ದೆನು. ಆದರೆ ಒಂದೆರಡು ವಿಚಾರ
ಗಳು ತಿಳಿದಮೇಲೆ ನನಗೆ ನನ್ನ ಅಕ್ಕನಮೇಲೆ ವಿಶೇಷ ಸ್ಪರ್ಧೆಯುಂಟಾಯಿತು. ಕೆಲಸ
ಬೊಗಸೆಗಳನ್ನು ನಾನೇ ಮಾಡಲೆಂಬ ಅಭಿಪ್ರಾಯದಿಂದ ನನ್ನ ಅಕ್ಕನು ಕೆಲವುದಿನ ಕೆಲ
ಸಗಳನ್ನು ನನ್ನ ಪಾಲಿಗೆ ಬಿಟ್ಟು ತಾವು ಅಡಿಗೆ ಕೆಲಸವನ್ನು ಇಟ್ಟು ಕೊಂಡರು. ಅದರಂತೆ
ನಾನೂ ನಡೆಯುತ್ತಿದ್ದನು. ಆದರೊಂದು ದಿನ ನಾನು ಉಪಕರಣವನ್ನು ತೊಳೆದು ಒಳ
ಗಿಡುವುದಕ್ಕೆಂದು ಬಂದೆನು. ಆಗ ಅಕ್ಕನವರು ಮಕ್ಕಳಿಗೆ ಹಾಲು ಕಾಸಿ ಕೆಳಗಿಳಿಸುತ್ತಿ
ದ್ದರು. ನಾನು ನನ್ನ ಮಗುವಿಗೆ ಹಾಲು ಹಾಕಬೇಕೆಂದು ಆಗಲೇ ಹಾಲನ್ನು ಕೇಳಿದೆನು.
ಒಂದು ಪಂಚಪಾತ್ರೆಯಲ್ಲಿದ್ದ ಹಾಲನ್ನು ಅಕ್ಕನು ನನ್ನ ವಶಕ್ಕೆ ಕೊಟ್ಟರು. ಅದನ್ನು
ತೆಗೆದು ಕೊಂಡು ನೋಡಲು ತುಂಬಾ ನೀರು ಬೆರಸಿದ್ದಂತೆ ತೋರಿತು. ಬಳಿಕ ನಾನು
ಅದನ್ನು ಅವರಿಗೇ ಕೊಟ್ಟು ಬೇರೆ ಪಾತ್ರೆಯಲ್ಲಿದ್ದ ಹಾಲನ್ನು ಕೊಡಬೇಕೆಂದು ಕೇಳಿ
ದೆನು, ಅವರಿಗೆ ಅಷ್ಟಕ್ಕೇ ಕೋಪ ಬಂದು ಹಾಲಿನ ಪಾತ್ರೆಯನ್ನು ಎಸೆದು ಬಿಟ್ಟರು.
ಅದನ್ನು ನೋಡಿ ನನಗೆ ಬಹು ದುಃಖವಾಯಿತು. ಅಂದಿನಿಂದ ಅವರು ನಾನು ಮಾಡತಕ್ಕ
ಕೆಲಸಗಳಲ್ಲಿ ಏನಾದರೊಂದು ತಪ್ಪನ್ನು ಕಂಡು ಹಿಡಿಯುತ್ತಲೇ ಬಂದರು. ನಾನು ಸಹಿ
ಸುವ ವರೆಗೂ ಸಹಿಸುತ್ತಿದ್ದೆನು. ಕ್ರಮೇಣ ನನಗೆ ಸಹನೆಯು ಕಮ್ಮಿಯಾಗುತ್ತ
ಬಂದಿತು. ನಮ್ಮ ಅಕ್ಕನವರ ಈ ವರ್ತನಗಳನ್ನು ನಾನು ನಮ್ಮ ಯಜಮಾನರೊ
ಡನೆ ಏಕಾಂತದಲ್ಲೊಂದು ದಿನ ಹೇಳಿದೆನು. ಅವರು ಅದನ್ನು ಗಮನಿಸದೆ ನನ್ನನ್ನೇ ಬೈದು
ಹಿರಿಯರು ಹೇಳಿದಂತೆ ಕೇಳಿಕೊಂಡು ಬಿದ್ದಿರಬೇಕೆಂದು ಅಂದುಬಿಟ್ಟರು. ನನಗೆ ಅದನ್ನು
ಕೇಳಿ ಆಕಾಶವೇ ಬಿದ್ದು ಹೋದಂತಾಯಿತು. ಇದೇರೀತಿ ಇನ್ನು ಮುಂದೆ ಪಕ್ಷಪಾತ
ಗಳೂ ಅಂತಃ ಕಲಹಗಳೂ ಹೆಚ್ಚುತ್ತ ಹೋದುವು. ಇದು ನಮ್ಮ ಯಜಮಾನರಿಗೆ ತಿಳಿದು
ಕೆಲವು ತಿಂಗಳು ರಜವನ್ನು ಪಡೆದು ಶ್ರೀ ನಗರಕ್ಕೆ ಹೊರಟು ಹೋದರು. ಅವರ
ಮನಸ್ಸಿನಲ್ಲಿ ಹರಪುರವನ್ನು ಬಿಟ್ಟು ಶ್ರೀ ನಗರದಲ್ಲೇ ಇದ್ದರೆ ಸಂಸಾರದಲ್ಲಿ
----------------------------------------------
24 ಕಾದಂಬರೀ ಸಂಗ್ರಹ
ಕಲಹಗಳು ಹುಟ್ಟಲಾರದೆಂದು ಅಭಿಪ್ರಾಯವಿದ್ದುದರಿಂದ ಅದಕ್ಕಾಗಿಯೇ
ಶ್ರೀನಗರಕ್ಕೆ ಹೊರಟು ಹೋದರು.
ಈಗ ಹರಪುರದಲ್ಲಿ ನಾನು ನನ್ನ ಅಕ್ಕ ಅವರ ಸಂಸಾರ, ನಮ್ಮ ಭಾವನವರು
ಇಷ್ಟು ಮಂದಿ ಉಳಿದುಕೊಂಡೆವು. ನಮ್ಮ ಭಾವನವರು ಒಳ್ಳೆ ಸರಳ ಹೃದಯರು.
ಅಲ್ಲದೆ ತುಂಬಾ ಸಾಧುಗಳು. ಒಬ್ಬರನ್ನು ಒಂದು ದಿನ ಗದರಿಸಿ ಕೊಳ್ಳುವವ
ರಲ್ಲ. ಇಂತಹ ಸುಗುಣಿಗಳಾದ ಭಾವನವರಿಗೆ ನನ್ನ ಮತ್ತು ಅಕ್ಕನ ಅಂತಃಕಲಹಗಳು
ತಿಳಿಯದೆ ಹೋಗಲಿಲ್ಲ. ಚಾಡಿಕೋರರು ಹೇಳಿದ ಮಾತನ್ನು ಕೇಳಿ ಅದರಂತೆ ನಡೆಯುವ
ಹುಚ್ಚು ನಮ್ಮ ಭಾವನವರಲ್ಲಿ ಇಲ್ಲದ್ದರಿಂದಲೇ ನನ್ನ ಮೇಲೆ ನನ್ನ ಅಕ್ಕನು ವಿಧ ವಿಧ
ವಾಗಿ ಹೇಳಿದ ದೂರುಗಳನ್ನು ಅವರು ಮನಸ್ಸಿಗೆ ನಿಜವೆಂದು ತಿಳಿದುಕೊಳ್ಳಲಿಲ್ಲ. ನಮ್ಮ
ಭಾವನವರಿಗೆ ನಮ್ಮ ಯಜಮಾನರನ್ನು ಕಂಡರೆ ತುಂಬಾ ಪ್ರೀತಿ ಇದ್ದಿತು. ಅಲ್ಲದೆ
ಅವರಿಗೆ ಚಿಕ್ಕಂದಿನಲ್ಲೇ ಎರಡು ವಿವಾಹವಾಗಿ ಅದು ಕೈ ಸೇರದೆ ಹೋಗಿ ಇಂತಹ ಕಷ್ಟ
ವುಂಟಾಯಿತಲ್ಲಾ ಎಂಬ ಯೋಚನೆಯು ನಮ್ಮ ಭಾವನವರ ಮನಸ್ಸಿಗೆ ಹೊಳೆದಾಗ
ಎಷ್ಟೋ ಕನಿಕರವುಂಟಾಗುತ್ತಿತ್ತು. ಅದೇ ಕನಿಕರವೇ ನಾದಿನಿಯಾದ ನನ್ನ ಮೇಲೂ ಇದ್ದಿ
ತೆಂದುಹೇಳಿದರೆ ಅತಿಶಯೋಕ್ತಿಯಾಗಲಾರದು. ನನ್ನ ಅಕ್ಕನು ಗೃಹಕೃತ್ಯದಲ್ಲಿ ತುಂಬಾ
ಪಳಗಿದವರು. ಪತಿಸೇವೆಯಲ್ಲಿ ಬಾದ್ಧಾದರರು. ಒಂದು ದಿನವೂ ಭಾವನವರ ಮನಸ್ಸಿಗೆ
ಆಯಾಸವಾಗದಂತೆ ನಡೆದು ಕೊಳ್ಳುತ್ತಿದ್ದರು. ಶಿಶುವೊಷಣೆಯಲ್ಲಿ ಅಕ್ಕನವರಿಗಿರುವ
ಷ್ಟು ಅನುಭವವು ನನಗೆ ಇರಲಿಲ್ಲ. ಅಲ್ಲದೆ ಅಕ್ಕನು ಒಳ್ಳೆಯ ನೀತಿಪರರಾಗಿದ್ದರು.
ಇಂತಹ ಸುಗುಣಿಗಳಾದ ಅಕ್ಕನವರು ನನ್ನ ಮೇಲೆ ಅವಿಶ್ವಾಸಿಗಳಾದುದು ನನ್ನ ದುರ್ದೈ
ವವೋ ಅಥವಾ ನಾನು ಈ ಮನೆಗೆ ಪ್ರವೇಶ ಮಾಡಿದ ವೇಳೆಯ ಫಲವೋ ಹೇಳುವುದ
ಕ್ಕಾಗುವುದಿಲ್ಲ.
VI
ನಮ್ಮ ಯಜಮಾನರು ಶ್ರೀನಗರಕ್ಕೆ ಹೊರಟುಹೋಗಿ ಎರಡು ತಿಂಗಳಾದರೂ
ಅವರಯೋಗಕ್ಷೇಮವೇ ತಿಳಿಯಲಿಲ್ಲ. ಎರಡು ತಿಂಗಳು ಕಳೆದ ಮೇಲೆ ಅವರೊಂದು
ಕಾಗದವನ್ನು ಬರೆದರು. ಆ ಕಾಗದದಿಂದ ನಮ್ಮ ಯಜಮಾನರಿಗೆ ಶ್ರೀನಗರದಲ್ಲೇ
25 ರೂಪಾಯಿ ತಲಬುಳ್ಳ ಒಂದು ಶಾಲೋಪಾಧ್ಯಾಯರ ಕೆಲಸವಾಗಿದೆಯೆಂದು ತಿಳಿದು
ಬಂದಿತು. ನಮ್ಮ ಯಜಮಾನರು ಶ್ರೀನಗರಕ್ಕೆ ಪ್ರಯಾಣ ಮಾಡಿದ ಮೇಲೆ ನಾನೂ
ಅಕ್ಕನೂ ಸರಿ ಹೋಗಿಸಿಕೊಂಡು ಅನ್ನೋನ್ಯವಾಗಿ ಗೃಹಕಾರ್ಯಗಳನ್ನು ನಡೆಸಿ
ಕೊಂಡು ಹೋಗುತ್ತಿದ್ದವು. ನಮ್ಮ ಮನೆಗೆ ಕಾಗದಬಂದ ೪ ದಿನದೊಳಗಾಗಿ ನಮ್ಮ
----------------------------------------------
ನನ್ನ ಸಂಸಾರ 25
ಯಜಮಾನರು ಹರಪುರಕ್ಕೆ ಬಂದು ನನ್ನನ್ನೂ ಜತೆಯಲ್ಲಿ ಕರೆದುಕೊಂಡು ಶ್ರೀನಗರಕ್ಕೆ
ಪ್ರಯಾಣ ಮಾಡಿದರು.
ಶ್ರೀನಗರದಲ್ಲಿ ನಮಗೆ ಸ್ವಂತಮನೆಯಿರುವ ವಿಷಯವು ಪಾಠಕಿಯರಿಗೆ ತಿಳಿದೇ
ಇದೆ. ನಾವು ನಮ್ಮ ಮನೆಯಲ್ಲೇ ಇದ್ದುಕೊಂಡಿದ್ದೆವು. ನಮ್ಮ ಯಜಮಾನರು
ಶ್ರೀನಗರದಲ್ಲಿರುವ ವಿಷಯದಲ್ಲಿ 'ನಮ್ಮ ತಾತನವರಿಗೆ ಅಭಿಪ್ರಾಯವಿರಲಿಲ್ಲ. ಆದರೂ
ಹಠವಾದಿಗಳಾದ ನಮ್ಮ ಯಜಮಾನರು ತಾತನವರ ಮಾತನ್ನು ಅನಾದರಿಸಿ ಶ್ರೀನಗ
ರದಲ್ಲೇ ಇದ್ದು ಬಿಟ್ಟರು. ನಮ್ಮ ಮನೆಯವರು ಈರೀತಿಮಾಡಿದುದು ಮುಂದೆ ಬಹು
ಅನರ್ಥಕ್ಕೆ ಮೂಲವಾಯಿತು.
ನಾವು ಶ್ರೀನಗರದಲ್ಲಿ ಒಂದು ವರ್ಷ ಕಾಲವನ್ನು ನೂಕಿದೆವು. ಅಷ್ಟರಲ್ಲಿ
ನಮ್ಮ ಭಾವನವರಿಗೆ ಹರಪುರದಿಂದ ಶ್ರೀನಗರಕ್ಕೆ ವರ್ಗವಾಗಿ ಎಪ್ಪತ್ತು ರೂಪಾಯಿ
ತಲಬುಳ್ಳ ಶಾಲಾಪರೀಕ್ಷಕರ (Schools' Assistant Inspector) ಅಧಿಕಾರವು
ಪ್ರಾಪ್ತವಾಯಿತು. ಈ ವರ್ತಮಾನವನ್ನು ಕೇಳಿ ನಮ್ಮ ಮನೆಯವರೆಲ್ಲರಿಗೂ ತುಂಬಾ
ಸಂತೋಷವುಂಟಾಯಿತು. ನನಗೂ ಸಹ ಇನ್ನು ಮೇಲೆ ಎಲ್ಲರೂ ಒಟ್ಟಿಗೆ ಇರಬಹು
ದೆಂಬ ಆನಂದವು ಮಿತಿಮೀರಿ ಹೋಯಿತು. ಆದರೆ ನಮ್ಮೀ ಆನಂದವು ಮುಂದೆ
ಕ್ರಮವಾಗಿ ಶಿಥಿಲವಾಗುತ್ತ ಬಂದಿತು.
ಭಾವನವರೂ ಸಂಸಾರದೊಡನೆ ಶ್ರೀನಗರಕ್ಕೆ ಬಂದು ಕೆಲಸದ ಮೇಲೆ ದಾಖ
ಲಾದರು. ಇದೇ ಸಮಯದಲ್ಲಿ ನಮ್ಮ ಅತ್ತಮ್ಮನವರೂ, ತಾತನವರೂ, ಕಾಶೀಯಾ
ತ್ರಾದಿ ಮಹಾಯಾತ್ರೆಗೆ ಹೊರಡಬೇಕೆಂದು ಸಂಕಲ್ಪಿಸಿ ಅದರಂತೆ ಪ್ರಯಾಣಮಾಡಿ
ದರು. ಈಗ ಮನೆಯಲ್ಲಿ ನಮ್ಮ ಮತ್ತು ಅಕ್ಕನ ಸಂಸಾರ ಮಾತ್ರವೇ ಇದೆ.
ಮಾತೃ ಭೂಮಿಯಾದ ಹರಪುರದಲ್ಲಿ ಈಗ ಯಾರೂ ಇಲ್ಲ. ತಾತನವರಂತೂ
ನಮ್ಮ ಯಜಮಾನರನ್ನು ಹರಪುರಕ್ಕೆ ಹೋಗುವ ವಿಷಯದಲ್ಲಿ ಎಷ್ಟೋ ಪ್ರೋತ್ಸಾಹಿ
ಸಿದರು. ಅವರು ಲಕ್ಷಿಸಲಿಲ್ಲ. ಭಾವನವರು, ತಮ್ಮನನ್ನು ಕುರಿತು, ಹರಪುರಕ್ಕೆ
ಹೋಗಿ ಯಾರಾದರೊಬ್ಬರು ಅಲ್ಲಿ ವಾಸಿಸದಿದ್ದರೆ ಮನೆ, ಭೂಮಿಗಳು ನೋಡುವವರಿ
ಲ್ಲದಂತಾಗುತ್ತದೆ ಯಾದುದರಿಂದ ಅಲ್ಲಿ ಹೋಗಿರುವದು ಒಳ್ಳೆಯದೆಂದೂ ನಾವುಗಳು
ಎಲ್ಲರೂ ಇಲ್ಲಿಯೇ ಇದ್ದು ಬಿಟ್ಟರೆ ಸ್ಥಳದಲ್ಲಿ ತುಂಬಾ ನಷ್ಟ ವುಂಟೆಂದೂ ಮುಂತಾಗಿ
ನಮ್ಮ ಯಜಮಾನರೊಡನೆ ನೀತಿಯನ್ನು ಹೇಳಿದರು, ಭಾವನವರ ಪೂರ್ವಾಪರವಿವೇ
ಚನೆಯುಳ್ಳವರು, ಅಲ್ಲದೆ ದೇಶಭಾಷೆಯಲ್ಲಿ ಪದವೀಧರರಾಗಿ, ಪಂಡಿತರೆನಿಸಿ ಕೊಂಡಿ
ದ್ದರು. ಯುಕ್ತಾ ಯುಕ್ತ ವಿವೇಚನಾಜ್ಞಾನವು..ಅವರಿಗೆ ಸಂಪೂರ್ಣವಾಗಿದ್ದಿತು.
----------------------------------------------
26 ಕಾದಂಬರೀ ಸಂಗ್ರಹ
ಇಂತಹ ಅಂಣಂದಿರು ಎಷ್ಟೋ ವಿಧದಲ್ಲಿ ನೀತಿ ಹೇಳಿದಾಗ್ಯೂ ನಮ್ಮ ಯಜಮಾನರು
ತಮ್ಮ ಹಟವನ್ನು ಬಿಡಲೇ ಇಲ್ಲ. ಇಷ್ಟಾದಮೇಲೆ ಭಾವನವರು ಅವರವರು ಮನಸ್ಸು
ಬಂದಂತೆ ಅವರವರು ಇದ್ದು ಕೊಳ್ಳಲಿ; ಎಂದು ಹೇಳಿ ಸುಮ್ಮನಾಗಿಬಿಟ್ಟರು.
ಅಕ್ಕನವರು ಶ್ರೀ ನಗರಕ್ಕೆ ಬಂದಮೇಲೆ ಒಳ್ಳೆಯ ಬಟ್ಟೆಗಳನ್ನು ಮಕ್ಕ
ಳಿಗೆ ತೆಗೆಯುತ್ತಲೂ ತಾವು ಒಳ್ಳೆಯ ಸೀರೆಗಳನ್ನು ಟ್ಟುಕೊಳ್ಳುತ್ತಲೂ ಇದ್ದುದನ್ನು
ನೋಡಿ ನಾನು ಅದರಂತೆ-ಅದಕ್ಕಿಂತಲೂ ಹೆಚ್ಚಾಗಿರಬೇಕೆಂದು ಯೋಚಿಸಿ ನಮ್ಮ
ಯಜಮಾನರನ್ನು ಕೇಳಿಕೊಂಡೆನು. ನಾನು ಹೇಳಿದ ವೆಚ್ಚವು ನೂರು ರೂಪಾಯಿಗಳು
ಮೀರಿದ ವ್ಯಯವಾಗಿದ್ದುದುಂದ ಅವರು ಅದನ್ನು ಮೊದಲು ಲಕ್ಷಿಸಲಿಲ್ಲ. ನಾನಾದರೂ
ಅಷ್ಟಕ್ಕೆ ಸುಮ್ಮನಾಗದೆ, ನಮ್ಮ ಯಜಮಾನರನ್ನು ವಿಶೇಷವಾಗಿ ತೊಂದರೆ ಪಡಿಸು
ವದು ಸರಿಯಲ್ಲವೆಂಬ ಧರ್ಮವನ್ನೂ ಗಣನೆಗೆ ತಾರದೆ ಮತ್ತು ಮತ್ತು ಮನಸ್ಸಿಗೆ
ಬೇಸರವಾಗುವಂತೆ ಎರಡು ಮೂರು ಬಾರಿ ಯಜಮಾನರನ್ನು ಕೇಳಿ ಬಿಟ್ಟೆನು. ಈ
ನನ್ನ ವರ್ತನದಿಂದ ಯಜಮಾನುಗೆ ಕೋಪಬಂದಿರಬಹುದು. ಆದರೆ ಅವರ ಸ್ವಭಾವವು
ನನಗೆ ತಿಳಿಯಲಿಲ್ಲ. ಆದರೂ ಬಹು ಸಹನೆಯಿಂದ ಸುಮ್ಮನೆ ಇರುತ್ತಿದ್ದರು. ಅಂತೂ
ನನ್ನ ಅಭಿಲಾಷೆಯು ನೆರವೇರಲಿಲ್ಲ. ನನಗೆ ದಿನೇದಿನೇ ಕಂಡಕಂಡ ಶ್ರೀಮಂತರ ಮನೆ
ಹೆಂಗಸರನ್ನು ನೋಡಿದಾಗಲೆಲ್ಲಾ ಅವರ ಉಡುಪು, ಆಭರಣಗಳ ವಿಚಾರದಲ್ಲಿ ಹುರುಡು
ಹತ್ತಿ ಅದಕ್ಕಿಂತಲೂ ಹೆಚ್ಚಾಗಿದ್ದು ಬಿಡಬೇಕೆಂಬ ಹುಚ್ಚು ಹೆಚ್ಚಾಗಿ ಹೋಯಿತು.
ನನ್ನ ಮನಸ್ಸಮಾಧಾನ ಮಾಡಬೇಕಾಗಿದ್ದರೆ ಸುಮಾರು ಎರಡು ಸಾವಿರ ರೂಪಾಯಿ
ಗಳನ್ನು ನಮ್ಮ ಯಜಮಾನರು ವೆಚ್ಚ ಮಾಡಬೇಕಾಗಿತ್ತು. ನನ್ನ ಮನಸ್ಸಿನಲ್ಲಾದರೋ,
ಈ ಕೆಲಸವು ನಮ್ಮ ಯಜಮಾನರಿಂದ ಆಗುವದೇ, ಇಲ್ಲವೇ ಎಂಬ ಭಾವನೆಯು
ಸಕೃದಾವರ್ತಿಯಾದರೂ ಸ್ಪುರಿಸದೆ ಹೋದುದು. ನಮ್ಮ ಯಜಮಾನರು ನಾನು
ಹುರುಡಿನಸೀರೆ, ಒಡವೆಗಳ ಪ್ರಸ್ತಾಪವನ್ನೆತ್ತಿದಾಗಲೆಲ್ಲಾ ಎಷ್ಟೋ ವಿಧವಾಗಿ ನೀತಿ
ಯನ್ನು ಹೇಳುತ್ತಿದ್ದರು. ಈ ಸೀರೆ, ಒಡವೆ ಮುಂತಾದ ಪದಾರ್ಥಗಳೆಲ್ಲವೂ ಮನ
ಸ್ಸನ್ನು ಹಾಳುಮಾಡುತಕ್ಕುದಾಗಿಯೂ ಬುದ್ಧಿಯನ್ನು ಕೆಡಿಸಿತಕ್ಕುದಾಗಿಯೂ,
ನಾಶವಾಗತಕ್ಕೆ ಸ್ವಭಾವವುಳುದಾಗಿಯೂ ಇರುವುದು. ಆದುದರಿಂದ ಸುಶೀಲೆಯಾದ
ಹೆಂಗಸು ತುಚ್ಛವಾದ ಈ ಒಡವೆಗಳಿಗೆ ಆಶಿಸದೆ, ತನಗೆ ಅಮೂಲ್ಯಾಭರಣದಂತಿರುವ
ಪತಿದೇವನ ಪ್ರಸಾದವನ್ನು ನಿರೀಕ್ಷಿಸುವುದೇ ಅವಳಿಗೆ ದೊಡ್ಡ ಒಡವೆಯೆಂದು ಎಷ್ಟೋ
ನೀತಿಯನ್ನು ಹೇಳಿದರು. ನನಗೆ ಆಗ ಯಾವದೈವವು ಹಿಡಿದಿತ್ತೋ ತಿಳಿಯದು. ನಮ್ಮ
ಯಜಮಾನರು ಹೇಳಿದ ನೀತಿಯೊಂದೂ ನನ್ನ ಮನಸ್ಸಿಗೆ ಹಿಡಿಯಲೇ ಇಲ್ಲ. ಹೇಳಿ
----------------------------------------------
ನನ್ನ ಸಂಸಾರ 27
ಹೇಳಿ ಬೇಜಾರಾಗಿ ನಮ್ಮ ಯಜಮಾನರು ನನ್ನ ವಿಷಯದಲ್ಲಿ ಬಹಳ ಅಸಮಾಧಾ
ನವನ್ನು ಪ್ರದರ್ಶಿಸುತ್ತೆ ಬಂದರು. ಆಗಲೂ ನಾನು ಅವರ ಮನಸ್ಸಿಗೆ ಬಹು ಕ್ಷೋಭೆಯ
ನ್ನುಂಟುಮಾಡುವುದನ್ನು ಬಿಡಲಿಲ್ಲ. ನನಗೆ ಆಗ ಏನೋ ಅಜ್ಞಾನವು ಕವಿದುಕೊಂಡು
ನನ್ನ ಪತಿಯು ನನ್ನನ್ನು ಎಷ್ಟು ತಿರಸ್ಕರಿಸಿದರೂ ಅದನ್ನು ಲಕ್ಷಿಸದೆ ಪ್ರತಿಭಟಿಸುವಂ
ತಹ ಮೌರ್ಖ್ಯವು ಪ್ರಾಪ್ತವಾಗಿದ್ದಿತು.
ನನ್ನ ಹುಚ್ಚಾಟವನ್ನು ಕಂಡು ನನ್ನ ಅಕ್ಕ-ಭಾವ ಮುಂತಾದವರಿಗೆಲ್ಲಾ
ಒಂದು ವಿಧವಾದ ಹಾಸ್ಯಕ್ಕೆ ಕಾರಣವಾಯಿತು. ನನ್ನ ಅಕ್ಕನ ಮನೆಯಲ್ಲಿ ಹೇಗೆಹೇಗೆ
ವರ್ತಿಸುವರೋ ನಾನು ಹುರುಡಿನಂತೆ ಅವರ ಕೆಲಸಗಳನ್ನು ಅನುಕರಣಮಾಡತೊಡ
ಗಿದೆನು. ಈ ನನ್ನ ಆಟವನ್ನು ನೋಡಿ ಅಕ್ಕನಿಗೆ ಕೋಪಬಂದಿತು. ಅವರು ನನಗೆಷ್ಟೋ
ನೀತಿಯನ್ನುಪದೇಶಿಸಿದರು. ನನಗೆ ಒಂದೂ ಹಿಡಿಯಲೇ ಇಲ್ಲ. ಕ್ರಮ ಕ್ರಮವಾಗಿ
ನನ್ನ ಅಕ್ಕನು ನನಗೆ ನೀತಿ ಹೇಳುವುದನ್ನು ಬಿಟ್ಟು ಬಿಟ್ಟರು. ಮತ್ತು ನನ್ನನ್ನು ಲಕ್ಷಿಸದೆ
ಸಮಸ್ತವಾದ ಮನೆಗೆಲಸಗಳನ್ನೂ ತಾವೇ ನಿರ್ವಹಿಸುತ್ತ ಬಂದರು. ತಮ್ಮ ಮಗುವಿಗೆ
ನೀರು ಹಾಕಬೇಕಾಗಿರಲಿ ತಾವೇ ಎರದು ಕೊಳ್ಳಬೇಕಾಗಲೀ ಯಾವುದಕ್ಕೂ ನನ್ನನ್ನು
ಲಕ್ಷಿಸದೆ ಇನ್ನಾರಾದರೂ ಹೆಂಗಸರನ್ನು ಕರೆದು ಅವರ ಕೈಲಿಮಾಡಿಸುತ್ತಾ ಬಂದರು.
ನನಗೆ ವಿಶೇಷ ಕೋಪಬಂದು ಕೆಲಸ ಮಾಡುವುದನ್ನು ಬಿಟ್ಟೇಬಿಟ್ಟು, ಕಸೂತಿ ಹಾಕುವ
ದಕ್ಕೆ ಆರಂಭಮಾಡಿದೆನು, ನಮ್ಮ ಯಜಮಾನರೂ ನನಗೆ ಹೀಗಿರುವುದು ಸರಿಯಲ್ಲ
ವೆಂದು ವಿಧವಿಧವಾಗಿ ಬೋಧಿಸಿದರು. ನನಗೆ ಯಾವುದೂ ಮನಸ್ಸಿಗೆರುಚಿಸಲಿಲ್ಲ.
ನಾನು ಈರೀತಿ ಮಂಕುಹಿಡಿದವಳಂತೆ ಆದುದನ್ನು ಕಂಡು ಮನೆಯವರೆಲ್ಲರೂ ನನ್ನ
ವಿಷಯದಲ್ಲಿ ಬಹುವಾಗಿ ಅಸಮಾಧಾನಪಟ್ಟುಕೊಳ್ಳುತ್ತಿದ್ದರು. ಹೀಗೆಯೇ ಮೂರು
ತಿಂಗಳಾಯಿತು.
ಅತ್ತಮ್ಮನವರೂ ತಾತನವರೂ ಯಾತ್ರೆಯನ್ನು ಮುಗಿಸಿಕೊಂಡು ಊರಿಗೆ
ಬಂದರು. ಮನೆಗೆ ಬಂದಮೇಲೆ ನಾವು ಓರಗಿತ್ತಿಯರಿಬ್ಬರೂ ಇರುವ ಸ್ಥಿತಿಯನ್ನು
ಕಣ್ಣಾರ ನೋಡಿ ಕ್ರಮವಾದ ಸ್ಥಿತಿಯಲ್ಲಿರಬೇಕೆಂದು ಆಕ್ಷೇಪಿಸಲಾರಂಭಿಸಿದರು.
ನಮ್ಮಿಬ್ಬರಿಗೂ ಗಂಡಂದಿರ ಬಲವಿರುವಾಗ ನಾವು ಅತ್ತೆಯ ಮಾತನ್ನೇಕೆ ಗಣಿಸಬೇಕೆಂಬ
ಭಾವನೆಯು ಉತ್ಪನ್ನವಾದುದು. ಈ ಭಾವನೆಯು ನನ್ನ ಅಕ್ಕನ ಮನಸ್ಸಿನಲ್ಲಿದ್ದಿತೋ
ಇಲ್ಲವೋ ನನಗೆ ತಿಳಿಯದು. ಇತರರ ವಿಷಯದಲ್ಲಿ ಸ್ವತಂತ್ರವಾಗಿ ಮಾತನಾಡುವಷ್ಟು
ಶಕ್ತಿಯು ನನಗಿಲ್ಲ. ನಮ್ಮ ಅತ್ತೆಯು ನಮ್ಮ ವರ್ತನಗಳನ್ನು ಒಂದೆರಡು ತಿಂಗಳು
ಕಾಲ ನೋಡಿದರು. ಹತೋಟಿಗೆ ಬರುವಂತೆ ತೋರಲಿಲ್ಲ. ಇನ್ನು ಹೀಗೆಯೇ ಒಟ್ಟಿಗೆ
--------------------------------------------
28 ಕಾದಂಬರೀ ಸಂಗ್ರಹ
ಒಂದೇ ಸಂಸಾರದಲ್ಲಿ ಎಲ್ಲರೂ ಇದ್ದರೆ ಪರಸ್ಪರ ವೈಷಮ್ಯಕ್ಕೆ ಕಾರಣವಾದೀತೆಂದು
ಎಲ್ಲರಿಗೂ ಗೊತ್ತಾಯಿತು. ನಮ್ಮ ಯಜಮಾನರು ಹಿರಿಯರ ಮಾತನ್ನು ಮೀರದೆ
ಹರಪುರಕ್ಕೆ ಹೊರಟು ಹೋಗಿದ್ದರೆ ಈ ವಿಧವಾದ ಅವಾಂತರಗಳಾಗುತ್ತಿರಲಿಲ್ಲ. ಹಾಗೆ
ಮಾಡದಿದ್ದುದು ಬಹು ಅನರ್ಥಕ್ಕೆ ಮೂಲವಾಯಿತು.
ಸಂಸಾರದಗುಟ್ಟು, ವ್ಯಾಧಿರಟ್ಟು, ಎಂಬ ಲೋಕೋಕ್ತಿಯಂತೆ ತಮ್ಮ ತಮ್ಮ
ಸಂಸಾರ ಸ್ಥಿತಿಯನ್ನು ಇತರರಿಗೆ ಹೇಳುವುದು ಅವಿವೇಕವಾದ ಕೆಲಸವೆಂಬ ವಿಷಯವು
ನನಗೆ ಗೊತ್ತಿದೆ. ಆದರೆ ನಾನು ನಮ್ಮ ಸಂಸಾರದ ರಹಸ್ಯವನ್ನು ಬಹಿರಂಗ ಪಡಿಸುವು
ದಕ್ಕಾಗಿ ಈ ಕಥೆಯನ್ನು ಬರೆಯುತ್ತಿಲ್ಲ. ಕಿಂತು-ಲೋಕದಲ್ಲಿ ಇಂತಹ ಅಂತಃಕಲಹ
ಗುಳುಳ್ಳ ಸಂಸಾರಗಳು ಅನೇಕವಾಗಿರುವುವೆಂಬುದನ್ನು ತೋರ್ಪಡಿಸುವುದಕ್ಕಾಗಿಯೂ
ಭರತಖಂಡದಲ್ಲೆಲ್ಲೆಲ್ಲಿಯೂ ಸಮಸ್ತ ಸಂಸಾರವೂ ಶಾಂತಿಯಿಂದ ವರ್ತಿಸುವಂತೆ ಈ
ಕಥೆಯಿಂದ ಸಾಧ್ಯವಾದೀತೇ ಎಂಬ ಮಾದರಿಯನ್ನು ತಿಳುವುದಕ್ಕಾಗಿಯೂ ವಿಷಯಗಳು
ಪ್ರತಿಪಾದಿಸಲ್ಪಟ್ಟಿವೆ. ಮತ್ತು ನನ್ನಂತಹ ಹುರುಡುಮಾಡುವಂತಹ ತರುಣಿಯರು ಎಷ್ಟೋ
ಮಂದಿ ಈ ಲೋಕದಲ್ಲಿ ಇರುವರೆಂಬುದನ್ನು ಅನೇಕ ತರುಣಿಯರು ತಮ್ಮ ತಮ್ಮ ಪತಿಗ
ಳನ್ನು ತಮ್ಮ ಆಜ್ಞೆಗೆ ಅಧೀನರನ್ನಾಗಿ ಮಾಡಿ ಕೊಳ್ಳಲು ಪ್ರಯತ್ನಿಸುತ್ತಿರುವರೆಂಬುದ
ನ್ನೂ , ಅದರಂತೆಯೇ ಪತ್ನಿ ಯರಿಗೆ ಸ್ವಾಧೀನರಾಗಿ ನಡೆಯುತ್ತಿರುವ ಅನೇಕ ಮನುಜರು
ಈ ದೇಶದಲ್ಲಿ ವಿಶೇಷವಾಗಿರುವರೆಂಬುದನ್ನೂ ನಾನು ಕೇಳಿ, ನೋಡಿಬಲ್ಲೆನು, ಅಂದರೆ
ಹೆಂಡತಿಯರ ಮಾತನ್ನು ಗಂಡಂದಿರು ಕೇಳಲೇ ಬಾರದೆಂಬುದು ನನ್ನ ತಾತ್ಪರ್ಯವಲ್ಲ.
ನೀರಕ್ಷೀರ ನ್ಯಾಯದಂತೆ ಅನ್ನೋನ್ಯವಾಗಿ ಯುಕ್ತಿ ಯುಕ್ತವಾದ ವಿಷಯಗಳನ್ನು
ಒಬ್ಬರಿಗೊಬ್ಬರು ಹೇಳಿ ಕೊಡುತ್ತಾ ಪುಣ್ಯವಂತರೆನಿಸಿಕೊಂಡು ಲೋಕಕ್ಕೆ ಮಾದರಿ
ಯಾದ ದಂಪತಿಗಳಾಗಿ ಎಲ್ಲರೂ ಪರಿಣಮಿಸಬೇಕೆಂಬುದೇ ನನ್ನ ಕುತೂಹಲ.
ನನ್ನಿ ಅಭಿಪ್ರಾಯವನ್ನು ಅನುಮೋದಿಸುವವರು ಅನುಮೋದಿಸಲಿ. ಎಲ್ಲರಿಗೂ ಬುದ್ದಿ ಹೇಳಿ
ಕಲಿಸುವುದಕ್ಕೆ ನನ್ನಿಂದ ಸಾಧ್ಯವಿಲ್ಲ.
VII
ನಮ್ಮ ಸಂಸಾರವು ವಿಷಮವಾಗಿಯೇ ನಡೆಯುತ್ತಿತ್ತು. ಹೀಗೆಯೇ ಕೆಲವು
ದಿನಗಳು ಕಳೆದು ಹೋದವು. ನಮ್ಮ ಯಜಮಾನರು ಹರಪುರಕ್ಕೆ ಹೊರಡುವ ಯೋಚ
ನೆಯನ್ನು ಮಾಡಲೇ ಇಲ್ಲ. ಅದೇನು ದೈವಮಾಯಯೋ; ನಮ್ಮ ಗೃಹಕೃತ್ಯದಲ್ಲಿ ಅನಿ
ರ್ವಚನೀಯವಾದೊಂದು ವಿಷಲತೆಯು ಹಬ್ಬಿ ವ್ಯಾಪಿಸುತ್ತ ಬಂದಿತು, ಲತೆಯು ಇನ್ನೂ
ಚೆನ್ನಾಗಿಬಲಿತು ಹಬ್ಬಿರಲಿಲ್ಲ. ಅಷ್ಟರಲ್ಲೇ ನಾವು ಆಲತೆಯನ್ನು ಕಿತ್ತು ನಿರ್ಮೂಲ
-----------------------------------------------
ನನ್ನ ಸಂಸಾರ 29
ಮಾಡಿಬಿಟ್ಟೆವು. ಆ ವಿಷಲತೆಯ ಜತೆಯಲ್ಲೇ ನನಗೆ ಪ್ರಾಪ್ತವಾಗಿದ್ದ ಹುರುಡು,
ಅಜ್ಞಾನ, ಮೌಖವೆಂಬ ಶತ್ರುತ್ರಯಗಳೂ ನಾಶವಾಗಿ ಹೋದುವು. ವಿಷಲತೆಯು
ನಾಶವಾದ ಬಗೆಯನ್ನೂ, ಶತ್ರುತಯನಿರ್ಮೂಲನದ್ವಾರಾಶಾಂತಿಸ್ನಾಪನೆಯಾದ
ವಿಷಯವನ್ನೂ, ಈಗ ವಿಸ್ತಾರವಾಗಿ ವರ್ಣಿಸುತ್ತೇನೆ. ಪಾತಕಿಯರು ಪಠಿಸಬೇಕು.
ನಮ್ಮ ಭಾವನವರಿಗೆ 75 ರೂ || ತಲಬು ಬರುವುದೆಂಬುದನ್ನು ಹಿಂದೆಯೇ ತಿಳಿಸಿದೆ
ಯಷ್ಟೆ ? ಮನೆಯ ವೆಚ್ಚಕ್ಕೆ ಮೂವತ್ತು ರೂಪಾಯಿಗಳು ಖರ್ಚಾದರೂ ಕಡಮೆ
45 ರೂಪಾಯಿಗಳು ಪ್ರತಿತಿಂಗಳೂಮಿಗುತ್ತಿತ್ತು. ನಮ್ಮ ಭಾವನವರು ಹಣವನ್ನು
ಸೇವಿಂಗ್ಸ್ ಬ್ಯಾಂಕಿನಲ್ಲಾಗಲೀ ಇತರ ವಿಧವಾದ ಬಡ್ಡಿಗಾಗಲೀ ಕೊಡುತ್ತಿರಲಿಲ್ಲ. ಈ
ಕಾರಣದಿಂದ ಸಿಲುಕಾಗಿ ಉಳಿವ ಮೊಬಲಗನ್ನು ಪೆಟ್ಟಿಗೆಯಲ್ಲಿಟ್ಟು ಬೀಗವನ್ನು ಹಾಕಿ
ಕೊಂಡು ಅದರ ಬೀಗದಕಯ್ಯನ್ನು ಹೆಂಡತಿ (ನಮ್ಮ ಅಕ್ಕ)ಗೆ ಮಾತ್ರ ತಿಳಿಯುವಂತೆ
ರಹಸ್ಯವಾದೊಂದು ಪ್ರದೇಶದಲ್ಲಿ ಇಡುತ್ತಿದ್ದರಂತೆ ? ಮತ್ತು ವಿಶೇಷವಾಗಿ ಹಣವೇ
ನಾದರೂ ಖರ್ಚಾಗಬೇಕಾಗಿದ್ದರೆ ನಮ್ಮ ಅಕ್ಕನಾಗಲೀ ಭಾವನವರಾಗಲೀ ಪೆಟ್ಟಿಗೆ
ಬಾಗಿಲು ತೆರೆದು ಆವಶ್ಯಕವಾದಷ್ಟು ಹಣವನ್ನು ತೆಗೆದುಕೊಂಡು ಅದನ್ನು ಲೆಕ್ಕಕ್ಕೆ
ಬರೆದುಕೊಂಡು ಬೀಗದಕಯ್ಯನ್ನು ನಿರ್ದಿಷ್ಟ ಸ್ಥಾನದಲ್ಲಿ ಇರಿಸುತ್ತಿದ್ದರಂತೆ ? ಮತ್ತು
ಆ ಪೆಟ್ಟಿಗೆಯನ್ನು ಇರಿಸಿರುವ ಚಿಕ್ಕ ಮನೆಯಲ್ಲಿ ಯಾವಾಗಲೂ ಯಾರಾದರೊಬ್ಬರು
ನಮ್ಮ ಅಕ್ಕನ ಕಡೆಯವರಾಗಿ ಇರುತ್ತಲೇ ಇದ್ದರು. ಯಾರೂ ಇಲ್ಲದವೇಳೆಯಲ್ಲಿ
ಚಿಕ್ಕ ಮನೆಗೆ ಬೀಗ ಹಾಕಿಕೊಂಡು ಹೋಗುವ ಪದ್ದತಿಯನ್ನಿಟ್ಟು ಕೊಂಡಿದ್ದರು. ಈ
ಕಾರಣದಿಂದ ನಮ್ಮ ಅಕ್ಕ, ಭಾವ, ಅವರಕಡೆ ಹುಡುಗರು ವಿನಾ ಇತರರು ಅವರ
ಕೊಠಡಿಗೆ ಪ್ರವೇಶಮಾಡಲಸಾಧ್ಯವಾಗಿದ್ದುದರಿಂದ ಅವರ ಒಟ್ಟಿ, ಒಡವೆ, ಹಣಗಳು
ಸುರಕ್ಷಿತವಾಗಿಯೇ ಇರುತ್ತಿದ್ದವು. ಇಂತಿರಲು ನನ್ನ ಅಕ್ಕನ ಮಗುವಿಗೆ ವರುಷ
ದಹೆಚ್ಚಿನದಿನವು ಬಂದಿತು. ಆದಿನ 40-500 ಮಂದಿಗೆ ಊಟಕ್ಕೆ ಹೇಳಿ ದಿವ್ಯವಾದ
ಸಂತರ್ಪಣೆಯನ್ನು ಮಾಡಿಸಿದರು. ಈ ಉತ್ಸವಕ್ಕಾಗಿ ಸುಮಾರು ಅವರು ಐವತ್ತು ರೂ
ಪಾಯಿಗಳ ಮೇಲೆಯೇ ವೆಚ್ಚವನ್ನು ಮಾಡಿದರು. ಆದಿನವೆಲ್ಲಾ ನಾನೂ ಅಕ್ಕನೂ
ಬಂದವರ ಯೋಗಕ್ಷೇಮವನ್ನು ತೆಗೆದುಕೊಂಡು ಅವರನ್ನು ಆದರಿಸುವ ಸಡಗರದಲ್ಲೇ
ಇದ್ದು ಬಿಟ್ಟೆವು. ಹಬ್ಬದ ದಿನ ರಾತ್ರಿ ಮಕ್ಕಳನ್ನು ಹಸೆಯ ಮೇಲೆ ಕೂರಿಸಿ ಆರತಿಯ
ಕ್ಷತೆಯನ್ನು ಅಟ್ಟಹಾಸದಿಂದ ಮಾಡಿದರು.
ಆದಿನವೂ ಕಳೆಯಿತು. ಕಾಲಕ್ಕೆ ಮಾತ್ರ ಅಹಂಕಾರವಿಲ್ಲ. ಸೋಮಾರಿತನವಿ
ಲ್ಲದೆ ತನ್ನ ಕೆಲಸವನ್ನು ಅವಿಚ್ಛಿನ್ನವಾಗಿ ಮಾಡಿಕೊಂಡು ಹೋಗುತ್ತಿರುವುದು. ಕಾಲ
-----------------------------------------------
30 ಕಾದಂಬರೀ ಸಂಗ್ರಹ
ವೆಂಬುದು ಕಣ್ಣಿಗೆ ಕಾಣುವ ಪದಾರ್ಥವಲ್ಲ. ಒಬ್ಬರ ಕೈಗೆ ಸಿಕ್ಕ ತಕ್ಕುದೂ ಅಲ್ಲ.
ಆದರೆ ಒಂದುದಿನ ಕಳೆದುಹೋದರೂ ಆ ಕಾಲವು ಇನ್ನೆಂದಿಗೂ ಬರಲಾರದು. ಕಾಲದ
ಯೋಗ್ಯತೆಯನ್ನೂ ಅದರ ಬೆಲೆಯನ್ನೂ ಕಂಡುಹಿಡಿಯಲಾರಿಗೂ ಸಾಧ್ಯವಿಲ್ಲ. "ವ್ಯರ್ಥ
ವಾಗಿ ಕಾಲಹರಣ ಮಾಡಬಾರದು.” ಎಂದು ಪ್ರಸಿದ್ಧವಾದ ನೀತಿವಚನವು ಸರ್ವರಿಂ
ದಲೂ ವಿಚಾರಿಸಲ್ಪಡಬೇಕು. ಮತ್ತು ಏನುಮಾಡಿದರೂ ಹೊತ್ತೇ ಹೋಗದು. ಎಂಬ
ಜಡವಾಕ್ಯವು ಬಹು ಅನರ್ಥಕಾರಿಯಾದುದೆಂಬುದನ್ನು, ಉದ್ಯೋಗಶೀಲರೂ, ಒಳ್ಳೆಯ
ವಿದ್ಯಾರ್ಥಿಗಳೂ, ಜಾಣರೂ, ಬಲ್ಲರು. ಅದರ ಅರ್ಧವನ್ನು ಈ ಮೂವರಿಂದ ಎಲ್ಲರೂ
ತಿಳಿದುಕೊಳ್ಳಲಿ. !
ಹುಟ್ಟಿದ ಹಬ್ಬವಾಗಿ ಈಗಲೇ ಎರಡುದಿನವಾಗಿ ಹೋಯಿತು. ಮೂರನೆಯ ದಿನ
ಬೆಳಿಗ್ಗೆ ಹತ್ತು ಗಂಟೆಯ ಸಮಯದಲ್ಲಿ ನಾನು ನಮ್ಮ ಯಜಮಾನರಿಗೆ ನೀರನ್ನು
ಎರೆಯು ತಿದ್ದೆನು. ಅಮ್ಮನವರು ಅಡಿಗೆ ಮಾಡುತ್ತಿದ್ದರು. ತಾತನವರು ಬೀದಿಬಾಗಿಲಿನಲ್ಲಿ
ಕುಳಿತು ಗ್ರಂಥವನ್ನು ನೋಡುತ್ತಿದ್ದರು. ಅಕ್ಕನೂ ಭಾವನವರೂ ಅವರ ಚಿಕ್ಕ ಮನೆ ಯಲ್ಲಿ
ಕುಳಿತು ತಮ್ಮ ಪೆಟ್ಟಿಗೆಯಲ್ಲಿದ್ದ ಹಣವನ್ನು ಲೆಖ್ಖಮಾಡಿ ಅದರ ಪರಿಶೀಲನೆ
ಯಲ್ಲಿದ್ದರು. ಹೀಗೆ ಒಂದೆರಡು ಘಳಿಗೆ ಕಳೆದುಹೋಯಿತು. ಇದ್ದಕ್ಕಿದ್ದ ಹಾಗೆಯೇ
ನಮ್ಮ ಮನೆಯಲ್ಲಿ ಬಹು ಗಲಭೆಗೆ ಕಾರಣವಾಯಿತು. ನಮ್ಮ ತಾತನವರೂ ಅಕ್ಕನ
ವರೂ ಭಾವನವರೂ ಮಹತ್ತಾದ ಆಲೋಚನೆಯಲ್ಲಿ ಮುಳುಗಿ ಹೋಗಿದ್ದರು. ನಾನು
ಬಚ್ಚಲಮನೆಯಲ್ಲಿ ನೀರನ್ನು ಕಾಯಿಸುತ್ತಿದ್ದೆನು. ಆಗ ನಮ್ಮ ಯಜಮಾನರು ನನ್ನ
ಬಳಿಗೆ, ಅತಿವೇಗದಿಂದ ಬಂದು, ಈಗ ನಡೆದ ವಿಷಯವನ್ನು ಕೇಳಿದೆಯಾ ? ನಮ್ಮ
ಅಣ್ಣನವರ ಪೆಟ್ಟಿಗೆಯಲ್ಲಿದ್ದ ಇನ್ನೂರು ರೂಪಾಯಿಗಳಲ್ಲಿ 50-60 ರೂಪಾಯಿಗಳು
ಮಾಯವಾಗಿದೆಯಂತೆ ? ಎಲ್ಲರೂ ಬಹು ಯೋಚನಾಕ್ರಾಂತರಾಗಿದ್ದಾರೆ. ಇನ್ನು ಈ
ಅಪವಾದವು ನನ್ನ ಮೇಲೆಲ್ಲಾದರೂ ಬರುವುದೋ ಎಂದು ಭಯಪಡುತ್ತಿದ್ದೇನೆ ಎಂದು
ಹೇಳಿದರು. ನಾನು ಅದನ್ನು ಕೇಳಿ, ನೀವು ವ್ಯರ್ಥವಾಗಿ ಇಲ್ಲದ ಚಿಂತೆಯನ್ನು ಮನಸ್ಸಿಗೆ
ಹತ್ತಿಸಿಕೊಳ್ಳಲೇಕೆ ? ಅವರಚಿಕ್ಕ ಮನೆಯಲ್ಲಿ ಅದರಲ್ಲೂ ಅವರ ಪೆಟ್ಟಿಗೆಯಲ್ಲಿದ್ದ
ಹಣವು ಹೋಗುವುದಾದರೂ ಹೇಗೆ ? ಅವರೇ ಎಲ್ಲೊ ಗಂಡ ಹೆಂಡರಪೈಕಿ ಒಬ್ಬರು
ಬಳಸಿಕೊಂಡು ಮರತಿರಬೇಕು. ಹೊರಗಿನವರು ಕದ್ದಿದ್ದರೆ 60 ರೂಪಾಯಿಗಳನ್ನು ತೆಗೆ
ದುಕೊಂಡು ಕಡಮೆಯದನ್ನು ಬಿಟ್ಟು ಹೋಗುವುದೆಂದರೇನು ? ಇದೆಲ್ಲವೂ ವಿಸ್ಕೃತಿ
ಯಿಂದುಂಟಾಗಿರಬಹುದೆಂದು ಹೇಳಿ ಅವರನ್ನು ಸಮಾಧಾನ ಪಡಿಸಿದೆನು. ಆದರೂ ಅವ
ರಿಗೆ ಮನಶ್ಯಾಂತಿಯುಂಟಾಗಲಿಲ್ಲ. ಹಾಗೆಯೇ ಸ್ನಾನಾಹ್ನಿಕಗಳನ್ನು ಮಾಡಿಕೊ
-----------------------------------------------
ನನ್ನ ಸಂಸಾರ 31
ಳ್ಳುತ್ತ ಕುಳಿತಿದ್ದರು. ನಾನುಹಿತ್ತಲಿನಲ್ಲಿ ಬಟ್ಟೆಯನ್ನೊಗೆದು ಕೊಳ್ಳುತ್ತಿದ್ದೆನು. ನನ
ಗಂತೂ ಅವರು ಹಣದ ವಿಷಯದಲ್ಲಿ ಚಿಂತಿಸುತ್ತಿರುವುದು ಸುಳ್ಳೆಂದು ತೋರಿತು. ನಾನು
ಅದನ್ನು ಮನಸ್ಸಿಗೆ ಹತ್ತಿಸಿಕೊಳ್ಳಲೇ ಇಲ್ಲ. ಹೀಗೆಯೇ ಹನ್ನೆರಡು ಗಂಟೆಯ ಹೊಡೆ
ಯಿತು.
ನಮ್ಮ ಅಕ್ಕ,ಭಾವ, ವಿನಹ ಎಲ್ಲರೂ ಸ್ನಾನಮಾಡಿದ್ದರು. ನಮ್ಮ ಅಕ್ಕನವರು
ನಮ್ಮ ಬೀದಿಯಲ್ಲಿದ್ದ ಜೋಯಿಸರೊಬ್ಬರ ಬಳಿಗೆ ಹೋಗಿ ಹಣದ ವಿಷಯದಲ್ಲಿ
ಶಾಸ್ತ್ರವನ್ನು ಕೇಳಿದರಂತೆ ? ಆಜೋಯಿಸರೂ ಲೆಖ್ಖಹಾಕಿ, ಹಣವು ನಿಮ್ಮ ಮನೆಯಲ್ಲೇ
ಇದೆ. ಇನ್ನು ಮೂರು ಗಂಟೆ ಕಾಲದೊಳಗಾಗಿ ಸಿಕ್ಕಿದರೆ ಸಿಕ್ಕ ಬಹುದು. ಇಲ್ಲವಾ
ದರೆ ಅದು ಸ್ಥಳವನ್ನು ಬಿಟ್ಟು ಕದಲಿ ಹೋದೀತು. ಎಂದು ಹೇಳಿದರಂತೆ ! ನಮ್ಮ
ಅಕ್ಕನವರು ಕೂಡಲೆ ಬಂದು ಭಾವನವರೊಡನೆ, ಶಾಸ್ತ್ರದ ವಿಚಾರವನ್ನು ಹೇಳಿ
ಈಗಲೇ ಮನೆಯವರೆಲ್ಲರ ಪೆಟ್ಟಿಗೆಯನ್ನು ಶೋಧಿಸಿದರೆ ಹಣವು ಸಿಕ್ಕಿ ಬಿಡುತ್ತದೆ.
ಎಂದು ಉಲ್ಲಾಸದಿಂದ ಹೇಳಿದರು. ಸಾಧಾರಣವಾಗಿ ಎಲ್ಲರ ಪೆಟ್ಟಿಗೆಯಲ್ಲೂ
ಅವರವರು ಹಣವನ್ನಿಟ್ಟುಕೊಂಡಿರಬಹುದೆಂದು ಅವರಿಗೆ ತಿಳಿದಿದ್ದರೂ ಮನೆಯವ
ರೆಲ್ಲರ ಪೆಟ್ಟಿಗೆಯನ್ನು ಶೋಧಿಸಿಬಿಡಬೇಕೆಂದೂ ಯಾರ ಪೆಟ್ಟಿಗೆಯಲ್ಲಾದರೂ ಹಣ
ವಿದ್ದರೆ ಅದು ತಮ್ಮದೇ ಎಂದೂ ಗಂಡನೊಡನೆ ಖಂಡಿತವಾಗಿ ಹೇಳಿದರು. ಹೆಂಡತಿ
ಯಮಾತನ್ನು ಮೀರದೆ, ನಮ್ಮ ಭಾವನವರು ತಮಗೆ ಇಷ್ಟವಿಲ್ಲದಿದ್ದರೂ ಎಲ್ಲರ
ಪೆಟ್ಟಿಗೆಯನ್ನೂ ಶೋಧಿಸುವ ಕಾರ್ಯಕ್ಕೆ ಕೈಯಿಟ್ಟರು. ಎಲ್ಲರ ಪೆಟ್ಟಿಗೆಯೆಂದರೆ
ಯಾರದು ? ನನ್ನದು, ತಾತನವರದು. ನಮ್ಮ ಯಜಮಾನರದು. ತಾತನವರ ಪೆಟ್ಟಿಗೆ
ಯನ್ನು ಶೋಧಿಸುವ ಧೈರ್ಯವು ಆರಿಗೂ ಇಲ್ಲ ಅತ್ತಮ್ಮನವರಲ್ಲಿ ಪೆಟ್ಟಿಗೆಯೇ
ಇರಲಿಲ್ಲ. ನಮ್ಮ ಯಜಮಾನರ ಪೆಟ್ಟಿಗೆಯಲ್ಲಿ ಎರಡಾಣೆ ಚಿಲ್ಲರೆ ಮಾತ್ರವೇ
ಇದ್ದಿತು. ಉಳಿದುದು ನನ್ನ ಪೆಟ್ಟಿಗೆ, ನನ್ನ ಪೆಟ್ಟಿಗೆಯನ್ನು ಶೋಧನೆಗೆ ಕಳುಹಬೇ
ಕಾಯಿತು. ನಮ್ಮ ತಾಯಿಯು ಗುಟ್ಟಾಗಿ ಕೊಟ್ಟಿದ್ದ 55 ರೂಪಾಯಿಗಳನ್ನೂ
ನನ್ನಲ್ಲಿ ಚಿಲ್ಲರೆಯಾಗಿದ್ದ 5-6 ರೂಪಾಯಿಗಳ ನಾಣ್ಯವನ್ನೂ ನಮ್ಮ ಯಜಮಾ
ನರಿಗೂ ಸಹಾ ತಿಳಿಸಿದಂತೆ ನಾನು ನನ್ನ ಪೆಟ್ಟಿಗೆಯ ಒಂದು ಭರಣಿಯಲ್ಲಿಟ್ಟಿದ್ದೆನು.
ಪೆಚ್ಚಳಾದ ನಾನು ಆ ಭರಣಿಯು ಎಲ್ಲಿ ಬೈಲಿಗೆ ಬರುವುದೋ, ನಮ್ಮ ತಾಯಿಯು
ನನ್ನಲ್ಲಿ ಗುಟ್ಟಾಗಿ ಹಣವನ್ನು ಕೊಟ್ಟಿರುವ ವಿಷಯವೂ ಎಲ್ಲರಿಗೂ ಎಲ್ಲಿ ತಿಳಿದು
ಬಿಡುವುದೋ ಎಂಬ ಹೆದರಿಕೆಯಿಂದ, ನನ್ನಲ್ಲಿದ್ದ ಭರಣಿಯನ್ನು ಈಚೆಗೆ ತೆಗೆದಿಟ್ಟು
ಕೊಂಡು ಬರೀಪೆಟ್ಟಿಗೆಯನ್ನು ಮಾತ್ರ ಕಳುಹಿಸಿಬಿಟ್ಟೆನು. ನಾನು ಪೆಟ್ಟಿಗೆಯ ಬೀಗ
---------------------------------------------
32 ಕಾದಂಬರೀ ಸಂಗ್ರಹ
ವನ್ನು ತೆರೆದು ಹಣದ ಭರಣಿಯನ್ನು ಬಚ್ಚಿಟ್ಟುದನ್ನು ನಮ್ಮ ಭಾವನವರು ನೋಡುತ್ತಲೇ
ಇದ್ದರು. ಬರೀ ಪೆಟ್ಟಿಗೆಯಲ್ಲಿ ಹಣವಿದ್ದೀತೆ ? ನಮ್ಮ ಭಾವನವರು ಬಲವಂತದಿಂದ
ನಮ್ಮ ಚಿಕ್ಕ ಮನೆಗೆ ಪ್ರವೇಶಿಸಿ ಅನುಮಾನದಿಂದ ನನ್ನ ಭರಣಿಯನ್ನು ತೆಗೆದುಕೊಂಡು
ಅದರ ಮುಚ್ಚಳವನ್ನು ತೆರೆದು ಅದರಲ್ಲಿ ಹಣವಿರುವುದನ್ನು ನೋಡಿ ಆ ಭರಣಿಯನ್ನು
ಹಾಗೆಯೇ ತಂದು ಮನೆಯವರೆಲ್ಲರಿದಿರಿಗೂ ಸುರಿದುಬಿಟ್ಟರು.
ನನಗೆ ತಲೆ ತಿರುಗಿಹೋಯಿತು. ಮೈ ನಡಗಿಬಿಟ್ಟಿತು. ದಿಕ್ಕೇ ತೋಚದೆ
ಹೋದುದು. ಮನೆಯವರೆಲ್ಲರೂ ನನ್ನ ವಿಷಯದಲ್ಲಿ ಬಹು ತಿರಸ್ಕಾರಭಾವವನ್ನು
ಪ್ರದರ್ಶಿಸಲಾರಂಭಿಸಿದರು. ಆ ಹಣವನ್ನು ಸುರಿವುತ್ತಿದ್ದಾಗ ನಾನು ಅಳುತ್ತಾ ಬಂದು
"ಇದು ನಮ್ಮ ತಾಯಿಯು ಗುಟ್ಟಾಗಿ ನನ್ನ ವಶಕ್ಕೆ ಕೊಟ್ಟಿದ್ದ ಹಣವು, ಇದನ್ನು
ನಾನಾರಿಗೂ ತಿಳಿಸದಂತೆ ನನ್ನ ಬಳಿಯಲ್ಲಿಟ್ಟು ಕೊಂಡಿದ್ದೆನು. ಅದನ್ನು ನನಗೇ ಕೊಡಿಸ
ಬೇಕೆಂದು '' ಬಹು ದೈನ್ಯದಿಂದ ಬೇಡಿಕೊಂಡೆನು. ಆದರೆ ನನ್ನ ಮಾತನ್ನು ಆಗ ಕೇಳು
ವವರಾರು ? ನನ್ನಲ್ಲಿ ಹಣವಿದ್ದ ವಿಚಾರವು ಆರಿಗೂ ತಿಳಿದಿರಲಿಲ್ಲ. ನಾನು ಆರಿಗೂ
ತಿಳಿಸಿಯೂ ಇರಲಿಲ್ಲ. ನಮ್ಮ ಯಜಮಾನರು ನನ್ನ ವಶಕ್ಕೆ ಹಣವಾವುದನ್ನೂ ಕೊಡು
ತ್ತಿರಲಿಲ್ಲವಾದುದರಿಂದಲೂ, ನಮ್ಮ ತಾಯಿತಂದೆಗಳು ಬಹಳ ರಿಕ್ತದೆಶೆಯಲ್ಲಿರುವ
ರೆಂಬುದು ಎಲ್ಲರಿಗೂ ತಿಳಿದಿದ್ದುದರಿಂದಲೂ ನನ್ನಲ್ಲಿದ್ದ 55 ರೂಪಾಯಿಗಳೂ ಮತ್ತು
ಚಿಲ್ಲರೆ ದುಡ್ಡುಗಳೂ ಕಳುವಿನ ಮಾಲೆಂದೂ, ನಮ್ಮ ಭಾವನವರ ಪೆಟ್ಟಿಗೆಯಲ್ಲಿ
ಇಲ್ಲದೆಹೋದ ಹಣವು ಇದೇ ಸರಿಯೆಂದೂ, ನಾನೇ ಅವರ ಪೆಟ್ಟಿಗೆ ಬೀಗವನ್ನು ಕಳ್ಳ
ತನದಿಂದ ತರೆದು ಈ ಹಣವನ್ನು ಕದ್ದವಳೆಂದೂ ಮನೆಯವರೆಲ್ಲರೂ ನಿರ್ಧರಿಸಿದರು.
ಹೀಗೆ ನಿರ್ಧರಿಸುವುದಕ್ಕೆ ಯಾರಿಗಾದರೂ ಸ್ವಲ್ಪವಾದರೂ ಸಂದೇಹವಿರಲಿಲ್ಲ. ನಾನು,
ನಮ್ಮ ತಾಯಿಯ ಹಣವೆಂದು ಹೇಳುವುದು ಅನೃತವೂ, ಅಪಲಾಪವೂ, ಆದ ಸಂಗತಿ
ಯೆಂದು ಎಲ್ಲರೂ ತಿಳಿದು ಕೊಂಡರು.
ನಮ್ಮ ತಾಯಿಯು ನನ್ನಲ್ಲಿ ಇಷ್ಟು ಹಣವನ್ನು ಕೊಟ್ಟಿರುವ ವಿಷಯವನ್ನು ನಾನು
ನಮ್ಮ ಯಜಮಾನರಿಗೆ ಯಾವಾಗಲೂ ತಿಳಿಸಿರಲಿಲ್ಲ. ಮತ್ತು ಅವರು ಹಿಂದೆ
ಒಂದೆರಡುವೇಳೆ ಯಾವುದೋ ಒಂದೆರಡು ಸಮಯಗಳಲ್ಲಿ, “ ನಿನ್ನಲ್ಲಿ ಹಣವೇನಾ
ದರೂ ಇದ್ದರೆ ಹದಿನೈದು ರೂಪಾಯಿಗಳನ್ನು ಕೊಟ್ಟಿರು” ಎಂದು ಕೇಳಿದ್ದರು.
ಹೀಗೆ ಅವರು ಕೇಳಲು, ಹೆಣ್ಣು ಮಕ್ಕಳಿಗೆ ತಾಯಿತಂದೆಗಳು ಏನಾದರೂ ಕೊಂಚ
ದುಡ್ಡನ್ನು ಕೊಡುವ ಪದ್ಧತಿ ಲೋಕರೂಢಿಯಾದುದರಿಂದಲೂ ಮದುವೆ, ಆರತಿ,
ಓದಿಸುವುದು, ಮುಂತಾದ ಸಮಯಗಳಲ್ಲಿ ಹೆಣ್ಣು ಮಕ್ಕಳಿಗೆ ಬಂದ ರೂಪಾಯಿ
-------------------------------------------
ನನ್ನ ಸಂಸಾರ 33
ಗಳನ್ನು ಗಂಡನ ಮನೆಗೆ ಹೋಗುವಾಗ ಅವರ ವಶಕ್ಕೆ ಕೊಡುವ ರೂಢಿ ಇರುವುದ
ರಿಂದಲೂ ಈ ಊಹೆಯಿಂದ ನನ್ನನ್ನು ಯಜಮಾನರು ಹಣವನ್ನು ಕೇಳಿದರು. ಆ
ಸಮಯಗಳಲ್ಲಿ ನಾನು ನನ್ನಲ್ಲಿ ಹಣವೆಲ್ಲಿಂದ ಬರಬೇಕು ? ಎಂದು ಉತ್ತರವನ್ನು
ಹೇಳಿಬಿಟ್ಟೆನು. ಅವರು ಸುಮ್ಮನಾಗಿ ಬಿಟ್ಟಿದ್ದರು. ಹೀಗಿರುವಲ್ಲಿ ನನ್ನ ಪೆಟ್ಟಿಗೆಯಲ್ಲಿ
ಈಗ 66 ರೂಪಾಯಿಗಳಿರುವುದೂ ಮತ್ತು ಭಾವನವರ ಪೆಟ್ಟಿಗೆಯಲ್ಲಿ 60 ರೂಪಾಯಿ
ಗಳು ಮಾಯವಾಗಿರುವುದೂ ಪೆಟ್ಟಿಗೆಯನ್ನು ಶೋಧಿಸಬೇಕೆಂದು ಹೇಳಿದಾಗ ನಾನು
ಹಣದ ಭರಣಿಯನ್ನು ಮುಚ್ಚಿಟ್ಟು ಕೊಂಡು ಬರೀಪೆಟ್ಟಿಗೆಯನ್ನು ಕಳುಹಿಸಿದುದೂ,
ತದುತ್ತರಕ್ಷಣದಲ್ಲಿಯೇ ನನ್ನ ಹಣದ ಭರಣಿಯು ಈಚಿಗೆಬಂದು ಎಲ್ಲರಿದಿರಿಗೂ ಹಣವು
ಸುರಿಯಲ್ಪಟ್ಟು ದೂ, ಇತ್ಯಾದಿ ವಿಷಯಗಳು ನಾನು ಕದ್ದವಳೆಂದು ತೋರ್ಪಡಿಸಲು
ಸಾಕ್ಷೀಭೂತವಾಗಿದ್ದುವು. ಇಂತಹ ಮಹದಪರಾಧವು ನನ್ನಿಂದ ಮಾಡಲ್ಪಟ್ಟಿತೆಂದು
ತಿಳಿದಮೇಲೆ ನಮ್ಮ ಯಜಮಾನರ ಮನಸ್ಸಿನಲ್ಲಿ ಇಂತಹ ಭಾವವು ಉತ್ಪನ್ನವಾಗಿರ
ಬಹುದು ? ಅಲ್ಲದೆ ನಾನು ಅವರನ್ನು ಆಗಿಂದಾಗ್ಗೆ, ಒಡವೆ, ಸೀರೆಗಳಿಗಾಗಿ ಬಹುವಾಗಿ
ಪೀಡಿಸುತ್ತಿದ್ದುದನ್ನು ಅವರು ಸ್ಮರಿಸಿಕೊಂಡು, ಬಹು ತೆರನಾಗಿ ನಾನು ಹಣವನ್ನು
ಧಾರ್ಷ್ಟದಿಂದ ಕದ್ದಿರಬಹುದೆಂದೇ ನಿರ್ಧರಿಸಿ, ಇಂತಹ ಕುಲಗೇಡಿಯಾದ ಹೆಂಡತಿ
ಇದ್ದರೇನು ? ಸತ್ತರೇನು ? ಎಂದು ಮನಸಾ ಚಿಂತಿಸಿ, ಸಿಂಹವು ಘರ್ಜಿಸುವಂತೆ,
ಆಹ್ನಿಕಮಾಡುತ್ತಿದ್ದ ಸ್ಥಳದಿಂದೆದ್ದು ನನ್ನ ಬಳಿಗೆ ಬಂದು, ಥು ! ದುಷ್ಟಳೆ ; ನಮ್ಮ
ಕುಲಕ್ಕೂ ನಮ್ಮ ಮರ್ಯಾದೆಗೂ ನನಗೆ ಕಳಂಕವನ್ನು ತಂದೆಯಾ ! ನೀನು
ಈ ಕ್ಷಣ ನಾಶವಾಗಿ ಹೋಗು, ಎಂದು ಆರ್ಭಟಿಸಿ ತಮ್ಮ ವಾಮಪಾದದಿಂದ
ನನ್ನನ್ನು ಬಲವಾಗಿ ತಾಡನಮಾಡಿಬಿಟ್ಟರು. ನಾನು ಆಕ್ಷಣವೇಅಚೇತನಳಾಗಿ
ಬಿದ್ದು ಬಿಟ್ಟೆನು.
ನಾನು ಬಿದ್ದುದನ್ನು ನೋಡಿ ಮನೆಯವರೆಲ್ಲರೂ ಗಾಬರಿಯಾಗಿ ನನ್ನ ಹತ್ತಿರ
ಬಂದು ನನ್ನ ಸ್ಥಿತಿಯನ್ನು ನೋಡಿ ನನ್ನನ್ನು ಪಚರಿಸ ತೊಡಗಿದರು. ಮತ್ತು ನಮ್ಮ
ಯಜಮಾನರು ನನ್ನ ಬಳಿಗೆ ಬಂದು ಎಲ್ಲರನ್ನೂ ತಡೆದು ಪುನಃ ನನ್ನನ್ನು ಹೊಡೆದು ಇಹ
ಲೋಕಚ್ಚುತಳನ್ನಾಗಿ ಮಾಡಿಬಿಡಬೇಕೆಂದು ನಿರ್ಧರಿಸಿದರು. ಆದರೆ ಅವರಾಲೋಚನೆ
ಯನ್ನು ನಮ್ಮ ಮನೆಯವರು ಸಾಗಗೊಡಲಿಲ್ಲ. ಕೋಪದಲ್ಲಿ ಕುಯ್ದ ಮಗುಶಾಂತಿ
ಯಲ್ಲಿ ಹತ್ತೀತೇ ??” ಆದುದರಿಂದ ಈ ಹಣವನ್ನು ಅವಳ ತಾಯಿಯು ಇವಳ ವಶಕ್ಕೆ
ಕೊಟ್ಟಿದ್ದುದು ನಿಜವೇ ಎಂಬುದನ್ನು ತಿಳಿದಬಳಿಕ ನೀನು ಮುಂದಿನ ಕೆಲಸವನ್ನು ಮಾಡ
ಬಹುದೆಂದು ನಮ್ಮ ಯಜಮಾನರೊಡನೆ ಎಲ್ಲರೂ ಹೇಳಿದರು. ಇಷ್ಟಾದಮೇಲೆ ಅವರು
-----------------------------------------------
34 ಕಾದಂಬರಿ ಸಂಗ್ರಹ
ತಮ್ಮ ಕೆಲಸಕ್ಕೆ ಹೊರಟುಹೋದರು. ಆಗಲೇ ರಂಗಪುರಕ್ಕೆ ಪ್ರಯಾಣ ಮಾಡಿ ಈ ಹಣದ
ವಿಷಯವನ್ನು ನಿರ್ಧರಿಸಬೇಕೆಂದು ಅವರು ಆಲೋಚಿಸಿದರು. ಆಗ ಮಧ್ಯಾಹ್ನ ಒಂದು
ಗಂಟೆಯ ಹೊತ್ತಾಗಿದ್ದುದರಿಂದ ರಂಗಪುರಕ್ಕೆ ರೈಲು ಹೊರಟುಹೋಗಿದ್ದಿತು. ಇನ್ನು
ಸಾಯಂಕಾಲದ ರೈಲನ್ನೇ ಕಾಯಬೇಕಾಯಿತು. ನಮ್ಮ ಯಜಮಾನರು ಆದಿನ
ಮಧ್ಯಾಹ್ನ ಊಟವನ್ನು ಸರಿಯಾಗಿ ಮಾಡಲಿಲ್ಲ. ಅವರು ಏನೋಚಿಂತಿಸುತ್ತಾ ನಮ್ಮ
ಕಿರುಮನೆಯಲ್ಲಿ ಮಲಗಿಕೊಂಡಿದ್ದರು. ನಾನೂ ನನ್ನ ಕೆಲಸಕಾರ್ಯಗಳನ್ನು ಮಾಡಿ
ಕೊಂಡು ಸಹನೆಯಿಂದ ನನ್ನ ಸ್ವಾಮಿಯು ಮಲಗಿದ್ದ ಸ್ಥಳಕ್ಕೆ ಹೋಗಿ ಕುಳಿತೆನು. ಅಲ್ಲಿ
ಕುಳಿತೊಡನೆಯೇ ನನಗೆ ಬಹು ದುಃಖಬಂದಿತು. ತಡೆಯಲಾರದೆ ಘಟ್ಟಿಯಾಗಿ ಅತ್ತುಬಿ
ಟ್ಟೆನು. ನಮ್ಮ ಯಜಮಾನರು ಎದ್ದು ಏಕೆ ! ಹೊಡೆದುಕೊಳ್ಳುತ್ತಿರುವೆ ? ಇನ್ನೂ
ಸಾಯಲಿಲ್ಲವೆಂದು ಬಡಿದುಕೊಳ್ಳುವಿಯಾ ?” ಎಂದು ಕೇಳಿದರು. ನನಗಿನ್ನೂ ಹೆಚ್ಚಾಗಿ
ದುಃಖ ಬಂದಿತು. ತಡೆದುಕೊಂಡು ಸ್ವಾಮಿಯ ಪಾದಗಳಮೇಲೆ ಬಿದ್ದು ಇಂತು ಪ್ರಾರ್ಥಿ
ಸಿಕೊಂಡೆನು.
ಜೀವನಸರ್ವಸ !
ನಾನಿಂದು ಪಾದಸನ್ನಿಧಿಯಲ್ಲಿ ಮಹದಪರಾಧಮಾಡಿದವಳೆಂದು ನಿರ್ಧರ
ವಾಗಿರುವುದು ಸರಿಯಷ್ಟೆ ? ನಾನು ತಮ್ಮ ವಿಷಯದಲ್ಲಿ ಮಹತ್ತರವಾದೆರಡು ಅಪ
ರಾಧಗಳನ್ನು ಮಾಡಿರುವುದರಿಂದಲೇ ಈ ದಿನ ಇಂತಹ ಭಯಂಕರ ಚಿಂತೆಗೆ ಗುರಿಯಾಗ
ಬೇಕಾಗಿ ಬಂದಿತು. ನಮ್ಮ ತಾಯಿಯು ನನ್ನ ವಶಕ್ಕೆ, ನನ್ನನ್ನು ಇಲ್ಲಿ ಬಿಟ್ಟು
ಹೋಗುವ ಸಂದರ್ಭದಲ್ಲಿ ಐವತ್ತೈದು ರೂಪಾಯಿಗಳನ್ನು ಕೊಟ್ಟಿದ್ದರು. ಗೌರೀಹಬ್ಬದ
ಆರಿಶಿನ ಕುಂಕುಮಕ್ಕಾಗಿ ಕಳುಹಿಸಿದ್ದ ಎರಡು ರೂಪಾಯಿ, ನನ್ನ ಮದುವೆಯಲ್ಲಿ
ಆರತಿಗೆ ಹಾಕಿದ್ದ ರೂಪಾಯಿಗಳಲ್ಲಿ ನಾಲ್ಕು, ಅಲ್ಲಿ, ಇಲ್ಲಿ ಆರತಿಗಳಲ್ಲಿ ಲಭ್ಯವಾದ
ಕೆಲವು ಚಿಲ್ಲರೆಗಳು, ಇನ್ನೂ ಸೇರಿ ಐವತ್ತಾರೂ ಚಿಲ್ಲರೆ ರೂಪಾಯಿಗಳನ್ನು ನಾನು
ನನ್ನ ವಶದಲ್ಲಿಟ್ಟು ಕೊಂಡಿದ್ದೆನು. ನಮ್ಮ ತಾಯಿಯು ನನ್ನಲ್ಲಿ ಹಣವನ್ನು ಕೊಡು
ವಾಗ, ಈ ವಿಷಯವನ್ನು ನಿನ್ನ ಗಂಡನಿಗೂ ಸಹ ತಿಳಿಸಬೇಡ. ತಿಳಿಸಿಬಿಟ್ಟರೆ ನಿನ್ನ
ಬಳಿಯಿಂದ ತೆಗೆದುಕೊಂಡು ಏನಾದರೂ ಖರ್ಚುಮಾಡಿಬಿಡಬಹುದು. ಗಂಡಸರು
ಬಹು ತಾಪತ್ರಯದವರು ಎಂದು ಹೇಳಿ ರಹಸ್ಯವಾಗಿ ಕೊಟ್ಟರು. ನನಗೆ ಆಗ ಬಹು
ಸಂತೋಷವಾಗಿತ್ತು, ಹಣವನ್ನು ಇಟ್ಟು ಕೊಂಡಿರುವವರು ಬಹು ದೊಡ್ಡ ಮನುಷ್ಯ
ರೆಂದು ನನಗೆ ನಂಬಿಕೆಯಿದ್ದಿತು. ಆದುದರಿಂದ ಆ ಹಣವನ್ನು ನನ್ನಲ್ಲಿಟ್ಟುಕೊಂಡೆನು. ನಮ್ಮ
ತಾಯಿಯ ಪ್ರತಿಜ್ಞಾಪಾಲನಕ್ಕಾಗಿ ನಾನು ಈ ವಿಚಾರವನ್ನು ನಿಮ್ಮೊಡನೆ
---------------------------------------------
ನನ್ನ ಸಂಸಾರ 35
ಯಾವಾಗಲೂ ಹೇಳಲಿಲ್ಲ. ಹಾಗೆ ಹೇಳಿದ್ದರೆ ಈದಿನ ನನಗೆ ಇಂತಹ ಅವಸ್ಥೆಯೂ
ಉಂಟಾಗುತ್ತಿರಲಿಲ್ಲ. ಮತ್ತು ಮುಂದೆ ಇಂತಹ ಅನರ್ಥವುಂಟಾಗುವುದೆಂದು ನನಗೆ
ತಿಳಿದೂ ಇರಲಿಲ್ಲ. ಈ ಕಾರಣದಿಂದ ನಾನು ತಮ್ಮಲ್ಲಿ ದೊಡ್ಡ ಅಪರಾಧಮಾಡಿದಂತಾ
ಯಿತು. ಯಾವ ಹೆಂಗಸು ಪತಿಗೆ ವಂಚನೆಮಾಡಿ ಅವನ ಅಪ್ಪಣೆಯಿಲ್ಲದೆ, ಅವನಿಗೆ
ತಿಳಿಯದಂತೆ, ಇಂತಹ ಸ್ವಾತಂತ್ರವನ್ನು ವಹಿಸುವಳೋ ಅವಳಿಗೆ ಇದೇ ವಿಧವಾದ
ಗತಿಯಾಗುವುದೆಂಬುದಕ್ಕೆ ನಾನೇ ದೃಷ್ಟಾಂತಸ್ವರೂಪಳಾಗಿ ಪರಿಣಮಿಸಿದೆನು, ಮತ್ತು
ತಾಯಿತಂದೆಗಳು ಹೆಣ್ಣು ಮಕ್ಕಳಿಗೆ, ಪತಿಗೆ ಪರತಂತ್ರಳಾಗಿ ಅವನ ಆಜ್ಞಾಧೀನಳಾಗಿ
ಅನುವರ್ತಿಸಬೇಕೆಂದೂ ಅವನಿಗೆ ತಿಳಿಸದಂತೆ ಯಾವ ಕೆಲಸವನ್ನೂ ಮಾಡಬಾರದೆಂದೂ
ಆತನ ಮನಸ್ಸಿಗೆ ಅಹಿತವಾಗುವ ಕೆಲಸವನ್ನು ಮಾಡಬಾರದೆಂದೂ ವಸ್ತ್ರಾಭರಣಗಳ
ವಿಷಯದಲ್ಲಿ ಆತನನ್ನು ಬಲಾತ್ಕರಿಸಿ ಆತನ ಮನಸ್ಸಿಗೆ ಆಯಾಸವನ್ನುಂಟುಮಾಡಬಾರ
ದೆಂದೂ ಮುಂತಾದ ವಿಹಿತವಾದ ಸ್ತ್ರೀಧರ್ಮಗಳನ್ನು ಕಲಿಸುವುದನ್ನು ಬಿಟ್ಟು ತದ್ವಿಪ
ರೀತವಾದ ಧರ್ಮಗಳನ್ನು ಬೋಧಿಸಿದರೆ ಅಂತಹ ಮಾತಾಪಿತೃಗಳು, ಕುಲನಾಶಕ
ರೆಂದೂ, ಮಕ್ಕಳನ್ನು ಹಾಳುಮಾಡಿದವರೆಂದೂ, ಲೋಕಾಪವಾದ ಪಾತ್ರರೆಂದೂ,
ಹೇಳಿಕೊಳ್ಳುವರು. ನಮ್ಮ ತಾಯಿತಂದೆಗಳು ನನಗೆ ಸರಿಯಾದ ವಿವೇಕವನ್ನು ಹೇಳದೆ
ಇದ್ದುದೇ ನನ್ನ ದುರವಸ್ಥೆಗೆ ಕಾರಣ ಮತ್ತು ನಾನು ಅವರ ಬೋಧನಾರಹಿತಳಾಗಿ
ನಿಮ್ಮ ಬೋಧನೆಯನ್ನು ಗೌರವಿಸದೆ, ನಿಮ್ಮನ್ನು ಆಯಾಸಪಡಿಸುತ್ತಾ ಬಂದುದು,
ನಮ್ಮ ತಂದೆತಾಯಿಗಳ ತಪ್ಪಲ್ಲದೆ ನನ್ನ ತಪ್ಪಲ್ಲ. ನಾನಿಂದು ಪತಿದ್ರೋಹಿಯೆಂದೂ,
ವಂಚಕಳೆಂದೂ, ದುಷ್ಟಳೆಂದೂ, ತಸ್ಕರಿಯೆಂದೂ ಅಪವಾದವನ್ನು ಹೊರಬೇಕಾಗಿ
ಬಂದಿದೆ. ನಾನು ಇಂತಹ ಅಪವಾದವನ್ನು ಧರಿಸಿ ಜೀವಿಸಿದ್ದರೂ ಒಂದೇ, ಮೃತ
ಳಾದರೂ ಒಂದೇ ಆದರೆ ನಾನು ಮರಣಕ್ಕೆ ಹೆದರುವವಳಲ್ಲ. ಅಪವಾದಕ್ಕೆ ಹೆದರು
ವವಳು. ನಾನು ನಿರಪರಾಧಿನಿಯೆಂಬುದನ್ನು ಈಗ ನಾನು ಮಾತ್ರ ಬಲ್ಲೆ. ಆ ವಿಧ
ವಾದ ನಿರಪರಾಧಿತ್ವವು ನನಗೊಬ್ಬಳಿಗೆ ತಿಳಿದರೆ ಸಾಲದು. ನಾನು ನಿರಪರಾಧಿನಿ
ಯೆಂದು ಲೋಕಕ್ಕವಿದಿತವಾದರೆ ಆಗ ನಾನು ಜೀವಿಸಿದ್ದರೂ, ಅಥವಾ ಮೃತಳಾದರೂ
ಸಾರ್ಥಕ. ಆದುದರಿಂದ ನೀವು ಈ ವಿಷಯವನ್ನು ಪರ್ಯಾಲೋಚಿಸಬೇಕು. ಹೆಂಡತಿ
ಯೊಬ್ಬಳು ಅಪವಾದಗ್ರಸ್ತಳಾದರೆ ಅದು ಗಂಡನಿಗೂ ಖಂಡಿತವಾಗಿ ಸಂಬಂಧಿಸಿಯೇ
ಸಂಬಂಧಿಸುವುದು. ಅಂತಹ ಹೆಂಡತಿಯ ಮೂಲಕ ಗಂಡನಾದವನಿಗೆ ಇಹಲೋಕ
ದಲ್ಲಾಗಲೀ ಪರಲೋಕದಲ್ಲಾಗಲೀ ಶಾಂತಿಯಿಲ್ಲವು. ನಿಮ್ಮಿಂದ ನಾನು ಹತಳಾದರೆ
ನಾನು ಪುಣ್ಯವತಿಯೇ ಸರಿ, ಆದರೆ ಸಧ್ಯ ನಾನು ಮರಣವನ್ನು ಬಯಸುತ್ತಿಲ್ಲ,
----------------------------------------------
36 ಕಾದಂಬರಿ ಸಂಗ್ರಹ
ನನ್ನ ತಾಯಿಯ ಹಣವು ಹೋದರೂ ಚಿಂತೆಯಿಲ್ಲ. ನೀವು ಒಮ್ಮೆ ರಂಗಪುರಕ್ಕೆ
ಹೋಗಿ ಈ ವಿಷಯವನ್ನು ನಮ್ಮ ತಾಯಿಯ ಸಂಗಡ ವಿಚಾರಿಸಿರಿ. ನಮ್ಮ ತಾಯಿಯು
ಇದರೊಡನೆ ಒಂದು ಕಂಠಾಭರಣವನ್ನು ಗುಪ್ತವಾಗಿ ಕೊಟ್ಟರು. ಬಳಿಕ ಅವರು
" ನಾನು ಹಣವನ್ನಾಗಲೀ ಒಡವೆಯನ್ನಾಗಲೀ ಕೊಟ್ಟವಳಲ್ಲವೆಂದು ಹೇಳಿದರೆ
ನನ್ನನ್ನು ತಾವು ಬೇಕಾದಹಾಗೆ ಶಿಕ್ಷಿಸಬಹುದು. ನೀವು ರಂಗಪುರಕ್ಕೆ ಹೋಗಿ ನಮ್ಮ
ತಾಯಿಯವರನ್ನು ಕುರಿತು ಈ ವಿಷಯವನ್ನು ಹೇಗೆ ಕೇಳಬೇಕೋ ಹಾಗೆ ಪ್ರಶ್ನೆ ಮಾಡಿ
ನಿಮ್ಮ ನಂಬಿಕೆಯನ್ನು ಸ್ಥಿರಮಾಡಿಕೊಳ್ಳಿರಿ, ಇದರಲ್ಲಿ 56 ರೂಪಾಯಿಗಳು ಮಾತ್ರ
ನಮ್ಮ ತಾಯಿಯದು. ಮುಖ್ಯವಾಗಿ ನಾನು ಇದುವರೆಗೂ ಪಾದಸನ್ನಿಧಿಯಲ್ಲಿ
ಮಾಡಿದ ಪಾಪಕ್ಕೆ ತಕ್ಕ ಪ್ರಾಯಶ್ಚಿತ್ತವನ್ನು ನಿಮ್ಮ ಉತ್ತರ ಬಂದಮೇಲೆ ಮಾಡಿ
ಕೊಳ್ಳುವೆನು ಎಂದು ವಿಧವಿಧವಾಗಿ ಪ್ರಾರ್ಥಿಸಿಕೊಂಡೆನು.
ನಾನೆಷ್ಟು ವಿಧವಾಗಿ ಬೇಡಿಕೊಳ್ಳುತ್ತಿದ್ದರೂ ಯಜಮಾನರಿಗೆ ಆದಿನವೆಲ್ಲಾ
ಸ್ವಲ್ಪವೂ ಮನಶ್ಯಾಂತಿಯಿಲ್ಲದೆ ಹೋಯಿತು. ನನ್ನನ್ನು ಆದಿನ ಅವರು ಪದೇಪದೇ
ಬೆತ್ತಗಳಿಂದ ಹೊಡೆಯುತ್ತಲೂ ತಿರಸ್ಕಾರ ಪೂರ್ವಕವಾದ ಬೈಗಳನ್ನು ಬೈಯುತ್ತಲೂ
ನನ್ನ ಮುಖವನ್ನು ನೋಡಿ ಹಣಹಣೆ ಚಚ್ಚಿಕೊಳ್ಳುತ್ತಲೂ ಇದ್ದರು. ರಾತ್ರಿ ಒಂಭ
ತ್ತುಗಂಟೆಯಾಯಿತು. ಎಲೆಯ ಮುಂದೆ ಕುಳಿತು ಯಜಮಾನರು ತುತ್ತನ್ನೆತ್ತಿದರು.
ಒಂದೆರಡು ತುತ್ತನ್ನು ತಿನ್ನುವುದರೊಳಗಾಗಿ ನಾನು ಅವರ ಮುಂದೆ ಹೋದೆನು.
ಅಯ್ಯೋ ! ತಿಳಿಗೇಡಿಯೇ, ನನ್ನನ್ನು ಹಾಳುಮಾಡಿದೆಯಾ, ನನ್ನ ಸುಖಕ್ಕೆ ಮುಳ್ಳನ್ನೇ
ತಂದೊಡ್ಡಿದೆಯಾ ! ಎಂದು ಹೇಳಿ ಎಲೆಯನ್ನು ಬಿಟ್ಟಿದ್ದು ಕೈತೊಳೆದುಕೊಂಡು ಮನೆ
ಯವರಾರಿಗೂ ಹೇಳದೆ ಮನೆಯನ್ನು ಬಿಟ್ಟು ಎಲ್ಲಿಗೋ ಹೊರಟುಹೋದರು.
ನನಗೂ ಆದಿನ ಅನ್ನವೇ ಸೇರಲಿಲ್ಲ. ರಾತ್ರಿ ನಿದ್ದೆಯೂ ಬರಲಿಲ್ಲ. ಪತಿಗೆ
ವಂಚನೆಮಾಡಿ ಅವರಿಗೆ ತಿಳಿಸದೆ ಹಣವನ್ನಿಟ್ಟುಕೊಂಡಿದ್ದುದು ಇಷ್ಟು ಅನರ್ಥಕ್ಕೆ
ಗುರಿಯಾಯಿತೆ ! ಈ ಹಾಳುಹಣದಿಂದ ಇಂತಹ ಭಯಂಕರ ಸಂಘಟನೆಯು ಸಂಭವಿ
ಸಿತೇ ಎಂದು ಹೇಳುತ್ತಾ ಹಣವನ್ನು ಕುರಿತು ಇಂತು ವಿವರಿಸತೊಡಗಿದೆನು, ಎಲೆ
ಹಣವೆ! ನೀನೇ ಮನುಷ್ಯನ ಜೀವಿತಸಾರವೆಂದು ಹೇಳುವ ಪಕ್ಷದಲ್ಲಿ ನಿನಗೆ ಇಹಪರ
ಸೌಖ್ಯವನ್ನುಂಟುಮಾಡುವ ಶಕ್ತಿ ಇರಬೇಕು. ನಿನ್ನ ಅನುಗ್ರಹವಿಲ್ಲದಿದ್ದರೆ ಮನುಷ್ಯನ
ಜನ್ಮವೇವ್ಯರ್ಥ, ಇಹಲೋಕದಲ್ಲಿ ಸುಖವನ್ನು ಪಡೆಯಬೇಕಾದರೆ ನೀನೇ ಸಹಾಯ
ಮಾಡಬೇಕು. ಪರೋಪಕಾರ, ದಾನ, ಧರ್ಮಗಳ ಮೂಲಕ ಪರಲೋಕವನ್ನು
ಹೊಂದುವುದಕ್ಕೂ ನಿನ್ನ ಸಾನ್ನಿಧ್ಯವು ಇರಬೇಕು. ಆದರೆ ನಿನ್ನಿಂದ ಎಷ್ಟು ಪ್ರಯೋಜ
-----------------------------------------------
ನನ್ನ ಸಂಸಾರ 37
ನಗಳಿರುವುವೋ ಅಷ್ಟು ಕೆಡಕುಗಳೂ ಇರುವವು. ಇದು ದೈವೇಚ್ಛೆಗೆ ಅಧೀನವಾದುದು.
ಹೇಗೆಂದರೆ ಪ್ರಜೆಗಳನ್ನು ಪರಿಪಾಲಿಸುವ ಸರಕಾರವು ಲೋಕಕ್ಕೆ ಎಷ್ಟು ಹಿತವನ್ನಾಚ
ರಿಸುವುದೇ ದುಷ್ಟರ ವಿಷಯದಲ್ಲೂ ಅದು ಅಷ್ಟು ಕಾಲಿನ್ಯವನ್ನು ತೋರಿಸಲೇಬೇಕ
ಲ್ಲವೆ? ಜಗತ್ತಿಗೆಲ್ಲಾ ಪರಮ ಪ್ರಯೋಜನವಾಗುವಂತೆ ವರ್ತಿಸುವ ಮಳೆಯಲ್ಲಿ,
ಸಿಡಿಲು, ಮಿಂಚು, ಗುಡುಗು, ಮುಂತಾದುವುಗಳು ಭಯಂಕರಗಳಾಗಿವೆ. ಆರೋಗ್ಯ
ದಾಯಕನಾದ ಸೂರ್ಯನೇ ತನ್ನ ತಾಪದಿಂದ ಲೋಕವನ್ನೆಲ್ಲಾ ಪರಿತಪಿಸುವಂತೆ
ಮಾಡುವನು. ಇದರಂತೆ ಹಣವು ನಮ್ಮ ಅನೇಕ ಕಾರ್ಯಗಳಿಗೆ ಫಲಕಾರಿಯಾಗಿ
ಪರಿಣಮಿಸಿದರೂ ಮನುಷ್ಯನನ್ನು ನಾನಾವಿಧಗಳಾದ ಕಷ್ಟಗಳಿಗೆ ಗುರಿಮಾಡುವುದರಲ್ಲಿ
ಆವ ಸಂದೇಹವೂ ಇಲ್ಲವೆಂಬುದನ್ನು ಯಾವಾಗಲೂ ಮರೆಯಲಾಗದು. ಪದಾರ್ಥಗ
ಳರುಚಿಗಿಂತಲೂ ಧನರುಚಿಯು ಮಾನವರಿಗೆ ಬಲು ಇಂಪಾಗಿರುವುದು, ಒಬ್ಬನಲ್ಲಿ
8-10 ರೂಪಾಯಿಗಳಿದ್ದರೆ ಅದು ಮುಗಿವ ವರೆಗೂ ಅವನು ಎಷ್ಟೊರಾಜಭೋಗ
ಗಳನ್ನ ಪೇಕ್ಷಿಸ ಬಹುದು. ತನ್ನ ಸೇವೆಗೆ ಒಬ್ಬನನ್ನು ನೇಮಿಸ ಬಹುದು. ಒಬ್ಬ
ಉಪಾಧ್ಯಾಯನನ್ನು ' ಪಾಠಹೇಳುವುದಕ್ಕೆ ಇಟ್ಟು ಕೊಳ್ಳಬಹುದು. ರುಚಿರುಚಿಯಾದ
ಆಹಾರವನ್ನು ಬಯಸಬಹುದು. ಅಲ್ಪಧನದಿಂದಲೇ ಇಂತಹ ರಾಜಸುಖವನ್ನು ಪ್ರೇರಿ
ರಿಸುವ ಧನವು ಹೆಚ್ಚು ಹೆಚ್ಚಾಗಿ ಬೆಳೆದಷ್ಟೂ ಎಷ್ಟೋ ಭಾವನೆಗಳನ್ನೂ ದುರಾಶೆಗೆ
ಇನ್ನೂ ಮನಸ್ಸಿನಲ್ಲಿ ಉತ್ಪತ್ತಿ ಮಾಡಬಹುದಲ್ಲವೆ! ಹಣದೊಡನೆ ಗುಣವೂ ಬೆಳೆದರೆ
ಅದರಿಂದ ನಮಗೆ ಸುಖಉಂಟಾಗುವುದು. ಈಗ ವಿಚಾರಮಾಡಿದರೆ ಐಶ್ವರ್ಯವಂತರು
ಬಹಳ ಕಡಮೆಯಾಗಿಯೂ ಬಡವರು ಹೆಚ್ಚಾಗಿಯೂ ಇರುವಂತೆ ತೋರುವದು.
ಅನೇಕ ಧನಿಕರು ಬಡವರನ್ನು ತಿರಸ್ಕರಿಸುತ್ತಾ, ಮರಳಿಮರಳಿ ದ್ರವ್ಯ ಸಂಗ್ರಹದಲ್ಲೇ
ಅಭಿಲಾಷೆಯುಳ್ಳವರಾಗಿ, ತುಂಬಾ ಅನ್ಯಾಯವನ್ನು ಮಾಡುತ್ತಿರುವರು. ಬಡವರು
ಜೀವನಕ್ಕೆ ಯತ್ನವಿಲ್ಲದೆ ಧನಸಂಪಾದನೆಗಾಗಿ ನ್ಯಾಯವನ್ನುಲ್ಲಂಘಿಸಬೇಕಾಗಿದೆ.
ಅಂತೂ ಇಂತೂ ಈ ಹಣದ ಮಹಿಮೆಯಿಂದ ಪ್ರಪಂಚದಲ್ಲಿ ನ್ಯಾಯ ಪ್ರಚಾರಕ್ಕೆ
ಅವಕಾಶವು ಕಮ್ಮಿಯಾಗುತ್ತ ಬಂದಿದೆ.
ದ್ರವ್ಯದೇವಿಯ ಅನುಗ್ರಹವನ್ನು ಸಂಪಾದಿಸುವುದಕ್ಕಾಗಿ ಬಹು ಜನರು ಮಹಾ
ಲಕ್ಷ್ಮಿ ವ್ರತವನ್ನು ಕಯ್ಗೊಂಡು ಆಕೆಯನ್ನು ವಿಧ ವಿಧವಾಗಿ ಅರ್ಚಿಸಿ ಅನೇಕ ವಿಧ
ವಾಗಿ ಸ್ತೋತ್ರ ಮಾಡುವರು. ಅಂತಹ ಸ್ತೋತ್ರಜಾಲದಮೂಲಕ ಧನದೇವತೆಯನ್ನು
ಪ್ರಸನ್ನಗೊಳಿಸುವ ಕವಿತಾ ಪ್ರೌಢಿಮೆಯು ನನ್ನಲ್ಲಿಲ್ಲ. ಆದುದರಿಂದ ನಮಗೆ ಹೊಗ
ಳುವ ಭಟರೆಂಬ ಹೆಸರು ಬರಲಾರದು. ಆದರೆ ಆ ಧನಲಕ್ಷ್ಮಿಯು ನಮ್ಮನ್ನು ಅನುಗ್ರಹ
----------------------------------------------
38 ಕಾದಂಬರಿ ಸಂಗ್ರಹ
ಮಾಡದಿದ್ದರೂ ನಮ್ಮ ಮೇಲೆ ಕೋಪಿಸಿಕೊಳ್ಳದಿರಲೆಂದು ಭಾವಿಸಿ ಸ್ತೋತ್ರ ಪಾಠಾ
ಭ್ಯಾಸ ಮಾಡಲುಪಕ್ರಮಿಸಿರುವೆವು.
"ಎಲೌ, ಮಾನುಷ ಫಲವರ್ಧಿನಿ ! ನಿನಗೆ ಬೇಗ ಬೇಗ ನಮಸ್ಕರಿಸುವವು. ಅದ
ರಿಂದಲೇ ನಿನು ತಡೆಯಿಲ್ಲದೆ ನಮ್ಮ ಬೊಕ್ಕಸದಲ್ಲಿ ಕುಣಿದಾಡು, ದಡ್ಡನಿಗೂ ದೊಡ್ಡ
ದಾದ ಫಲವನ್ನು ಕೊಡುವ ದುಡ್ಡು ದೇವರೇ! ನಿನಗಿಂತಲೂ ದೊಡ್ಡದಾದ ದೇವರಿಲ್ಲವೇ
ಇಲ್ಲ ! ಹೇ ಸರ್ವತೋಮುಖಿ ! ಸರಕಾರದ ಕೆಲಸಕ್ಕೆ ಸೇರಿದರೂ ಭೂಮಿಯ ವ್ಯವ
ಸಾಯವನ್ನು ಮಾಡುತ್ತಿದ್ದರೂ ಕೈಗಾರಿಕೆಯನ್ನು ಕೈಗೊಂಡರೂ ವ್ಯಾಪಾರ ಮಾಡ
ಲಾರಂಭಿಸಿದರೂ ಎಲ್ಲಾ ಕಡೆಯಲ್ಲೂ ನೀನು ಮುಖವನ್ನು ತೋರಿಸಿದ ಹೊರತು ನಿರ್ವಾ
ಹವೇ ಇಲ್ಲ. ಎಲೌ ಧನದೇವತೆಯೇ ! ನಿನ್ನನ್ನು ಅಂಧಕಾರಾವೃತರಾಗಿಯೇ ಪೂಜಿಸು
ವೆವು, ಏಕೆಂದರೆ ಎಚ್ಚರದಿಂದ ನಮ್ಮ ಹಣವು ಸದ್ವಿನಿಯೋಗದಲ್ಲಿ ನಿಂತರೆ ನಾವು ರಿಕ್ತ
ಹಸ್ತರಾಗಿ ಜನರ ಅವಹೇಳನಕ್ಕೆ ಗುರಿಯಾಗುವವು. ಹೇ ತಿರಸ್ಕಾರ ವಿಮುಖಿ ! ನಿನ್ನನ್ನು
ತಿರಸ್ಕರಿಸಿದುದರಿಂದಲೇ ಬಲಿ-ಹರಿಶ್ಚಂದ್ರ-ಕರ್ಣ-ಧರ್ಮಾದಿಗಳು ತಾವೇ ನಷ್ಟ ಪಟ್ಟರು.
ಹೇ ? ಉಲ್ಲಾಸಿನೀ, " ಷರಟಿನ ” ಜೇಬಿನಲ್ಲಿ ಎರಡು ರೂಪಾಯಿಗಳು ಇದ್ದ ಮಾತ್ರ
ದಿಂದಲೇ ಅಲ್ಲಾಡಿಸುವ ಉಲ್ಲಾಸವನ್ನು ಕೊಡುವ ಶಕ್ತಿಯು ನಿನ್ನದೇ ಆಗಿರುವುದು.
ಹೇ ! ಮಂದಗಾಮಿನಿ ! ಅತ್ಯಾಶೆಯಿಂದ ನಿನ್ನನ್ಯಾಶಿಸುವವರ ಬಳಿಗೆ ಬರಲು ನೀನೇಕೆ
ಮಂದಳಾದೆ? ಹೇ ಶೀಘ್ರಗಾಮಿನಿ !! ಒಬ್ಬರ ಬಳಿಯಿಂದ ಮತ್ತೊಬ್ಬರ ಬಳಿಗೆ
ಅನ್ಯಾಯದಿಂದ, ವಿವೇಚನೆಯಿಲ್ಲದೆ ಹೋಗಿ ಸೇರಲು ನಿನ್ನ ನಡಿಗೆಯು ಎಷ್ಟು ಚುರು
ಕಾಗಿರುವುದು. ಎಲೌ ಸರ್ವವ್ಯಾಪಿನಿಯೇ ! ಭೂಮಿಯಮೇಲೆ ಧನಾದಿರೂಪದಿಂದಲೂ
ಒಳಗಡೆ ಲೋಹಾದಿರೂಪದಿಂದಲೂ ಹರಡಿರುವ ನಿನ್ನ ವ್ಯಾಪಕತೆಯು ಸರ್ವೋತ್ಕೃಷ್ಟ
ವಾಗಿರುವುದು. ಈ ಅಜ್ಞಾನತಿಮಿರಬಹುಳಪಕ್ಷೆಯೆ ! ಅವಿವೇಕಿಯಾದ ಧನಿಕನಲ್ಲಿ
ಎಂತಹ ಅಂಧಕಾರವನ್ನು ಅನುಗ್ರಹಿಸುವೆ ? ಹೇ ಸರ್ವಸಮದೃಷ್ಟಿಯುಳ್ಳವಳೆ !
ಹಾಲುಮಾರುವವಳಲ್ಲಿಯೂ ಹೆಂಡಮಾರುವವನಲ್ಲಿಯೂ ನೀನು ಎಂತಹ ಸರ್ವಸಮತ್ವ
ವನ್ನು ವ್ಯಕ್ತಗೊಳಿಸುತ್ತಿರುವೆಯೆಂಬುದು ಪರಮಾಶ್ಚರ್ಯಕರವಾಗಿರುವುದು, ಹೇ! ದಾರಿ
ದ್ರಾಂಬುಧಿತರಣೆ ! ಭವರೋಗಭಿಷಜೆ ! ಪ್ರಾಣದಾಯಿನಿ !! ಪ್ರಾಣಾಪಹಾರಿಣಿ !!
ಪ್ರತಿಷ್ಠಾ ಪ್ರದಾಯಿನಿ !! ಮಹಾಪರಾಧಗೋಪನೆ!! ಪೌರುಷಪ್ರಕಾಶೆ !! ಜನ ವಶೀಕರೆ!!
ಮಿಥ್ಯಾ ಸ್ತುತಿ: ಫಲಪ್ರದಾಯಿನಿ !! ಅಜ್ಞಾನಾಂಧಕಾರ ಕೂಪಪತನ ಸಾಹಾಯೈ!!
ಸೈತರ ದೈವಜ್ಞಾನವಿನಾಶಿನೀ !! ಅನ್ಯಾಯಾರ್ಜಿತಜನಪಕ್ಷಪಾತೆ !! ಜಯ! ವಿಜಯ!!
ನಿನ್ನ ಅದ್ಭುತ ಮಹಿಮೆಯನ್ನಾರು ವರ್ಣಿಸಲಾಪರು. ಹೇ ನ್ಯಾಯೋಲ್ಲಂಘನ ಶಿಕ್ಷಣ
-----------------------------------------------
ನನ್ನ ಸಂಸಾರ 39
ವಿಪಕ್ಷಣ ಚತುರೆ !! ವಿವೇಚನಾವಿರಹಿತಜನ ಗೌರವಪ್ರದಾಯಿನಿ !! ಕೊಲೆಗಾರರು
ನಿಷ್ಕಲ್ಮಷರಾಗುವುದು ನಿನ್ನಿಂದಲೇ ! ಬಡವರು ಹಣವನ್ನು ಇಟ್ಟು ಕೊಂಡಿದ್ದರೆ ಕಳ್ಳ
ರೆಂದು ಸಮರ್ಥಮಾಡುವ ವಿವೇಕವು ನಿನ್ನ ಮಹಿಮೆಯೇ ! ರಾಜಚರಿತೆಗಳು ಮಿಥ್ಯಾ
ಸ್ತುತಿಯಿಂದ ತುಂಬುವುದು ನಿನ್ನಿಂದಲೇ ! ಒಬ್ಬನು ಮತ್ತೊಬ್ಬನಿಗೆ ಪರಲೋಕಯಾತ್ರೆ
ಯನ್ನು ಮಾಡಿಸುವುದು ನಿನ್ನಿಂದಲೇ ! ಸುಳ್ಳಾದ ಸಾಕ್ಷ್ಯಗಳಿಗೆ ನಿಜ ಸ್ಥಾಪನೆ
ಯಾಗುವುದೂ ನಿನ್ನಿಂದಲೇ ! ಅಣ್ಣ ತಮ್ಮಂದಿರನ್ನೂ ಹೆಂಡತಿಮಕ್ಕಳನ್ನೂ ಮಾತಾ
ಪಿತೃಗಳನ್ನೂ ತೊರೆಸಿಬಿಡುವ ಮಹಿಮೆಯೂ ನಿನ್ನದೇ ! ಓರಗಿತ್ತಿಯರನ್ನು ಓಡಿಸಿಬಿಡು
ವವನೂ ನೀನೇ! ಲಂಚ ಮುಂತಾದವುಗಳ ರೂಪದಿಂದ ಎಷ್ಟೋ ಜನರ ಮನೆಯನ್ನು
ಹಾಳುಮಾಡಿದಾಗ್ಯೂ ಕೆಲವರಿಗಾದರೂ ಉಪಕಾರಮಾಡುತ್ತಿರುವ ನಿನ್ನ ಕಾರುಣ್ಯವು
ಅನ್ಯಾದೃಶವಾದುದು. ದಿಟವನ್ನು ಸಟೆಯನ್ನಾಗಿಯೂ ಸಟೆಯನ್ನು ದಿಟವನ್ನಾಗಿಯೂ
ಕನಿಷ್ಕನನ್ನು ಜ್ಯೇಷ್ಠನನ್ನಾಗಿಯೂ, ಜ್ಯೇಷ್ಠನನ್ನು ಕನಿಷ್ಟನನ್ನಾಗಿದ್ದು ಉತ್ತಮ
ಜಾತಿಯನ್ನು ನೀಚಜಾತಿಯನ್ನಾಗಿಯೂ ನೀಚಜಾತಿಯನ್ನು ಉತ್ತಮಜಾತಿಯ
ನ್ನಾಗಿಯ ಮಾಡುವ ನಿನ್ನ ಶಕ್ತಿಯು ಅನ್ಯಾದೃಶವಾದುದು. ಈ ಅಮೃತಕವಚ
ಶೋಭಿತಪಿಪಾಶಯೆ ! ಮಲಿನೀಕೃತ ಮಹಾಶಯೆ ! ಜಡೀಕೃತದೃಡಾಶಯೆ! ಅಧರೀಕೃತ
ಬುಧಾಶಯ ! ನಿಷ್ಪಂದೀಕೃತ ಭಾವಾಶಯೆ ! ತೃಣೀಕೃತ ಗುಣಾಶಯ ! ಯಾವ
ಉತ್ತಮ ಗುಣವಂತನನ್ನು ನೀನು ಮಲಿನನನ್ನಾಗಿ ಮಾಡಲಿಲ್ಲ ? ಯಾವ ಸತಿಯ
ಸತೀತ್ವವನ್ನು ಅವಮಾನಗೊಳಿಸಲಿಲ್ಲ? ನಿಶ್ಚಯಮನಸ್ಕಳಾದ ಯಾವ ಸತ್ಯವತಿಯನ್ನು
ಕಳ್ಳಳನ್ನಾಗಿ ಮಾಡಲು ಪ್ರಯತ್ನಿಸಲಿಲ್ಲ? ಯಾವ ಯಾವ ಅನ್ಯಾಯಗಳು ಬೇಕಾ
ದರೂ ಎಲ್ಲವುಗಳಿಗೂ ಸಹಾಯಮಾಡಲು ಬದ್ದ ಕಂಕಣಳಾದ ನಿನ್ನ ವಿಶುದ್ದ ಮಂತ್ರಿತ್ವ
ವನ್ನು ಎಷ್ಟೆಂದು ಹೊಗಳಲಾಗುವುದು. ಅಲ್ಪಜ್ಞಳಾದ ನನಗೆ ನಿನ್ನನ್ನಂತು ಹೊಗಳ
ಬೇಕೋ ಅದು ತಿಳಿಯದು, ಇಷ್ಟವಿದ್ದರೆ ಮೇಲಣ ಸ್ತುತಿಯನ್ನು ಸ್ವೀಕರಿಸು. ಇಲ್ಲ
ವಾದರೆ ಪಾಠಕರ ಪತನಕ್ಕೇ ಬಿಟ್ಟು ಬಿಡು. ನಿನ್ನಿಂದಲೇ ಎಲ್ಲವೂ ಆಗಬಹುದೆಂಬ
ಭಾವನೆಯಿದ್ದರೂ ಇತರ ಸಹಾಯವಿಲ್ಲದ ನಿನ್ನ ನುಗ್ರಹವು ಪ್ರಯೋಜನವಿಲ್ಲವೆಂಬ
ಭಾವನೆಯಿಂದ ನಿನ್ನ ಸ್ತುತಿಯನ್ನು ಇಷ್ಟಕ್ಕೇ ಸಾಕುಮಾಡಿರುವೆನು.
(ವಿವೇಕಮಂಜರಿ.)
ಹೀಗೆ ಹಣವನ್ನು ಹೊಗಳುತ್ತಿರುವಾಗಲೇ ನನಗೆ ನಿದ್ದೆ ಬಂದುಬಿಟ್ಟಿತು. ನಿದ್ದೆ
ಯೂ ಚೆನ್ನಾಗಿ ಬಂದಿತು. ಲೋಕದಲ್ಲಿ, ಹೊಸದಾಗಿ ಏನಾದರೊಂದು ಕೆಟ್ಟ ಕೆಲಸ
ಮಾಡಿದವರಿಗೂ, ಅವಮಾನವಾದವನಿಗೂ, ದುಃಖಪ್ರಾಪ್ತಿಯಾದವನಿಗೂ, ಪ್ರಯತ್ನ
----------------------------------------------
40 ಕಾದಂಬರಿ ಸಂಗ್ರಹ
ವಿಲ್ಲದೆ ಅತ್ಯಂತ ಸಂತೋಷವೊದಗಿದವನಿಗೂ, ವಾಂಛಿತಫಲವು ಕೈಗೂಡುವದು ಸ್ವಲ್ಪ
ದಿವಸವಿದೆ ಎಂದು ಯೋಚಿಸುವವನಿಗೂ, ಮದುವೆ, ನಿಷೇಕ, ಪರೀಕ್ಷಾ ಫಲಿತಾಂಶ,
ಸೆರೆಮನೆಯ ಬಿಡುಗಡೆ, ಮುಂತಾದವು ಹತ್ತಿರದಲ್ಲಿದ್ದವನಿಗೂ, ರೋಗಿಗೂ, ನಿದ್ದೆಯು
ಹತ್ತುವುದಿಲ್ಲ. ನನಗೆ ಯಾವ ಯೋಚನೆಯೂ ಇಲ್ಲದ್ದರಿಂದ ನಿದ್ದೆಯು ಚೆನ್ನಾಗಿ
ಹತ್ತಿತು. ನಿದ್ದೆ ಹತ್ತಿದಾಗ ನಿದ್ದೆಯ ಮಧ್ಯದಲ್ಲಿ ಹಗಲು ನಡದ ಹಣದ ವಿಚಾರ
ಗಳು ಕನಸಿನರೂಪವಾಗಿ ಭಾಸಿಸುತ್ತಿದ್ದುವು.
VIII
ಬೆಳಗಾಯಿತು. “ಉದ್ಯೋಗಿಗಳು ತಮ್ಮ ತಮ್ಮ ಕಾರ್ಯಗಳಲ್ಲಿ ನಿರತರಾದರು.
ನಮ್ಮ ಅಮ್ಮನವರೂ, ನಮ್ಮ ತಾತನೂ ಅದೇದಿನ ಆವಶ್ಯಕವಾದ ಕೆಲವು ಗೃಹಕೃ
ತ್ಯಗಳಿಗಾಗಿ ಹರಪುರಕ್ಕೆ ಪ್ರಯಾಣಮಾಡಿದರು. ಆದಿನ ಮನೆಯಲ್ಲಿ ನಾನೂ, ಅಕ್ಕ,
ಭಾವ ಇಷ್ಟು ಮಂದಿಮಾತ್ರವೇ ಇದ್ದೆವು. ನನ್ನನ್ನು ಆದಿನ ಯಾರೂ ಮಾತನಾಡಿಸ
ಲಿಲ್ಲ. ಮಧ್ಯಾಹ್ನವಾಯಿತು, ಎಲ್ಲರಿಗೂ ಊಟವಾಯಿತು. ನಾನೂ ಹೇಗೋ ಊಟ
ಮಾಡಿದೆನು. ಮದ್ಯಾಹ್ನ ಮೂರುಗಂಟೆಯ ಸಮಯದಲ್ಲಿ ಅಂಚೆಯ ಜವಾನನು
ಬಂದು ನನ್ನ ಹೆಸರಿಗೊಂದು, ನಮ್ಮ ಭಾವನವರ ಹೆಸರಿಗೊಂದು ಈ ರೀತಿ ಎರಡು
ಕವರುಗಳನ್ನು ಕೊಟ್ಟು ಹೊರಟುಹೋದನು. ಅವೆರಡು ತಂತಿಯ ಮೂಲಕ ಬಂದ
ಕವರುಗಳಾಗಿದ್ದುವು. ಟಪಾಲಿನ ಮುದ್ರೆಯು ಇರಲಿಲ್ಲ. ಒಡೆದು ನೋಡಲು ರಂಗ
ಪುರದಿಂದ ನಮ್ಮ ಯಜಮಾನರಕಡೆಯಿಂದ ಬಂದ ತಂತೀವರ್ತಮಾನವೆಂದು ತಿಳಿದು
ಬಂದಿತು. ಅವೆರಡಕ್ಕೂ ಏನು ವಿಚಾರವಿರುವುದೆಂಬುದನ್ನು ತಿಳಿಯಲು ನಮ್ಮ ಪಾಠ
ಕರು ಕುತೂಹಲಿಗಳಾಗಿರುವುದರಿಂದ ಅದನ್ನು ಒಂದೊಂದಾಗಿ ಈ ಕೆಳಗೆ ಬರೆ
ಯುವೆನು.
ನಮ್ಮ ಭಾವನವರಿಗೆ ಬಂದವರ್ತಮಾನ.
ನಾನು ನಿನ್ನೆ ರಾತ್ರಿ ಇಲ್ಲಿಗೆ ಬಂದು ಸ್ನೇಹಿತರೊಬ್ಬರ ಮನೆಯಲ್ಲಿ ಮಲಗಿದ್ದೆನು.
ಬೆಳಗಾದಮೇಲೂ ನಮ್ಮ ಮಾವನವರ ಮನೆಗೆ ಹೋಗಲಿಲ್ಲ. ಅವರ ಮನೆಗೆ ಊಟಕ್ಕೆ
ಹೋಗಲು ನನಗೆ ಇಷ್ಟವಿಲ್ಲದೆ ಸರ್ಕಾರದ ಛತ್ರದಲ್ಲಿ ಊಟಮಾಡಿಕೊಂಡು ಬಳಿಕ
ನಮ್ಮ ಮಾವನವರ ಮನೆಗೆ ಹೋಗಿ ಒಂದೆರಡುಗಳಿಗೆ ಯಾವ ಯಾವುದೋ ಮಾತನ್ನಾ
ಡುತ್ತ ಕುಳಿತಿದ್ದೆನು. ಆಗ ಅತ್ತಮ್ಮನವರು ನಡುಮನೆಯಲ್ಲಿ ಊಟದೆಲೆಯನ್ನು ಹಚ್ಚುತ
ಕುಳಿತಿದ್ದರು. ಎಷ್ಟು ಹೊತ್ತಾದರೂ ಈಚಿಗೆಬರಲಿಲ್ಲ. ಒಂದೆರಡು ಗಳಿಗೆಯಾದನಂತರ
ನಾನೇ ನಡುಮನೆಗೆ ಹೋಗಿ, ಅತ್ತಮ್ಮನವರನ್ನು ನಿರ್ದೆಶಿಸಿ : ನೀವು ನಿಮ್ಮ ಮಗಳಿಗೆ
----------------------------------------------
ನನ್ನ ಸಂಸಾರ 41
ಪ್ರತ್ಯಕ್ಷವಾಗಿಯಾಗಲೀ ಪರೋಕ್ಷವಾಗಿಯಾಗಲೀ ಯಾವುದಾದರೂ ಪಧಾರ್ಥಗಳನ್ನು
ಕೊಟ್ಟಿರುವಿರಾ ? ಹಾಗೆಕೊಟ್ಟಿದ್ದರೆ ಅವುಗಳ ತಪಶೀಲನ್ನು ತಿಳಿಸಿರಿ ” ಎಂದು ಕೇಳಿ
ದೆನು. ನನ್ನ ಮಾತನ್ನು ಕೇಳಿ ಅವರು ಸಂಕೋಚವನ್ನೂ ಗಾಬರಿಯನ್ನೂ ಹೊಂದಿದರೆಂದು
ತಿಳಿದು ಬಂದಿತು. ಪುನಃ ನಾನು, ಸಂಕೋಚಕ್ಕೂ ಗಾಬರಿಗೂ ಇದು ಸಮಯ
ವಲ್ಲ. ಈ ವಿಚಾರವನ್ನು ನೀವು ಹೇಳಲೇಬೇಕು. ಅಥವಾ ಏನೂ ಕೊಡದಿದ್ದರೆ,
ಏನೂ ಕೊಟ್ಟಿಲ್ಲವೆಂದು ಹೇಳಿಬಿಡಿರಿ. ಅಂತೂ ನಿಶ್ಚಯವಾದ ಮಾತನ್ನು ಈಗ ಹೇಳಬೇಕು.
ಇಲ್ಲವಾದರೆ ಆಭಾಸವಾದೀತು. ಎಂದುಹೇಳಿದೆನು. ಇಷ್ಟಾದಮೇಲೆ ಅವರು ಅಂಜು ಅಂಜುತ್ತ
ನಾನು ಯಾರಿಗೂ ತಿಳಿಸದಿರುವಂತೆ ಹೇಳಿ ಒಂದು ಆಡುವಿನ ಅಡ್ಡಿಕೆಯನ್ನೂ
ಐವತ್ತು ರೂಪಾಯಿಗಳನ್ನೂ ನಮ್ಮ ಹಡುಗಿಯವಶಕ್ಕೆ ಕೊಟ್ಟಿರುವೆನೇ ವಿನಾ ಇನ್ನಾವ
ಪದಾರ್ಥಗಳನ್ನೂ ಕೊಟ್ಟಿಲ್ಲವೆಂದು ಹೇಳಿದರು. ಈ ಸ್ಥಿತಿಯನ್ನು ಯೋಚಿಸಿ ನೋಡಿದರೆ
ನಿನ್ನೆ ನಿಮ್ಮ ಸೆಟ್ಟಿಗೆಯಲ್ಲಿ ಹೋಯಿತೆಂಬ ಹಣವು ಸೌಭಾಗ್ಯವತಿಯ ಪೆಟ್ಟಿಗೆಯಲ್ಲಿ
ದೊರೆತ ಹಣವಲ್ಲವಾದ್ದರಿಂದ ಆ ಹಣವನ್ನು ಅವಳಿಗೇ ಹಿಂತಿರುಗಿ ಕೊಟ್ಟು ಬಿಡಬೇಕು.
ನಿನ್ನೆ ಯದಿವಸ ಸರ್ವರ ಸಮಕ್ಷಮದಲ್ಲಿ ನಮ್ಮ ತಾಯಿಯ ಹಣವೆಂದು ಸೌಭಾಗ್ಯವ
ತಿಯು ಹೇಳಿದ ಮಾತು ನಿಜವಾಗಿರುತ್ತದೆ. ಆದ್ದರಿಂದ ನಿಮ್ಮ ಹಣ ಹೋದುದಕ್ಕೆ ನಾವು
ಉತ್ತರವಾದಿಗಳಲ್ಲ. ಹಣವನ್ನು ಕೊಡದಿದ್ದರೆ ಮನಸ್ತಾಪಕ್ಕೆ ಕಾರಣವಾಗಬಹುದು.
ರಂಗಪುರಿ, ಇತಿ ವಿಜ್ಞಾಪನಾ.
16-1-17. H. V. SASTRY.
----
ನನ್ನ ಹೆಸರಿಗೆ ಕಳುಹಿಸಿದ ವರ್ತಮಾನ.
ನಿನ್ನೆ ನಡೆದ ವಿಷಯದಲ್ಲಿ ನಾನು ನಿನ್ನನ್ನು ಅಪರಾಧಿಯೆಂದು ನಿಶ್ಚಯಿ
ಸಿದ್ದೆನು. ಆದರೆ ನಮ್ಮ ಮನೆಯವರ ಮತ್ತು ನಿನ್ನ ಕೋರಿಕೆಯಂತೆ ನಾನು ನಿನ್ನ
ಮಾತಿನ ನಿಶ್ಚಯಾಂಶವನ್ನು ತಿಳಿಯುವದಕ್ಕಾಗಿ ನಿಮ್ಮ ತಾಯಿಯವರನ್ನು ಏನೋ
ಒಂದು ವಿಧವಾಗಿ ಪ್ರಶ್ನೆ ಮಾಡಲು, ನಿನ್ನ ವಶಕ್ಕೆ 50 ರೂಪಾಯನ್ನೂ ಒಂದು
ಅಡ್ಡಿಕೆಯನ್ನೂ ಕೊಟ್ಟಿರುವೆನೆಂದು ಹೇಳಿದರು. ಇದೇ ವಿಷಯವನ್ನು ನಮ್ಮ
ಅಣ್ಣನವರ ಪರಾಂಬರಿಕೆಗಾಗಿ ತಿಳಿಸಿರುತ್ತೇನೆ, ಅವರು ಸಂತೋಷದಿಂದ ಹಣವನ್ನು
ಕೊಟ್ಟರೆಕೊಡಲಿ. ಇಲ್ಲವಾದರೆ ಅದನ್ನು ನೀನು ಕೇಳಬೇಡ, ನೀನು ನನ್ನ ಸಂಗಡ
ಈ ವಿಷಯವನ್ನು ಹೇಳದೆ ಗೋಷ್ಠಮಾಡಿಕೊಂಡಿದ್ದ ಅಪರಾಧಕ್ಕೆ ಆ ಹಣವನ್ನು ಭಾವ
------------------------------------------------
42 ಕಾದಂಬರಿ ಸಂಗ್ರಹ
ನವರಿಗೆ ಜುಲ್ಮಾನೆಯಾಗಿ ಕೊಟ್ಟಂತೆ ಭಾವಿಸಿಕೊ. ಇನ್ನು ಮೇಲಾದರೂ ಹಠಮಾರಿ
ತನವನ್ನೂ, ಹುರುಡನ್ನೂ, ಮೌಗ್ದ್ಯಯವನ್ನೂ, ಪರಿತ್ಯಜಿಸು. ನಾನು ನಾಳೆಯದಿನ
ಸಾಯಂಕಾಲ ಅಲ್ಲಿಗೆ ಬರುತ್ತೇನೆ.
ರಂಗಪುರಿ, ಇತ್ಯಾಶಿಷಃ
16-1-17. H, V, SASTRY.
----
ಕಾಗದವನ್ನು ನೋಡಿ ನನಗೆ ಒಹು ಸಂತೋಷವಾಯಿತು. ಮತ್ತು ನಾನು
ವೃಥಾಪವಾದ ಗ್ರಸ್ತಳಾಗಿ ನನ್ನ ಯಜಮಾನರ ಅಹಿತಕ್ಕೆ ಪಾತ್ರಳಾಗಿದ್ದುದಕ್ಕೆ
ತಕ್ಕ ಪ್ರಾಯಶ್ಚಿತ್ತಕ್ಕಾಗಿ "ಉದ್ಯಂಧನೆಂವಾ ವಿಷಭಕ್ಷಣಂವಾ ಕೃತ್ಯಾನುಷ್ಠೆ.”
ಎಂದು ನಿಶ್ಚಯಮಾಡಿಕೊಂಡೆನು. ಯಾವ ಸ್ತ್ರೀಯು ತನ್ನ ಪತಿಯ ವಿಷಯದಲ್ಲಿ
ದ್ರೋಹಮಾಡುವಳೋ ಅಂಥವಳು ಜನ್ನಿಸಿದ್ದರೂ ವ್ಯರ್ಥ, ನಾನು ನನ್ನಲ್ಲಿದ್ದ ಹಣದ
ವಿಷಯವನ್ನು ನನ್ನ ಯಜಮಾನುಗೆ ತಿಳಿಸದಿದುದು ಮಹಾ ಪಾಪಕರವಾದ ಕಾರ್ಯ
ವಾದಾಗ್ಯೂ, ನನ್ನ ನೈಜಗುಣವೂ, ಭೀರುಭಾವವೂ, ನಿರಪರಾಧಿತ್ವವೂ ಸ್ಥಾಪಿತವಾದ
ಮೇಲೆ ನಾನು ಹರ್ಷಾಕ್ರಾಂತಳೇನೋ ಆದೆನು. ಆದರೆ ಕಿಂಚಿತ್ಕಾಲ ನನ್ನ ಯಜಮಾ
ನರ ಮನಸ್ಸಿನಲ್ಲಿ ಮಹಾ ಸಂಕಟವನ್ನು ತಂದಿಟ್ಟಿದ್ದ ನಾನು ಇನ್ನು ಬದುಕಿ ಏನು
ಪ್ರಯೋಜನ. ಆದುದುಂದ ಹೇಗಾದರೂ ಈ ಪ್ರಾರ್ಥಿನ ದೇಹವನ್ನು ಸಂಹಭೂತ
ಗಳಲ್ಲಿ ಐಕ್ಯ ಮಾಡುವುದೇ ಸುಯೆಂದು ನಿರ್ಧರಿಸಿದೆನು. ಆದರೂ ಈವರ್ತಮಾನವನ್ನು
ಅವರ ಪಾದತಲದಲ್ಲಿ ಸಮರ್ಪಿಸಿ, ಜಪ ಮಾಡಬೇಕೆಂದು ನಿಶ್ಚಯಿಸಿಕೊಂಡೆನು.
ನಮ್ಮ ಭಾವನವರಾದರೂ ನಮ್ಮ ಯಜಮಾನರ ಕಾಗದವನ್ನು ನೋಡಿ ಹೆಂಡತಿಯೊ
ಡನೆ ಏನೋ ಗುಸುಗುಸು ಮಾತನಾಡಿಕೊಳ್ಳುತ್ತಿದ್ದರು. ಅದೇನೆಂದು ನನಗೆ ಅರ್ಥ
ವಾಗಲಿಲ್ಲ. ಆದರೂ ಕಷ್ಟದಿಂದಲೂಹಿಸಿನೋಡು, ಅಪರಾಧಿಯಾದ ಹೆಂಡತಿಯ
ಗುಣವನ್ನು ಮುಚ್ಚಿಡುವುದಕ್ಕಾಗಿ ಈ ಆಟವನ್ನು ಹೂಡಿದ್ದಾನೆಂದು ನಮ್ಮ ಭಾವ
ನವರು ತಮ್ಮನ ವಿಷಯದಲ್ಲಿ ನಿಷ್ಕರ್ಷಿಸಿರುವರೆಂದು ತಿಳಿದು ಬಂದಿತು. ಏನಾದರೂ
ಆಗಲಿ, ಹೇಗಾದರೂ ಹೋಗಲಿ, ಇತರರು ಏನು ಬೇಕಾದರೂ ಊಹಿಸಿಕೊಳ್ಳಲಿ.
ನನ್ನ ಯಜಮಾನರು ನನ್ನ ವಿಷಯದಲ್ಲಿ ನಿಷ್ಕಳಂಕರಾಗಿರುವುದೊಂದೇ ನನಗೆ
ಮುಖ್ಯವಾಗಿ ಬೇಕಾದುದು.
ಮಾರನೆಯದಿನ ಪ್ರಾತಃಕಾಲ ನಮ್ಮ ಯಜಮಾನರೂ ಬಂದರು. ನನ್ನನ್ನು ವಿಶೇ
ಷವಾಗಿ ತಿರಸ್ಕರಿಸಿದುದಕ್ಕಾಗಿ ಕ್ಷಮೆ ಬೇಡಲು ನನ್ನ ಬಳಿಗೆ ಬಂದರು. ನನಗೆ ಆಗ ಮನ
--------------------------------------------
ನನ್ನ ಸಂಸಾರ 43
ಸ್ಸಿನಲ್ಲಿ ಹರ್ಷಾಶ್ವರ್ಯ ವ್ಯಸನಗಳು ಸಂಮಿಳಿತವಾಗಿದ್ದುವು. ನಾನು ನಮ್ಮ ಯಜ
ಮಾನರನ್ನು ಬಹು ವಿಧವಾಗಿ ಪ್ರಾರ್ಥಿಸಿದನು. ಪತಿಗೆ ವಂಚನೆಮಾಡಿ ಆತನ ಮನಸ್ಸಿಗೆ
ಬೇಸರ ಪಡಿಸಿದವಳು ಬದುಕಿರುವುದಕ್ಕಿಂತಲೂ ಸಾಯುವುದುಮೇಲೆಂದು ಅವರೊಡನೆ
ಹೇಳಿ ಮಗುವನ್ನು ಎರಡುಬಾರಿ ಮುದ್ದಿಸಿ ನಮ್ಮ ಸ್ವಾಮಿಯ ಪಾದಗಳಿಗೆ ನಮಸ್ಕರಿಸಿ
ನಾನು ಮನಸ್ಸಿನಲ್ಲಿ ಮಾಡಿಕೊಂಡಿದ್ದ ವಿಷಯವನ್ನು ಅವರೊಡನೆ ವಿಜ್ಞಾಪಿಸಿಕೊಂಡೆನು.
ಆಗ ಯಜಮಾನರು ಚಕಿತರಾಗಿ ನನ್ನನ್ನೇ ದಿಟ್ಟಿಸಿನೋಡುತ್ತಾ ನನ್ನೆರಡು ಕೈಗಳನ್ನೂ
ಹಿಡಿದೆಳೆದು ತಮ್ಮ ಹತ್ತಿರದಲ್ಲಿ ಕುಳ್ಳಿರಿಸಿಕೊಂಡು ಇಂತು ಉಪದೇಶಿಸಲಾರಂಭಿಸಿದರು.
ಮುಗ್ಧೆ !
ನಿನಗಿನ್ನೂ ಪ್ರಾಪಂಚಿಕ ವ್ಯವಹಾರಜ್ಞಾನವೂ ಗೃಹಿಣಿಯ ವೃತ್ತವೂ ಚೆನ್ನಾಗಿ
ತಿಳಿದಿಲ್ಲ. ಈಗ ನಮ್ಮ ಮನೆಯಲ್ಲಿ ಸಂಘಟಿಸಿರುವ ಹಣದ ವಿಷಯವು ನಿನ್ನನ್ನು
ಒಳ್ಳೆಯ ಗೃಹಿಣಿಯನ್ನಾಗಿ ಮಾಡಲು ನಡೆದಂತೆಯೇ ಭಾವಿಸುತ್ತೇನೆ. ನಿನ್ನ ಮನ ಸ
್ಸಿನಲ್ಲಿ, ನನ್ನ ಹಣವೂ ಹೋಗಿ ನಿಷ್ಕಾರಣಾಪವಾದಕ್ಕೂ ಪಾತ್ರಳಾಗಬೇಕಾಗಿ ಬಂದಿ
ತಲ್ಲಾ ಎಂಬ ಯೋಚನೆಯು ಪ್ರಬಲವಾಗಿರಬಹುದು. ಹಣ ಹೋದರೆ ಹೋಗಲಿ. ಅದ
ಕ್ಕಾಗಿ ನೀನು ಚಿಂತಿಸಬೇಡ, ನಿಮ್ಮ ತಾಯಿಯನ್ನು ಕೇಳಿದಾಗಲೇ ನೀನು ನಿರಪರಾಧಿನಿ
ಯೆಂದು ನನಗೆ ಗೊತ್ತಾದುದು. ಇಷ್ಟು ಅನರ್ಥಗಳಿಗೂ ಮೂಲಕಾರಣರು ನಿಮ್ಮ
ತಾಯಿ ತಂದೆಗಳೆಂದು ಭಾವಿಸಿಕೊ. ನಿಮ್ಮ ತಾಯಿಯು ನಿನ್ನಲ್ಲಿ ಹಣವನ್ನು ಕೊಡು
ವಾಗ ನಿಮ್ಮ ಯಜಮಾನರಿಗೆ ಈ ವಿಷಯವನ್ನು ತಿಳಿಸಬೇಕೆಂದು ಹೇಳದೆ ಇದ್ದುದು
ಅವರ ಮುಖ್ಯ ತಪ್ಪು. ನಿನಗಾದರೂ ಮೌಗ್ಧ್ಯವುಂಟಾಗಿ ಆ ವಿಚಾರವನ್ನು ನನ್ನೊಡನೆ
ತಿಸದಿದ್ದುದು ನಿನ್ನ ತಂಪು ನಮ್ಮ ಮನೆಯಲ್ಲಿ ಹಣ ಹೋಯಿತೆಂದು ಚರ್ಚಿಸಿದ್ದಾಗ
ಲಾಗಲೀ ಪೆಟ್ಟಿಗೆಗಳನ್ನು ಶೋಧಿಸಬೇಕೆಂಬ ವಿಚಾರ ಬಂದಾಗಲಾಗಲೇ ನೀನು ಈ ವಿಷ
ಯವನ್ನು ಯಾರೊಡನೆಯೂ ಹೇಳದೇಹೋದೆ. ಹೀಗೆ ಹೇಳದಿರುವುದರ ಕಾರಣವನ್ನು
ನಾನುಬಲ್ಲೆ. ನಿನ್ನ ಭೀರುಸ್ವಭಾವವೂ, ಮಾತೃರಹಸ್ಯೋಪದೇಶಮಂತ್ರವೂ, ಅವಿವೇ
ಕವೂ ಸಿನಗೆ ಆಗ ಅಜ್ಞಾನವನ್ನು ತಂದಿಟ್ಟಿತು. ಲೋಕದಲ್ಲಿ ತಂದೆ ತಾಯಿಗಳು
ಹೆಣ್ಣುಮಕ್ಕಳಿಗೆ, ಪತಿಸೇವಾ ಧರ್ಮವನ್ನು ತಿಳಿಯಿಸದೆ, ಆತನ ಮನಸ್ಸನ್ನು ಪ್ರಸನ್ನ ವಾ
ಗಿರುವಂತೆ ಇಡಲು ತಕ್ಕಂತೆ ಉಪದೇಶಿಸದೆ ನಿನ್ನ ತಂದೆತಾಯಿಗಳಂತೆ ಇಂತಹ ಮನೆ
ಹಾಳು ರಹಸ್ಯಗಳನ್ನೂ ಮಕ್ಕಳುಗಳಿಗೆ ಹಠಮಾರಿತನವನ್ನೂ ಒಡವೆಗಾಗಿ ಗಂಡನನ್ನು
ಪೀಡಿಸಬೇಕೆಂಬುದನ್ನು, ಇನ್ನೊಬ್ಬರನ್ನು ನೋಡಿ ಹುರುಡು ಹತ್ತಬೇಕೆಂಬುದನ್ನು ಉಪ
ದೇಶಿಸಿದರೆ ಲೋಕದಲ್ಲಿ ಯಾವ ಸಂಸಾರವೂ ನೆಟ್ಟಗಾಗಲಾರದು. ತನ್ನ ಮನೆಗೆ ತಾನೇ
------------------------------------------------
44 ಕಾದಂಬರಿ ಸಂಗ್ರಹ
ಬೆಂಕಿ ಹಚ್ಚಿಕೊಂಡು ಜ್ವಾಲೆಯು ಸರ್ವತ್ರವ್ಯಾಪಿಸಿದಾಗ ಪಶ್ಚಾತ್ತಾಪ ಪಡುವರಂತೆ
ನಿನ್ನ ತಾಯಿಯ ಸ್ಥಿತಿಯಾಯಿತು. ನೀನು ಇದನ್ನೆಲ್ಲಾ ಮನಸ್ಸಿನಲ್ಲಿ ಚೆನ್ನಾಗಿ ಆಲೋ
ಚಿಸು. ಇನ್ನು ಮುಂದಾದರೂ ನಿನ್ನ ಎಚ್ಚರಿಕೆಯಲ್ಲಿ ನೀನಿರು, ನೀನು ಈಗ ಕಳೆದುಕೊಂಡ
ಹಣವು ನೀತಿಬೋಧೆಗಾಗಿ ಗುರುಗಳಿಗೆ ಕೊಟ್ಟ ದಕ್ಷಿಣೆಯೆಂದು ತಿಳಿದುಕೊ, ಈಗ
ಹಣ ಹೋದ ವಿಚಾರವು ನಡೆಯದಿದ್ದರೆ ಇಷ್ಟು ಸಂಘಟನೆಗಳು ಉಂಟಾಗುತ್ತಿರಲಿಲ್ಲ.
ನಿನಗೆ ಚೆನ್ನಾಗಿ ಬುದ್ದಿಯೂ ಬರುತ್ತಿರಲಿಲ್ಲ. ನಿನ್ನ ತಂದೆ ತಾಯಿಗಳ ಹಿತೋಪದೇಶವು
ಹೀಗೆಯೇ ಬೆಳೆದು ನಮ್ಮಿಬ್ಬರನ್ನೂ ಬಹುಕಷ್ಟಕ್ಕೆ ಗುರಿಮಾಡುತ್ತಿದ್ದಿತು. ಈಗ ನಾನು
ಮಾಡಿದ ಉಪದೇಶವೂ ನಿನಗೆ ಲಭಿಸುತ್ತಿರಲಿಲ್ಲ. ಪ್ರಿಯೆ ! ಭಾವಿಸು ! ಚೆನ್ನಾಗಿ
ಯೋಚಿಸು. ! ಈಗ ನಿನಗೆ ಅಕಸ್ಮಾತ್ತಾಗಿ ಪ್ರಾಪ್ತವಾದ ಅಪಮಾನವು ನಿನ್ನ ಭವಿಷ್ಯ
ತ್ಸುಖಾಭಿವೃದ್ಧಿಗೆ ಹೌದೋ ಅಲ್ಲವೋ ಹೇಳು. ಇನ್ನೂ ಕೇಳು, ಲೋಕದಲ್ಲಿ ಕೆಲವು
ಮಂದಿ ಮೂರ್ಖಸ್ತ್ರೀಯರು ತಮ್ಮ ಗಂಡಂದಿರನ್ನು ಸ್ವಾಧೀನಪಡಿಸಿಕೊಳ್ಳುವುದಕ್ಕೆ
ಉಪಾಯವನ್ನು ಹುಡುಕುತ್ತಾರೆ. ಇಂತಹ ಸ್ತ್ರೀಯರಿಗೆ ತಕ್ಕ ಉಪದೇಶಕರೂ ಸಿಕ್ಕು
ತ್ತಾರೆ. ಪಂಚಾಕ್ಷರೀಪುರಶ್ಚರಣೆ, ತಾಯತೀ, ಭಸ್ಮವೇ, ಮುಂತಾದ ಔಷಧಪ್ರ
ಯೋಗ, ಹಸುರು ಹಾಕುವುದು, ಇಂತಹ ಕಪಟಮಾಯಾ ವಿದ್ಯೆಯನ್ನು ಆ ಉಪದೇಶ
ಕರಾದ-ಮೋಸಗಾರರಾದ-ನೀಚಸ್ತ್ರೀಯರು ಮುಗ್ಗೆಯರಾದ ಹೆಣ್ಣು ಮಕ್ಕಳಿಗೆ ಕಲಿಸಿ
ಬಿಡುತ್ತಾರೆ. ಇದರಿಂದ ಶ್ರಮಪಟ್ಟು ಸಂಪಾದಿಸಿದ ದ್ರವ್ಯವು ವ್ಯಯವಾಗಿ ಆ ದುಷ್ಟ
ಹೆಂಗಸರ ದುರ್ಬೋಧನೆಯಿಂದ ಆ ಸ್ತ್ರೀಯರ ಮರ್ಯಾದೆಯ ಉಳಿಯುವುದಿಲ್ಲ.
ಸ್ತ್ರೀಯರು ಇವರ ಹೇಳಿಕೆಯಂತೆ ಅನೇಕ ಅಧರ್ಮದ ಕೆಲಸಗಳನ್ನು ಮಾಡಿ ಜನರಲ್ಲಿ
ಅಪವಾದಕ್ಕೆ ಗುರಿಯಾಗಬೇಕಾಗುತ್ತದೆ. ಇದರ ಫಲಿತಾರ್ಥವು ಇಷ್ಟರಿಂದಲೇ ಕೊನೆ
ಗಾಣುವುದಿಲ್ಲ. ಈ ಮೋಸಗಾರರು ತಮ್ಮ ಮಾತು, ನಿಜವೆಂದು ತೋರ್ಪಡಿಸಿಕೊಳ್ಳ
ಲಿಕ್ಕಾಗಿ, ಈ ಔಷಧವನ್ನು ಇಂತಹ ವೇಳೆಯಲ್ಲಿ ಈ ವಿಧದಲ್ಲಿ ನಿನ್ನ ಗಂಡನಿಗೆ ಏನಾ
ದರೂ ರುಚಿಯಾದ ತಿಂಡಿಯಲ್ಲಿ ಬೆರಸಿಕೊಡು, ಇದರಿಂದ ನೀನು ಹೇಳಿದಂತೆ ಅವನು
ನಡೆಯುತ್ತಾನೆಂದು ಹೇಳಿ, ಏನೋ ಒಂದು, ಕಲ್ಲೋ, ಮಣ್ಣ, ಬೂದಿಯೋ, ಹಸರು
ಸಪ್ಪೋ ಏನಾದರೊಂದನ್ನು ಕೊಟ್ಟುಬಿಡುತ್ತಾರೆ. ಬುದ್ಧಿಹೀನರಾದ ಹೆಂಗಸರು
ಆ ಉಪದೇಶಕ್ಕೆ ಮರುಳಾಗಿ ಆ ಔಷಧಗಳನ್ನು ತಮ್ಮ ಗಂಡಂದಿರಿಗೆ ಯಾವಾಗಲಾ
ದರೂತಿನ್ನಿಸಿಬಿಡುತ್ತಾರೆ. ಆ ಔಷಧಗಳ ಸ್ವಭಾವವನ್ನು ಪರೀಕ್ಷಿಸುವಷ್ಟು ಬುದ್ಧಿ
ಇವರಿಗಿರುವುದಿಲ್ಲ. ಇವುಗಳಲ್ಲಿ, ತಾಮ್ರ, ಪಾದರಸ, ಪಾಷಾಣ, ಮುಂತಾದ ಅಪಕ್ವ
ಭಸ್ಮಗಳೂ ಅಪಾಯಕರಗಳಾದ-ಬುದ್ದಿಯನ್ನು ಕೆಡಿಸಿಬಿಡುವ-ದೀರ್ಘರೋಗಿಗಳ
-------------------------------------------
ನನ್ನ ಸಂಸಾರ 45
ನ್ನಾಗಿ ಮಾಡುವ ಹಸುರು ರಸಗಳೂ ಸೇರಿರುತ್ತವೆ. ಈ ಔಷಧಗಳು ಹೊಟ್ಟೆಗೆ ಹೋದ
ಸ್ವಲ್ಪ ಕಾಲದಲ್ಲಿ ಪ್ರಾಣವನ್ನು ಸಹ ಹಾಳುಮೂಡಿಬಿಡುತ್ತವೆ. ಬುದ್ದಿಯಿಲ್ಲದ ಹೆಂಗ
ಸರು ಆಮೋಸಗಾರರ ಸುಳ್ಳು ಮಾತುಗಳನ್ನು ನಂಬಿ ಗಂಡಂದಿರನ್ನು ವಶಮಾಡಿಕೊ
ಳ್ಳಬೇಕೆಂದು ಇಂತಹ ಅಪಾಯಕರಗಳಾದ ಪದಾರ್ಥಗಳನ್ನು ಅವರ ಹೊಟ್ಟೆಗೆ ಹಾಕಿ
ಪ್ರಾಣಭಯವನ್ನುಂಟು ಮಾಡುತ್ತಾರೆ. ಇದಕ್ಕಾಗಿ-ಗಂಡನ --- ಸ್ವಾಧೀನಕ್ಕಾಗಿ---
ಯಾವ ಮಂತ್ರತಂತ್ರಗಳೂ ಇಲ್ಲ. ಇಂತಹ ನಡತೆಗಳು ಎಂದಾದರೊಂದುದಿನ
ಗಂಡಂದಿಗೆ ತಿಳಿಯದೆ ಹೋಗದು. ಆಗ ಹೆಂಡತಿಯರ ಮೇಲಿನ ಅಭಿಮಾನವು ಅವ
ರಿಗೆ ಸುತರಾಂ ತಪ್ಪಿಯೂ ಹೋಗುತ್ತದೆ.
ಗಂಡನನ್ನು ಉಪಾಯದಿಂದ ಸ್ವಾಧೀನಪಡಿಸಿಕೊಳ್ಳುವುದಕ್ಕೆ ಕೆಲವು ಚಮ
ತ್ಕಾರಗಳಿವೆ. ಅದನ್ನು ಹೇಳುವೆನು ಕೇಳು. ಹೆಂಡತಿಯ ನಡತೆ ಗಂಡನ ಮನಸ್ಸಿಗೆ
ಒಪ್ಪು ವಂತಿರಬೇಕು. ಗಂಡನಿಗೆ ಅಪಿತವಾದುದನ್ನೆ೦ದಿಗೂ ಮಾಡಬಾರದು. ಅವರೆ
ದುರಿಗೆ ಗಟ್ಟಿಯಾಗಿ ಮಾತನಾಡಬಾರದು. ಅವರ ಮನಸ್ಸಿಗೆ ಆಯಾಸವನ್ನುಂಟುಮಾ
ಡಬಾರದು, ಅವರನ್ನು ಎಂದಿಗೂ ನಿರಾಕರಿಸಬಾರದು. ಎಷ್ಟು ಕಷ್ಟ ಬಂದರೂ ಧರ್ಮ
ಮಾರ್ಗವನ್ನತಿಕ್ರಮಿಸಬಾರದು. ಗಂಡನು ಯಾವ ಸಮಯದಲ್ಲಿ ಏನು ಕೆಲಸವನ್ನು
ಹೇಳುತ್ತಾನೋ ಅದನ್ನು ತಕ್ಷಣವೇ ಆತನಿಗೆ ತೃಪ್ತಿಕರವಾಗುವಂತೆ ಮಾಡಬೇಕು. ಈ
ಕೆಲಸವನ್ನು ನಾನು ಮಾಡೆನೆಂದಾಗಲೀ ನನಗೆ ಬೇಜಾರಾಗುವುದಾಗಲೀ ಹೇಳಬಾ
ರದು. ಆಕೆಲಸವು ತಮ್ಮಿಂದಾಗದ ಪಕ್ಷದಲ್ಲಿ ನಮ್ರತೆಯಿಂದ ಅದರ ಕಾರಣವನ್ನು
ಅವರಿಗೆ ತಿಳಿಯಪಡಿಸಬೇಕು. ಅವರೊಡನೆ ಯಾವ ವಿಧವಾದ ಸುಳ್ಳನ್ನು ಹೇಳಬಾ
ರದು. ಅವರೆದುರಿಗೆ ಇತರರ ನಿಂದೆಯನ್ನು ಇತರರೆದುರಿಗೆ ಅವರ ನಿಂದೆಯನ್ನು ಸರ್ವ
ಥಾಮಾಡಬಾರದು. ನಿಷ್ಕಾರಣವಾಗಿ ಕೋಪಿಸಿಕೊಂಡು ಅವರೆದುರಿಗೆ ಬಾಯಿಗೆ
ಬಂದಂತೆ ಮಾತಾಡಬಾರದು. ಅವರನ್ನು ಎಂದಿಗೂ ಮೋಸಗೊಳಿಸ ಬಾರದು. ಅವರು
ಮಾಡುವ ಒಳ್ಳೆ ಕೆಲಸಕ್ಕೆ ಅಡ್ಡಿ ಮಾಡಬಾರದು. ಯಾವ ಕೆಲಸದಲ್ಲಾಗಲೀ
ತಮ್ಮದು ತಪ್ಪಾಗಿದ್ದರೆ ಒಪ್ಪಿಕೊಂಡು ಕ್ಷಮೆಯನ್ನು ಕೇಳಬೇಕು. ಅವರಲ್ಲಿ ತಪ್ಪಿ
ದ್ದರೆ ಅದಕ್ಕೆ ಕೋಪಿಸಿಕೊಳ್ಳದೆ ಸಮಾಧಾನದಿಂದ ಅದನ್ನು ಅವರಿಗೆ ತಿಳಿಸಬೇಕು.
ತಮ್ಮಿಂದ ಆದಷ್ಟು ಪ್ರೀತಿಯಿಂದ ಅವರ ಸೇವೆಮಾಡಬೇಕು.
ಒಳ್ಳೆ ಸೀರೆಗಳನ್ನು ಟ್ಟು ಕೊಂಡು ಒಡವೆಗಳನ್ನಿಟ್ಟುಕೊಂಡು ಪತಿಗಳನ್ನು
ಮೋಹಗೊಳಿಸುವ ಪ್ರಯತ್ನವನ್ನೆಂದಿಗೂ ಮಾಡಬಾರದು. ನಿಮ್ಮ ಮನಸ್ಸು ಒಳ್ಳೆಯ
ದಾಗಿದ್ದರೆ ಅದರಿಂದಲೇ ಅವರ ಮನಸ್ಸು ನಿಮ್ಮ ಕಡೆಗೆ ತಿರುಗುತ್ತದೆ. ನಿಮ್ಮ ಸದ್ಗು
--------------------------------------------
46 ಕಾದಂಬರೀ ಸಂಗ್ರಹ
ಣಗಳಿಂದ ನೀವು ಪ್ರತಿಯನ್ನು ಮೋಹಗೊಳಿಸಬೇಕು. ಅವರಿಗೆ ಯಾವ ವಿಷಯದ
ಲ್ಲಿಯೂ ನೀವು ವಂಚನೆಯನ್ನು ಮಾಡಬಾರದು. ಪತಿಗೆ ಸಮನಾದ ಸ್ನೇಹಿತನು ಈ
ಜಗತ್ತಿನಲ್ಲಿ ಯಾರೂ ಇಲ್ಲ. ಆತನು ಗುರುವಿನಂತೆ ಸನ್ಮಾರ್ಗವನ್ನು ತೋರಿಸುತ್ತಾನೆ.
ತಂದೆಯಂತೆ ಹಿತವನ್ನುಂಟುಮಾಡುತ್ತಾನೆ. ತಾಯಿಯಂತೆ ಪ್ರೀತಿಸುತ್ತಾನೆ. ದೇವ
ರಂತೆ ಪೂಜ್ಯನಾಗಿ ನಿಮ್ಮ ಪ್ರಾಣಕ್ಕಿಂತಲೂ ಪ್ರಿಯನಾಗಿರುತ್ತಾನೆ. ಇಂತಹ ಅದ್ವಿ
ತೀಯನಾದ ಸ್ನೇಹಿತನನ್ನೇ ನೀವು ವಂಚಿಸಿದ ಪಕ್ಷದಲ್ಲಿ ನಿಮಗೆ ಇನ್ನೇತರಿಂದ ಸುಖ
ವುಂಟಾದೀತು ? ಪತಿಯನ್ನು ವಂಚಿಸುವ ಹೆಂಗಸು ಎಂತಹ ಅಕೃತ್ಯ ಮಾಡಲಿಕ್ಕೂ
ಹಿಂತೆಗೆಯಳು. ಆದ್ದರಿಂದ ಗೃಹಿಣಿಯಾದವಳು ಪತಿಯ ಸಂಗಡ ನಿರ್ವಂಚನೆಯಿಂದ
ನಡೆದುಕೊಳ್ಳಬೇಕು. ನಿಮ್ಮ ಪತಿಗಳಿಗೆ ಅಹಿತವಾದ ಕೆಲಸದಿಂದ ನಿಮಗೆಷ್ಟೆಲಾಭವಿ
ದ್ದಾಗ್ಯೂ ನೀವು ಅದನ್ನು ಮಾಡಬಾರದು. ನಿಮ್ಮ ಪತಿಯು ನಿಮ್ಮಲ್ಲಿ ಹೇಳಿರುವ
ಗುಟ್ಟಿನ ಮಾತುಗಳನ್ನು ಇತರರ ಸಂಗಡ ಹೇಳಬಾರದು. ಏಕಾಂತದಲ್ಲಿ ಪತಿಯು
ನಿಮ್ಮ ವಿಷಯದಲ್ಲಿ ಸಣ್ಣ ಮಾತನ್ನಾಡಿದ್ದರೆ ಅದನ್ನು ಹೊರಪಡಿಸಬಾರದು. ಈ
ಪ್ರಕಾರ ಯಾವ ಹೆಂಗಸು ಆಚರಣೆಯಲ್ಲಿಟ್ಟಿರುವಳೋ ಅವಳಿಗೆ ಯಾರಲ್ಲಿಯೂ
ವಿರೋಧವುಂಟಾಗುವುದಿಲ್ಲ. ಚಾಡಿಮಾತನ್ನು ಹೆಂಗಸು ಕಲಿಯಬಾರದು. ಕ್ಷುದ್ರ
ಹೇಳುವವರಾರೂ ನಂಬುವುದಿಲ್ಲ. ನಿಮ್ಮ ವಿಷಯದಲ್ಲಿ ನಿಷ್ಕಾರಣವಾಗಿ ಯಾರಾ
ದರೂ ಅಪವಾದವನ್ನು ಹೊರಿಸಿದರೆ ಅದನ್ನು ಕೇಳಿಕೊಂಡು ಸುಮ್ಮನಿದ್ದು ನಿಮ್ಮ
ಆಚರಣೆಯನ್ನು ನಿರ್ಮಲವನ್ನಾಗಿ ಮಾಡಿಕೊಂಡು ಸಮಾಧಾನದಿಂದಿರಬೇಕು. ಈ
ಅಪವಾದವು ಸುಳ್ಳೆಂಬುದು ಕಾಲಕ್ರಮೇಣ ಎಲ್ಲರಿಗೂ ತಿಳಿದು ಆ ಅಪವಾದವನ್ನು
ಹೊರಿಸಿದವರ ಮುಖಭಂಗವಾಗದೆ ಇರುವುದಿಲ್ಲ. ನಿಮ್ಮ ಗಂಡಂದಿರನ್ನು ಯಾರಾ
ದರೂ ದೂಷಣೆ ಮಾಡಿದರೆ ಅದಕ್ಕಾಗಿ ಅವರಸಂಗಡ ವಿವಾದಮಾಡಬಾರದು. ಆ ಅಪ
ವಾದವು ನಿಜವಾಗಿದ್ದ ಪಕ್ಷದಲ್ಲಿ ಅವನ್ನು ನಿವಾರಿಸುವ ಪ್ರಯತ್ನ ಮಾಡಬೇಕು.
ನಿಮ್ಮ ಗಂಡಂದಿಗೆ ನೀವು ಎಲ್ಲ ಕೆಲಸದಲ್ಲಿ ಯ. ಆದಷ್ಟು ಸಹಾಯ ಮಾಡಬೇಕು.
ಮನೆಯಕೆಲಸಗಳನ್ನು ಪಾಲುಮಾರಿಕೆ ಇಲ್ಲದೆ ಕಾಲಕಾಲಕ್ಕೆ ಸರಿಯಾಗಿ
ಮಾಡುತ್ತಾ ನಿಮ್ಮ ಗಂಡಂದಿರನ್ನು ಸಂತೋಷಗೊಳಿಸಬೇಕು. ಯಜಮಾನರು ಹೊರ
ಗಿನಿಂದ ಮನೆಗೆ ಬಂದಾಗ ಅವರೊಡನೆ ಕೆಲಸಕ್ಕೆ ಬಾರದ ಮಾತುಗಳನ್ನಾಡಿ ಕಾಲಕಳೆ
ಯಬಾರದು. ನಿಮ್ಮ ಗಂಡಂದಿರ ಸಂಗಡ ಮಾತನಾಡುವಾಗ ಹೆಚ್ಚು ಹರಟೆಯನ್ನು
ಬಿಟ್ಟು, ನೀತಿ, ಜ್ಞಾನ, ಧರ್ಮ ವಿಚಾರವಾಗಿ ಚರ್ಚೆಮಾಡಬೇಕು. ಸಂಸಾರಕ್ಕೆ ಬೇಕಾ
ದವಿಷಯಗಳನ್ನು ಕಾಲವನು ತಿಳಿಸಬೇಕು. ಗಂಡನಮನಸ್ಸು ಖಿನ್ನವಾಗಿದ್ದರೆ ಒಳ್ಳೆ
----------------------------------------------
ನನ್ನ ಸಂಸಾರ 47
ಯಮಾತನ್ನಾಡಿ ಸಮಾಧಾನಪಡಿಸಬೇಕು. ವಿಪತ್ತು ಬಂದಾಗ ನಿಮ್ಮ ಪತಿಯು ಯಾವ
ಸ್ಥಿತಿಯಲ್ಲಿರುವನೋ ನೀವೂ ಅದೇ ಸ್ಥಿತಿಯಲ್ಲಿರಬೇಕು. ಯಾವಾಗಲೂ ಅಸಮಾ
ಧಾನಪಡಬಾರದು. ಅತ್ತೆ, ವಾರಗಿತ್ತಿ, ಅತ್ತಿಗೆನಾದಿನಿಯರು ಕೂರವಾಗಿ ಮಾತನಾ
ಡಿದರೆ ಸಹಿಸಿಕೊಂಡಿರಬೇಕು. ಅವರು ಇನ್ನು ಮುಂದೆ ಅಂತಹಕ್ರೌರ್ಯವನ್ನು
ತಾವಾಗಿಯೇ ಬಿಡುವಂತೆ ನಿಮ್ಮ ಸಮಾಧಾನಸದ್ದುಣಗಳಿಂದ ಏರ್ಪಡಿಸಿಕೊಳ್ಳಬೇಕು.
ಗಂಡನಸ್ಥಿತಿಯು ಒಳ್ಳೆಯದಾಗಲೀ ಕೆಟ್ಟದ್ದಾಗಲೀ ಗಂಡನಿಗೆ ಐಶ್ವರ್ಯವಿರಲಿ ಬಡತನ
ವಿರಲಿ ಅದನ್ನು ಹೆಂಡತಿಯ ಅನುಭವಿಸಬೇಕು. ತಂದೆಯಾದವನು ದೊರೆಯಾಗಿ
ದ್ದಾಗ್ಯೂ ಆತನ ಪದವಿಗೆ ಸ್ತ್ರೀಯು ಎಂದೂ ಅಧಿಕಾರಿಯಾಗಲಾರಳು. ತನ್ನ ಗಂಡನ
ಮಾನವನ್ನು ಕಾಪಾಡಿ ಆತನಿರುವ ಸ್ಥಿತಿಯಲ್ಲೇ ತಾನೂ ಇರಬೇಕು. ಮೇಲೆಕಂಡ
ಸುಗುಣಗಳಿಂದ ಕೂಡಿದ ಸ್ತ್ರೀಯೇ ಈ ಲೋಕದಲ್ಲಿ ಮಾನ್ಯಳಾಗಿಯೂ, ಪೂಜ್ಯಳಾ
ಗಿಯ, ಪ್ರಾತಃಸ್ಮರಣೀಯಳಾಗಿಯೂ ಇರುತ್ತಾಳೆ. ಇದೇ ಗುಣದಿಂದ ಕೂಡಿದ್ದು
ದರಿಂದಲೇ ಅಲ್ಲವೆ, ಸೀತೆ, ಸಾವಿತ್ರಿ, ದಮಯಂತಿ, ಸತ್ಯವತಿ, ಲೋಪಾಮುದ್ರೆ,
ಮುಂತಾದ ಕುಲಸ್ತ್ರೀಯರ ಹೆಸರು ಈ ಭರತಖಂಡದ ಎಲ್ಲಾ ಕಡೆಯಲ್ಲೂ ಸುವ
ರ್ಣಾಕ್ಷರಗಳಿಂದ ಕೆತ್ತಲ್ಪಟ್ಟು ರಾರಾಜಿಸುತಲವೆ-ಇವರು ಪರಮ ಪತಿವ್ರತೆಯರಾಗಿ
ಪತಿಭಕ್ತರಾಗಿ ಅವರಲ್ಲಿ ಅತ್ಯಂತ ಪ್ರೇಮವನ್ನಿಟ್ಟು ಕೊಂಡಿದ್ದುದರಿಂದಲೇ ಅಲ್ಲವೆ,
ಅವರ ಕೀರ್ತಿಗಳು ದಶದಿಕ್ಕುಗಳಲ್ಲಿಯೂ ಹರಡಿಕೊಂಡಿವೆ. ಇತರ ವಿಷಯಗಳಲ್ಲಿ
ನಮ್ಮೀ ಭರತಖಂಡವು ಉಳಿದ ದೇಶಗಳಿಗಿಂತ ಹಿಂದೆ ಬಿದ್ದಿದ್ದಾಗ್ಯೂ, ಸೀತೆ, ಸಾವಿ
ತ್ರಿಯೇ ಮುಂತಾದ ಮಹಾಮಹಾ ಪತಿವ್ರತೆಯರ ಸರ್ತಿ ವಿಷಯದಲ್ಲಿ ಇದಕ್ಕೆ
ಸಮಾನವಾದ ದೇಶ ಮತ್ತೊಂದಿಲ್ಲ, ತಮ್ಮ ಜನರ ಯೋಗ್ಯತೆಯನ್ನು ಅಭಿವೃ
ದ್ಧಿ ಪಡಿಸಲಪೇಕ್ಷೆಯುಳ್ಳ ಸ್ತ್ರೀಯರು ಮೇಲೆ ಹೇಳಿದ ಪವಿತ್ರನಡತೆಗಳು ಮರಳಿ ಉಜ್ಜೀ
ವಿತವಾಗುವಂತೆ ನಡೆದುಕೊಳ್ಳಬೇಕು. ಇದನ್ನು ಕೇಳಿದ ಪ್ರತಿಯೊಬ್ಬ ಹೆಂಗಸೂ
ಇದೇ ವಿಧದಲ್ಲಿ ನಡೆವುದಾದರೆ ಈ ಗ್ರಂಥಲೇಖನವು ಸಾರ್ಥಕವಾಗುವುದು.
ಸೋದರಿಯರೇ ! ಇಷ್ಟು ಉಪದೇಶವನ್ನು ಮಾಡಿ ನಮ್ಮ ಯಜಮಾನರು,
ಇನ್ನು ಮುಂದೆ ನಿನ್ನಿಷ್ಟದಂತೆ ಮಾಡೆಂದು ಹೇಳಿ ನನ್ನ ಕೈಬಿಟ್ಟು ಬಿಟ್ಟು ಸುಮ್ಮನಾ
ದರು. ಅವರ ಉಪದೇಶವನ್ನು ಕೇಳಿದ ಮೇಲೆ ನನ್ನ ಮನಸ್ಸಿನಲ್ಲಿ ಬಹುವಾಗಿ
ಸಂತೋಷವಾಯಿತು. ಹರ್ಷಾಶ್ರುಗಳು ಕಣ್ಣಿನಿಂದುದುರಿದುವು. ಕೂಡಲೆ ಪತಿಚರ
ಣಗಳಲ್ಲಿ ನನ್ನ ಶಿರಸ್ಸನ್ನಿಟ್ಟು, ದೇವ! ಕ್ಷಮಿಸು, ಇದುವರಿಗೆ ನಾನು ಮೂಢತನದಿಂದ
ಮಾಡಿದ ತಪ್ಪುಗಳನ್ನೆಲ್ಲಾ ಮನ್ನಿಸು ಇಂದು ನಿಮ್ಮ ಉಪದೇಶದಿಂದ ನಾನು ಪುನರು
-----------------------------------------------
೪೮ ಕಾದಂಬರಿ ಸಂಗ್ರಹ
ಜೀವಿತಳಾದೆನು. ಹಣದ ಆಶೆಯನ್ನೂ, ಹುರುಡನ್ನೂ, ಹಟಮಾರಿತನವನ್ನೂ ಸತ್ಯ
ವಾಗಿಬಿಟ್ಟೆನು. ಇನ್ನು ಮುಂದೆ ಇದೇ ವಿಧವಾಗಿ ನನ್ನನ್ನು ಎಚ್ಚರಗೊಳಿಸುತ್ತಾ
ನನ್ನನ್ನು ಕಾಪಾಡಬೇಕು. ನನ್ನ ಜನ್ಮಾಂತರ ಸುಕೃತಪರಿಪಾಕದಿಂದ ತಮಗೆ ನಾನು
ಪತ್ನಿ ಯಗಿರುವೆನು. ನನ್ನ ಜೀವನವು ಧನ್ಯ ! ನಾನು ಸುಖಿ! ನಿಮ್ಮ ಉಪದೇಶವನ್ನು
ನಾನು ಮರೆವುದಿಲ್ಲ. ನಾನೂ ಆಚರಿಸುತ್ತಾ ನನ್ನ ಸೋದರಿಯರಲ್ಲೂ ಈ ಉಪದೇ
ಶವನ್ನು ಹರಡುವೆನೆಂದು ಹೇಳಿ ನನ್ನ ಸ್ವಾಮಿಗೆ ನಮಸ್ಕರಿಸಿದೆನು. ಅಷ್ಟರಲ್ಲೇ ನಮ್ಮ
ಯಜಮಾನರನ್ನು ಯಾರೋ ಹೊರಗೆ ಕೂಗಿದದರಿಂದ ಅವರು ಹೊರಟುಹೋದರು.
ಪದೇ ಪದೇ ಅವರ ಉಪದೇಶವನ್ನು ಧ್ಯಾನಿಸುತ್ತಾ ನಾನು ನನ್ನ ಹಿಂದಿನ ಯೋಚನಗ
ಳನ್ನು ಬಿಟ್ಟು ಮನೆಗೆಲಸಕ್ಕೆ ಹೊರಟುಹೋದೆನು.
ಪಾಠಕಿಯರೆ! ಈ ಅಧ್ಯಾಯದಲ್ಲಿ ವಿಷವು ಪರೀಕ್ಷಿಸಲ್ಪಟ್ಟಿರುವುದು,
ವಿಷಕ ಅಮೃತಕ್ಕೂ ಭೇದವು ರ್ತೊರಿಸಲ್ಪಟ್ಟಿರುವುದು. ನೀವು ಪುನಃಪುನಃ ಈ
ಅಧ್ಯಾಯವನ್ನು ಮಥನಮಾಡಿ, ಭರತಭೂಮಾತೆಯು ಪತಿವ್ರತೆಯರಿಂದ ತುಂಬ
ಲ್ಪಟ್ಟು ಪರಿಶುದ್ಧಳಾಗಿ ಬೆಳಗಲಿ !
IX
ನಮ್ಮ ಯಜಮಾನರು ನನಗೆ ಸ್ತ್ರೀಧರ್ಮಗಳನ್ನು ಉಪದೇಶ ಮಾಡಿದ ದಿನ
ಮಧ್ಯಾಹ್ನ ನಾಲ್ಕು ವರೆ ಗಂಟೆ ಸಮಯದಲ್ಲಿ ನಮ್ಮ ಭಾವನವರಿಗೂ ನಮ್ಮ ಮನೆಯವ
ಗೂ (ಅಣ್ಣ ತಮ್ಮಂದಿಗೆ) ಈ ಕೆಳಗೆ ಕಂಡಂತೆ ಸಂಭಾಷಣೆ ನಡೆಯಿತು.
ಅಣ್ಣ-ವಾಸುದೇವ ! ನೀನು ನಿನ್ನೆಯದಿನ ರಂಗಪುರದಿಂದ ಕಳುಹಿಸಿದ ತಂತಿಯು
ತಲಪಿತು. ನೀನು ನಿಮ್ಮ ಅತ್ತೆಯನ್ನು ನೋಡಿದ್ದೆಯೋ ?
ತಮ್ಮ -ಹೌದು, ನೋಡಿದ್ದೆನು. ಹಣದ ವಿಚಾರವನ್ನು ಕೇಳಿದೆನು !
ಅಣ್ಣ ಏನೆಂದು ಕೇಳಿದೆ ! ಅವರೇನು ಹೇಳಿದರು ?
ತಮ್ಮ-ನಿಮ್ಮ ಮಗಳಲ್ಲಿ ಏನು ಪದಾರ್ಥವನ್ನು ಕೊಟ್ಟಿರುವಿರಿ ಎಂದು ಕೇಳಿದುದಕ್ಕೆ
ಒಂದು ಅಡ್ಡಿಕೆ, ಐವತ್ತು ರೂಪಾಯಿಗಳನ್ನು ಕೊಟ್ಟಿರುವೆನೆಂದು ಹೇಳಿದರು.
ಅಣ್ಣ-ಈ ಮಾತು ನಿಜವೋ ? ನಿಜವಾಗಿಯೂ ಅವರು ಹಾಗೆ ಹೇಳಿದರೋ ?
ತಮ್ಮ ನಿಜವಾಗಿಯೂ ಹೀಗೆಯೇ ಹೇಳಿದರು, ಇದರಲ್ಲಿ ಸಂದೇಹ ಪಡಲು
ಕಾರಣವೇನಿರುವುದು ?
ಅಣ್ಣ-ಆದಿನ ನಡೆದ ಹಣದ ವಿಚಾರದಲ್ಲಿ ಏನಂದು ಇತ್ಯರ್ಥವಾಯಿತು. ದೋಷಿಗ
ಳಾರೆಂಬುದನ್ನು ಬಲ್ಲೆಯೋ ?
------------------------------------------
ನನ್ನ ಸಂಸಾರ 49
ತಮ್ಮ-ಅಹುದು, ಚೆನ್ನಾಗಿಬಲ್ಲೆನು. ಸೌಭಾಗ್ಯವತಿಯೇ ಹಣವನ್ನು ತೆಗೆದುಕೊ೦
ಡಿರುವಳೆಂಬುದಕ್ಕೆ ಸಾಕಾದಷ್ಟು ಪ್ರಮಾಣಗಳೂ ತೋರಿಬಂದುವು. (ಪ್ರತ್ಯ
ಕ್ಷವಾದರೂ ಪ್ರಮಾಣಿಸಿ ನೋಡಬೇಕಲ್ಲವೆ ? )
ಅಣ್ಣ-ಕೈ ಹುಣ್ಣಿಗೆ ಕನ್ನಡಿ ಏಕೆ ? ಎಂಬಂತೆ ನಮ್ಮ ಮನೆಯಲ್ಲಿ ಸಾಕಾದಷ್ಟು
ಪ್ರಮೇಯಗಳಿಂದ ನಿನ್ನ ಹೆಂಡತಿಯು ವ್ಯಾಪಾರ ಮಾಡಿದುದು ಖಚಿತ
ವಾಗಿ ತೋರಿದರೂ ನೀನು ಈ ವಿಧವಾದ ಸುಳ್ಳು ಹೇಳಿ ದೋಷಿಯಾದ ಹೆಂಡ
ತಿಯನ್ನು ನಿರ್ದೋಷಿಯೆಂದು ಹೇಗೆ ಹೇಳಿಕೊಳ್ಳುವೆ ?
ತಮ್ಮ-( ಕೋಧಕಂಪಿತ ಸ್ವರದಿಂದ) ಏನೇನು ? ನನ್ನ ಹೆಂಡತಿ-ಹಣವನ್ನು ಕದ್ದಳೆಂದು
ಪುನಃ ಹೇಳುವಿರಾ ? ನನ್ನ ಹೆಂಡತಿಯು, ಈ ಹಣವು ನಮ್ಮ ತಾಯಿಯಿಂದ ನನಗೆ
ಕೊಡಲ್ಪಟ್ಟಿತು. ಎಂದು ಹೇಳಿದ ಮಾತಿನ ನಿಶ್ವಯಾಂಶವನ್ನು ತಿಳಿ
ಯಲು ನಾನು ರಂಗಪುರಕ್ಕೆ ಹೋಗಿದ್ದು ದೂ ಅಲ್ಲಿ ನಡೆದ ವರ್ತಮಾನವನ್ನು
ನಿನ್ನೆಯದಿನವೇ ತಂತಿಯ ಮೂಲಕ ತಿಳಿಸಿದುದನ್ನೂ ನೀವು ಈಗಲೇ ಮರೆತಂತೆ
ತೋರುತ್ತದೆ.
ಅಣ್ಣ-ಏಕಾದೀತು ? ಇದೆಲ್ಲಾ ಸುಳ್ಳು ! ಇಂದ್ರಜಾಲ ! ನಿನ್ನ ಹೆಂಡತಿಯ ತಪ್ಪನ್ನು
ಮುಚ್ಚಬೇಕೆಂದು ನೀವೆಲ್ಲಾ ಗುಂಪುಗೂಡಿ ಆಲೋಚನೆಮಾಡಿ ಈ ಆಟವನ್ನು
ಹೂಡಿರುವಂತೆ ತೋರುತ್ತದೆ. ನಾನೇನು ನಿಮ್ಮ ಮಾತನ್ನು ನಂಬುವಷ್ಟು
ಹೇಡಿಯಲ್ಲ. ನಿನಗೇಕೆ ಹೀಗೆ ಬುದ್ದಿ ಬದಲಾಗಿ ಹೋಯಿತು. ಹೇಳು.
ತಮ್ಮ-(ಅನಿರ್ವಾಹವಾಗಿ ಬಂದ ಕೋಪವನ್ನು ಕಷ್ಟದಿಂದ ತಡೆದು) ಅಣ್ಣನವರೇ !
ತಡೆದು ಮಾತನಾಡಿ, ನಿದಾನವಾಗಿ ಆಲೋಚಿಸಿರಿ. ನಾನು ನಿಮ್ಮ ಮಾತಿಗೆ ಮೀರಿ
ಮರ್ಯಾದೋಲ್ಲಂಘನನ್ನು ಮಾಡಬೇಕಾದ ಸಮಯವು ಪ್ರಾಪ್ತವಾ
ದಂತಿದೆ. ದೋಷಿಯಾಗಿದ್ದಾಗ್ಯೂ ಹೆಂಡಂತಿಯನ್ನು ನಿರ್ದೋಷಿಯೆನ್ನುವುದಕ್ಕೆ
ನಾನೇನೂ ಷಂಡನಲ್ಲ. ನಿಮ್ಮೊಡನೆ ಸುಳ್ಳು ಹೇಳಿ ನಾನೇನೂ ದ್ರವ್ಯಾಪಹಾರ
ಮಾಡುವುದಕ್ಕೆ ಬಂದಿಲ್ಲ. ಸಾವಿರ ಮಾತಿನಿಂದೇನು ? ಲೋಕವನ್ನು ಮೆಚ್ಚಿಸಿ
ನನಗಾಗಬೇಕಾದುದು ತಾನೇ ಏನಿರುವದು ? ಪ್ರಾಮಾಣಿಕತನವೂ ಧರ್ಮವೂ
ನಮ್ಮಲ್ಲಿರುವುದಾದರೆ ಸರ್ವವ್ಯಾಪಿಯಾದ ಪರಮಾತ್ಮನು ಮೆಚ್ಚಿಯೇ
ಮೆಚ್ಚುವನು, ಅಧರ್ಮದಿಂದ ಲೋಕವೆಲ್ಲಾ ಮೆಚ್ಚಬೇಕೆಂಬ ಆಶೆನನಗಿಲ್ಲ.
ನನ್ನ ಹೆಂಡತಿಯಿಂದ ನೀವು ಪೂರ್ವಾಪರ ವಿವೇಚನೆ ಇಲ್ಲದೆ ಸ್ವೀಕರಿಸಿರುವ
ಹಣವನ್ನು ತಾವು ಹಿಂದಕ್ಕೆ ಕೊಡಬೇಕೆಂದಿಲ್ಲ. ಅವಳು ನನ್ನೊಡನೆ
----------------------------------------
೫೦ ಕಾದಂಬರಿ ಸಂಗ್ರಹ
ದ್ರವ್ಯದ ವಿಚಾರವನ್ನು ಹೇಳದೆ ಗುಟ್ಟನಿಂದಿದ್ದುದಕ್ಕೆ ಇದೇ ದಂಡ ದ್ರವ್ಯ
ವೆಂದು ಭಾವಿಸಿದ್ದೇನೆ. ಆದರೆ ನಮ್ಮ ಅತ್ತೆಯ ಮಾತು ಸುಳ್ಳೆಂದೂ, ನಾನು
ವ್ಯಾಜದಿಂದ ಹೆಂಡತಿಯ ದೋಷವನ್ನು ಮುಚ್ಚುವವನೆಂದೂ ಇರುವ ನಿಮ್ಮ
ಭಾವವನ್ನು ಹೃದಯದಿಂದ ಈಚಿಗೆ ಕಿತ್ತು ಬಿಸುಡಿರಿ. ಧರ್ಮವು ಜಯಿಸುವುದೆಂ
ಬುದನ್ನೂ ತಾವು ಆಲೋಚಿಸಿರಿ. ಅನ್ಯಾಯದಿಂದ ಐಶ್ವರ್ಯದ ಮೇಲೆ ಐಶ್ವ
ರ್ಯವನ್ನು ಕೂಡಿಸಿ ನಿಜವನ್ನೂ ಪರೋಪಕಾರವನ್ನೂ ಮರೆಮಾಚುವ ಸ್ಥಿತಿಗೆ
ಧಿಕ್ಕಾರವಿರಲಿ ! ಪರಹಿಂಸಾರೂಪದಿಂದಗಳಿಸಿದ ಹಣದಿಂದ ಅಪಾಯವು
ಎಂದೆಂದಿಗೂ ತಪ್ಪದಿರುವುದರಿಂದ ಅದಕ್ಕೆ ಧಿಕ್ಕಾರವಿರಲಿ ! ಅನ್ಯಾಯಾರ್ಜನೆ
ಯನ್ನು ಧಿಕ್ !ಧಿಕ್ !!! ನ್ಯಾಯಮಾರ್ಗದಿಂದ ಸಂತೋಷವಾಗಿ ಎಷ್ಟು
ಅನುಭವಿಸಿದರೆ ಅಷ್ಟೇ ಸಾಕಾಗಿರುವುದು.
ಅಣ್ಣ-ನಿನ್ನ ನೀತಿ ಧರಗಳನ್ನೆಲ್ಲಾ ದೂರದಲ್ಲಿ ಕಟ್ಟಿಡು, ನೀನು ಏನು ಹೇಳಿದರೂ
ನನಗೆ ಈವಿಷಯದಲ್ಲಿ ಸಂಶಯವು ದೂರವಾಗದು.
ತಮ್ಮ- (ನಿಟ್ಟುಸಿರುಬಿಟ್ಟು) ಪುಜ್ಯಭ್ರಾತೃಗಳೆ! ಇಂದಿನವರೆಗೂ ನಾವಿಬ್ಬರೂ
ಕ್ಷೀರೋದಕನ್ಯಾಯದಂತೆ ಒಟ್ಟು ಗೂಡಿದ್ದೆವು. ನಿರ್ಮಲವಾದ ಆಕಾಶಕ್ಕೆ
ಮೋಡಮುಸುಕಿ ಮಸಕಾದಂತೆ ನಮ್ಮ ನಿಮ್ಮ ಬುದ್ದಿಗಳು ಪತ್ನಿಯರಪಾರ
ಮಾರ್ಥಿಕಬೋಧೆಗಳಿಂದ ಇಂತು ಪರಿಣಮಿಸಿದುವು. ಲೋಕದಲ್ಲಿ ಅಣ್ಣ
ತಮ್ಮಂದಿರಾಗಿ ಹುಟ್ಟಿದಮೇಲೆ ರಾಮಲಕ್ಷ್ಮಣರಂತೆ ಪೂಜಪೂಜಕ
ಭಾವದಿಂದ ಅನುವರ್ತಿಸುವ ಸೋದರರು ಈಕಾಲದಲ್ಲಿ ಅತಿವಿರಳ ! ನಿಮ್ಮ
ವಿಷಯದಲ್ಲಿ ನನಗಿರುವ ಪೂಜ್ಯಭಾವವು ನನ್ನ ಮರಣಾವಧಿ ತಪ್ಪು
ವುದಲ್ಲ ಎಂದು ತಾವು ನಿಜವಾಗಿ ಭಾವಿಸಬೇಕು. ಪ್ರಕೃತಿಸಂಸರ್ಗದಿಂದ
ಶುದ್ಧವಾದ ಪರಮಾತ್ಮ ವಸ್ತುವಿಗೆ ಸಂಸಾರಾದಿವ್ಯವಹಾರಜ್ಞಾನಮ ಉತ್ಪನ್ನ
ವಾಗುವಂತೆ ನಿಷ್ಕಲ್ಮಷಹೃದಯರಾದ ತಾವು ಇಂದು ಪ್ರಕೃತ್ಯಧೀನ
ರಾಗಿ ಇಂತು ನನ್ನ ವಿಷಯದಲ್ಲೂ ನನ್ನ ಹೆಂಡತಿಯ ವಿಷಯದಲ್ಲೂ
ಸಂಶಯಪಡುತ್ತಿರುವಿರಿ, ಚಿಂತೆಯಿಲ್ಲ. ನಿಮ್ಮೀಸಂದೇಹವು ಎಂದಾದರೊಂದು
ದಿನ ಪರಿಹಾರವಾಗದೆ ಇರುವುದಿಲ್ಲ. ಇದುವರಿಗೂ ನಾವಿಬ್ಬರೂ ಒಂದು
ಗೂಡಿದ್ದಂತೆ ಇನ್ನು ಮೇಲೂ ಇರಬೇಕಾದರೆ-- ಪ್ರೀತಿಭಕ್ತಿಗಳೂ ಪೂರ್ವ
ದಂತೆಯೇ ರಾರಾಜಿಸಬೇಕಾಗಿದ್ದರೆ-- ನಾವು ಏಕ ಗೃಹಕೃತ್ಯದಲ್ಲಿ
ರುವುದು ಸರಿಬಾರದು. ಈ ವಿಧವಾಗಿ ಸಂಸಾರದಲ್ಲಿ ವಿವಾಂಕುರವು ಉತ್ಪನ್ನ
--------------------------------------------
ನನ್ನ ಸಂಸಾರ 51
ವಾಗಿರುವುದಕ್ಕೆ ಓರಗಿತ್ತಿಯರಿಬ್ಬರ ಅನ್ನೋನ್ಯಾಸಹನಗಳೇ ವಿನಾ ಬೇರೆ
ಕಾರಣವಿರದು. ಇದನ್ನು ಹೀಗೆಯೇ ಸರಿಮಾಡಿಕೊಂಡು ನಾವು ಒಂದೇ
ಸಂಸಾರದಲ್ಲಿದ್ದು ಬಿಟ್ಟರೆ ಇತೋಷ್ಯಧಿಕವಾದ ದ್ವೇಷಾಸೂಯೆಗಳು ನಮ್ಮಿಬ್ಬ
ರಿಗೂ ಉಂಟಾಗಿ ಅನರ್ಥವುಂಟಾಗಲು ಕಾರಣವಾಗಬಹುದಾದುದರಿಂದ,
ನಾನು ಈ ದಿನ ಈ ಸಂಸಾರದಲ್ಲಿ ಹುಟ್ಟಿದ ಈ ವಿಷಬೀಜನ್ನು ನಾಶಮಾಡು
ವುದಕ್ಕಾಗಿ ಬೇರೆ ಕಡೆಗೆ ಹೊರಟುಹೋಗುತ್ತೇನೆ. ನಮ್ಮಿಬ್ಬರ ಪ್ರೀತಿಗಳು
ಪೂರ್ವದಂತೆಯೇ ಇರಲಿ, ನಮ್ಮ ಸಂಸಾರದಲ್ಲಿ ಶಾಂತಿಯುನೆಲಸಲಿ.
ಅಣ್ಣ-(ಎಲ್ಲವನ್ನೂ ನಿದಾನವಾಗಿ ಕೇಳಿ ತಲೆದೂಗುತ್ತಾ) ನಿನ್ನ ಮನಸ್ಸು ಬಂದಂತೆ
ಮಾಡುವುದರಲ್ಲಿ ಆರ ಆತಂಕವೂ ಇಲ್ಲ.
ಈ ರೀತಿ ಸಂಭಾಷಣೆಗಳು ನಡದಬಳಿಕ ನಮ್ಮ ಭಾವನವರು ತಮ್ಮ ಚಿಕ್ಕ ಮನೆಗೆ
ಹೊರಟು ಹೋದರು. ನಮ್ಮ ಯಜಮಾನರೂ ಕೂಡಲೆ ತಾವೂ ಹೊರಕ್ಕೆ ಹೋಗಿ ಒಂದು
ಗಾಡಿಯನ್ನು ಮಾಡಿಕೊಂಡು ಸ್ವಲ್ಪಹೊತ್ತಿನಲ್ಲೇ ನಮ್ಮ ಮನೆಯ ತಲೆಬಾಗಿಲಿನಲ್ಲಿ
ತಂದು ನಿಲ್ಲಿಸಿದರು. ಮಿತವಾಗಿ ಗೃಹಕೃತ್ಯಕ್ಕೆ ಬೇಕಾಗುವ ಪಾತ್ರೆಪದಾರ್ಥಗಳನ್ನು
ಗಾಡಿಯಲ್ಲಿರಿಸಿ ನನ್ನನ್ನು ಬಂದು ಕುಳಿತುಕೊಳ್ಳುವಂತೆ ಹೇಳಿದರು. ಮೇಲಿನ ಸಂಭಾಷ
ಣೆಗಳನ್ನೂ ಈ ವಿಧವಾದ ಪರಿವರ್ತನವನ್ನೂ ನೋಡಿ ನಾನು ವಿಸ್ಮಯದಿಂದ ತಲೆದೂ
ಗುತ್ತ, ಭಾವನವರಿಗೂ, ಅಕ್ಕನಮಗೂ ನಮಸ್ಕರಿಸಿ ಗಾಡಿಯಮೇಲೆ ಹೋಗಿ ಕುಳಿತು
ಕೊಂಡೆನು. ನಮ್ಮ ಯಜಮಾನರೂ ಅಂತೆಯೇ ಅಣ್ಣ ಅತ್ತಿಗೆಯರುಗಳಿಗೆ ನಮಸ್ಕರಿಸಿ
ಗಾಡಿಯಮೇಲೆ ಕುಳಿತು ಬಂಡಿಯನ್ನು ರಂಗಪುರಕ್ಕೆ ಹೊಡೆಯುವಂತೆ ಹೇಳಿದರು.
ರಂಗವುರಕ್ಕೆ, ಎಂಬ ಮಾತನ್ನು ಕೇಳಿ ನನಗೆ ಬಹು ಹರ್ಷಾಶ್ವರ್ಯಗಳುಂಟಾಗಿ ಇದೇನು?
ಈಗ ರಂಗಪುರಕ್ಕೆ ಏಕೆ ಹೋಗಬೇಕೆಂದು ಕೇಳಿದನು. ಅದಕ್ಕೆ ಅವರು, ನಿಮ್ಮ ತಾಯಿ
ಯವರನ್ನು ಮೊನ್ನೆ ನೋಡಲಿಕ್ಕೆ ಹೋಗಿದ್ದಾಗ ಅವರು ನವಮಾಸಗರ್ಭವತಿಯರೆಂದೂ
ಅನನ್ಯಸಹಾಯರಾಗಿರುವರೆಂದೂ ತಿಳಿದು ನಾನು ನನ್ನಿಂದ ಸಹಾಯವೇನಾಗಬೇಕೆಂದು
ಕೇಳಲು ನಮ್ಮ ಸೌ || ಮಹಾಲಕ್ಷ್ಮಿಯನ್ನು ಮೂರು ತಿಂಗಳುಮಟ್ಟಿಗೆ ಕಳುಹಿಸಿಕೊಟ್ಟಿ
ದ್ದರೆ ಬಹಳ ಉಪಕಾರವಾಗುವುದೆಂದು ಹೇಳಿದ್ದರು. ನಾನು ಅದಕ್ಕೆ, ನೋಡೋಣ--
ಎಂದು ಹೇಳಿ ಬಂದಿದ್ದೆನು. ಅವರ ಸಹಾಯಾರ್ಥವಾಗಿಯೂ ನಿನ್ನ ಮನಸ್ಸಮಾಧಾನ
ಕ್ಕಾಗಿಯೂ ನಿನ್ನನ್ನು ಈಗ ರಂಗಪುರಕ್ಕೆ ಕರೆದುಕೊಂಡು ಹೋಗುತ್ತಿದ್ದೇನೆ ಎಂದು
ಹೇಳಲು ನನಗೆ ಆಗ ಪರಮಾವಧಿಸಂತೋಷವುಂಟಾಯಿತು. ನನ್ನ ತಾಯಿಯನ್ನು ನೋಡಿ
ನಾನು ವರ್ಷವಾಗಿ ಹೋಗಿದ್ದಿತು. ಇಂದು ನಾನು ತಂದೆತಾಯಿಗಳನ್ನು ನೋಡುವ
---------------------------------------------
52 ಕಾದಂಬರಿ? ಸಂಗ್ರಹ
ವಿಷಯವನ್ನು ತಿಳಿದುಕೊಂಡಮೇಲೆ ನನ್ನ ಮನಸ್ಸಿನಲ್ಲಿ ಆದ ಆನಂದವು ಇಷ್ಟೇ ಎಂದು
ಹೇಳಲಾರೆನು. ತೌರುಮನೆಗೆ ಹೋಗಲಾಶೆಯುಳ್ಳ ಹೆಣ್ಣು ಮಕ್ಕಳೇ ಈ ಆನಂದವನ್ನು
ಮನನ ಮಾಡಬಹುದು.
ಮೂರುಗಂಟೆ ಕಾಲದೊಳಗಾಗಿ ಅಂದರೆ ರಾತ್ರಿಎಂಟುಗಂಟೆ ಸಮಯದಲ್ಲಿ
ಬಂಡಿಯು ರಂಗಪುರದಲ್ಲಿ ನಮ್ಮ ತೌರುಮನೆಯ ಹತ್ತಿರ ಬಂದುನಿಂತಿತು. ನಾನೂ
ಗಾಡಿಯಿಂದಿಳಿದು ಒಳಕ್ಕೆ ಹೋದೆನು. ನನ್ನ ತಾಯಿಯು ನನ್ನನ್ನು ತಬ್ಬಿಕೊಂಡು ಗಟ್ಟಿ
ಯಾಗಿ ಅತ್ತು ಬಿಟ್ಟರು. ವೃಥಾನವಾದಕ್ಕೆ ಪಾತ್ರಳಾಗಿ ನಮ್ಮ ತಾಯಿಯು ಕೊಟ್ಟ
ಹಣವನ್ನೂ ಹಾಳುಮಾಡಿಕೊಂಡುದಕ್ಕಾಗಿ ನಾನು ನನ್ನ ತಾಯಿಯನ್ನೇ ಸ್ವಲ್ಪನಿಂದೆ
ಮಾಡಿದೆನು. ತಾಯಿಯ ಬಹು ಪಶ್ಚಾತ್ತಾಪ ಪಟ್ಟು ತಮ್ಮ ಅವಿವೇಕಕ್ಕಾಗಿ ವಿವಾದ
ಗೊಂಡರು. ನಮ್ಮ ಯಜಮಾನರು ನನ್ನನ್ನು ಅಲ್ಲಿ ಒಟ್ಟು ಮಾರನೆಯದಿನ ಬೆಳಿಗ್ಗೆರೈಲಿ
ನಲ್ಲಿ ಶ್ರೀ ನಗರಕ್ಕೆ ಪ್ರಯಾಣ ಮಾಡಿದರು.
ನಾನು ತೌರುಮನೆಗೆ ಒಂದು ಈಗಾಗಲೇ 8-10 ದಿನಗಳು ಕಳೆದು ಹೋದುವು.
ಈ 8-10 ದಿವಸಗಳವರೆಗೆ ನನ್ನ ಸ್ವಾಮಿಯ ವೃತ್ತಾಂತವೇ ತಿಳಿಯದೆ ನನಗೆ ಬಹುಚಿಂ
ತೆಯುಂಟಾಗಿದ್ದಿತು. ಅಷ್ಟರಲ್ಲೇ ಅಂಚೆಯವನು ಬಂದು 1 ಪುಸ್ತಕದಭಾಂಗಿಯನ್ನೂ
1 ಕವರನ್ನೂ ನನಗೆ ಕೊಟ್ಟು ಹೊರಟು ಹೋದರು. ಅಂಚೆಯು ಮುದ್ರೆಯು ಹರಪುರ
ದ್ದಾಗಿದ್ದಿತು. ನಾನು ಆತುರದಿಂದ ಪತ್ರವನ್ನು ಬಿಚ್ಚಿ ಓದಿನೋಡಿದೆನು.
ಕುಶಲಂ, ಹರಪುರ.
ಆಶಿರ್ವಾದಗಳು. ಮಕರಸಂಕ್ರಮಣ.
ನಾನು ಇಲ್ಲಿಗೆ ಬಂದು ನಾಲ್ಕು ದಿನವಾಯಿತು. ಶ್ರೀನಗರದಲ್ಲಿ ನಾನೊಬ್ಬನೇ
ಇರಲು ಬಯ ತೊಂದರೆಯಾದುದುಂದ, ಹೊಟಿಲಿನಲ್ಲಿ ಊಟಮಾಡಬೇಕಾಗಿ ಬಂದು
ದರಿಂದಲೂ ವಾಸಕ್ಕೆ ಸರಿಯಾದ ಮನೆಯು ದೊರೆಯದೆಯೋದುದುಂದೆಯೂ ಮೂರು
ತಿಂಗಳಕಾಲ ಶಾಲೆಗೆ ರಜವನ್ನು ತೆಗೆದುಕೊಂಡು ಇಲ್ಲಿಗೆ ಬಂದೆನು. ಇಲ್ಲಿ ನಾನೂ
ಮಾತೋಶ್ರೀಯವರೂ ಸುಖವಾಗಿದ್ದೇವೆ. ಇನ್ನೆರಡು ತಿಂಗಳು ಬಿಟ್ಟು ಕೊಂಡು ಶ್ರೀನ
ಗರಕ್ಕೆ ಹೋಗಿ ಅನುಕೂಲವಾದ ಮನೆಯೊಂದನ್ನು ಗೊತ್ತು ಮಾಡಿ ಬಳಿಕ ನಿನ್ನನ್ನು
ಕರೆಯಿಸಿಕೊಳ್ಳುವೆನು. ಇದೇ ದಿನವೇ ನಿನ್ನ ಹೆಸರಿಗೆ " ಸತೀಹಿತಬೋಧಿನಿ"
" ಪಾತಿವ್ರತ್ಯ” "ಸ್ತ್ರೀಧರ್ಮನೀತಿ" " ಸಾದ್ವೀಪಿತಸೂಚಿನಿ" ಎಂಬ ನಾಲ್ಕು
ಪುಸ್ತಕಗಳನ್ನು ಭಾಂಗಿಮಾಡಿ ಕಳುಹಿಸಿರುವೆನು, ಪುಸ್ತಕಗಳನ್ನು ಚೆನ್ನಾಗಿ ಓದು
ವದಲ್ಲದೆ ನಿನ್ನ ಸಮಯವನ್ನು ಒಳ್ಳೆಯ ರೀತಿಯಲ್ಲಿ ವಿನಿಯೋಗಿಸುತ್ತಿರಬೇಕು.
---------------------------------------------
ನನ್ನ ಸಂಸಾರ 53
ನಿಮ್ಮ ತಾಯಿಯು ಪೂರ್ವಕಾಲದ ಹಳೇನಡತೆಯುಳ್ಳವರು. ಅವರಿಗೆ ಸಮಯ
ದಲ್ಲಿ ತಕ್ಕಸಲಹೆಗಳನ್ನು ಹೇಳಿಕೊಡುತ್ತಾ ಗೃಹಕೃತ್ಯದಲ್ಲಿ ಮಿತವ್ಯಯಿಗಳಾಗಿ
ರುವಂತೆ ಹೇಳುವುದು. ಹಿಂದಿನ ಸ್ಮರಣೆಗಳನ್ನು ನೆನೆದು ಜಾಗರೂಕಳಾಗಿರು.
ಚಿ|| ಮಗುವಿನ ಆರೋಗ್ಯ ವಿಷಯದಲ್ಲಿ ಬಹು ಎಚ್ಚರವನ್ನು ವಹಿಸು. ನಿನ್ನ ಕ್ಷೇಮ
ಲಾಭಕ್ಕೆ ಪತ್ರಬರಿ. ಇತ್ಯಾಶಿಷಃ
ಕಾಗದವನ್ನು ಓದಿಯಾದಮೇಲೆ ಪ್ರಸ್ತಕಗಳನ್ನು ಒಂದೊಂದಾಗಿ ಓದಿ
ನೋಡಿದೆನು. ಈ ನಾಲ್ಕು ಗ್ರಂಧಗಳೂ ಗೃಹಿಣಿಯಾದವಳ ನಿತ್ಯಪಠನಕ್ಕೆ ಯೋಗ್ಯ
ವಾದುದೆಂದು ತಿಳಿದು ಬಂದುದುಂದ ನಾನು ಅದನ್ನು ಪುನಃ ಪುನಃ ಓದುತ್ತಾ ತದುಕ್ತ
ಧರ್ಮಗಳನ್ನು ಮನನಮಾಡುತ್ತಾ ನನ್ನ ಸ್ವಾಮಿ.ತದನ್ನೇ ಮನಸ್ಸಿನಲ್ಲಿ ಸದಾ ಚಿಂತಿ
ಸುತ್ತಾ ಸಮಯದೊರೆತಾಗ ನನ್ನ ಒಡನಾಡಿಯರಿಗೂ ತಕ್ಕ ಧರ್ಮನೀತಿಗಳನ್ನು
ಹೇಳುತ್ತಾ ನಿಲಗಳೆಯುತ್ತಿದ್ದೆನು. ನನ್ನ ತಾಯಿಯ ನಾನು ಬಂದ ಇಪ್ಪತ್ತು ದಿನ
ಗಳಿಗೆ ಗಂಡುಮಗುವನ್ನು ಹೆತ್ತರು. ಈ ವಿಚಾರವನ್ನು ಕುರಿತು ಹರಪುರಕ್ಕೆ ಕಾಗದ
ವನ್ನು ಬರೆದುದೂ ಆಯಿತು.
X
ನಾನು ರಂಗಪುರದಲ್ಲಿ ಒಂದು ತಿಂಗಳುಕಾಲವನ್ನು ಕಳೆದೆನು. ಹರಪುರದಿಂದ
ನಮ್ಮ ಯಜಮಾನರು ಈ ಅವಧಿಯಲ್ಲಿ ರಂಗಪುರಕ್ಕೆ ಬಂದಾರೆಂದು ನಿರೀಕ್ಷಿಸಿದೆನು.
ಬರಲಿಲ್ಲ. ಒಂದು ತಿಂಗಳು ಕಳೆದಮೇಲೆ ಶ್ರೀ ನಗರದಲ್ಲಿ ನಡೆದ ವಿಚಿತ್ರವೃತ್ತಾಂತವೊಂ
ದನ್ನು ನಮ್ಮ ಯಜಮಾನರು ಪತ್ರಮುಖೇನ ವಿಸ್ತಾರವಾಗಿ ನನಗೆ ತಿಳಿಸಿದರು. ಆ ಪತ್ರದ
ಮುಖ್ಯ ಸಾರಾಂಶವು ಈ ಕೆಳಗೆ ಬರೆಯಲ್ಪಡುತ್ತದೆ.
ಶ್ರೀ ನಗರದ ನಮ್ಮ ಮನೆಯಲ್ಲಿ ಹತ್ತು ವರ್ಷಕಾಲದಿಂದ ಒಬ್ಬಳು ಕಪಟಿಯಾದ
ಮುದುಕಿಯಿದ್ದಳು. ಇವಳು ನಮ್ಮ ಬಂಧುಗಳಲ್ಲೊಬ್ಬರ ಮನೆಯವಳಾಗಿದ್ದುದರಿಂ
ದಲೂ ಅವಳಿಗೆ ಯಾರೂ ದಿಕ್ಕಿಲ್ಲದ್ದರಿಂದ ನಮ್ಮ ಮನೆಯಲ್ಲೇ ಬಂದು ಸೇರಿಕೊಂ
ಡಿದ್ದಳು. ಇವಳಿಂದ ಒಂದೊಂದು ಕಾಲದಲ್ಲಿ ನಮಗೆ ಅನೇಕ ಸಹಾಯವಿದ್ದುದರಿಂದ
ನಮ್ಮ ತಾತನವರು ಅವಳನ್ನು ಮನೆಯಲ್ಲಿರಲು ಸ್ವಾತಂತ್ರ್ಯವನ್ನು ಕೊಟ್ಟಿದ್ದರು.
ಆ ಮುದುಕಿಯ ನಡತ ವಿಚಿತ್ರವಾದುದು. ಅವಳಿಗೆ ಒಬ್ಬರಮೇಲೆ ಇನ್ನೊಬ್ಬರ ಚಾಡಿ
ಯನ್ನು ಹೇಳಿ ಪರದೂಷಣೆ ಯನ್ನು ಮಾಡಿ ಆದವರಿಗೆ ತಂದಿಕ್ಕಿ ತಮಾಷೆ ನೋಡುವು
ದರಲ್ಲಿ ಬಹು ಕುತೂಹಲ. ಅಲ್ಲದೆ ಪ್ರಪಂಚದ ಎಲ್ಲಾ ವೃತ್ತಾಂತವೂ ಇವಳಿಗೆ ಬಲು
ಬೇಗ ತಿಳಿಯುತ್ತಿದ್ದುದರಿಂದ ಇವಳು ಒಂದು ದೈನಂದಿನ ಪತ್ರಿಕೆಯಂತೆ ಪ್ರಸಿದ್ಧಳಾಗಿ
---------------------------------------------
54 ಕಾದಂಬರಿ ಸಂಗ್ರಹ
ದ್ದಳು. ಆದರೆ ನಮ್ಮ ಮನೆಯಲ್ಲಿ ಮಾತ್ರ ನಿಸ್ಪೃಹಳಂತೆ ತೋರ್ಪಡಿಸಿ ಕೊಳ್ಳುತಿದ್ದಳು.
ಇವಳನ್ನು ಕಂಡರೆ ನಮ್ಮ ಅಕ್ಕನಮಗೆ ಬಹುಪ್ರೀತಿ ಗುಟ್ಟಾಗಿ ಅವಳ ಕೈಲಿ ದುಡ್ಡು
ಕೊಟ್ಟು ಆಗಾಗ್ಗೆ ತಮಗೆ ಬೇಕಾದ ತಿಂಡಿಯನ್ನು ಮಾಡಿಸಿಕೊಳ್ಳುತ್ತಿದ್ದರು. ಆ ಮುದು
ಕಿಯ ಅಣ್ಣನ ಭಾವಮೈದುನ ಮಗ 10 ವರ್ಷ ವಯಸ್ಸುಳ್ಳ ಚಂಡಕೇಶವನೆಂಬ ಒಬ್ಬ
ಹುಡುಗನು ಅನಾಥನಾಗಿ ಬಂದು ಈ ಮುದುಕಿಯ ಮನೆಯಲ್ಲಿ ಸೇರಿಕೊಂಡಿದ್ದನು.
ಅವನ ವಿದ್ಯಾಭ್ಯಾಸದ ವಿಚಾರವನ್ನು ಈ ಮುದುಕಿಯು ವಹಿಸಿಕೊಂಡಿದ್ದಳು. ಈ
ಹುಡುಗನು ನಮ್ಮ ಮನೆ ಮಕ್ಕಳೊಡನೆ ಸೇರಿಕೊಂಡು ಆಟವನ್ನು ಆಡುತ್ತಿದ್ದನು. ಅಲ್ಲದೆ
ನಮ್ಮ ಅಕ್ಕನು ತಮ್ಮ ಚಿಕ್ಕ ಮನೆಯ ಕಾವಲಿಗೆ ತಾವು ಮನೆಯಲ್ಲಿಲ್ಲದಾಗ ಈ ಹುಡು
ಗನನ್ನು ನೇಮಿಸುತ್ತಿದ್ದರು. ಹುಡುಗನೂ ನಂಬಿಕೆಯಾಗಿಯೇ ಇದ್ದನು. ಮುದುಕಿಯು
ಆ ಹುಡುಗನನ್ನು ಒಳ್ಳೆಯ ಶಿಕ್ಷೆಯಲ್ಲಿಟ್ಟುಕೊಂಡಿದ್ದಳು. ನಮ್ಮ ಮನೆಯಲ್ಲಿ ಹಣ
ಹೋಗಿ ನನ್ನ ಮೇಲೆ ಕಳ್ಳತನವು ಆರೋಪಿತವಾದಾಗ ಆ ಮುದುಕಿಯೂ ಆ ಹುಡು
ಗನೂ ಅಲ್ಲಿಯೇ ಇದ್ದರು. ನಮ್ಮ ಮನೆಯಲ್ಲಿ ಆಗ ನಡೆದ ವೃತ್ತಾಂತವೆಲ್ಲಾ ಆ ಮುದು
ಕಿಗೆ ಚೆನ್ನಾಗಿ ಗೊತ್ತಾಗಿ ಅವಳು ಅದೇ ಸಮಯವೆಂದು ನನ್ನ ಮೇಲೆ ಅನೇಕಕ್ಷುದ್ರ
ಗಳನ್ನು ಹೇಳಿಬಿಟ್ಟಿದ್ದಳು. ಇದೇ ಕಾರಣದಿಂದಲೇ ನಮ್ಮ ಭಾವನವರು ನಮ್ಮ ಯಜಮಾ
ನರ ಮಾತನ್ನು ನಂಬದೆ ತಿರಸ್ಕರಿಸಿ ಮಾತನಾಡಿದ್ದರು. ನಾವು ಆ ಮನೆಯನ್ನು ಬಿಟ್ಟು
ಹೊರಟುಬಂದಮೇಲೆ ಇಪ್ಪತ್ತು ದಿನಗಳು ಕಳೆದಿದ್ದಿತು. ಆಗೊಂದು ದಿನ ನಮ್ಮ ಭಾವನ
ವರ ಅಂಗಜೇಬಿನಲ್ಲಿ ಮಧ್ಯಾಹ್ನ ನಾಲ್ಕು ಗಂಟೆಯಲ್ಲಿಟ್ಟಿದ್ದ ಹತ್ತು ಪಾವಲಿಗಳಲ್ಲಿ ನಾಲ್ಕು ಪಾ
ವಲಿಗಳು ಕಮ್ಮಿಯಾಗಿದ್ದುವಂತೆ ? ಅವರು ಸಾಯಂಕಾಲ ಎಂಟುಗಂಟೆಗೆ
ಮನೆಗೆ ಬಂದು ಏನೋ ಖರ್ಚಿಗಾಗಿ ಜೇಬಿನಲ್ಲಿದ್ದ ದುಡ್ಡನ್ನು ನೋಡಲು ನಾಲ್ಕು ಪಾ
ವಲಿಗಳು ಇರಲಿಲ್ಲವಂತೆ ! ಮನೆಯಲ್ಲಿ ಯಾರನ್ನು ಕೇಳಿದರೂ ನನಗೆ ಗೊತ್ತಿಲ್ಲ,
ತಮಗೆ ಗೊತ್ತಿಲ್ಲವೆಂದು ಹೇಳಿ ಬಿಟ್ಟರು. ನಮ್ಮ ಭಾವನವರಿಗೆ ಯಾರಮೇಲೆ ಸಂದೇಹ
ಪಡಲಿಕ್ಕೂ ಕಾರಣವಿಲ್ಲದ್ದರಿಂದ ಮನೆಯಲ್ಲೆಲ್ಲರೂ ನಂಬಿಕೆಗೆ ಅರ್ಹರೆಂದು
ತಿಳಿದಿದ್ದುದರಿಂದಲೂ ಸುಮ್ಮನಾಗಿಬಿಟ್ಟು ಕೈಕಾಲು ತೊಳೆದುಕೊಂಡು ಸಂಧ್ಯಾವಂದನೆ
ಗಾಗಿ ಬೀದಿಜಗಲಿಯ ಮೇಲೆ ಹೋಗಿ ಕುಳಿತು ಕೊಂಡರು. ಆಗ ನಡುಬೀದಿಯಲ್ಲಿ
ಆಡಿಕೊಂಡು ಬರುತ್ತಿದ್ದ ನಮ್ಮ ಮನೆಯ ಚಂಡಕೇಶವನೂ ಮಗ್ಗುಲುಮನೆ ನಾರಾಯಣ
ನೆಂಬ 11 ವರ್ಷದ ಹುಡುಗನೂ ಈ ಕೆಳಗೆ ಕಂಡಂತೆ ಸಂಭಾಷಿಸುತ್ತಿದ್ದರು.
ನಾರಾಯಣ- ಎಲೋ ! ಕೇಶವ, ನೀನು ಈ ದಿನ ಹೋಟಲಿನಲ್ಲಿ ಕೊಡಿಸಿದ ತಿಂಡಿ
ಬಹುರುಚಿಯಾಗಿತ್ತು ಕಣೋ, ಅದರಲ್ಲೂ ಬಾಳೆಕಾಯಿಸಕೊಡವಂತೂ ತುಂಬಾ
ಚೆನ್ನಾಗಿತ್ತು.
----------------------------------------------
ನನ್ನ ಸಂಸಾರ 55
ಚಂಡಕೇಶವ-ಲೋ, ನಾರಾಯಣ, ನಾಳೆಯ ದಿನವೂ ನನ್ನ ಜತೇಲಿ ಬರುತ್ತೀ
ಯೇನೋ, ಶ್ಯಾಮಮೂರ್ತಿ, ಕೋದಂಡರಾಮ ಇವರನ್ನೂ ಕರೆದುಕೊಂಡು
ಬಾ, ನನ್ನ ಹತ್ತಿರ ಮರು ಪಾವಲಿಇದೆ. ನಿಮಗೆಲ್ಲಾ ನಾಳೆಯೂ ತುಂಬಾ
ತಿಂಡಿ ಕೊಡಿಸುತ್ತೇನೆ.
ನಾರಾಯಣ-ಲೋ, ನಿನಗೆ ದುಡ್ಡಲ್ಲಿತ್ತೋ, ನಿಮ್ಮಜ್ಜಿ ಕಂಡರೆ ಬಯ್ಯುವದಿಲ್ಲ
ವೇನೋ ನಾನು ಬರುವುದಿಲ್ಲವಪ್ಪಾ, ನಮ್ಮ ಮನೆಯವರು ಬಯ್ಯುತ್ತಾರೆ.
ಚಂಡ-ದುಡ್ಡೆ ! ದುಡ್ಡಿಗೇನೊ, ನನ್ನ ಹತ್ತಿರ ಎಷ್ಟೋ ರೂಪಾಯಿ ಇದೆ. ಅದ
ನ್ನೆಲ್ಲಾ ಒಂದು ಕಡೆ ಗುಟ್ಟಾಗಿಟ್ಟಿದ್ದೇನೆ. ಇನ್ನು ನಾಲೈದು ದಿನ ಕಳೆದ
ಮೇಲೆ ಅದರಲ್ಲಿ ಒಂದೊಂದಾಗಿ ತೆಗೆದುಕೊಂಡು ತಿಂಡಿಯನ್ನು ತಿನ್ನುತ್ತೇನೆ.
ನಿನಗೇಕೆ ಹೆದರಿಕೆಯೋ, ನನ್ನ ಜತೇಲಿಸುಮ್ಮನೆಬಾರೋ!
ನಾರಾಯಣ-ಹಾಗೇನೋ !ಹಾಗಾದರೆ ನೀನು ಜಾಣ, ಆಗಲಪ್ಪಾ, ಶ್ಯಾಮೂ,
ಕೋದಂಡ ಇವರನ್ನು ನಾಳೆ ಕರತರುತ್ತೇನೆ.
ಚಂಡ-ನಾನು ಮನೆಗೆ ಹೋಗುತ್ತೇನಪ್ಪಾ, ನಮ್ಮ ಅಜ್ಜಿ ಬಯ್ಯುತ್ತಾಳೆ. ನನ್ನ
ಹತ್ತಿರ ಒಂಭತ್ತು ಕಾಸಿದೆ. ಇದನ್ನು ತೆಗೆದುಕೊಂಡು ನಿನ್ನ ಹತ್ತಿರ ಇಟ್ಟಿರು.
ನಾಳೆ ತಿಂಡಿತಿನ್ನುವಾಗ ಕೊಡುವಿಯಂತೆ.
ಈರೀತಿ ಆ ಹುಡುಗರು ಮಾತನಾಡಿಕೊಂಡು ತಮ್ಮ ತಮ್ಮ ಮನೆಗಳಿಗೆ ಬಂದು
ಬಿಟ್ಟರು. ನಮ್ಮ ಭಾವನವರು ಆ ಹುಡುಗರ ಮಾತನ್ನು ಕೇಳುತ್ತಾ ಆಶ್ಚರ್ಯಪಟ್ಟು
ತಮ್ಮ ಜೇಬಿನಲ್ಲಿದ್ದ 4 ಪಾವಲಿಗಳನ್ನು ಈ ಚಂಡಕೇಶವನೇ ತೆಗೆದುಕೊಂಡಿರಬಹು
ದೆಂದು ಊಹಿಸಿದರು. ಹಾಗೆಯೇ ಅವನು ತನ್ನಲ್ಲಿ ತುಂಬಾ ರೂಪಾಯಿಗಳಿವೆ-ಎಂದು
ಹೇಳಿದಾಗ ಅವರಿಗೆ ದಿಗ್ಭ್ರಮೆಯುಂಟಾಯಿತು. ಇದರ ನಿಜಸ್ಥಿತಿಯನ್ನು ಪರೀಕ್ಷಿಸ
ಬೇಕೆಂದು ಅವರು ಸಂಧ್ಯಾವಂದನೆಯಾದ ಬಳಿಕ ಗುಟ್ಟಾಗಿ ಚಂಡಕೇಶವನನ್ನು ಕರೆದು
ಉಪಾಯದಿಂದ ಮಗು ! ನಿನ್ನ ಹತ್ತಿರ ದುಡೇನಾದರೂ ಇದ್ದರೆಕೊಡು. ನಾಳೆ
ಕೊಡುತ್ತೇನೆಂದು ಕೇಳಿದರು. ಅವನು ಇಲ್ಲ, ನನ್ನಲ್ಲಿ ದುಡ್ಡೆಲ್ಲಿರುತ್ತದೆ. ಎಂದನು.
ಎಲೋ ? ನೀನು ನಾರಾಯಣನ ಸಂಗಡ ಹೇಳುತ್ತಿರಲಿಲ್ಲವೇನೋ : ಆ ಮೂರು
ಪಾವಲಿಯನ್ನು ನೀನು ನನಗೆ ತಂದುಕೊಟ್ಟರೆ ನಿನಗೆ 1ಪಾವಲಿಯನ್ನು ಇನಾಮಾಗಿ
ಕೊಡುತ್ತೇನೆಂದು ಹೇಳಿದರು. ಅದಕ್ಕೆ ಅವನು, ನನ್ನ ಜೇಬಿನಲ್ಲಿ ನೋಡುತ್ತೇನೆ
ಇದ್ದರೆ ಕೊಡುತ್ತೇನೆಂದು ದಿಗಿಲಿನಿಂದ ಹೇಳಿದನು. ಅವನ ಭಯವನ್ನು ನೋಡಿ
ನಮ್ಮ ಭಾವನವರಿಗೆ ನಿಸ್ಸಂದೇಹವಾಗಿ ಅವನನ್ನು ಬಿಟ್ಟು ಬಿಟ್ಟರು. ಆ ಹುಡುಗನು
---------------------------------------------
56 ಕಾದಂಬರಿ ಸಂಗ್ರಹ
ಒಳಕ್ಕೆ ಹೋಗಿ ಹೆಚ್ಚಾಗಿ ನಿಂತುಕೊಂಡನು. ಅವರಜ್ಜಿಯು ಇವನ ಸ್ಥಿತಿಯನ್ನು
ನೋಡಿ ಇದೇಕೆ ! ಹೀಗಿರುವೆಯೆಂದು ಕೇಳಿದರು. ಉತ್ತರಹೊರಡಲಿಲ್ಲ. ಅಷ್ಟರಲ್ಲಿ
ನಮ್ಮ ಭಾವನವರು ಹೋಗಿ ಮುದುಕಿಯೊಡನೆ, ನಡೆದವೃತ್ತಾಂತವನ್ನೂ ಹುಡು
ಗರಿಬ್ಬರ ಸಂಭಾಷಣೆಯನ್ನೂ ತಿಳಿಸಿದರು. ಅದರ ಮೇಲೆ ಚಂಡಕೇಶವನ ಜೇಬನ್ನು
ಶೋಧಿಸಲು ಮೂರುಪಾವಲಿಗಳು ಸಿಕ್ಕಿದುವು. ಅದನ್ನು ನೋಡಿ ಮುದುಕಿಯು
ಆಹುಡುಗನನ್ನು ಹೊಡೆದು ಬಡೆದು ವಿಪರೀತವಾಗಿ ಶಿಕ್ಷಿಸಿಬಿಟ್ಟರು. ತುಂಬಾ
ರೂಪಾಯಿಗಳಿವೆಯೆಂದು ನಾರಾಯಣನಸಂಗಡ ಹೇಳಿದೆಯಲ್ಲಾ, ಇಲ್ಲಿ ಕೊಡು
ಅದನ್ನು ಕೊಟ್ಟರೆ ನಿನಗೆ ಎರಡು ರೂಪಾಯಿ ಇನಾಮು ಕೊಡುವೆನೆಂದು ನಮ್ಮ
ಭಾವನವರು ಹೇಳಲು ಆಹುಡುಗನು ಅಳುತ್ತಾ, ಇಲ್ಲ! ನನ್ನಲ್ಲಿಲ್ಲ ಎಂದು ಹೇಳಿದನು.
ಅವನನ್ನು ಎಲ್ಲರೂ ತುಂಬಾನೆದರಿಸಿ, ನೀನು ಹೇಳದಿದ್ದರೆ ನಿನ್ನನ್ನು ಪೋಲೀಸಿಗೆ
ಕೊಟ್ಟು ಬಿಡುತ್ತೇನೆಂದು ಹೇಳಿದರು. ಆಹುಡುಗನು ಬಹು ಕಷ್ಟದಿಂದ ಹಿತ್ತಲಿಗೆ ಹೋಗಿ
ಗೋಡೆಯಪಕ್ಕದಲ್ಲಿ ಒಂದು ಸ್ಥಳದಲ್ಲಿ ಬಗೆದು ಅಳುತ್ತಾ ನಿಂತುಕೊಂಡನು. ಎಲ್ಲರೂ
ಹೋಗಿ ಆ ಸ್ಥಳದಲ್ಲಿ ನೋಡಲು ಮಣ್ಣು ಹಿಡಿಯಲಾರಂಭವಾಗಿದ್ದ ಬೆಳ್ಳಿಯ ರೂಪಾ
ಗಳು ಕಾಣಬಂದುವು. ಭಾವನವರು ಅದನ್ನು ತೆಗೆದು ಎಣಿಸಲು ಅರವತ್ತೆರಡು
ರೂಪಾಯಿಗಳಿದ್ದು, ಇಷ್ಟು ಹಣ ನಿನಗೆಲ್ಲಿ ಸಿಕ್ಕಿತೆಂದು ಕೇಳಲು ಅವನು ನಡುಗುತ್ತಾ
ತನ್ನ ಅಜ್ಜಿಯನ್ನು ತೋರಿಸಿದನು. ಅದರ ಅರ್ಥವೇನೆಂದು ಎಲ್ಲರೂ ಕೇಳಲು, ನಾನು
ಈಗ ಒಂದು ತಿಂಗಳಲ್ಲಿ ನಿಮ್ಮ ಮನೆಯಲ್ಲಿ ಪೆಟ್ಟಿಗೆಯಲ್ಲಿದ್ದ ಹಣವನ್ನು ಕೈಗೆ ಸಿಕ್ಕಿದ
ಷ್ಟನ್ನು ತಂದು ನನ್ನ ಅಜ್ಜಿಯ ಕೈಗೆ ಕೊಡಲು ಅವಳು ಅದನ್ನು ನನ್ನೆದುರಾಗಿ ಇಲ್ಲಿ
ಹೂಳಿಟ್ಟಳೆಂದು ಹೇಳಿದನು. ಪಾಠಕರೆ ! ಈಗ ಮುದುಕಿಯ ಮುಖವನ್ನು ಒಮ್ಮೆ
ದೃಷ್ಟಿಸಿ ನೋಡಿ. ಗುಟ್ಟು ಬಯಲಾಯಿತು. ಇನ್ನೊಂದು ಕ್ಷಣವೂ ತಮ್ಮ ಮನೆಯ
ಲ್ಲಿರಲಾಗದೆಂದು ಮುದುಕಿಯನ್ನು ಆ ಹುಡುಗನೊಡನೆ ಹೊರಕ್ಕೆ ಕಳುಹಿಸಿಬಿಟ್ಟರು.
ಈ ರೀತಿಯಾಗಿ ಶ್ರೀ ನಗರದಲ್ಲಿ ಕಳ್ಳತನ ಪತ್ತೆಯಾಯಿತು.
ನಮ್ಮ ಭಾವನವರ ಪೆಟ್ಟಿಗೆಯಲ್ಲಿ ಹಿಂದೆ ಕಳುವಾದುದು ಐವತ್ತೈದು ರೂಪಾ
ಯಿಗಳೆಂದೂ ನಿರ್ಧರವಾಯಿತಂತೆ ! ಮುದುಕಿಯು ಆಹುಡುಗನೊಡನೆ ಮನೆಬಿಟ್ಟು
ಹೊರಟು ಹೋದಮೇಲೆ ಮನೆಯವರೆಲ್ಲರೂ ಮಾತನಾಡಿಕೊಂಡು ನನ್ನನ್ನೂ ನಮ್ಮ
ಯಜಮ್ರನರನ್ನೂ ಪುನಃ ಹಿಂತಿರುಗಿ ಮನೆಗೆ ಬರುವಂತೆ ಎಷ್ಟೋ ಉಪಚಾರವನ್ನು
ಹೇಳಿದರು. ನಾನು ತಸ್ಕರಿಯಲ್ಲವೆಂದು ಆಗ ನಮ್ಮ ಮನೆಯವರಿಗೆ ಗೊತ್ತಾಗಿ
ನನ್ನ ವಿಷಯದಲ್ಲಿ ಹಿಂದೆ ನಡೆಸಿದ ನಡವಳಿಕೆಗಾಗಿ ಬಹು ಪಶ್ಚಾತ್ತಾಪ ಪಟ್ಟರಂತೆ!
------------------------------------------------
ನನ್ನ ಸಂಸಾರ 57
ಈರೀತಿಯಾಗಿ ಸಮಸ್ತ ವೃತ್ತಾಂತವೂ ನನಗೆ ಪತ್ರಮೂಲಕವಾಗಿ ತಿಳಿದು
ಬಂದಿತು-ಹೀಗೆಯೇ ಇನ್ನೂ ಒಂದು ತಿಂಗಳು ಕಳೆದಿತ್ತು. ನಮ್ಮ ಯಜಮಾನರಿಗೆ
ಅಷ್ಟು ಹೊತ್ತಿಗೆ ರಜವು ಮುಗಿದುದರಿಂದ ನನ್ನನ್ನು ಕರೆದು ಕೊಂಡು ಹೋಗಲು
ರಂಗಪುರಕ್ಕೆ ಬಂದರು.
ನಾವು ರಂಗಪುರದಿಂದ ಶ್ರೀನಗರಕ್ಕೆ ಬಂದು ನಮ್ಮ ಯಜಮಾನರು ಹೊಸ
ದಾಗಿ ಹತ್ತು ರೂಪಾಯಿ ಬಾಡಿಗೆಗೆ ಮಾಡಿದ್ದ ಒಂದು ದಿವ್ಯ ಗೃಹದಲ್ಲಿ ಸಂಸಾರ
ಮಾಡಲಾರಂಭಿಸಿದೆವು. ಅದೇ ತಿಂಗಳಲ್ಲೇ ನಮ್ಮ ಯಜಮಾನರಿಗೆ 15ರೂಪಾಯಿ
ಸಂಬಳ ಹೆಚ್ಚಾಯಿತು. ನಮ್ಮ ಭಾವನವರಿಗೂ 100ರೂಪಾಯಿಗಳು ಆತಿಂಗಳಿಂದ
ಬರಲಾರಂಭವಾಯಿತು. ಇನ್ನೊಂದು ತಿಂಗಳಿಗೆ ನಮ್ಮ ಭಾವನವರ ಮಗು ವಿದ್ಯಾಮೂ
ರ್ತಿಗೆ ಉಪನಯನವೂ ನಮ್ಮ ಹುಡುಗಿ (ಸಪತ್ನಿ ಪುತ್ರಿ) ಸೀತಾಲಕ್ಷ್ಮಿಗೆ ವಿವಾಹ
ಲಗ್ನವೂ ಹರಪುರದಲ್ಲಿ ಬೆಳೆಯಲು ನಿಷ್ಕರ್ಷೆ ಯಾಗಿರುವುದು. ನಾವೆಲ್ಲರೂ ಅಲ್ಲಿಗೆ ಹೋಗ
ಬೇಕಾಗಿದೆ. ಇಂದೀಗಲೇ ನಮ್ಮ ಸಂಸಾರವು ಶಾಂತಿ ಗೃಹದಂತೆ ರಾರಾಜಿಸು
ತ್ತಲಿದೆ. ವಿಷಬೀಜವೂ ವಿಷಲತೆಯ ಧ್ವಂಸವಾಗಿ ಸರ್ವತ್ರ ಅಮೃತ ವರ್ಷಣವು ವರ್ಷಿ
ಸುತಲಿದೆ. ನಾನು ಪತಿಯ ಬೋಧೆಗಳನ್ನು ಮನನಮಾಡುತ್ತಾ ಪತಿಸೇವೆಯನ್ನು ತೃಪ್ತಿ
ಕರವಾಗಿ ಮಾಡಲು ಆರಂಭಮಾಡಿರುವೆನು, ಸೋದರಿಯರೇ! ವುನಃ ನಮ್ಮ ಸಂಸಾರ
ದಲ್ಲಿ ಅಶಾಂತಿ ಯುಂಟಾಗಲು ಕಾರಣವೇನೂ ಇರದು. ನನ್ನೀ ಸಂಸಾರಸ್ಥಿತಿಯನ್ನು
ನೋಡಿ-ಓದಿ, ಸರೂ ಗೃಹಚ್ಚಿದ್ರಗಳನ್ನು ಕಳೆದು ಸುಖಿಗಳಾಗಲೆಂದೂ, ನಮ್ಮ ಭಾರತ
ಭೂಮಾತೆಯು ಸದ್ಗೃಹಿಣಿಯರಿಂದ ಕೂಡಿ ಚಿರಕಾಲ ರಾರಾಜಿಸಲೆಂದೂ ಮಂಗಳ
ಪರಂಪರೆಗಳು ಗೃಹಗೃಹದಲ್ಲೂ ವೃದ್ಧಿ ಯಾಗಲೆಂದೂ ಅನನ್ಯ ಭಾವದಿಂದ ಪರಮಾ
ತ್ಮನನ್ನು ಧ್ಯಾನಿಸಿ ವಿಶ್ರಾಂತಿ ಹೊಂದುವನು. ಸಮಯ ಬಂದಾಗ ಪುನಃ ನಿಮ್ಮ ಸಂದ
ರ್ಶನವನ್ನು ತೆಗೆದುಕೊಳ್ಳಲು ಅಡ್ಡಿಯಿಲ್ಲ.
ನಮ್ಮ ಭಗಿನೀಪರ್ಗಕ್ಕೆ ಶುಭವಾಗಲಿ !!!
ಸಂಪೂರ್ಣ,
Printed by B. V. Narasimha Iyengar, at the
ROYAL PRINTING PRESS, MYSORE.
==============================================
ನೂತನ ವತ್ಸರಾರಂಭ.
ಪೋಷಕಮಹಾಶಯ! ನಿಮ್ಮ ಅಮೋಘ ಸಹಾಯ ಸಂಪತ್ತಿಯಿಂದ ಸಂಗ್ರಹಶಿಶುವು
ಚತುರ್ಥ ವರ್ಷದಲ್ಲಿ ಕಾಲನ್ನಿಟ್ಟಿರುವುದು. ಕಳೆದಮೂರುವರ್ಷಕಾಲ ಸಂಗ್ರಹವು
ಅನೇಕ ಕಷ್ಟದಿಂದ ಪ್ರಚುರವಾದುದು ಸರಿಯಷ್ಟೆ! ಮುಂದೆ ಈ ಪತ್ರಿಕೆಯು ನಿರಾಯಾಸ
ವಾಗಿ ಹೊರಡುವಂತೆಯೂ, ಕಾಲಕ್ಕೆ ಸರಿಯಾಗಿ ಪ್ರಚುರವಾಗುವಂತೆಯೂ, ಗ್ರಾಹಕ
ಸಂಖ್ಯೆಯು ಅಭಿವೃದ್ಧಿಯಾಗಿ ಸಂಗ್ರಹಕ್ಕೆ ಮಂಗಳ ಪುಂಟಾಗುವಂತೆಯ ನೀವೆಲ್ಲರೂ
ಅನುಗ್ರಹಿಸುವದಲ್ಲದೆ ಸ್ವಹಸ್ತ ಪರಹಸ್ತಗಳಿಂದ ಉದಾರಾಶ್ರಯಕೊಟ್ಟು ಕಾಪಾಡ
ಬೇಕಾಗಿ ಪ್ರಾರ್ಥಿಸುತ್ತೇನೆ
ಸಂಗ ಹ ಪತ್ರಕರ್ತ.
------
ಲಲಿತೆಯ ಪಾತಿವ್ರತ್ಯ ರಕ್ಷಣೆ .
ಹೊಸೂರಿನ ಆಚೆ ಸುಮರು ಅರ್ಧಮೈಲಿ ದೂರದಲ್ಲಿದ್ದ ಒಂದು ಮೈದಾನ
ದಲ್ಲಿ ಸಣ್ಣದೊಂದು ಗುಡಿಸಲಿದ್ದಿತು. ಒಂದು ದಿನ ಬೆಳಿಗ್ಗೆ ಹತ್ತು ಗಂಟೆಯಲ್ಲಿ ಒಬ್ಬ
ಭಿಕ್ಷುಕನು ಆ ಗುಡಿಸಲಿನ ಬಾಗಿಲಿನಲ್ಲಿ ನಿಂತು ತನ್ನ ಕೈಯಲ್ಲಿದ್ದ ಕಬ್ಬಿಣದ ಝಾಲರಿ
ಯನ್ನು ಸದ್ದು ಮಾಡಿದನು. ಒಳಗಿನಿಂದ ಯುವತಿಯೊಬ್ಬಳು ಭಿಕ್ಷವನ್ನು ತಂದು
ಹಾಕಿದಳು, ಯುವತಿಗೆ ಹದಿನೆಂಟು ವರ್ಷ ವಯಸ್ಸು. ಸ್ವಭಾವವಾಗಿ ಆಕೆಯು
ಸುಂದರಿಯಾಗಿದ್ದಳು. ಆಕೆಯ ಹೆಸರು ಲಲಿತಾಂಬ. ಲಲಿತೆಯು ಭಿಕ್ಷವನ್ನು ಹಾಕು
ತ್ತಿದ್ದಾಗ ಆ ಭಿಕ್ಷುಕನು ಪಾಪಪೂರಿತವಾದ ಕ್ರೂರದೃಷ್ಟಿಯಿಂದ ಆ ಸುಂದರಿಯನ್ನು
ನೋಡತೊಡಗಿದನು. ಈತನ ಸ್ಥಿತಿಯನ್ನು ನೋಡಿ ಲಲಿತೆಯು ಹೆದರಿ ಬೇಗ ಭಿಕ್ಷ
ವನ್ನು ಹಾಕಿ ಒಳಕ್ಕೆ ಹೋಗಿ ಬಾಗಿಲು ಹಾಕಿಕೊಂಡಳು. ಬಳಿಕ ಭಿಕ್ಷುಕನು
ಹೊಸೂರಿನ ಕಡೆಗೆ ಹೊರಟುಹೋದನು. ಆದರೆ ಅವನ ಮನಸ್ಸು ಈಗ ಮೊದಲಿನಂತಿರ
ಲಿಲ್ಲ. ಊರ ಹೊರಗಿನ ನೆರೆಯಿಲ್ಲದ ಗುಡಿಸಲನ್ನೂ ಅಲ್ಲಿರುವ ಅಸದೃಶರೂಪರಾಶಿ
ಯನ್ನೂ ನೋಡಿ ಅವನ ಮನಸ್ಸಿನಲ್ಲಿ ಏನೋ ಒಂದು ದುರಾಲೋಚನೆಯು ಉತ್ಪನ್ನ
ವಾಯಿತು. ಹಾವು ಕಡಿದವನ ದೇಹದಲ್ಲಿ ವಿಷವೇರುವಂತೆ ಆ ಪಾಪಿಯ ಹೃದಯ
ದಲ್ಲಿ ಜನಿಸಿದ ಆ ದುರಾಲೋಚನೆಯು ಒಂದು ಕ್ಷಣದೊಳಗಾಗಿ ಅವನನ್ನು ಆಕ್ರಮ
ಣಮಾಡಿ ಅವನನ್ನು ಶಾಸಿಸತೊಡಗಿತು.
ಅವನು ಹೊಸೂರಿಗೆ ಬಂದು ಬಹು ಚಮತ್ಕಾರದಿಂದ ಆ ಗುಡಿಸಲಿಗೆ ಸಂಬಂಧ
ಪಟ್ಟ ಕೆಲವು ವಿಷಯಗಳನ್ನು ತಿಳಿದುಕೊಂಡನು. ಅಷ್ಟರಲ್ಲೇ ಸಾಯಂಕಾಲವಾ
ಯಿತು. ಕತ್ತಲೆಯಾದ ಮೇಲೆ ಪೂರ್ವೋಕ್ತವಾದಾ ಗುಡಿಸಲಿನಲ್ಲಿ ವಾಸಿಸುತಿ ದ
---------------------------------------------
ಲಲಿತೆಯು ಎರಡು ವರ್ಷದ ತನ್ನ ಮಗುವನ್ನು ಎತ್ತಿಕೊಂಡು ಬೀದಿಯ ಬಾಗಿಲಿಗೆ
ಬಂದಳು. ಜಗಲಿಯ ಮೇಲೆ ಯಾರೋ ಮಲಗಿರುವಂತೆ ತೋರಿತು. ವಿಚಾರಿಸಿ ನೋಡ
ಲು ಆ ವ್ಯಕ್ತಿಯು ಬೆಳಿಗ್ಗೆ ಬಂದಿದ್ದ ಭಿಕ್ಷುಕನೆಂದು ತಿಳಿದುಬಂದಿತು. ಲಲಿತೆಗೆ ಸಂಶ
ಯವುಂಟಾಯಿತು. ಆಗ ಆ ಭಿಕ್ಷುಕನು ಮೃದುಸ್ವರದಿಂದ, (ತಾಯಿ ! ಮುಂದಿನೂ
ರಿಗೆ ಹೋಗಲು ಕತ್ತಲಾದುದರಿಂದ ಈ ರಾತ್ರಿ ಇಲ್ಲಿ ಮಲಗಿದ್ದು ಬೆಳಿಗ್ಗೆ ಮುಂದಕ್ಕೆ
ಹೋಗುವೆನು” ಎಂದು ಹೇಳಲು ಲಲಿತೆಯು ಧೈರ್ಯಗೊಂಡು ಒಳಕ್ಕೆ ಹೋದಳು.
ಆ ದಿನ ಮನೆಯಲ್ಲಿ ಲಲಿತೆಯೊಬ್ಬಳೇ ಇದ್ದಳು. ಆಕೆಯ ಪತಿಯು ಪರಸ್ಥಳಕ್ಕೆ
ಹೋಗಿದ್ದುದರಿಂದಲೂ ಆತನು ಮಾರನೆ ದಿನ ಬೆಳಿಗ್ಗೆ ಬರುವ ವಾಯಿದೆ ಇದ್ದುದರಿಂದ
ಲೂ ಏಕಾಂಗಿಯಾಗಿ ಆ ರಾತ್ರಿ ಲಲಿತೆಯು ಆ ಗುಡಿಸಲಿನಲ್ಲಿರುವುದು ದುಸ್ತರವಾಗಿ
ಹೋಯಿತು. ಕಾರ್ಯಾಂತರಗಳಿಂದ ಆಕೆಯ ಪತಿಯು ಅವಳೊಬ್ಬಳನ್ನೇ ಅಲ್ಲಿ ಬಿಟ್ಟು
ಹೋಗಬೇಕಾಗಿ ಬಂದಿದ್ದಿತು. ಲಲಿತೆಯು ಆಗ ಏನು ಮಾಡಬಲ್ಲಳು ? ತನ್ನ ಪತಿ
ಯನ್ನೇ ಧ್ಯಾನಿಸುತ್ತಾ ಊಟವನ್ನು ಮಾಡಿ ಕೈತೊಳೆದುಕೊಂಡು ಒಳಗೆ ಹೋದಳು.
ಹೋಗುವಾಗ ಭಿಕ್ಷುಕನು ಜಗಲಿಯ ಮೇಲೆ ಮಲಗಿರಲಿಲ್ಲ. ಲಲಿತೆಯು ಒಳಕ್ಕೆ
ಹೋಗಿ ಬಾಗಿಲನ್ನು ಭದ್ರವಾಗಿ ಮುಚ್ಚಿದಳು. ಕೂಡಲೆ ಹಾಸಿಗೆಯನ್ನು ಹಾಸಿ
ಮಲಗಲು ಸನ್ನಾಹಮಾಡುತ್ತಿದ್ದಾಗ ಆ ಗುಡಿಸಲಿನ ಮೂಲೆಯೊಂದರಲ್ಲಿ ಯಾರೋ
ಕೆಮ್ಮಿದಂತೆ ಕೇಳಿಸಿತು. ದೀಪದಲ್ಲಿ ಎಣ್ಣೆ ಮುಗಿದು ಆರಿಹೋಗುವ ಸ್ಥಿತಿಯಲ್ಲಿ
ದ್ದಿತು. ಆ ಸಣ್ಣ ಉರಿಯಲ್ಲೇ ಆ ಮೂಲೆಯನ್ನು ದೃಷ್ಟಿಸಿ ನೋಡಲು ಅಲ್ಲಿ ಒಬ್ಬ
ಪುರುಷ ವ್ಯಕ್ತಿಯು ನಿಂತಿದ್ದಂತೆ ಬೋಧೆಯಾಯಿತು. ಮತ್ತು ಆ ವ್ಯಕ್ತಿಯು ತನ್ನ
ಕಡೆಗೇ ನಡೆದು ಬರುತ್ತಿರುವುದನ್ನು ಲಲಿತೆಯು ನೋಡಿದಳು. ಆಕೆಯ ದೇಹವು
ಗಡಗಡನೆ ನಡುಗ ತೊಡಗಿತು. ಬಾಯಲ್ಲಿ ಮಾತೇ ಹೊರಡದು. ಆಗ ಆ ಕಳ್ಳ ಭಿಕ್ಷು
ಕನು, “ ನೀನು ಕೂಗಿಕೊಂಡರೆ ನಿನ್ನ ಪ್ರಾಣವನ್ನು ಕಳೆದುಬಿಡುವೆನು.” ಎಂದು ಆಕೆ
ಯನ್ನು ಬೆದರಿಸಿದನು, ತನ್ನ ಮನೆಯಲ್ಲಿರುವ ಸರ್ವಸ್ವವನ್ನೂ ನಿನಗೆ ಒಪ್ಪಿಸುವೆನೆಂದು
ಲಲಿತೆಯು ಅವನನ್ನು ಪ್ರಾರ್ಥಿಸಿದಳು. ಆಗ ಅವನು, ನಾನು ಹಣದಾಸೆಯಿಂದ ಇಲ್ಲಿಗೆ
ಬರಲಿಲ್ಲ. ನಿನ್ನಲ್ಲಿ ಮೋಹಿತನಾಗಿ ಇಲ್ಲಿಗೆ ಬಂದಿರುವೆನೆಂದು ಹೇಳಿದನು. ಈ
ಮಾತನ್ನು ಕೇಳಿ ಲಲಿತೆಗೆ ದೇಹದಮೇಲೆ ಸ್ಮೃತಿಯೇ ತಪ್ಪಿತು. ಆದರೂ ಅವಳು ಆಗ
ಧೈರ್ಯಮಾಡಿ ಅಯ್ಯ! ನನ್ನ ಮಗುವನ್ನು ಬಹಿರ್ಭೂಮಿಗೆ ಕರೆದುಕೊಂಡು ಹೋಗಿದ್ದು
ಬಂದು ನಿನ್ನ ಮಾತನ್ನು ನಡೆಯಿಸುವೆನೆಂದು ಹೇಳಿದಳು, ಆ ಚಂಡಾಲನು ಅದಕ್ಕೊಪ್ಪದೆ
ತಾನೇ ಮಗುವನ್ನು ಕರೆದುಕೊಂಡು ಹೋಗಿಬರುವೆನೆಂದು ಹೇಳಲು ಲಲಿತೆಯು ಉಪಾ
ಯಂತರವನ್ನು ಕಾಣದೆ ಮಗುವನ್ನು ಮುದ್ದಿಸಿ ಆ ಪಾಪಿಯ ಕೈಗೆ ಕೊಟ್ಟಳು. ಅವನು
ಹೊರಗೆ ಕಾಲಿಟ್ಟೊಡನೆಯೇ ಲಲಿತೆಯು ಬಾಗಿಲನ್ನು ಬಂಧಿಸಿ ಬಿಟ್ಟಳು. ಭಿಕ್ಷುಕನು,
---------------------------------------------
ವಾಗಿ ಹೆದರಿಸಿದನು, ನಿಶ್ಯಬ್ಬ, ಅವನು ಮಿತಿ ಮೀರಿದ ಕೊಪದಿಂದ ಆಗುಡಿಸಲಿಗೆ ಬೆಂಕಿ
ಹಚ್ಚು ವೆನೆಂದೂ ಮಗುವನ್ನು ಸಂಹರಿಸಿ ಬಿಡುವೆನೆಂದೂ ಬೊಗಳಿದನು. ಆ ಕಟುಕನಿಗೆ
ಆಗ ಕನಿಕರ ವೆಳ್ಳಷ್ಟೂ ಇರಲಿಲ್ಲ. ಆಹಾ! ಕಾಮಾಂಧರು ತಮ್ಮ ಕಾರ್ಯನಿರ್ವಾಹಕ್ಕೆ
ಏನು ಬೇಕಾದರೂಮಾಡುವರಲ್ಲವೆ ? ಏನಾದರೂ ಲಲಿತೆಯು ಮಾತನಾಡಲೇ ಇಲ್ಲ.
ಆ ಕಟುಕನು ಬಹುಕೋಪದಿಂದ ಆಮಗುವಿನತಲೆಯನ್ನು ಕದಕ್ಕೆ ಹೊಡೆದನು, ಮಗುವು
ಕಿಟ್ಟನೆ ಕಿರುಚ ತೊಡಗಿತು. ಆಮಗುವು ಅಳುವಿನಲ್ಲೂ ಮುದ್ದು ಮುದ್ದಾಗಿ ಅಮ್ಮ,
ಅಮ್ಮ, ಎಂದು ಕೂಗುತ್ತಿತ್ತು. ಆದರೂ ಬಾಗಿಲು ತೆರೆಯಲ್ಪಡಲಿಲ್ಲ. ಲಲಿತೆಯು
ಎಂತಹ ಕಠಿನ ಹೃದಯಳಿರಬಹುದು; ಸ್ತ್ರೀಯರು ಆವದುಃಖವನ್ನಾದರೂ ಸಹಿಸಬಲ್ಲರು.
ತಮ್ಮ ಮಕ್ಕಳು ತಮ್ಮಿದಿರಿಗೆ ಆರ್ತನಾದ ಮಾಡುತ್ತಿದ್ದರೆ ನೋಡಿ ಸಹಿಸಲಾರರು. ಲಲಿ
ತೆಯು ಮಗುವನ್ನು ಅವನ ಕೈಗೆ ಕೊಟ್ಟಾಗಲೇ ಯಮನ ವಶಮಾಡಿದಂತೆ ಭಾವಿಸಿ
ದ್ದಳು. ಭಿಕ್ಷುಕನು ಕೊನೆಗೆ ಆ ಮಗುವನ್ನು ವೇಗವಾಗಿ ಬೀದಿಗೆ ಎಸೆದು ಆ ಮನೆಗೆ
ಕನ್ನವನ್ನಿಕ್ಕಲು ಪ್ರಯತ್ನಿಸಿ ಒಂದು ಕಡೆ ಗೋಡೆಯನ್ನು ಹೊಡೆದು ಆ ರಂಧ್ರದಿಂದ
ತನ್ನ ತಲೆಯನ್ನು ಒಳಕ್ಕೆ ನುಗ್ಗಿಸಿದನು. ಇದನ್ನು ಲಲಿತೆಯು ನೋಡಿ ತನ್ನ ಮನೆ
ಯಲ್ಲಿದ್ದ ಮತ್ತು ಕತ್ತಿಯಿಂದ ಆ ಕಳ್ಳನ ತಲೆಗೆ ಬಲವಾಗಿ ಹೊಡೆದಳು. ಅವನ ತಲೆ
ಯೊಡೆದು ರಕ್ತ ಸುರಿಯುತ್ತಿದ್ದಾಗಲೇ ಅವನ ಕಾಲನ್ನು ಒಂದು ಸರ್ಪವು ಕಚ್ಚಿತು.
ಅರ್ಧ ಗಳಿಗೆಯೊಳಗಾಗಿ ಕಳ್ಳಭಿಕ್ಷುಕನು ಲೋಕಾಂತರವನ್ನೆ ದಿದನು. ಲಲಿತೆಯು
ಬಾಗಿಲು ತೆರೆಯದೆ ಒಳಗೇ ಇದ್ದಳು. ಬೆಳಗಾಯಿತು. ಲಲಿತೆಯ ಗಂಡನು ಬಂದನು.
ಗುಡಿಸಲಿಗೆ ಹತ್ತು ಮಾರು ದೂರದಲ್ಲಿ ಮಗುವು ಭೀಕರಾವಸ್ಥೆಯಲ್ಲಿ ಬಿದ್ದಿರುವುದನ್ನೂ
ಗುಡಿಸಲಿನ ಹೊರಗೆ ಭಿಕ್ಷುಕನು ಸತ್ತಿರುವುದನ್ನೂ ನೋಡಿದನು. ಬಾಗಿಲು ತೆರೆಯಲ್ಪಟ್ಟಿ
ರಲಿಲ್ಲ. ಕೂಗಿದರೂ ನಿರುತ್ತರ. ಕೂಡಲೆ ಹೊಸೂರಿನಿಂದ ಪೊಲೀಸಿನವರನ್ನು ಕರದು
ಕೊಂಡು ಬಂದು ಗುಡಿಸಲು ಬಾಗಿಲನ್ನೊಡೆಸಿ ಒಳಹೊಕ್ಕನು. ಲಲಿತೆಯು ಮೂರ್ಛಿತ
ಳಾಗಿ ಬಿದ್ದಿದಾಳೆ. ಅವಳನ್ನು ಉಪಚರಿಸಿ ಮೇಲಕ್ಕೆಬ್ಬಿಸಿ ಜ್ಞಾನೋದಯವಾದಮೇಲೆ
ಕೇಳಲು ನಡೆದ ವೃತ್ತಾಂತವು ತಿಳಿದುಬಂದಿತು. ಮಗುವನ್ನು ವೈದ್ಯರಿಗೆ ತೋರಿಸಲು
ಸತ್ತಿರಲಿಲ್ಲವೆಂದು ತಿಳಿಯಿತು. ಮಗುವಿನ ಪ್ರಾಣವು ಉಳಿದುದಕ್ಕಾಗಿ ಎಲ್ಲರೂ
ಸಂತೋಷಿಸಿದರು. ಲಲಿತೆಯ ಈ ಪಾತಿವ್ರತ್ಯ ರಕ್ಷಣೆಯ ವಿಚಾರವು ಊರಿಗೆಲ್ಲಾ ತಿಳಿದು ಜನರೆಲ್ಲರೂ ಆಕೆಯನ್ನು ಹೊಗಳಿದರು.
=================================================,
ಮಧುಸೂದನ.
ಒಂದನೆಯ ಅಧ್ಯಾಯ
(ಮದವಣಿಗನೆಲ್ಲಿ ?)
ಈ ದಿವಸದ ವಾಸವಪುರದ . ಜಹೆಗೀರ್ದಾರ್. ಸೋಮಸುಂದರನ ಮನೆಯಲ್ಲಿ
ಬಹುಳಲಕಲ. ಮನೆಯು ತಳಿರ್ದೋರಣಗಳಿಂದಲೂ ಬಾಳೆಯಕಂಬಗಳಿಂದಲೂ ವಿವಿಧ
ವಾಗಿ. ಆಲಂಕೃತನಾಗಿರುವುದು. . ಜನಗಳು ವಿವಿಧವೇಸಭೂಸಾದಿಗಳನ್ನು ಧರಿಸಿ
ಕೊಂಡು ಬರುತ್ತಿರುವರು. . ಅಧಿಕಾರಿಗಳನೇಕರು. ಕುದುರೇಗಾಡಿಗಳಲ್ಲಿ ಕುಳಿತುಬಂದು
ಈ ಸೋಮಸುಂದರನ ಮನೇಬಾಗಿಳಲ್ಲಿ ಶಳಗಿಳಿದು ಒಳಹೊಗುತ್ತಿದಾರೆ. ಸೇವಕರ
ಸಡಗರವೂ ವೈದಿಕರ ಪ್ರೌಢಾವಿವಾಹ, ಸಮುದ್ರಯಾನಗಳ ಖಂಡನರೂಪವಾದ
ಮಾತುಗಳೂ ಮಂಗಳವಾದ್ಯಗಳ ರವವೂ ಎಲ್ಲೆಲ್ಲಿಯೂ ಕೇಳಿಬರುತ್ತಲಿದೆ. ಈ ಸಂಭ್ರ
ಮಕ್ಕೆ ಕಾರಣವೇನೆಂದು ನಾವು ವಿಚಾರಿಸಿದಾಗ ಸೊಮಸುಮದರನ ಏಕಮಾತ್ರ ಪುತ್ರ
ನಾದ ಮಧುಸೂದನನಿಗೆ ಮಹೋಪಾಧ್ಯಾಯ ತ್ರಿಯಂಬಕ ಶಾಸ್ತ್ರಿಗಳ ಮಗಳು ಸರಳ
ಬಾಲೆಯನ್ನು ಕೊಟು, ವಿವಾಹವೆಂದು ತಿಳಿದುಬಂದಿತು.
ಸೋಮಸುಂದರನು ಶುದ, ಲೌಕಿಕನಾಗಿದ್ದಾಗ್ಗು ವೈದಿಕರಲ್ಲೂ , ವೇದಶಾಸ್ತ್ರ
ಗಳಲ್ಲಿಯೂ ಅಕೃತ್ರಿಮೆವಾದ ಭಕ್ತಿಯನ್ನಿಟ್ಟಿದ್ದನು. ಆಧುನಿಕರ ಸಂಘಸಂಸ್ಕಾರ
ಗಳನ್ನು (ಪ್ರೌಢಾ ವಿವಾಹಾದಿಗಳನ್ನು) ಇವನು. ಅನುಮೋದಿಸದೆ, ತನ್ನ ಮಗನಿಗೆ
೯ ವರ್ಷ ವಯಸ್ಗಿನ ಸರಳಬಾಲೆಯನ್ನು ತಂದುಕೊಂಡನು.
ಬೆಳೆಗ್ಗೆ. ಹತ್ತುಗಂಟಿಗೆ ಸರಿಯಾಗಿ ವಿವಾಹ ಲಗ್ನವು ನಿಷ್ಕರ್ಷಿಸಲ್ಪಟ್ಟಿದ್ದಿತು.
ಒಂಭತ್ತು ಗಂಟಿಗೆ ಕಾಶೀಯಾತ್ರಾ, ಮಹೋತ್ಸವವು ನಡೆದು ಅನುಕ್ರಮವಾಗಿ, ಪ್ರವರ
ಪಾರಾಯಣ, ವಮಧುಪರ್ಕ, ವಾಗ್ದಾನಗಳೇ ಮೊದಲಾದ ಶಾಸ್ತ್ರಗಳು ನೆರವೇರಿದ್ದುವು.
ಮಾಂಗಲ್ಯ ಧಾರಣವು ಬೆಳೆಯುವದಕ್ಕೆ ಮೂರು ನಿವಿಷ ವಿದೆಯೆನ್ನು ವಾಗ ಯುವಕನೊ
೨--------------------------------------------------------------
ಕಾದಂಬರಿ ಸಂಗ್ರಹ
ಬ್ಬನು ಆ ಜನಗಳ ಗುಂನಿನಲ್ಲಿ ನುಗ್ಗಿ ಬಂದು ವರನ ಕಿವಿಯಲ್ಲಿ ಏನೋ ಹೇಳಿ ತಕ್ಷಣ
ಅದೃಶ್ಯನಾದನು. ಮಧುಸೂದನನು ಆತನಮಾತನ್ನು ಕೇಳಿ ವಿಷಣ್ಣತೆಯನ್ನು ಹೊಂದಿ
ದನಾದರೂ ಕೂಡಲೇ ಗಾಂಭೀರ್ಯವನ್ನು ಹೊಂದಿ ಪುರೋಹಿತನ ಕಡೆ ತಿರುಗಿ
ಮೂರು ನಿಮಿಷ ವಿರಾಮಬೇಕೆಂದು ಕೇಳಿದನು. ಪುರೋಹಿತನು ಒಡಂಬಡಲು ವರನು
ತನ್ನ ಚಿಕ್ಕ ಮನೆಗೆ ಪ್ರವೇಶಮಾಡಿದನು.
ಮೂರು ನಿಮಿಷ ಕಳೆಯಿತು. ಐದು-ಹತ್ತು-ಹದಿನೈದು ನಿಮಿಷಗಳೂ ಕಳೆ
ದುವು. ಕಡೆಗೆ ಅರ್ಧಗಂಟೆ ಹೊತ್ತಾಯಿತು. ಮದವಳಿಗನು ಈಕಿಗೆ ಬಾರಲೇ ಇಲ್ಲ.
ಕೂಡಲೇ ಎಲ್ಲರೂ ವರನನ್ನು ಹುಡುಕ ತೊಡಗಿದರು. ಮನೆಯಲ್ಲೆಲ್ಲಿಯ ವರನಿಲ್ಲ.
ಎಲ್ಲರೂ ಭಯಭ್ರಾಂತರಾಗಿ ಮೂಲೆ ಮೂಲೆಯಲ್ಲಿ ಹುಡುಕಿದರು. ಎಲ್ಲಿಯೂ ಇಲ್ಲ.
ಬೀದಿಯ ಕಡೆ ಹೋಗಿರಬಹುದೇ ಎಂದು ವಿಚಾರಿಸಲು ದ್ವಾರಪಾಲಕರು ಈಚೆಗೆ
ಬರಲೇ ಇಲ್ಲವೆಂದು ಹೇಳಿಬಿಟ್ಟರು ಈಗ ಮಾಡುವುದೇನು? ಸರ್ವತ್ರ ಹಾ-ಹಾ-ಕಾರ!
ಇಂತಹ ವೇಳೆಯಲ್ಲಿ ಮದವಣಿಗನು ಮಾಯವಾದರೆ ಹಾಹಾಕಾರವಲ್ಲದೆ ಮತ್ತೇನು?
ಸೋಮಸುಂದರನಿಗೆ ಏನೂ ತೋರಲಿಲ್ಲ. ತ್ರಿಯಂಬಕ ಶಾಸ್ತ್ರಿಯು ಲಗ್ನ ಸಮಯ
ಕಳೆದುದಕ್ಕಾಗಿ ವ್ಯಸನಪಡುತ್ತಾ ಒಂದು ಮೂಲೆಯಲ್ಲಿ ಕುಳಿತಿದ್ದನು. ಆದರೆ ಆಗ
ಒಂದು ಚಮತ್ಕಾರ ನಡೆದಿದ್ದಿತು, ಮಧುಸೂದನನ ಕಿರುಮನೆಯ ಒಳಗಡೆ
ಬಂಧಿತವಾಗಿದ್ದಿತು. ಯಾರೆಷ್ಟು ಕೂಗಿದರೂ ಬಾಗಿಲು ತೆರೆಯಲ್ಪಡಲಿಲ್ಲ. ಎಲ್ಲರೂ
ವಿಷಾದದಿಂದ ಕುಳಿತುಬಿಟ್ಟರು. ಸೋಮಸುಂದರನು ಕೆಲವು ಮಂದಿ ಸೇವಕರನ್ನು
ಗುದ್ದಲಿ, ಹಾರೆಗಳೊಡನೆ ಕರೆತಂದು ಬಾಗಿಲನ್ನು ಇಡಿರೆತ್ತಿಸಿ ಒಳಹೊಕ್ಕನು. ಒಳಗೆ
ಮಧುಸೂದನನಿರಲಿಲ್ಲ. ಆದರೆ ವರನ ಅಶಿನದ ಪಂಚೆಯು ಮಾತ್ರ ಅಲ್ಲಿ ಬಿದ್ದಿದ್ದಿತು.
ವರನಾಗಲೀ ವರನು ಹೋದ ದಾರಿಯಾಗಲೀ ಗೊತ್ತಾಗಲಿಲ್ಲ. ಸೋಮಸುಂದರನು
ವ್ಯಸನದಿಂದ ಮೂರ್ಛಿತನಾದನು. ತಕ್ಷಣವೇ ಎಲ್ಲೆಲ್ಲಿಯ ಮದುವಣಿಗನೆಲ್ಲಿ ?
ಎಂಬ ಕೂಗು ಕಟ್ಟುವುದಕ್ಕೆ ಆರಂಭವಾಯಿತು. ಊರಲ್ಲೆಲ್ಲಾ ಹುಡುಕಿದರೂ
ವರನು ಸಿಕ್ಕಲಿಲ್ಲ. ಮದುವೆ ಮನೆಗೆ ಬಂದಿದ್ದವರೆಲ್ಲರೂ ವಿವಾದವನ್ನು ಪ್ರದರ್ಶಿ
ಸುತ್ತಾ ಮನೆಗೆ ಹೊರಟು ಹೋದರು. ವಿವಾಹ ಸಂಭ್ರಮಗಳೆಲ್ಲವೂ ಕ್ಷಣಕಾಲದಲ್ಲಿ
ತಿರೋಹಿತವಾದುವು. ಸ್ವಲ್ಪ ಹೊತ್ತಿಗೆ ಮುಂಚೆ ಆನಂದ ಕೋಲಾಹಲದಿಂದ ತುಂಬಿದ್ದ
ವಿವಾಹ ಮಂಟಪವು ಈಗ ರೋದನಧ್ವನಿಯಿಂದ ಕೂಡಿ ಭಯಂಕರವಾಗಿ ಕಾಣು
ತಿತ್ತು.
ಮೂರ್ಛಿತನಾಗಿ ಬಿದ್ದಿದ್ದ ಸೋಮಸುಂದರನನ್ನು ಆತನ ಪತ್ನಿ ತಾರಾಸುಂದ
ರಿಯು ವ್ಯಸನದಿಂದ ಶೈತ್ಯೋಪಕಾರಮಾಡಿಸಿ ತನ್ನ ಶಯನ ಗೃಹಕ್ಕೆ ಕರೆದುಕೊಂಡು
೩----------------------------------------------
ಮಧುಸೂದನ ೩
ಹೋದಳು. ಈ ವೃತ್ತಾಂತವು ಕ್ಷಣಕಾಲದಲ್ಲಿ ಊರಲ್ಲೆಲ್ಲಾ ಹಬ್ಬಿ ಎಲ್ಲರೂ ಇದೇ
ವಿಷಯವನ್ನೇ ಮಾತಾಡುತ್ತಿದ್ದರು.
ಇಷ್ಟು ಗದ್ದಲ ನಡೆಯುತ್ತಿದ್ದಾಗ ಒಂಭತ್ತು ವರ್ಷ ವಯಸ್ಸಿನ ಮದುವಣ
ಗಿತ್ತಿಯಾದ ಸರಳಬಾಲೆಯು ಏನುಮಾಡುತ್ತಿರಬಹುದು ? ಬಲ್ಲಿರಾ ? ಸುಶಿಕ್ಷಿತಳೂ
ವಿವೇಕಿಯೂ ಆದ ಆ ಕನೈಯು ಈ ಘಟನೆಯನ್ನು ನೋಡಿ ವ್ಯಸನಮಗ್ನಳಾಗಿ
ಕೂಡಲೆ ದೇವರ ಮನೆಗೆ ಹೋಗಿ ತನ್ನ ಗಂಡನಿಗೆ ಶುಭವಾಗಲೆಂದು " ಗೌರೀ
ಪೂಜೆಯನ್ನು ಮಾಡತೊಡಗಿದಳು. ವಿವಾಹವು ಪೂರ್ಣವಾಗಿ ನಡೆಯದಿದ್ದರೂ ಮಧು
ಸೂದನನೇ ತನ್ನ ಯಾವಜೀವವೂ ಪತಿಯಾಗಿರುವವನೆಂದು ಅವಳು ದೃಢನಿಶ್ಚಯ ಮಾಡಿ
ಕೊಂಡು ಭಕ್ತಿಯಿಂದ ದೇವರನ್ನು ನುತಿಸತೊಡಗಿದಳು.
ಸೋಮಸುಂದರನು ಈ ವೃತ್ತಾಂತವನ್ನು ಕೂಡಲೆ ಪೋಲಿಸಿನವರಿಗೆ ತಿಳಿಸಿದನು.
ಅವರೂ ಹುಡುಕುವುದಕ್ಕೆ ಆರಂಭಿಸಿದರು. ಬಳಿಕ ಸೋಮಸುಂದರನು ತ್ರಿಯಂಬಕ
ಶಾಸ್ತ್ರಿಗಳನ್ನು ಕುರಿತು ಮುಂದೇನು ಮಾಡಬೇಕೆಂದು ಕೇಳಲು ಆತನು ಸ್ವಾಮಿ !
ಈಗ ನನಗೇನೂ ತೋರದು. ಮಾಂಗಲ್ಯ ಧಾರಣೆಯು ಆಗದಿದ್ದರೂ ವಿವಾಹವು ನಡೆ
ಯಿತೆಂದೇ ನಾವು ಭಾವಿಸಬೇಕು. ನಾನು ನನ್ನ ಮಗಳನ್ನು ಇನ್ನೊಬ್ಬನಿಗೆ ಕೊಟ್ಟು
ಆ ಹುಡುಗಿಯ ಸತೀತ್ವವನ್ನು ಹಾಳುಮಾಡಲಾರೆನೆನಲು ಸೋಮಸುಂದರನ್ನು,
ಸ್ವಾಮಿ ! ನಿಮ್ಮ ಮಗಳು ನನ್ನ ಸೊಸೆಯೇ ಸುರಿ! ಆದರೆ ಆ ಕನ್ಯೆಯು ನನ್ನ
ಮನೆಯಲ್ಲಿದ್ದರೆ ನನಗೆ ಆಗಾಗ್ಗೆ ಆ ಮಗುವಿನ ಮುಖವನ್ನು ನೋಡಿ ದುಃಖ ಬರು
ವುದರಿಂದ ನನ್ನ ಮಗನು ಸಿಕ್ಕುವವರಿಗೆ ಆ ಹುಡುಗಿಯು ನಿಮ್ಮ ಮನೆಯಲ್ಲೇ
ಇರಲಿ, ನನ್ನ ಮಗನು ಸಿಕ್ಕಿದೊಡನೆ ವಿವಾಹ ಕಾರ್ಯಗಳನ್ನು ಮುಂದಿಸೋಣ
ವೆಂದು ಹೇಳಲು ಇಬ್ಬರೂ ಸುಮ್ಮನಾದರು.
ಎ ರ ಡ ನೆ ಯ ಆ ಧ್ಯಾ ಯ.
(ಭಾಸ್ಕರ)
ಮೇಲೆಕಂಡ ವಿಷಯಗಳು ನಡೆದು ಹತ್ತು ದಿನಗಳಾದವು. ಪೋಲೀಸ್ ಆಫೀಸ
ರು ಬಂದು ವಿಷಯಗಳನ್ನೆಲ್ಲಾ ವಿಚಾರಿಸಿಕೊಂಡು ಹೋಗಿ ತಮ್ಮ ಕೈಲಾದ ಪ್ರಯತ್ನ
ವನ್ನೆಲ್ಲಾ ಮಾಡಿ ಮಧುಸೂದನನನ್ನು ಹುಡುಕಿಸಿದರು. ಆದರೂ ಯಾವ ಪ್ರಯೋಜ
೪-------------------------------------------------
೪ ಕಾದಂಬರಿ ಸಂಗ್ರಹ
ನವೂ ಆಗಲಿಲ್ಲ. ಬಹಳ ಕಾತರನಾದ ಸೋಮಸುಂದರನು ಪತ್ರಿಕೆಗಳಲ್ಲೇನಾದರೂ
ತನ್ನ ಮಗನ ವಿಷಯವನ್ನು ತಿಳಿಯಬಹುದೆಂದು ಒಂದು ವಾರ ಪತ್ರಿಕೆಯನ್ನು ಓದು
ತಿದ್ದನು. ಅದರ ಒಂದು ಭಾಗದಲ್ಲಿ ಘೋರವಾದ ಕೊಲೆಯ ಅದರ ಪರ್ಯವಸಾನ
ವೂ'' ಎಂದು ಬರೆಯಲ್ಪಟ್ಟಿದ್ದ ಲೇಖನವನ್ನು ಓದತೊಡಗಿದನು. ಈಗ್ಗೆ ಸುಮಾರು
ಹತ್ತು ದಿವಸಗಳ ಕೆಳಗೆ ರಾಣೀಗಂಚಿನಲ್ಲಿ ಒಂದು ಮನೆಯಲ್ಲಿ ಒಂದೇರಾತ್ರಿಯಲ್ಲಿ
ಮೂರು ಜನಗಳು ಕೊಲ್ಲಲ್ಪಟ್ಟರು. ಆ ವಿಷಯದಲ್ಲಿ ಪೋಲೀಸಿನವರು ತಮ್ಮ
ಸಾಮರ್ಥ್ಯವನ್ನೆಲ್ಲಾ ಉಪಯೋಗಿಸಿ ಕಂಡುಹಿಡಿಯಲು ಪ್ರಯತ್ನ ಪಟ್ಟರೂ ಯಾವ
ಪ್ರಯೋಜನವನ್ನೂ ಹೊಂದದೇಹೋದರು. ಆಗ ಪೋಲೀಸ್ ಮುಖ್ಯಾಧಿಕಾರಿಯೇ
ಬೊಂಬಾಯಿಯಲ್ಲಿದ್ದ ಪ್ರಸಿದ್ದ ಪತ್ತೇದಾರರಾದ ಭಾಸ್ಕರ ಎಂಬುವರನ್ನು ಕರತರಿಸಿ
ಅವರಿಗೆ ಈ ವಿಷಯವನ್ನು ಒಪ್ಪಿಸಿದರು. ಅವರು ನಾಲ್ಕು ದಿವಸಗಳೊಳಗಾಗಿ ಕಷ್ಟಪ
ಟ್ಟು ಕೊಲೆಪಾತಕನನ್ನು ಪತ್ತೆ ಮಾಡಿದರು. ಆ ಕೊಲೆಪಾತಕನು ಎಲ್ಲವನ್ನೂ ಒಪ್ಪಿ
ಕೊಂಡು ಈ ದಿನ ಮಧ್ಯಾಹ್ನ ಯಾರಿಗೂ ಅಯದ ರೀತಿ ತನ್ನನ್ನು ಕೂಡಿದ್ದ ಕೊಠ
ಡಿಯ ಬಾಗಲಿನ ಕಂಬಿಗಳಿಗೆ ನೇಣುಹಾಕಿಕೊಂಡು ಸತ್ತನು.
ಸೋಮಸುಂದರನು ಇದನ್ನೋದಿ ಸ್ವಲ್ಪ ಹೊತ್ತು ಏನೋ ಯೋಚಿಸಿ ತನ್ನ
ಗುಮಾಸ್ತೆಯನ್ನು ಕರಸಿ ರಾಣೇಗಂಟಿನ ಪೋಲೀಸ್ ಅಧಿಕಾರಿಗೆ ತಕ್ಷಣವೇ ಭಾಸ್ಕರನ
ನ್ನು ಕಳುಹಿಸುವ ಹಾಗೆ ತಂತಿಯನ್ನು ಕೊಡುವಂತೆ ಆಜ್ಞಾಪಿಸಿದನು.
ಮಾರನೇದಿನ ಒಂಭತ್ತು ಗಂಟೆಯ ಸಮಯದಲ್ಲಿ ಸುಮಾರು ಇಪ್ಪತ್ತೈದು
ವರ್ಷ ಪ್ರಾಯದ ಮನುಷ್ಯನೊಬ್ಬನು ಬಂದು ಸೋಮಸುಂದರನನ್ನು ನೋಡಲಪೇಕ್ಷಿ
ಸಿದನು. ಸೋಮಸುಂದರನು ಅವನನ್ನು ಒಳಕ್ಕೆ ಬರುಹಾಗೆ ಹೇಳಿ ತನ್ನ ಬೈತಕಖಾ
ನೆಯಲ್ಲಿ ಕಾದಿದ್ದನು. ಬಂದ ಮನುಷ್ಯನು ಸೋಮಸುಂದರನಿಗೆ ವಂದಿಸಿ ಅಲ್ಲೇ
ಇದ್ದ ಒಂದು ವೇತ್ರಾಸನದಮೇಲೆ ಕುಳಿತುಕೊಂಡನು. ಸೋಮಸುಂದರನು ಅವನೇ
ಭಾಸ್ಕರನಿರಬಹುದೆಂದು ಯೋಚಿಸಿ ಸ್ವಾಮೀ ನೀವೇನೋ ಭಾಸ್ಕರರೆಂಬುವರು, ಎಂದು
ಕೇಳಿದನು.
ಹೊಸಮನುಷ್ಯ-ಹೌದು. ನಿಮ್ಮ ತಂತಿಯನ್ನು ನೋಡಿ ನನ್ನನ್ನು ಪೊಲೀಸ್
ಸೂಪರಿಂಟೆಂಡೆಂಟರು ಕಳುಹಿಸಿರುವರು. ನನ್ನನ್ನು ಕರೆಯಕಳುಹಿಸಿದ ಕಾರಣವೇನು?
ಸೋಮಸುಂದರ-ಸ್ವಾಮೀ !ನಾನು ಏನು ಹೇಳಲಿ ಎಂದು ಕಣ್ಣೀರು
ಸುರಿಸುತ್ತಾ ತನ್ನ ಮಗನು ಕೌಣದೇಹೋದ ವಿಷಯವನ್ನೆಲ್ಲಾ ಕ್ರಮವಾಗಿ ತಿಳಿ
ಸಿದನು,
೫-------------------------------------------
ಮಧುಸೂದನ ೫
ಭಾಸ್ಕರನು ಸ್ವಲ್ಪಹೊತ್ತು ಹಾಗೇ ಯೋಚಿಸಿ ಮಧ್ಯಾಹ್ನದಮೇಲೆ ಎಲ್ಲಾ
ವಿಷಯಗಳನ್ನೂ ಪರೀಕ್ಷಿಸುವುದಾಗಿಯೂ ಈಗ ಹೊತ್ತಾದ್ದರಿಂದ ಭೋಜನಾದಿಗಳನ್ನು
ಮುಗಿಸಿಕೊಳ್ಳುವುದು ಒಳ್ಳೆಯದೆಂದೂ ತಿಳಿಸಿದನು. ಸೋಮಸುಂದರನೂ ಒಪ್ಪಿ ಅವ
ನನ್ನು ಸ್ನಾನಾದಿಗಳನ್ನು ಮಾಡುವಂತೆ ಹೇಳಿ ಹೊರಟುಹೋದನು.
ಮೂ ರ ನೆ ಯ ಅ ಧ್ಯಾಯ.
(ಭಾಸ್ಕರನು ಏನು ಯೋಚಿಸಿದನು?)
ಮಧ್ಯಾಹ್ನ ಸುಮಾರು ಎರಡು ಗಂಟೆಯ ಹೊತ್ತಿಗೆ ಸೋಮಸುಂದರನೂ
ಭಾಸ್ಕರನೂ ಮಧುಸೂದನನ ಕೊಠಡಿಗೆ ಬಂದು ಸೇರಿದರು. ಭಾಸ್ಕರನು ಸೋಮಸುಂ
ದರನನ್ನು ಕುರಿತು "ನೀವು ಈ ಕೊಠಡಿಯ ಸಮೀಪಕ್ಕೆ ಬಂದಾಗ ಒಳಗೆ ಅಗಣಿ
ಹಾಕಿತ್ತೆಂದು ಹೇಳಿದಿರಲ್ಲವೆ? ಹಾಗಾದರೆ ಒಳಗಿನಿಂದ ಹೋಗಲು ಬೇರೇ ಮಾರ್ಗ
ವಾವದಾದರೂ ಇರುವುದೊ ? ಇಲ್ಲದಿದ್ದರೆ ಹಾಗೆ ಒಳಗಿನಿಂದ ಅಗಣೀ ಹಾಕಿರಲು
ಅದು ಹೇಗೆ ಸಾಧ್ಯವು? ಆದ್ದರಿಂದ ನಿಮಗೆ ತಿಳಿಯದ ಯಾವದೋ ಒಂದು ಮಾರ್ಗ
ವು ಇರಲೇಬೇಕು'' ಎಂಬದಾಗಿ ಹೇಳಿದನು.
ಸೋಮಸುಂದರ-- " ಸ್ವಾಮಿ, ನನಗೆ ತಿಳಿದಮಟ್ಟಗೆ ಇಲ್ಲಿ ಯಾವ ಗುಪ್ತ
ಮಾರ್ಗವೂ ಇಲ್ಲವು. ಇದೇ ಪ್ರಶ್ನೆಯನ್ನು ಪೊಲೀಸ್ ಮುಖ್ಯಾಧಿಕಾರಿಯ ನನ್ನ
ನ್ನು ಕೇಳಿದನು. ಈ ಮನೆಯು ನನ್ನ ಪಿತ್ರಾರ್ಜಿತವಾದುದು. ಇದರಲ್ಲಿ ಯಾವ ಗೂಢ
ಮಾರ್ಗವಿದ್ದರೂ ನನಗೆ ತಿಳಿದಿರಬೇಕು. ಆದರೂ ನನ್ನ ಪುತ್ರನನ್ನು ಹ್ಯಾಗೆ ಎತ್ತಿಕೊಂ
ಡು ಹೋಗಿರಬೇಕೆಂಬುವುದೂ ಒಳಗೆ ಅರ್ಗಹಾಕಿದ ನನಗೆ ತಿಳಿಯಲಸಾಧ್ಯವಾದ
ಒಗಟಾಗಿದೆ.
ಭಾಸ್ಕರನು ತನ್ನ ಪತ್ತೇದಾರಿ ಮಾರ್ಗದ ಹುಡುಕುವಿಕೆಯನ್ನು ಪ್ರಾರಂಭಿಸಿದನು.
ಅವನು ಸೋಮಸುಂದರನನ್ನು ಕುರಿತು ಅಲ್ಲಿ ಎಲ್ಲಾ ಸಾಮಾನುಗಳೂ ಮಧುಸೂದ
ನನು ಕಾಣದೇ ಹೋದ ದಿನ ಇದ್ದ ಹಾಗೆಯೇ ಇದೆಯೋ ಎಂದು ಕೇಳಲು, ಅವನು
ಪೊಲೀಸಿನವರು ತಿರುಗಿ ಹಾಕಿದ ಪದಾರ್ಥಗಳು ವಿನಹಾ ಉಳಿದವುಗಳೆಲ್ಲಾ ಹಾಗೆಯೇ
ಇರುವುದೆಂದು ತಿಳಿಸಿದನು. ಭಾಸ್ಕರನು ಹಾಗೇ ಸ್ವಲ್ಪ ಹೊತ್ತು ಆ ಕೊಠಡಿಯ
ಆಕಾರ ಮತ್ತು ಅದರ ರಚನೆ ಇವುಗಳನ್ನು ನೋಡುತ್ತಿದ್ದನು. ಅವನಿಗೆ ಯಾವ ವಿಧ
೬------------------------------------------------------
೬ ಕಾದಂಬರಿ ಸಂಗ್ರಹ
ವಾದ ಸುಳಿವಾದರೂ ಸಿಗಲಿಲ್ಲವು. ಕೊಠಡಿಯ ಒಂದು ಭಾಗದಲ್ಲಿ ಒಂದು ದೊಡ್ಡ
ಮಂಚವು ಹಾಕಲ್ಪಟ್ಟು, ಭಾಸ್ಕರನ ಸೂಕ್ಷ್ಮವಾದ ಕಣ್ಣಿಗೆ ಆ ಮಂಚದ ಒಂದು
ಭಾಗದಲ್ಲಿ ಸ್ವಲ್ಪ ಅರಿಶಿನವು ಕಾಣಬಂದಿತು. ಭಾಸ್ಕರನು ಅದನ್ನು ತನ್ನ ಬುಕ್ಕಿನಲ್ಲಿ
ಬರೆದುಕೊಂಡನು. ಕೊಠಡಿಗೆಲ್ಲಾ ಮೆತ್ತನಾದ ಜಮಖಾನವನ್ನು ಹಾಸಿದ್ದರು.
ಅದರ ಮೇಲೇನಾದರೂ ಕಾಲಿನ ಗುರುತುಗಳು ಕಾಣುವುವೋ ಎಂದು ಬಹಳ
ಹೊತ್ತು ದೃಷ್ಟಿಸಿ ನೋಡಿದನು. ಏನೂ ಪ್ರಯೋಜನ ಕಂಡು ಬರಲಿಲ್ಲ. ಹಾಗೇ
ಮಲಗಿಕೊಂಡು ಪರೀಕ್ಷಿಸುತ್ತಾ ಬಂದನು. ಮಂಚದ ಸಮೀಪದಲ್ಲಿ ಸ್ವಲ್ಪ ಮಂಕು
ಮಂಕಾಗಿ ಎರಡು ಮೂರು ಕಾಲಿನ ಗುರುಗಳು ಮಂಚದ ಕಡೆಗೆ ತೋರಿಸು
ತಿದ್ದವು. ಅದನ್ನೂ ತನ್ನ ಬುಕ್ಕಿನಲ್ಲಿ ಬರೆದುಕೊಂಡನು. ಅನಂತರ ಅವನಿಗೆ ಯಾವ
ಸುಳಿವಾದರೂ ಶಿಗಲಿಲ್ಲವು. ಇನ್ನು ಹುಡುಕಿ ಪ್ರಯೋಜನವಿಲ್ಲವೆಂದು ತೀರ್ಮಾನಿಸಿ
ಸೋಮಸುಂದರನನ್ನೂ ಸಹಾ ಹಿಂದಕ್ಕೆ ಕರೆದುಕೊಂಡು ಬಂದು ಮಾರನೆ ದಿವಸ
ಬೆಳಿಗ್ಗೆ ಒಂದು ಮಾತನಾಡುವದಾಗಿ ಹೇಳಿ ಹೊರಟು ತನಗಾಗಿ ಕೊಟ್ಟಿದ್ದ ಕೊಠಡಿ
ಯನ್ನು ಸೇರಿ ಅಲ್ಲಿ ಒಂದು ವೇತ್ರಾಸನದ ಮೇಲೆ ಕುತುಕೊಂಡು ಯೋಚಿಸಲಾ
ರಂಭಿಸಿದನು.
ಭಾಸ್ಕರನು ಯೋಜನೆಯಲ್ಲಿ ರಾತ್ರಿ ಎಂಟು ಗಂಟೆಗಳವರೆಗೆ ಕುಳಿತಿದ್ದನು.
ಆಗ ಹಠಾತ್ತಾಗಿ ಅವನು ಆಹಾ ! ಗೊತ್ತಾಯಿತು. ನಾನು ಈಗ ಯೋಚಿಸಿದ್ದೇ ಸರಿ
ಯಾಗಿರಬೇಕು. ಇರಲಿ. ಎಲ್ಲವನ್ನೂ ವಿಚಾರಿಸಿದರೆ ತಿಳಿಯುವುದು ಎಂದು ಹೇಳಿ
ಕೊಂಡು ಊಟಕ್ಕೆ ಹೊತ್ತಾದ್ದರಿಂದ ಎದ್ದು ಊಟಮಾಡಿ ಪುನಃ ಬಂದು ಕುಳಿತನು.
ಆಗ ಅವನು ಸ್ವಲ್ಪ ಹೊತ್ತು ಯೋಚಿಸುತ್ತಿದ್ದು ತನ್ನ ಪುಸ್ತಕದಲ್ಲಿ ಏನನ್ನೋ
ಬರೆದುಕೊಂಡು ಮಲಗಿ ನಿದ್ರೆಹೋದನು.
ಮಾರನೇ ದಿನ ಬಗ್ಗೆ ಒಂಭತ್ತು ಗಂಟೆಯ ಸುಮಾರಿಗೆ ಭಾಸ್ಕರನು ಸೋಮ
ಸುಂದರನ ಕೊಠಡಿಗೆ ಹೋಗಿ ಅಲ್ಲಿದ್ದ ವೇತ್ರಾಸನದ ಮೇಲೆ ಕುಳಿತುಕೊಂಡು ಅವನು
ಕೊಟ್ಟ ಕಾಫಿಯನ್ನು ಕುಡಿದನು.
ಭಾಸ್ಕರ:-ಸ್ವಾಮೀ, ನಿಮ್ಮ ಮನೆಯಲ್ಲಿ ಬಹಳ ಹಳೆಯ ಸೇವಕರಾರಾ
ದರೂ ಇರುವರೋ ?
ಸೋಮಸುಂದರ :-ಆಹಾ ! ಇರುವರು. ನಮ್ಮ ತಾತನ ಕಾಲದಿಂದಲೂ ಬಂದ
ಮುದುಕನಾದ ಕೃಷ್ಣನೆಂಬುವನೊಬ್ಬನೂ ನಮ್ಮ ತಂದೆಯ ಕಾಲದಿಂದ ಬಂದ ಹೀರಣ್ಣ
ನೆಂಬುವನೂ ಇರುವರು.
೭-----------------------------------------------------------------------------------
ಮಧುಸೂದನ ೭
ಭಾಸ್ಕರ:-...ಅನುಬ್ಬರಿಗೂ ಮನೆಯ ಪ್ರತಿಯೊಂದು ಭಾಗವೂ ತನ್ನಾಗಿ ತಿಳಿದಿ
ದೆಯೋ?
ಸೋಮಸುಂದರ ಅವರಿಬ್ಬರಲ್ಲಿ ಮುದುಕನಾದ ಕೃಷ್ಣನಿಗೆ ಅನೇಕ ವಿಷಯಗಳು
ತಿಳಿದಿರುತ್ತವೆ. ಈಗ ತಾನೇ ಸ್ವಲ್ಪ ದಿವಸಗಳ ಕೆಳಗೆ ಅವನು ನನಗೊಂದು ಗುಪ್ತ ಮಾರ್ಗ
ವನ್ನು ತೋರಿಸಿದನು. ಅಲ್ಲಿಯಮಗೂ ಅದು ಇರುವುದಾಗಿ ನನಗೆ ತಿಳಿದೇ ಇರಲಿಲ್ಲ.
ಆ ಗುಪ್ತ ಮಾರ್ಗವು ನನ್ನ ಕೊಠಡಿಯಿಂದ ಅದೋ ಅಲ್ಲಿರುವ ಕೊಠಡಿಗೆ ಭೂಮಿಯೊಳ
ಗಿಂದ ದಾರಿಮಾಡಿಕೊಂಡು ಹೋಗುತ್ತದೆ. ಎನಲು ಎಲ್ಲಿ ನೋಡೋಣ ನೀವು ಆ
ಗುಪ್ತಮಾರ್ಗವಿರುವ ಸ್ಥಳವನ್ನು ತೋರಿಸಿರಿ. ಎಂದುಹೇಳಿ ಭಾಸ್ಕರನು ಮತ್ತೊಂದು
ಕೊಠಡಿಯಿರುವ ದಿಕ್ಕನ್ನು ನೋಡಿಕೊಂಡು ಅದಕ್ಕೆ ಸರಿಯಾಗಿ ತಾನು ಕುಳಿತಿದ್ದ
ಕೊಠಡಿಯ ಬಾಗನ್ನು ತನ್ನ ಸೂಕ್ಷ್ಮವಾದ ಕಣ್ಣಿನಿಂದ ನೋಡಿದನು. ಅಲ್ಲೊಂದು
ದೊಡ್ಡದಾದ ಗುಂಡಾದ ಮೇಜು ಹಾಕಿತ್ತು. ಇಂತಾ ಗುಪ್ತ ಮಾರ್ಗಗಳ ವಿಷಯವ
ನ್ನರಿತಿದ್ದ ಭಾಸ್ಕರನು ಅಲ್ಲೇ ಏನೋ ಗುಟ್ಟದೆಯೆಂದು ಯೋಚಿಸಿ ಆ ಗುಪ್ತ ಮಾರ್ಗದ
ದಾರಿಯು ಆ ಗುಂಡಾದ ಮೇಜಿನಡಿಂದ ಪ್ರಾರಂಭವಾಗುತ್ತದೆಂದು ತಿಳಿಸಿದನು.
ಸೋಮಸುಂದರನು ನಕ್ಕು, ಅದು ಅದು ಅಲ್ಲೇರುವುದು. ಆದರೆ ನಾನು ಹೇಳದೇ
ಇದ್ದರೆ ಪತ್ತೆಯಾಗುವದು ಅಸಾಧ್ಯವಲ್ಲವೇ' ಎಂದು ಕೇಳಿದನು.
ಭಾಸ್ಕರ : --- ದಯವಿಟ್ಟು ಆ ಕೃಷ್ಣನೆಂಬ ಸೇವಕರನ್ನು ನನ್ನ ಕೊಠಡಿಗೆ ಕಳುಹಿ
ಸಿರಿ. ಮತ್ತು ನಾನು ಕೇಳುವ ಪ್ರಶ್ನೆಗಳಿಗೆಲ್ಲಾ ಸರಿಯಾದ ಉತ್ತರವನ್ನು ಕೊಡುವಂತೆ
ಹೇಳಿ ಕಳುಹಿಸಿ, ಎಂದು ಹೇಳಿ ತನ್ನ ಕೊಠಡಿಗೆ ಹೋದನು. ಸ್ವಲ್ಪ ಹೊತ್ತಿಗೆ ಎಂಭತ್ತು
ವರ್ಷ ವಯಸ್ಸಿನ ಅತಿವೃದ್ಧನೊಬ್ಬನು ಕೋಲೂಕೊಂಡು ಕೆಮ್ಮುತ್ತಾ
ಬಂದು ಭಾಸ್ಕರನಿತ್ತ, ಆಸನದ ಮೇಲೆ ಕುಳಿತುಕೊಂಡು ತನ್ನನ್ನು ಕರೆಯ ಕಳುಹಿಸಿದ
ಕಾರಣವೇನೆಂದು ಕೇಳಿದನು.
ಭಾಸ್ಕರ :---ಅಯ್ಯಾ, ನೀನು ಈ ಮನೆಯಲ್ಲಿ ಎಷ್ಟು ವರ್ಷಗಳಿಂದ ಇರುವಿ.
ಕೃಷ್ಣ:-ಸ್ವಾಮಿ ನಾನು ಈ ಮನೆಯನ್ನು ನನ್ನ ಇಪ್ಪತ್ತನೇ ವರ್ಷದಲ್ಲಿ
ಸೇರಿದೆನು. ಈಗ ನನಗೆ ಎಂಭತ್ತೆರಡು ವರ್ಷ ವಯಸ್ಸು. ಆದ್ದರಿಂದ ನಾನು ಇಲ್ಲಿ
ಅರವತ್ತೆರಡು ವರ್ಷಗಳಿಂದಿರುವೆನು. ನಾನು ಕೆಲಸಕ್ಕೆ ಸೇರಿದಾಗ ಸೋಮಸುಂದರರ
ತಾತಂದಿದ್ದರು. ಆಗಿನಿಂದಲೂ ನಾನು ನಂಬಿಗಸ್ತನಾಗಿ ಕೆಲಸಮಾಡುತ್ತಾ ಬಂದೆನು,
ನನ್ನ ವೃದ್ಧಾದಲ್ಲಿ ಇವರು ನನ್ನನ್ನು ತಮ್ಮ ಮನೆಯವರಂತೆ ನೋಡಿಕೊಳ್ಳುತ್ತಿದ್ದಾರೆ.
ಎಲ್ಲಾ ವಿಷಯಗಳೂ ನನ್ನ ಮೂಲಕವೇ ನಡೆಯಬೇಕಾಗಿದೆ. ನಮ್ಮ ಯಜಮೀನರಿ
೮-------------------------------------------------------
೮ ಕಾದಂಬರಿ ಸಂಗ್ರಹ
ಗುಂಟಾದ ಕಷ್ಟದಿಂದ ನನ್ನ ಹೃದಯವು ಒಡದುಹೋಗುವ ಹಾಗಾಗಿದೆ. ನಮ್ಮ
ಮಧುಸೂದನನನ್ನು ಮಗುವಾಗಿದ್ದಾಗಲಿಂದಲೂ ನಾನೇ ಎತ್ತಿ ಲಾಲನೆ ಪಾಲನೆ ಮಾಡಿ
ದವನು. ನನಗೆ ಸಂಸಾರವೇ ಇಲ್ಲದಿದ್ದರಿಂದ ಮಧುಸೂದನನನ್ನು ನನ್ನ ಮಗನೆಂದೇ
ತಿಳಿದುಕೊಂಡಿದ್ದನು. ಅವನೂ ಸಹಾ ನನ್ನನ್ನು ಬಹಳ ಪ್ರೀತಿಯಿಂದ ಕಾಣುತ್ತಾ ನನ್ನ
ಮಾತುಗಳನ್ನು ಮೀರಿ ನಡೆಯದೆ ಇದ್ದನು. ಅವನು ತಂದೆಗೆ ತಿಳಿಸದ ಅನೇಕ ವಿಷಯ
ಗಳನ್ನು ನನಗೆ ಹೇಳಿದ್ದನು. ಅವುಗಳಲ್ಲಿ ಒಂದನ್ನೂ ಇದುವರೆಗೂ ನಾನು ಯಾರ
ಸಂಗಡಲೂ ಹೇಳಿದ್ದವು. ಅದು ಯಾವುದೆಂದರೆ ಅವನು ಕಲ್ಕತ್ತಾ ನಗರದಲ್ಲಿದ್ದಾಗ
ಕೆಲವು ದುರ್ಮಾರ್ಗಪ್ರವರ್ತಕರು ಅವನು ಬಹಳ ಐಶ್ವರಕ್ಕೆ ಯಜಮಾನನೆಂದು
ತಿಳಿದು ಅವನನ್ನು ಕೆಡಿಸುವುದಾಗಿ ನಿಷ್ಕರ್ಷೆಮಾಡಿಕೊಂಡು ಅವನ ಸ್ನೇಹವನ್ನು ಬೆಳಸಿ
ದರು. ಅವನು ಅವರ ಮೋಸವನ್ನಯದೆ ಅವರ ಕಪಟಸ್ನೇಹಕ್ಕೆ ಮರುಳಾಗಿ ಅವರ
ಸಂಗಡವೇ ಕಾಲಕಳೆಯಲು ಪ್ರಾರಂಭಮಾಡಿದರು. ಆ ದುಮ್ಮಾರ್ಗಿಗಳೆಲ್ಲರೂ ಜನಗ
ಳನ್ನು ಮೋಸಮಾಡಿ ತಮ್ಮ ಜೀವನವನ್ನು ಮಾಡಿಕೊಳ್ಳತಕ್ಕಂಥಾ ಒಂದು ಕಳ್ಳ
ಸಂಘಸಂಸ್ಕರಣ ಪಂಗಡಕ್ಕೆ ಸೇರಿದವರು. ಈ ಸಂಘದವರನ್ನು ಕಂಡರೆ ಇತರ ಸಂಘ
ದವರೆಲ್ಲಾ ರಹಸ್ಯದಿಂದ ತಮ್ಮ ಕೂಟಕ್ಕೆ ಕೆಟ್ಟ ಹೆಸರು ತರುವವರೆಂದು ಅವರನ್ನು
ಜರೆಯುತ್ತಿದ್ದರು. ಇವರಿಗೆಲ್ಲಾ ಮುಖಂಡನಾಗಿ ಒಬ್ಬ ಬಿ. ಎ. ಬಿ.ಎಲ್. ಪರೀಕ್ಷೆ
ಮಾಡಿದ ನೀಚನೊಬ್ಬನಿದ್ದನು. ಈ ದುರ್ಮಾರ್ಗಿಗಳು ತಾವು ಮಹಾ ಸುಗುಣಿಗಳಂತೆ
ತೋರ್ಪಡಿಸಿಕೊಳ್ಳುತ್ತಾ ತಮ್ಮ ಕೆಲ ಉಡುಪುಗಳನ್ನು ಧರಿಸಿಕೊಂಡು ಎಲ್ಲಾ ಸಂಘ
ಸಂಸ್ಕರಣ ಸಂಬಂಧವಾದ ಮೀಟಿಂಗಿಗೆ ನಿಲ್ಲುತ್ತಲೂ, ಋತುವಾದ ಕನ್ನೆಗಳನ್ನು ವಿವಾಹ
ಮಾಡಿಕೊಳ್ಳುವುದಾಗಿ ಬರೆದು ಕೊಡುತ್ತಲೂ ಜಾತಿ ಭೇದವಿಲ್ಲವೆಂದು ಹೇಳಿ ಎಲ್ಲ
ರೊಡನೆಯೂ ಸೇರಿ ಮಾದಕ ಪದಾರ್ಥಗಳನ್ನು ಸೇವಿಸುತ್ತಲೂ ಯಾವಾಗಲೂ ಸಿಗ
ರೇಟ್ ಮುಂತಾದವುಗಳನ್ನು ಬಾಯಲ್ಲಿ ಕಟ್ಟಿಕೊಂಡೇ ಅಲೆಯುತ್ತ, ವೈದೀಕರನ್ನು
ಕಂಡರೆ ಜರಿಯುತ್ತಲೂ ಇದ್ದರು. ಇಂಥಾ ನೀಚರು ತಮ್ಮ ಪಂಗಡಕ್ಕೆ ಏನೂ
ಅರಿಯದ ಹೊಸಮನುಷ್ಟ ರನ್ನೆಲ್ಲಾ ಸೇರಿಸಿಕೊಂಡು ಅವರನ್ನೂ ಹಾಳುಮಾಡುತ್ತಿ
ದ್ದರು. ಇವರ ಮೇಲೆಲ್ಲಾ ಪೋಲೀಸಿನವರಿಗೆ ಕಣ್ಣು ಇದ್ದೇ ಇತ್ತು. ಈ ಮಹಾತ್ಮರು
ಗಳು ಅನ್ಯಾಯವಾಗಿ ದೇಶವತ್ಸಲರಾದ ನಿರ್ಮಲ ಹೃದಯರಾದ ಸಂಘಸಂಸ್ಕರಣ
ಕರ್ತರ ಹೆಸರನ್ನು ಹಾಳುಮಾಡುತ್ತಿದ್ದರು. ಇಂಥಾ ನೀಚರ ಗುಣವನ್ನರಿಯದೆ
ನಮ್ಮ ಮಧುಸೂದನನು ಅವರ ಸ್ನೇಹವನ್ನು ಮಾಡಿದನು ಸ್ವಲ್ಪ ಕಾಲದಲ್ಲೇ ಈ
ನೀಚರು ಇವನನ್ನು ದುರಾರ್ಗಕ್ಕೆಳೆಯಲು ಪ್ರಾರಂಭಿಸಿದರು. ಸ್ವಲ್ಪ ಕಾಲದಲ್ಲೇ
೯---------------------------------------------------
ಮಧುಸೂದನ 9
ಅವನೂ ಅವರ ಹಾಗೆ ಜೂಜಾಟಗಳನ್ನು ಕಲಿತನು. ಯಾವಾಗ ಜೂಜಾಟವು
ಬಂದಿತೋ ಆಗಲೇ ಕುಡುಕತನ ಮುಂತಾದ ದುರ್ನಡತೆಗಳು ಒಂದರ ಹಿಂದೆ ಒಂದಾಗಿ
ಬಂದು ಒಟ್ಟವು. ತಂದೆಯು ಕಳುಹಿಸುತ್ತಿದ್ದ ಹಣವು ಸಾಲದೆ ಸ್ವಲ್ಪ ಕಾಲದಲ್ಲೇ
ಇಪ್ಪತ್ತು ಸಾವಿರ ರೂಪಾಯಿಗಳನ್ನು ಸಾಲವಾಗಿ ಆ ಸಂಘದ ಯಜಮಾನನಿಂದ ತರಬೇ
ಕಾಗಿ ಬಂದಿತು. ಈ ವಿಷಯಗಳಾವುವೂ ನನ್ನ ಯಜಮಾನನಿಗೆ ತಿಳಿಯದು. ಮಧು
ಸೂದನನು ಇಷ್ಟು ಕೆಟ್ಟ ಹೋಗಿದ್ದರೂ ವಿದ್ಯೆಯನ್ನು ಹಾಳು ಮಾಡಿಕೊಳ್ಳದೆ ಎಫ್.ಎ
ಪರೀಕ್ಷೆಯಲ್ಲಿ ತೇರ್ಗಡೆಯನ್ನು ಹೊಂದಿದನು. ಅಷ್ಟಕ್ಕೆ ಅವನ ಇಂಗ್ಲೀಷ್ ವಿದ್ಯಾ
ಭ್ಯಾಸವು ಸಾಕೆಂದು ಸೋಮಸುಂದರನು ಅವನನ್ನು ಕರತರಿಸಿ ಸಂಸ್ಕೃತವನ್ನು ಕಲಿ
ಯುವಹಾಗೆ ವಿದ್ವಾಂಸರ ಕೈಕೆಳಗೆ ಬಿಟ್ಟನು. ಮಧುಸೂದನನು ಸಕಲ ವಿದ್ಯದಲ್ಲಿಯೂ
ನೈಪುಣ್ಯವನ್ನು ಹೊಂದಿದನು. ಇಲ್ಲಿಗೆ ಬಂದ ಮೇಲೆ ಅವನಿಗೆ ತಾನು ಕಲ್ಕತ್ತಾ ನಗ
ರದಲ್ಲಿ ನಡೆಸಿದ ಅಕೃತ್ಯಗಳೆಲ್ಲಾ ಮನಸ್ಸಿಗೆ ಹೊಳೆದು ಬಹಳ ಪಶ್ಚಾತ್ತಾಪಪಟ್ಟು
ಕೊಂಡು ತಂದೆಯ ಬಳಿ ತನ್ನ ಸಾಲದ ವಿಷಯವನ್ನು ಹೇಳುವುದಕ್ಕೆ ಹೆದರಿ ನನಗೆ
ಎಲ್ಲವನ್ನೂ ತಿಳಿಯಪಡಿಸಿದನು. ಆ ಸಾಲದ ವಿಷಯವಾಗಿ ಅವನಿಗೆ ಆಗಾಗ್ಗೆ ಕಾಗದ
ಗಳು ಬರುತ್ತಿದ್ದಾರೆ ಕಂಡು ಬರುತ್ತದೆ. ಒಂದುದಿವಸ ಅಂದರೆ ಈಗ ಹತ್ತು ದಿವಸ
ಗಳ ಕೆಳಗೆ ಒಂದು ಕಾಗದವು ಒಂದಿತು. ಆ ಕಾಗದವ ಬಂದಾಗ ನಾನು ಅವನ ಕೊಠ
ಡಿಯಲ್ಲೇ ಕುಳಿತಿದ್ದೆನು, ಅದು ಅವನಿಗೆ ತಿಳಿದಿರಲಿಲ್ಲ. ಅವನು ಕಾಗದವನ್ನು ಓದುತ್ತಾ
ಓದುತ್ತಾ ಏನೇನೋಹೇಳಿಕೊಂಡನು. ಅವುಗಳಲ್ಲಿ ನನಗೆ ಕೇಳಿ ಬಂದವುಗಳು ಇಷ್ಟು
ಮಾತ್ರ "ಅಯ್ಯೋ ನಾನು ಇನ್ನೇನು ಮಾಡಲಿ. ನಮ್ಮ ತಂದೆಗೆ ತಿಳಿದು ಬಂದರೆ ಅವನೇ
ನನ್ನುವನು. ನನ್ನ ವಿವಾಹಕಾಲವು ಸಮೀಪಿಸುತ್ತಾ ಬಂದಿತಲ್ಲಾ.. ಅವರೇನಾದರೂ,”
ಎಂದುಹೇಳಿ ನನ್ನ ಕಡೆ ತಿರುಗಿ ನನ್ನ ಮುಖವನ್ನು ನೋಡಿದನು. ತಕ್ಷಣವೆ: ಅವನು ಕಾಗ
ದವನ್ನು ಬಚ್ಚಿಟ್ಟು ನನ್ನನ್ನು ಯಾವಾಗಬಂದೆ'' ಎಂದು ಕೇಳಿದನು.
ಈ ರೀತಿಯಾಗಿ ಆ ಮುದುಕನು ತನ್ನನ್ನು ಕೇಳದೆ ಇದ್ದರೂ ಈವಿಷಯಗಳನ್ನೆಲ್ಲಾ
ಹೇಳಿದನು. ಭಾಸ್ಕರನು ನಡುವೆ ಮಾತನಾಡದೆ ಆಗಾಗ್ಗೆ ತನ್ನ ಬುಕ್ಕಿನಲ್ಲಿ ಏನೇನೋ
ಬರೆದುಕೊಳ್ಳುತ್ತಿದ್ದನು. ಕೃಷ್ಣನು ಮಾತನಾಡಿ ನಿಲ್ಲಿಸಿದ ಮೇಲೆ ನಗುಮುಖದಿಂದ
ಅವನ ಕಡೆಗೆ ತಿರುಗಿ " ಅಯ್ಯಾ ನೀನು ಈಗ ಹೇಳಿದ ವಿಷಯಗಲ್ಲಾ ಬಹಳಸಹಾಯ
ಮಾಡಿದವು. ನಿನಗೆ ಮಧುಸೂದನನು ಕಾಗದಗಳನ್ನಿಟ್ಟಿದ್ದ ಸ್ಥಳವು ಗೊತ್ತಿದೆಯೋ"
ಎಂದು ಕೇಳಿದನು.
೧೦------------------------------------------------------
10 ಕಾದಂಬರಿ ಸಂಗ್ರಹ
ಕೃಷ್ಣ:-.ಆಹಾ ಗೊತ್ತಿದೆ. ಅವನು ಬಹಳ ದಿವಸದಿಂದ ಕಾಗದಗಳನ್ನಿಡುತ್ತಿದ್ದ
ಸ್ಥಳವು ನನಗೆಗೊತ್ತಿದೆ. ಬೇಕಾಗಿದ್ದರೆ ಈಗಲೇ ತೋರಿಸುವೆನು.
ಭಾಸ್ಕರ: --ಆಗಲಿ. ಮೊದಲು ಈ ಒಂದುಪ್ರಶ್ನೆಗೆ ಉತ್ತರಕೊಡು. ಈ ನಿಮ್ಮ
ಮಧುಸೂದನನಿ ಕೊಠಡಿಗೆ ಯಾವುದಾದರೂ ಗುಪ್ತ ಮಾರ್ಗವಿರುವುದೋ ?
ಕೃಷ್ಣ:- (ಸ್ವಲ್ಪಹೊತ್ತು ಯೋಚಿಸಿ) ಆಹಾ! ಈಗ ಜ್ಞಾಪಕಕ್ಕೆ ಬಂದಿತು. ಈಗ
ಒಂದು ತಿಂಗಳ ಕೆಳಗೆ ಮಧುಸೂದನನಿಗೆ ಅವನ ಕೊಠಡಿಯಲ್ಲಿ ಗುಮಾರ್ಗದ ವಿಷ
ಯವನ್ನು ತಿಳಿಸಿದ್ದೆನು. ಈಗ ನೀವು ಕೇಳದಿದ್ದರೆ ಅದರ ವಿಷಯವು ನನಗೆ ಜ್ಞಾಪಕವೇ
ಬರುತ್ತಿರಲಿಲ್ಲ. ಆ ಗುಪ್ತನೂರ್ಗವ ಬಹಳ ವಿಚಿತ್ರವಾದದ್ದು. ಮೇಲಿನಿಂದ ನೋಡುವು
ದಕ್ಕೆ ಏನೂ ತಿಳಿಯುವುದಿಲ್ಲ. ಎಲ್ಲಾ ಗುಪ್ತ ಮಾರ್ಗಗಳಿಗೂ ಇರುವಹಾಗೆ ಮೇಲುಗಡೆ
ಯಾವವಿಧವಾದ ಕೀಲಾಗಲೀ ಮೊಳೆಯಾಗಲೇ ಇಲ್ಲ. ಆದ್ದರಿಂದ ನೀವು ಒಂದುವರ್ಷ
ವೆಲ್ಲಾ ಹುಡುಕಿದರೂ ಏನೂ ತಿಳಿದುಬರುವುದಿಲ್ಲ. ಆ ಗುಪ್ತಮಾರ್ಗವು ಆ ಕೊಠಡಿಯಲ್ಲಿ
ರುವ ಮಂಚದ ಕೆಳಗಿದೆ. (ಭಾಸ್ಕರನು ತಾನು ಸಂದೇಹಪಟ್ಟಿದ್ದು ನಿಜವಾಯಿತೆಂದು
ಯೋಚಿಸಿದನು.) ಅದನ್ನು ತೆರೆಯುವುದು ಹೇಗೆಂದು ನೀವು ಯೋಚಿಸಬಹುದು. ಆ ನಮ್ಮ
ಮನೆಗೆ ಅರ್ಧ ಫರಲಾಂಗ್ ದೂರದಲ್ಲೊಂದು ಪುರಾತನ ಮನೆಯಿರುವುದು. ಆ ಮನೆ
ಯಲ್ಲಿ ಎರಡು ಕೊಠಡಿಗಳಿರುವುವು. ಅವುಗಳಲ್ಲಿ ಮೊದಲನೇ ಕೊಠಡಿಯಲ್ಲಿ ಮಹಡಿ
ಹತ್ತುವುದಕ್ಕೆ ಮೆಟ್ಟಿಲುಗಳಿರುವವು. ಆ ಮೆಟ್ಟಿಲುಗಳ ತಳದಲ್ಲಿ ಒಂದು ಗುಪ್ತ ಮಾರ್ಗ
ವಿರುವುದು. ಅದನ್ನು ಸುಲಭವಾಗಿ ಒಂದು ಹಾರೆಯ ಸಹಾಯದಿಂದ ಮೀಟಿ ತೆಗೆಯ
ಬಹುದು. ಅಲ್ಲಿಂದ ಮಧುಸೂದನನ ಕೊಠಡಿಯೊಳಕ್ಕೂ ಒಂದು ಸುರಂಗ ಮಾರ್ಗವಿರು
ವುದು. ಈ ಮಧುಸೂದನನ ಕೊಠಡಿಯಲ್ಲಿರುವ ಗುಪ್ತ ಮಾರ್ಗದ ಬಾಗಲು ದುಂಡಾಗಿ
ರುವದು. ಅದರಮೇಲೆ ಮಣ್ಣು ಮೆತ್ತಲ್ಪಟ್ಟಿರುವರು. ಅದಕ್ಕೆ ಅಡಿಯಲ್ಲಿ ಚಲುಕವಿರು
ವುದು. ಆ ಚಿಲಕವನ್ನು ತೆಗೆದು ಅಡಿಯಲ್ಲಿರುವ ಪಿಡಿಯನ್ನು ಹಿಡಿದು ಆ ಬಾಗಿಲನ್ನು
ಎತ್ತಿದರೆ ಅದು ಮೇಲಕ್ಕೆ ಬಂದು ಒಂದುಗುಂದಾದ ಮಾರ್ಗವು ಕಾಣುವುದು. ಈ ವಿಧ
ವಾದ ಸುರಂಗಮಾರ್ಗವು ಈ ಇನ್ನೂರು ವರ್ಷಗಳ ಹಿಂದೆ ಮಾಡಲ್ಪಟ್ಟಿತು. ಆ ಕಾಲ
ದಲ್ಲಿ ಪಿಂಡಾರಿಗಳು ಪಂಜು ಕಳ್ಳರು ಇವರುಗಳ ಹಾವಳಿಯಿಂದ ಮತ್ತು ಅನೇಕ ಪರ
ದೇಶೀಯರು ದಂಡೆತ್ತಿಬಂದು ಎತ್ತರವನ್ನು ಕೊಳ್ಳೆಹೊಡೆದುಕೊಂಡು ಹೋಗುತ್ತಿದ್ದ
ರಿಂದಲೂ ಐಶ್ವರ್ಯವಂತರು ತಮ್ಮ ಹಣದ ವಿಷಯವಾಗಿ ಯಾವಾಗಲೂ ಹೆದುಕೆಯಿಂದಲೇ
ಇರುತ್ತಿದ್ದರು. ಆಗ ವಾಸವಪುರದ ಜಹಗೀರ್ದಾರರೊಬ್ಬರು ಯಾರಿಗೂ ತಿಳಿಯದ
ರೀತಿ ಈ ರೀತಿ ಸುರಂಗ ಮಾರ್ಗವನ್ನೂ ಗುಪ್ತ ಮಾರ್ಗಗಳನ್ನೂ ರಚಿಸಿ ಅದರಲ್ಲಿ ತಮ್ಮ
೧೧----------------------------------------
ಮಧುಸೂದನ ೧೧
ಐಶ್ವವನ್ನೆಲ್ಲಾ ಇಟ್ಟಿದ್ದರು. ಕಳ್ಳರಾಗಲೀ ಅಥವಾ ಲೂಟಿಹೊಡೆಯುವ ಸೈನ್ಯವಾಗಲಿ
ಬರುತ್ತೆಂದು ತಿಳಿದ ಕೂಡಲೇ ಅವರು ಆಹಾರ ಸಾಮಗ್ರಿಗಳನ್ನು ತೆಗೆದುಕೊಂಡು
ಈ ಗುಪ್ತ ಮಾರ್ಗದೊಳಕ್ಕೆ ಹೋಗಿ ಹತ್ತಿಪ್ಪತ್ತು ದಿವಸಗಳು ವಾಸಮಾಡುತ್ತಿದ್ದರು.
ಅದು ಕತ್ತಲೆಯ ಮತ್ತು ಅಸಹ್ಯಕರವೂ ಆದ ಪ್ರದೇಶವಾಗಿದ್ದರೂ ಪ್ರಾಣಭಯ
ದಿಂದಲೂ ಧನದಾಶೆಯಿಂದಲೂ ಅವರು ಎಲ್ಲವನ್ನೂ ಸಹನೆಯಿಂದ ಅನುಭವಿಸುತ್ತಿ
ದ್ದರು. ಆದ್ದರಿಂದಲೇ ವಾಸವಪುರದ ಜಹಗೀರ್ದಾರರು ಪುರಾತನ ಕಾಲದಿಂದಲೂ
ಅತುಲೈಶ್ವರಸಂಪನ್ನರಾಗಿರುತ್ತಾರೆ. ಇದರ ವಿಷಯವು ಈಗಲೂ ಯಾರಿಗೂ ತಿಳಿಯದು.
ನನಗೆ ಮಾತ್ರ ಇದು ಮೊದಲಿಂದ ತಿಳಿದಿತ್ತು. ನಮ್ಮಯಮಾನರಾದ ಸೋಮಸುಂದರ
ರಾಯರಿಗೆ ಈ ವಿಷಯ ತಿಳಿದಿಲ್ಲ.
ಭಾಸ್ಕರ: ಈಗಲೀಗನೀವು ನನಗೆ ಬಹಳ ಸಹಾಯ ಮಾಡಿದಿರಿ, ಮಧುಸೂದ
ನನು ಹೋದ ಮಾರ್ಗವು ನನಗೆ ತಿಳಿಯಿತು.
ಕೃಷ್ಣ ....ಏನು ? ಮಧುಸೂದನನೂ ಆ ಮಾರ್ಗದಲ್ಲಿ ಹೋದನೇ ? ಎಲ್ಲಿಗೆ
ಹೋದನು ? ಅಯ್ಯೋ ! ಅದರ ವಿಷಯವನ್ನು ಅವನಿಗೇಕೆ ನಾನು ತಿಳಿಸಿದೆನು? ಎಂದು
ಪೇಚಾಡಿದನು.
ಭಾಸ್ಕರ-ಅಯ್ಯಾ ಸಮಾಧಾನವನ್ನು ತಂದುಕೊಳ್ಳಿ. ನೀವು ಹೇಳಿದ್ದರಿಂದ
ಅಷ್ಟೇನೂ ಕೆಡಕಾಗಲಿಲ್ಲ. ಈಗ ದಯವಿಟ್ಟು ಮಧುಸೂದನನು ಇಟ್ಟಿರುವ ಕಾಗದ
ಗಳನ್ನು ತಂದು ಕೊಡಿ.
ಮುದುಕನು ಏನೇನೋ ಗೊಣಗುತ್ತಾ ಹೊರಟುಹೋದನು. ಭಾಸ್ಕರನು
ಅವನು ಹೇಳಿದ ಎಲ್ಲಾ ವಿಷಯಗಳನ್ನೂ ಯೋಚಸುತ್ತಾ ಕುಳಿತಿದ್ದನು. ಅವನ ಮನ
ಸ್ಸಿಗೆ ನಾನಾಬಗೆಯ ಯೋನೆಗಳು ಹೊಳೆದವು. ಒಂದು ವೇಳೆ ಮಧುಸೂದನನ
ಕಲ್ಕತ್ತಾ ಸ್ನೇಹಿತರೇನಾದರೂ ಕೆಡಕನ್ನು ಮಾಡಿರಬಹುದೇ ಎಂದು ಯೋಚಿಸಿದನು.
ಇಲ್ಲಿ ಮಧುಸೂದನನೇ ಮದುವೆಯಮೇಲೆ ಅಪೇಕ್ಷೆಯಿಲ್ಲದೆ ಆಗುಪ್ತ ಮಾರ್ಗದಲ್ಲೇ
ನಾದರೂ ಅಡಗಿರಬಹುದೋ ಎಂದೂ ಯೋಚಿಸಿದನು. ಆದರೆ ಆಗಲೇ ಯಾವುದೂ
ಸರಿಯಾಗಿ ತೋರಿಬರಲಿಲ್ಲ. ಅಷ್ಟು ಹೊತ್ತಿಗೆ ಕೃಷ್ಣನು ಒಂದು ಕಂತೆ ಕಾಗದಗಳನ್ನು
ತೆಗೆದುಕೊಂಡು ಬಂದು ಮೇಜಿನಮೇಲೆಹಾಕಿ ಬಿಟ್ಟು ಹೊರಟುಹೋದನು.
ಭಾಸ್ಕರನು ಎಲ್ಲಾ ಕಾಗದಗಳನ್ನೂ ಒಂದೊಂದಾಗಿ ಓದುತ್ತಾ ಬಂದನು.
ಯಾವಕಾಗದದಿಂದ ಉಪಯೋಗವಾಗಲಿಲ್ಲ. ಕೊನೆಗೆ ನೆಲದಮೇಲೆ ಒಂದು ಚೂರುಕಾಗದವು ಬಿದ್ದಿರುವುದನ್ನು ನೋಡಿ ಅದನ್ನು ತೆಗೆದು ಓದಿದನು. ತಕ್ಷಣವೇ
೧೨-------------------------------------
12 ಕಾದಂಬರಿ ಸಂಗ್ರಹ
ಭಾಸ್ಕರನ ಮುಖವ ಕೆಂಪಡರಿತು, ಕುಳಿತಿದ್ದ ಆಸನದಿಂದೆದ್ದು ಪುನಹ ಆ ಕಾಗದವ
ನ್ನೋದಿದನು. ಅದರಲ್ಲಿ ಬರೆದಿದ್ದಿತು " ಮಾರ್ಗದ ವಿಷಯ ತಿಳಿಯಿತು. ಅದು
ಇನ್ನಾರಿಗಾದರೂ ಗೊತ್ತೋ? ನೀನುಮಾಡಿದ ಶಪಥವನ್ನು ಜ್ಞಾಪಿಸಿಕೋ. ಅದಕ್ಕೆ
ಮೀರಿ ಮದುವೆ ಮಾಡಿಕೊಳ್ಳಲು ಹೋದತಿ ಅನಿಷ್ಟ ಸಂಘಟನೆಯಗುವುದು.
ಹುಷಾರ್ ” ಭಾಸ್ಕರನು ಆ ಕಾಗದವನ್ನು ತನ್ನ ಬುಕ್ಕಿನಲ್ಲಿಟ್ಟು ಕೊಂಡು ಉಳಿದ ಕಾಗದ
ಗಳನ್ನೆಲ್ಲಾ ಕಟ್ಟಿ ಮೇಟಿನಲ್ಲಿಟ್ಟನು.
ಅಷ್ಟು ಹೊತ್ತಿಗೆ ಭೋಜನಕಾಲವಾದ್ದರಿಂದ ಎದ್ದು ಹೋಗಿ ಸ್ನಾನಾದಿಗಳನ್ನು
ಮಾಡಿ ಭೋಜನವನ್ನು ಮುಗಿಸಿಕೊಂಡು ಪ್ರನೆ ತನ್ನ ಕೊಠಡಿಗೆ ಬಂದು ಕುಳಿತು
ಯೋಚಿಸಲಾರಂಭಿಸಿದನು. ಸ್ವಲ್ಪ ಹೊತ್ತು "ಇನ್ನೇನು ನಾನುಯೋಚಿಸಿದ್ದೆಲ್ಲಾ ಅವರ
ಮೇಲೆ ಸಂಶಯವನ್ನು ತೋರಿಸುತ್ತಿವೆ. ಆದರೆ ಅವರು ಏತಕ್ಕೋಸ್ಕರ ಈ ಕೆಲಸವನ್ನು
ಮಾಡಿದರೋ ತಿಳಿದುಬರುವದಿಲ್ಲ. ಏನೇ ಆಗಲಿ, ಮಧುಸೂದನನ ಕಲ್ಕತ್ತಾ ನಗರದ
ಸ್ನೇಹಿತರೇ ಈ ಕೆಲಸವನ್ನು ಮಾಡಿರುವರೆಂದು ನಾನು ಯೋಚಿಸುತ್ತೇನೆ'' ಎಂದು
ಹೇಳಿಕೊಂಡನು.
...
ನಾ ಲ್ಕ, ನೆ ಯ ಅ ಧ್ಯಾ ಯ.
(ಭಾಸ್ಕರನೂ ಮತ್ತು ಸುಳಿವುಗಳೂ)
ಮಾರನೇ ದಿವಸ ಭಾಸ್ಕರನು ಒಂದು ದೀಪವನ್ನೂ ಕೆಲವು ಬೆಂಕಿಕಡ್ಡಿ ಪೆಟ್ಟಿಗೆ
ಗಳನ್ನೂ ಎರಡು ರಿವಾಲ್ವರಗಳನ್ನೂ ಮತ್ತು ಒಂದು ಸಣ್ಣ ಹಾರೆಯನ್ನ ತೆಗೆದು
ಕೊಂಡು ಹೊರಟು ಸೋಮಸುಂದರನಿಗೆ ಸೇರಿದ ಹಳೆಯ ಮನೆಯನ್ನು ಸೇರಿದನು. ಆ
ಮನೆಯು ಬಹಳ ಪುರಾತನ ಕಾಲದಾದ್ದರಿಂದ ಅದು ಬಹಳ ಜೀರ್ಣಸ್ಥಿತಿಗೆ ಬಂದಿ
ದ್ದಿತು. ಮಲೆಮೂಲೆಯಲ್ಲಿಯೂ ಧೂಳು ರಾಶಿರಾಶಿಯಾಗಿ ಬಿದ್ದಿದ್ದಿತು. ಭಾಸ್ಕರನು
ನೆಟ್ಟಗೆ ಅಲ್ಲಿದ್ದ ಎರಡು ಕೊಠಡಿಗಳಲ್ಲಿ ಮೊದಲನೆಯದರೊಳಕ್ಕೆ ಹೋಗಿ ಅಲ್ಲಿದ್ದ
ಮೆಟ್ಟಲನ ಸಮೀಪಕ್ಕೆ ಹೋಗಿ ಅಗರ ಬುಡದಸುತ್ತಲೂ ನೋಡಿದನು. ಅಲ್ಲಿ ಬಿದ್ದಿದ್ದ
ಧೂಳಿನ ರಾಶಿಯ ಮೇಲೆ ಅನೇಕ "ಬೂಟ್ಸ್" ಕಾಲಿನ ಗುರುತುಗಳು ಕಾಣಬಂದವು.
ಭಾಸ್ಕರನು ಅಪ್ಪಿ ಒಂದು ಹಲಗೆನ್ನು ಸ್ವಲ್ಪ ಮೇಲಕ್ಕೆ ಎತ್ತಿ ನೋಡಲು ಅಡಿ
ಯಲ್ಲಿ ಗುಂಡಾದ ಒಂದು ಮರದ ಬಾಗಿಲು ಕಾಣಬಂದಿತು. ತಾನು ತಂದಿದ್ದ ಸಣ್ಣ
೧೩----------------------------------------------------------
ಮಧುಸೂದನ
13
ಹಾರೆಯಿಂದ ಅದನ್ನು ಮಾತು ಅದು ಸುಲಭವಾಗಿ ಹೊರಕ್ಕೆ ಬಂದಿತು. ಆದ್ದರಿಂದ
ಅದು ಸ್ವಲ್ಪ ದಿವಸಗಳ ಕೆಳಗೆ ತೆರೆಯಲ್ಪಟ್ಟಿತ್ತು ಎಂದು ತಿಳಿದು ಕೊಂಡನು. ಅಲ್ಲೊಂದು
ಗುಂಡಾದಮಾರ್ಗವು ಕಂಡುಬಂದಿತು, ಗಾಳಿಯು ಪ್ರವೇಶವಾಗಲೆಂದು ಸ್ವಲ್ಪಹೊತ್ತು
ಕಾದಿದ್ದು ಭಾಸ್ಕರನು ಆ ಮಾರ್ಗವಾಗಿ ಒಳಕ್ಕಿಳಿದು ಹೋದನು. ಒಳಗೆ ವಿಶಾಲ
ವಾದ ಮಾರ್ಗವೆಂದು ಕಾಣಬಂತು. ಎಲ್ಲಿಂದಲೋ ತಣ್ಣನೆ ಗಾಳಿಯು ಬೀಸು
ತಿತ್ತು. ಮುಂದಕ್ಕೆ ಹೋಗುತ್ತಾ ಹೋಗುತ್ತ ಕತ್ತಲೆಯು ಹೆಚ್ಚಾದ್ದರಿಂದ ತಾನು
ತಂದಿದ್ದ ದೀಪವನ್ನು ಹತ್ತಿಸಿಕೊಂಡು ಮುಂದಕ್ಕೆ ಹೊರಟನು. ಅವನು ಬಹಳ ಸೂಕ್ಷ್ಮ
ವಾಗಿ ನೆಲವನ್ನು ಪರೀಕ್ಷಿಸುತ್ತಾ ಹೋಗುತ್ತಿರಲು ಅಲ್ಲೊಂದು ಸ್ಥಳದಲ್ಲಿ ಒಂದು ಗಡಿ
ಯಾರದ ಸರಪಣಿಯು ಬಿದ್ದಿದ್ದಿತು. ಅದರ ಹಿಂಭಾಗದಲ್ಲಿ ಇಂಗ್ಲೀಷಿನ "ಎಂ”
(M) ಎಂಬಕ್ಷರವು ಕೆತ್ತಲ್ಪಟ್ಟಿತ್ತು. ಅದನ್ನು ತೆಗೆದುಕೊಂಡು ತನ್ನ ಕಿಸೆಯಲ್ಲಿ ಭದ್ರ
ವಾಗಿಟ್ಟುಕೊಂಡು ಮುಂದಕ್ಕೆ ಹೋದನು. ಅಲ್ಲೆಲ್ಲ ಬಟ್ಟೆಯ ಚೂರುಗಳೂ, ಹಗ್ಗದ
ಚೂರುಗಳೂ ಬಿದ್ದಿದ್ದವು. ಅದನ್ನೂ ತೆಗೆದುಕೊಂಡು ಮುಂದಕ್ಕೆ ಹೊರ
ಟನು. ಸ್ವಲ್ಪ ಹೊತ್ತಿಗೆಲ್ಲಾ ಒಂದು ಅಡ್ಡ ಗೋಡೆಯ ಬಳಿಗೆ ಬಂದನು. ಅಲ್ಲೇ
ಸ್ವಲ್ಪ ಹೊತ್ತು ದೃಷ್ಟಿಸಿನೋಡಲು ಒಂದು ಗುಂಡಾದ ಬಾಗಿಲೂ ಅದರ ಹಿಡಿಯೂ
ಕಾಣಬಂದಿತು. ಆ ಬಾಗಿಲು ಒಳಗರ ಚಿಲುಕ ಹಾಕಲ್ಪಟ್ಟಿತ್ತು. ಇನ್ನು ತಾನು ತಿಳಿದು
ಕೊಳ್ಳಬೇಕಾದ ವಿಷಯಗಳೆಲ್ಲವೂ ತಿಳಿದುಕೊಂಡದ್ದಾಯಿತೆಂದು ಹಿಂದಕ್ಕೆ ಹೊರಟು ತಾನು ಪ್ರವೇಶಮಾಡಿದ ಬಾಗಲಿನ ಮೂಲಕವೆ ಹೊರಕ್ಕೆ ಬಂದು ಅದನ್ನು ಮುಚ್ಚಿ
ಬಿಟ್ಟು ಅದರ ಮೇಲೆ ಹಲಗೆಯನ್ನಿಟ್ಟು ಮನೆಯ ಸುತ್ತಲೂ ಪರೀಕ್ಷಿಸುತ್ತಾ
ಬಂದನು. ಅಲ್ಲಲ್ಲಿ ಚಕ್ರದ ಗುರ್ತುಗಳನ್ನು ಕಂಡು ಬಂದಿದ್ದವರು ಗಾಡಿಯಲ್ಲಿ ಬಂದಿ
ದ್ದರೆಂದು ಯೋಚಿಸಿಕೊಂಡು ಇನ್ನೇನು ನೊಡಲಿಕ್ಕಿಲ್ಲವೆಂದು ತೀರ್ಮಾನಿಸಿ
ಕ್ಕೊಂಡು ಸೋಮಸುಂದರನ ಮನೆಗೆ ಹಿಂದಿರುಗಿ ಬಂದು ಊಟಮಾಡಿ ತನಗೆ ಸಿಕ್ಕಿದ
ಸುಳುವುಗಳನ್ನೆಲ್ಲಾ ಪರೀಕ್ಷಿಸುತ್ತಾ ಕುಳಿತಿದ್ದನು. ಅಷ್ಟು ಹೊತ್ತಿಗೆ ಸೋಮಸುಂದ ರನೂ ಅಲ್ಲಿಗೆ ಒಂದು ಸೇರಿದನು.
ಸೋಮಸುಂದರ ಸ್ವಾಮೀ ಇಲ್ಲಿಯ ವರಿಗೆ ಏನು ಪತ್ತೆಮಾಡಿರುಮರಿ? ನನ್ನ ಮಗನು
ಜೀವದಿಂದಿರುತ್ತಾನೋ ಇಲ್ಲವೋ?
೧೪--------------------------------------------------
14 ಕಾದಂಬರಿ ಸಂಗ್ರಹ
ಭಾಸ್ಕರ-ನಾನು ಈಗ ಏನೂ ಹೇಳಲಾರೆನು, ಆದರೆ ಇಷ್ಟು ಮಾತ್ರ ಹೇಳ
ಬಲ್ಲೆನು: ನಿಮ್ಮ ಪುತ್ರನು ಜೀವವಂತನಾಗಿಯೇ ಇರುತ್ತಾನೆ. ಅವನನ್ನು ತಿಳಿದವರೇ
ಯಾರೋ ಅವನನ್ನು ಬಲವಂತದಿಂದ ಎತ್ತಿಕೊಂಡು ಹೋಗಿರುತ್ತಾರೆ.
ಸೋಮಸುಂದರ-ಹಾಗೆ ಅವನನ್ನು ಎತ್ತಿಕೊಂಡು ಹೋಗಲು ಕಾರಣವೇ
ನು? ಧನದಾಶೆಯಿಂದ ಮಾಡಿದ್ದರೆ ಇಲ್ಲಿಯವರೆಗೂ ಏನನ್ನೂ ಕೇಳದೇ ಇರಲು ಕಾರ
ಣವೇನು?
ಭಾಸ್ಕರ:-ಅವರು ಧನಾಪೇಕ್ಷೆಯಿಂದ ಈ ಕೆಲಸವನ್ನು ಮಾಡಿರುವಹಾಗೆ
ಕಂಡುಬರುವುದಿಲ್ಲ. ಮಧುಸೂದನನ ವಿವಾಹವಿಷಯದಲ್ಲೇ ಏನೋ ಬಹಳ ಒಳಸಂಚು
ನಡೆದಿರುವಹಾಗೆ ನನಗೆ ಸಿಕ್ಕಿದ ಒಂದು ಕಾಗದದಿಂದ ತಿಳಿದುಬರುತ್ತದೆ. ಆದರೆ
ಈಗ ನಾವು ಯಾವುದನ್ನೂ ಸರಿಯಾಗಿ ತೀರ್ಮಾನಿಸುವುದಕ್ಕಾಗುವುದಿಲ್ಲ.
ಸೋಮಸುಂದರ:-ನನ್ನ ಪುತ್ರನಿಗೇನಾದರೂ ಅಪಾಯ ಸಂಭವಿಸಿರಬಹುದೋ
ಎಂದು ನನ್ನ ಮನಸ್ಸು ಕಳವಳ ಪಡುತ್ತಿದೆ. ನೀವು ಇದರ ಮೂಲವನ್ನೆಲ್ಲಾ ಬೇಗ
ಕಂಡು ಹಿಡಿದು ನನ್ನ ಪುತ್ರನನ್ನು ಬಿಡಿಸಿಕೊಟ್ಟರೆ ಬಹಳ ಒಳ್ಳೇದು. ಅದಕ್ಕಾಗಿ ಎಷ್ಟೇ
ಖರ್ಚಾಗಲಿ ನಾನು ಕೊಡಲು ಸಿದ್ಧನಾಗಿದ್ದೇನೆ.
ಭಾಸ್ಕರ:-ನಿಮ್ಮ ಪುತ್ರನಿಗೇನೂ ಅಪಾಯಸಂಭವಿಸಿರಲಾರದೆಂದು ನಾನು
ಯೋಚಿಸುತ್ತೇನೆ. ಇದೆಲ್ಲ ಇರಲಿ, ತಮಗೆ ಅವನು ಕಲ್ಕತ್ತಾ ನಗರದಲ್ಲಿದ್ದಾಗ ವಾಸ
ವಿದ್ದ ಮನೆಯ ವಿಳಾಸ ಗೊತ್ತಿದೆಯೋ? ಗೊತ್ತಿದ್ದರೆ ದಯವಿಟ್ಟು ತಿಳಿಸಿ.
ಸೋಮಸುಂದರ:--ತಿಳಿಯದೇ ಏನು, ಅವನು ತನ್ನ ಸ್ನೇಹಿತ ರೊಡನೆ ಬೋ
ಬಜಾರ್ ಬೀದಿಯಲ್ಲಿ ೩೦ನೇ ನಂಬರ್ ಮನೆಯಲ್ಲಿ ವಾಸ ಮಾಡುತ್ತಿದ್ದನು. ಅವನು
ಊಟವನ್ನು ಕಾಳಿ ಬೀದಿಯಲ್ಲಿರುವ ವೈದೀಕರಹೋಟೆಲ್ ಎಂಬುವುದರಲ್ಲಿ ಮಾಡು
ತಿದ್ದನು.
ಭಾಸ್ಕರ:-ನಾನು ಈ ದಿವಸವೇ ಕಲ್ಕತ್ತೆಗೆ ಹೊರಡುತ್ತೇನೆ. ನೀವು ನನ
ಗಾಗಿ ಮಾಡತಕ್ಕ ಒಂದು ಕೆಲಸವಿದೆ. ಅದೇನಂದರೆ ನಾನು ಈ ವಿಷಯದಲ್ಲಿ ಪ್ರವೇ
ಶಮಾಡಿರುವುದನ್ನು ಯಾರಸಂಗಡ ತಿಳಿಸಕೂಡದು. ನನಗೇನಾದರೂ ಕಾಗದಗಳನ್ನು
ಬರೆಯಬೇಕಾಗಿದ್ದರೆ ನನ್ನ ಸ್ನೇಹಿತನಾದ ಗೋವಿಂದನೆಂಬುವನ ಅಡ್ರೆಸ್ಸಿಗೆ ಬರೆಯಿರಿ.
ಇದೋ ಇದೇ ಅವನವಿಳಾಸ, ಈಗ ಸದ್ಯಕ್ಕೆ ಖರ್ಚಿಗಾಗಿ ಒಂದು ಸಾವಿರ ರೂಪಾಯಿ
ಗಳನ್ನು ಕೊಟ್ಟರೆ ನಾನು ಕಲ್ಕತ್ತೆಯಿಂದ ಒಂದುವೇಳೆ ಕಾಗದವನ್ನು ಬರೆದರೂ ಬರೆದೆ.
ಇಲ್ಲದಿದ್ದರೂ ಇಲ್ಲ. ಆದರೆ ತಾವು ಯಾವುದಕ್ಕೂ ಯೋಚಿಸಕೂಡದು.
೧೫----------------------------------------------
ಮಧುಸೂದನ. 15
ಸೋಮಸುಂದರನು ಭಾಸ್ಕರನ ಅಪ್ಪಣೆಯನ್ನು ಹೊಂದಿ ಒಳಕ್ಕೆ ಹೋಗಿ ಸಾವಿ
ರದ ಐನೂರು ರೂಪಾಯಿಗಳನ್ನು ಕೊಟ್ಟು ಕಳುಹಿಸಿದನು.
ಭಾಸ್ಕರನು ಭೋಜನವಾದಮೇಲೆ ತನ್ನ ಆಕಾರವನ್ನು ಬದಲಾಯಿಸಲು ಕೂತ
ನು, ಯಾತಕ್ಕಂದರೆ ಕಲ್ಕತ್ತದಲ್ಲಿ ಎದುರಿಗೆ ಅನೇಕರು ಇವನನ್ನು ನೋಡಿಯೂ ಮತ್ತು
ಫೋಟೋಗಳ ಮೂಲಕ ನೋಡಿಯೂ ಬಲ್ಲರು. ಈಗ ನಿಜರೂಪದಿಂದ ಹೋದರೆ ಸಂಶ
ಯಾಸ್ಪದವಾಗಬಹುದು-ಆದ್ದರಿಂದ ಕೃತ್ರಿಮವಾದ ಬಿಳೀದಾಡೀ ಮೀಶೆಗಳನ್ನೂ
ಕೂದಲನ್ನೂ ಕಟ್ಟಿ ಕೊಂಡು ಶರಿರಕ್ಕೆಲ್ಲಾ ಯಾವುದೋ ಒಂದು ವಿಧವಾದ ದ್ರಾವಕ
ವನ್ನು ಬಳಿದುಕೊಳ್ಳಲು ದೇಹವೆಲ್ಲಾ ಮುದುಕರ ದೇಹದಂತೆ ಸುಕ್ಕು ಬಿದ್ದಿರುವ
ಹಾಗೆ ಕಾಣಬಂದಿತು. ಹೀಗೆ ಕಂಡುಹಿಡಿಯಸಾಧ್ಯವಾದ ಮುದುಕವೇಷವನ್ನು
ಧರಿಸಿ ತನ್ನ ಸಾಮಗ್ರಿಗಳನ್ನೆಲ್ಲಾ ತೆಗೆಸಿಕೊಂಡು ಸೋಮಸುಂದರನ ಗಾಡಿಯಲ್ಲಿ
ಸಮೀಪದ ರೈಲ್ವೇ ಸ್ಟೇಷನನ್ನು ತಲಪಿ ರೈಲುಗಾಡಿಯ ಮುಖಾಂತರ ಅದೇ ದಿವಸ
ಕಲ್ಕತ್ತಾ ಮಹಾನಗರವನ್ನು ತಲಪಿ ತನ್ನ ಸ್ನೇಹಿತನ ದ ಗೋವಿಂದನ ಮನೆಯನ್ನು
ಸೇರಿದನು.
-----
ಐ ದ ನೆ ಯ ಅ ಧ್ಯಾಯ,
---
(ಸೋಮಾರಿಗಳ ಗುಹೆ.)
ಕಲ್ಕತ್ತಾ ನಗರವು ಇಂಗ್ಲೀಷರು ಇಂಡಿಯಾ ದೇಶಕ್ಕೆ ಬಂದು ನೆಲಸಿದಾಗಲಿಂ
ದ ದಿನೇದಿನೇ ವೃದ್ಧಿಯನ್ನು ಹೊಂದಿ ಈಗ ಇಂಡಿಯಾದಲ್ಲೆಲ್ಲಾ ಜನಸಂಖ್ಯೆಯಲ್ಲಿ
ಎರಡನೆಯದೆನಿಸಿಕೊಂಡಿರುವದು ಸಕಲರಿಗೂ ತಿಳಿದ ವಿಷಯವಾಗಿದೆ. ಪುರಾತನಕಾಲ
ದಿಂದಲೂ ಈ ನಗರವು ಸಂಪತ್ತುಳ್ಳದ್ದಾಗಿರುವುದು. ಇಂಗ್ಲೀಷರು ಇಲ್ಲಿ ನೆಲಸಿದಮೇಲೆ
ಇದರ ಪ್ರಾಮುಖ್ಯತೆಯು ಮತ್ತೂ ಹೆಚ್ಚಿತು. ಸುತ್ತುಮುತ್ತಲೂ ಇರುವ ರಾಜ್ಯಗಳು
ಗಂಗಾ ಮತ್ತು ಹೂಗ್ಲಿ ಈ ನದಿಗಳ ಸಹಾಯದಿಂದ ಇಂಡಿಯದಲ್ಲೆಲ್ಲಾ ಅತ್ಯಂತ
ಫಲವತ್ತಾದ ಪ್ರದೇಶಗಳಾಗಿ, ಅಲ್ಲಿನ ಜನಗಳು ಅತ್ಯಂತ ಧನಿಕರಾಗಲು ಕಾರಣವಾ
ದವು. ವ್ಯಾಪಾರಾದಿಗಳಿಗೆ ಮಧ್ಯಭಾಗವಾಗಿಯೂ, ಇಂಡಿಯಾ ದೇಶಕ್ಕೇ ರಾಜಧಾನಿ
ಯಾಗಿಯೂ ಇದ್ದದ್ದರಿಂದ ಕಲ್ಕತ್ತಾ ಪಟ್ಟಣವು ಜನಸಂಖ್ಯೆಯಲ್ಲಿಯೂ ಐಶ್ವರದಲ್ಲಿ
ಯ ಬಹಳ ಮುಂದಕ್ಕೆ ಬಂದಿತು. ಇಲ್ಲಿನ ಜನಗಳು ಅಧಿಕ ಕಷ್ಟವಿಲ್ಲದೇ ತಮ್ಮ
ಆಹಾರ ಸಾಮಗ್ರಿಗಳನ್ನು ಹೊಂದುವರಾದ್ದರಿಂದ ಜೀವನಕ್ಕೆ ಕಷ್ಟ ಪಡದೆ ತಮ್ಮ
೧೬-------------------------------------
16 ಕಾದಂಬರೀ ಸಂಗ್ರಹ
ಕಾಲವನ್ನೆಲ್ಲಾ ವಿದ್ಯೆಯಲ್ಲಿಯ, ದೇಶಕ್ಕೆ ಒಳ್ಳೆಯದಾಗುವ ಕಾರ್ಯಗಳಲ್ಲಿಯೂ
ಮತ್ತೆ ಕೆಲವರು ಸೋಮಾರಿಗಳಾಗಿ ಕಳ್ಳತನ, ಕುಡಿತ, ಅರಾಜಕತ್ವ ಇವುಗಳಲ್ಲೂ ಕಳೆ
ಯುತ್ತಾ ಬಂದರು. ಇಲ್ಲಿ ಎಲ್ಲೆಲ್ಲಿ ನೋಡಿದರೂ ಸಂಘಗಳೂ, ಪ್ರತಿ ದಿವಸವೂ
ಉಪನ್ಯಾಸಗಳೂ ತುಂಬಿಹೋಗಿರುವುವು. ಅತ್ಯಂತ ವಿದ್ಯಾವಂತರಾದ ಇಲ್ಲಿಯ ಜನ
ಗಳು ಇಂಡಿಯಾ ದೇಶಕ್ಕೆ ಬಹಳ ಒಳ್ಳೆಯ ಹೆಸರನ್ನು ತಂದಿರುವರು. ಇಲ್ಲೇ ಸಂಘ
ಸಂಸ್ಕರಣದಕ್ಷರೂ, ದೇಶಸುಧಾರಕರೂ ಮೊಟ್ಟಮೊದಲು ತಲೆಯನ್ನೆತ್ತಿ ಜಯವನ್ನು
ಹೊಂದುತ್ತಿದಾರೆ. ಇಲ್ಲೇ ಕ್ರೂರವಾದ ಸಹಗಮನ ಪದ್ದತಿಯನ್ನು ನಿಲ್ಲಿಸಲು ಮೊಟ್ಟ
ಮೊದಲಿನ ಪ್ರಯತ್ನ ನಡೆಯಿತು.
ಇಂತಹ ಮಹಾ ಪಟ್ಟಣದಲ್ಲೂ ಕೆಲವು ಮಂದಿ ದುಷ್ಟರು ಅನೇಕ ಪಂಗಡ
ಗಳನ್ನು ಮಾಡಿಕೊಂಡಿದ್ದರು. ಪ್ರತಿಯೊಂದು ಪಂಗಡವೂ ಇಂಗ್ಲೀಷ್ ಅಕ್ಷರಗಳನ್ನು
ತಮ್ಮ ಪ್ರತ್ಯೇಕ ಭಾಗಗಳಿಗೊಂದೊಂದಾಗಿ ಒಂದೊಂದು ವಿಧವಾದ ಗುಂಡಿಗಳ
ಮೇಲೆ ಕೆತ್ತಿಸಿ ತಮ್ಮ ಉಡುಪಿನ ಯಾವದಾದರೂ ಒಂದು ಭಾಗದಲ್ಲಿಟ್ಟುಕೊಂಡಿರು
ತ್ತಿದ್ದರು. ಇವರುಗಳ ಕೆಲಸವು ಕದಿಯುವುದು ರಾಜದ್ರೋಪಕರವಾದ ಬರವಣಿಗೆಗೆ
ಳನ್ನು ಬರೆಯುವುದು ; ಹೊರಗೆ ಮಹಾ ಸತ್ಪುರುಷರಂತೆಯ, ಸಾತ್ವಿಕ ಶಿಖಾಮಣಿ
ಗಳಂತೆಯೂ ಕಾಣಿಸಿಕೊಳ್ಳುತ್ತಲೂ, ಸುಗುಣಿಗಳೂ ದೇಶಹಿತವನ್ನೇ ವ್ರತವಾಗುಳ್ಳ
ವರೂ ಆದ ಸಂಘಸಂಸ್ಕರಣಕರ್ತರ ಸಭೆಗೆ ಹೋಗಿ ಅಲ್ಲಿ ಮನಸ್ಸಿನಲ್ಲಿ ಏನಿಲ್ಲದಿದ್ದರೂ
ಮಹಾ ತಿಳಿದವರಂತೆ ತಲೆಯಾಡಿಸುತ್ತಲೂ, ಶಾಭಾಸ್, ವೆರಿಗುಡ್ (very good)
ಇದಕ್ಕೆ ವೈದೀಕ ಮೂಢರುಗಳೇನು ಹೇಳುವರು (what Can the orthodox
people say to this) ಎಂದು ಕೂಗುತ್ತಲೂ, ಸಭೆಯು ಮುಗಿದಮೇಲೆ ಎಲ್ಲರಿ
ಗಿಂತಲೂ ಗಟ್ಟಿಯಾಗಿ ಕೈ ಚಪ್ಪಾಳೆ ತಟ್ಟಿ, ವಯಸ್ಕರಾದ ಕನ್ಯೆಗಳನ್ನು ಲಗ್ನ ಮಾಡಿ
ಕೊಳ್ಳುವುದಕ್ಕೆ ಒಪ್ಪುವವರು ತಮ್ಮ ನಾಮಧೇಯಗಳನ್ನು ಬರೆಯಿರೆಂದು ಹೇಳಿದರೆ
ತಾವು ಮೊದಲೆಂದು ನುಗ್ಗಿ ತಮ್ಮ ಹೆಸರುಗಳನ್ನು ಬರೆಯುತ್ತಲೂ, ಸಂಘಕೂಟಗ
ಳೆಂದು ಹೇಳಿ (Social gatherings) ತಮ್ಮಂತಹ ನೀಚರನ್ನೇ ಸೇರಿಸಿಕೊಂಡು
ದ್ರಾಕ್ಷಾರಸ ಮುಂತಾದವುಗಳನ್ನು ಕುಡಿದು ಮನಸ್ಸಿಗೆ ಬಂದಹಾಗೆ ಕುಣಿಯುತ್ತಲೂ
ಇರುತ್ತಿದ್ದರು. ಇವರ ವಿಷಯವನ್ನೇ ಬರೆಯುತ್ತಾ ಹೋದರೆ ಎಷ್ಟು ಪುಸ್ತಕಗಳನ್ನು
ಬರೆದರೂ ಮುಗಿಯುವುದಿಲ್ಲವು.
ಈ ದಿವಸ ಮೇಲೆ ಹೇಳಿದಂಥಾ ಪಂಗಡಗಳಲ್ಲೊಂದಾದ ಎಂ(M) ಕೂಟದವರ
ವಾರ್ಷಿಕ ಕೂಟವು. ಆದ್ದರಿಂದ ಇವರು ತಮ್ಮ ಕಾಳೀ ಬೀದಿಯಲ್ಲಿರುವ ತಮ್ಮ
೧೭----------------------------------------------
17 ಮಧುಸೂದನ
ಸ್ನೇಹಿತರನ್ನೆಲ್ಲಾ ಮನೆಗೆ ಸಂಘಕೂಟಕ್ಕಾಗಿ (Social gathering) ಕರೆದಿರುವರು.
ಮಧ್ಯಾಹ್ನ ನಾಲ್ಕು ಗಂಟೆಯ ಹೊತ್ತಿಗೆ ಆ ಮನೆಯು ಅನೇಕ ಐರೋಪ್ಯರ ಟೊಪ್ಪಿಗ
ಳನ್ನು ಧರಿಸಿರತಕ್ಕಂಥಾ ತರುಣರಿಂದ ತುಂಬಿಹೋಯಿತು. ಆ ತರುಣರು ಆ ಟೊಪ್ಪಿಗ
ಳನ್ನು ಧರಿಸಿದ್ದರೂ ಅವರ ಮುಖವು ವಿಕಾರವಾಗಿ ಕಪ್ಪು ಬಣ್ಣದಿಂದಿತ್ತೇ ವಿನಹಾ
ಅವರು ಬೇರೆ ಐರೋಪ್ಯರಂತೆ ಕಂಡುಬರುತ್ತಿರಲಿಲ್ಲ. ಏನೂ ಅರಿಯದ ಹೊಸಬನೊ
ಬ್ಬನು ಆ ದಿನ ಅಲ್ಲಿಗೆ ಪ್ರವೇಶಮಾಡಿದ್ದರೆ ಅಲ್ಲಿ ನೆರದಿದ್ದ ಜನಗಳೆಲ್ಲರೂ ಕ್ರಿಸ್ತಮ
ತಾವಲಂಬಿಗಳಾದವರೆಂದು ಹೇಳುತ್ತಿದ್ದನು. ಏಕಂದರೆ ಎಲ್ಲರೂ ತಲೆಯ ಕೂದಲನ್ನು
ವಿಧವಿಧವಾಗಿ ಕತ್ತರಿಸಿಕೊಂಡು, ಟೊಪ್ಪಿಗಳನ್ನು ಹಾಕಿಕೊಂಡು, ಬಾಯಲ್ಲಿ ಚುಟ್ಟಾ
ಗಳನ್ನು ಕಚ್ಚಿಕೊಂಡು ಕಚ್ಚಿ ಕಚ್ಚಿ ಮಾತನಾಡುತಿದ್ದರು. ಒಬ್ಬನ ಹಣೆಯಲ್ಲಾದರೂ
ಮತಸಂಬಂಧವಾದ ಗುರುತುಗಳೇ ಇರಲಿಲ್ಲ. ಕ್ರಿಸ್ತಪಾದ್ರಿಗಳು ಹಣವನ್ನೂ, ತಮ್ಮ
ಸಾಮರ್ಥ್ಯವನ್ನೂ ಮತ್ತು ತಮ್ಮ ಜೀವಮಾನವನ್ನೆಲ್ಲಾ ಖರ್ಚು ಮಾಡಿದರೂ ಈಚಿಗೆ
ಕ್ರಿಸ್ತಮತವನ್ನವಲಂಬಿಸತಕ್ಕವರು ಎಲ್ಲೋ ಸಾವಿರಕ್ಕೊಬ್ಬನು. ಆದರೆ ಮೇಲೆ ಕಂಡ
ಹಿಂದುಗಳೂ ಅಲ್ಲದ, ಕ್ರಿಸ್ತರೂ ಅಲ್ಲದ ಜನಗಳ ಹಾಗೆ ಎಲ್ಲರೂ ಆಗುತ್ತಾ ಬಂದರೆ
ಪಾದ್ರಿಗಳು ಕಷ್ಟ ಪಡದೇನೇ ಸ್ವಲ್ಪ ಕಾಲದಲ್ಲೇ ಅನೇಕರು ಕ್ರಿಸ್ತಮತವನ್ನ ವಲಂಬಿಸು
ವುದನ್ನು ನೋಡಿ ಆಶ್ಚರ್ಯ ಪಡುವ ಕಾಲವುಬಂದೇ ಬರುವುದು. ಈ ವಿಷಯವು ಈಗ
ಎಲ್ಲೆಲ್ಲಿಯೂ ನಡೆಯುತ್ತಿರುವುದನ್ನು ಘಂಟಾಘೋಷವಾಗಿ ಹೇಳಬಹುದು. ಸಂಘ
ಸಂಸ್ಕರಣ ಧುರೀಣರು ಇತರ ವಿಷಯಗಳಿಗೆ ಗಮನ ಕೊಡುವುದನ್ನು ನಿಲ್ಲಿಸಿ ಅನ್ಯಾ
ಯವಾಗಿ ಹಾಳಾಗುತ್ತಿರುವ ತಮ್ಮ ತರುಣರನ್ನು ಸರಿಪಡಿಸುವುದಕ್ಕೆ ಪ್ರಯತ್ನ ಪಟ್ಟರೆ
ದೇಶಕ್ಕೆ ಎಷ್ಟು ದೊಡ್ಡ ಸಹಾಯಮಾಡಿದಂತಾಗುವುದು ?
ಮನೆಯ ಬಾಗಿಲಿನಲ್ಲಿ ಇಬ್ಬರು ತರುಣರು ನಿಂತುಕೊಂಡು ಬಂದಂಥ ಅತಿಥಿಗ
ಇನ್ನೆಲ್ಲಾ ಒಳಕ್ಕೆ ಬಿಡುತ್ತಿದ್ದರು. ಪ್ರತಿಯೊಬ್ಬ ಅತಿಥಿಯೂ ತನ್ನ ಸಂಗಡದ ಗುಂಡಿ
ಯನ್ನು ತೋರಿಸುತ್ತಾ ಒಳಕ್ಕೆ ಹೋಗುತ್ತಿದ್ದನು. ಸುಮಾರು ಐದೂವರೆ ಗಂಟೆಯ
ಹೊತ್ತಿಗೆ ಬಾಗಿಲು ಹಾಕಲ್ಪಟ್ಟಿತು. ಈ ವಿಷಯಗಳೆಲ್ಲಾ ನಡೆದು ಹದಿನೈದು ವರ್ಷಗ
ಳಾದ್ದರಿಂದ ಆಗ ಪೊಲೀಸಿನವರ ಕಾಟವೇನೂ ಇರಲಿಲ್ಲ. ಆಗ ಯಾರು ಬೇಕಾದರೂ
ಯಾವ ಬಗೆಯ ಮೀಟಿಂಗುಗಳನ್ನಾದರೂ ಹೂಡಬಹುದಾಗಿತ್ತು. ಈಗಿನ ಕಾಲವಾಗಿ
ದ್ದರೆ ತಕ್ಷಣವೇ ದಂಡಪಾಣಿಯಾದ ಪೊಲೀಸಿನವನು ಬಂದು ಗುಂಪನ್ನು ಚದರಿಸಿ
ಮುಖ್ಯಸ್ಥರನ್ನು ಅನುಮಾನಾಸ್ಪದರೆಂದು ಸೆರೆ ಹಿಡಿಯುತ್ತಿದ್ದನು. ಮನೆಯೊಳಗೆಲ್ಲಾ
ಅನೇಕ ಮೇಜುಗಳೂ, ವೇತ್ರಾಸನಗಳೂ ಇಡಲ್ಪಟ್ಟಿದ್ದವು. ಅಲ್ಲಲ್ಲಿ ಗುಂಡಾದ
೧೮----------------------------------------
18 ಕಾದಂಬರೀ ಸಂಗ್ರಹ
ಮೇಜು (Round Tables) ಗಳ ಮೇಲೆ ಬ್ರಾಂದಿ, ವೈನು ಮುಂತಾದವುಗಳೂ,
ಗಾಜಿನ ಬಟ್ಟಳುಗಳೂ ಇಡಲ್ಪಟ್ಟಿದ್ದವು. ಮನೆಯ ತುಂಬ ಹೊಗೆಯ ಬತ್ತಿಯ
ಧೂಮ್ರವು ತುಂಬಿಕೊಂಡಿದ್ದಿತು. ಒಂದೊಂದು ಕಡೆಯಲ್ಲಿ ಐದಾರು ಜನಗಳಾಗಿ
ಗುಂಪು ಕೂಡಿಕೊಂಡು ಇಸ್ಪೀಟುಗಳನ್ನಾಡುತ್ತಲೂ, ಇಲ್ಲವೆ ನಾನಾವಿಧವಾದ ಜೂಜಾ
ಟಗಳನ್ನಾಡುತ್ತಲೂ ಇದ್ದರು. ಜೂಜಾಡುತ್ತಿದ್ದ ಜನಗಳ ಕೂಗೂ, ಅವರು ಎಸೆದಾ
ಡುತ್ತಿದ್ದ ಹಣಗಳ ಧಣ್ ಧಣ್ ನಾದವೂ, ಮದ್ಯಪಾಯಿಗಳ ( ಎಲ್ಲಿ ಆ ಓಲ್ಡು
ವೈನ್ (Old Wine) ಕೊಡು, ಈ ಬಟ್ಟಲಿಗೆ ಇನ್ನಿಷ್ಟುಹಾಕು” ಎಂಬ ಆರ್ಭಟವೂ,
ಮತ್ತೆ ಕೆಲವರ, ವೈದೀಕರನ್ನು ಹೇಳನಮಾಡತಕ್ಕಂಥಾ ನಿಂದನಾ ವಾಕ್ಯಗಳೂ
ಕೇಳಿಬಂದು ಆ ಮನೆಯ ಮದ್ಯಪಾಯಿಗಳೂ ಮತ್ತು ಸೋಮಾರಿಗಳೂ ಆದವರ
ದೊಡ್ಡಗುಹೆಯಂತೆ ಕಂಡುಬರುತ್ತಿತ್ತು. ಇವರನ್ನೆಲ್ಲಾ ಬಿಟ್ಟು ಒಬ್ಬ ಯೌವನಸ್ಥನು
ಸ್ವಲ್ಪ ದೂರದಲ್ಲೇ ಇದ್ದ ಒಂದು ಆಸನದ ಮೇಲೆ ಕುಳಿತುಕೊಂಡು ತಲೆಯನ್ನು ಬಗ್ಗಿ
ಸಿಕೊಂಡು ಏನೇನೋ ಯೋಚಿಸುತ್ತಿದ್ದನು. ಅವನು ಸುಮಾರು ಮೂವತ್ತೈದುವರ್ಷ
ವಯಸ್ಸಿನಂತೆ ಕಾಣಬಂದನು. ಆಗ್ಗೆ ಯಾರಾದರೂ ಬಂದು ಕರೆದರೆ ಆಮೇಲೆ
ಬರುವೆನೆಂದು ಹೇಳುತ್ತಿದ್ದನು. ಅವನು ಯಾರೆಂಬುದಾಗಲೀ, ಯಾಕೆ ಹಾಗೆ ಕುಳಿತಿರು
ತಾನೆಂಬುದಾಗಲೀ ಯಾರಿಗೂ ತಿಳಿಯದು.
ಸುಮಾರು ರಾತ್ರಿ ಏಳುವರೆಗಂಟೆಯ ಹೊತ್ತಿಗೆ ಆಟಗಳೆಲ್ಲವೂ ಮುಗಿದವು.
ಅನೇಕರು ತಮ್ಮ ಹಣವೆಲ್ಲಾ ಹೋಯಿತೆಂದು ಗೊಣಗುಟ್ಟಿಕೊಳ್ಳುತ್ತಿದ್ದರು. ಮದ್ಯವೂ
ಮುಗಿದುಹೋಗಿದ್ದಿತು. ಹೊಸಮದ್ಯವು ತರಲ್ಪಟ್ಟಿತು. ಎಲ್ಲರೂ ಮದ್ಯವನ್ನು ಪಾನ
ಮಾಡಿದರು. ವ್ಯಸನಾಕ್ರಾಂತನಾದ ಮನುಷ್ಯನೂ ಅಲ್ಲಿದ್ದವನೊಬ್ಬನ ಬಲವಂತ
ದಿಂದ ಎರಡು ಮೂರು ಬಟ್ಟಲು ದ್ರಾಕ್ಷಾರಸವನ್ನು ಕುಡಿದನು. ಕ್ಷಣಮಾತ್ರ
ದಲ್ಲೇ ಗುಂಡಾದ ಮೇಜುಗಳೆಲ್ಲಾ ತೆಗೆಯಲ್ಪಟ್ಟು ಕುರ್ಚಿಗಳು ಸಾಲುಸಾಲಾಗಿ
ಇಡಲ್ಪಟ್ಟವು. ಒಂದುಭಾಗದಲ್ಲಿ ಒಂದು ಎತ್ತರವಾದಸ್ಥಳದಲ್ಲಿ ಮೂರುಕುರ್ಚಿಗಳಿ
ದ್ದವು. ಎಲ್ಲರೂ ಕುರ್ಚಿಗಳ ಮೇಲೆ ಕುಳಿತುಕೊಂಡರು. ಆಗ ಒಬ್ಬ ತರುಣನೆದ್ದು
ಈ ದಿವಸದ ಸಂತೋಷ ಕೂಟಕ್ಕೆ ನಮ್ಮ ಸಹೋದರರಾದ ಬಿ. (B) ಕೂಟದ ಮುಖ್ಯ
ಸ್ಥರನ್ನು ಅಧಿಪತಿಗಳಾಗಿರಬೇಕೆಂದು ನಾನು ಕೋರುತ್ತೇನೆ ಎನಲು ಎಲ್ಲರೂ ಹಾಗೇ
ಆಗಬೇಕೆಂದು ಒಪ್ಪಿದರು. ಆಗ ಸುಮಾರು ಮುವ್ವತ್ತು ವಯಸ್ಸಿನ ಮನುಷ್ಯನೊಬ್ಬನು
ಎದ್ದು ಹೋಗಿ ಎತ್ತರವಾದ ಸ್ಥಳದಲ್ಲಿ ಕುಳಿತನು. ಕೂಡಲೇ ಈ ಯಂ (M) ಕೂಟದ
ಮುಖ್ಯಸ್ಥನು ವ್ಯಸನಾಕ್ರಾಂತನಾಗಿ ಕುಳಿತಿದ್ದ ಮನುಷ್ಯನನ್ನೂ ಸಂಗಡ ಕರೆದು
೧೯-----------------------------------------------
19 ಮಧುಸೂದನ
ಕೊಂಡು ಉಳಿದಿದ್ದ ಕುರ್ಚಿಗಳಲ್ಲಿ ಅವರನ್ನೂ ಕೂರಿಸಿ ತಾನೂ ಕುಳಿತನು. ಅಗ್ರಾಸ
ನಾಧಿಪತಿಯು 'ಎಂ' ಕೂಟದ ಮುಖ್ಯಸ್ಪನನ್ನು ಕಳೆದ ವರ್ಷದ ರಿಪೋರ್ಟನ್ನು ಓದು
ವಹಾಗೆ ಕೇಳಿದನು. ಅವನು ತನ್ನಾಸನದಿಂದ ಎದ್ದು ನಿಂತು ಈ ರೀತಿಯಾಗಿ ಹೇಳತೊ
ಡಗಿದನು.
ಸಹೋದರರೇ!
ನಮ್ಮ ಸಂಘವು ಸ್ಥಾಪಿಸಲ್ಪಟ್ಟು ಇಂದಿಗೆ ಐದುವರ್ಷಗಳಾದುವು. ಈ ಐದು
ವರ್ಷಗಳಲ್ಲಿ ನಾವು ಎಷ್ಟೋ ಕೆಲಸವನ್ನು ಮಾಡಿರುವೆವು. ಮುಖ್ಯವಾಗಿ ಹೋದ
ವರ್ಷದಲ್ಲಿ ಅನೇಕ ಕೆಲಸಗಳನ್ನು ಮಾಡಿರುವೆವು. ಅವುಗಳಲ್ಲಿ ಮುಖ್ಯವಾದವುಗಳಾ
ವುವೆಂದರೆ:-ನಮ್ಮ ಸಂಘದಲ್ಲಿ ನಾಲ್ವರು, ವಿಧವೆಗಳನ್ನು ವಿವಾಹಮಾಡಿಕೊಂಡರು.
ದೇಶೋನ್ನತಿಗಾಗಿ ಯಾವ ಸಹಾಯವನ್ನೂ ಮಾಡದೇ ಇದ್ದ ಶುದ್ಧಲೋಭಿಯಾದ
ಚರ್ಮದ ವ್ಯಾಪಾರಿಯೊಬ್ಬನನ್ನು ಸೂರೆಗೊಂಡೆವು. ನಮ್ಮವರಿಗೆ ರಿವಾಲ್ವರುಗಳು
ಸಾಲದೇ ಇದ್ದದ್ದರಿಂದ ಒಂದು ಕಂಪನಿಯನ್ನು ಲೂಟಿಮಾಡಿ ಐವತ್ತು ರಿವಾಲ್ವರುಗ
ಇನ್ನೂ ಅನೇಕ ತೋಟಾಗಳನ್ನೂ ಕದ್ದು ತಂದೆವು. ನಮ್ಮ ಮೆಂಬರ್ಗಳು ಇಪ್ಪತ್ತರಿಂದ
ಇಪ್ಪತ್ತೈದಕ್ಕೇರಲ್ಪಟ್ಟರು. ಖರು ಕಳೆದ. ಈಗ ೧ಂಸಾವಿರ ರೂಪಾಯಿ ಉಳಿದಿರುವುದು,
ಇದೋ ನನ್ನ ಪಕ್ಕದಲ್ಲಿ ಕುಳಿತಿರುವವರೊಬ್ಬರು ನಮ್ಮ ಸಂಘಕ್ಕೆ ಹೊಸಬರು. ಇವರು
ಮಹದೈಶ್ವರ್ಯ ಸಂಪನ್ನರು. ಇವರು ಸ್ವಲ್ಪ ಕಾಲದಲ್ಲೇ ನನ್ನ ಮಗಳನ್ನು ವಿವಾಹಮಾಡಿ
ಕೊಳ್ಳುವುದಾಗಿ ಒಪ್ಪಿರುತ್ತಾರೆ. ಅವರ ಈಗಿರುವ ಆಕಾರವು ನಿಜವಾದದ್ದಲ್ಲ.
ಇನ್ನೂ ಸ್ವಲ್ಪ ಕಾಲ ಹೀಗಿದ್ದು ಆ ಮೇಲೆ ತಮ್ಮ ನಿಜರೂಪವನ್ನು ಧರಿಸುವರು.
ಮುಂದೆ ನಮ್ಮ ಸಂಘವನ್ನು ಕಾಪಾಡುವುದಾಗಿ ವಾಗ್ದಾನಮಾಡಿರುತ್ತಾರೆ. ಅವರು
ಯಾರೆಂಬುದಾಗಲೀ, ಅವರ ಹೆಸರೇನೆಂಬುದಾಗಲೀ ಇನ್ನೂ ಸ್ವಲ್ಪಕಾಲ ಯಾರಿಗೂ
ತಿಳಿಯದೇ ಇರುವುದೇ ಒಳ್ಳೇದು. ಈಗ ನಿಮ್ಮನ್ನು ನಾನು ಒಂದು ಪ್ರಶ್ನೆಯನ್ನು
ಕೇಳಬೇಕೆಂದಿರುತ್ತೇನೆ. ಅದಕ್ಕೆ ದಯವಿಟ್ಟು ಸರಿಯಾದ ಉತ್ತರವನ್ನು ಕೊಡಿರಿ.
ಒಂದು ಮದುವೆಯು ಮಾಂಗಲ್ಯ ಸೂತ್ರಧಾರಣಕ್ಕೆ ಮುಂಚೆ ನಿಂತು ಹೋದರೆ ಆಗ
ಆ ಹುಡುಗಿಯು ವಿವಾಹಿತಳೇ, ಅಥವಾ, ಅವಿವಾಹಿತಳೇ? ಒಂದುವೇಳೆ ಹಾಗೆ ವಿವಾಹ
ಭಂಗವಾದ ಮೇಲೆ ಆ ಕನೈಯು ಋತುವಾದರೆ ಏನುಮಾಡುವುದು ?
ಆಗ ಅನೇಕರು ಎದ್ದು ನಿಂತು ಹಾಗೆ ನಿಂತುಹೋದ ಮದುವೆಯು ಶಾಸ್ತ್ರಗಳಲ್ಲಿ
ವಿವಸಿರುವ ಹಾಗೂ ಮಾಂಗಲ್ಯಸೂತ್ರ ಕಟ್ಟದೇ ಇದ್ದದ್ದರಿಂದ ವಧೂವರರಿಗೇನೂ
ಸಂಬಂಧವೇ ಇಲ್ಲವೆಂತಲೂ ಹಾಗೆ ಕನೈಯ ಋತುವಾದರೆ ಅವಳು ಹಿಂದುಗಳ
೨೦--------------------------------------
೨೦ ಕಾದಂಬರೀ ಸಂಗ್ರಹ
ಗೊಡ್ಡು ಶಾಸ್ತ್ರದಂತೆ ಬಹಿಷ್ಕಾರಕ್ಕೆ ಯೋಗ್ಯಳೆಂದೂ ಆದರೆ ತಾವೆಲ್ಲರೂ ಔನ್ನತ್ಯ
ವನ್ನು (Reform) ಪಡೆದವರಾದ್ದರಿಂದ ಹುಡುಗಿಯು ಋತುವಾದರೂ
ಲಕ್ಷ್ಯಮಾಡು ವುದಿಲ್ಲವೆಂತಲೂ ತಿಳಿಸಿದರು.
ಆಗ ಮುಖ್ಯಸ್ಥನು "ಸರಿ, ನೀವು ಹೇಳಿದ ರೀತಿಯೇ ನಡೆದುಕೊಳ್ಳೋಣ ''
ಎಂದು ತನ್ನ ಬಳಿ ಕುಳಿತಿದ್ದವನ ಮುಖವನ್ನು ನೋಡಿಬಿಟ್ಟು ಪುನಹಾ ಹೇಳತೊಡಗಿ
ದನು. ಸಹೋದರರೇ, ನಾನು ಹೇಳಿದ ರೀತಿ ಒಂದು ವಿವಾಹವು ನಿಂತುಹೋಯಿತು.
ವರನ ತಂದೆಯೂ ವಧುವಿನ ತಂದೆಯ ವಿವಾಹವು ಸಂಪೂರ್ಣವಾಗಿ ನೆರವೇರಿದ
ಹಾಗೆಯೇ ತೀರ್ಮಾನಿಸಿರುತ್ತಾರೆ. ನಿಮ್ಮ ಅಭಿಪ್ರಾಯವನ್ನು ವರನ ತಂದೆಗೆ ತಿಳಿಯ
ಪಡಿಸಬೇಕು. ನನ್ನ ಪುತ್ರಿಯು ಋತುಮತಿಯಾದವಳು. ಅವಳನ್ನು ಇವರಿಗೆ ಕೊಡು
ತ್ತೇನೆ. ನೀವೆಲ್ಲರೂ ಬಂದು ಈ ಕೂಟವನ್ನು ಸಾಂಗವಾಗಿ ನೆರವೇರುವ ಹಾಗೆ ಮಾಡಿ
ದಕ್ಕೆ ನಿಮ್ಮನ್ನೆಲ್ಲಾ ವಂದಿಸುತ್ತೇನೆ. ಈ ಹೊಸ ಮೆಂಬರಿನ ವಿಷಯವಾಗಿ ಜಯ
ವನ್ನು ಮಾಡಿ ಅವನ ಆರೋಗ್ಯ ಲಾಭಕ್ಕಾಗಿ ಎಲ್ಲರೂ ಮದ್ಯವನ್ನು ಕುಡಿಯೋಣ
ಕ್ಷಣಮಾತ್ರದಲ್ಲೇ ಎಲ್ಲರ ಕೈಗೂ ಮದ್ಯ ತುಂಬಿದ ಬಟ್ಟಲುಗಳು ಬಂದವು.
ಎಲ್ಲರೂ ಜಯನಾದವನ್ನು ಮಾಡುತ್ತಾ ಮದ್ಯವನ್ನು ಪಾನಮಾಡಿದರು, ಅಗ್ರಾಸನಾಧಿ
ಪತಿಯು ಎದ್ದು ಎಲ್ಲರಿಗೂ ಆರೋಗ್ಯವೂ ಲಾಭವೂ ಉಂಟಾಗಲೆಂದೂ ಎಲ್ಲರೂ
ಜಾಗರೂಕರಾಗಿರಬೇಕೆಂದೂ ಹೇಳಿ ಸಭೆಯನ್ನು ಮುಗಿಸಿದನು. ಎಲ್ಲರೂ ಕೈ ಚಪ್ಪಾಳೆ
ತಟ್ಟುತ್ತ ವ್ಯಸನಾಕ್ರಾಂತನಾದ ಹೊಸ ಮೆಂಬರನ ಕೈ ಹಿಡಿದು ಆಡಿಸುತ್ತಾ ಎಂ (M)
ಸಂಘದ ಅಧಿಕಾರಿಯಿಂದ ಅಪ್ಪಣೆಯನ್ನು ಪಡೆದು ಒಬ್ಬೊಬ್ಬರಾಗಿ ಹೊರಕ್ಕೆ ಹೊರಟು
ಬಂದರು. ಸ್ವಲ್ಪ ಕಾಲದಲ್ಲೆ ಆ ಸೋಮಾರಿಗಳ ಗುಹೆಯಲ್ಲಿ ಐದಾರು ಜನಗಳು
ವಿನಹಾ ಮತ್ತಾರೂ ಇಲ್ಲದ ಹಾಗಾಯಿತು.
----
ಆ ರ ನೇ ಅ ಧ್ಯಾ ಯ.
(ಏಳುಬಣ್ಣದ ಕರವಸ್ತ್ರ.)
ಭಾಸ್ಕರನು ಕಲ್ಕತ್ತಾ ನಗರವನ್ನು ತಲಪಿ ಗೋವಿಂದನ ಮನೆಯನ್ನು ತಲಪಿದ
ನೆಂದು ಹಿಂದೆಯೇ ತಿಳಿಸಿದ್ದೇವಷ್ಟೆ. ಅಲ್ಲಿ ಅವನು ಗೋವಿಂದನಿಗೆ ಎಲ್ಲಾ ವಿಷಯ
ಗಳನ್ನೂ ತಿಳಿಸಿ ತನ್ನನ್ನು ಇನ್ನು ಮುಂದೆ ಸತ್ಯಚಂದನೆಂದು ಕರೆಯಬೇಕೆಂದು ಹೇಳಿದನು.
೨೧------------------------------------
ಮಧುಸೂದನ 21
ಮಾರನೇ ದಿವಸವೇ ಚೊ ಬಜಾರ್ ಬೀದಿಗೆ ಹೋಗಿ ಅಲ್ಲಿನ 29 ನೇ ನಂಬರ್ ಮನೆಯ
ಯಜಮಾನನನ್ನು ಹುಡುಕಿಕೊಂಡು ಹೋದನು. ಅವನನ್ನು ಕಂಡು ಹಿಡಿದು ಅವನನ್ನು
ಮಧುಸೂದನನ ವಿಷಯವೇನಾದರೂ ಗೊತ್ತೋ ಎಂದು ಕೇಳಿದನು.
ಯಜಮಾನ:-ಮಧುಸೂದನನೆಂಬುವನು ಈಗ ನಮ್ಮ ಮನೆಯಲ್ಲಿ ಇಲ್ಲ.
ಭಾಸ್ಕರ- ಈಗ್ಗೆ ಎರಡು ವರ್ಷಗಳ ಹಿಂದೆ ಇಲ್ಲಿ ಇದ್ದನು. ಅವನನ್ನೇ ನಾ
ದರೂ ಈಚೆಗೆ ನೋಡಿದ್ದೀರಾ ?
ಯಜಮಾನ: --ಆಹಾ ! ಈಗ ಜ್ಞಾಪಕಕ್ಕೆ ಬಂದಿತು. ಈಗ ಎರಡು ವರ್ಷ
ಗಳಲ್ಲಿ ಮಧುಸೂದನನೆಂಬೊಬ್ಬ ಜಮೀನ್ದಾರನಿದ್ದನು. ಅವನು ನನ್ನ ಮನೆಯನ್ನು
ಬಿಟ್ಟ ಮೇಲೆ ಏನಾದನೋ ನನಗೆ ಗೊತ್ತಿಲ್ಲ.
ಭಾಸ್ಕರ :----ಅವನ ಸಂಗಡ ಅನೇಕ ಸ್ನೇಹಿತರಿದ್ದರು. ಅವರ ವಿಷಯವೇನಾ
ದರೂ ನಿಮಗೆ ಗೊತ್ತಿದೆಯೋ ?
ಯಜಮಾನ: ಸ್ವಾಮಿಾ, ನನಗಾವುದೂ ತಿಳಿಯದು. ಆ ಮಧುಸೂದನ
ನೆಂಬುವನು ಹೊರಟು ಹೋದ ಮೇಲೆ ಅವರೆಲ್ಲರೂ ಹೊರಟು ಹೋದರು. ಅಷ್ಟೇ
ನನಗೆ ಗೊತ್ತಿರುವುದು.
ಭಾಸ್ಕರನು ಇನ್ನು ಇವನನ್ನು ಕೇಳಿ ಪ್ರಯೋಜನವಿಲ್ಲವೆಂದು ಅವನಿಂದಪ್ಪಣೆ
ಯನ್ನು ಪಡೆದುಕೊಂಡು ಕಾಳಿಬೀದಿಯಲ್ಲಿ ವೈದಿಕರ ಹೋಟಲಿಗೆ ಹೋದನು.
ಆ ಹೋಟಲು ಮೈಸೂರು ದೇಶಸ್ಥನಾದ ಸುಬ್ರಹ್ಮಣ್ಯಶಾಸ್ತ್ರಿಯೆಂಬುವವನಿಂದ ನಡೆಸ
ಲ್ಪಡುತ್ತಿತ್ತು. ಅಲ್ಲಿ ವೈದೀಕರಿಗೆ ಮಾತ್ರ ಭೋಜನವನ್ನು ಹಾಕುತ್ತಿದ್ದರು. ಪ್ರತಿ
ಯೊಬ್ಬನೂ ಸ್ನಾನಾದಿಗಳನ್ನೂ ಅಲ್ಲೇ ಮಾಡಿಕೊಂಡು ಜಪ ತಪಗಳನ್ನೂ ಮಾಡಿ
ಅಲ್ಲಿದ್ದ ವಿಗ್ರಹಗಳ ಪೂಜೆಯನ್ನು ನೋಡಿಬಿಟ್ಟು ಅಭಿಷೇಕ ಜಲವನ್ನು ಸ್ವೀಕರಿಸಿ
ಸಾಲುಸಾಲಾಗಿ ಹಾಕಿದ್ದ ಎಲೆಗಳ ಬಳಿ ಕುಳಿತು ಭೋಜನಮಾಡುತ್ತಿದ್ದರು. ನೆಲವೆಲ್ಲಾ
ಚನ್ನಾಗಿ ಸಾರಿಸಲ್ಪಟ್ಟು ರಂಗವಲ್ಲಿಗಳಿಂದಲಂಕರಿಸಲ್ಪಟ್ಟಿರುತ್ತಿದ್ದವು. ಅಡಿಗೆ ಮುಂತಾದ
ವೆಲ್ಲವೂ ವಯಸ್ಕರಾದ ಮತ್ತು ಆಚಾರ ಸಂಪನ್ನರಾದ ವಿಧವೆಗಳಿಂದ ನಡೆಯುತ್ತಿ
ದ್ದವು. ಬಡಿಸುವವರೂ ಅವರೇ ಆಗಿದ್ದರು. ಇತರ ಹೋಟಗಳಹಾಗೆ ಅಲ್ಲಿ
ಯಾರೂ ತಮ್ಮ ಅಂಗಿ ಮುಂತಾದವುಗಳೊಡನೆ ಕುಳಿತು ಭೋಜನ ಮಾಡುವುದಕ್ಕೆ
ಆಗುತ್ತಿರಲಿಲ್ಲ. ಮಧ್ಯದಲ್ಲಿ ಯಾರೂ ಎದ್ದು ಹೊಗಕೂಡದು, ಭೋಜನವು ನಡೆಯು
ತಿರುವಾಗ ಇಬ್ಬರು ಬ್ರಾಹ್ಮಣರು ವೇದ ಮಂತ್ರಗಳನ್ನು ಹೇಳುತ್ತಿದ್ದರು. ಹೆಚ್ಚಿನ
೨೨------------------------------------------
ಕಾದಂಬರಿ ಸಂಗ್ರಹ ೨೨
ಮಾತೇನು ? ಆಚಾರ ರುಚಿ ಇವುಗಳಿಗೆ ಆ ಭೋಜನಶಾಲೆಯು ತವುರು ಮನೆಯಾ
ಗಿತ್ತು. ಇತರ ಹೋಟಲುಗಳಿಗಿಂತಲೂ ಇಲ್ಲಿನ ದರವು ಸ್ವಲ್ಪ ಜಾಸ್ತಿಯಾಗಿತ್ತು.
ಆದರೂ ಇಲ್ಲಿಗೆ ಎಲ್ಲಾ ಹೋಟಲಿಗಿಂತಲೂ ಹೆಚ್ಚಾಗಿ ಜನಗಳು ಬರುತ್ತಿದ್ದರು.
ಅನೇಕರು ಹೋಟಲುಗಳಲ್ಲಿರುವುದರಿಂದ ಹಾಳಾಗಿ ಹೋಗಿ ದುಮ್ಮಾರ್ಗಿಗಳಾಗಿ
ರುವರೆಂಬ ವಿಷಯವು ಎಲ್ಲರಿಗೂ ತಿಳಿದೇ ಇದೆ. ಹೋಟಲುಗಳಲ್ಲಿ ಯಾವ ಆಚಾ
ರವೂ ಇಲ್ಲದೆ ಮನಸ್ಸಿಗೆ ಬಂದಹಾಗೆ ನಡೆಯುವುದರಿಂದ ಕೆಟ್ಟ ನಡತೆಗಳಿಗೆ ತವರು
ಮನೆಗಳಾಗಿವೆ. ಆಚಾರ ಸಂಪನ್ನರಾದವರು ವಿಧಿಯಿಲ್ಲದೆ ಹೋಟಲುಗಳಿಗೆ ಸೇರಿ
ಸ್ವಲ್ಪ ಕಾಲದಲ್ಲೇ ಆಚಾರಾದಿಗಳನ್ನು ಮರೆತು ನಾಸ್ತಿಕರಾಗುತ್ತಾರೆ. ನಾವು ಮೇಲೆ
ವಿವರಿಸಿರುವ ಕಲ್ಕತ್ತಾ ನಗರದ ವೈದೀಕ ಹೋಟಲಿನ ನೇಮನಿಷ್ಟೆಗಳಲ್ಲಿ ಹತ್ತರ
ತ್ತೊಂದು ಭಾಗವು ಇತರ ಹೋಟಲುಗಳಲ್ಲಿ ನಡದರೂ ಸಹಾ ಸಾಕಾಗಿದೆ. ಅನೇಕರು
ಅಲ್ಲಿಗೆ ಸೇರಿ ತಮ್ಮ ಆಚಾರಾದಿಗಳನ್ನುಳಿಸಿಕೊಳ್ಳುವರು.
ಭಾಸ್ಕರನು ಮೇಲೆ ಕಂಡ ವೈದಿಕರ ಹೋಟಲಿಗೆ ಹೋಗಿ ಅಲ್ಲಿನ ಯಜಮಾನ
ನೊಡನೆ ಸ್ವಲ್ಪ ಹೊತ್ತು ಮಾತನಾಡಲಪೇಕ್ಷಿಸಿದನು. ಲೌಕಿಕರನ್ನು ನೋಡುವುದಕ್ಕಾ
ಗಿಯೇ ಪ್ರತ್ಯೇಕವಾಗಿ ನಿರ್ಮಾಣವಾಗಿದ್ದ ಕೊಠಡಿಗೆ ಭಾಸ್ಕರನು ಹೋಗಿ ಕಾದಿರಲು
ಸ್ವಲ್ಪ ಹೊತ್ತಾದ ಮೇಲೆ ಶುಭ್ರವಾದ ವಸ್ತ್ರಗಳನ್ನು ಧರಿಸಿ ವಿಭೂತಿಯನ್ನು ಧರಿಸಿದ್ದ
ಬ್ರಾಹ್ಮಣನೊಬ್ಬನು ಬಂದು ತನ್ನನ್ನು ಕರೆಯ ಕಳುಹಲು ಕಾರಣವೇನೆಂದು ಕೇಳಿ
ದನು. ತನ್ನ ದೇಶದವನಾದ ಆ ಬ್ರಾಹ್ಮಣನು ತನ್ನನ್ನು ಸ್ವ ಭಾಷೆಯಲ್ಲಿ ಮಾತನಾಡಿ
ಸಲು ಭಾಸ್ಕರನು ಸಂತೋಷಪಟ್ಟವನಾಗಿ ಅವನಿಗೆ ವಂದಿಸಿ, ಅಯಾ ತಮ್ಮ ಗೃಹ
ದಲ್ಲಿ ಈಗೆರಡು ವರ್ಷಗಳ ಹಿಂದೆ ಭೋಜನಮಾಡುತ್ತಿದ್ದ ಮಧುಸೂದನನೆಂಬುವನನ್ನು
ಬಲ್ಲಿರಾ? ”
ಬ್ರಾಹ್ಮಣ:-ಚೆನ್ನಾಗಿ ಬಲ್ಲೆನು, ಅವನಸಂಗಡ ಅವನ ಸಹಪಾಠಿಗಳಾದವರು
ಅನೇಕರು ಬರುತ್ತಿದ್ದರು. ಅವರಿಗೆಲ್ಲಾ ಅವನೇ ದುಡ್ಡು ಕೊಡುತ್ತಿದ್ದನು. ನಾನು ಅಲ್ಲಲ್ಲಿ
ಜನಗಳ ಆಚಾರಾದಿಗಳನ್ನು ತಿಳಿದುಕೊಳ್ಳುವುದಕ್ಕಾಗಿ ಗೂಢಚಾರರನ್ನಿಟ್ಟಿರುವೆನು.
ಒಂದು ದಿವಸ ನನ್ನ ಗೂಢಚಾರರಲ್ಲೊಬ್ಬನು, ಮಧುಸೂದನನ ಸ್ನೇಹಿತನೊಬ್ಬನು ರಾತ್ರೀ
ಕಾಲದಲ್ಲಿ ಇಲ್ಲೇ ಸಮೀಪದಲ್ಲಿರುವ ಮದ್ಯದಂಗಡಿಯಿಂದ ಹೊರಕ್ಕೆ ಬರುವುದನ್ನು
ನೋಡಿ ನನಗೆ ತಿಳಿಸಿದನು. ನಾನು ಆ ವಿಷಯವನ್ನು ಸರಿಯಾಗಿ ವಿಚಾರಿಸಲು ಅವನು
ಮದ್ಯಪಾಯಿಯೆಂದು ತಿಳಿಯಬಂದಿತು. ಅವನನ್ನು ಇಲ್ಲಿಗೆ ಇನ್ನು ಮುಂದೆ ಬರಕೂಡ
ದೆಂದು ಕಟ್ಟಳೇಮಾಡಿದೆನು. ಮಧುಸೂದನನು ಅವನ ಪರವಾಗಿ ಮಾತನಾಡಿದನು. ನಾನು
೨೩------------------------------------
ಮಧುಸೂದನ 23
ಅದನ್ನು ಕೇಳದೇಹೋಗಲು ಮಾರನೇ ದಿವಸದಿಂದ ಮಧುಸೂದನನೂ ಅವನ ಸ್ನೇಹಿ
ತರೂ ಇಲ್ಲಿಗೆ ಬರುವುದನ್ನೇ ನಿಲ್ಲಿಸಿಬಿಟ್ಟರು. ಆ ಮೇಲೆ ಅವರೆಲ್ಲಾ ಏನಾದರೋ
ನನಗೆ ತಿಳಿಯದು. ಆದರೆ ಅವರಲ್ಲಿ ಕೆಲವರು ಈಗಲೂ ಅದೋ ಅಲ್ಲಿ ಕಾಣುವ
ಮದ್ಯದಂಗಡಿಗೆ ರಾತ್ರಿ ಕಾಲದಲ್ಲಿ ಬರುತ್ತಾರೆಂದು ಕೇಳಿ ಬಲ್ಲೆನು.
ಭಾಸ್ಕರ:-ನಾನು ಇಷ್ಟೇ ತಿಳಿದುಕೊಳ್ಳಬೇಕಾಗಿದ್ದದ್ದು ಎಂದು ಯೋಚಿಸಿ
ನಾನು ಹೋಗಿ ಬರುವೆನು ಎಂದು ಆತನ ಅಪ್ಪಣೆಪಡೆದು ಹೊರಟು ಹೋದನು.
ಭಾಸ್ಕರನು ನೆಟ್ಟಗೆ ಮನೆಗೆ ಬಂದು ಗೋವಿಂದನನ್ನು ಒಬ್ಬ ಕುಡುಕನ ಉಡು
ಪನ್ನು ತರುವಂತೆ ಕೇಳಿಕೊಂಡನು. ಅದರಂತೆ ಮಾರನೇ ದಿವಸ ಗೋವಿಂದನು ಒಂದು
ಹಳೆಯ ಉಡುಪನ್ನು ತಂದು ಕೊಟ್ಟನು. ಭಾಸ್ಕರನು ತನ್ನ ರೂಪವನ್ನು ಬದಲಾಯಿಸಿ
ಕೊಂಡು ಉದ್ದವಾದ ಕೃತಕದಾಡಿಗಳನ್ನೂ ಮೀಶೆಗಳನ್ನೂ ಕಟ್ಟಿಕೊಂಡು ಮುಖ
ಕ್ಕೆಲ್ಲಾ ಯಾವದೋ ಒಂದು ವಿಧವಾದ ಬಣ್ಣವನ್ನು ಬಳಿದು ಕೊಳ್ಳಲು ಮುಖವು
ಘೋರವಾಗಿ ಕಾಣುತ್ತಾ ನೋಡುವುದಕ್ಕೆ ಠಕ್ಕನ ಮುಖದಂತೆ ಕಾಣುವಂತೆಮಾಡಿ
ಕೊಂಡು ಗೋವಿಂದನು ತಂದು ಕೊಟ್ಟ ಉಡುಪನ್ನು ಧರಿಸಿದನು. ಆಗ ಅವನನ್ನು
ನೋಡಿದ್ದೇ ಆದರೆ ಯಾರೇ ಆಗಲಿ ಅವನನ್ನು ಒಬ್ಬ ಕಳ್ಳನೆಂದು ಹೇಳುತ್ತಿದ್ದರು.
ಸಾಯಂಕಾಲ ಏಳುಘಂಟೆಯವರಿಗೂ ಕಾದಿದ್ದು ಆ ಮೇಲೆ ಇನ್ನೂರು ಮುನ್ನೂರು
ರೂಪಾಯಿಗಳನ್ನು ತೆಗೆದುಕೊಂಡು ತನ್ನ ಒಳಜೋಬಿನಲ್ಲಿ ಭದ್ರಪಡಿಸಿಕೊಂಡು ಎರಡು
ರಿವಾಲ್ವರುಗಳನ್ನೂ ಒಳಗಿಟ್ಟು ಕೊಂಡು ಹೊರಕ್ಕೆ ಹೊರಟು ನೆಟ್ಟಗೆ ಕಾಳೀಬೀದಿಗೆ
ಹೋದನು. ಅಲ್ಲಿಗೆ ಹೋಗುವಹೊತ್ತಿಗೆ ಎಂಟುಗಂಟೆಯ ಸಮಯವಾಗಿದ್ದಿತು.
ಅಲ್ಲಿಂದ ಭಾಸ್ಕರನು ಕೂಗಾಡುತ್ತಲೂ ಕುಣಿಯುತ್ತ, ಹಾಡುತ್ತಲೂ, ಬಾಯಿಗೆ
ಬಂದಹಾಗೆಲ್ಲಾ ಮಾತನಾಡುತ್ತಲೂ ಸಂಪೂರ್ಣವಾಗಿ ಕುಡಿದವನಂತೆ ನಟಿಸುತ್ತಾ
ಅಲ್ಲಲ್ಲಿ ಬಿದ್ದೇಳುತ್ತಾ ಕೊನೆಗೆ ಆ ಬೀದಿಯಲ್ಲಿದ್ದ ಮದ್ಯದಂಗಡಿಯನ್ನು ಪ್ರವೇಶ
ಮಾಡಿದನು. ಮದ್ಯಪಾಯಿಗಳಿಗಾಗಿಯೇ ಕಾದಿರತಕ್ಕಂಥಾ ಅಲ್ಲಿಯ ಜನಗಳು
ಇವನನ್ನು ಎದುರುಗೊಂಡು ಬಂದು ಒಳಕ್ಕೆ ಕರೆದುಕೊಂಡು ಹೋದರು.
ಸಂಘಸಂಸ್ಕರಣ ಕರ್ತರೂ ಇತರರೂ ಸೇರಿ ಬಾಲ್ಯ ವಿವಾಹದಿಂದಲೂ ಮತ್ತು
ಇತರ ಆಚಾರಗಳಿಂದಲೂ ಇಂಡಿಯಾ ದೇಶದ ಮರಣವು ಹೆಚ್ಚಾಗಿದೆಯೆಂದು ಅನ್ಯಾ
ಯವಾಗಿ ಸರಿಯಾದ ಕಾರಣಗಳಿಲ್ಲದೇನೇ ಹೇಳುತ್ತಾರೆ. ಸರಿಯಾಗಿ ಯೋಚಿಸಿ
ನೋಡುವಲ್ಲಿ ಬಾಲ್ಯ ವಿವಾಹದಿಂದ ಮರಣಗಳೇನೂ ಹೆಚ್ಚಿಲ್ಲವು. ಮದುವೆಯಾಗ
ತಕ್ಕಂಥಾ ಹೆಣ್ಣೆನೂ ತನ್ನ ಗಂಡನನ್ನು ಕಚ್ಚಿ ಕೊಲ್ಲುವುದಕ್ಕೆ ಸರ್ಪವವು. ವಿವಾಹ
೨೪------------------------------------------
24 ಕಾದಂಬರೀ ಸಂಗ್ರಹ
ವಾದ ಕೂಡಲೇ ಗಂಡನಾದವನು ಸಾಯ ಬೇಕೆಂದು ಯಾವಶಾಸ್ತ್ರದಲ್ಲಿಯೂ, ಯಾವ
ಆರೋಗ್ಯ ಸೂತ್ರಗಳಲ್ಲಿಯೂ ಹೇಳಿಲ್ಲವು. ವಿವಾಹ ಮಾಡಿಕೊಳ್ಳತಕ್ಕಂಥಾ ಹುಡುಗ
ನಾದವನು ತನ್ನ ದೇಹವನ್ನು ಸರಿಯಾಗಿಟ್ಟು ಕೊಂಡಿದ್ದು ತನ್ನ ಬ್ರಹ್ಮಚರ್ಯವನ್ನು
ಕಾಪಾಡಿ ಕೊಂಡಿದ್ದರೆ ಅವನು ವಿವಾಹವಾದಕೂಡಲೇ ಹೇಗೆ ಸಾಯುವನು? ಇದನ್ನು
ಯೋಚಿಸದೆ ಬಾಲ್ಯ ವಿವಾಹವು ಮರಣಕ್ಕೆ ಕಾರಣವಾಗಿದೆಯೆಂದು ಹೇಳಿದರೆ ಹೇಗೆ
ಅದನ್ನು ನಂಬಬಹುದು. ಬಾಲ್ಯ ವಿವಾಹವನ್ನು ಬಿಟ್ಟು ಪ್ರೌಢಾವಿವಾಹ ಮಾಡಬೇ
ಕೆಂಬುವರ ಸಂಖ್ಯೆಯು ಈಗ ಅಧಿಕವಾಗಿರುವದು. ಒಂದು ಭಾಗವಾದ ಬ್ರಾಹ್ಮ
ಣರಲ್ಲೂ ವೈಶ್ಯರಲ್ಲೂ ಬಾಲ್ಯ ವಿವಾಹವು ಕಂಡುಬರುವುದು. ಆದರೆ ಸರಿಯಾಗಿ
ವಿಚಾರಿಸಿ ನೋಡಿದ್ದರಲ್ಲಿ ಇತರ ಜಾತಿಯವರಲ್ಲಾಗುವಷ್ಟು ಮರಣವು ಇವರಲ್ಲಾ
ಗುವುದಿಲ್ಲವೆಂದು ತಿಳಿದು ಬಂದಿದೆ. ಹಾಗಾದರೆ ಚಿಕ್ಕ ವಯಸ್ಸಿನ ಮರಣಕ್ಕೇನು ಕಾರಣ?
ಸ್ವಲ್ಪ ಯೋಚಿಸಿನೋಡಿದರೆ ತಿಳಿಯುವುದು. ಇತರ ಜಾತಿಯವರು ಅಧಿಕ ವಾಗಿ
ಮದ್ಯವನ್ನು ಪಾನಮಾಡುವುದರಿಂದಲೂ ಮಾದಕ ಪದಾರ್ಥಗಳನ್ನು ತಿನ್ನುವು
ದರಿಂದಲೂ ಬಾಲಾದಿಗಳೂ ಕೂಡ ದೇಹವನ್ನು ಹಾಳುಮಾಡಿಕೊಳ್ಳುತ್ತಾರೆ. ಈ
ಮದ್ಯದಂಗಡಿಗಳು ಜನನಿಬಿಡವಾದ ಸ್ಥಳಗಳಲ್ಲಿರುವುದರಿಂದ ಅನೇಕರು ಅವುಗಳ
ಆಶೆಯೆಂಬ ಬಲೆಗೆ ತುತ್ತಾಗುತ್ತಾರೆ. ಸಂಘಸಂಸ್ಕರಣ ಕರ್ತರು ಯಾವ ಕೆಡು
ಕನ್ನೂ ಮಾಡದ ಬಾಲ್ಯ ವಿವಾಹಾದಿಗಳ ವಿಷಯವನ್ನು ಬಿಟ್ಟು ಕಣ್ಣೆದುರಿಗೇ ಕಾಣು
ತ್ತಿರುವ ಈ ಕೆಟ್ಟ ಕುಡಿತವನ್ನೂ, ಮದ್ಯದಂಗಡಿಗಳನ್ನೂ ನಾಶಪಡಿಸುವುದಕ್ಕೆ
ಪ್ರಯತ್ನ ಪಡಲಿ! ಆದರೆ ಇದು ಸರ್ಕಾರದವರಿಗೆ ಸೇರಿದ ವಿಷಯ. ಅವರೊಡನೆ ಹೆಣ
ಗಾಡಲು ನಿಮಗೆ ಧೈರ್ಯಸಾಲದು.
ಭಾಸ್ಕರನು ಒಳಕ್ಕೆ ಹೋಗಿ ಸುತ್ತಲೂ ನೋಡಿದನು. ಒಂದು ಮೂಲೆಯಲ್ಲಿ
ಗೌರವಸ್ಥನಂತೆ ಕಂಡು ಬರುತ್ತಿದ್ದವನೊಬ್ಬನು ಕುಳಿತಿರುವುದನ್ನು ನೋಡಿ ತೂರಾಡಿ
ಕೊಂಡು ಅವನಬಳಿ ಹೋಗಿ ಕುಳಿತುಕೊಂಡು ಏನೇನೋ ಮಾತನಾಡ ತೊಡಗಿದನು.
ಅಲ್ಲಿ ಕುಳಿತಿದ್ದ ಮನುಷ್ಯನು ಇವನನ್ನು ನೋಡಿ ಇಂಗ್ಲೀಷಿನಲ್ಲಿ ನೀನು ಯಾರು
who are you) ಎಂದು ಕೇಳಿದನು. ಅದಕ್ಕೆ ಭಾಸ್ಕರನು ಅರ್ಧ ಇಂಗ್ಲೀಷಿನಿಂದಲೂ
ಅರ್ದ ಹಿಂದೂಸ್ಥಾನದಿಂದಲೂ ಅರ್ಧರ್ಧ ಮಾತುಗಳಾಗಿ "ನಾನೇ ". "ನಾನು ನಾನೇ
ಗೊತ್ತಿಲ್ಲವೇ ನನ್ನ ಹೆಸರು. "ನಾನು" "ನಾನೇ ನೀಲಕಂಠಬಾಬು, ನೀನ್ಯಾರು ನಿನ್ನಲ್ಲಿ
ದುಡ್ಡಿದೆಯೋ ಎಲ್ಲಿ. ದಾಹವಾಗುತ್ತೆ. ಮದ್ಯವನ್ನು ಕೊಡಿಸು ನೋಡೋಣ" ಎಂದನು.
ಮನುಷ್ಯ:-ಅಯ್ಯಾ ನೀಲಕಂಠ ಬಾಬು ಆಗಲೇ ಅತಿಯಾಗಿ ಕುಡಿದಿರುವೆ.
ಇನ್ನೂ ಬೇಕೇ? ನಾನು ಯಾರಾದರೆ ನಿನಗೇನು ? ಬೇಕಾಗಿದ್ದರೆ ನಿನಗೆ ಕುಡಿಯುವು
೨೫----------------------------------------
ಮಧುಸೂದನ 25
ದಕ್ಕೆ ಸ್ವಲ್ಪ ನೀರು ತರಿಸಿಕೊಡುತ್ತೇನೆ.
ನಾನು-ಏನು-ನಾನು-ಕುಡಿದಿರುವೆನೋ ನಿನಗೇನು ತಲೆತಿರುಗು
ತ್ತದೋ ನಾನೆಂದಿಗೂ ಕುಡಿಯುವುದಿಲ್ಲ. ನೀನು-ನಿನಗೆ ದುಡ್ಡಿಲ್ಲವೇ ನೀರು ನನಗೆ
ಬೇಡಾ ಇಕೋ ತಕೋ ಈ ಹತ್ತು ರೂಪಾಯಿಗಳಿಗೆ ಮದ್ಯ ತರಿಸು ಕುಡಿಯೋಣ ನಾನು
ನಾನು ನಾನೇನು ಬಡವನಾ ಇದೋ ನೋಡು ಇನ್ನೂ ಹಣವಿದೆ ಎಲೋ ಯಾರೋ
ಅಲ್ಲಿ ಮರುಶೀಸೆ ಬರಾಂದಿ ತೆಗೆದುಕೊಂಡುಬಾರೋ.
ಅಲ್ಲಿದ್ದ ಸೇವಕನು ನಗುತ್ತಾ ಮೂರುಶೀಸೆ ಬ್ರಾಂದಿಯನ್ನೂ ಬಟ್ಟಲುಗಳನ್ನೂ
ತಂದಿಟ್ಟು ಹೋದನು. ಭಾಸ್ಕರನು ಬಟ್ಟಲುಗಳನ್ನು ತುಂಬಿ ಅಲ್ಲಿದ್ದ ಮನುಷ್ಯನಿಗೆ
ಕೊಟ್ಟು ತಾನೂ ಕುಡಿಯುವಂತೆ ನಟಿಸುತ್ತಾ ಎಲ್ಲವನ್ನೂ ತಾನು ಉಡುವಿನಹಿಂದೆ
ಬಚ್ಚಿಟ್ಟು ಕೊಂಡಿದ್ದ ಚೀಲದೊಳಕ್ಕೆ ಪತ್ತೇದಾರರಿಗೇನೆ ತಿಳಿಯದ ರೀತಿಯಿಂದ ತುಂಬಿ
ಕೊಳ್ಳುತ್ತಿದ್ದನು. ಈ ವಿಧವಾದ ಮೋಸಮಾಡುವಿಕೆಯು ಅಕ್ಬರಿನ ಕಾಲದಿಂದಲೂ ಬಂದಿ
ದೆಯೆಂದು ಅನೇಕ ವಿಷಯಗಳಿಂದ ತಿಳಿದುಬರುತ್ತದೆ. ಇವನು ಹೀಗೆ ಬಹಳ ಬೆಲೆ
ಯುಳ್ಳ ಮದ್ಯವನ್ನು ಕೊಡುವುದನ್ನು ನೋಡಿದ ಅಲ್ಲಿದ್ದ ಒಬ್ಬ ಮನುಷ್ಯನು ನಗುತ್ತಾ
ಅವನು ಕೊಟ್ಟಿದ್ದನ್ನೆಲ್ಲಾ ಕುಡಿಯುತ್ತಾ ಬಂದನು. ಮದ್ಯವು ಬಹಳ ಖಾರವುಳ್ಳುದಾ
ದ್ದರಿಂದ ಬಹಳಬೇಗ ಮತ್ತನ್ನುಂಟುಮಾಡತಕ್ಕುದಾಗಿತ್ತು. ಮತತ್ತೇರಿದಹಾಗೆಲ್ಲಾ
ಇನ್ನೂ ಕುಡಿಯಬೇಕೆಂಬಭಿಲಾಷೆಯು ಅಂಕುರಿಸಿತು, ಇದನ್ನರಿತ ಭಾಸ್ಕರನು " ಛೇ !
ಬಿಡಯ್ಯಾ ! ಏನು ಕುಡಿದೆ ನೀನು-ನಾನು ಇಲ್ಲ ನೀನು ಮನುಷ್ಯನೇ ಏನೂ ಕುಡಿಯ
ಅಲ್ಲಾ. ಎಲ್ಲವನ್ನೂ ನಾನೇ ಕುಡಿದುಬಿಟ್ಟೆನು. (ಕುಣಿದಾಡತೊಡಗಿದನು) ಆಹಹ !
ಮದ್ಯವು ಬಹಳ ಸೊಗಸಾಗಿದೆಯಪ್ಪ ! ಅಯ್ಯೋ ಎಲ್ಲಾ ಆಗಿಹೋಯಿತು, ? ಓಹೋ
ನಾನೇನು ಬಡವನಾ ? ಎಲೋ ಆಳು ಇಲ್ಲಿ ಬಾರೋ ಇಕೋ ತಕೊ ತಕ್ಕೊಂಡು ಬಾರೋ
ಇನ್ನಿಷ್ಟು ಬರಾಂದಿ-ಒಳ್ಳೇದಾಗಿರಬೇಕು. ಗೊತ್ತಿದೆಯೋ ನಾನು ಯಾರು ?
ನೀಲಕಂಠಬಾಬು ಈಗ ಹೋಗು ಇದೋ ರೂಪಾಯಿ (ಎಂದು ಹೇಳಿ ತೂರಾಡುತ್ತಾ
ಎದ್ದು ನಿಂತುಕೊಂಡು) ಇನ್ನಿ ಪ್ಪತ್ತು ರೂಪಾಯಿಗಳನ್ನು ಧಣಧಣವೆಂದು ಮೇಜಿನಮೇಲೆ
ಹಾಕಿದನು. ಅಲ್ಲಿದ್ದ ಮನುಷ್ಯನು ಇನ್ನೂ ಸಂಪೂರ್ಣವಾಗಿ ಮತ್ತೇರಲ್ಪಟ್ಟವನಾಗಿರ
ಲಿಲ್ಲವಾಗಿ ಇದೆಲ್ಲವನ್ನೂ ನೋಡಿ ಇವನು ಯಾರೋ ಮಹದೈಶ್ವರವಂತನು. ಹೀಗೆ
ಧನವನ್ನು ಖರ್ಚುಮಾಡುತ್ತಿದ್ದಾನೆಂದು ಯೋಚಿಸಿ ನಗುತ್ತಾ ಕುಳಿತಿದ್ದನು. ಸ್ವಲ್ಪ
ಹೊತ್ತಿಗೆಲ್ಲಾ ಮದ್ಯವೂ ಬಂದಿತು. ಪುನಹಾ ಭಾಸ್ಕರನು ಬಟ್ಟಲುಗಳಲ್ಲಿ ತುಂಬಿತುಂಬ
ಆ ಮನುಷ್ಯನಿಗೆ ಕೊಟ್ಟು ತಾನೂ ಕುಡಿಯುವಂತೆ ನಟಿಸಿದನು. ಸಂಶಯಕ್ಕಾಸ್ಪದವಾ
೨೬-------------------------------------------
26 ಕಾದಂಬರಿಕ ಸಂಗ್ರಹ
ಗದಿರಲೆಂದು ಒಂದು ಬಟ್ಟಲು ಮದ್ಯವನ್ನು ಕೈನಡುಗುವಹಾಗೆ ತೋರ್ಪಡಿಸಿ ಎತ್ತಿ
ಹಾಕಿದನು. ಸುರಾದೇವತೆಯು ಅಲ್ಲಿದ್ದ ಮನುಷ್ಯನನ್ನು ಸ್ವಲ್ಪಸ್ವಲ್ಪವಾಗಿ ಆಕ್ರಮಣ
ಮಾಡಲಾರಂಭಿಸಿದಳು. ಸ್ವಲ್ಪ ಕಾಲದಲ್ಲೇ ಅವನ ಜ್ಞಾನವು ಅವನ ತಲೆಯನ್ನು
ಬಿಟ್ಟೋಡಿತು.
ಭಾಸ್ಕರನು ಆ ಮನುಷ್ಯನು ತನ್ನ ಬಲೆಗೆ ಶಿಕ್ಕಿ ಬಿದ್ದನೆಂದು ಮನಸ್ಸಿನಲ್ಲೇ
ಸಂತೋಷಪಟ್ಟು ಕೊಂಡು ಇನ್ನೂ ಉಳಿದಿದ್ದ ಒಂದು ಶೀಸೆ ಬ್ರಾಂದಿಯನ್ನು ಬಟ್ಟ
ಲಲ್ಲಿ ಸುರಿದು ಕೊಡುತ್ತಾ ಬಂದನು. ಆ ಮನುಷ್ಯನು "ಆಹಾ ! ಭಲೇ! ಶಾಬಾಸ್
ಕೊಡು ಕೊಡು ! ಎಲ್ಲಿ. ಮದ್ಯ ! ಆಹಾ ! ಅಮೃತದಂತಿರುವ ಮದ್ಯವೇ !ನಿನ್ನ ಸಮಾನ
ರಾರು ? ಭಲೆ ! ಭಲೆ ! ಈಗ ನಾನೆ ಚಂದ್ರ ನೀನೆ ರೆವತಿ ಎಲೇ ಎಲ್ಲಿದ್ದೀ ನೋಡಿದಿಯಾ
ದೂರ ಓಡಿಹೋಗುತ್ತೀ ಹತ್ತಿರ ಬಾ ಬಾ ಎಂದು (ಕುಣಿಯಲಾರಂಭಿಸಿದನು) ಎಲೋ
ಯಾರೋ ಅಲ್ಲಿ ? ಸಂ ಗೀತ ಹಾಡೋ ಎಲ್ಲಿ ಸಾ ಗಾ ರಿ ಮಾ ತೈ ತೈ ಭಲಾ ಶಾಬಾಸ್
ಚೆನ್ನಾಗಿದೆ ನಿನಗೆ ನಮ್ಮ ಸಂಘದ ಯಜಮಾನನಿಂದ ಬಹುಮಾನ-ಊ-ರೂಪಾಯಿ
ಕೊಡಿಸುತ್ತೇನೆ ಬಾ ಇದೇ ಬೀದಿಯಲ್ಲಿ ನಮ್ಮ ಮನೆಯಿದೆ" ಎಂದು ವದರಿದನು.
ಭಾಸ್ಕರನು ಇದೇಸಮಯವೆಂದು ಯೋಚಿಸಿದನು. ಆದರೂ ಸಮಾಸದಲ್ಲೇ
ಯಾರಾದರೂ ಆ ಮನುಷ್ಯನಿಗೆ ತಿಳಿದ ಮನುಷ್ಯರಿರಬಹುದೆಂಬ ಹೆದರಿಕೆಯಿಂದ ಸರಿ
ಯಾಗಿ ಮಾತನಾಡದೆ ಮತ್ತೇರಿದವನಂತೆಯೇ ಮಾತನಾಡುತ್ತಾ ಬಂದನು.
ಭಾಸ್ಕರ:-ಅಣ್ಣಾ ಶಾಭಾಸ್! ಮದ್ಯವು ಬಹಳ ಪಸಂದಾಗಿದೆ. ನೀನು ಹಾಡು.
ನಾನು ಕುಣಿಯುತ್ತೇನೆ (ಕುಣಿಯುತ್ತಾನೆ ನಾನು ನೀಲಕಂಠಬಾಬುವಲ್ಲವಾ ? ನಾನಿರು
ವದು ಬ್ಲಾಕ್ ಬೀದಿ ಅಹಹ ! ನೀನ್ಯಾರಣ್ಯ ! ಮಂಗನಂತೆ ಇಲ್ಲಿ ಬಂದಿದ್ದೀ ನೀನೆಲ್ಲಿರು
ವುದು ಹೇಳಣ್ಣಾ.
ಮನುಷ್ಯ:-ಸೈ ಸೈ ನೀನು ಬಾಬುವಾ-ಪಾಗಾದರೆ ನಾನು ಹರಿಚಂದ್ರ-ನಾನಿ
ರುವುದು ಅದೆಲ್ಲಾ ಹಾಳುಹೆಸರು ಸ್ಪ್ರಿಂಗ್ ಬೀದಿ-ಮರೆತುಹೋಯಿತು. ಹೋಗಲಿ
ನನಗೇನಪ್ಪಾ ಕಡಮೇ ನನ್ನ ಸಹೋದರರಿದ್ದಾರೆ. ಬೇಕಾದ್ದು ಕೊಡುತ್ತಾರೆ. ಹೊಸಬ-
ಜಮಿನ್ಸಾರ-ಯಜಮಾನರ-ಮಗಳನ್ನು ಅದೇನೋ ಅಲ್ಲಿ ಮದುವೆಯಾಗುತ್ತಾನೆ
ನಮಗೆಲ್ಲಾ ಬೇಕಾದಷ್ಟು -ಥೂಥೂ-ಕಣ್ಣೊಳಗೆ ದೆವ್ವ ಮಾರಿ ಸೇರಿಕೊಂಡಿದ್ದಾಳೆ.
ಅದೆಲ್ಲೋ ನನ್ನ ಕರವಸ್ತ್ರ, ನಮ್ಮ ಸಂಗಡದವರ ಗುರುತು ಕಾಣಣ್ಣಾ (ಎಂದು
ಹೇಳುತ್ತಾ, ತನ್ನ ಒಳಜೋಬಿನಿಂದ ಒಂದು ಕರವಸ್ತ್ರವನ್ನು ತೆಗೆದನು. ಭಾಸ್ಕರನು
೨೭-------------------------------------------------
ಮಧುಸೂದನ 27
ನೋಡಲು ಅದು ತಾನು ಕಂಡುಹಿಡಿದ ಹರಿದುಹೋದ ಏಳುಬಣ್ಣದ ಕರವಸ್ತ್ರದಹಾ
ಗಿತ್ತು. ಅದನ್ನು ನೋಡಿ ಅವನಿಗಿದ್ದ ಸಂಶಯಗಳೆಲ್ಲಾ ಅಡಗಿಹೋದವು. ಇವನೇ ಸರಿ
ಯಾದಮನುಷ್ಯನೆಂದು ಯೋಚಿಸಿದನು. (ಇನ್ನೂ ಇವನಿಂದೇನಾದರೂ ಗುಟ್ಟುಗಳನ್ನು
ಹೊರಪಡಿಸಬೇಕೆಂದು ಯೋಚಿಸಿ)
ಭಾಸ್ಕರ:-ಆದರೆ ಅಣ್ಣಾ ಅದೇನೋ ಹಾಂಗಿದೆ-ಕರವಸ್ತ್ರ-ಹೊತ್ತಾಯಿತು
ಗಂಟೆನೋಡಣ್ಣ ಹೋಗೋಣ.
ಹರಿಚಂದ್ರ:-ಅದಾ ನಮ್ಮ ಸಂಘದ ಕರವಸ್ತ್ರ-ಅದ್ಯಾರೋ ನನ್ನನ್ನು ಕೇಳು
ವದು-ಹೋಗು-ನಾನು ಹೇಳುವುದಿಲ್ಲ. ನಿನಾ ನಮ್ಮಣ್ಣ ಗಂಟೆನೋಡಾಲಾ (ಗಡಿಯಾರ
ವನ್ನು ಹೊರಗೆ ತೆಗೆಯಲು ಭಾಸ್ಕರನು ಅವನಿಗೆ ತಿಳಿಯದಹಾಗೆ ಸರಪಣಿಯ ಕೊನೆ
ಯಲ್ಲಿ ಎಂ (M) ಎಂಬಕ್ಷರದ ಗುಂಡಿಯನ್ನು ಕಿತ್ತುಕೊಂಡು ತನ್ನ ಜೋಬಿನಲ್ಲಿ
ಭದ್ರಪಡಿಸುವನು) ಗಂಟೆ ಹದಿಮೂರಾಯಿತು. ಅಯ್ಯಯ್ಯೋ ಹೊತ್ತಾಯಿತಪ್ಪಾ
ನಾನು ಹೋಗುತ್ತೇನೆ. ನಾಳೇದಿವಸ ನಮ್ಮ ಸಂಘದ ಮಾಟಿಂಗಿದೆ ಸೈ ರಾಜ ಅದೆ
ಲ್ಲೋದಾರಿ (ಎದ್ದು ತಡವರಿಸುತ್ತಾ ಹೋಗುವನು)
ಭಾಸ್ಕರ:- ಅದೇನಪ್ಪಾ ನಿಮ್ಮ ಸಂಘದ ಮಾಟಿಂಗ್ ನಾನ್ ಬರಬಾರದಾ
ನಾನೂ ಬರುತ್ತೇನೆ ನಡಿಯಪ್ಪಾ.
ಹರಿಚಂದ್ರ:-ಮಾಟಿಂಗಾ ಹೂ ಮಾಟಿಂಗ್ ಉಂಟು. ನಾಳೆರಾತ್ರಿ ಹತ್ತು
ಗಂಟೆಗೆ ಸರಿಯಾಗಿ ನಿನಾ ನೀನ ಯಾರೋ ಎಲ್ಲೋ ನಿನ್ನ ಗುಂಡಿ (ಅಷ್ಟರಲ್ಲೇ ದಾರಿ
ಯನ್ನು ಕಂಡು ಹೊರಕ್ಕೆ ಬಂದು ಚರಂಡಿಯಲ್ಲಿ ಬಿದ್ದು ಕೊಳ್ಳುವನು.) ಭಾಸ್ಕರನು
ಎಷ್ಟು ಪ್ರಯತ್ನ ಮಾಡಿದರೂ ಅವನು ಏಳಲಿಲ್ಲಾ, ಜೋಬಿನಲ್ಲೇನಾದರೂ ಕಾಗದಗಳಿ
ವೆಯೋ ಎಂದು ನೋಡಲು ಒಂದುಚೂರು ಕಾಗದವಿನಹಾ ಮತ್ತೇನೂ ಸಿಗಲಿಲ್ಲ. ಆ
ಚೂರಿನಲ್ಲಿ "ಎಂ ಸಂಘದವರೆಲ್ಲಾ ನಾಳೇದಿವಸ ರಾತ್ರಿ ಹತ್ತು ಗಂಟೆಗೆ ಸರಿಯಾಗಿ
ಗುಪ್ತಗೃಹಕ್ಕೆ ಬರಬೇಕು” ಎಂದು ಮಾತ್ರ ಬರೆದಿತ್ತು. ಅದನ್ನು ಜೋಬಿನಲ್ಲಿ ಹಾಕಿ
ಕೊಂಡು ಸುತ್ತುಮುತ್ತಾ ನೋಡುತ್ತಾ ತನ್ನನ್ನು ಯಾರೂ ಹಿಂಬಾಲಿಸುತ್ತಿಲ್ಲವೆಂದು
ತಿಳಿದಮೇಲೆ ವೇಗವಾಗಿ ನಡೆದು ಅಲ್ಲೊಂದು ಸ್ಥಳದಲ್ಲಿ ತಾನು ಚೀಲದಲ್ಲಿ ತುಂಬಿ
ಟ್ಟು ಕೊಂಡಿದ್ದ ಮದ್ಯವನ್ನೆಲ್ಲಾ ಸುರಿದುಬಿಟ್ಟು ಗೋವಿಂದನ ಮನೆಯನ್ನು ಸೇರಿ
ಸ್ನಾನವನ್ನು ಮಾಡಿ ಶುಭ್ರವಸ್ತ್ರವನ್ನು ಧರಿಸಿ ಊಟಮಾಡಿಕೊಂಡು ಮಲಗಿ ನಿದ್ರೆ
ಹೋದನು.
೨೮-------------------------------
28 ಕಾದಂಬರಿ ಸಂಗ್ರಹ
ಏಳನೇ ಅಧ್ಯಾಯ
(ಹರಿಚಂದ್ರ.)
ಮಾರನೇದಿನ ಪ್ರಾತಃಕಾಲದಲ್ಲೇ ಭಾಸ್ಕರನೆದ್ದು ಕಾಳೀಬೀದಿಗೆ ಹೋಗಿ ಅಲ್ಲಿ
ಹರಿಚಂದ್ರನು ಹೇಳಿದ ಮನೆ ಯಾವುದೆಂದು ಹುಡುಕಿದನು, ಯಾವುದೂ ಅವನಿಗೆ ಸರಿ
ಬೀಳಲಿಲ್ಲ. ಒಂದು ಸಂದಿಯಲ್ಲಿ ನುಗ್ಗಿ ಬರುತ್ತಿರುವಾಗಲೊಂದುಮನೆಯ ಗೋಡೆಯ
ಮೇಲೆ ಈ ದಿವಸ ಮದ್ಯವಿಸರ್ಜನೆ ವಿಷಯದಲ್ಲಿ ರಾತ್ರಿ ಉಪನ್ಯಾಸ, ಟಿಕೀಟುಗಳನ್ನು
ಕೋರತಕ್ಕಂತಾ ಮೆಂಬರುಗಳು ಒಳಕ್ಕೆ ಬಿಡಲ್ಪಡುವರು” ಎಂದು ಬರೆದಿರುವುದನ್ನೂ
ದಿನೋಡಿ ಒಂದುವೇಳೆ ಈ ಮನೆಯೇ ಆಗಿರಬಹುದೋ ಎಂದು ಯೋಚಿಸಿ ಏನೇ ಆಗಲಿ
ಈ ರಾತ್ರಿ ಇಲ್ಲಿಗೇ ಬಂದು ಪರೀಕ್ಷೆ ಮಾಡೋಣವೆಂದು ಹೇಳಿಕೊಂಡು ಗೋವಿಂದನ
ಮನೆಗೆ ಹಿಂದಿರುಗಿ ಬಂದನು.
ಅಲ್ಲಿಗೆ ಬಂದಕೂಡಲೇ ಗೋವಿಂದನು ಒಂದು ಕಾಗದವನ್ನು ತಂದುಕೊ
ಟ್ಟನು, ಅದು ವಸಂತಪುರದಿಂದ ಬಂದಿದ್ದಿತು. ಒಡೆದು ನೋಡಲು ಸೋಮಸುಂದರನು
ಬರೆದದ್ದಾಗಿತ್ತು. ಅದರಲ್ಲಿದ್ದದ್ದೇನಂದರೆ,
" ಅಯ್ಯಾ, ಇದರ ಸಂಗಡಲೇ ಮತ್ತೊಂದು ಕಾಗದವನ್ನೂ ಕಳುಹಿಸಿರುವೆನು.
ನನಗೇನೂ ತೋಚುವುದಿಲ್ಲವು. ನೀವೇ ನನ್ನನ್ನು ಕಾಪಾಡಬೇಕು. ನಾನು ಏನು ಬದಲು
ಬರೆಯಲಿ ? ನನ್ನ ಮಗನ ವಿಷಯವೇನಾದರೂ ತಿಳಿಯಬಂದಿದೆಯೋ ? ಯಾವದಕ್ಕೂ
ಕೂಡಲೇ ಜವಾಬು ಬರೆಯಿರಿ.
ಇತಿ ಸೋಮಸುಂದರ.
ಭಾಸ್ಕರನು, ಮತ್ತೊಂದು ಕಾಗದವನ್ನು ತೆಗೆದುಕೊಂಡು ಓದಲಾರಂಭಿಸಿದನು
ಸೋಮಸುಂದರರಾಯರಿಗೆ:
ಅಯ್ಯಾ !
ನಾವುಗಳು ಈ ಕಾಗದದಮೂಲಕ ನಿಮಗೆ ತಿಳಿಯಪಡಿಸುವುದೇನಂದರೆ, ನಿಮ್ಮ
ಪುತ್ರನು ಜೀವಂತನಾಗಿರುವನು. ಇನ್ನೇನು ಸ್ವಲ್ಪ ದಿವಸದಲ್ಲೇ ಅವನು ಒಬ್ಬ
ಋತುಮತಿಯಾದ ಕನೈಯನ್ನು ವಿವಾಹ ಮಾಡಿಕೊಳ್ಳಲು ಕಾದಿರುತ್ತಾನೆ. ನಾವು
ಗಳು ಶಾಸ್ತ್ರಕಾರರನ್ನು ವಿಚಾರಿಸಿನೋಡುವಲ್ಲಿ ಅರ್ಧದಲ್ಲಿ ನಿಂತುಹೋದ ಮದುವೆಯು,
ಮದುವೆಯು ನಡೆಯದಹಾಗೇ ಆಯಿತೆಂದು ತಿಳಿದುಬರುತ್ತದೆ. ಆದ್ದರಿಂದ ನಿಮ್ಮ
೨೯---------------------------------------------------------------------
ಮಧುಸೂದನ 29
ಮಗನಿಗೂ ತ್ರಿಯಂಬಕಶಾಸ್ತ್ರಿಗಳ ಪುತ್ರಿಗೂ ಸಂಬಂಧವೇನೂ ಇಲ್ಲವು. ಆದರೆ
ನೀವು ವಿವಾಹವು ಸಂಪೂರ್ಣವಾಗಿ ನೆರವೇರಿತೆಂದೇ ಹೇಳಿದಾಗ ತಿಳಿಯಬಂದಿತು.
ಅದು ತಪ್ಪು. ನಿಮ್ಮ ಪುತ್ರನೂ ಅದಕ್ಕೆ ಒಪ್ಪುವುದಿಲ್ಲ. ಆದ್ದರಿಂದ ಕೂಡಲೇ ತ್ರಿಯಂ
ಬಕಶಾಸ್ತ್ರಿಗಳಿಗೆ ಕಾಗದಾಬರದು ಅವರ ಮಗಳು ಮತ್ಯಾರಿಗಾದರೂ ಮದುವೆ
ಮಾಡಿಕೊಡುವಂತೆ ತಿಳಿಸಿರಿ. ನಾವು ಕೇಳದಿದ್ದರೂ ನಿಮ್ಮ ಪುತ್ರನು ತಾನಾಗಿಯೇ
ಒಬ್ಬ ಋತುಮತಿಯಾದ ಕನೈಯನ್ನು ಇನ್ನು ಕೆಲವು ದಿವಸಗಳಲ್ಲಿ ವಿವಾಹವಾಗಬೇ
ಕೆಂದಿರುತ್ತಾನೆ. ನೀವು ಇದನ್ನು ತಪ್ಪಿಸಲಾರಿರಿ, ನೀವು ನಿಮ್ಮ ಪುತ್ರನನ್ನು ಕಂಡುಹಿ
ಡಿಯಲು ಏನು ಪ್ರಯತ್ನ ಮಾಡಿದರೂ ಸಾರ್ಧಕವಾಗಲಾರದು. ನೀವು ಪೋಲಿಸಿನವರಿಗೆ
ಹೇಳಿ ಮಾಡಿದ್ದೇನು ? ಇನ್ನೂ ಪ್ರಯತ್ನ ಮಾಡಬೇಕೆಂದಿದ್ದರೆ ಆ ಆಲೋಚನೆಯನ್ನು
ತ್ಯಜಿಸಿರಿ. ಹಾಗೇನಾದರೂ ಪತ್ತೇದಾರರನ್ನು ಕರಿಸಿ ಪ್ರಯತ್ನ ಮಾಡಿದ್ದೇಆದರೆ
" ಹುಷಾರ್ "ನಿಮ್ಮ ಪುತ್ರನ ಸೌಖ್ಯಕ್ಕೆ ಕುಂದು ಬರುವುದು. ಎಚ್ಚರಿಕೆ.
ಇತಿ, ನಾವುಗಳು.
ಈ ರೀತಿಯಾಗಿ ಬರೆದಿದ್ದ ಕಾಗದವನ್ನು ಓದಿ ಮುಗಿಸಿದನಂತರ ಭಾಸ್ಕರನು ನಗುತ್ತಾ
ಸೋಮಸುಂದರನು ಈ ಕಾಗದವನ್ನು ನೋಡಿ ಬಹಳ ಭಯಪಟ್ಟರಬೇ
ಕೆಂದು ಯೋಚಿಸಿ ತಕ್ಷಣವೇ ಸೋಮಸುಂದರನಿಗೆ " ಭಯಪಡಬೇಡಿ ಸ್ವಲ್ಪ
ಕಾಲ ದಲ್ಲೇ ಎಲ್ಲಾ ವಿಷಯಗಳೂ ಹೊರಕ್ಕೆ ಬರುವವು. ತ್ರಿಯಂಬಕರಾಗಳಿಗೇನೂ
ಕಾಗದ ಬರೆಯಬೇಡಿ" ಎಂದು ಒಂದು ಕಾಗದವನ್ನು ಬರೆದು ಆ ದಿವಸದ ಟಪ್ಪಾ
ಲಿಗೇ ಹಾಕಿಬಿಟ್ಟನು.
ಸಾಯಂಕಾಲವಾದಮೇಲೆ ಭಾಸ್ಕರನು ಹಿಂದಲದಿವಸದಾಗೆಯೇ ಉಡು
ಪನ್ನು ಧರಿಸಿ ಗೋವಿಂದನಿಗೆ ಹೇಳಬೇಕಾದ ವಿಷಯಗಳನ್ನೆಲ್ಲಾ ಹೇಳಿಬಿಟ್ಟು ಒಂದು
ಗಾಡಿಯನ್ನು ಬಾಡಿಗೆಗೆ ಮಾಡಿಕೊಂಡು ಕಾಳೀಬೀದಿಗೆ ಹೋಗಿ ಅಲ್ಲಿ ಆ ಗಾಡಿಯನ್ನು
ಅಲ್ಲೇ ಕಾದಿರುವಹಾಗೂ ಸ್ವಲ್ಪ ಹೊತ್ತಾದಮೇಲೆ ತಾನು ಒಬ್ಬ ಕುಡುಕನನ್ನು ಕರ
ದುಕೊಂಡು ಬಂದು ಗಾಡಿಯಲ್ಲಿ ಕೂರಿಸುವಹಾಗೂ, ಅವನನ್ನು ಗೋವಿಂದನ ಮನೆಗೆ
ಕರೆದುಕೊಂಡುಹೋಗಿ ಅಲ್ಲೇ ಕಾದಿರುವಹಾಗೂ ಆಮೇಲೆ ಪ್ರನಾ ಕಾಳೀಬೀದಿಗೆ
ಬರಬೇಕಾಗುವುದೆಂದೂ ಹೇಳಲು ಆ ಗಾಡಿಯವನು ಇಷ್ಟಈ ಹತ್ತು ರೂಪಾಯಿ
ಬಾಡಿಗೇ ಕೇಳಲು ಅದನ್ನು ಕೊಡುವುದಾಗಿಯೂ ಅದರಮೇಲೆ ಇನ್ನೂ ಇನಾಮನ್ನು
ಕೊಡುವುದಾಗಿಯೂ ಹೇಳಿ ಈ ವಿಷಯಗಳನ್ನು ಯಾರಿಗೂ ಹೇಳಕೂಡದಂತಲೂ
ನಾನು ಒಬ್ಬ ಪತ್ತೇದಾರನೆಂದೂ ಹೇಳಿ ಆ ಗಾಡಿಯ ನಂಬರು ಮುಂತಾದ್ದನ್ನು ತೆಗೆ
೩೦---------------------------------------------------------------
30 ಕಾದಂಬರಿ ಸಂಗ್ರಹ
ದುಕೊಂಡು ಪುನಹಾ ಅವನನನ್ನು ಎಚ್ಚರಿಸಿಬಿಟ್ಟು ಮದ್ಯದಂಗಡಿಯನ್ನು ಹೊಕ್ಕನು.
ಈ ದಿವಸ ಭಾಸ್ಕರನು ಕುಡಿದವನಂತೆ ನಟಿಸದೆ ನೆಟ್ಟಗೆ ಒಳಕ್ಕೆ ಹೋಗಿ
ಸುತ್ತಲೂ ನೋಡಲು ಹರಿಚಂದ್ರನು ಮೊದಲನೇದಿವಸದಲ್ಲಿ ಕುಳಿತಿದ್ದ ಸ್ಥಳದಲ್ಲೇ
ಕುಳಿತಿರುವುದನ್ನು ನೋಡಿಕೊಂಡು ಅವನನ್ನರಿಯದವನಹಾಗೆ ಬೇರೇ ಒಂದು ಕಡೆ ಕುಳಿ
ತುಕೊಂಡನು. ಇವನು ಬಂದದ್ದನ್ನು ನೋಡಿದ ಹರಿಚಂದ್ರನು ನಿನ್ನೆ ದಿವಸ ಬಂದಿದ್ದ
ಮನುಷ್ಯನು ಇವನೇ ಎಂದು ತಿಳಿದು ಅವನನ್ನು ಬರುವಹಾಗೆ ಕರೆದನು, ಭಾಸ್ಕರನು
ಸಮೀಪಕ್ಕೆ ಹೋಗಿ ಕರೆಯಲು ಕಾರಣವೇನೆಂದು ಕೇಳಿದನು. ಅದಕ್ಕೆ ಹರಿಚಂದ್ರನು
ಇವನು ಎಲ್ಲಾ ವಿಷಯಗಳನ್ನೂ ಮರೆತುಬಿಟ್ಟಿದ್ದಾನೆಂದು ತಿಳಿದು ಅಯ್ಯಾ ನೀನು
ನೀಲಕಂಠಬಾಬುವಲ್ಲವೇ ?” ಎಂದು ಕೇಳಿದನು.
ಭಾಸ್ಕರ: -ಹೌದು ನನ್ನ ಹೆಸರು ನೀಲಕಂಠಬಾಬು-ಆದರೆ ನನ್ನ ಹೆಸರು
ನಿನಗೆ ಹೇಗೆ ತಿಳಿಯಿತು ?
ಹರಿಚಂದ್ರ:-ನಿನ್ನೆ ದಿವಸ ನೀನು ಇಲ್ಲಿಗೆ ಬಂದು ಕುಡಿದು ನಿನ್ನ ಹೆಸರನ್ನು
ಹೇಳಲಿಲ್ಲವೇ ? ಮತ್ತೇರಿತ್ತಾದ್ದರಿಂದ ಆಗ ನಡೆದ ವಿಷಯಗಳನ್ನು ಮರೆತುಬಿಟ್ಟಿರುವಿ.
ನೀನು ನಿನ್ನೆ ದಿವಸ ನನಗೆ ಕೊಡಿಸಿದ ಮದ್ಯಕ್ಕಾಗಿ ನಿನಗೆ ವಂದನೆಯನ್ನು ಸಮ
ರ್ಪಿಸುತ್ತೇನೆ.
ಭಾಸ್ಕರ:-ಏನೋ ಸ್ವಾಮಿ ! ನನಗೇನೂ ಜ್ಞಾಪಕವಿಲ್ಲವು. ನಾನು ಇಲ್ಲೇ
ಇರುವ ಮೈದಾನದಲ್ಲಿ ಬಿದ್ದಿದ್ದು ಜ್ಞಾನಬಂದಮೇಲೆ ಎದ್ದು ಹೋದದ್ದು ಮಾತ್ರ
ಜ್ಞಾಪಕವಿದೆ. ನಾನು ನನ್ನ ಹೆಸರನ್ನು ಹೇಳಿದ್ದ ಮೇಲೆ ನಿಮ್ಮ ಹೆಸರನ್ನು ನೀವು ಹೇಳಿದ
ಜ್ಞಾಪಕವಿಲ್ಲವಲ್ಲಾ. ಬೇಕಾಗಿದ್ದರೆ ಈ ದಿವಸವೂ ಬೇಕಾದಷ್ಟು ಮದ್ಯವನ್ನು ಕುಡಿ
ಡಿಸುತ್ತೇನೆ.
ಹರಿಚಂದ್ರ:-ನನ್ನ ಹೆಸರನ್ನು ಹೇಳಲು ನನಗಿಷ್ಟವಿಲ್ಲ. ಮದ್ಯವನ್ನು
ಕುಡಿಯೋಣ, ನನಗೆ ಬಹಳ ಅವಸರವಾದ ಕೆಲಸವೊಂದಿದೆ. ಆಗಲೇ ಎಂಟು ಗಂಟೆಯಾ
ಯಿತು. ನಾನು ಹೋಗಬೇಕು.
ಭಾಸ್ಕರನು:-ಮದ್ಯವನ್ನು ತಾನೇ ತರುವುದಾಗಿ ಹೇಳಿ ಮದ್ಯವನ್ನು ಮಾರು
ವನ ಬಳಿಗೆ ಹೋಗಿ " ಅಯ್ಯ ! ಆಗಾಗ್ಗೆ ನಾನಾ ವಿಧವಾದ ಮದ್ಯಗಳ ಹೆಸರನ್ನು
ಹೇಳಿ ಅವುಗಳ ಗುಣವನ್ನು ಹೊಗಳುತ್ತಾ ಇರು. ನಾನು ಕರೆದಾಗಲೆಲ್ಲಾ ಬೇರೆಬೇರೆ
ವಿಧದ ಮದ್ಯಗಳನ್ನು ತೆಗೆದುಕೊಂಡುಬಾ, ಇದೋ ಇಲ್ಲಿ ಐವತ್ತು ರೂಪಾಯಿಗಳಿವೆ”
ಎಂದು ಹೇಳಿ ಮೂರು ಶೀಸೆ ವ್ಹಿಸ್ಕಿ ಎಂಬುದನ್ನು ತೆಗೆದುಕೊಂಡುಬಂದು ಬಟ್ಟಲುಗ
೩೧----------------------------------------------
ಮಧುಸೂದನ 31
ಳಲ್ಲಿ ಸುರಿದು ಕೊಟ್ಟು ತಾನೂ ಕುಡಿಯುವವನಂತೆ ನಟಿಸಿದನು. ಹರಿಚಂದ್ರನು ಭಾಸ್ಕ
ರನ ಉದಾರತ್ವಕ್ಕಾಗಿ ಅವನನ್ನು ವಂದಿಸುತ್ತಾ ಕೊಟ್ಟಿದ್ದನ್ನೆಲ್ಲಾ ಕುಡಿದು ಇನ್ನು ಸಾಕು
ಹೋಗೋಣವೆಂದು ಹೇಳಿದನು.
ಅಷ್ಟು ಹೊತ್ತಿಗೆ ಆ ಮದ್ಯದಂಗಡಿಯ ಯಜಮಾನನು ಅಲ್ಲಿಗೆ ಬಂದು ಭಾಸಸ್ಕ
ರನನ್ನು ಕುರಿತು ( ಅಯ್ಯಾ ಈಗತಾನೇ ನನ್ನ ಸೇವಕನು ಹೊಸದಾಗಿ ಬಂದ ಪ್ರಾಂಸ್
ದೇಶದ ಹಳೆಯ ದ್ರಾಕ್ಷಾರಸವನ್ನು ತಂದಿರುತ್ತಾನೆ. ಅದರ ಗುಣವನ್ನು ನಾನು
ಇಷ್ಟೆಂದು ಹೇಳಲಾರೆನು. ಬಹಳ ದೊಡ್ಡ ಮನುಷ್ಯರೆಲ್ಲರೂ ಅದನ್ನು ನನ್ನಿಂದ ತರಿಸಿ
ಕುಡಿಯುತ್ತಾರೆ. ನಿಮಗಾಗಿ ಮೂರು ಶೀಸೆಗಳನ್ನು ತಂದು ಕೊಡಲಾ” ಎಂದು
ಕೇಳಿದನು. ಭಾಸ್ಕರನ ಹರಿಚಂದ್ರನ ಮುಖವನ್ನು ನೋಡಲು ಅವನು ತರಿಸೆಂದು ತಲೆ
ಯನ್ನಲ್ಲಾಡಿಸಿದನು. ಭಾಸ್ಕರನು ಮದ್ಯದಂಗಡಿಯವನನ್ನು ಮೂರು ಶೀಸೆಗಳನ್ನು ತರು
ವಹಾಗೆ ಹೇಳಿದನು. ಅವನು ತರುವುದಕ್ಕೆ ಹೋದನು. ಅಷ್ಟರಲ್ಲೇ ಭಾಸ್ಕರನು ತನ್ನ
ಬಳಿಯಲ್ಲಿಟ್ಟು ಕೊಂಡಿದ್ದ ಒಂದು ಪುಡಿಯನ್ನು ತೆಗೆದು ಯಾರೂ ಕಾಣದಹಾಗೆ ಒಂದು
ಬಟ್ಟಲಿಗೆ ಹಾಕಿ ಸಿದ್ಧವಾಗಿಟ್ಟುಕೊಂಡಿದ್ದನು. ಮದ್ಯದ ಶೀಸೆಗಳು ಬಂದಕೂಡಲೇ
ಆ ಬಟ್ಟಲಿಗೆ ಅದನ್ನು ಸುರಿದು ಹರಿಚಂದ್ರನಿಗೆ ಕೊಟ್ಟು ತಾನೂ ಕುಡಿಯುವಂತೆ ನಟಿ
ಸುತ್ತಾ ಆಹಾ! ಎಷ್ಟು ರುಚಿಯಾಗಿದೆ. ಎಂದು ಕೂಗುತ್ತಾ ಬಟ್ಟಲುಗಳಾದಮೇಲೆ ಬಟ್ಟ
ಲುಗಳನ್ನು ತುಂಬಿ ಹರಿಚಂದ್ರನಿಗೂ ಕೊಡುತ್ತಾ ತಾನು ಕುಡಿಯುವಂತೆ ನಟಿಸುತ್ತಾ
ಬಂದನು. ಮದ್ಯದ ವೇಗವು ಹರಿಚಂದ್ರನ ತಲೆಯನ್ನೇರಿತು. ಉನ್ಮಾದಾವಸ್ಥೆಯು ಬಂದಿತು,
ಅದನ್ನರಿತ ಭಾಸ್ಕರನು ತಾನೂ ಮತ್ತೇರಲ್ಪಟ್ಟವನಹಾಗೆ ಮಾತನಾ
ಡುತ್ತಾ ಮದ್ಯವು ಮುಗಿದುಹೋಗಲು ಇನ್ನೂ ಮದ್ಯ ಎಂದು ಕೂಗಿದನು. ಕಾದು
ಕೊಂಡಿದ್ದ ಮದ್ಯದಂಗಡಿಯವನು ಇನ್ನೆರಡು ಶೀಸೆಗಳನ್ನು ತಂದಿಟ್ಟನು. ಹರಿಚಂದ್ರನು
ಅವುಗಳನ್ನೂ ಕುಡಿದುಬಿಟ್ಟು ಕುಣಿಯತೊಡಗಿದನು. ಆಗ ಭಾಸ್ಕರನು " ವಹವಾ !
ಇದೀಗ ಒಳ್ಳೆಯಮದ್ಯ !! ಅಲ್ಲವೇ? ಅಣ್ಣಾ ನೀನೇಹೇಳು ಹೊತ್ತಾಗಲಿಲ್ಲವೆ? ಹೋಗೋಣ
ನೀನು-ನೀನೆಲ್ಲಿಗೋ ಹೋಗಬೇಕೆಂದೆಯಲ್ಲಾ? ಆಗಲಿ ಹೋಗೋಣ. ಎಲ್ಲಿ ಗಣ್ಣಾ
ಹೋಗುವುದು ?
ಹರಿಚಂದ್ರ;-ಅಹಹ ! ಹಿ ! ಹಿ! ಓಹೋ ಹೊತ್ತಾಯಿತೆ ? ಹತ್ತು ಗಂಟೆಗೆ ಸರಿ
ಯಾಗಿ ಮೀಟಿಂಗ್, ನಾನು ಆಹಾ ಹವುದು ನಾನು ಬಿ. ಎ. ಪರೀಕ್ಷೆ ಕೊಟ್ಟಿಲ್ಲವೇ ?
ನಾನು ನಾಳೇದಿವಸ ಒಬ್ಬ ವಿಧವೆಯನ್ನು ಮದುವೆಯಾಗುತ್ತೇನೆ. ನೀವೆಲ್ಲಾ
ಮೂಢರು-ಆಹಾ ! ನಾವು ಪೋಲೀಸಿನವರನ್ನೆಲ್ಲಾ ಶಿಕ್ಷಿಸಬೇಕು. ಸರ್ಕಾರವಂತೆ--
೩೨----------------------------------------------
32 ಈ ಕಾದಂಬರಿ ಸಂಗ್ರಹ
ಎಲ್ಲಿಯ ಸರ್ಕಾರ-ಬನ್ನಿ -ನಾವೆಲ್ಲಾ ಸರ್ಕಾರವನ್ನೇ ತಲೆಕೆಳಗುಮಾಡೋಣ, ಓಹೋ
ನಮ್ಮ ಹೊಸ ಮನುಷ್ಯನಲ್ಲಿ ಎಂದು ಹೇಳುವನು'' ಎಲ್ಲಿ ಇನ್ನಿ ಷ್ಟು ಮದ್ಯ ಕೊಡು
ಹೊತ್ತಾಯಿತಾ ನಾನು ಹೊರಡುತ್ತೇನೆ (ಎಂದು ಬೀದಿಗೆ ಬಂದು ಭಾಸ್ಕರನು
ಕೊಟ್ಟಿದ್ದ ಪುಡಿಯ ಮಾತ್ರೆಯಿಂದ ಜ್ಞಾನ ಹೊಗಿ ನೆಲದಮೇಲೆ ಉರುಳಿದನು.)
ಭಾಸ್ಕರನು:- ಸುತ್ತಲೂ ನೋಡಿ ಯಾರೂ ಇಲ್ಲದಿರುವುದನ್ನು ತಿಳಿದು ದೂರ
ದಲ್ಲಿ ನಿಂತುಕೊಂಡಿದ್ದ ಗಾಡಿಯನ್ನು ಬರುವಂತೆ ಸನ್ನೆ ಮಾಡಿದನು. ಅವನು ಗಾಡಿ
ಯೊಡನೆ ಬಂದಕೂಡಲೇ ಇಬ್ಬರೂ ಸೇರಿ ಹರಿಚಂದ್ರನನ್ನು ಗಾಡಿಯೊಳಕ್ಕೆ ಎತ್ತಿ
ಕೂರಿಸಿ ಭಾಸ್ಕರನು ತಾನೂ ಕುಳಿತುಕೊಂಡು ಬಾಗಿಲನ್ನೂ ಕಿಟಕಿಗಳನ್ನೂ ಮುಚ್ಚಿ
ಗಾಡಿಯನ್ನು ಮೆಲ್ಲಗೆ ಹೊಡೆಯುವಹಾಗೆ ಹೇಳಿದನು. ಗಾಡಿಯು ಹೋಗುತ್ತಿದ್ದ
ಹಾಗೆಯೇ ಭಾಸ್ಕರನು ಹರಿಚಂದ್ರನ ಮೇಲಿನ ಉಡುಪುಗಳನ್ನು ಕಳಚಿಕೊಂಡು ತಾನು
ಧರಿಸಿ ತನ್ನ ಮೀಶೆ ಮುಂತಾದವುಗಳನ್ನು ಅವನದರಹಾಗೇ ಮಾಡಿಕೊಂಡು ಗಾಡಿ
ಯನ್ನು ನಿಲ್ಲಿಸುವಹಾಗೆ ಹೇಳಿ ತಾನು ಕೆಳಕ್ಕಿಳಿದು ಗಾಡಿಯನ್ನು ಗೋವಿಂದನಮನೆಗೆ
ತೆಗೆದುಕೊಂಡುಹೋಗುವಹಾಗೆ ಹೇಳಿದನು. ಗಾಡಿಯು ಸ್ವಲ್ಪ ಹೊತ್ತಿಗೆಲ್ಲಾ ಗೋವಿಂ
ದನ ಮನೆಯನ್ನು ಸೇರಿತು. ಅದನ್ನೇ ಕಾದಿದ್ದ ಗೋವಿಂದನು ತನ್ನ ಸೇವಕನ ಸಹಾಯ
ದಿಂದ ಹರಿಚಂದ್ರನನ್ನು ಒಳಕ್ಕೆ ಸಾಗಿಸಿ ಅವನನ್ನೊಂದುಕಡೆ ಮಲಗಿಸಿ ಗಾಡಿಯವ
ನನ್ನು ಕಾದಿರುವಹಾಗೆ ಅಪ್ಪಣೆಮಾಡಿದನು.
ಇತ್ತ ಗಾಡಿಯಿಂದಿಳದ ಭಾಸ್ಕರನು ಗೋಪ್ಯವಾದೊಂದು ಸ್ಥಳಕ್ಕೆ ಹೋಗಿ
ಅಲ್ಲಿ ತನ್ನ ಚೀಲದಲ್ಲಿ ತುಂಬಿಕೊಂಡಿದ್ದ ಮದ್ಯವನ್ನೆಲ್ಲಾ ಸುರಿದುಬಿಟ್ಟು ಒಂದು ಕನ್ನ
ಡಿಯಿಂದ ದೀಪದ ಬೆಳಕಿನಲ್ಲಿ ತನ್ನ ಆಕಾರವನ್ನು ನೋಡಿಕೊಳ್ಳಲು ಹುಕಂದ್ರನಹಾಗೇ
ಕಂಡುಬರಲು ಇನ್ನು ಭಯವಿಲ್ಲ ಎಂದು ಯೋಚಿಸಿ ನೆಟ್ಟಗೆ ತಾನು ಬೆಳಗ್ಗೆ ನೋಡಿ
ಕೊಂಡು ಬಂದಿದ್ದ ಮನೆಯ ಬಳಿಗೆ ಹೋದನು. ಆಗಲೇ ಅನೇಕರು ಆ ಮನೆಯನ್ನು
ಹೊಗುತ್ತಿದ್ದರು. ಭಾಸ್ಕರನು ತಾನೂ ಸಹಾ ಹಳಬನಂತೆ ಬಾಗಿಲಿಗೆ ಬರಲು ಅಲ್ಲಿದ್ದ
ತರುಣರಿಬ್ಬರು ಹರಿಚಂದ್ರಾ! ಗುಂಡಿಯೆಲ್ಲಿ? ನಿನಗೆಷ್ಟು ದಿವಸ ಹೇಳುವುದು' ಎಂದರು.
ಕೂಡಲೇ ಭಾಸ್ಕರನು ತನ್ನ ಕಿಸೆಯಲ್ಲಿಟ್ಟುಕೊಂಡಿದ್ದ ಗುಂಡಿಯನ್ನು ತೋರಿಸಲು
ಅವರು ಇವನನ್ನು ಒಳಕ್ಕೆ ಬಿಟ್ಟು ಬಿಟ್ಟರು.
ಆಗಲೇ ಹತ್ತು ಗಂಟೆಯಾಗಿತ್ತು. ಮೆಂಬರುಗಳೆಲ್ಲಾ ಬಂದು ಸೇರಿದ್ದರು. ಇನ್ನು
ಬರುವವರಾರೂ ಇಲ್ಲವೆಂದು ಹೊರಬಾಗಲು ಹಾಕಲ್ಪಟ್ಟಿತು. ನಮ್ಮ ಪಾಠಕರಿಗೆ ಈ
ಮನೆಯು ಹೊಸದಲ್ಲ ವಾದ್ದರಿಂದ ಅದರ ವಿಷಯವಾಗಿ ಹೆಚ್ಚೇನೂ ಬರೆಯಬೇಕಾ
೩೩------------------------------------------------
ಮಧುಸೂದನ 33
ದದ್ದಿಲ್ಲ. ಇಲ್ಲಿ ನಡೆಯುವ ವಿಷಯಗಳು ಸ್ವಲ್ಪ ಮಾತ್ರವೂ ಹೊರಗೆ ಕೇಳಿಸುತ್ತಿರ
ಲಿಲ್ಲ. ಎಲ್ಲರೂ ಮದ್ಯಪಾನನಿಷೇಧಸಂಬಂಧವಾದ ಉಪನ್ಯಾಸವೆಂದೇ ತಿಳಿದುಕೊಂಡಿ
ದ್ದರು, ಎಂ ಸಂಘದ ಮುಖ್ಯಸ್ಥನು ಅಗಾಸನಾಧಿಪತಿಯಾಗಿದ್ದನು, ಸಭೆಯ ಪ್ರಾರಂ
ಭದಲ್ಲಿ ಅವನು ಅಲ್ಲಿದ್ದವರನ್ನು ಕುರಿತು " ಸಹೋದರಿರಾ ! ಈ ದಿವಸದ ಮಾಟಿಂಗ್
ಯಾವಕಾರಣಕ್ಕಾಗೆಂದು ನಿಮಗೆಲ್ಲರಿಗೂ ತಿಳಿದೇ ಇದೆ. ನಮ್ಮ ಮೇಲೆ ಪೊಲೀಸಿನವ
ರಿಗೂ, ಸರ್ಕಾರದವರಿಗೂ ಯಾವದೋ ಒಂದು ವಿಧವಾದ ಸಂದೇಹವುಂಟಾಗಿರುವು
ದಾಗಿ ತಿಳಿಯಬಂದಿದೆ. ಅದಕ್ಕೇನುಕಾರಣವೋ ತಿಳಿಯದು. ಸುಮಾರು ನಾವು ಈಗ
ಒಂದು ತಿಂಗಳ ಹಿಂದೆ ನಡೆಸಿದ್ದ ದರೋಡೆಯ ವಿಷಯದಲ್ಲೇನಾದರೂ ಅವರಿಗೆ ಸಂಶ
ಯವಿದೆಯೋ ಏನೋ ತಿಳಿಯದು? ನಾವು ಹೇಗಾದರೂ ಮಾಡಿ ಇನ್ನೊಂದು ತಿಂಗಳ
ಕಾಲ ಕಳೆಯಬೇಕಾಗಿದೆ. ಆದ್ದರಿಂದ ನೀವೆಲ್ಲಾ ಹೆಚ್ಚಾಗಿ ಬೀದಿಯಲ್ಲಿ ತಿರುಗಾಡ
ಬೇಡಿ : ಮತ್ತು ಹಾಗೆ ಬೀದಿಯಲ್ಲಿ ಹೋದರೂ ಜೊತೆಯಲ್ಲಿ ರಿವಾಲ್ವರುಗಳನ್ನು
ತೆಗೆದುಕೊಂಡು ಹೋಗಬೇಡಿ. ಮದುವೆಯು ನೆರವೇರಿ ನಮ್ಮಿಷ್ಟವು ಕೈಗೂಡಿಬಿಟ್ಟರೆ
ಸಾಕು.” ಎಂದು ಹೇಳಿ ಕುಳಿತುಕೊಂಡನು.
ಆಗ ಸಮೀಪದಲ್ಲೇ ಕುಳಿತಿದ್ದ ಈಶ್ವರಲಾಲನೆಂಬವನೊಬ್ಬನು ಮಾತನಾಡುವು
ದಕ್ಕಾಗಿ ಎದ್ದು ನಿಂತನು. ಇವನು ಸರಿಯಾಗಿ ಆರುವರಡಿಗಳ ಎತ್ತರವೂ ಅದಕ್ಕೆ ತಕ್ಕ
ಗಾತ್ರವೂ ಉಳ್ಳ ರಾಕ್ಷಸನಾಗಿದ್ದನು. ಅವನು ಅಲ್ಲಿದ್ದವರನ್ನು ಕುರಿತು " ಸಹೋದ
ರರಾ! ನೀವೆಲ್ಲಾ ನಮ್ಮ ಪ್ರೀತಿಪಾತ್ರರಾದ ಯಜಮಾನರ ಮಾತನ್ನು ಕೇಳಿರುವಿರಿ.
ಇಷ್ಟು ದಿವಸವೂ ಹೆದರದಿದ್ದ ನಾವು ಈಗತಾನೇ ಯಾಕೆ ಹೆದರಬೇಕು. ಸರ್ಕಾರದ
ವರೂ ನಮ್ಮನ್ನೇನೂ ಮಾಡಲಾರರು. ನಿಮ್ಮಲ್ಲಿ ಹಾಗೇನಾದರೂ ಬಹಳ ಹೆದರಿಕೊಂ
ಡಿರತಕ್ಕವರಿದ್ದರೆ ನಮ್ಮ ಗುಪ್ತಗೃಹದಲ್ಲಿ ಸ್ವಲ್ಪ ದಿವಸಗಳ ಮಟ್ಟಿಗೆ ವಾಸಮಾಡುತ್ತಿರಿ.
ಅದರೊಳಗಾಗಿಮತ್ತೆರಡು ಮಂದಿ ಸಾಹುಕಾರರನ್ನು ಲೂಟಿಮಾಡಿಕೊಂಡು ಆ ಹಣ
ದಿಂದ ಬೇರೆ ಬೇರೆ ಕಡೆ ಸುಖವಾಗಿ ಆ ಮೇಲೆ ವಾಸಮಾಡುತ್ತಿರಬಹುದು,'' ಎಂದು
ಹೇಳಿ ಕುಳಿತನು, ಅಗ್ರಾಸನಾಧಿಪತಿಯು " ಹರಿಚಂದ್ರ! ನೀನೇನು ಹೇಳುವಿ! ಎಂದು
ಕೂಗಿದನು.” ಭಾಸ್ಕರನು ಥಟ್ಟನೆ ಭಯಪಟ್ಟರೂ ಧೈರ್ಯವನ್ನು ತಂದುಕೊಂಡು
" ಸಹೋದರರಾ! ನಾನು ಇನ್ನು ಹೆಚ್ಚಾಗಿ ಏನು ಹೇಳಲಿ? ಆದರೆ ನಮ್ಮ ಸಂಘವು
ಜಯವನ್ನು ಹೊಂದಬೇಕಾಗಿದ್ದರೆ ದೊಡ್ಡ ಮನುಷ್ಯರ ಸಹಾಯವಿರಬೇಕು. ಇನ್ನು
ಸ್ವಲ್ಪ ದಿವಸಗಳಲ್ಲೇ ಲಾಯರ್ ಕಾಳಿಕಿಶೋರರು ತಮ್ಮ ಮಗಳಾದ ಆನಂದಿಯೆಂಬ
ವಿಧವೆಯನ್ನು ನನಗೆ ಮದುವೆ ಮಾಡಿಕೊಡುತ್ತಾರೆ, ಆ ಮೇಲೆ ನಮಗೆ ಅವರ ಸಹಾ
೩೪------------------------------------------------
34 ಕಾದಂಬರಿ ಸಂಗ್ರಹ
ಯವು ಸಿಕ್ಕುತ್ತದೆ. ಇದೆಲ್ಲಾ ಇರಲಿ, ಸರ್ಕಾರದವರಿಂದಲೂ ಪೊಲೀಸಿನವರಿಂದಲೂ
ನಮಗೇನು ಅಪಾಯಬರಬಲ್ಲದು ? ನಾವು ಪ್ರಯತ್ನ ಮಾಡಿದರೆ ಸರ್ಕಾರದವರನ್ನು
ತಲೆಕೆಳಗು ಮಾಡಬಹುದು. ಪೊಲೀಸಿನವರನ್ನೆಲ್ಲಾ ಕೊಲ್ಲಬಹುದು (ಆಗ ಅಲ್ಲಿದ್ದ
ವರು ಹರಿಚಂದ್ರಾ ! ಇದೇನು ವಿಪರೀತ ? ಕುಡಿದಿದ್ದೀಯೋ? ಎಂದು ಕೂಗಿದರು).
ಆಗ ಹರಿಚಂದ್ರನು (ಭಾಸ್ಕರ) ಇಲ್ಲ. ಇಲ್ಲ, ನಾನು ಕುಡಿದಿಲ್ಲ. ನಾವೇನು ಕೈಲಾಗ
ದವರೋ ? ನಾನೇನೋ ಕಲ್ಕತ್ತಾವನ್ನೇ ಬಿಟ್ಟು ಮತ್ತೆಲ್ಲಾದರೂ ಹೋಗಿ ನಮಗೆ
ಮಧುಸೂದನನು ಕೊಡುವ ಹಣದಿಂದ ಜೀವನ ಮಾಡಬೇಕೆಂದಿರುತ್ತೇನೆ. (ಅಗ್ರಾಸ
ನಾಧಿಪತಿಯು ಬಾಯಿನಮೇಲೆ ಬೆರಳಿಟ್ಟು ಹುಷಾರ್ ಎಂದು ಸನ್ನೆ ಮಾಡಿದನು.)
ಎಲ್ಲರೂ ಭಾಸ್ಕರನ ಉಪನ್ಯಾಸವು ಮುಗಿದ ಕೂಡಲೇ ಕೈತಟ್ಟಿ " ಬೇಷ್ ?”
ಇಂದು ಹರಿಚಂದ್ರನು ಕಷ್ಟಪಟ್ಟಿದ್ದಾನೆಂದು ಅವನ ಬೆನ್ನನ್ನು ಕೆಲವರು ತಟ್ಟಿದರು.
ಮತ್ತೆ ಕೆಲವರು (ಹರಿಚಂದ್ರಾ ! ಬೀದಿಯಲ್ಲೆಲ್ಲಾದರೂ ಈ ರೀತಿ ಮಾತನಾಡಿಯೇ)
ಕಾರಾಗೃಹವಾಸವು ಬರುವುದು ! ಎಂದು ಹೇಳಿದರು. ಆಗ ಅಗ್ರಾಸನಾಧಿಪತಿಯು
ಎದ್ದು ನಿಂತು ಮದುವೆಯು ಎಂಟುದಿವಸದಲ್ಲಿ ನಡೆಯುವುದು, ಹೆದರಿಕೆಯುಳ್ಳವರೆಲ್ಲಾ
ನಾಳೇದಿವಸದಿಂದ ಗುಪ್ತ ಗೃಹದಲ್ಲಿ ವಾಸಮಾಡಿ ! ಎಂದು ಹೇಳಿ ಸಭೆಯನ್ನು ಮುಗಿ
ಸಿದನು. ಎಲ್ಲರೂ ಹರಿಚಂದ್ರನನ್ನು ಹೊಗಳುತ್ತಾ ಬೀದಿಗೆ ಬಂದರು. ಅಲ್ಲಿ ಎಲ್ಲರ
ಕತ್ತಿಗೂ ಹೂವಿನ ಮಾಲೆಗಳು ಹಾಕಲ್ಪಟ್ಟವು. ಭಾಸ್ಕರನೂ ಹೊರಕ್ಕೆ ಬಂದು ವೇಗ
ವಾಗಿ ನಡೆದು ಗೋವಿಂದನ ಮನೆಯನ್ನು ಸೇರಿದನು. ಇವನನ್ನೇ ಎದುರುನೋಡು
ತಿದ್ದ ಗೋವಿಂದನು ಇವನನ್ನು ಕರೆದುಕೊಂಡು 'ರಿಚಂದ್ರನು ಮಲಗಿದ್ದ ಕೊಠಡಿಗೆ
ಹೋದನು. ಅಲ್ಲಿ ಭಾಸ್ಕರನು ಅವನ ಉಡುಪನ್ನು ಅವನಿಗೇನೆ ಹಾಕಿ ಕತ್ತಿಗೆ ಹೂವಿನ
ಮಾಲೆಯನ್ನೂ ಹಾಕಿ ಅವನನ್ನೆತ್ತಿಕೊಂಡು ಬಂದು ಗಾಡಿಯಲ್ಲಿ ಹಾಕಿಕೊಂಡು
ಕಾಳೀಬೀದಿಯ ಎಂಕೂಟದವರ ಮನೆಯ ಬಳಿ ಒಂದು ಮೂಲೆಯಲ್ಲಿ ಹಾಕಿಬಿಟ್ಟು
ಪುನಃ ಗೋವಿಂದನ ಮನೆಯನ್ನು ತಲಸಿ ಮಲಗಿ ನಿದ್ರೆಹೋದನು.
------
ಎಂಟನೆಯ ಅಧ್ಯಾಯ.
(ಪೋಲೀಸ್ ಅಧಿಕಾರಿಯ ಕೊಲೆ)
ಮಾರನೇದಿವಸ ಬೆಳಗ್ಗೆ ಹರಿಚಂದ್ರನು ಕಣ್ಣು ತೆರೆದು ನೋಡಲು ತಾನು
ಯಾವದೋ ಒಂದು ಮೂಲೆಯಲ್ಲಿ ಮಲಗಿರುವ ಹಾಗೆ ಕಾಣಬಂದಿತು. ಅಲ್ಲಿಗೆ
೩೫------------------------------------------------------
ಮಧುಸೂದನ 35
ತಾನು ಹೇಗೆ ಬಂದನೆಂಬುವುದು ಅವನಿಗೆ ಗೊತ್ತಾಗಲಿಲ್ಲ. ಕತ್ತಿನಲ್ಲಿ ಹೂವಿನ
ಮಾಲೆ ಇರಲು ಅದು ಹೇಗೆ ಬಂದಿತೆಂದು ಯೋಚಿಸಿದನು. ಅವನಿಗೆ ಯಾವದೂ
ಬಗೆ ಹರಿಯಲಿಲ್ಲ. ಮೆಲ್ಲಗೆ ಎದ್ದು ತಮ್ಮ ಸಂಘದ ಮನೆಯ ಬಳಿಗೆ ಹೋದನು.
ಅಲ್ಲಿದ್ದ ಇಬ್ಬರು ಮೆಂಬರುಗಳು “ ಹರಿಚಂದ್ರಾ ಇದೇನು ಬಂದದ್ದು, ರಾತ್ರಿ ನೀನು
ಮಾತನಾಡಿದ್ದನ್ನು ನೋಡಿ ನೀನು ಕುಡಿದಿದ್ದೀ ಎಂದೇ ಯೋಚಿಸಿದ್ದೆವು" ಎಂದು
ಹೇಳಿದರು.
ಹರಿಚಂದ್ರ:-ಏನು ? ರಾತ್ರಿ ಇಲ್ಲಿ ಮಾತನಾಡಿದೆನೇ ? ಏನೇನು ಹೇಳಿದನು ?
ನನಗಾವುದೂ ಜ್ಞಾಪಕವಿಲ್ಲವಲ್ಲ.
ಮೆಂಬರುಗಳು:- ಚೆನ್ನಾಗಿ ಹೇಳಿದೆ. ಹಾಗಾದರೆ ಖಂಡಿತವಾಗಿಯೂ ನೀನು
ಕುಡಿದಿದ್ದೀ, ಸರ್ಕಾರದವರಮೇಲೇ ತಿರಿಗಿಬೀಳಬೇಕೆಂದು ಹೇಳಿದೆಯಲ್ಲಾ ! ಕುಡಿದು
ಬೀದಿಯಲ್ಲೇನಾದರೂ ಹೇಳೀಯಾ ? ಹುಷಾರ್.
ಇತ್ತ ಭಾಸ್ಕರನು ಬೆಳಗಾದಕೂಡಲೇ ಎದ್ದು ಕಾಳಿಕೀಶೋರನೆಂಬ ಲಾಯರಿಗೆ
ಇಂತು ಕಾಗದ ಬರೆದನು, ನಿಮ್ಮ ಮಗಳನ್ನು ಹರಿಚಂದ್ರನಿಗೆ ಕೊಡಬೇಡಿ. ಏನಾದರೂ
ಕಾರಣ ಹೇಳುತ್ತಾ ನಿಧನಿಸುತ್ತಾ ಇರಿ. ಮುಂದಲಿಂದ ಎಲ್ಲಾ ವಿಷಯಗಳನ್ನೂ
ತಿಳಿಸುತ್ತೇನೆ. ಪತ್ತೇದಾರ ಭಾಸ್ಕರ
ಕಾಗದವನ್ನು ಬರೆದು ತಪ್ಪಾಲಿಗೆ ಹಾಕಿಬಿಟ್ಟು ತನ್ನ ಕೊಟಡಿಯಲ್ಲಿ
ಕುಳಿತುಕೊಂಡು ಯೋಚಿಸಲಾರಂಭಿಸಿದನು. " ಮಧುಸೂದನನೇನೋ - ಅವರ
ಕೈಯಲ್ಲಿ ಶಿಕ್ಕಿಬಿದ್ದಿದ್ದಾನೆ. ಆದರೆ ಅವನು ಎಲ್ಲಿದ್ದಾನೆಂಬುದೂ, ಏನುಮಾಡು
ತಿರುವನೆಂಬದೂ ತಿಳಿಯದು. ಎಲ್ಲವನ್ನೂ ತಿಳಿಯುವುದಕ್ಕೆ ಅವರ ಗುಪ್ತಗೃಹವನ್ನು
ಪ್ರವೇಶಮಾಡಲೇಬೇಕು. ಅಲ್ಲಿಗೆ ಹೇಗೆ ಹೋಗುವುದು. ? ಆದದ್ದಾಗಲಿ ! ನಮ್ಮ
ಹರಿಚಂದ್ರನಿದ್ದಾನೆ.
ಭಾಸ್ಕರನು ಆ ದಿವಸ ಸಾಯಂಕಾಲ ಹಿಂದಿನದಿನಗಳ ಹಾಗೆಯೇ ಮದ್ಯದಂಗ
ಡಿಗೆ ಹೋಗಿ ಹರಿಚಂದ್ರನನ್ನು ಮರಳುಮಾಡಿ ಅವನನ್ನು ಗೋವಿಂದನ ಮನೆಗೆ ಕರದು
ಕೊಂಡು ಬಂದು ಒಂದು ಕೊಠಡಿಯಲ್ಲಿ ಶೆರೆಹಾಕಿಬಿಟ್ಟು ತಾನು ಅವನ ಉಡುಪನ್ನು
ಧರಿಸಿಕೊಂಡು ಸಂಘದ ಗೃಹದ ಬಳಿಗೆ ಹೋಗಿ, ತಾನು ಗುಪ್ತಗೃಹದೊಳಕ್ಕೆ ಹೋಗ
ಬೇಕೆಂದು ಹೇಳಿದನು. ತಕ್ಷಣವೇ ಇವನನ್ನು ಕರೆದುಕೊಂಡುಹೋಗಿ ಅಲ್ಲಿದ್ದ ಒಂದು
ಕೊಠಡಿಯಲ್ಲಿ ಕೆಳಕ್ಕೆ ಹಾಸಿದ್ದ ಜಮಖಾನವನ್ನು ತೆಗೆದು ನೆಲದಮೇಲೆ ಇದ್ದ ಒಂದು
೩೬------------------------------------------------------
36 ಕಾದಂಬರಿ: ಸಂಗ್ರಹ
ಮೊಳೆಯನ್ನು ಅದುಮಿದರು. ಸ್ವಲ್ಪ ಹೊತ್ತಿಗೆಲ್ಲಾ ಎಲ್ಲೊ ಗಂಟೆಯ ಶಬ್ದವಾಗಿ
ಒಂದು ಸಣ್ಣ ಬಾಗಲು ನೆಲದಲ್ಲಿ ತೆರೆಯಲ್ಪಟ್ಟಿತು. ಭಾಸ್ಕರನು ಧೈರ್ಯವಾಗಿ ಒಳಕ್ಕೆ
ಮೆಟ್ಟಿಲುಗಳನ್ನು ಇಳಿದುಹೋಗಲು ಬಾಗಲನ್ನು ತೆರೆದ ಮನುಷ್ಯನು ' ಹರಿಚಂದ್ರಾ,
ಈ ದಿನದ ಕೊಳ್ಳೆಗೆ ನೀನೇಕೆ ಹೋಗಲಿಲ್ಲ' ಎಂದು ಹೇಳಿದನು.
ಹರಿಚಂದ್ರ (ಭಾಸ್ಕರು--ನನಗೆ ಅದರ ವಿಷಯವೇನೂ ಗೊತ್ತಿಲ್ಲವು. ನಾನು
ಹಗಲೆಲ್ಲಾ ಅಡಗಿಕೊಂಡಿದ್ದೆನು. ನನ್ನ ಮೇಲೆ ಪೊಲೀಸಿನವರಿಗೆ ಕಣ್ಣು ಇರುವಹಾಗೆ
ಕಾಣುತ್ತೆ, ಈ ದಿನದ ಕೊಳೆ ಎಲ್ಲಿ ?
ಮನುಷ್ಯ :-ಈ ದಿವಸ ನನ್ನವರು ಹದಿನೆಂಟು ಜನಗಳು ಸೇರಿ ಸುರತಸರದ
ಜಹಗೀರದಾರನನ್ನು ಕೊಳ್ಳೆಹೊಡೆಯಲು ಹೋಗಿರುತ್ತಾರೆ. ಏನಿದ್ದರೂ ಹತ್ತು ಲಕ್ಷ
ರೂಪಾಯಿಗಳಿಗೆ ಕಮ್ಮಿ ಇಲ್ಲ. ಅದೋ ಆ ಕೊಠಡಿಯಲ್ಲಿ ನೀನಿರು. ಇದೋ ಈ
ಕೊಠಡಿಯ ಸಮೀಪಕ್ಕೆ ಮಾತ್ರ ಬರಬೇಡ.
ಭಾಸ್ಕರನು, ಬರಬೇಡವೆಂದು ಹೇಳಿದ ಕೊಠಡಿಯಲ್ಲಿಯೇ ಏನೋ ಇದೆಯೆಂದು
ತಿಳಿದುಕೊಂಡನು. ಆ ಗುಪ್ತ ಗೃಹವು ಭೂಮಿಯೊಳಗಿದ್ದರೂ ಮನೆಯಹಾಗೇ
ಇದ್ದಿತು. ಉದ್ದವಾದ ಕೊಳವಿಗಳನ್ನು ನೆಟ್ಟು ಅವುಗಳ ಮೂಲಕ ಯಂತ್ರಗಳ
ಸಹಾಯದಿಂದ ಗಾಳಿಯನ್ನು ಎಳೆದುಬಿಡುತ್ತಿದ್ದರು. ಅನೇಕ ದೀಪಗಳು ಉರಿಯು
ತಿದ್ದವು. ಹೊರಗಿನ ಪ್ರಪಂಚದ ವಿಷಯವು ಸ್ವಲ್ಪವಾದರೂ ಕೇಳಿಬರುತ್ತಿರಲಿಲ್ಲ.
ಮೂರನೇದಿವಸ ಬೆಳಗ್ಗೆ ಕಲ್ಕತ್ತಾ ನಗರವೆಲ್ಲಾ ಒಂದು ಘೋರವಾದ ಡಕಾ
ಯಿತಿ ಮತ್ತು ಕೊಲೆ ಇವುಗಳ ವಿಷಯವನ್ನು ಕೇಳಿ ಭಯವನ್ನೂ ಆಶ್ಚರ್ಯವನ್ನೂ
ಹೊಂದಿತು. ಸುರತಪುರದ ಜಹಗಿರಿಗಾರನ ಮನೆಯನ್ನು ಅನೇಕ ಡಕಾಯಿತಿ
ಕಳ್ಳರು ಆಯುಧಪಾಣಿಗಳಾಗಿ ನುಗ್ಗಿ, ತಡೆಯಲು ಬಂದ ಹತ್ತು ಜನ ಸೇವಕರಲ್ಲಿ
ಆರುಜನರನ್ನು ಕೊಂದು ಉಳಿದ ನಾಲ್ವರನ್ನು ಬಹಳ ಘಾಯಮಾಡಿ ಜಮೀನ್ದಾರ
ನನ್ನೂ ಅವನ ಹೆಂಡತೀಮಕ್ಕಳನ್ನೂ ಕಂಬಗಳಿಗೆ ಕಟ್ಟಿಹಾಕಿಬಿಟ್ಟು ಐದಾರು ಲಕ್ಷ
ರೂಪಾಯಿಬಾಳುವ ಜವಾರಿಯನ್ನೂ ಮೂರು ಲಕ್ಷ ರೂಪಾಯನ್ನೂ ಹೊತ್ತು
ಕೊಂಡು ಹೋದರೆಂದು ಕೇಳಲು ಯಾರಿಗೆ ತಾನೇ ಭಯವಾಗಲಾರದು ? ಆ ದಿವಸದ
ವೃತ್ತ ಪತ್ರಿಕೆಗಳೂ ಆ ವಿಷಯವನ್ನೇ ಕುರಿತು ಮಾತನಾಡುತ್ತಿದ್ದವು. ಒಂದು
ಪತ್ರಿಕೆಯು ( ಬಂದಿದ್ದ ಕಳ್ಳರೆಲ್ಲಾ ಮುಖಕ್ಕೆ ಗುರುತು (Mark) ಹಾಕಿಕೊಂಡು
ಕೈಗಳಲ್ಲಿ ರಿವಾಲ್ವರುಗಳನ್ನು ಹಿಡಿದುಕೊಂಡಿದ್ದರೆಂತಲೂ, ಅವರಲ್ಲನೇಕರು ಇನ್ನೂ
೩೭-------------------------------------------
ಮಧುಸೂದನ 37
ತರುಣರಾಗಿಯೇ ಕಂಡುಬಂದರೆಂದೂ ” ತಿಳಿಸಿತ್ತು. ಪೋಲೀಸಿನವರು ಅನೇಕ ತರುಣ
ರನ್ನು ಸಂಶಯದಮೇಲೆ ಹಿಡಿದು ಸೆರೆಮನೆಗೆ ಕೊಂಡೊಯ್ದರು. ಕಳ್ಳರನ್ನು ಪತ್ತೆ
ಮಾಡಿಕೊಟ್ಟವರಿಗೆ ಇಪ್ಪತ್ತು ಸಾವಿರ ರೂಪಾಯಿಗಳ ಬಹುಮಾನ ಕೊಡುವುದಾಗಿ
ಪ್ರಸಿದ್ಧ ಪಡಿಸಿದರು.
ಅದೇ ದಿವಸ ಎಂ ಸಂಘದ ಬೆಂಬರುಗಳಲ್ಲನೇಕರು, ಗುಪ್ತಗೃಹಕ್ಕೆ ಬಂದು
ವಾಸಮಾಡಲಾರಂಭಿಸಿದರು. ಅವರ ಮುಖ್ಯಸ್ಥನು ಏನನ್ನೋ ಅನೇಕರ ಕೈಲಿ ಹೊರಿಸಿ
ಕಂಡುಬಂದು ಸಿದ್ದವಾಗಿದ್ದ ಗುಳಿಯಲ್ಲಿ ಹೂಳಿಬಿಟ್ಟು ಹೊರಟುಹೋದನು.
ಭಾಸ್ಕರನು ಅದೇನೆಂಬುದನ್ನು ತಿಳಿದುಕೊಂಡನು. ಆದರೆ ಅವನಿಗೆ ಕೊಲೆಗಳ ವಿಷ
ಯವೂ ದರೋಡೆಯ ವಿಷಯವೂ ಏನೂ ತಿಳಿಯದು. ಅಲ್ಲಿದ್ದವರೂ ಸಹ ಯಾವ
ಮಾತನ್ನೂ ಆಡಲಿಲ್ಲ. ಭಾಸ್ಕರನು ಅನೇಕಸ ಹೋಗಕೂಡದೆಂದು ಹೇಳಲ್ಪಟ್ಟಿದ್ದ
ಕೊಠಡಿಯ ಕಡೆಗೆ ಹೋಗಿ ಹಿಂದಕ್ಕೆ ಕಳುಹಲ್ಪಟ್ಟಿದ್ದನು. ಆದರೆ ಎಲ್ಲಾ ವಿಷಯ
ಗಳಲ್ಲಿಯೂ ಹರಿಚಂದ್ರನಂತೆ ನಟಿಸುತ್ತಿದ್ದ ಭಾಸ್ಕರನ ವಿಷಯವಾಗಿ ಯಾರೂ ಸಂಶ
ಯಪಡಲಿಲ್ಲ. ಅದೇ ದಿವಸ ಮಧ್ಯಾನ್ನ ಭಾಸ್ಕರನು ನೀರು ಕುಡಿಯುತ್ತಿರುವಾಗ
ಆ ಕೊಠಡಿಯಿಂದ ಒಬ್ಬ ಮನುಷ್ಯನು ಹೊರಕ್ಕೆ ಬಂದನು. ಭಾಸ್ಕರನು ಓರೆಕಣ್ಣಿನಿಂದ
ಅವನನ್ನು ನೋಡಲು ತಕ್ಷಣವೇ ಅವನಾರೆಂಬುದು ತಿಳಿಯಬಂತು. ಆ ಮನುಷ್ಯನ
ಮುಖವು ಬಾಡಿಹೋಗಿ ಬೆಳಿತುಕೊಂಡಿದ್ದರೂ, ಅವನು ಕುಡುಕನಂತೆ ನಡದರೂ,
ಸೂಕ್ಷ್ಮದೃಷ್ಟಿಯುಳ್ಳ ಭಾಸ್ಕರನು ತಾನು ಫೋಟೋ (Photo) ವಿನಲ್ಲಿ ನೋಡಿದ
ಮಧುಸೂದನನು ಅವನೇ ಎಂದು ತಿಳಿದುಕೊಂಡನು. ಆದರೆ ಅವನ ಕೂಡ ಮಾತನಾ
ಡಲು ಆಗಲಿಲ್ಲವು. ಭಾಸ್ಕರನು ತಾನು ಬಂದಾರ್ಯವು ಮುಗಿಯಿತೆಂದು ತಿಳಿದು
ಕೊಂಡನು.
ಕಲ್ಕತ್ತಾ ಪಟ್ಟಣದ ಪೊಲೀಸ್ ರ್ಇಸ್ಪೆಕ್ಟರ್ಗಳಲ್ಲೊಬ್ಬನಾದ ಮೋಸೆಸ್
ಎಂಬುವನು ಅನೇಕ ದಿವಸಗಳಿಂದಲೂ, ಎಂ' ಪಂಗಡದವರ ಮೇಲೆ ಕಣ್ಣಿಟ್ಟಿದ್ದನು.
ಅವರು ಚರ್ಮದ ವ್ಯಾಪಾರಿಯನ್ನು ಲೂಟಿಮಾಡಿದಾಗ ಅವನು ಕೆಲವರನ್ನು ಹಿಂಬಾ
ಲಿಸಿ ಪತ್ತೇಮಾಡುವುದರಲ್ಲಿದ್ದನು. ಆದರೆ ಅವರು ಅವನಿಗಿಂತಲೂ ಚುರುಕಾಗಿದ್ದದ್ದ
ರಿಂದ ತಪ್ಪಿಸಿಕೊಂಡರು. ಅದರ ವಿಷಯವಾಗಿಯೇ ಅವನು ಹಗಲೂ ರಾತ್ರಿಯ
ಕಷ್ಟಪಡುತ್ತಿದ್ದನು. ಈ ವಿಷಯವು ಎಂ' ಪಂಗಡದ ಮುಖ್ಯಸ್ಥನಾದ ವಿಶ್ವನಾಥ
ನೆಂಬ ಒಬ್ಬ ಬಿ.ಎ. ಬಿ.ಎಲ್. ಪರೀಕ್ಷೆಯನ್ನು ಕೊಟ್ಟಿದ್ದವನಿಗೆ ತಿಳಿದಿದ್ದಿತು. ಅದೇ
ವಿಷಯವಾಗಿಯೇ ಅವನು ಸ್ವಲ್ಪ ದಿವಸಗಳ ಹಿಂದೆ ನಡೆದ ವಿಾಟಿಂಗಿನಲ್ಲಿ ಸೂಚಿಸಿ
೩೮-------------------------------------
38 ಕಾದಂಬರೀ ಸಂಗ್ರಹ
ದ್ದನು. ವಿಶ್ವನಾಥನು ಮೋಸೆಸ್ಸನ್ನು ಹಿಂಬಾಲಿಸುತ್ತಲೂ ಅವನು ಇವನನ್ನು ಹಿಂಬಾಲಿ
ಸುತ್ತಲೂ ಇದ್ದರು. ಈ ದಿವಸ ನಡೆದ ಸುರತಪುರದ ಡಕಾಯತಿ ವಿಷಯವನ್ನು ಕೇಳಿದ
ಕೂಡಲೇ ಅವನಿಗೆ 'ಎಂ' ಕೂಟದವರ ಮೇಲೆ ಸಂದೇಹವುಂಟಾಯಿತು. ಅವನು
ಇದಕ್ಕೆ ಮೊದಲೇ ಅವರ ಕಾಳೀಬೀದಿಯಲ್ಲಿದ್ದ ಮನೆಯನ್ನು ನೋಡಿ ತಿಳಿದುಕೊಂಡಿ
ದ್ದನು. ಆದ್ದರಿಂದ ಈ ದಿನ ಸಾಯಂಕಾಲ ಆರುಗಂಟೆಗೆ ಸರಿಯಾಗಿ ಸಂಗಡ ಒಬ್ಬ
ಪೊಲೀಸ್ ಜವಾನನನ್ನೂ ಕರೆದುಕೊಂಡು ಕಾಳಿಬೀದಿಯ ಮನೆಗೆ ಬಂದು ಬೀದಿಯ
ಲ್ಲಿದ್ದ ಗಂಟೆಯ ದಾರವನ್ನು ಹಿಡಿದೆಳದನು. ಸ್ವಲ್ಪಹೊತ್ತಿಗೆಲ್ಲಾ ಒಬ್ಬ ತರುಣನು
ಬಂದು ಕರೆಯಲು ಕಾರಣವೇನೆಂದು ಕೇಳಿದನು.
ಮೋಸೆಸ್ :-ಅಯ್ಯಾ ನಾನು ನಿಮ್ಮ ಕೂಟದ ಯಜಮಾನನನ್ನು ನೋಡ
ಬೇಕು. ನಾನು ಸರ್ಕಾರದ ಪರವಾಗಿ ಬಂದಿರುತ್ತೇನೆ.
ತರುಣ :--ತಾವು ಸರ್ಕಾರದ ಪರವಾಗಿ ಬಂದಿದ್ದರೆ ತಕ್ಷಣವೇ ಒಳಕ್ಕೆ
ಬರಬಹುದು. ನಮ್ಮ ಯಜಮಾನರು ಓದುತ್ತಾ ಕುಳಿತಿರುವರು.
ಮೋಸೆಸ್ಸನು ತಾನು ಬರುವಾಗ ತನ್ನನ್ನು ತಡೆಯುವರೆಂದೂ, ಅದಕ್ಕಾಗಿ
ಎರಡು ರಿವಾಲ್ವರುಗಳನ್ನು ತೆಗೆದುಕೊಂಡು ತನ್ನ ಸಂಗಡ ಕರತಂದಿದ್ದ ಸೇವಕರಿಗೆ
ಏನಾದರೂ ಜಗಳವಾಗುವಹಾಗೆ ಕಂಡುಬಂದರೆ ತಕ್ಷಣವೇ ಸಮಾಜದಲ್ಲಿದ್ದ ಪೊಲೀ
ಸ್ಸ್ಟೇಷನ್ನಿಗೆ ಹೋಗಿ ಅಲ್ಲಿಂದ ಸಹಾಯವನ್ನು ತರಬೇಕೆಂದೂ ಹೇಳಿಕೊಟ್ಟಿದ್ದನು.
ಆದರೆ ಅವನು ಇದನ್ನೆಲ್ಲಾ ಅರಿತ ವಿಶ್ವನಾಧನ ಬುದ್ದಿಯನ್ನು ಇನ್ನೂ ಅರಿತಿರಲಿಲ್ಲ.
ಇವನು ಬರುವನೆಂದು ತಿಳಿದೇ ಎಲ್ಲವನ್ನೂ ಸಿದ್ಧಪಡಿಸಿಟ್ಟುಕೊಂಡಿದ್ದನು. ತನ್ನನ್ನು
ಯಾವ ವಿಧವಾದ ಅಡಚನೆಯನ್ನೂ ಮಾಡದೆ ಒಳಕ್ಕೆ ಬಿಟ್ಟು ದನ್ನು ನೋಡಿ ಮೋಸೆ
ಸ್ಸನು ಆಶ್ಚರ ಪಡುತ್ತಾ ಒಳಕ್ಕೆ ಪ್ರವೇಶಮಾಡಿದನು. ಅಲ್ಲಿ ಹಾಲಿನ (Ha11)
ಮಧ್ಯದಲ್ಲಿ ಎರಡು ಮೂರು ಕುರ್ಚಿಗಳೂ ಒಂದು ದೊಡ್ಡ ಮೇಜೂ ಇಡಲ್ಪಟ್ಟಿದ್ದವು.
ಒಂದು ಸುಖಾಸನ (Easy chair) ದಮೇಲೆ ವಿಶ್ವನಾಥನು ಕುಳಿತುಕೊಂಡು
ಏನನ್ನೋ ಓದುತ್ತಿದ್ದನು. ಮೋಸೆಸ್ಸನು ಒಳಕ್ಕೆ ಬಂದುದನ್ನು ನೋಡಿ ಓದುತ್ತಿದ್ದ
ಪುಸ್ತಕವನ್ನು ಮುಚ್ಚಿಟ್ಟು ಬಂದಂಥಾವನಿಗೆ ವಂದಿಸಿ ಒಂದು ಕುರ್ಚಿಯಮೇಲೆ ಕುಳಿ
ತುಕೊಳ್ಳುವಹಾಗೆ ಹೇಳಿ, ಬಂದ ಕೆಲಸವೇನೆಂದು ಕೇಳಿದನು, ಮೊಸೆಸ್ಸು (ನಗುತ್ತಾ)
ನಿಮಗೇ ತಿಳಿದಿರಬಹುದು. ನೀವು ನನ್ನನ್ನು ಮೋಸಪಡಿಸುವುದಕ್ಕೆ ಪ್ರಯತ್ನ ಪಟ್ಟರೆ
ಅದು ಸಾಗಲಾರದು,
೩೯----------------------------------------------
ಮಧುಸೂದನ ೩೯
ವಿಶ್ವನಾಥ:-ಸ್ವಾಮಿಾ ! ನೀವೇನು ಹೇಳುತ್ತಿರುವಿ ? ನೀವು ಹೇಳುವದೊಂದೂ
ನನಗರ್ಥವಾಗುವುದಿಲ್ಲ. ಹೀಗೆ ಗೂಢಾರ್ಥವಾಗಿ ಮಾತನಾಡಿದರೆ ನಾನು ಹೇಗೆ
ತಿಳಿದುಕೊಳ್ಳಲಿ. ?
ಮೋಸೆಸ್:-ಅಯ್ಯ ! ಸಾಕು !!! ವೃಥಾ ಏಕೆ, ನನ್ನನ್ನು ಮೋಸಗೊಳಿ
ಸಲು ಪ್ರಯತ್ನ ಮಾಡುವಿರಿ, ಕಳೆದ ಆರು ತಿಂಗಳುಗಳಿಂದಲೂ ನಿಮ್ಮ ಮೇಲೆ ನನಗೆ
ಕಣ್ಣಿರುವುದು. ಚರ್ಮದ ವ್ಯಾಪಾರಿಯನ್ನು ಲೂಟಿಮಾಡಲಿಲ್ಲವೆಂದೂ ನಿನ್ನೆ ದಿವಸ
ನೀವು ದರೋಡೆಯನ್ನು ನಡಿಸಲಿಲ್ಲ ವೆಂದೂ ನನ್ನ ಮುಖವನ್ನು ನೋಡಿ ಹೇಳಿರಿ.
ವಿಶ್ವನಾಥ:-ಇದೀಗ ಸರಿಯಾದ ಮಾತು. ಏನು ? ನಾನು ದರೋಡೇ ಮಾಡ
ತಕ್ಕ ಕಳ್ಳನೋ ? ನಾನೇನು ಕೊಲೆಪಾತಕನೋ ? ಸರಿ ಸರಿ ! ನನ್ನನ್ನು ಹಿಡಿಯುವುದ
ಕ್ಕಾಗಿ ಬಂದಿರುವಿರಲ್ಲವೇ ? ವಾರಂಟನ್ನು ಸ್ವಲ್ಪ ತೋರಿಸಿ! ನೋಡೋಣ! ಯಾರಾರನ್ನು
ಸಾಕ್ಷಿಗಾಗಿ ಸಿದ್ಧಪಡಿಸಿರುವಿರಿ ? ಸ್ವಾಮಿಾ ! ನಿಶ್ಚಯವಾಗಿಯೂ ತಮ್ಮ ಮಾತುಗಳು
ನನಗೆ ಆಶ್ಚರವನ್ನುಂಟುಮಾಡುತ್ತಿವೆ. ನಾನು ಮನಃಪೂರಕವಾಗಿ ದೇಶದ ಹಿತಕ್ಕಾಗಿ
ಕಷ್ಟ ಪಡುತ್ತಿರಲು ನನ್ನನ್ನು ಕಳ್ಳನೆಂದೂ ಬೀದಿಯಲ್ಲಿ ನಿಂತು ತಲೆಯೊಡೆಯುವ
ಕೊಲೆಪಾತಕನೆಂದ !! ಅಪರಾಧವನ್ನು ಹೊರಿಸುವಿರಾ ? ನೀವು ಪೋಲೀಸ್ ಇಲಾ
ಖೆಗೇ ಗೌರವವನ್ನು ತರತಕ್ಕವರಲ್ಲವೇ !!!
ಮೋಸೆಸ್ :-(ಆಶ್ವರದಿಂದ ಸ್ತಂಭಿತನಾಗಿ,) ತಾನು ಯೋಚಿಸಿದ್ದ ಉಪಾಯಗ
ಳೆಲ್ಲಾ ಹಾಳಾದವೆಂದು ಯೋಚಿಸಿ, ನಗುತ್ತಾ ಅಯ್ಯಾ! ನಿಮಗೆ ಇಷ್ಟು ಬುದ್ಧಿಯಿಲ್ಲ
ದಿದ್ದರೆ ನೀವು ಇಷ್ಟು ದಿವಸವೂ ತಪ್ಪಿಸಿಕೊಂಡು ಅಲೆಯುತ್ತಿರಲಿಲ್ಲ. ಈಗತಾನೆ
ಏನು ? ದಯವಿಟ್ಟು ನನ್ನನ್ನು ಈ ಮನೆಯನ್ನು ಶೋಧಿಸುವುದಕ್ಕೆ ಬಿಡುವಿರಾ ?
ವಿಶ್ವನಾಥ :-ಯಾವ ಅಧಿಕಾರದ ಮೇಲೆ ನನ್ನ ಮನೆಯನ್ನು ನೀವು ಹುಡುಕು
ವಿರಿ ? ಒಂದುವೇಳೆ ನಾನು ನಿಮ್ಮನ್ನು ತಡೆದರೋ ? ಪೋಲೀಸ್-(ಆಹಾ ಈಗಲೀಗ
ಸಿಕ್ಕಿ ಬಿದ್ದನೆಂದು ಯೋಚಿಸಿ, ಇದೋ ಈ ಪೋಲೀಸ್ ಅಧಿಕಾರದ ಮಹಾತ್ಮಯಿಂ
ದಲೂ ಮತ್ತು ಇದೋ, ಈ ಎರಡು ರಿವಾಲ್ವರುಗಳ ಮಹಾತ್ಮಿಯಿಂದಲೂ ನಾನು
ನಿಮ್ಮ ಮನೆಯನ್ನು ಹುಡುಕುವೆನು. ಹಾಗೆ ನೀವು ನನ್ನನ್ನು ಬಿಡದಿದ್ದರೆ ನಿಮ್ಮನ್ನು ಈ
ಕ್ಷಣದಲ್ಲಿ ಕೈದಿಯನ್ನಾಗಿಮಾಡಿ ತೆಗೆದುಕೊಂಡು ಹೋಗುವೆನು. ಅದಾಗದಿದ್ದರೆ ಈ
ಗೋಲಿಗಳು ನಿಮ್ಮ ದೇಹವನ್ನು ಹೊಕ್ಕು ದಾರಿಯನ್ನು ಬಿಡಿಸುವವು.
ವಿಶ್ವನಾಥ :-ಸ್ವಾಮಿ ನೀವು ಅಷ್ಟು ಆಗ್ರಹಮಾಡಿದಮೇಲೆ ನಾನೇನು ಮಾಡು
ವದು ? ಅಂತೂ ಈ ರಾಜ್ಯದಲ್ಲಿ ಜನಗಳಿಗೆ ತಮ್ಮ ಮನೆಯಲ್ಲಿ ಕೂಡಾ ಸ್ವಾತಂತ್ರ್ಯ
೪೦-----------------------------------------------------
40 ಕಾದಂಬರೀ ಸಂಗ್ರಹ
ವಿಲ್ಲವೆಂದು ಕಾಣುತ್ತೆ. ಇನ್ನು ನೀವು ಹುಡುಕಬಹುದು. ನಾನು ತಮ್ಮ ಸಂಗ
ಡಲೇ ಬರಲೋ, ಇಲ್ಲ ಹೊರಕ್ಕೆ ಹೋಗಲೋ ?
ಮೋಸೆಸ್ಸನು ವಿಶ್ವನಾಥನನ್ನೂ ಸಂಗಡಲೇ ಬರುವಂತೆ ಹೇಳಿ ತನ್ನ ಸಂಗಡ
ಬಂದಿದ್ದ ಪೋಲೀಸ್ ಸೇವಕನನ್ನು ತನ್ನ ರಿವಾಲ್ವರು ಗಳನ್ನು ಕೈಲಿ ಹಿಡಿದು
ಕೊಂಡು ಬಾಗಿಲಲ್ಲಿ ಕಾದಿರಬೇಕೆಂದು ಅಪ್ಪಣೆಯನ್ನು ಮಾಡಿ ತಾನೂ
ತನ್ನ ರಿವಾಲ್ವರುಗಳನ್ನು ಕೈಯಲ್ಲಿಟ್ಟು ಕೊಂಡು ಒಂದೊಂದು ಕೊಠಡಿಗಳ
ನ್ನಾಗಿ ಪರೀಕ್ಷಿಸುತ್ತಾ ಹೊರಟನು. ಅವನು ನೋಡಿದ ಸ್ಥಳದಲ್ಲೆಲ್ಲಾ ಒಬ್ಬ
ಸಭ್ಯರು ವಾಸಮಾಡುವುದಕ್ಕೆ ಬೇಕಾದ ಸಾಮಗ್ರಿಗಳಿದ್ದಿತೇ ವಿನಹಾ ಮತ್ತೇನೂ ಇರ
ಲಿಲ್ಲವು. ಮೋಸೆಸ್ಸನು ತನ್ನನ್ನು ತನ್ನ ಶತ್ರುವು ಸೋಲಿಸಿದನೆಂದು ಯೋಚಿಸುತ್ತಾ
ಬರುತ್ತಿರಲು ಒಂದು ಕೊಠಡಿಯಲ್ಲಿ ನೆಲಕ್ಕೆ ಜಮಖಾನವನ್ನು ಹಾಕಿರುವುದನ್ನು
ನೋಡಿ ಅದನ್ನು ತೆಗೆದು ನೋಡಲು ಒಂದು ಮೊಳೆಯು ಕಾಣಿಸಿತು. ಅದನ್ನು
ಹಿಡಿದು ಹಿಂದಕ್ಕೂ ಮುಂದಕ್ಕೂ, ಕೆಳಕ್ಕೂ ಮೇಲಕ್ಕೂ ಆಡಿಸಿದರೂ ಏನೂ ಪ್ರಯೋ
ಜನ ವಿಲ್ಲದಿರುವುದನ್ನು ನೋಡಿ ಅದರಲ್ಲೇನೂ ಇಲ್ಲವೆಂದು ತಿಳಿದು ಅದನ್ನು ಬಿಟ್ಟು
ಮುಂದಕ್ಕೆ ಹೊರಟನು. ಕೊನೆಗೂ ಅವನಿಗೆ ಸಂಶಯಾಸ್ಪದವಾದ ಪದಾರ್ಥ
ವೊಂದೂ ಸಿಗಲಿಲ್ಲ. ವಿಶ್ವನಾಥನು ನಗುತ್ತಾ ಸ್ವಾಮೀ ! ಮತ್ತೊಂದುಸಲ ಬೇಕಾ
ದರೂ ಹುಡುಕಿರಿ ” ಎಂದನು.
ಮನಸ್ಸಿನಲ್ಲಿ ಉಕ್ಕಿ ಬರುತ್ತಿದ್ದ ಕೋಪವನ್ನು ತೋರ್ಪಡಿಸದೆ, ಮೋಸೆಸ್ಸನು
ವಿಶ್ವನಾಥನನ್ನು ಕುರಿತು “ ಅಯ್ಯಾ, ನೀನು ಈ ದಿವಸ ನನ್ನನ್ನು ಸೋಲಿಸಿರುವಿ. ಆದರೆ
ಒಂದು ಕುರಿಯು ಒಂದುಸಲ ಬಿದ್ದ ಹಳ್ಳಕ್ಕೆ ಮತ್ತೊಂದುಸಲ ಬೀಳುವುದಿಲ್ಲವು.
ನೀನು ನನ್ನನ್ನು ಜಯಿಸಿದೆನೆಂದು ಸಂತೋಷಪಡದಿರು. ಅಲ್ಪಕಾಲದಲ್ಲೇ ನಿನ್ನನ್ನು
ಪೋಲೀಸಿಗೆ ಹಿಡಿದುಕೊಡುವೆನು. ನಿನ್ನ ವಿಷಯವೆಲ್ಲಾ ನನಗೆ ತಿಳದಿದೆ. ” ಎಂದು
ಹೇಳಿ ತನ್ನ ಸೇವಕನನ್ನೂ ಕರೆದುಕೊಂಡು ಹೊರಟನು.
ವಿಶ್ವನಾಥನು ಮೋಸೆಸ್ಸೆನು ಹೊರಟುಹೋದ ಕೂಡಲೇ ಗುಪ್ತಗೃಹವನ್ನು
ಹೊಕ್ಕು ಅಲ್ಲಿದ್ದವರಿಗೆಲ್ಲಾ ಮೋಸೆಸ್ಸನ ವಿಷಯವನ್ನು ತಿಳಿಸಿ ಮದುವೆಯು ಇನ್ನು
ಮರುದಿವಸಗಳಲ್ಲಿ ಅದೇ ಮನೆಯಲ್ಲಿ ನಡೆಯುವುದೆಂದು ಹೇಳಿ ಪುನಃ ಮೇಲಕ್ಕೆ
ಹೊರಟುಹೋದನು. ಭಾಸ್ಕರನು ಅವನು ಹೋಗುವುದನ್ನೇ ನೋಡಿಕೊಂಡಿದ್ದು
ತಾನೂ ಮೇಲಕ್ಕೆ ಬಂದು ಸ್ವಲ್ಪ ಹೊರಕ್ಕೆ ಹೋಗಿ ಬರುವುದಾಗಿ ತಿಳಿಸಿ ಅಲ್ಲಿಂದ
ಹೊರಟು ಯಾರಿಗೂ ತಿಳಿಯದ ರೀತಿ ಗೋವಿಂದನ ಮನೆಯನ್ನು ಸೇರಿ ತನ್ನ ಉಡು
ಪನ್ನು ಬದಲಾಯಿಸಿಕೊಂಡು ವೃತ್ತ ಪತ್ರಿಕೆಗಳನ್ನು ನೋಡುತ್ತ ಕುಳಿತನು.
೪೧------------------------------------------------
ಮಧುಸೂದನ ೪೧
ಒಂಭತ್ತನೇ ಅಧ್ಯಾಯ.
(ವಿವಾಹಭಂಗ ಮತ್ತು “ ಎಂ ” ಸಂಘದ ಮುಕ್ತಾಯ.)
ಮಾರನೇ ದಿವಸ ಪೊಲೀಸ್ ಕಮಿಷನ್ರು ತಮ್ಮ ಆಫೀಸಿನಲ್ಲಿ ಕುಳಿತಿರುವಾಗ
ಒಬ್ಬ ಸೇವಕನು ಬಂದು ಚೀಟಿಯೊಂದನ್ನು ಕೊಟ್ಟನು. ಅದರಲ್ಲಿ " ಪತ್ತೇದಾರಿ
ಇಲಾಖೆಗೆ ಸೇರಿದ ಭಾಸ್ಕರ” ಎಂದಿದ್ದಿತು. ಕೂಡಲೇ ಕಳೆಗುಂದಿದ್ದ ಕಮಾಷನ್ರ
ಮುಖವು ಕಾಂತಿಯನ್ನು ಹೊಂದಿತು. ' ತಕ್ಷಣವೇ ಅವರನ್ನು ಕರೆದುಕೊಂಡು ಬಾ'
ಎಂದು ಕಟ್ಟಳೇಮಾಡಿ ಕಳುಹಿಸಿದನು. ಭಾಸ್ಕರನು ಅವನಿಗೆ ಹೊಸಬನಲ್ಲವು. ಭಾಸ್ಕ
ರನೂ ಅವನೂ ಸ್ನೇಹಿತರಾಗಿದ್ದರು. ಹಿಂದಲ ದಿವಸಗಳಲ್ಲಿ ನಡೆದ ವಿಷಯಗಳ ವಿಷ
ಯವಾಗಿ ಯೋಚಿಸುತ್ತಾ ಭಾಸ್ಕರನಿಗೆ ಈ ವಿಷಯಗಳನ್ನೆಲ್ಲಾ ತಿಳಿಯಪಡಿಸಬೇಕೆಂ
ದಿದ್ದನು, ಅಷ್ಟರಲ್ಲೇ ಭಾಸ್ಕರನೇ ತನ್ನನ್ನು ನೋಡಲು ಬರಲು ಅತ್ಯಂತ ಸಂತೋಷ
ದಿಂದ ಅವನನ್ನು ಬರುವಹಾಗೆ ಹೇಳಿಕಳುಹಿಸಿದನು.
ಸ್ವಲ್ಪ ಹೊತ್ತಿಗೆ ಭಾಸ್ಕರನು ಪೊಲೀಸ್ ಕಮಿರ್ಷರ ಕೊಠಡಿಗೆ ಬಂದು ಅವ
ನನ್ನು ಕಾಣಿಸಿಕೊಂಡನು. ಆತನು ಇವನ ಕೈಹಿಡಿದು ಆಡಿಸಿ : ಭಾಸ್ಕರಾ ! ನೀನು ಈ
ಸಮಯದಲ್ಲಿ ಬಂದದ್ದು ನನಗೆ ಬಹಳ ಸಂತೋಷವನ್ನುಂಟುಮಾಡಿದೆ. ನೀನು ನಿನ್ನೇ
ಮೊನ್ನೆ ನಡೆದ ಡಕಾಯಿತಿಗಳನ್ನೂ ಮತ್ತು ಕೊಲೆಗಳನ್ನೂ ಕೇಳಿರುವಿಯೆಂದು ನಂಬು
ತೇನೆ. ನೀನು ಈ ವಿಷಯಗಳಲ್ಲಿ ಪ್ರವೇಶಮಾಡಿ ಈ ಕೊಲೆಪಾತಕರನ್ನು ಪತ್ತೆಮಾ
ಡುವಿಯೆಂದು ನಂಬಿರುತ್ತೇನೆ. ನೀನು ಪತ್ತೆಮಾಡಿಕೊಟ್ಟರೆ ನಿನಗೆ ಬಹುಮಾನವೂ
ಮತ್ತು ಯಶಸ್ಫೂ ಬರುವುವು ಮತ್ತು ನನಗೂ ಬಹಳ ಸಹಾಯಮಾಡಿದಂತಾಗು
ವುದು.' ಎಂದು ಹೇಳಿದನು.
ಭಾಸ್ಕರ :-ಸ್ವಾಮಿಾ ! ನಾನು ಆಗಲೇ ಎಲ್ಲವನ್ನೂ ಪತ್ತೆಮಾಡಿರುತ್ತೇನೆ
ಈ ಎರಡು ದಿವಸಗಳಲ್ಲಿ ನಡೆದ ವಿಷಯಗಳಲ್ಲದೆ ಕೆಲವು ದಿವಸಗಳ ಹಿಂದೆ ವಾಸವ
ಪುರದ ಜಮಾನ್ದಾರರ ಮಗನು ಕಾಣದೇಹೋದ ವಿಷಯವನ್ನೂ ಸಹಾ ಪತ್ತೆಮಾಡಿ
ರುತ್ತೇನೆ.
ಕಮಿಷನರು :-ಏನು ? ಆಗಲೇ ಎಲ್ಲವನ್ನೂ ಪತ್ತೆಮಾಡಿರುವೆಯಾ ?
ನೀನೀಗ ನಿಜವಾದ ಪತ್ತೇದಾರನು. ಈ ವಿಷಯಗಳೆಲ್ಲಾ ಪತ್ತೆಯಾಗಲು ಇನ್ನೂ
ಅನೇಕ ತಿಂಗಳುಗಳಾಗುವವೆಂದು ನಾನು ಯೋಚಿಸಿದ್ದೆನು. ಆದರೆ ನೀನು ಆಗಲೇ
೪೨------------------------------------------------
೪೨ ಕಾದಂಬರಿ ಸಂಗ್ರಹ
ಎಲ್ಲವನ್ನೂ ಪತ್ತೆಮಾಡಿರುವ ವಿಷಯವನ್ನು ನೋಡಿ ನನಗೆ ಆಶ್ಚರ್ಯವಾಗುತ್ತದೆ.
ಕಳ್ಳರನ್ನು ಯಾವಾಗ ಹಿಡಿಯೋಣ ?
ಭಾಸ್ಕರ :-ನಾನು ವಾಸವಪುರದ ಜಮೀನ್ದಾರನ ಪರವಾಗಿ ಇಲ್ಲಿಗೆ ಬಂದು ಅವನ
ಮಗನ ವಿಷಯವಾಗಿ ಪತ್ತೆಮಾಡುತ್ತಿರಲು ಇತರ ವಿಷಯಗಳೂ ನನ್ನ ಮಾರ್ಗ
ದಲ್ಲಿ ತಾವಾಗಿಯೇ ಬಂದವು.
ಭಾಸ್ಕರನೂ ಪೊಲೀಸ್ ಕಮಿಷನರೂ ಬಹಳಹೊತ್ತು ಮಾತನಾಡುತ್ತಿದ್ದು
ಎಲ್ಲಾ ವಿಷಯಗಳನ್ನೂ ಕ್ರಮವಾಗಿ ತೀರ್ಮಾನಮಾಡಿಕೊಂಡ ಮೇಲೆ ಭಾಸ್ಕರನು
ಅಪ್ಪಣೆಯನ್ನು ಪಡೆದು ಗೋವಿಂದನ ಮನೆಗೆ ಹೋದನು. ಅದೇ ದಿವಸ ಮಧ್ಯಾಹ್ನ
ಹರಿಚಂದ್ರನು ಭಾಸ್ಕರನ ನಯಭಯಗಳಿಗೊಳಪಟ್ಟು ತಮ್ಮ ಸಂಘಕ್ಕೆ ಸಂಬಂಧವಾದ
ಎಲ್ಲಾ ವಿಷಯಗಳನ್ನೂ ಅಂದರೆ (1) ಮಧುಸೂದನನನ್ನು ವಿಶ್ವನಾಥನು ಎತ್ತಿಕೊಂಡು
ಹೋದ ವಿಷಯವನ್ನೂ, (೨)ವಿವಾಹದ ದಿವಸ ತಾನು ಜನಗಳ ಮಧ್ಯದಲ್ಲಿ ನುಗ್ಗಿ ತಮ್ಮ
ಯಜಮಾನನಾದ ವಿಶ್ವನಾಥನು ಬಂದು ಮಧುಸೂದನನ ಕೊಠಡಿಯಲ್ಲಿ ಕಾದಿರುವ
ಹಾಗೂ ತಕ್ಷಣವೇ ಬಾರದಿದ್ದರೆ ಮಧುಸೂದನನು ತನಗೆ ಕೊಡಬೇಕಾದ ಇಪ್ಪತ್ತು
ಸಾವಿರ ರೂಪಾಯಿಗಳ ವಿಷಯವನ್ನೂ ಮತ್ತು ಅವನು ತನ್ನ ಮಗಳನ್ನು ಮದುವೆ
ಯಾಗುವೆನೆಂದು ಮಾತು ಕೊಟ್ಟಿದ್ದ ವಿಷಯವನ್ನೂ ತಿಳಿಸುವುದಾಗಿ ಹೇಳಿರುವನೆಂಬ
ವಿಷಯಗಳನ್ನೆಲ್ಲಾ ಅವನೊಡನೆ ಹೇಳಿದನು. ಭಾಸ್ಕರನು ಅವನನ್ನು ಸರ್ಕಾರದ
ವರ ಪಕ್ಷದ ಸಾಕ್ಷಿಯಾಗಿ ತೆಗೆದುಕೊಳ್ಳುವುದಾಗಿ ಹೇಳಿ ಅವನನ್ನು ಪುನಃ ಕೊಠಡಿ
ಯಲ್ಲಿ ಕೂಡಿಟ್ಟನು.
ಅದೇ ದಿವಸ ಮಧ್ಯಾಹ್ನ ' ಎಂ' ಸಂಘದವರ ಗುಪ್ತಗೃಹದಲ್ಲಿ ಮಾರನೇದಿವ
ಸದ ವಿವಾಹಕ್ಕಾಗಿ ಎಲ್ಲವನ್ನೂ ಸಿದ್ಧ ಪಡಿಸಿಟ್ಟುಕೊಳ್ಳುತ್ತಿದ್ದರು. ಒಂದು ಕಡೆಯಲ್ಲಿ
ಮಧುಸೂದನನೂ ವಿಶ್ವನಾಥನ ಕುಳಿತುಕೊಂಡು ಮಾತನಾಡುತ್ತಿದ್ದರು. ಅವರ
ಮುಂದುಗಡೆ ಮೇಜಿನಮೇಲೆ ಮೂರು ಶೀಸೆಗಳ ವಿಸ್ಕಿಯೂ, ಒಂದು ತಟ್ಟೆಯಲ್ಲಿ
ಕೆಲವು ಫಲಹಾರ ಸಾಮಗ್ರಿಗಳೂ ಮತ್ತೊಂದುಕಡೆ ಕೆಲವು ಹೊಗೆಯಬತ್ತಿಗಳೂ
ಇದ್ದವು. ವಿಶ್ವನಾಥನು ಬಟ್ಟಲುಗಳಲ್ಲಿ ಮದ್ಯವನ್ನು ತುಂಬಿತುಂಬಿ ಮದುಸೂದನನಿಗೆ
ಕುಡಿಸುತ್ತಿದ್ದನು. ಅಯ್ಯೋ ! ಅತ್ಯಂತ ಆಚಾರಸಂಪನ್ನನಾದವನ ಪುತ್ರನಾಗಿ ಹುಟ್ಟಿ
ತಾನೂ ಆಚಾರಸಂನ್ನನಾಗಿದ್ದು ಈಗ ಸಹವಾಸದೋಷದಿಂದ ಒಂದೇಸಲಕ್ಕೆ ತನ್ನ
ಆಚಾರವನ್ನೂ, ಶೀಲವನ್ನೂ, ಜಾತಿಯನ್ನೂ ಮರೆತು ಮದ್ಯಪಾನ ಮಾಡುತ್ತಿರು
೪೩-------------------------------------------------
ಮಧುಸೂದನ ೪3
ಈ ಮಧುಸೂದನನನ್ನು ನೋಡಿ ತಂದೆಗಳಾದವರು ತಮ್ಮ ಪುತ್ರರವಿಷಯದಲ್ಲಿ ಎಚ್ಚ
ರವಾಗಿರಲಿ ! ಪುತ್ರರು ಕೆಟ್ಟ ಸಂಘಗಳಿಗೆ ಸೇರಿ ಜಾತಿ ಭೇದವಿಲ್ಲ ಎಂದು ಹೇಳಿಕೊಂಡು
ಕುಡಿತ ಮುಂತಾದುವುಗಳನ್ನು ಕಲಿತು ಹಾಳಾಗುವರೆಂದು ತಿಳಿದು, ಅವರು ಅಂಥಾ
ಸಂಘಗಳಿಗೆ ಸೇರದಹಾಗೆ ಇರುವುದಕ್ಕೆ ಪ್ರಯತ್ನ ಪಡಲಿ !!
ವಿಶ್ವನಾಥ:-ಮಧುಸೂದನಾ ! ನಾಳೆದಿವಸ ನೀನು ನನ್ನ ಅಳಿಯನಾಗುವಿ.
ಆಮೇಲೆ ನೀನು ನಿಮ್ಮ ಮನೆಗೆ ಹೋಗಬಹುದು. ನಾನೂ ಸಹಾ ನನ್ನ ಸಂಘವನ್ನೊ
ಡೆದು ಬೇರೆಸ್ಥಳಕ್ಕೆ ಹೋಗುವೆನು.
ಮಧುಸೂದನ (ಮದ್ಯದ ವೇಗದಿಂದ ಉನ್ಮತ್ತನಾಗಿ) ಅದಕ್ಕೇನು ! ನಾನು
ನಿಮ್ಮ ಪುತ್ರಿಯನ್ನು ವಿವಾಹ ಮಾಡಿಕೊಳ್ಳುವನು. ನನ್ನ ಸಂಗಡಲೇ ನಿಮ್ಮ ಪುತ್ರಿ
ಯನ್ನೂ ಕರೆದುಕೊಂಡು ವಾಸವಪುರಕ್ಕೆ ಹೋಗುವೆನು. ನನ್ನ ತಂದೆಯು ನನ್ನನ್ನು
ಬಹಿಷ್ಕರಿಸಿದರೆ ನನ್ನ ಭಾಗವನ್ನು ತೆಗೆದುಕೊಂಡು ಸುಖವಾಗಿರುವನು. (ಸ್ವಲ್ಪ ಶಾಂತ
ನಾಗಿ) ಅಯ್ಯೋ ನನ್ನ ಗತಿಯು ಹೀಗೆ ಆಗಬೇಕೇ ? ನನ್ನ ತಂದೆ ಯೇನು ಹೇಳು
ವನೋ ? ಈ ವಿವಾಹಕ್ಕೆ ಅವನೆಂದಿಗೂ ಒಪ್ಪನು.
ವಿಶ್ವನಾಥನು ಅವನಿಗೆ ಮತ್ತಷ್ಟು ಮದ್ಯವನ್ನು ಕೊಟ್ಟು ನಿಮ್ಮ ತಂದೆಯು
ಒಪ್ಪದೇ ಏನುಮಾಡುವನು ? ವಿವಾಹವು ಶಾಸ್ತ್ರಾಚಾರರೀತಿಯಿಂದಲೇ ನಡೆದಮೇಲೆ
ನಿಮ್ಮ ತಂದೆ ಯೇನುಮಾಡುವನು ? ಇನ್ನು ಹೊತ್ತಾಯಿತು. ನಾನು ಹೋಗಿಬರುವೆನು.
ನಾನು ಹೇಳಿದ ವಿಷಯಗಳು •ಜ್ಞಾಪಕದಲ್ಲಿರಲಿ. ವಾಸವಪುರವನ್ನು ಸೇರಿದಮೇಲೆ
ಒಂದು ಲಕ್ಷ ರೂಪಾಯನ್ನು ಕಳುಹು ಮರೆತುಬಿಡಬೇಡ'' ಎಂದು ಹೇಳಿ ಹೊರಟು
ಹೋದನು.
ಈದಿವಸ ಕಾಳಿಬೀದಿಯಲ್ಲಿರುವ "ಎಂ” ಸಂಘದವರ ಮನೆಯಲ್ಲಿ ಅತ್ಯಂತ
ಕೋಲಾಹಲ. ಮನೆಯೆಲ್ಲವೂ ಕದಳಿ ಸ್ತಂಭಗಳಿಂದಲೂ ಮಾವಿನ ತೋರಣಗಳಿಂದಲೂ
ಅಲಂಕರಿಸಲ್ಪಟ್ಟಿರುವುದು. ಒಂದು ಕಡೆಯಲ್ಲಿ ವಾದ್ಯಗಳು ತಮ್ಮ ನಾದವನ್ನು ಎಲ್ಲ
ಕಡೆಗೂ ಕಳುಹಿಸುತ್ತಿದ್ಧವು. ಬೀದಿಯಲ್ಲಿ ಜನಗಳೆಲ್ಲರೂ ವಿಶ್ವನಾಥನ ಮಗಳಾದ
ಸುಂದರಿಯೆಂಬ ಋತುಮತಿಯಾದ ಕನೈಯನ್ನು ಸೋಮೇಂದ್ರನೆಂಬುವನಿಗೆ ಕೊಟ್ಟು ವಿವಾ
ಹವೆಂದು ಹೇಳಿಕೊಳ್ಳುತ್ತಿದ್ದರು. ಕರೆಯಲ್ಪಟ್ಟಿದ್ದ ಜನಗಳು ಮಾತ್ರ ಬಿಡಲ್ಪಡುವರೆಂದೂ
ಹೇಳಿಕೊಳ್ಳುತ್ತಿದ್ದರು. ಸುಮಾರು ಇಪ್ಪತ್ತೈದುಮ.ದಿ ವೈದಿಕಬ್ರಾಹ್ಮಣರುಗಳು
ವಿಭೂತಿ ರುದ್ರಾಕ್ಷಿ ಮುಂತಾದವುಗಳನ್ನು ಧರಿಸಿಕೊಂಡು ಬೀದೀಬಾಗಲಿನಲ್ಲಿ
೪೪-----------------------------------------
44 ಕಾದಂಬರೀ ಸಂಗ್ರಹ
ನಿಂತಿದ್ದ ಇಬ್ಬರು ಬ್ರಾಹ್ಮಣ ತರುಣರಿಗೆ ಏನನ್ನೋ ತೋರಿಸುತ್ತಾ ಒಳಕ್ಕೆ ಹೋಗು
ತಿದ್ದರು. ಈ ಬ್ರಾಹ್ಮಣರುಗಳನ್ನು ಯಾರಾದರೂ ಶೋಧನೆಮಾಡಿದ್ದರೆ ಪ್ರತಿಯೊ
ಬ್ಬನ ಮಡಿಲಿಯಲ್ಲಿಯೂ ಒಂದೊಂದು ರಿವಾಲ್ವರುಗಳನ್ನು ನೋಡಬಹುದಾಗಿತ್ತು.
ಈ ವಿವಾಹಮಂಟಪದಲ್ಲಿ ಮತ್ತೊಂದು ವಿಶೇಷವೇನೆಂದರೆ, ಆ ಸ್ಥಳದಲ್ಲಿ ಒಬ್ಬ
ಸ್ತ್ರೀಯಾದರೂ ಇರಲಿಲ್ಲ. ಸುಂದರಿ ಯೆಂಬ ಋತುಮತಿಯಾದ ಕನೈಯು ಸರ್ವಾಭ
ರಣಗಳಿಂದಲಂಕೃತಳಾಗಿದ್ದಳು. ಅವಳು ಅತ್ಯಂತ ಸುಂದರಿಯಾಗಿದ್ದರಿಂದ ಬಂದವರೆ
ಲ್ಲರೂ ಅವಳನ್ನೇ ಅವಾಕ್ಕಾಗಿ ನೋಡುತ್ತಿದ್ದರು. ಇಂಥಾ ನಾರೀರತ್ನವು ನೀಚನಾದ
ವಿಶ್ವನಾಥನಿಗೆ ಮಗಳಾಗಿ ಹುಟ್ಟಿದ್ದು ಆಶ್ಚರೈವಾಗಿರುವದು. ಆಕೆಗೆ ತನ್ನ ತಂದೆಯ
ದುರ್ವ್ಯಾಪಾರದ ವಿಷಯವು ಸ್ವಲ್ಪವಾದರೂ ತಿಳಿಯದು. ಆಕೆಗೆ ತಾನು ಋತುಮತಿಯಾ
ದಮೇಲೆ ವಿವಾಹವಾಗುವ ವಿಷಯದಲ್ಲಿ ಸ್ವಲ್ಪವಾದರೂ ಮನವಿಲ್ಲವು. ವಿಶ್ವನಾಥನು
ಅವಳನ್ನು ಸೋಮೇಂದ್ರನೆಂಬ ಅತುಲೈಶ್ವರ ಸಂಪನ್ನನಿಗೆ ವಿವಾಹ ಮಾಡಿಕೊಡುವು
ದಾಗಿಯೂ, ಮದುವೆಯಾದಮೇಲೆ ಆ ಸೋಮೇಂದ್ರನ ನಿಜವಾದ ಹೆಸರು ತಿಳಿಯುವು
ದೆಂದೂ ಅವನು ಈಗ ಯಾವುದೋ ಒಂದು ಕಾರಣದಿಂದ ಛದ್ಮವೇಷದಲ್ಲಿರುತಾ
ನೆಂದೂ ಹೇಳಿ, ಅವಳನ್ನು ಈ ವಿವಾಹವನ್ನು ಮಾಡಿ ಕೊಳ್ಳುವ ಹಾಗೆ ಒಪ್ಪಿಸಿದನು.
ಚಿಕ್ಕ ವಯಸ್ಸಿನಲ್ಲೇ ತಾಯಿಯನ್ನು ಕಳೆದುಕೊಂಡಿದ್ದ ಆ ಬಾಲೆಯು ತನ್ನ ತಂದೆ
ಯನ್ನು ತನ್ನ ಸರ್ವಸ್ವವೆಂದು ನಂಬಿ ಅವನ ಮಾತಿಗೆ ವ್ಯತಿರಿಕ್ತವಾಗಿ ನಡೆಯದೆ ಅವನ
ಮಾತಿಗೊಪ್ಪಿದಳು. ಇಂಥಾ ನವಕೋಮಲಾಂಗಿಯ, ಕೊನೆಗೆ ಧೂರ್ತನಾದ
ತಂದೆಯ ದೆಸೆಯಿಂದಲೇ ಪ್ರಾಣಬಿಡುವ ಕಾಲವು ಬಂದಿತು.
ವಿವಾಹ ಮುಹೂರ್ತವು ಹತ್ತು ಗಂಟೆಗೆ ಸರಿಯಾಗಿಡಲ್ಪಟ್ಟಿತ್ತು. ' ನನಗೆ
ಹೆಂಡತಿ ಯಿಲ್ಲವಾದ್ದರಿಂದ ಪತ್ನಿ ಯಿಲ್ಲದೇನೇ ಮದುವೆ ಮಾಡಿಕೊಡುತ್ತೇನೆಂದು ವಿಶ್ವ
ನಾಥನು ಹೇಳಿದನು.' ಇಬ್ಬರು ವೈದಿಕ ಬ್ರಾಹ್ಮಣರು ದುಡ್ಡಿನಾಶೆಗಾಗಿ ವಿಶ್ವನಾಥನು
ಹೇಳಿದ ಹಾಗೇ ವಿವಾಹ ಮಾಡಿಸುವುದಾಗಿ ಹೇಳಿ ಬಂದಿದ್ದರು. ಸೋಮೇಂದ್ರನೆಂದು
ಕರೆಯಲ್ಪಟ್ಟ ಮದವಣಿಗನು ಅಲಂಕರಿಸಲ್ಪಟ್ಟು ಕರತರಲ್ಪಟ್ಟನು. ಅವನಿಗೆ ಸುಮಾರು
ಮೂವತ್ತು ವರ್ಷ ವಯಸ್ಸಾಗಿರಬಹುದೆಂದು ಕಾಣಬಂದಿತು. ಮುಖದಲ್ಲಿ ಮಿಶೆ
ಯೂ ದಾಡಿಯೂ ಇದ್ದವು. ಅವನು ಸುಂದರಿಯನ್ನು ನೋಡಿ ನಗುತ್ತಾ ಬಂದನು.
ಮನೆಗೆ ಸೇರಿದ ಆವರಣದಲ್ಲೇ ಕಾಶೀಯಾತ್ರೆಯು ನಡೆಸಲ್ಪಟ್ಟಿತು. ವಧೂವರರು
ಮಣೆಯಮೇಲೆ ಕುಳಿತುಕೊಂಡು ಹೋಮಾದಿಗಳನ್ನು ಮಾಡಿದರು. ಇನ್ನೇನು ಧಾರೆ
೪೫---------------------------------
45 ಮಧುಸೂದನ
ಯೆರೆಯುವದೂ ಮಾಂಗಲ್ಯ ಸೂತ್ರಧಾರಣೆಯ ಉಳಿದಿದ್ದವು. ಪುರೋಹಿತರುಗಳು
ವೇದಮಂತ್ರವನ್ನು ಘಟ್ಟಿಯಾಗಿ ಹೇಳುತ್ತಿದ್ದರು. ಮಧುಸೂದನನ ಕೈಗೆ ಮಾಂಗಲ್ಯ
ಸೂತ್ರವು ಕೊಡಲ್ಪಟ್ಟಿತು. ಅವನು ಅದನ್ನು ಸುಂದರಿಯ ಕತ್ತಿಗೆ ಕಟ್ಟುವುದಕ್ಕೆ
ಹೋದನು.
ಇದೇನು ಕೂಗಾಟ ? ತೆರದಿದ್ದ ಬಾಗಲಿನ ಮೂಲಕ ಏಕಕಾಲದಲ್ಲಿ ಆಯುಧ
ಪಾಣಿಗಳಾದ ಐವತ್ತು ಜನ ಪೋಲೀಸಿನವರೂ ಅವರ ಮುಂದುಗಡೆ ಭಾಸ್ಕರನೂ
ಮತ್ತು ಪೊಲೀಸ್ ಕಮಿಷನರೂ ಎರಡೆರಡ: ರಿವಾಲ್ವರುಗಳನ್ನು ಹಿಡಿದುಕೊಂಡು
ನುಗ್ಗಿ ಬಂದರು ! ಭಾಸ್ಕರನು, ಮಧುಸೂದನ ! ನಿಧಾನಿಸು. ಮಾಂಗಲ್ಯವನ್ನು ಕಟ್ಟಬೇಡ
ಎಂದು ಕೂಗಿದನು. ಅಲ್ಲಿ ನೆರೆದಿದ್ದವರೆಲ್ಲಾ ಎದ್ದುನಿಂತು ವಿಶ್ವನಾಥನ ಮುಖವನ್ನು
ನೋಡಿದರು, ಇಂಥಾ ಸಮಯದಲ್ಲಿಯೂ ಕೂಡಾ ಅವನು ನಗುತ್ತಾ ನೀವು ನನ್ನ
ಮನೆಯೊಳಕ್ಕೆ ನುಗ್ಗಲು ಕಾರಣವೇನು ? ಎಂದು ಕೇಳಿದನು. ಭಾಸ್ಕರನು ಇದೇ
ಇದೇ ಕಾರಣ ಎಂದು ಹೇಳಿ ಸೋಮೇಂದ್ರನ ಬಳಿಗೆ ನುಗ್ಗಿ ಅವನ ದಾಡಿಯನ್ನೂ
ಮೀಶೆಯನ್ನೂ ಹಿಡಿದೆಳೆಯಲು ಅವೆರಡೂ ಬಂದುಬಿಟ್ಟವು. ಕೂಡಲೇ ಭಾಸ್ಕರನು
ವಿಶ್ವನಾಥ ! ನಿನ್ನನ್ನು , ಮಧುಸೂದನನನ್ನು ಕದ್ದದ್ದಕ್ಕೂ ಸುರತಸರದ ಜಹಗೀರ್ದಾ
ರನ ಮನೆಯಲ್ಲಿ ಡಕಾಯತಿ ಮತ್ತು ಕೊಲೆಯ ನಡಿಸಿದ್ದಕ್ಕಾಗಿಯೂ, ಮೋಸೆಸ್ಸನನ್ನು
ಕೊಂದದ್ದಕ್ಕಾಗಿಯೂ ಸೆರೆಹಿಡಿಯುವೆನು ಎಂದು ಹೇಳಿದ ಕೂಡಲೆ ಸುಂದರಿಯು,
' ಅಯ್ಯೋ' ಎಂದು ಕೂಗಿ ಕೆಳಕ್ಕೆ ಬಿದ್ದಳು. ಕೂಡಲೇ ವಿಶ್ವನಾಥನು ತನ್ನ ರಿವಾಲ್ವ
ರುಗಳನ್ನು ಎಳೆದುಕೊಂಡು ” ನಾವು ನಿಮ್ಮ ಕೈಗೆ ಸುಲಭವಾಗಿ ಶಿಗತಕ್ಕವರಲ್ಲವೆಂದು
ಘರ್ಜಿಸಿ ಭಾಸ್ಕರನ ಮೇಲೆ ಹೊಡೆದನು, ಕೂಡಲೇ ಎಂ' ಸಂಘದ ಮೆಂಬರುಗಳೆಲ್ಲರೂ
ತಮ್ಮ ತಮ್ಮ ರಿವಾಲ್ವರುಗಳನ್ನು ಎಳೆದು ಗುಂಡುಗಳನ್ನು ಹೊಡೆಯಲು ಪ್ರಾರಂಭಿಸಿ
ದರು. ಪೋಲೀಸಿನವರಲ್ಲಿಯೂ ಅನೇಕರು ಗತಾಸುಗಳಾಗಿ ಉರುಳಿದರು. ಆದರೆ
" ಎಂ" ಸಂಘದ ಮೆಂಬರುಗಳಲ್ಲಿ ಆಗಲೇ ಹದಿನೆಂಟು ಜನಗಳು, ಕೆಲವರು ಪ್ರಾಣ
ಬಿಟ್ಟೂ ಮತ್ತೆ ಕೆಲವರು ಪ್ರಾಣಾಪಾಯವಾದ ಘಾಯಗಳನ್ನು ಹೊಂದಿಯ ನೆಲದ
ಮೇಲೆ ಉರುಳಿದ್ದರು. ಉಳಿದ ಏಳು ಜನಗಳನ್ನು ಸೆರೆಹಿಡಿದುಕೊಂಡರು. ಇಷ್ಟು
ಹೊತ್ತಿನವರಿಗೂ ಘೋರವಾಗಿ ಜಗಳವಾಡುತ್ತಿದ್ದ ವಿಶ್ವನಾಥನು ಇನ್ನು ಪ್ರಯೋಜನ
ವಿಲ್ಲ ಎಂದು ಯೋಚಿಸಿ ಭಾಸ್ಕರನಮೇಲೂ ಬಂದೂಕ ಹೊಡೆಯಲು ಅದು ತಪ್ಪಿಹೋಗಿ
ಇಬ್ಬರ, ಪೋಲೀಸಿನವರನ್ನು ಘಾಯ ಪಡಿಸಿದವು. ಇನ್ನು ಎರಡೇ ಗೋಲಿಗಳು ಉಳಿದಿ
ರುವುದನ್ನು ನೋಡಿ ಅಯ್ಯೋ ! ಪುತ್ರಿ, ನನ್ನನ್ನು ಕ್ಷಮಿಸು. ನಿನ್ನ ನ್ನೊಬ್ಬಳನ್ನೇ ಬಿಟ್ಟು
೪೬----------------------------------
೪೬ ಕಾದಂಬರಿ ಸಂಗ್ರಹ
ಹೋಗಲಾರೆನೆಂದು ಕೂಗಿ ಆ ನೀಚನು ಮೇಲಕ್ಕೇಳುತ್ತಿದ್ದ ಸುಂದರಿಯ ಹೃದಯ
ಕೊಂದು ಗೋಲಿಯನ್ನು ಕಳುಹಿಸಿ ತಾನೂ ಉಳಿದಿದ್ದ ಗೋಲಿಯಿಂದ ಭಾಸ್ಕರನು
ತಡೆಯುವುದರೊಳಗಾಗಿ, ತಲೆ ಹೊಡೆದುಕೊಂಡು ಕೆಳಕ್ಕುರುಳಿದನು. ಭಾಸ್ಕ
ರನು ಸುಂದರಿಯ ಸಮಾಸಕ್ಕೆ ಬಂದು ನೋಡುವಲ್ಲಿ ಪ್ರಾಣವು ಅವಳ ದೇಹವನ್ನು
ಬಿಟ್ಟು ನೀಗಿತ್ತು. !!
ಮಧುಸೂದನನನ್ನೂ ಬ್ರಾಹ್ಮಣರಿಬ್ಬರನ್ನೂ ಮೊದಲೇ ಒಂದು ಕೊಠಡಿಗೆ ಕರೆದು
ಕೊಂಡುಹೋಗಿಟ್ಟು ಕೊಂಡಿದ್ದರು. ಪೋಲಿಸಿನವರ ಕಡೆಯ ಹತ್ತು ಜನಗಳು ಸತ್ತುಹೋ
ಗಿದ್ದರು. ಮತ್ತಾರು ಜನಗಳಿಗೆ ಬಹಳ ಘಾಯವಾಗಿದ್ದಿತು. ' ಎಂ' ಕೂಟದವರಲ್ಲಿ
ಕೈಶರೇ ಸಿಕ್ಕಿದ ಏಳು ಜನಗಳನ್ನೂ ತನ್ನ ಪೋಲೀಸ್ ಸೇವಕರನ್ನೂ ಕರೆದುಕೊಂಡು
ಮನೆಯಲ್ಲಿ ಬಿದ್ದಿದ್ದ ಹೆಣಗಳನ್ನೆಲ್ಲಾ ಸಾಗಿಸುವಂತೆ ಅಪ್ಪಣೆ ಮಾಡಿ ಮನೆಯ ಬಳಿ
ಹತ್ತು ಜನರನ್ನು ಕಾವಲಿಟ್ಟು, ಕಮೀಷನರು ಹೊರಟುಹೋದರು. ಭಾಸ್ಕರನು ಮಧು
ಸೂದನನನ್ನೂ ಬ್ರಾಹ್ಮಣುಬ್ಬರನ್ನೂ ಕರೆದುಕೊಂಡು ಬೀದಿಗೆ ಬಂದು ಅಲ್ಲಿ ಬ್ರಾಹ್ಮಣ
ರನ್ನು ಕಳುಹಿಸಿಬಿಟ್ಟು ಗೋವಿಂದನ ಮನೆಗೆ ಬಂದು ಅಲ್ಲಿ ಮಧುಸೂದನನನ್ನು ಬಿಟ್ಟು
ತಾನು ಕಮಿಷನರ ಆಫೀಸಿಗೆ ಬಂದನು.
ಇತ್ತ ಕಲ್ಕತ್ತಾ ನಗರದಲ್ಲೆಲ್ಲಾ ಈ ಸಂಗತಿಗಳು ಹರಡಿದವು. ಕೂಡಲೇ
ಅನೇಕ ಸಂಘದವರು ಕಲ್ಕತ್ತಾವನ್ನು ಬಿಟ್ಟೋಡಿದರು. ಎಲ್ಲರೂ ಇವುಗಳನ್ನೆಲ್ಲಾ
ಪತ್ತೇಮಾಡಿದ ಭಾಸ್ಕರನನ್ನು ಹೊಗಳಲಾರಂಭಿಸಿದರು. ಅನೇಕರು : ಎಂ' ಸಂಘದ
ಮುಕ್ತಾಯವನ್ನು ಕೇಳಿ " ಸತ್ಪುರುಷರಂತೆ ಕಾಣಬಂದ ಆ ನೀಚರುಗಳ ಹಾಗೆ
ಇನ್ನೆಷ್ಟು ಜನಗಳಿದ್ದಾರೋ ” ಎಂದು ಮಾತನಾಡಿದರು. ಅನೇಕರು ಸುಂದರಿಗಾದ
ಗತಿಯನ್ನು ಕೇಳಿ ಮರುಗಿದರು.
ಹತ್ತನೇ ಅಧ್ಯಾಯ.
ಭಾಸ್ಕರನ ಹೇಳಿಕೆ-ಮುಕ್ತಾಯ.
ವಾಸವವುರದಿಂದ ಸೋಮಸುಂದರನೂ ತ್ರಿಯಂಬಕ ಶಾಸ್ತ್ರೀಯೂ ಕಲ್ಕತ್ತೆಗೆ
ಬಂದು ಭಾಸ್ಕರನನ್ನೂ ಮಧುಸೂದನನನ್ನೂ ಕಾಣಿಸಿಕೊಂಡರು. ಮಧುಸೂದನನು
ತನ್ನ ಸ್ನೇಹಿತರಿಂದ ತಾನು ಕೆಟ್ಟು ಹೋದ ವಿಷಯಗಳನ್ನೆಲ್ಲಾ ತನ್ನ ತಂದೆಗೆ ತಿಳಿಸಿ
೪೭-------------------------------------
ಮಧುಸೂದನ 47
ಅವನ ಕ್ಷಮಾಪಣೆಯನ್ನು ಕೇಳಿದನು, ಕರುಣಾಶಾಲಿಯಾದ ಸೋಮಸುಂದರನು
ತನ್ನ ಮಗನನ್ನು ಕ್ಷಮಿಸಿ ಅವನಿಗೆ ಪ್ರಾಯಶ್ಚಿತ್ತ ಮಾಡಿಸಿ ಅನೇಕ ಬ್ರಾಹ್ಮಣರಿಗೆ
ದಾನಾದಿಗಳನ್ನು ಕೊಟ್ಟನು. ಭಾಸ್ಕರನನ್ನು ಆಗ ಅವನು ಯಾವ ರೀತಿಯಲ್ಲಿ
ಮಾತನಾಡಿಸಿದನೆಂಬುದನ್ನು ಹೇಳಬೇಕಾಗಿಲ್ಲ.
ಸೆರೆ ಸಿಕ್ಕಿದ ಏಳುಮಂದಿಯನ್ನೂ ವಿಚಾರಣೆ ಮಾಡುವುದಕ್ಕಾಗಿ ಬೇರೆ ಒಂದು
ನ್ಯಾಯಸ್ಥಾನವು ಏರ್ಪಾಡಾಯಿತು. ವಿಚಾರಣೆಯ ದಿವಸ ನ್ಯಾಯಸ್ಥಾನವೆಲ್ಲಾ
ಜನಗಳಿಂದ ಕಿಕ್ಕಿರಿದು ಹೋಗಿತ್ತು. ಒಂದು ಬೆಂಚಿನ ಮೇಲೆ ಮಧುಸೂದನ, ಸೋಮ
ಸುಂದರ, ತ್ರಿಯಂಬಕಶಾಸ್ತ್ರಿ ಗೋವಿಂದ ಮೊದಲಾದವರು ಕುಳಿತಿದ್ದರು. ಅಪರಾಧಿ
ಗಳ ಪಕ್ಷ ಯಾವ ಲಾಯರೂ ಬಂದಿರಲಿಲ್ಲ. ಸರ್ಕಾರದ ಕಡೆ ಸಾಕ್ಷಿ ಹೇಳುವು
ದಕ್ಕಾಗಿ ಬಂದಿದ್ದ ಹರಿಚಂದ್ರನು ಅಪರಾಧಿಗಳ ಪಕ್ಕದಲ್ಲಿ ನಿಂತಿದ್ದನು. ಭಾಸ್ಕರನೂ
ಇತರ ಪೋಲೀಸ್ ಅಧಿಕಾರಿಗಳ ಕುರ್ಚಿಗಳ ಮೇಲೆ ಕುಳಿತಿದ್ದರು. ಜನಗಳೆಲ್ಲರೂ
ಭಾಸ್ಕರನನ್ನೇ ನೋಡುತ್ತಿದ್ದರು. ನ್ಯಾಯಾಧಿಪತಿಯು ಬಂದು ತನ್ನಾಸನದಲ್ಲಿ
ಕುಳಿತು ಮಧುಸೂದನ, ಹರಿಚಂದ್ರ ಅವರ ಹೇಳಿಕೆಗಳನ್ನು ತೆಗೆದುಕೊಂಡನು. ಮಧು
ಸೂದನನ ಹೇಳಿಕೆಯಿಂದ ಅವನು ತಾನು ಮಾಡಿದ್ದ ಸಾಲದ ಭಯಕ್ಕಾಗಿ ವಿಶ್ವನಾಥನ
ಮಗಳನ್ನು ಮದುವೆಯಾಗುವುದಾಗಿ ಮಾತು ಕೊಟ್ಟಿದ್ದ ಹಾಗೂ, ತನ್ನ ತಂದೆಯ
ಬಳಿ ಅದನ್ನು ಹೇಳುವುದಕ್ಕೆ ಹೆದರಿ, ಅವನ ಮಾತಿನಂತೆ ಸರಳಬಾಲೆಯನ್ನು ವಿವಾಹ
ಮಾಡಿಕೊಳ್ಳುವುದಕ್ಕೆ ಪ್ಪಿದ ವಿಷಯವು ವಿಶ್ವನಾಥನಿಗೆ ತಿಳಿದು ಮದುವೆಯ ದಿನ
ಸವೇ ಬಂದು ಎಲ್ಲಾ ಸಂಗತಿಗಳನ್ನೂ ಬಹಿರಂಗಪಡಿಸುವುದಾಗಿ ಹೇಳಿ ಕಳುಹಲು,
ತಾನು ಹೋಗಿ ತನ್ನ ಕೊಠಡಿಯಲ್ಲಿ ಆರು ಜನಗಳೊಡನೆ ಬಂದಿದ್ದ ವಿಶ್ವನಾಥನನ್ನು
ಕಂಡಹಾಗೂ ಅವನು ಕೂಡಲೇ ತನ್ನನ್ನು ಹಿಡಿದು ಕೈಕಾಲುಕಟ್ಟಿ ಅವರಿಗೆ ತಾನೇ
ಹೇಳಿದ್ದ ಸುರಂಗ ಮಾರ್ಗವಾಗಿ ಸಾಗಿಸಿಕೊಂಡು ಹೋಗಿ ಕಲ್ಕತ್ತೆಗೆ ಕರೆದುತಂದು
ಅಲ್ಲಿ ಗುಪ್ತಗೃಹದಲ್ಲಿ ಶೆರೇ ಇಟ್ಟಹಾಗೂ ಬಲವಂತದಿಂದಲೂ, ಹೆದರಿಕೆಯಿಂದಲೂ
ಅವರ ಮಾತಿಗೊಪ್ಪಿ ವಿಶ್ವನಾಥನ ಕನ್ಯೆಯನ್ನು ವಿವಾಹಮಾಡಿಕೊಳ್ಳುವುದರಲ್ಲಿದ್ದೆ
ನೆಂದೂ, ಮಧುಸೂದನನು ತಿಳಿಸಿದನು.
ಹರಿಚಂದ್ರನು ಅಲ್ಲಿದ್ದ ಏಳು ಅಪರಾಧಿಗಳನ್ನೂ ತೋರಿಸಿ ಅವರೆಲ್ಲರೊಡನೆ
ತಾನೂ ಚರ್ಮದ ವ್ಯಾಪಾರಿಯನ್ನು ಸುಲಿಗೇ ಮಾಡಿದಹಾಗೂ ಆ ಮೇಲೆ ನಡೆದ
ಕೃತ್ಯಗಳಲ್ಲಿ ಭಾಸ್ಕರನ ದೆಶೆಯಿಂದ ತಾನು ಸೇರಿರಲಿಲ್ಲವೆಂದೂ ತಿಳಿಸಿದನು.
೪೮-----------------------------------------------
೪೮ ಕಾದಂಬರಿ ಸಂಗ್ರಹ
ಭಾಸ್ಕರನು, ತನ್ನ ಸರದಿಯು ಬರಲು ಎದ್ದು ನಿಂತು ' ಧರ್ಮಾವತಾರನೇ
(Judge) ನಾನು ಮಧುಸೂದನನನ್ನು ಪತ್ತೆಮಾಡುವುದಕ್ಕಾಗಿ ಕರೆಸಲ್ಪಟ್ಟೆನು.
ನಾನು ವಿಚಾರಿಸಿದ್ದರಲ್ಲಿ ಮಧುಸೂದನನ ಕೊಠಡಿಯಿಂದ ಸುರಂಗಮಾರ್ಗ ವೊಂದಿರು
ವುದೆಂದೂ ಮಧುಸೂದನನು ತನ್ನ ಸ್ನೇಹಿತರಿಂದ ಪೀಡಿಸಲ್ಪಡುತ್ತಿದ್ದನೆಂದೂ ತಿಳಿಯ
ಬಂತು. ನಾನು ಅಲ್ಲಿನ ಸುರಂಗಮಾರ್ಗವನ್ನು ಪರೀಕ್ಷೆ ಮಾಡುವಲ್ಲಿ ಇದೋ ಈ
ಗುಂಡಿಯ, ಈ ಹರಿದು ಹೋದ ಏಳು ಬಣ್ಣದ ಕರವಸ್ತ್ರವೂ ಸಿಕ್ಕಿದವು. ಅವುಗಳನ್ನು
ತೆಗೆದುಕೊಂಡುಬಂದು ಕಲ್ಕತ್ತೆಯಲ್ಲಿ ಮಧುಸೂದನನ ಸ್ನೇಹಿತನ ವಿಷಯವಾಗಿ ವಿಚಾ
ರಿಸುವಲ್ಲಿ ಅವರಿಬ್ಬನು ಮದ್ಯದಂಗಡಿಗೆ ಬರುವುದಾಗಿ ತಿಳಿಯಬಂದಿತು. ಹಾಗೆ
ಬರುತಿದ್ದವನೇ ಈ ಹರಿಚಂದ್ರನು.
ಅವನಿಗೆ ಮದ್ಯವನ್ನು ಹೆಚ್ಚಾಗಿ ಕುಡಿಸಿ ಅವನು ತನ್ನ ಏಳು ಬಣ್ಣದ ಕರವ
ಸ್ತ್ರವನ್ನು ಹೊರಕ್ಕೆ ತೆಗೆದುದನ್ನು ನೋಡಿ ಅವನೇ ನನಗೆ ಬೇಕಾದ ಮನುಷ್ಯನೆಂದು
ತಿಳಿದು ಅವನ ಮೂಲಕ ಅವನ ಸಂಘದ ವಿಷಯವನ್ನೂ ಅವರ ಮನೆಯನ್ನೂ ಅರಿತು,
ಎರಡನೇದಿವಸ ರಾತ್ರಿ ಅವನನ್ನು ನನ್ನ ಸ್ನೇಹಿತನ ಮನೆಗೆ ಕೊಂಡೊಯ್ದು ಅಲ್ಲಿ ಅವನನ್ನು
ಬಿಟ್ಟು ಅವನ ಉಡುಪುಗಳನ್ನು ನಾನು ಧರಿಸಿ ಆ ಸಂಘದ ಮನೆಗೆ ಹೋಗಿ ಅಲ್ಲಿ
ಹರಿಚಂದ್ರನಹಾಗೇ ಮಾತನಾಡಿ ಬಂದೆನು. ಪುನಃ ಹರಿಚಂದ್ರನ ವೇಷದಲ್ಲಿ ಅವರ
ಗುಪ್ತಗೃಹವನ್ನು ಹೊಕ್ಕು ಅಲ್ಲಿ ಎರಡು ದಿವಸಗಳು ವಾಸಮಾಡಿದೆನು, ಈಗಲೀಗ
ಆ ಕಳ್ಳರ ಸಂಗತಿಯನ್ನು ಹೇಳಬೇಕಾಗಿದೆ. ಈ ನೀಚರುಗಳೆಲ್ಲರೂ ವಿದ್ಯಾವಂತರಾ
ಗಿದ್ದರೂ ಕೆಟ್ಟತನಕ್ಕೆ ಬಿದ್ದು ಸಂಘವನ್ನೇರ್ಪಡಿಸಿಕೊಂಡು ಹೊರಕ್ಕೆ ಮಹಾ ಸಭ್ಯ
ರಂತೆ ತೋರ್ಪಡಿಸಿಕೊಳ್ಳುತ್ತಾ ಒಳಗೊಳಗೇ ಕಳ್ಳತನಗಳನ್ನೂ ಕೊಲೆಗಳನ್ನೂ ನಡಿಸಿ
ಆ ಹಣದಿಂದ ಜೀವನ ಮಾಡುತ್ತಿದ್ದರು. ಇವರುಗಳು ತಾವು ಮಹಾ ಶ್ರೇಷ್ಠರಾದ
ಸಂಘಸಂಸ್ಕರಣಕರ್ತರಂತೆ ತೋರ್ಪಡಿಸಿಕೊಳ್ಳುತ್ತಾ ಜನಗಳನ್ನೂ ಇತರ ಸಂಘಸಂಸ್ಕ
ರಣಿಗಳನ್ನೂ ಮರುಳುಮಾಡುತ್ತಿದ್ದರು. ಈ ನೀಚರುಗಳು ಒಂದು ತಿಂಗಳಿನ ಕೆಳಗೆ ಒಬ್ಬ
ಚರ್ಮವ್ಯಾಪಾರಿಯನ್ನು ಲೂಟಿಮಾಡಿ ಅವನ ಹಣವನ್ನೆಲ್ಲಾ ತಿಂದುಹಾಕಿರುವರು.
ಈ ನೀಚರುಗಳೇ ಒಂದು ಕಂಪನಿಯಿಂದ ರಿವಾಲ್ವರುಗಳನ್ನು ಕದ್ದವರು. ಆ ರಿವಾಲ್ವ
ರುಗಳೆಲ್ಲಾ ಈಗ ಅವರ ಗುಪ್ತಗೃಹದಲ್ಲಿರುವುದು. ಇವರ ಮುಖ್ಯಸ್ಥನಾದ ವಿಶ್ವನಾ
ಥನೆಂಬುವನು ತನ್ನ ಮಗಳನ್ನು ಯಾರಾದರೂ ಧನವಂತನಿಗೆ ಮದುವೆ ಮಾಡಬೇಕೆಂಬ
ಭಿಲಾಷೆಯಿಂದಲೇ ಮಧುಸೂದನನನ್ನು ಕದ್ದು ತಂದು ಅವನಿಗೆ ಮದ್ಯಾದಿಗಳನ್ನು
ಕುಡಿಸಿ ತನ್ನ ಮಾತಿಗೊಪ್ಪುವಂತೆ ಮಾಡಿಕೊಂಡನು. ಅನ್ಯಾಯವಾಗಿ ಆ ನೀಚನ ಕಾ
ರ್ಯಕ್ಕಾಗಿ ಪ್ರಾಣ ಕೊಟ್ಟ ಅವನ ಪುತ್ರಿಯ ವಿಷಯದಲ್ಲಿ ನಾವು ಮರುಗಬೇಕಾಗಿದೆ.
೪೯----------------------------------------------
ಮಧುಸೂದನ ೪೯
" ಈಗ ಎರಡು ಮೂರು ದಿವಸಗಳಹಿಂದೆ ನಡೆದ ವಿಷಯಗಳನ್ನು ತಿಳಿಸುತ್ತೇನೆ.
ಈ ಗುಂಪಿನವರಿಗೆ ತಮ್ಮ ಮೇಲೆ ಪೊಲೀಸಿನವರಿಗೆ ಕಣ್ಣಿದೆಯೆಂದು ತಿಳಿಯಬಂತು.
ಆದ್ದರಿಂದ ಬೇಕಾದಷ್ಟು ಧನವನ್ನು ಸೇರಿಸಿಕೊಂಡು ಎಲ್ಲಾದರೂ ಬೇರೆಕಡೆಗೆ ಹೋಗಿ
ಜೀವಿಸುತ್ತಿರಬೇಕೆಂಬಭಿಪ್ರಾಯದಿಂದ ವಿಶ್ವನಾಥನು ಹದಿನೆಂಟು ಜನಗಳೊಡನೆ ಸುರತ
ಪುರಿಯ ಜಮೀನ್ದಾರನ ಮನೆಯನ್ನು ಹೊಕ್ಕು ಸೇವಕರನ್ನು ಕೊಂದು ಸುಮಾರು
ಹತ್ತು ಲಕ್ಷ ರೂಪಾಯಿ ಬಾಳುವ ಪದಾರ್ಥಗಳನ್ನೂ ಹಣವನ್ನೂ ತಂದು ಅವರ ಗುಪ್ತ
ಗೃಹದಲ್ಲಿ ಹೂತಿರುವರು (ಜನಗಳು ತಮ್ಮಲ್ಲೇ ಮಾತನಾಡ ತೊಡಗಲು, ಆಳುಗಳು
ಸದ್ದು ಎಂದು ಕೂಗಿದರು. ಇದಾದ ಮಾರನೇ ದಿವಸ ಪೊಲೀಸ್ ರ್ಇಸ್ಪೆಕ್ಟರ್
ಮೋಸಸ್ ಎಂಬುವನಿಗೆ ವಿಶ್ವನಾಥನ ಮೇಲೆ ಸಂಶಯಹುಟ್ಟಿ ಆ ಮನೆಯನ್ನು ಹೊಕ್ಕು
ಪರೀಕ್ಷೆ ಮಾಡಿದನು. ಆದರೆ ಅಲ್ಲಿ ಅವನಿಗೇನೂ ಸಂಶಯಾಸ್ಪದವಾದ ವಸ್ತುಗಳು
ಸಿಕ್ಕಲಿಲ್ಲ. ಆದರೂ ಅವನಿಗೆ ಸಂಶಯವಿದ್ದದ್ದರಿಂದ ಹೊರಟುಹೋಗುವಾಗ ಅದೇ
ವಿಷಯವನ್ನು ತಿಳಿಸಿ ಹೊರಟುಹೋದನು. ವಿಶ್ವನಾಥನು ಆ ಮೋಸಸ್ಸನಿಂದ ತನಗೆ
ಕೆಡಕು ಬರುವುದೆಂದು ಯೋಚಿಸಿದನು. ಆದ್ದರಿಂದ ಅವನನ್ನು ಹಿಂಬಾಲಿಸಿ ಮೋಸೆಸ್ಸ
ನನ್ನೂ ಅವನ ಸೇವಕನನ್ನೂ ರಿವಾಲ್ವರಿನ ಗುಂಡುಗಳಿಂದ ಕೊಂದು ಮನೆಯನ್ನು ಸೇರಿ
ದನು. ಇವನು ಹೀಗೆ ಮಾಡುವನೆಂದು ತಿಳಿದಿದ್ದರೆ ಅದನ್ನು ತಡೆಯುತ್ತಿದ್ದನು.
ಆದರೆ ಅವನು ಆ ವಿಷಯವನ್ನೆ ಹೇಳಲಿಲ್ಲವು. ಆದ್ದರಿಂದ ನಾನೂ ಸಂಶಯಪಡಲಿಲ್ಲ.
ಇನ್ನು ತನ್ನ ಮಗಳ ಮದುವೆಯೊಂದೇ ಉಳಿದಿತ್ತು. ಅದರೊಳಗಾಗಿ ನಾನು ನನ್ನ
ಸ್ನೇಹಿತರಾದ ಪೊಲೀಸ್ ಕಮಿಷನರ ಬಳಿಗೆ ಬಂದು ಅವರಿಗೆ ಸಕಲ ವಿಷಯಗಳನ್ನೂ
ತಿಳಿಸಿದೆನು. ಮಾರನೇ ದಿವಸ ವಿವಾಹವು ನಡೆಯುವುದೆಂದೂ ಆಗ ಅಲ್ಲಿ ಎಲ್ಲಾ
ಮೆಂಬರುಗಳೂ ಸೇರುವರೆಂದೂ ನನಗೆ ತಿಳಿದಿದ್ದದ್ದರಿಂದ ಮಾರನೇ ದಿವಸ ಅನೇಕ
ಪೊಲೀಸಿನವರೊಡನೆ ಹೋಗಿ ಅವರನ್ನು ಸೆರೆಹಿಡಿಯಬೇಕೆಂದು ಹೇಳಿದೆನು. ಅದರಂತೆ
ನಾವು ಸರಿಯಾದ ಸಮಯಕ್ಕೆ ಹೋಗಿ ಆ ವಿವಾಹವನ್ನು ನಿಲ್ಲಿಸಿ ಸತ್ತುಳಿದ ಈ ಏಳು
ಮಂದಿಗಳನ್ನೂ ಹಿಡಿದುತಂದಿರುವೆವು. ಇವರನ್ನೆಲ್ಲಾ ಸುರತಪುರಿಯ ಕೊಲೇ ಮತ್ತು
ಡಕಾಯಿತಿಗಳಲ್ಲೂ ಮತ್ತು ಹಿಂದ ಅನೇಕ ಕಟ್ಟ ಕೃತ್ಯಗಳಲ್ಲಿ ಭಾಗಿಗಳಾಗಿದ್ದ .
ರೆಂದೂ ನಾನು ಅವರ ಮೇಲೆ ಅಪರಾಧವನ್ನು ಹೊರಿಸುತ್ತೇನೆ. ಇದೋ ಈ ಹರಿಚಂ
ದ್ರನು ಚರ್ಮದ ವ್ಯಾಪಾರಿಯನ್ನು ಸುಲಿಗೇವಾಡಿದ್ದಾಗ ಸೇರಿದ್ದರೂ ಆ ಮೇಲೆ
ನಡೆದ ಕೃತ್ಯಗಳಲ್ಲಿ ಸೇರಲಿಲ್ಲವು. ಅವನು ಎಲ್ಲಾ ವಿಷಯಗಳನ್ನೂ ನನಗೆ ತಿಳಿಯ
೫೦--------------------------------------------
50 ಕಾದಂಬರಿ: ಸಂಗ್ರಹ
ಪಡಿಸಿದನು. ಆದ್ದರಿಂದ ಧರ್ಮಾವತಾರನು ಅವನ ಮೇಲೆ ಕರುಣೆಯನ್ನು ತೋರಬೇ
ಕೆಂದು ಬೇಡುತ್ತೇನೆ. ಸುರತಪುರಿಯ ಜನ್ಮಾರನ ಆಸ್ತಿಯೆಲ್ಲ ವೂ ಮತ್ತು ಕಳು
ವಾದ ರಿವಾಲ್ವರುಗಳೂ ಮತ್ತು ಚರ್ಮದ ವ್ಯಾಪಾರಿಯ ಸ್ವಲ್ಪ ಭಾಗ ಧನವೂ ಈ
ಅನಾಯಕ ಪಾಳಯದವರ ಗುಪ್ತಗೃಹದಲ್ಲಿರುವದು ” ಎಂದು ಹೇಳಿ ಧರ್ಮಾವತಾರ
ನಿಗೆ ವಂದಿಸಿ ಕುಳಿತುಕೊಂಡನು. ಕೂಡಲೇ ಜನಗಳೆಲ್ಲಾ ಕೈತಟ್ಟಿ ತಮ್ಮ ಸಂತೋಷ
ವನ್ನು ತೋರ್ಪಡಿಸಿದರು. ಆಗ ನ್ಯಾಯಾಧಿಪತಿಯು ಆ ಏಳುಜನ ಅಪರಾಧಿಗಳನ್ನೂ
ಏನು ಹೇಳುವಿರೆಂದು ಕೇಳಲು ಅದಕ್ಕವರು “ ನಾವು ಹೇಳತಕ್ಕುದೇನೂ ಇಲ್ಲವು
ಭಾಸ್ಕರನು ಹೇಳಿದ್ದೆಲ್ಲಾ ನಿಜವು. ತಮ್ಮ ವಿಷಯದಲ್ಲಿ ಕರುಣೆಯನ್ನು ತೋರಿಸಬೇ
ಕೆಂದು ” ಬೇಡಿದರು.
ಜನಗಳ ಕೋಲಾಹಲವು ನಿಲ್ಲಿಸಲ್ಪಟ್ಟ ಮೇಲೆ ಪಂಚಾಯಿತರ ಅಭಿಪ್ರಾಯ
ವನ್ನು ಹೊಂದಿ ಧರ್ಮಾವತಾರನು ಎದ್ದು ನಿಂತುಕೊಂಡು ಈ ರೀತಿಯಾದ ತೀರ್ಪ
ನ್ನೋದಿದನು. " ನಮ್ಮ ಮುಂದೆ ನಿಂತಿರುವ ಅಪರಾಧಿಗಳ ಕೃತ್ಯಗಳು ಬಹಳವಾಗಿವೆ.
ನಮ್ಮ ಪಂಚಾಯಿತರು ಅವರುಗಳನ್ನೆಲ್ಲಾ ತಪ್ಪಿತಸ್ಥರೆಂದು ಹೇಳಿರುತ್ತಾರೆ. ಇವರು
ಗಳು ಕೊಲೇ ಡಕಾಯಿತಿ ಮುಂತಾದವುಗಳನ್ನು ಮಾಡಿರುವದು ರುಜುವಾತಾಗಿದೆ.
ಆದರೆ ಇವರಲ್ಲಿ ಮೂವರು ಇನ್ನೂ ಬಹಳ ಚಿಕ್ಕ ವಯಸ್ಕರಾದ್ದರಿಂದ ನಾವು ಅವರಿಗೆ
ಕರುಣೆಯನ್ನು ತೋರಿ ತಲಾ ಏಳು ವರುಷಗಳ ಕಠಿನ ಸಜಾವನ್ನೂ , ಉಳಿದ ನಾಲ್ವರೂ
ದೊಡ್ಡವರೂ ವಿದ್ಯಾವಂತರೂ, ತಿಳಿದವರೂ ಆಗಿ ಈರೀತಿಯಾದ ಕೆಟ್ಟ ಕೆಲಸಗಳನ್ನು
ಮಾಡಿರುವುದರಿಂದ ನಾವು ಅವರಿಗೆ ಜೀವಾವಧಿದ್ವೀಪಾಂತರವಾಸವನ್ನೂ ವಿಧಿಸಿರುತ್ತೇವೆ.
ನಾವೆಲ್ಲರೂ ಈ ಪತ್ತೇದಾರೀ ಭಾಸ್ಕರರ ಘಟ್ಟಿಗತನವನ್ನು ಹೊಗಳುತ್ತೇವೆ. ಈ ನೀಚ
ರುಗಳು ಕದ್ದಿದ್ದ ಪದಾರ್ಥಗಳೆಲ್ಲಾ ಆಯಾಮಾಲೀಕರಿಗೆ ಕೊಡಲ್ಪಡಬೇಕು, ಇನ್ನು
ಮುಂದೆ ಇಂಥಾ ಸಂಘಗಳಮೇಲೆ ಪೋಲೀಸಿನವರು ಕಣ್ಣಿಟ್ಟಿರುವರೆಂದು ನಾವು ನಂಬು
ತೇವೆ. ಇದಕ್ಕೆ ನಮ್ಮ ವಿದ್ಯಾವಂತರಾದ ಪಂಚಾಯಿತರೂ ಒಪ್ಪುತ್ತಾರೆಂದು ನಂಬು
ತೇವೆ ಈ ಹರಿಚಂದ್ರನೆಂಬುವನು ಕೊಲೆ ಮುಂತಾದವುಗಳನ್ನು ಮಾಡದೇ ಇದ್ದದ್ದ
ರಿಂದಲೂ ಸರ್ಕಾರದ ಪಕ್ಷವಾಗಿ ಸಾಕ್ಷಿ ಕೊಟ್ಟಿದ್ದರಿಂದ ಅವನಿಗೆ ಅಧಿಕ ಶಿಕ್ಷೆ
ಯನ್ನು ಕೊಡದೆ ಒಂದು ವರ್ಷ ಕಠಿಣಸಜಾವನ್ನು ವಿಧಿಸಿರುತ್ತೇವೆ. ” ಎಂದು ಮುಗಿ
ಸಿದಕೂಡಲೆ ಅಪರಾಧಿಗಳೆಲ್ಲಾ ಕಾರಾಗೃಹಕ್ಕೆ ಒಯ್ಯಲ್ಪಟ್ಟರು. ಜನಗಳ ಗುಂಪಿನ
ಲ್ಲಿದ್ದ ಸುರತಪುರಿಯ ಜಹಗೀರ್ದಾರನೂ, ಚರ್ಮವ್ಯಾಪಾರಿಯೂ ಎದ್ದು ಬಂದು ಭಾಸ್ಕ
೫೧-------------------------------------------------
ಮಧುಸೂದನ 51
ಕನಿಗೆ ಹಸ್ತಲಾಘವವನ್ನು ಕೊಟ್ಟು ಅವನನ್ನು ಹೊಗಳಿ ದಯವಿಟ್ಟು "ತಮ್ಮನ್ನು
ಬಂದುಕಾಣಬೇಕೆಂದು ” ಹೇಳಿ ಹೊರಟುಹೋದರು.
ವಾಸವಪುರದಲ್ಲಿ ಮಧುಸೂದನ ಮತ್ತು ಸರಳಬಾಲೆ ಇವರುಗಳ ವಿವಾಹವು
ನೆರವೇರಿತು. ಆ ಸಮಯದಲ್ಲಿ ಸುರತಪುರಿಯ ಜಮೀನ್ದಾರನೂ, ಚರ್ಮವ್ಯಾಪಾ
ರಿಯೂ ಬಂದಿದ್ದು ಅಲ್ಲಿದ್ದ ಭಾಸ್ಕರನನ್ನು ಕಾಣಿಸಿಕೊಂಡು ತಮಗೆ ತೋಚಿದ ರೀತಿ
ಯಲ್ಲಿ ಅವನಿಗೆ ಪಾರಿತೋಷಕವನ್ನು ಕೊಟ್ಟರು. ಸರ್ಕಾರದಿಂದ ಬರಬೇಕಾಗಿದ್ದ ಬಹು
ಮಾನವೂ ಬಂದಿತು. ಸೋಮಸುಂದರನೂ ತನಗೆ ತೋರಿದ್ದನ್ನೆಲ್ಲಾ ಕೊಟ್ಟನು. ಸ್ವಲ್ಪ
ಕಾಲದಲ್ಲೇ ಭಾಸ್ಕರನು ಅರವತ್ತು ಸಾವಿರ ರೂಪಾಯಿಗಳನ್ನು ಸಂಪಾದಿಸಿಬಿಟ್ಟನು.
ಆದರೂ ಅವನು ಆಗಾಗ್ಗೆ ಸುಂದರಿಗಾದ ಗತಿಯನ್ನು ಕುರಿತು ವ್ಯಸನಪಡುತ್ತಿದ್ದನು.
ವಿವಾಹವಾದಮೇಲೆ ಎಲ್ಲರೂ ತಮ್ಮ ತಮ್ಮ ಸ್ಥಳಗಳಿಗೆ ಹೋದರು. ಭಾಸ್ಕರನು
ಮಾತ್ರ ಮಧುಸೂದನನ ಸಂಗಡ ಒಂದೆರಡು ತಿಂಗಳು ಇರುವುದಾಗಿ ಒಪ್ಪಿ ನಿಂತನು.
ಪಾಠಕಮಹಾಶಯ ! ಸದ್ಯದಲ್ಲಿ ಭಾಸ್ಕರನನ್ನು ವಾಸವಪುರದಲ್ಲಿ ಬಿಟ್ಟಿರು
ವವು. ಮುಂದಕ್ಕೆ ಅವನ ವಿಷಯವಾಗಿ ನೀವು ಕೇಳಬೇಕೆಂದಿದ್ದರೆ ಶ್ಯಾಮಲಾಂಗಿ
ಯೆಂಬ ಪುಸ್ತಕವನ್ನು ಓದಿನೋಡಿರಿ.
ಸಂಪೂರ್ಣಂ.
=======================================
ಕಾದಂಬರೀ ಸಂಗ ಹ ಆಫೀಸಿನಲ್ಲಿ ಬೆಲೆಗೆ ದೊರೆಯುವ
ಗ್ರಂಥಗಳ ಪಟ್ಟಿ,
1, ವಿಶಾಲಾಕ್ಷಿ 0 12 0 18, ಪ್ರೇಮಪಿಪಾಸೆ 0 2 0
9. ಕಮಲಕುಮ 0 9 0 17. ಸುಲೋಚನಾ 0 3 0
3, ನನ್ನ ಸಂಸಾರ 0 5 0 18, ವಿನೋದಚಂದ್ರ 0 2 0
4 ಚಂದ್ರಿಕಾವಿಜಯ 0 3 0 19. ಡಕಾಯಿತಿ 0 2 0
5, ಮಧುಸೂದನ 0 4 0 20.ಸದಾಹಾರವಿವೇಚನ 0 2 0
6, ಶಂಕರಕಥಾಸಾರ 0 8 0 21, ನೀತಿಬೋಧಿನಿ 0 2 0
7. ಮೃತ್ಯುಪರೀಕ್ಷೆ 0 2 0 22. ಕರಾವಲಂಬಸ್ತೋತ್ರ 0 1 0
8, ದೈವಾನುಗ್ರಹ 0 2 0 23. ಹರಿಣಾಕ್ಷಿ 0 1 0
9. ಏನೋ ಆಗಿ ಹೋಯಿತು 0 1 0 24, ಕ್ಷಾತ್ರತೇಜ 0 6 0
25 ಬಿಲ್ಲುಗಾರಮಲ್ಲ 0 1 6,
10.ವಿಲಕ್ಷಣ ದೈವಘಟನೆ 0 4 0 26, ವಿಶ್ವನಾಥ 0 1 0
27. ಸವರ್ಣಸಂಪುಟ 0 3 0
11. ವಿರಕ್ತಳಾದ ಸೌದಾಮಿನಿ 0 5 0 28, ಜಯಚಂದ್ರಿಕೆ 0 4 0 29, ಅಧ್ಯಾತರಾಮ ಬಾಲಕಾಂಡ 0 10 0
12. ಕುಮಾರಭೀಮಸಿಂಹ 0 1 0
13. ಸುಮನೋರಮ 0 2 0 30, ವಲೀಮುಖವಿಲಾಸ 0 8 0
14 ಬೃಂದಾವನ 0 2 0 31. ಕಂಠೀರವಶತಳ 0 2 0
15, ಮಲಿನೀ 0 2 0 : 32, ರೋಹಿಣಿ 0 4 0
ಕಾದಂಬರೀ ಸಂಗ್ರಹ ಮಾಸಪತ್ರಿಕೆಯ ವಾರ್ಷಿಕಚಂದಾ 1-4-4, ಹೊಸ
ಚಂದಾದಾರರಿಗೆ ಯಾವುದಾದರೂ 4 ಆಣೆಯ ಪುಸ್ತಕ ಬಹುಮಾನ, ಮಾದರೀ
ಪತ್ರಿಕೆಗೆ ೨ ಆಣೆ. ಏಜೆಂಟರಿಗೆ ಧಾರಾಳವಾದ ಕಮಿಷನ್ ಕನ್ನಡಿಗರ ಪ್ರೋತ್ಸಾ
ಹವು ನಿರೀಕ್ಷಣೀಯ.
ನಮ್ಮ ವಿಳಾಸ-ಎಡಿಟರ್, ಕಾದಂಬರಿ ಸಂಗ್ರಹ,
ಮೈಸೂರು
================================================
ಶಂಕರಕಥಾಸಾರ
(The Life and Teachings of Sri Sankara)
ಡಿ. ಎಸ್. ಶಂಕರನಾರಾಯಣಶಾಸ್ತ್ರಿ
ಮೈಸೂಯ
MYSORE: ROYAL PRESS
1916
Price 8 As 8 ಆಣೆ
----------------------------------------------------------------
PRINTED BY
B. V. NARASIMHAIYENGAR
AT THE ROYAL PRESS, MYHORE-1916.
-----------------------------------------------------
Contents (ವಿಷಯಸೂಚಿಕೆ.)
ವಿಷಯಗಳು ಪುಟಸಂಖ್ಯೆ
ಪ್ರಥಮವಲ್ಲರೀ ( ಈಶ್ವರಾಜ್ಞೆ 1
(ಭಟ್ಟ ಸಾದಾವತಾರ
ದ್ವಿತೀಯವಲ್ಲರೀ ಈಶ್ವರಾನುಗ್ರಹ ... ೪
ತೃತೀಯವಲ್ಲರೀ ಶ್ರೀಶಂಕರಾವತಾರಘಟ್ಟ ... ೬
ತುರೀಯವಲ್ಲರೀ ಶ್ರೀಶಂಕರಭೌಮರವರ್ಣನವು, .. ೯
ಶ್ರೀಶಂಕರ ಕ್ರಮಸನ್ಯಾಸ ... ೧೫ ( ಪ್ಯಾನುಗ್ರಹ ಛಾಷ್ಯರಸನೆ ವ್ಯಾಸ ಸಂದರ್ಶನ ಇಟ್ಟಪಾ
ತುರೀಯವಾಗಿ ಪಂಡಿಮವ
ಷಷ್ಟವಲ್ಲ
ಸಕ್ಷಮವಲ್ಲರಿ:
ದಾಸುಗ್ರಹ
ಮಂಡನಮಿಛಯಭಾರತಿಗಳ ಪರಾಭವ ( ಉಗ್ರರವನ;
IF 1 ನರಸಿwಪ್ರತ್ಯಕ್ಷ ವಿಷಯ ( ಮೂಕಾಂಬಾದರ್ಶನ(ಶ್ರೀಚಕ್ರಸ್ಥಾಪನ೪೧ 1 ಶೃಂಗಗಿರಿಯಲ್ಲಿ ಶ್ರೀಮತಸ್ಥಾಪನೆ
ಬ್ರಹ್ಮವಿದ್ಯಾಪ್ರಚಾರ ... vy ( ಶ್ರೀಶಂಕರಕೃತ ಜನನೀಕರ್ಮ ., ೪೬
ಪದ್ಮಪಾದ ತೀರ್ಥಯಾತ್ರಾ
ಆಚಾರಕೃತಜಯ ವರ್ಣನವು ೪e ( ಅಭಿನವಗುಪ್ತ ಕೃತಾಭಿಚಾರಿಕವ್ರ ೬೫
ಸರ್ವಜ್ಞ ಪೀಠಾರೋಹಣ (ಕೈಲಾಸಗಮನ
ಅವನಲ್ಲ
ನಮಮಮ ಈ
ಮತ್ತು
'
...
ಏಕಾದವರೇ
ದ್ವಾದಶನ
ತ್ರಯೋದಶವಲ್ಲ
ಕುದಾ ಕುದ್ಧಗಳು
ನಿನಗೆ
ಪಟ ಪಟ್ಟು, ಆಸಿದ್ಧ.
ಶುದ್ಧ. ಜ್ಯೋತಿರ್ಲಿಂಗ
ಜ್ಯೋತಿರ್ಲಿಂಗ ಜಯದಂತ
ಡೆದಂತ ಪ್ರಸಕ
ಇಸ್ತಕ ದ್ವೀತ ಸುಟ್ಟರು
ಹುದು ಪ್ರತಿಬಾತ್ಕಾಂತ ಪ್ರತಿಜ್ಞಾ ದೃಷ್ಟಾಂತ
ನನಗೆ ಕಾಯಿತು ಪ್ರಕಟವಾಯಿತು ಟುವ್ರಹಿಸಿದರು
ಲುಪಕ್ರಮಿಸಿದರು ಮೋಸ
ಮೂಹ ಎಂದವನಾಗಿ
ಎಲ್ಲರನನಾಗಿ ನಟನ
ಮುಖೇನ
ಹಸ್ತಾಮಲಕ್ಕ ಹಸ್ತಾಮಲಕ Y8
ಆ ರಡರ
ಆ ಎರಡರ Y
ಈಳಹಸ್ತಿಶ್ವರ ಕಾಳಹಸ್ತೀಶ್ವರ ಆದ್ದರಿತ
ಆದ್ದರಿಂದ ಯಜ್ಞಾಭರಿಳಮ ಯಜ್ಞಾದಿಳನು ಭಿನ್ನರನಾದ ಭಿನ್ನರೂಪವಾದ
ವ್ಯಂ; ಆಗುತ್ತದೆ ಉಂಟಾಗುತ್ತದೆ
ಬಂಧವು
ಬಂಧುವು ಮತಾನುಸಿದ್ದಾಂತ 1 ಮತಾನುಯಯ ಜ್ಞಾನಯಾಯಿಗಳಾದ
ವನ್ಯುಪಾಂತನವ ವನ್ಯುಪಂಚಮಚ 00
ಪ್ರಸಿದ್ಧರು
ಸಿದ್ಧರು. N,B.-ಅರ್ಥ ವ್ಯತ್ಯಾಸವಾಗುವ ಕೆಲವು ತಪ್ಪುಗಳನ್ನು ತಿದ್ದಿದ ಉಳಿದು ನ್ನು ವಾಚಕರು ತಿದ್ದಿಕೊಡು ಓರಬೇಕಾಗಿ ಪ್ರಾರ್ಥನೆ
: : ... • ಸಿ : ? 2 3 « ೯ : 8 ? 4 ೬ ||
೬೫
-----------------------------------
ಪ್ರಸ್ತಾವ ನೆ ,
ಮಹನೀಯರೇ,
ಮಹಾಪುರುಷರ ಚತ್ರೆಯನ್ನು ಬರಯಬೇಕಾದರೆ ಮಖಾಂತರಿದ ಲ್ಲದೇ ಸಾಮನ್ಯರಿಂದಾಗಲಾರದೆಂಬ ವಿಷಯವು ಸರ್ವರಿಗೂ ತಿಳಿದೇಯಿರುವುದು; « ಲೋಕೋಭಿನ್ನ ರುಚಿ” ಎಂಬ ನಾಣ್ಣುಡಿಯಂತೆ, ಸರ್ವಜನರಿಗೂ ಸಮಾಧಾನ ವಾಗಿರುವಂತೆ ಗ್ರಂಥವನ್ನು ರಚಿಸುವುದು ಬಹಳ ಕಷ್ಟವಾದ ಕೆಲಸವಾಗಿರುವುದು
ಹೀಗಿರುವಲ್ಲಿ ಮಹಾಪ್ರರುಷರಾದ ಶ್ರೀ ಶಂಕರಾಚಾರೈರ ಡುಯನ್ನು ಬರೆ ಯುವುದು ಸಾಮಾನ್ಯವಾದುದಲ್ಲ. ಅದರಲ್ಲಿಯೂ 11 ಶತರಕಥಾಸಾರ' ಎಂಬ ಈ ಗ್ರಂಥರಚನೆಯು ಅತ್ಯಧಿಕವಾದ ಪ್ರಯತ್ನದಿಂದ ರಸಭುತವಾಗಿ ಮಾಡಲ್ಪ ಚೈದ ಈ ಗ್ರಂಧರ್ತರಾದ ವ|| ರಾ|| ಪಿ. ಎಸ್. ಶಂಕರನಾರಾಯಣಶಾಸ್ತ್ರಿಯ ಮರು ಇನ್ನೂ ಚಿಕ್ಕ ವಯಸ್ಸಿನವರು. ಇದೆಇವರ ಮೊದಲನೆಯ ಗ್ರಂಥರಚನೆಯು ಈ ಬಾರಳ್ಳಿಯ ಗ್ರಂಥರಚನೆಯಲ್ಲಿ ಇಮಗೆ ಉತ್ಸಾಹಪುಟ್ಟ, ತಮ್ಮ ಆಶಾಪೂರ್ಣತೆಯನ್ನು ಮಾಡಿಕೊಳ್ಳಲು, ಸಾಮಾನ್ನವಾದ ಕಟ್ಟು ಕಥೆಗಳನ್ನು ಬಯಲುಪಕ್ರಮಿಜೀ ಶ್ರೀ ಆ34ರ.ಚತ್ರೆಯ ಸಾರವನ್ನು ಸಂಗ್ರಹಿಸಿ ಬರೆಯಲುಪಕ್ರಮಿಸಿ ಎ.ಸಿರುರು ಆ3ರ ಪಿಮೆಯಿಂದ ಬೇರೆಯಲ್ಲ.
ಈ ಗ್ರಂಥಕರ್ತರು ಪುಸ್ತಕವನ್ನು ಪ್ರಚಾರಕ್ಕೆ ತರಲು : ಶ್ರೇಯಾಂಸಿಬಹು ಏನ್ಮಾನಿ” ಎಂಬಂತೆ ನಾನಾ ಕಷ್ಟಗಳನ್ನು ಅನುಭವಿಸಿದ್ದರಿಂದ ಇಂತಹ ಸತ್ಕಾರದ ಹತಾಶರಾಗಿ ವೈರಗುಂದಿದವರಾಗಿದ್ದರು. ಆಗಾಗ್ಗೆ ನಿಮಗೆ ಉತ್ಸಾಹ ಕಂದುದ ರಿಂದ ಈ ಪುಸ್ತಕ ಪ್ರಚಾರಕ್ಕೆ ಬರಲು ಅನುವಾಯಿತು.
- ಬಸನೀಯರು ತಮ್ಮ ಉತಾರವಾದ ಮನಸ್ಸಿನಿಂದ ಈ ಗ್ರಂಥಕರ್ತರಿಗೆ ಪ್ರೋತ್ಸಾಹಕೊಟ್ಟು ಇತರ ಗ್ರಂಥರಚನೆಯಲ್ಲಿನ ಉತ್ಸಾಹವನ್ನು ಅಭಿವೃದ್ಧಿಗೊಳಿ
ಸುವದು ಕೊಳ್ಳುತ್ತವೆ
ಮೈಸೂರು | 13-1918 )
ಬಿ. ವಿ. ನರಸಿಂಹೈಯ್ಯಂಗಾರ್,
--------------------------------------------------------------
ಉಪೋದ್ಘಾತ. ಬ್ರತ್ಮಕ ಜಗಧಿ ಅ ಬ್ರಹ್ಮವ ನಾರು -
ಆಸನವೇದ್ಯ ಕಟ್ಟಪ್ಪ ಬಿ ವೇರನ್ನ ಆರು ! ಅಕ್ಕಮಹಯಕಿ !
ಮನು ಸಶಸ್ತ್ರಸಂಪನ್ನ, ಸಷ್ಟಿಸಿದನಂತರದಲ್ಲಿ, ವೇದಗಳನ್ನೂ, ವೇದಗಳ ತತ್ತ್ವವನ್ನು ಬೋಧಿಸುವ ಆದ್ಯತವನ್ನೂ ಮಹರ್ಷಿಗಳಿಗೆ ಬೋಧಿಸಿದನು.
ಚತುವವವೆಂಬ ವೃಕ್ಷವೂ ಅವೈತವೆಂಬ ಮುಖ್ಯ ಶಾಲೆಯಿಂದ, ತಡಂ ಕಗಳಿಂಬ ಉಪಶಾಚಿಗಳಿಂದ, ಮೇಳವು ಫಲದಿಂದಲೂ ಕೂಡಿ ಮಹರ್ಷಿಗಳಿಂದ ರಕ್ಷಿಸಲ್ಪಡುತ್ತಿತ್ತು. ಹೀಗೆ?: ಒಘಳಕಾಲ ನಡೆಯಿತು. ಆನಂತರ, ಅಂದರೆ ಈಗ್ಗೆ ಸುಮಾರು ೧೨೦೦ ವರುಷಗಳ ಹಿಂದೆ (ಶಂಕರನೇಕರು ಇದ್ದ ಕಾಲ ವನ್ನು ಸರಿಯಾಗಿ ಸಿಷ್ಟಸಾಧ್ಯ. ಒಬ್ಬೊಬ್ಬರ ಮತವೂ ಒಂದೊಂದು ವಿಧ ವಾಗಿರುತ್ತದೆ. ಅದರಲ್ಲಿ ಅದನ್ನು ನಾನು ಅವಗಾಹನೆಗಾಗಿ ವಿಮಸಿದೆ:
ಕು ಕಾಲವಿಚಾರ. (1) 1(ಜೆಸ', ಎಷ್ಟು ಸಾವನಾತಕ' ತಂಬುವರು, ಶ್ರೀಮಚ್ಛಂಕರ ಭಗವತ್ಪಾದರು ಕ್ರಿ. 4 TNS & ಆವರಮನಿ ಕ್ರಿ. ಶ. 827 ರಲ್ಲಿ ವೃಷಭಾ ರೂಢರಾಗಿ ಕೈಲಾಸಗಳci [೬, ೬. 1882 ನೇ ೬೯ ೧ ರಲ್ಲಿ ಪ್ರಸಿದ್ದ ವಾಗಿರುವ (ಇಂಡಿಯ ಆಟ-Indian Antiquary) ದಕ್ಷಿಣtಂದೂ ಸ್ಟಾನೇತಿಹಾಸದ 11 ನ ಗ್ರಫರು ಹೇಳುತ್ತಾರೆ.
(೩) 14 ತಾರಾನಾರ್ಥಕ್ರಾಚಸ್ಪತಿ, ಬಿ. ಎ.” ಎಂಬುವರು ತಾವುಮರಿ ಕುವ ಬುದ್ಧನ ಹರಿತ್ರೆಯಲ್ಲಿ, ಕ್ರಿ. ಶ. 700 ಮತ್ತು 760 ರಲ್ಲಿ ಉತ್ಪನ್ನನಾದ ಕುಮಾರಿಲಭಟ್ಟನಿಗಿಂತ ಮುಂಚೆಯೇ ಶಂಕರಾಚಾದ್ಯರಿದ್ದರೆಂದು ತಿಳಿಸುತ್ತಾರೆ.
() 14 ಸಾಕ್ಷ, ಬರ್ನಕ್ " ಎಂಬುದು, ಕ್ರಿ. & 060 ಮತ್ತು 100 ವರುಷಗಳ ಮಧ್ಯದಲ್ಲಿ ಶcಳರಶಿರಿಷ್ಟರೆಂದು ತಿಳಿಸುತ್ತಾರೆ,
(೨) 14 ರಕ್ಕರ್, ಟೀ " ಎಂಬುವರು ಶಂಕರರು 800 ವರುಷಗಳಿಗಿಂತಲೂ ಹಿಂದೆ ಇದ್ದರೆಂದು ತಿಳಿಸುತ್ತವೆ.
(6) 11 ಪಂಡಿತ್, ಬುಕ್ " ಎಂಬುವರು ಶಂಕರಭಗವತ್ಪಾದರು 2000 ವರುಷಗಳಿಗಿಂತ ಹಿಂದೆ ಇದ್ದರೆಂದು ತಿಳಿಸುತ್ತಾರೆ.
14 ಜಿ ಸಿ ಆರ್ಲ, ಎಮ್, ಎ," ಎಂಬುವರು 11 ಇ ಡ, ಢಾಂಸ, ಎಮ್, ಎ," ಎಂಬುವರು ಹೇಳುವಂತೆ ಶಂಕರಾಚಾರೈರು ನೇ ಶತಮಾನದಲ್ಲಿದ್ದ ಇದು ತಿಳಿಸುವರು.
(8) 14 ಸ:ಡಿತ್, ರಾಮಮೋಹನರಾಯ" ಎಂಬುವರು ಶಂಕರಾಚಾದ್ಯರಿಂದ ಪರಂಪರೆಯಾಗಿ ಬಂದಿರುವ ಆಚಾರೈರ ಹರಿತ್ರೆಯನ್ನು ಲೆಕ್ಕಮಾಡುವಲ್ಲಿ ಶಂಕರಧರ ವತ್ಪಾದರು ಕ್ರಿ. ಶ. 70 ಮತ್ತು 800 ರಲ್ಲಿ ಇದ್ದರೆಂದು ತಿಳಿಸುತ್ತಾರೆ.
(7) « ಪಡಿತ, ವಿ... " ಎಂಬುವರು ಈ ಮೇಲಿನ ಮೂವರ ಮತವನ್ನೂ ತಿಳಿಸಿ « ಶಂಕರದೇಶಿಕರು 8 ನೇ ಶತಮಾನದ ಅಂತ್ಯದಲ್ಲಿ ಇದ್ದರೆಂದು ತಿಳಿಸುತ್ತಾರೆ ಇದರ ನಂತರ 12 ವರುಷಗಳ ಓಜ ಇದ್ದನೆಂದು ತಿಳಿಯುತ್ತದೆ
(8) ಜನವಿಜಯದಲ್ಲಿ ಶಂಕರಾಚಾ 2Mಲ ವರುಷಗಳ ಹಿಂದೆ ಇದ್ದ ರಂದು ಇದೆ
(9) : ಕಾಂಮಖಾನಿ ದಗ್ರತತ್ಪರವ' ಎ೦ಬ ಶಿವರಹ ಸ್ಯರ ವಚನದಂತೆ ತಂರ್ತ-ತತ್ಸರೆ: 24Mkವಸುಷಗಳ ೬ನೆ ಇದ್ದರೆಂದು ತಿಳಿಯ ಬರುತ್ತದೆ.
(10) ಧರ್ಮೇಾಂಶತಿರ ಸು ಸಹಸ್ರ ” ಎಂದು ಜಾನಂದ ಪಂಡಿತರು ಹೇಳಿ, ತಾರೆ, ಇರುವ ರೈತ ಸುರು 24KNO ವ ಜಗಳ ಹಿಂದೆ ಇದ್ದರೆಂದು ತಿಳಿದುಬರುತ್ತದೆ.)
ಕಲಿವುಮೆಯಿಂದ, ರ್ಪತಜಾದೂ, ಈcರ್ಮಿಗಳೂ ಆದ ಕ್ರಕಜರು, ಕಾಪಾಲಿಕರು, ಶಾರು, ಜೈನರು, ವೈದ್ಯರು ಇತ್ಯಾದಿ ಜನರ ಪ್ರಾಬರಿ: ಮರುನಿಂದ ಸೃಷ್ಟಿಸಲ್ಪಟ್ಟ ಆ ಚಿರ್ತವೆಂಬ ತಕ್ಷನ ನಾಶವಾಗುವ ಸಮಯ&cbತು.
ಯಜ್ಞಯಾಗಾದಿಗಳನ್ನು ಮತತತ್ವವಿಲ್ಲದೆ ಜೀವತೆಗಳೆಲ್ಲಾ ಖನವ್ರತ ವನ್ನು ಕೈಗೊಳ್ಳಬೇಕಾಯಿತು. ಆಗ ದೇವತೆಗಳ, ಬ್ರಹ್ಮ ಸಹಿತರಾಗಿ ಪರಮೇಶ್ವರ ನಲ್ಲಿಗೆ ಹೋಗಿ ಭೂಲೋಕದ ಅನಾಚಾರವನ್ನೆಲ್ಲಾ ತಿಳಿಸಿದರು.
ಆಚಾರರ ಅವತಾರಕಾರಣ, ಆಗ ಕರುಣಾಳುವೂ ಭಜಪಕ್ಷಕನೂ ಆದ ಮಹೇಶ್ವರನ (1) 11 ಕಲೌರು ಮಹಾದೇವೋ ಲೋಕಾನಾಮೀಶ್ವರಪ್ರಧು|
ದೈವ ಸಾಧಯತ್ನಕಾಂ ದೇವತಾನಾಂಡ ದೈವರ್ತ ||೧||
------------------------------------------------------------
ಕರಿಷ್ಯತ್ಯವತಾರಾಣಿ ಕಕರೋ ನೀಲಶೋತು | ಶೌತಸ್ಮಾರ್ತ ಪ್ರತಿಷ್ಟಾರ್ಥ೦ ಭಕ್ತಾನಾಂ ಹಿತಕಾಮ್ಯಯ ||೨|| ಉಪದೇಷ್ಯತಿತಜ್ಞಾನಂ ಪ್ಯಾಣಾಂ ಬ್ರಹ್ಮಸಜ್ಜಿತಮ್ | ಸರ್ವವೇದಾನ್ನ ಸಾರ ೬ ರ್ಧ ನ್ ವೇದನಿದರ್ಶನಾ ||4||
ಯೇ ತಂ ಪ್ರೀತ್ಯಾನಿವತ್ತೆಯೇನಕೇನೋಪಚಾರಶಃ | ವಿದಿತ್ಯ ಆಚಾರಿ ಜೋಪಾ' ಯಾನಿತ ಮಂಪದಮ್ ||೪|| ಅನಾಯಾಸೇನಸುಮಹತ್ವುಣ್ಯತೇ ಯಾ ಮನವಾಃ |
ಆನೇಕಷ ರುಪ್ಪಯ್ಯ ಕಛೇರೇಪಮರ್ಶಾಗುಣt " ||೫| ಎಂದು ಕರ್ಮಪ್ರಾಣವ 3) ಈ ಅಧ್ಯಾಯದುಗೆ (8) 14 ವ್ಯಾಕುರ್ವ ವ್ಯಾಸಸೂತ್ರಾರ್ಥಂ ಶತ್ರರ್ಫಂ ಯಥೋಚರ್ವಾ |
ಶ್ರುತಿನಾಯಕ್ಷ ಜವಾರ್ಥ: ಶಂಕರಃಸವಿತಾವಸ” ||೧|| ಎಂದು ಶಿವವರಾಣ 7 ನೇ ಬಂಡ, 1 ನೇ ಅಧ್ಯಾಯದಲ್ಲಿ ;
(3) ಇಣುದೇವಿ ಭವಿಷ್ಯತೃದ್ರಕಾನಾಂಜಿತು | ಮಾವಿಸಂ ಗ್ರಮ್ “ವ........ . | ಮದಂತಜಾತಂ ದೇವೇಶಿ ಕಾವ.ತಪೋಧನವ| ತಸ್ಯ ವಚರಿತಂ 3 ದೃವಾಮಿ ಶೃಣುಶೆಎಜೆ 8 ಕಾದಿವೆ.ಮಾದೇವಿ ಸಹಸ್ರ ದ್ವಿತಯಸ್ಪರಮ | ......... ..... ..... || ಕೇರಳೆಶಶಾಮೆ Cy ಕೂಲಿ ಮದಂಶತಃ | ಧವಿಸ್ಕೃತಿ ಮಹಾದೇವಿ ಶಂಕರಾಬ್ಲೊ ದ್ವಿಜೋತ್ತಮಃ ||
ಎಂದು ಶಿವರಹಸ್ಯದ ನವಮಾಸದ 16 ನೇ ಅಧ್ಯಾಯದಲ್ಲಿದೆ.
(4) ಯದಾಯದಾಧರ್ಮಸ್ಯ ಗ್ಲಾನಿರ್ಭವತಿ ಭಾರತ | ಅಭ್ಯುತ್ಥಾನ ಮಧರ್ಮ ಸ್ಯ ತದಾತ್ಮಾನಂ ಸೃಜಾಮ್ಯಹಮ್ || ಇತ್ಯಾದ್ಯಸೇಕ ಭಗವದ್ಯಾಕೃ ಪ್ರಾಮಾಣ್ಯಗಳಂತೆ ಕೇರಳದೇಶದ ಕಾಲಟೈಗ್ರಹಾರದಲ್ಲಿರುವ, ಶಿವಗುರು ಆರ್ಯಂಬಿಕೆಯುಗೆ ಪ್ರತ್ರನಾಗಿ ಆವರಿಸಿ ಧರ್ಮಸಂಸ್ಥಾಪನೆಯಂ ಮಾಡುವೆನೆಂದು ಹೇಳಿ ದೇವತೆಗಳನ್ನು ಬೀಳ್ಕೊಟ್ಟನು.
ಈಶ್ವರನು ಆದೇರೀತಿಯಲ್ಲಿ ಆವರಿಸಿ, ಬ್ರಹ್ಮಚಾರಿಯಾಗಿರುವಾಗಲೇ ಸಸ್ಯ ನಾ ಶಂಕರನಾಮಧೇಯರ್ವ ಧರಿಸಿ, ವ್ಯಾನಂದ ರಚಿತವಾದ ಬ್ರಹ್ಮಸೂತ್ರಗಳಿಗೂ, ಗೀತ, ನೃಸಿಂಹತಾಸಿನೀ, ಷ್ಣು ಸಹಸ್ರನಾಮ, ಗಾಯತ್ರೀ ಇವುಗಳಿಗೂ, ಸನತ್ಸು ಜಾತೀಯ, ಶ್ವೇತಾಶ್ವರ, ಮಂಡಬ್ರಾಹ್ಮಣ, ಘಷತ್ತುಗಳು, ಇವೇ ಮೊರ ಅದ ಕನಿಷತ್ತುಗಳಿಗೂ, ಭಾಗ್ಯವಂ ರಚಿಸಿ, ದೇವಾಂಶಸಂಭೂತರಾದ, ಶಿಷ್ಯರಿಗೆ ಉಪದೇ, ಎರಿಗಳನ್ನು ಗೆದ್ದು, ದುರ್ವತಗಳು ಬಡಿಸಿ, ಬ್ರಹ್ಮಸರಸ್ಯವತಾರ
-----------------------------------------
iv
ಕಾರ ಮಂಡನಮಿಶೋಭಯಭಾರತಿಗಳನ್ನು ಶಾಶದಿಂದ ನೋಡನಮರಿ, ಮಂಡನ ಮಿಶ್ರರನ್ನು ಶಿಷ್ಯನದುಗ್ರಸಿ, ಸರಸ್ವತಿಯನ್ನು ಗುರುಪೀಠದಲ್ಲಿ ಪ್ರತಿಷ್ಠಿಸಿ, ಷಣ್ಮ ಶಗಳ ಸ್ಥಾಪನೆಮಾಡಿ, ಷಣ್ಮತಸ್ಥಾಪನಾಚಾದ್ಯರೆನಿಸಿಕೊಂಡು, ಸರ್ವಜ್ಞ ಪೀಠಾರೋ ಹಣವಂ ಮಾವಿ, ರ್ಬಜ್ಞರೆನಿಸಿಕೊಂಡು, ಗುರುಪೀಠಗಳ ನಿರ್ಮಾಣಮa, ಬ್ರಹ್ಮದ್ರೋವೇಂದ್ರಾದಿಗಳಿಂದ ಪ್ರಾರ್ಥಿಸುಟ್ಟ ಸಶರೀರನಾಗಿ ಕೈಲಾಸಕ್ಕೆ ಇದು
14 ದೈವಾಧೀನಂಜಗತ್ಸರ್ವಂಮನ್ನಾನಂತು ರೈವತವಃ | ತಂಬ್ರಾಹ ನಾಧೀನಂ ಬ್ರಹ್ಮಣ್ಯ ದೇವತಾ || ಎಂಬ ಭಗವದ್ಯಾಕ್ಯಪ್ರಾಮಾಣ್ಯರು ಬ್ರಾಹ್ಮಣರನ್ನು ದರಿಸಿದ ಆ ಮಹನೀಯರ ಜಾತ್ರೆಯು ಯಾಂದತಾನೇ ಶ್ಲಾಘಿಸು ಕುವುದಿಲ್ಲ ?
ಈ ಮಹನೀಯರ ಪವಿತ್ರೆಯು ಮಾತೃಭಾಷೆಯರ ಸಂಸ್ಕೃತದಲ್ಲಿ ತಮ್ಮ ಪಾದ, ಚಿದ್ವಿಲಾಸ, ವ್ಯಸಾಚಲ, ಆನಂದಗಿ, ಮಾಧವಾಚಾರರೇ ಮೊದಲಾದ ಅನೇಕ ಮಹನೀಯರಿಂದ ವಿಶದವಾಗಿಯೂ, ರಸಭುತವಾಗಿಯೂ ರಚಿಸಲ್ಪಟ್ಟಿದೆ ಆದರೆ ಅವೆಲ್ಲಾ ಸಂಸ್ಕೃತಭಾಷಾಭ್ಯಾಸವಿಲ್ಲದವರಿಗೆ ತಿಳಿಯವು ದೇಶಭಾಷೆಯರ ಕನ್ನ ಡರು ಕಲವಿದ್ದರೂ, ಅವುಗಳಲ್ಲಿ ಕೆಲವು ಎಲ್ಲಿ ವಿಸ್ತರಿಸಲ್ಪಟ್ಟಿರಬೇಕೊ ಅಲ್ಲಿ , ಬಾಗದೆಯೂ, ಎಲ್ಲಿ ಸಂಕ್ಷೇಪವಾಗಿರಬೇಳೆ ಅಲ್ಲಿ ಸಂಕ್ಷಿಪ್ರವಾಗದೆಯೂ, ಮು ಕೆಲವು ಹಯಗನನಕಗಳಿಂದ ದೂರವಾಗಿಯೂ, ಇವೆ. ಇದನ್ನು ನೋಡಿ ನಾನು 4 ಕುಂದಕಗಳಲ್ಲಾ ಬಹುಸಿ ಆರಮಹನೀಯರಿಗೆ ಆಚಾರರ ಚರಿತ್ರೆಯು ದುವಾಗಿ ತಿಳಿಯಲೆಂದು, ಅನೇಕ ಸಂಸ್ಕೃತ, ಕನ್ನಡ, ತೆಲುಗು, ಇಂಗ್ಲಿಷ್ ಪ್ರಸ್ತುಕಗಳ ಸಾ ಯದಿಂದ «« ಶಂಕರಕಥಾಸಾರ" ವೆಂಬ ಈ ಗ್ರಂಥವನ್ನು ರಚಿಸಿರುವನು.
ಈ ಗ್ರಂಥರಚನೆಗೆ ಆಧಾರಗ್ರಂಥಗಳು: (1) ಮಾಧವೀಯ ಶಂಕರದಿಗ್ವಿಜಯ (1) ಶಂಕರವಿಜಯವಿಲಾಸ (ಚಿದ್ವಿಲಾಸಶಂಕರವಿಜಯ ಸಂಸ್ಕೃತಪದ್ಯ () ಮಣಿಮಂಜರಿಣೀಂ (1) ಶ್ರೀಮದಾಚಾಕ್ಷ್ಯಚರಿತ
| ಸಂಸ್ಕೃತಗದ್ಯ (5) ಶ್ರೀ ಶಂಕರಾಚಾತ್ಯಚರಿತ್ರಮ್ (1) ಶ್ರೀ ಶಂಕರಾಕಥಾಮೃತ
} ಕನ್ನಡಗದ್ಯ
(7) ಶ್ರೀ ಶಂಕರಭಗವತ್ಪಾದಾಚಾರ್ಡ
(3) ಶ್ರೀ ಶಂಕರಮಠ ಸ್ವಪ್ರಕಾಶಿಕಾರ್ಥಸಂಗ್ರಹಮು-ತನುಗು
(9) ಪೀಸ್, ಲೈಫ್, ಅಂಡ್ ಟೈಮ್ಯ-ಸೀಸ್ ಫಿಲಾಸಫ್-ಇಂಗ್ಲೀತು.
----------------------------------------------------------------
v
(His Life and Times His Philosophy.) ಈ ಗ್ರಂಥದಲ್ಲಿದ್ದ ಅನೇಕ ವಿಷಗಳನ್ನು ತಿದ್ದಿ ಕೊಟ್ಟು, ಮುದ್ರಣಕ್ಕೆ ಅನು ಕೂಲವಾಗುವಂತ ನಖರ ಮೈಸೂರು, ಧಾರ್ವಾಡ, ಚಿದಂಬರಂ, ಹಿಂದೂಪುರಂ, ಮೊದಲಾದ ಸ್ಥಳೀಯರಾದ ಅನೇಕ ವಿದ್ವಾಂಸರುಗಳಿಗೂ, ತಮ್ಮ ಅಮೋಘವಾದ ಮಾಸಪತ್ರಿಕೆಯಲ್ಲಿ ಪ್ರಕಟಿಸಿದ, ವೇ|| ಸಿ. ವೆಂಕಟರಮಣಶಾಸ್ತ್ರಿಗಳಿಗೂ ಮತ್ತು ಬಹಳ ಅಂದವಾಗಿಯೂ ಜಾಗ್ರತೆಯಾಗಿಯೂ, ಮುದ್ರಣಮಾಡಿಸಿಕೊಟ್ಟ ರಾಯಲ್ಸ್ ಇಓಟಾದ ಮ|| ರಾ|| ಬಿ. ವಿ. ನರಸಿ೦ಗಾರರಿಗೂ ನಾನು ಅರ್ಹತೆ
ಯು ಕೃತಜ್ಞನಾಗಿರುವನು.
ವ|| «« ದೋಷವಕಂಡುತಿ, ಗುಣದೊರೆಸಾನರ ? ಮೋದಮುತ್ತಮ: | ದೋಷವಕಡದಂಡು, ತೋಟಪಕ್ಕೆ ! ಗುಣದಿಂದ, ಮಧ್ಯಮರ್, | ರೋಷಮದುಮಿರ್ದೊಡೆಯುವಲ್ಲ ವದೂಪಿಂದುಮಲ್ಪರಾ; | ರೋಷಮೆಶೂನ್ಯಮಾದೊಡೆಯುಮೇಡಿ ! ಕುಕಂದ್ರಶೇಖರರ್ ||”
ಎಂಬ ನೀತಿವಚನದಂತ ಗುಣಗ್ರಹಣತತ್ಪರರಾದ ಮಹನೀಯರು ಇದರಲ್ಲಿ ಪ್ರಮಾದದಿಂದ ಬಿದ್ದಿರುವ ವೇಷವನ್ನು ತಿಳಿಸಿದರೆ ಅದನ್ನು ಮುಂದಣ ಮುದ್ರಣ
ದು ಸುಸುಕಿಕೊಳ್ಳುವೆನು.
ಇಳBoಳ ರಾಕ್ಷಸ, ಸಂ|| ಫಾ|| ಶು|| ೯ | ೬ ಎಸ್. ಶಂಕರನಾರಾಯಣ
ಸೋಮವಾL-3-1916 | ದಿಟ್ಟೆ ಪುರ(ಚಾಮರಾಜನಗರದತಾಲ್ಲೂಕು)
ಸರ್ವಸ್ವವನ್ನಾಯಸದಾತ್ಮಾರೈವೇದಿನೇ | ಶ್ರೀಮತೇಶಂಕರಾತ್ಯಾಯವೇದಾನ್ಯಗುರವೇ ನಮಃ ||
-----------------------------------------------------------------------
ಜಯ :ಶಂಕರ ಧರ್ವ ! ಶಂಕರಕಥಾಸಾರ.
ಪ್ರಥಮವಲ್ಲ ಶುಚಿ ಮಾತಾನು ಅದ್ವಿತೀಯಂ ಮುಹರ್ಮುಹ: | ಶಾಂಕರೀ ವಿಜಯ ಸಾರ ಸಂಗ್ರಹೇಣ ನಿರೂಜ್ಯತೆ || ೧ ||
ಅದ್ವಿತವಿದ್ಯಾವಲೋಡದೇನ ||
ಶಮನ ಮಕರಂದಮೀಡ್ಯಮ್ | ಪ್ರದಾಯ ಯೋರ್ಸ್ಮಾ ಕೃಪಯಾ ರಕ್ಷ | ಸ ದೇಶಿಕ ಶಂಕರ ಏವ ಚಿನ್ನ ||೨||
# ದ ರ್ಮಥ್ರಕಾಮಮೋಕ್ಷಗಳೆಂಬ ಚತುರ್ವಿಧ ಪುರುಷಾರ್ಥಗಳಲ್ಲಿ
ಸ್ಯ ಮೋಕ್ಷವೇ ಉತ್ತಮವಾದಂದು ಸಕಏಗೂ ತಿಳಿಸಿದ ಆ ಮೋಕ್ಷವು « ಸರ್ವಂ ಖಲ್ವಿದಂ ಬ್ರಹ್ಮ' 11 ಆತ ಬ್ರಹ್ಮಾಸ್ಮಿ” ಎಂಬ ಅದ್ವಿತ ಜ್ಞಾನದಿಂದ ಬರುವದೇ ಹೊರ್ತು ಬೇ ಅಲ್ಲ. 14 ಜ್ಞಾನಾತ್ ಕೈವಲ್ಯಮಚ್ಚು ತೆ” ಎಂಬಂತ ಬ್ರಹ್ಮಜ್ಞಾನ ಸಂಪಾದನೆಯು ಅತ್ಯಾವಶ್ಯಕವು ಆ ಬ್ರಹ್ಮಜ್ಞಾನವು ಅದ್ವಿತ ಜ್ಞಾನವಲ್ಲದೇ ಬೇರೆ ಅಲ್ಲ. ಆದ್ರೆತಾನವು ಕೇವಲ ಮುಕ್ತಿಹೇತುವೆಂದು ಅನೇಕ ಪ್ರೀತಿ, ಸ್ಮೃತಿಗಳು ಬೋಧಿಸುತ್ತವೆ. ಅಂತಹ ಅದ್ಯತವಿಯು ದುರ್ಮತಸಂಚಾರ ರಾರ ಬೌದ್ಧರೇ ಮೊದಲಾದವರ ಪ್ರಾಬಲ್ಯದಿಂರ ಕ್ಷೀಣತೆಯನ್ನು ಹೊರುತ್ತಿತ್ತು. ಆಗ ದೇವತೆಗಳು ಬ್ರಹ್ಮನಲ್ಲಿಗೆ ಹೋಗಿ, ಭೂಲೋಕದ ಅನಾಚಾರಗಳನ್ನೆಲ್ಲಾ ತಿಳಿ ಸಿದರು. ಬ್ರಹ್ಮನೂ ಅವರ ಸಂಗಡಲೇ ಲೋಕಶಂಕರನಾದ ಶಂಕರನ ಸಾವನ್ನು ಕಯು ಈಯು,
ಕದಂಷಿ ಸಂಗ್ರಹ
ಕೈಲಾಸಪರ್ವತದ ಶಿಖರದಲ್ಲಿ ರ್ಪ ರಕ್ಷಕನಾದ ತಕ್ಷನ ಪಾವತೀ ಮತ್ತು ಗಜಾನನಂ ಸುತನಾಗಿ, ಮಹರ್ಷಿಗಳಿಂದ ಬಿಡಿಸಲ್ಪಡುತ್ತಿರುವ ವೇದಗಳ ಲಾಲಿಸುತ್ತಾ ಇನ್ನು ಸಾಗಿ ಕುಳಿತಿದ್ದನು. ಆಗ ದೇವತೆಗಳು ತಮಗೆಲ್ಲಾ ಹಿರಿ ಯನೂ, ರಕ್ಷಕನೂ ಮತ್ತು ತರುಣಾಳುವೂ ಆದ ಪರಮೇಶ್ವರನಂ ಬಹಳವಾಗಿ ಸ್ತುತಿ ಸಲಾಮಹಾತ್ಮನು, ಬಂದ ಕಾರಣವಂ ವೇಳೆನರಾ ದೇವತೆಗಳು ಗಂಭೀರಭಾವದಿಂದ 11 ಸಾವು ! ಮಹಾವಿನ್ನುವ ಅಸುರರನ್ನು ವ್ಯಾಮೋಹಗೊಳಿಸುವುದಕ್ಕೆ ದ್ವಾನ ಶಾರವಂ ಮಾಡಿದಾಗ, ಆತನಿಂದ ಹೇಳುಟ್ಟ ಕಾಯುಗಳ ಬಲದಿಂದ ಗೌರವ ಕ್ರೌತಸ್ಮಾರ್ತ ಸಿದ್ಧಾಂತಗಳ ತಿರಸ್ಕರಿಸುತ್ತಾ ವೇದಗಳಿಗೆ ಅಪ್ರಾಮಾಣ್ಯವನ್ನು ಸಾಧಿ ಸತೊಡಗಿದ್ದಾರೆ. ಯಜ್ಞದು ಸಕಲರೂ ನಿಂದಿಸುತ್ತಾರೆ. ಶೈವಾಗಮ, ವೈಷ್ಣ ವಾಗಮಗಳು ಪ್ರಸಿದ್ಧವಾಗಿವೆ. ಆಸ್ಪಧಕ್ಷಣ, ನರಬ, ಮದ್ಯಪಾನ ಇವುಗಳನ್ನು ಅನೇಕ ಸನರೂ ಈತ ಆಡುಸುತ್ತಿದಾರೆ. ಆದ್ದರಿಂದ ಎಲೈ ಮಹಾನುಭಾವ ! ನೀನು ಆ ದುಷ್ಟರ ನಿಗ್ರಪಿಸಿ ನೇದುರ್ಗಪ್ರತಿಷ್ಟಾಪಿಂಗೈದು ನನ್ನನ್ನು ಸಬೇಕು'' ಎಂದು ಬೇಡಿದು,
ಅವರ ಪ್ರಾರ್ಥನೆಯಂ ೨೯ ಆ ಶಕರನು 14 ಎಕ್ಸ್ ಪಳೆಗಳಿರಾ ! ವೇದಬ್ರಾಹಿಕೆಯನ್ನು ಪ್ರಸಸಗಳು ಮತ್ತು ಧರ್ಮ ಸಂಸ್ಥಾಪನೆಯನ್ನು ಮಾಡಲೋಸುಗ ಘಂತವರ ಕೃಷಿ:ಗಳcತಿರುವ ನಾಲ್ವರು
ಕೊಡಗವಿ ಗವಹಸನಾಗಿ, ಶಂಕರ ನಾಯರಿಂದ ಮನುತಾತಾ ರನ ಗೈಯುತ್ತೇನೆ, ನೀವು ಈ ಮಗಾ>ರಾಗಿ ಮನುಷ್ಯರೂಪದಿಂದ ಅವತುಸಿ ನನ್ನ ಆಗಮನವನ್ನು ೫ ಸಿಂಟು, ಆಗ ನಿಮ್ಮ ಹೃದಯದ ಹಯ ಸವಣಣವಾಗುತ್ತದೆ" ಎಂದುತ್ತರವಿ,
ಅನಂತರ ಸವ್ರಶೇ:ು ಕನಾದ ಗುಹನ ಕವಿತು- ಎಳೆ ಕ್ರೌಂಚಣಗಣನೆ ! ಕಾಂತತ್ರಯಕವಾದ ವೇದವು ಸಟ್ಟರೆ ಬ್ರಾಹ್ಮಣರು ಆದ್ದರಿತಾಗುಣ, ನಂದತೀ ಆಪ್ಪಣೆಯಂ ವೆದುಹೋಗಿರುವ ತೇಷ ಸ್ಟುಗಳು ಸಂಕರ್ಷಣತಂಗ ಮುನಿಗಳಾಗಿ ಆವಾಸನಾ ಮತ್ತು ಯೋಗ ಕಾಂಡಗಳನ್ನು ಉಪ್ಪಾರಮಸುಖಿಯವರು. ಮೂರನೆಯದಾರ ಜ್ಞಾನಕಾಂಡವನ್ನು ನಾನೇ ಅದ್ಯಾರದೂಡುವನು. ನೀನು ಜೈಸಿಯ ಪೂರ್ವಮೀಮಾಂಸವೆಂಬ ಕನ ತಾಂತವನ್ನು ಅರ್ಜೆತಸ್ಥಿತಿಗೆ ತಂದು ಸುಬ್ರಹ್ಮನೆಂಬ ಹೆಸರನ್ನು ಅನ್ಯರ್ಥಗೊಳಿಸಿ ಬೇಕು. ಬ್ರಹ್ಮನೂ ನಿನಗೆ ಸೌಗತಾದಿಗಳ ನಾವಿಷಯದಲ್ಲಿ ಮುಂಡನ ಮಿಶ್ರಾಭಿವ್ಯಾ
ಶಗಳg
ನದಿಂದ ಜಾಯಮಾಡುವನು. ಇಂದ್ರನೂ ಸುಧನ್ಯನೆಂಬ ಅರಸನಾಗಿ ಇನ್ನು ನೀ ಕ್ಷಿಸುತ್ತಾ ಸೌಗತರಂ ಗುಂಪಡಿಸುತ್ತಲಿರುಸು" ಎರುಸುದನು, ಮಹೇಶ್ವರನ ಈ ಪ್ರಕಾರವಾದ ಆಜ್ಞೆಯಂ ಕುಮಾರಸ್ವಾಮಿಯು ಮಹಾಪ್ರಸಾದವೇದಂಗೀಳ ಸಿದನು.
ಬಳಿಕ ಆ ಮಹಾನು ಭಟ್ಟಪಾದಾಚಾರ" ವೆಂಬ ಬೆಸದ ಭೂಲೊ ಕರಲ್ಲಿ ಅವತಾರವಂ ಮಾಡಿದನು. ಆತನು, ವಾರಗಳಲ್ಲಿ ಮುಕ್ತಿಯುತ್ತಮ ಶಾಸ್ತ್ರನಿದ¥ಗಳಿಂದ ಶತ್ರುಗಳಂ ಗೆಲ್ಲುತ್ತ ಜಯವಂ ಮತಿಕೊಡು ಸುಧನ್ವರಾ ಯನ ರಾಜಧಾನಿಗೆ ಬಂದರು. ಬpಕಾಲರಿಂದ ಸಿಪಿಐ ರಾಜನು ಅವರನ್ನು ಅಧ್ಯಪಾದಾಮನಾಮಿಗಳಿಂದ ಈ ಸಿಹಾಸದಮೇಲೆ ಕುಳ್ಳಿ
ಸಿದನು.
ಆಗ ಛವಾದರು ಬಸವಲ್ಲಿ ಒಂದು ಮರದಮೇಲೆ ಕುಳಿತು ಕೂಗು ತಿದ್ದ ಒಂದು ಕೋಗಿಲೆಯನ್ನು ಕಂಡು 14
ಮ ನ್ನಸಂಗ ನೀ ಕಾಕ ಕುಕ್ಕೇ ಪ್ರತಿದೂಷರ್ಕಾರ್ವೈಶಾಘನೀಕ್ತದಾ ಧವೇ” || ಎಳ್ಳ ಈ hಯ ! ಮಲಿನವಾಗಿಯೂ, ಸೀಜವಾಗಿಯೂ, ಪ್ರತಿದೂಷಕವಾಗಿಯೂ ಇರುವ
ಈ ಕಾಗೆಗಳ ಸಂಬಂಧವಿಲ್ಲದಿದ್ದರೆ ನೀನು ಫೈನಾನು ಎಂದರ್ಥವಳ್ಳಿ ಶ್ಲೋಕ bದ 4 ಶ್ರುತಿದೂಷಕರಾವ ಬರ ಸಂಘದಿದ್ದರೆ ನೀನು ಕೀರ್ತಿವಂತ ನಾಗು" ಎಂದು ಹೇಳಿದರು.
ಅದನ್ನು ಕೇಳಿ ಬೌದ್ದರೂ ಸತಷಯಕವಾದ ವಾಗ್ವಾದಶ್ಯಾರಂಟಿ ಸಿದರು. ಬೆಟ್ಟಸಾದರು ಅದನ್ನೆಲ್ಲಾ ಯುಕ್ತಿಕವಾದ ಪ್ರಮಾಣಗಳಿಂದ ಬಿಡಿಸಿ ರಾಜನಿಗೆ ವೇದತತ್ವವನ್ನು ಬೋಧಿಸಲಾರಂಭಿಸಿದರು. ಆಗ ರಾಜನು « ಯರು
ಮ್ಮ ಮತವು ಸತ್ಯವನ್ನು ತ್ತಾರೋ ಅದು ರ್ವತದ ತುದಿಯಿಂದ ಧುಮುಕಿ ಜೀವ ಸುತವಾಗಿ ಬದುಕಿ ಬಂದ ಆದ ಮತವೇ ಸತ್ಯವೆನ್ನುತ್ತೇನೆ” ಎಂದು.
ಬೌದ್ದರು ಇದಕ್ಕೆ ಹೆದರು, ಆಗ ಇಟ್ಟವಾದ ಪರ್ವತದ ತುದಿಗೆ ಹೈು ವೇದಗಳು ಪ್ರಮಾಣವಾಗಿದ್ದರೆ ನನಗೂ ಆಗಲೇಡ” ಎಂದು ಬಿದ್ದು, ಯಾವ ಉಪಯತಿಯ ಇಲ್ಲದೆ ರಾಜನಲ್ಲಿಗೆ ಬಂದರು.
ಆಗ ಬೌದ್ಧರು : ಇವನು ಯವ ಮಣಿಮಂತ್ರೇಷಧರ ಸಹಾಯ ದಿಂದ ಬದುಕಿಬಂದಿದ್ದಾನೆ” ಎನ್ನಲು, ರಾಜನು ಗುಟ್ಟಾಗಿ ಒಂದು ಕುದರಲ್ಲಿ ಒಂದು ಕುನಾಗರಹಾವು ಹಾಕಿಸಿ ಛತ್ರವಐ ಬಾಯಟ್ಟರಸೀತಿ ಭೆಗೆ
ಕಾದಂಬು ಸಂಗ್ರಹ
1 ಇದರಲ್ಲಿರುವರನ್ನು ನೀವು ತಿಳಿಸಬೇಕು; ಯರಮಾತು ಸುಳ್ಳಾಗುವುದು ಅವರನ್ನು ಇಟ್ಟು ಗಾಣಕ್ಕೆ ಹಾಕಿಸಿ ಆಡಿಸುತ್ತೇನೆ " ಎಂದು ಹೇಳಿ ಸಭೆಯನ್ನು ಬೀಳ್ಕೊಟ್ಟನು.
ಉಭಯಸದನಗೂ ಇಷ್ಟವಾಭಿಮುರಾದರು, ಸೌಗಳರು ಆ ರಾತ್ರಿ ಯೆಲ್ಲಾ ಒಂದು ಕೊಳದಲ್ಲಿ ಕಂತಪರ್ಯಂತ ನೀರಿನಲ್ಲಿ ನಿಂತು ಸೂರ್ಯನ ಕುರಿತು ತಸವಂ ಗೈದು ನಿಶ್ಚಿತಾರವನ್ನು ಸೂರ್ಯದೇವನಿಂದ ತಿಳಿದು ರಾಜನ ಸಭೆಗೆ ಪ್ರಾತು ಕಾಲ ಹೋಗಮುಂ ಬಂದರು.
ಬ್ರಾಹ್ಮಣರು 3 ರಾತ್ರಿಯೆಲ್ಲಾ ಸುಖವಾಗಿ ನಿದ್ರೆಮರಿ ಸ್ವಕರ್ಮನಂ ರಾಜ ಸಭೆಗೆ ಬಂದರು, ಸೌಗಜಿಲ್ಲರೂ ಆ ಕುವರಲ್ಲಿ ಕಘಟಸಚ
ಎಂದರು.
ಬ್ರಾಹ್ಮಣರು ನನ್ನ ಒಂದರಿಂದ ಈ ಪ್ರಪಂಚವನ್ನೆಲ್ಲಾ ವ್ಯಾಪಿಸಿದ್ದೇನೆ' ಎಂಬ ಭಗವದ್ರಾಕೃಪ್ರಾಮಾಣ್ಯದಿಂದ ಕುಂಭದಲ್ಲಿ ರ್ಪಶಾಯಿಯಾದ ಮಹಾವಿಷ್ಣು ತಿರುವನಂದರು.
ರಾಮ ಬ್ರಾಹ್ಮಣರನ್ನು ಕೊಲ್ಲಿಸಬೇಕೆಂದು ಬಹಳ ಚೆನ್ನ ನಾನು. ಸೌ ತರು ಆ ಸರ್ಪದಿಂದಲೇ ಭಟ್ಟನಾರನನ್ನು ಕೊಲ್ಲಿಸಬೇಕೆಂದು, “ ನಿನ್ನ ಮಾತು ನೀ ವಾಗಿದ್ದರೆ ಆ ಕುಂಭದಿಂದ ವಿಷ್ಣುವನ್ನು ತೆಗೆ” ಎಂದರು.
ಆಗ ಭಟ್ಟಪಾದರು ಸಭಾಮಧ್ಯದಲ್ಲಿದ್ದ ಆ ಕುಂಧದಿಂದ ಶೇಷಶಯನನಾಗಿ ಷ್ಟು ಪ್ರತಿಮೆಯನ್ನು ತೆಗೆದು ತೋರಿಸಿದರು,
ನಂತರ ರಾಜನು ಸೌಗತರನ್ನೆಲ್ಲಾ ಕೊಲ್ಲಿಸಿಬಿಟ್ಟನು.
-- -
ದ್ವಿತೀಯವಲ್ಲ ರೀ ಆರತೀ ಸರ ಈ ಕರುಣಾಸೀರಥಿಃ ಶಿವಃ | ಪೂರ್ಣಾನರೀಪುಣ್ಯ ಟೀ ಸ್ವಯಂಭೂ ರ್ಭಾತಿ ಸಂತತಮ್ ||
ರದೇಶದಲ್ಲಿ ವೃಷಭಾಚದೊಳಗೆ ಇರುವ ಪುರ್ಣವಾಹಿನೀನರಿಯ * ದಡದಲ್ಲಿ ಮಹೇಶ್ವರನು ಜ್ಯೋತಿರ್ಲಿಂಗರೂಪದಿಂದ ಅವತರಿಸಿದ್ದನು. Rಆದೇವನು ಭಕ್ತರವಾಂಛಿತಾರ್ಥಗಳ ಕೊಡುತ್ತಾ ಪ್ರಸಿದ್ಧನಾಗಿ
K
ಶಕರರಥಾಸಾರ
ದ್ದನು, ಆ ನರಿಗೆ ಸಮೀಪದಲ್ಲಿ ನಿಖ್ಯಾತವಾದ ಕಾಲಟಿ ಎಂಬ ಅಗ್ರಹಾರವಿತ್ತು. ಅಲ್ಲಿ ವಿದ್ಯಾಧಿರಾಜನ ಮಗನಾದ ಶಿವಗುರುವು ಪ್ರಯಾದ ಆರ್ಯಾಂಬಿಕೆಯಿಂದ ಸಹಿತ ನಾಗಿ ಅನೇಕ ಯಾಗಾದಿಗಳನ್ನೂ, ವ್ರತಗಳನ್ನೂ ಮಾಡಿಕೊಂಡು ಅತಿಥಿ ಅಭ್ಯಾಗಳಿಗೆ ಅನ್ನದಾನವ ಮಾಡುತ್ತಾ ಫರ್ಸರಿಯುತ್ತಿದ್ದನು. ಮಗೆ ಬಹಳ ಕಾಲದವರಿಗೂ ಇತ್ತೋದಯವೇ ಆಗಲಿಲ್ಲ. ಇದೊಂದು ಚಿಂತೆಯು ಅವರನ್ನು ಬಹಳವಾಗಿ ಕಾಡು ತಿತ್ತು.
ಅನಂತರ ಆ ದಂಪತಿಗಳು ಜ್ಯೋತಿರ್ಲಿಂಗಸಫಾರಿಯಾದ ಪಮೇಶ್ವರನನ್ನು ಧರಿಸಿದರೆ ಆ ಮಹಾತ್ಮನ ಅನುಗ್ರಹದಿ:ವ ತಮ್ಮ ವಾಂಛಿತಾರ್ಥವು ಖಿಸ ಬಯ ದೆಂದು ತಿಳಿದು ಆಗುಶಿಷ್ಯರಿಂದ ಜೀಶಿಸಲ್ಪಟ್ಟ ಶಿವಮಂತ್ರವನ್ನು ಜಪಿಸುತ್ತಾ ಧಾವರದನಾದ ಆ ಮಹಾದೇವನನ್ನು ಹನ್ನೆರಡುವರ್ಷಕಾಲ ಸಕಲಕ್ರಮಗಳನ್ನೂ ಸಹಿ ಸಿಕೊಂಡು ನಿಲಜ್ಞಾನದಿಂದಾರಾಧಿಸುತ್ತಿದ್ದರು.
- ಹೀಗೆ, ಒಂದಾನೊಂದುರಿನ ಮಹೇಶ್ವರನು ವೃದ್ದ ಬ್ರಾಹ್ಮಣವೇಷದಿಂದ ಬಂದು ಸ್ವಪ್ನದಲ್ಲಿ ಶಿವಗುರುವನ್ನು ಕುರಿತು 1 ಎಳ್ಳೆಶಿವಗುರುವೇ ! ನಿನ್ನಧತಿಗೆ ನಾನು ಮಚ್ಚಜಿಸು, ನಿನಗೇನು ಬೇಕು' ಎಂದರು. ಅದಕ್ಕೆ ಶಿವಗುರುವು ಸ್ವಾಮಿ? ಪುತ್ರರ ತವು ಉದಯಿಸುವಂತೆ ವರವನ್ನು ದಯಪಾಲಿಸಿದರೆ ಸಾಕು” ಎಂದುತ್ತರವಿತ್ತನು.
ಮಹೇಶ್ವರನು ಇನ: “ ನಿನಗೆ ಸುಗ್ರಣಯೂ, ಸಕಲಶಾಸ್ಕೃಜ್ಞನ, ಅಲ್ಪಾ ಯುವ, ಆವಓರ್ವಪ್ರತ್ರನುಬೇ ? ಅಥವಾ ದುರ್ಗುಣಿಗ, ದಡ್ಡರೂ, ದೀರ್ಘಾಯಸ್ಕೃತರೂ ಆದ ಒಯಮಂt ಪ್ರತ್ರರುಬೇ?” ಎಂದು ಕೇಳಲು~ ಶಿವಗುರುವುತನಗೆ, ಸುಗುಣಿಯೂ, ಸಕಲಶಾಸ್ತ್ರಜ್ಞನೂ, ಕ್ಷಾಯುವೂ ಆದಓರ್ವ
ಇತ್ರನೇಸಾಕೆಂದುಶವಿತ್ತನು.
ಮಹೇಶ್ವರನು ಹಾಗೆಯೇ ಆಗಲೆಂದು ಏಭೂತಿಯನ್ನೂ, ಇವನ್ನೂ, ಮಿಸಿಕೊಟ್ಟು ಅ೦ರ್ತತನಾದನು.
ಆನಂತರ ಆ ದಂಪತಿಗಳು ಎಚ್ಚರವಾದಮೇಲೆ ಜೀಮಗೆ ನಮಸ್ಕರಿಸಿ ಸ್ವಗ್ರ ಹಕ್ಕೆ ತೆರಳಿ ತಮಗಾದ ಶುಭವಾರ್ತೆಯನ್ನು ಬಂಧುವರ್ಗಕ್ಕೆ ತಿಳಿಸಲು ಅವರು «« ನಿಮ್ಮ ವಂಶವೇಪಾತ್ರವಾಯಿತು ನೀವು ಕೃತ ಕೃತ್ತರಾಗು" ಎಂದುಸುರರು.
ದನಗಳು, ಮಂತ್ರಜನಕಾನ್ತಿಯನ್ನು ಮಾಡಿ, ಲಕ್ಷ್ಮನ ಬ್ರಾಹ್ಮಣರ (ಜನರಿದ, ರುದ್ರಾಭಿಷೇಕದಿಂದ, ಸುರ್ವೆದ ಪಾರಾಯಣದಿಂದಲೂ, ಗೋಬ್ರಾಹ್ಮಣರಸೇವೆಯಿಂದಲೂ, ಮೇಶ್ವರನ ಸೇವೆಯಮಾಡುತ್ತಾ ಸುಳ್ಳ
ಕದಂದು ಸಂಗ್ರಹ
ರ್ಣರಾಗಿ ಪುತ್ರಕಾಮೇಷ್ಠಿಯಂಮತಿ, ಅನೇಕ ಛದಕ್ಷಿಣೆಗಳು ಬ್ರಾಹ್ಮಣಿಗೆ ಕೊಟ್ಟು ಅಳುದ ಕೊಡಲ್ಪಟ್ಟ ಮಂತ್ರಕ್ಷತೆಯನ್ನು ತಿರಸಾಧಾರಣಮಾ, ಶಿವ ಮಾಭಿಮಂತ್ರಿತವಾದ ಪರಮಾನ್ನ ಹಚ್ಚೇಷವನ್ನು ಧುಂಟಿಸಿ ಧರ್ಮರತರಾಗಿ ದ್ದರು. ಪರಮೇಶ್ವರನು ತನ್ನ ಕಲೆಯನ್ನೆಲ್ಲಾ ಆ ಪರಮಾನ್ನ ಹಷದಲ್ಲಿ ದೃನು, ಇಸ್ಕಾರಕ ಆರ್ಯಜಿಗೆ ಬದಲಕ್ಷಣಗಳೊಂದಾಗಿ ಕಾಣಲು ಪ್ರಾರಂಭವಾದವು,
* ಇದಲ್ಲದೆ ಆರ್ಯವಿಯು, ತಾನು ವೃಷಭಾಚಲದಮೇಶ ದೇವತೆಗಳಿಂದ ಸೇವಿಸಲ್ಪಡುತ್ತಿದ್ದಂತೆಯೂ, ut ಜಯ, ಯ” ಎಂದು ಹೊಗಳಿಸಿಕೊಳ್ಳುತ್ತಿದ್ದಂತ ಯೂ, ಆನಂಟು ಬೆಚ್ಚಿಬೀಳುತ್ತಿದ್ದಳು, ಪ್ರಾತಃಕಾಲ ಎದ್ದು ನೋಡಿದರೆ ಆಕೆಯ ಹಾಸಿಗೆಯಮೇಲೆ ಪಾವತಾರಿವ್ರಷಗಳು ಇರುತ್ತಿದ್ದವು,
ಶಿವಗುರುವು ಗರ್ಭಕ್ಕೆ ಧ್ವಂಸವನವೇ ಮೊದಲಾದ ಕಾಸ್ರೋಕ್ತವಾದ ಸಂಸ್ಕಾರಗಳು ಮಾಡುತ್ತಾ ಧರ್ಮbವಿರುತ್ತಿದ್ದನು.
...44 %229•••
ತೃತೀಯನರಿ ತಾಳ್ಯ 3 ಪಾಸುಸರಸಿ ಕೃಷಣಕ್ಯ ಕಾಪಾಡಿರ್ವೈಃ ಆಸ್ತರವಿಕೃತಿ ಬಟ್ಟೆ ಬಿಚು ಓಂ ರುರ್ಕಾರಿಭಿರ್ವ್ಯದಿಳಮ | ಪನ್ನಾನಂ ಬಕ್ಷಿ ತುಂತಲ ಪ್ರಾಪ್ತ ಮಕ್ರೀಡಾ ಘೋರೇ ಸಂಸ್ಕೃತಿಕಾವನೇ ವಿಜರತಾಂ ಭದ್ರಂಕರಃ ಶಂಕರಃ||
-~{೪೬TY ~ ಶ್ರೀ ಶಂಕರಾವತಾರಘಟ್ಟ8.
- --
-
ಕ ಶಿಯುಗದಲ್ಲಿ 39! (ವಿಕ್ರಮಶಕೆ 854, ಕ್ರಿಶ 788) ಈ ಭವ
ಹೇ ನಾಮಸಂವತ್ಸರದ ವೈಶಾಖಮಾಸ, ಶುಕ್ಲ ಪಕ್ಷ ಶಂಜಮಿ, ಯದಿನ, * •ಚಮಿ ದಿನ ಆರ್ಭ ವತಾರವೆಂಬುದಕ್ಕೆ ಸರಿಯಾದ ಅಧಿ:ಖ. ಹಮಿರಿನ ಆ ರ್uನಕಾವ:ದು ಸನತರ:೦ಡು ಹೇಳುತ್ತಾರೆ. ಉತ್ತರಗಳು ಮಿಟು ಒಕರಣೆಯನ್ನು ಬಳಸಗಿ ಆಚರಿಸುತ್ತಾರೆ, ಮತ್ತೀಣರು ಈ:ಚು ಆರಾಧಿ ಬಾರೆ.
ಒಳರಳವಾಸಾರ
ಕೌಸಲ್ಯಯು ರಾಮನನ್ನು ಜೆದಳೆಯ, ದೇವರು ಶ್ರೀ ಕೃಷ್ಣನಂ ನಡೆದಂತೆಯ, ಆದಿದೇವಿಯು ವಾಮನಮೂರ್ತಿಯಂ ಜಿಯದಂತೆಯೂ ಪಾರ್ವತಿಯು ತುಮರಸ್ಕಾ ಮಿಯಂ ಪಡೆದಂತೆಯ, ಸುದಕ್ಷಿಣಾದೇವಿಯು ರಘುಮತರಾಯನನ್ನು ಹೆದಂತ ಜೂ, ವಗುರು ಯದ ಆರ್ಯಾಂಬೆಯು, ಗ್ರಹಗಳೆಲ್ಲವೂ ಉಚ್ಚಸ್ಥಾನದಲ್ಲಿರು ವಾಗ, ಚಿದ್ರೂಪನಾದ, ಶೋಳಶಂಕರನನ್ನು ಶುಭಮುಹೂರ್ತದಲ್ಲಿ ಪ್ರಸವಿಸಿದಳು.
ಆ ಶಿವನ ಜನ್ಮದಿಂದ ಮಲ್ಲಿದ್ದರೂ ಕಾಡುಗಿಷ್ಟು ಶಾಂತವಾಯಿತು. ಪ್ರಾ ಇಗಳಿವೂ ತಮ್ಮ ತಮ್ಮ ಶತ್ರುಗಳನ್ನು ಬತ್ರರನ್ನಾಗಿ ಮನೆಮಾಡಿದವ ಅಕಾಲವಾದ ರೂ, ವೃಕ್ಷಗಳೆಲ್ಲಾ ಈ ಪ್ರಸ್ತುವಾದವ, ತೋಮ ಕುಂಡದಯದ್ದೇಶ್ವರನು ಪ್ರದ ಕ್ಷಿಣಾಕಾರವಾಗಿ ಹವಿಸ್ಸನ್ನು ತೆಗೆದುಕೊಂಡನು. ಸೌಗತಾದಿಗಳ ಬೃಂದ್ರ ಪುಸ್ತಕಗಳು ಕಳಗೆ ಬಿದ್ದವುದುರ್ಮತ ಪ್ರವರ್ತಕರಾದ ಕಾವಾಳರೇ ಮೊಡಸಾದರ ಕಣ್ಣುಗಳು ಮಂಜಾದವ, ಪ್ರಾಣರ ಮುನಲ್ಲಿ ಸಂತೋಷ ಉಕ್ಕಿತು. ಈ ಶಿಶುವಿನ ಜನನವಾ ದಕೂಡಲೇ ಆ ದೃಶಗಲ್ಲಾ ಚಿತ್ರ್ರಾತಪ್ರತಿಮೆಗಳಂತಾದವ, ಒಂದು
ಭವಾದ ಕಾಂತಿಯುತಾಪಿತು.
ಶಿವಗುರುವು ಮುಗುಯು ಕೆಂಪ ಭವಾವಸ್ಸು ಕೇಳೂಡಲೇ ಸ್ನಾನ ಮಡಿಬಂರು ಮಗುವಿಗೆ ಜಾತಕರ್ಮಾದಿಗಳನ್ನು ಮಾಡಿ ಬ್ರಾಹ್ಮಣಿಗೆ ಅನೇಕಭೂ
ಹಿರಣ್ಯದಾನಗಳನ್ನಿತ್ತನು.
ಚೌತಿಷಿಕರು ಜಾತಕವನ್ನು ಬೆದರು. ಅದರಂದು ಕೇಳಲೂ ಅವ ರುಕರಾಗ,
ಒಂದುರಿನ ಆಮಗುವು ಸಿಲಿನಲ್ಲಿ ಆಟವಾಡುತ್ತಿರುವಾಗ ಅವನು ಆ ಮಗುವನ್ನು ಸೇವಿಸುತ್ತಿದ್ದನು ತೊಟ್ಟು ಸರ್ಪಸಿರುವುದನ್ನು ಮನೆಯವರು ಕಂಡು ಘಾಟಯಿಂದ ನೋಡುತ್ತ ಆರು ರುದ್ರಾಕ್ಷಮಲೆಯಂತೆ ಕಾಣಬಂದಿತು.
ಆನಂತರ ಅವರು ಇಲ್ಲಾ ದೇವರ ಪೂಜೆಯೆಂದು ತಿಳಿದರು. ಒಂದುದಿನ ಮಗುವು ಯಾರಕಣ್ಣು ಕಾಣದೇ ಮಾಯವಾದಿತು, ಎಲ್ಲರೂ ಹುಡುಕಲಾರಂಭಿ ಸಿಡರು.
ಆಗ ಓರ್ವಸು ಸಾಮಾನವ ಮತ್ತು ಬಂದು ಅಲ್ಲಿ ಇದ್ದ ಒಂದು ಕಾಮವನ್ನು ಯಾಚಿದನು.
ಅವನು ಅದನ್ನು ಮಟ್ಟದಡಿ ಅದು ಕುರುಪಿತು. ಅದರ ಒಳ ಗಂಡ ಶಿವ ಹೊರಕ್ಕೆ ಬಂದಿತು, ಎಲ್ಲರೂ ಆ ಮಗುವಿಗೆ ಅನೇಕ ರಕ್ಷಾದಿಗಳ ಇಟ್ಟು ತಾಪಿಯ ಸಮೀಪಕ್ಕೆ ಕೊಟ್ಟರು
ಕಾದಂಬರೀ ಸಂಗ್ರಹ
ಆ ಹುಡುಗನ ತಲೆಯಲ್ಲಿ ಚಂದ್ರರೇಖೆಯ, ಹಣೆಯಲ್ಲಿ ಫಾಲನೇತ್ರಚಿ ಕವೂ, ಭುಜಗಳಲ್ಲಿ ತ್ರಿಶೂರಿಟಿಯೂ, ಕೈಗಳಲ್ಲಿ, ಚಕ್ರ, ಡಮರುಳ, ಕಮಲಕಲ ಶಾದಿಗುರುತುಗಳ, ಉರಸ್ಸಿ ನಾಗರೇಣಿಯೂ, ಕತ್ತಿನಲ್ಲಿ ಕಪ್ಪಮಜ್ಜೆಯೂ ಇದ್ದವು; ಮತ್ತು ದೇಹವು ಸುವರ್ಣದಕಾಂತಿಗಿಂತ ಅತಿಶಯವಾದ ಕಾಂತಿಯು ಳ್ಳದ್ದಾಗಿತ್ತು.
ಶಿವಗುರುವು ಹನ್ನೊಂದನೆಯ ದಿನದಲ್ಲಿ ಶಿವಪ್ರಸಾದದಿಂದ ಹುಟ್ಟಿದ ಆ ಶಿಶು ವಿಗೆ ಶ್ರೀ ಶಂಕರನೆಂದು ನಾಮಕರಣಮತಿಗಳು.
ಹೀಗೆ ಬಾಲಮೃಗಾಂಕ:ು ಭೂಲೋಕದಲ್ಲಿ ಅವತಾರಮಾಡಲಾಗಿ, ಸುಚೇಷ್ಟರು ಆತನ್ನು ಸೇವಿಸಲು ಶಾಸ್ತ್ರಜ್ಞರಾದ ಬ್ರಾಹ್ಮಣಗೆ ಪುತ್ರರಾಗಿ ಅವ ತುಸಿದರು, ಅವರು ಎಷ್ಟವು ನಿಮನೆಂಬ ಪ್ರಶ್ನಿಸಿಗೆ ಸಂದನಾಭಿಧಾನದಿಂದ ಮಗನಾಗಿ ಹುಟ್ಟಿ, ಅನಂತರ ಪದ್ಮಪಾದರೆ ಹೆಸರನ್ನು ವಹಿಸಿರನು, ವಾಯುವು ಪ್ರಭಾಕರನೆಂಬ ಬ್ರಾಹ್ಮಣನಿಗೆ ಮಗನಾಗಿ ಅವತುಪಸು ಇವನನ್ನೇ ಹಸ್ತಾಮಲಕ ನ್ನುತ್ತಾರೆ. ಅಗ್ನಶರಿಂದ ತೋಟಕಾಚಾರ್ಯರು ಅವಮಿಸಿದರು. ಬ್ರಹ್ಮನು ೬ಮಮಿತ್ರಭಾಚಾರನಿಗೆ ಮಂಡನಮಿತ್ರನೆಂತೆಸುನಿಂದ ಮಗನಾದನು, ಆದನ್ನೇ ಸುರೇಶ್ವರಾಚಾರರೆನ್ನುತ್ತಾರೆ. ನಂದೀಶ್ವರ, ವೀರಭದ್ರ, ಗಣೇಶಾಂತಿಗಳಿಂದ ಆರಂಕ ಮುನಿ ಹುಟ್ಟಿದನು. ಬೃಹಸ್ಪತಿಯು ಆನಂದಮಯೂದನ (ಬ್ರಹಸ್ಪತಿಯೇ ಮಂಡನ ಮಿತ್ರನಾಗಿಯೂ, ನಂದೀಶ್ವರನೇ ಆನಂದಗಿಯಾಗಿಯೂ, ಅವುಸಿದರೆಂದು ಈ ರು ಹೇಳುತ್ತಾರೆ.) ವರುಣನು ಚಿತ್ತು ಬಾಚಾದೃನಾದನು. ಯಮನು ಕಾಲಾನ ನಂಬ ವಾದಿಯಾಗಿ ಹುಟ್ಟಿದನು. ಸಿದೃತಿಯು ಶಾಮಂತ್ರವಾದಿಯವಳು.
ದೂರ್ವಾಸಮರ್ಷಿಗಳು ವೇದಪಾರಾಯಣಮೂಡುತ್ತಿದ್ದ ಸಮಯದಲ್ಲಿ ಎ ಲ್ಲೋ ಒಂದು ಸ್ವರವನ್ನು ತಪ್ಪು ವಸವಾಣಿಯು ನಕ್ಕಳು. ಆಗ ದೂರ್ವಾಸರು ಕೋಪಾರುಣನೇತ್ರರಾಗಿ 11 ಕ್ಕೆ ತಾರದೇ ! ನನ್ನ ಅವಮಾನವನ್ನು ನೋಡಿ ನೀನು
ನಕ್ಕವದಕಾರಣ ನೀನು ಮನುಷ್ಯ ಜನ್ಮವಂ ಜಿ" ಎಂದು ತಪ್ಪಿಸಿದರು.
ಆದನ್ನು ಕೇಳಿ ಶಾರದೆಯು ನಡುಗುತ್ತಾ, ಭೂಸುರೇಂದ್ರನ ಪಾದಾರವಿಂದಕ್ಕೆರಗಿ ತನ್ನ ತಪ್ಪನ್ನು ಕ್ಷಮಿಸಬೇಕೆಂದು ಪ್ರಾರ್ಥಿಸಿದಳು.
ದೂರ್ವಾಸರು ಅವರ ಪ್ರಾಸೆಯಿಂದ ಸ್ವಲ್ಪ ತರುಣಿಯಂ ಪೋbit ಧರ್ಮ ಸಂಸ್ಥಾಪನೆಗಾಗಿ ಅವುಗಳ ಶಂಶಾಂಬಾರರ -ನರಿಂದ ನಗೆ ಶಾಪವಿಮೋಚನೆ ಯಾಗುತ್ತದೆ" ಎಂದರು. ಅದರಂತೆ ಶಾರದೆಯು ಎಷ್ಟು ತ್ರಢಾಚಾರನೆಂಬ
ಶಂಕರರವಾಸ
ಬ್ರಾಹ್ಮಣನಿಗೆ ಮಗಳಾಗಿ 11 ಉಭಯಭಾರ” ಎ:ಬ ತಸಂಪೂ ಹಿಮಕರ ಭಾಚಾರನ ಮಗನೂ, ಬ್ರಾವತಾರಿಯ ಆದ ಮಂಡನತ್ರನನ್ನು ವಿವಾಹ ಮರಿಡು ಸುಖವಾಗಿದ್ದಳು,
ಶರಾವತಾರಕ್ಕಿಂತ ಮುಂಚೆ ಈಶಾನ, ವಿಷ್ಣು, ತರಲಾಸನ, ಕw ರ್ಯಂಶಗಳಿಂದ ಕೂಡಿದ ಆಸೀಸನು ಸ್ವಾಮಿಸೇವೆಗಾಗಿ ಗೋವಿಂಧಗವಾದ ರಂಬ ಹೆಸನಿಂದ ಅವತರಿಸಿ, ಶುಶಿಷ್ಯರಾದ ಗೌಡಪಾದದಲ್ಲಿ ಬ್ರಹೋಪದೇವಂ ಪಡೆದು, ಪಂಜಲಿಯ ಬಳಿಯಲ್ಲಿ ವ್ಯಾಕರಣಾದಿ ಶಾಸ್ತ್ರಗಳ ಅಧ್ಯಯನಮಾಡಿ, ನರ್ಮರಾತೀರದಲ್ಲಿ ತಮ್ಮನ್ನು ಮಾಡಿಕೊಂಡಿದ್ದರು.
ಕಲಿ, ಕಾಮೇಧಯಾಂಶಗಳಿಂದ ಅಮರುಕರಾಯನು ಹುಟ್ಟಿ ಕಾಮಶಾಸ್ತ್ರ ವೀಣನಾದನು. ಕಾಲಬೈರವಾಡವು ಅಥರ್ವಣಾಂಶದಿಂದೊಡಗೂಡಿ ಉಗ್ರರವನೆಂಬ ವಾದಿಯಾಗಿ ಹುಟ್ಟಿತು. ತಂತ್ರಾಗಮಶಾಬರ ಜೀವತಾಂಶಗಳು ಕಾಪಾಲಿಕರಾಗಿ ಹುಟ್ಟಿ ದರು, ಕುಬೇರನು ಆರಾಧಿಸಲಾರನು, ವೀರಾವರಗಳು ಶಾಕ್ಷರಾದರು. ರಾಕ್ಷ ಸರು ಚಾರ್ವಾಕರಾರರು, ದಾನವರು ದೈತದುರ್ಮತವಾರಿಗಳಾದರು. ತ್ಯರು ಕ್ಷಣಕರಾದರು, ಗೌತಮ, ದಧೀಚಿ ಮೊದಲಾದವರು ನೀಲಕವಭಟ್ಟ, ಅಭಿನವ ಗುಪ್ಪ, ಭಾಸ್ಕರ, ಶ್ರೀತರ್ತರೂಪದಿಂದ ಮುಚ್ಚಿದರು, ಪ್ರಮಥಗಣಾಂತದಿರ ಕ್ರಕ ಆಕಾಪಾಲಿಕ ಕ್ಷೇನಾದ್ಯಂಶಗಳಿಂದ ವೈಖಾನಸಪಾಂಡರಾತ್ರರೂ ಅವಯಿಸಿದರು.
ಹೀಗೆ ದೇವಲೋಕವೇ `ಭೂಲೋಕವಾಗಿಯೂ, ದೇವತೆಗಳೂ ಮನುಷ್ಯರ ಗಿಯೂ ಅವkದರು.
-~
wಳ ತುರೀಯವಲ್ಲರೀ.
ಧರ್ಮಗ್ಯಾನಿ ಮಸಾಜಕೀರ್ಕುರವನ ಕಾತ್ಯಾಯನೀವ ಭಃ ಪ್ರಾರುರ್ಥಯ ಮತಿಸುರತು ವಿಹರ್ತ ಕಡ್ಡರ್ಶನ್ಯ ಕಂದು ! ಕೃಷ್ಣಾ ನಿಯೋಗ ಮತಗ್ರಾಹಗ್ರತಡ್ಕದ್ಮನಾ ಬಾಲ್ಯ ಪ್ರೌರವಂ ಚಕಾರ ಭವತಾಪ್ ಸಶ್ರೇಯಸೇ ದೇಶಿತ || ೧ ||
* ಶ್ರೀಕಂ ತರ ಆ ಮರಪರ್ಣನನು - ರಿ
2 . ರ್ತೀಕಮಾಸದಲ್ಲೊಂದುದಿನ ಆ ಅಗ್ರಹಾರದ ಬ್ರಾಹ್ಮಣರು ಸ್ವಯಂ »ರಿ ಭುಲಿಂಗೇಶ್ವರನಿಗೆ ಪೂಜೆಯಲ್ಲಿ ಸಮರ್ಶಿಸಿದ ಬಿಲ್ವಪಷ್ಟಮಾಲಿಕ
2
ಅನಿರಂಸಂಗ್ರಹ
೧೦
ಗಳು ತುಳು: ಓ ದುವುದನ್ನು ಕಂಡು ಮನೆ: ದೇವಸ್ಥಾನಕ್ಕೆ ಹೋಗಿ ಸೋಷಿ, ಮನ ರಂ: ಗೋಣ, ನಾಜೂ ಇ ರುವುದನ್ನು ಕಳು, ಭಯಾಶ್ಚರ್ಯಜ.1 & : - ಲೇ:ಾಂಶಸಂಭೂತದೇ ಬೇರೆ ಇಲ್ಲವೆಂದು ತಿಳಿದುಳಿದ ದ ದ ಸ್ಥಿತಿಸುತ್ತಿದ್ದರು,
ಮತ್ತೊಂದೆ:: ದುರುಷ ಮತ್ತು ನವೆಯುತ್ತಿರ ಒಂದು ಪ್ರಸಂಗ ಈ : ೧::- ಆತ-ರುಳದ ಸಳರಸು ಅಂತುಕ್ಷಯ್ಯ 4.ನ, :-:೧ , ೧ ಏಳುತ್ತಿರಲು, ಎಂಟು ದಿಕ್ಕುಗ
ದೆ, ... :::.; ಸುದr<ರ & ಶಳರುಶಗಳನ್ನು ತಂದು ಕಲ್) ೨.: * :::.327) ಭಾವಿಸಿರು,
- ಸ' * :- --ದಾವ: ಎಳ್ಳುನಾ, ಗುರು ವಾಯ೯. *: - :: -
ಸಿ ಲ್ಲಿ : ತಿರುವನ್ನು, ಸಚಿವರು ರೂಪಿ: : . : ....
ಅರಸ - ...ಪಾ, 3 35:ಅನೇಕ ರಕ್ಷಾ ವಿಧಾನಗಳನ್ನು ಮ, ಐ ಸಿ : - : -
ಆ ..: : : ... : ... .ದತ್ನಿ, ವಾಯುವು ತಾರಿ ವ್ಯವ::.: 5: ' “..: .ಶ.
* ರ್ಗ....' , '.. :::
ಈ ವರು, ಈಮಗೆ ಪ್ರತಿನಿಧಿ ಯು ... :: ೬, ೬.೮ ೨೧ , ಗಲೇ ಎಲ್ಲರ ಕಣ್ಣಿಗೂ ಕಾಣ
I
11
T
* ಇದನ್ನು 2 : 23, ಬಿಸಿ ಮಾಂಡಪು.
ಇಂದ: 21...ಸ ಯ ತಿಯಲ್ಲಿ ಹುಡುಗರೆಲ್ಲರೂ ಸುರು. ಸಂಜನೆ :::1 ರ ಲ್ಲಿದ್ದ ಕಾಶಗಳ ಸಮಿಷ
ಹೋಗಿ, 4 & 5:39... ಜಗ?? ಈ ವಿದೇಶಾಯಿನಷ್ಟು ಬೀಜಗಳಿವೆ?” ಎದೆ: ದ. ಬೆಂದ ಬಂದ ಉತ್ತರದಿಂದಲೂ ತೃಪ್ತಿ ಳ್ಳ: ತ್ರಿ: ಒರೆಸಿ: :45, 1, Vವರು ಒ ಪಿನಿಯನ್ನೇ ಏಭಾವಿಸಿ
ಜ. 25:, ೮.೨du . ವಾ?', ತಿ?ಜವೇ ಏದ್ಯರಿಗೆ ತಿಳಯಲಾಗಿ, ಅವರು ' ....'', 'ಸಿ, ಸೋಸಿ ಅಲ್ಲಿ ಒಂದೇ ಒಂದು ಜೀವಿ ರುವುದು ಅದು ::3: . : ಇದು ಒಂದು ಅರ್ಥವಾರ & s: 1:೩
M
ಇಳಕಶಾಸನ
0
1
.
).
=
ಶ್ರೀ ಶಂಕರನು ತನ್ನ ಪ್ರಥಮವಯಸ್ಸಿನ ಕರು, ದ್ವಿತೀ ಯ ವಯಸ್ಸಿನಲ್ಲಿ ವರ್ಣಬೋಧಕರಾದ ಪ್ರಕಾಳಜಿಗೆ ನ.
ಶಿವಗುರುವ ಶಂಕನಿಗೆ ತೃತೀಯುವನು: 'ಎರ್ದೆಸ ನೋಡಿ, ಆಯುಷ್ಯ ಮುಗಿಯಿತೆಂದು ತಿಳಿದು ಸತ್ತಿಗೆ -ಬೇತಾರನ್ನು 2 ಸರಳ ವದಿದನು.
- ಆರ್ಯಭೆಯು ತನ್ನ ಜ್ಞಾತಿಗಂಡ ಸತಿ: ಎಳ್ಳುಂ ಮಾಪಿಸಿದಳು,
ಅನಂತ ಶಂಕರನ ಎಳೆಯ ವಯಸ್ಸಿನ : ಪ್ರವರ್ತಿಸತಿ ಮಸ್ತಕಾರ್ಯe ಳುತಪಂಡಮೇ' ಎಂಬ ತವಕ-ಯ ತ.ರಂಆತನಿಖೆಯು ಜಾತಿ ಗಳಿಂದಲೂ, ಪ್ರೋತ್ರಿಯ ಬ್ರಾಹ್ಮಣಂಗ, . :: 5.1 ಪ್ರ ವೇ
ಮ ಮಾಡಿಸಿದಳು.
ಆ ಬ್ರಷ್ಟಾಯು, ದವ ....ರಾ: 3:53ನು ಮಾಡಿ ಕೊಡು, ಭಿನ್ನ ನಂ ಮಹಾ ...: 2:52ಬನು
ಒಂದುದಿನ ಶ್ರೀ ಶಂಕರನು ಒಂದು ಸಿನೆ :) : ಇವತ್ಸಾಖೆ ಎಂದನು
ಆಗ ಆ ಮನೆಯ ಹೆಂಗಸು ಒಂದು:-! :: :ಗತಿಸಿ" ಎಂದು ಹೇಳಿ ಒಂದು ಕವಿಯನ್ನು ಸು..:
ಆನಂತರ ಶಂಕರನು ಲಕ್ಷ್ಮಿ ಪಿ ೯ನ:, "ಸಣಗಿ ಲಕ್ಷ್ಮಿ:-ಕುವಃಪಿ! ನನ್ನನ್ನು ಸಲ ::: 2!:>: ಇತರವು:-ಮತಃ ! ಜು:ುಏಗೆ ಬರತ ತನ್ನ 7 ಇವೆ .
೮-ಇವರು ರ್ಫ ದಲ್ಲಿ ಮಾರಾಟವಾಗುಂದ ಧನಪ್ರಾಪ್ತಿ ಹೋಗುಳಾಗುವದು?
ವ:-ಈ ? : ೬ತ: ಪ್ರಸ್ಥ ' ಮು' ಎಂಬುದು ಸತ್ಯವಲ್ಲವೇ?
:-ಸರವಳು?
ವ:-ಹಾಗಾದರೆ, ಈ ...'ಈಗ ನಾವಿರ ಜನಕನು ಆದರೂ ಪ್ರತಿಫಲವನ್ನು ದಯಪಾಸ:
ಆ? ::ಯು ರ್ವಾದವಿದ ಆರು :.: : : ಸ್ಪದ ನೆಲ್ಲಿಕಾಯಿ
•w iಷ್ಟಿಯ ' ಯಲ್ಲಿ ಸು ೨೨೩ ೨,: ಇದು.
1
r
.
ಉದಮ್ಸಂಗ್ರಹ
ಈ ಪ್ರಕಾರ ನಿಯಮಬ್ರಹ್ಮಣ್ಯದಿಂದ ಗುರುಕುಲ ವಾಸಮಾಡಿ, ಚತುವ ದಗಳನ್ನೂ, ಸಕಲ ಶಾಸ್ತ್ರಗಳನ್ನೂ ಅಧ್ಯಯನಮೂವಿ ಗುರುಗಳಿಗೆ ಗುರುರಕ್ಷಿಯ ಇತ' ಭದ್ರಮೂಲದಿಂದ ಹಿಂತಿಗಿ ಬಂದ ದಕ್ಷಿಣಾಮೂರ್ತಿಯ' ಎಂಬಂತೆ ಮನೆಗೆ ಬಂದನು,
ಮೇರುವು ಇತರ ಪರ್ವತಗಳಿಗಿಂತ ಹೇಗೆ ಶ್ರೀಘ್ರವೋ ಹಾಗೆ ಈ ಶಂಕರನು ಎಲ್ಲಾ ಬ್ರಹ್ಮಚಾರಿಗಳಿಗಿಂತ ಶ್ರೇಷ್ಠನಾಗಿದ್ದನು. ಇಂತಹ ಬ್ರಹ್ಮಚಾರಿಯು ಹಿ೦ದ ಅವರಿರಲಿ : ಮುಂದೆ ಅವುಸಲಾರನು. ಇವನು ಕಾಮಾಕ್ಯರಿಷಡ್ವರ್ಗಗಳನ್ನೂ ಜಯಿಸಿದ್ದನು. ವಾಂಛಿತಫಲಶ್ರರಾನವ ಮತುತ್ತಿದ್ದು ಹಿಂದ ಎಲ್ಲರೂ ಅವನನ್ನು * ಧರಣೀಕಲ್ಪದ್ರುಮ' ನ್ನುತ್ತಿದ್ದರು.
ಒಂದುದಿನ ರೂರ್ವಾಭು ಬಂರು ಶ್ರೀ ಶಾಂತರಬ್ರಹ್ಮಟಗೆ ಸರ್ವ ವಿದ್ಯಾ ಶಕ್ತಿಯ ಅನುಗ್ರಹಿಸಿ ತಮ್ಮ ತಪಸ್ವಾಮರ್ಥ್ಯವಂ ಕೊಟ್ಟು ಆಶೀರ್ವದಿಸಿ ಹೊರ ಟುಹೋದರು.
ಮತ್ತೊಂದುದಿನ ಬಹಳ ಕೃತಳಾದ ಇವನ ತಾಯಿಯು, ನದಿಸ್ನಾನಕ್ಕೆ ಹೋಗಿ, ಬಿನ ತಾಜದಿಂದ ತಳಾಗಿ ನಡೆಯಲಾರಲೇ ಶ್ರಮಪಡುತ್ತಿರುವುದನ್ನು ತಿಳಿರು ಒಳನು ಅಲ್ಲಿಗೆ ಹೋಗಿ ಆಕೆಯನ್ನು ಪಸರಿಸಿ ಮನೆಗೆ ಕರೆದುಕೊಂಡುಬಂದು, ಆ ನದಿಯನ್ನು ಗ್ರಾಮದ ಸವರಲ್ಲಿ ಹುಯಬೇಕೆಂದು ಪ್ರಾರ್ಥಿಸಲು, ಆ ನದಿಯು ಪ್ರಾತಃಕಾಲದತ್ತಿಗೆ ಸರಿಯಾಗಿ ಗ್ರಾಮದ ಹತ್ತಿರ ಕುಯುತ್ತಿತ್ತು.
* ಇದನ್ನೆಲ್ಲಾ ಜನಗಳು ತಿಳಿದು ಶಾಂಕರಬ್ರಹ್ಮಚಾರಿಯನ್ನು ಕಂಡಾಗ, ೩ಕ್ಕರು, ಇತತ ತನ್ನ ಮಗನು ಅಲ್ಪಾಯುವರು ಆರ್ಯಾಂಬಿಗೆ ತಿಳಿದಿದ್ದಾಗ್ಯೂ ಕಳHಯನಂತ ಮುನ್ನು ಜಯಿಸಿ ಚರಾಯುವಾಗುವವರು 3ರು ಶಿವನು ಪ್ರಾರ್ಥಿಸುತ್ತಿದ್ದಳು,
* ಕೇರಳದೇಶದ ಜನರು ಯವ ಇತಿಖಾಧೆಯೂ ಇಲ್ಲದೇ ಕ್ಷೇಮವಾಗಿದ್ದರು. ರುಭಿಕ್ಷವೆಂಬ ಘನ ಅಡಗಿಹೋಗಿತ್ತು, ಅಲ್ಲಿನ ಧೂಳಯು ಈ ಬ್ರಹ್ಮಚಾರಿಯ ಮಮಯಂ ಕೇಳೆ ಶಂಕರನನ್ನು ಕರೆದುಕೊಂಡು ಬರುವಂತೆ ಮಂತ್ರಿ ಮಾನವ ಗನ್ನು ಕಳುಹಿಸಲು ಅವರು ಬಂದು ನಿಸ್ಸಹಶಿಖಾಮಣಿಯರ ಶಂಕರನಂ ಕರೆದರು.
ಆರಕ್ಕೆ ಶಂಕರನು ಸ್ವಧರ್ಮನುಪ್ಪಾನವಂ ಬಿಟ್ಟು ಲೋಕಾನುವರ್ತನಕಾಲ ಕ್ಷೇಹವು ಸರಿಯಲ್ಲವ” ಎಂದು ತಿಳಿದು ಧರ್ಮದಿಂದ ಸಕಲ ಪ್ರಜೆಗಳನ್ನೂ ಬಿಪಾ ಅನ ನೋಡುವುದೇ ಅರಸನಿಗೆ ಶ್ರೇಯಸ್ಕರವು" ಎಂದು ಹೇಳಲು ಆವು, ನಿರಾಶರಾಗಿ
ಗಿಬಂರು (ಗೆ ನಡೆದ ಸಂಗತಿಗಳನ್ನೆಲ್ಲಾ ತಿಳಿಸಿರು,
ಶಳರಳಳಾಸ
ಆಗ ರಾಜನು ತಾನು ಮಾಡಿದ ಮೂರು ನಾಟಕಗಳನ್ನೂ ಹತ್ತು ಸಹ ವರಹ ಕಾಣಿಕೆಗಳೊಂದಿಗೆ ತೆಗೆದುಕೊಂಡು ಬಂದು ಅವುಗಳನ್ನೆಲ್ಲಾ ಶಂಕರನಾರಾರವಿಂದಕ್ಕೆ
ಸಿ ನಿಲ್ಲಲು, ಶಂಕರನು, ನಾಟಕಗಳನ್ನು ಕೇರಳದಲ್ಲಿ ಪ್ರಚಾರವೂಡುವ ತಯೂ, ಆ ಮರವನ್ನೆಲ್ಲಾ ಅಗ್ನಿ ಹೋತೃಗಳಾದ ಜಾಹ್ಮಣಗೆ ಕತುವಂತೆಯೂ ಈ ಸಂತಾನಾರ್ಥಿಯಾಗಿ ಇರುವ ಆ ರಾಯನಿಗೆ ಒಂದು ಇಬ್ಬರನ್ನು ಬಸಿ ಕಳಸಲಾರಾಯನು ಶ್ರೀ ಶಾಂತರಮದಯಿಂದ ಪತ್ರವಂತನಾಗಿ ಸಂತೋಷ ಸುತ್ತಿದ್ದನು.
ಶ್ರೀ ಶಂಕರನ ಸಂವರ್ಕನಾರ್ಥವಾಗಿ ಬಹಳ ದೂರದ ದೇಶಗಳಿಂದ ಜನಗಳು ಬಂರು ಅಭೀಷ್ಟವು ನರವೇದ ಬಳಿಕ ಹಿಂತಿರುಗುತ್ತಿದ್ದರು. ಶಕರವರನಮಾತ್ರದಿಂದ ಜನಗಳಿಗೆ ನಿಧಿನಿಕ್ಷೇಪಾರಿಗಳೂ, ವಿದ್ಯಾರ್ಥಿಗಳಿಗೆ ಆ ದ್ಯಗಳೂ ಬರುತ್ತಿದ್ದವು ಶಂಕರಸ್ಕರಣಮಾತ್ರದಿಂದ ಕ್ಷುದ್ರಗ್ರಹ, .ಶಾಸ್ತ್ರ, ಭಿಚಾರಿಕಗಳು ನಾಜಾ ಗುರವ ಸಮಹರ್ಷಿಗಳೂ ಬಂದು ತಮ್ಮನ್ನು ತಪಸ್ಟಾಮಥ್ಯಗಳಂ ಕೊಟ್ಟು
ಹಿಂತಿರುಗುತ್ತಿದ್ದರು,
ಒಂದುದಿನ ಶಂಕರಜನನಿಯು ಆಗಸ್ತ ರಂ ಪ್ರಾರ್ಥಿಸಲು, ಅವರು ಬಂದರು. ಆಲ್ಯಾಂಬಿಯು ಅವರನ್ನು ಪೂಜಿಸಿ ನಮ್ಮ ಮಗುಗೆ ಏರುವೆ ಯಾವಾಗ ಆಗುವ ಲವರು 11 ಅಮ್ಮ! ನಿನ್ನ ಮಗನಿಗೆ ಇದು ಗರ್ಭಾಷ್ಟಮ; ಈ ವರ್ಷ ತುಂಬುವುದ ತೋಳಾ ಆಯುರ್ವಾಯವ ಪೂರ್ಣವಾಗುತ್ತದೆ; ಆಗೈ ಸನ್ಮಾನ ಸ್ವೀಕಾರದಿಂದ ಜನ್ಮವನ್ನು ಬದಲಾಯಿಸಿಕೊಂಡರೆ ಆಯಸ್ಸು ಮತ್ತಷ್ಟು ಹೇಳುತ್ತದೆ. ಬಳಿಕ ಗೋವಾ ನುಗ್ರಹದಿಂದ ಇನ್ನೂ ಹೆಚ್ಚುತ್ತದೆ” ಎಂದು ಮುನಿಗಳಷ್ಟೆ ಬಂದ ಅಂತರ್ಜತ ರಾದರು.
ಇದನ್ನು ಕೇಳಿ ಆತ್ಯಾಂಜಿಯು ಹತಾಶಳಾಗಿ, ಫಾ! ಪರಮೇಶ್ವರಾ!!' ಎಂದು ಮೂರ್ಛಾಕ್ರಾಂತಳಾದಳು. ಶಂಕರನು ಆಕೆಯನ್ನು ಉಪಚರಿಸಿ ಚಿಂತಾನಾಶಕಗಳಾದ ಅನೇಕ ಪುರಾಣಗಳಂ ಕೇಳುತ್ತಾ ಕಾಲವನ್ನು ಕಳಿಸುತ್ತಿದ್ದನು. ಆಲ್ಯಾಂಬೆಯು
ಚಿಂತೆಯನ್ನೆಲ್ಲಾ ಮರೆತು ಶಿವಮೊಚಾಸಕ್ತಳಾಗಿದ್ದಳು.
ಕೆಲವು ದಿನಗಳ ನಂತರ ಮಾತೃಕತ್ರರಿಬ್ಬರೂ ನದಿಗೆ ಸ್ನಾನಕ್ಕೆ ಹೋದರು, ಈತನು ನದಿಯಲ್ಲಿಳಿದು ಸ್ನಾನಮಾಡುತ್ತಿರುವಾಗ ಒಮ ಮೊಹರು ಬಂದು ಶಂಕರನ ಪಾದವನ್ನು ವಿವಿ ಸಿಟಿಯತೊಡಗಿತು.
ಕಾದಂಬೀಸಂಗ್ರಹ
೧೪
ಆಗ ಶಂಕರನು «« ಅಮ್ಮ ! ಒಂದು ಮೊಸಳೆಯು ತನ್ನ ಪಾದವನ್ನು ಹಿಡಿದು ಶಯುತ್ತಿದೆ; ಏನುಮಾಡಲಿ? ಪ್ರಾಣಾಪಾಯಕ್ಕೆ ಸಿಕ್ಕಿದೆನಲ್ಲಾ ! ಅನ್ಯಾಯವಾಗಿ ದುರ್ಮರಣವಾಗುವ ಸಂದರ್ಭವು .೦ಡು; ನನ್ನ ಪ್ರಾಣಗಳು ಇನ್ನು ಕೆಲವು ನಿಮಿಷ ಗಳು ಮಾತ್ರ ಬದುಕಬಲವಾವನ್ನು ವ್ಯವಧಾನವಿದೆ; ನಾನು ಬದುಕಿರಬೇಕೆಂದು ನಿನಗಿಷ್ಟವಿದ್ದರೆ ಸನ್ಯಾಸಾದರೂ ತತವಾಗದೆ ಆಸ್ಟ್ರೇಣಿಯನ್ನು ಕೊಂಡು, ಒಂದು ವ್ಯಸನದಿಂದ ಘಟ್ಟಿಯಾಗಿ ಕೂಗಿದನು,
ನದಿಯ ದಡದ ಮೇಲಿದ್ದ ಬ್ರಾಹ್ಮಣರು, ಸನ್ಯಾಸಕ್ಕಾದರೂ ಅಪ್ಪಣೆ ಕೊಡ ಬಯದದು.
ಆಗ ಆಶಾವಣಿಯು 14 ರಗತಿ ತರೂಪವೇ ಸನ್ಯಾಸಗ್ರಹಣವು ಮುಖ ದರೆ ಇನ್ನೂ ಕೆಲವು ಕಾಲ ಒುಕುದು” ಎಂದಿತು.
ಆರ್ಯಂಜಿಯು ಇದನ್ನೆಲ್ಲಾ ನಟ ಜೀತ ಮರ್ಗಿಲ್ಲ ಈ ಮಗುವೇ ! ನೀನು ಸನ್ಯಾಸವನ್ನಾದರೂ ತೆಗೆದುಕೊಂಡು ಸುಖವಾಗಿ ಬದುಕು'' ಎಂದು ಹಿಂತೆಯಿಂದ ಕೂಗಿ ಹೇಳಿದಳು,
ತಾಯಿಯ ಉತ್ತರವನ್ನು ಕೇಳಿದಾಗಲೇ ಸಂತರನು ಕಷಡಾಧ್ಯಭಿಮಾನ ಗಳಂ ತೊರೆದು ಪ್ರಭೂತನಾಗಿ«« ಅಧಯಂ ಸರ್ವಭೂರ್ತೀ'' ಎಂದು ಎರಡು ಕೈಗಳನ್ನೂ ಮೇಅಕ್ಕ, ನನ್ನ ತಂಳರನ್ನು ಬಿಟ್ಟ ಗಂಧರ್ವರೂಪವಂ ಇಂದಿ ಶಂಕರಯತಿಗೆ ನಮಸ್ಕರಿಸಿ ಹೊರ:ಪಿಹೋಳು ,
ಶಂತರರು ಸಂಸಾರಸಾಗರಪಂ ವಾಂಟಿನಮೇಲೆ ಸ್ನಾನಮಾಡಿಕೊಂಡು ಮೇಲಕ್ಕೆ ಡು ಬಂದು ತಾಸಿಗೆ ವಬಸ್ತಿ, ಧುತಿಸುತ್ತಿದ್ದ ತಾಯಿಯಂ ಸಮಾಧಾನಗೊಳಿಸಿ ಕಷ್ಟಕಾಲನ್ನು ಸ್ಮರಿಸಿಕೊಳ್ಳುವಂತೆ ಹೇಳಿ, ತಳಪ್ಪಣಿಯು ಪಡೆದು ಕ್ರಮಸನ್ಯಾ ಮ ತೆಗೆದುಕೊಂಡು ನೈಷ್ಕರ್ಮಸಿದ್ದಿಯನ್ನು ಹೊಂದಬೇಕೆಂದು ತನ್ನ ಗುರುವನ್ನು ಹುಡುಕುತ್ತಾ ಹೊರಟರು.
ಆ ಅಗ್ರಹಾರದ ಜನರು ಶಂಕರರನ್ನು ಆ ದಿನ ಅಲ್ಲಿಯೇ ಇದ್ದು ಮರ ನಯನ ಹೊರಡಲನುವರು. ಶಂ.ಯು ಅವರ ಮಾತಿನಂತೆ ಆ ದಿನವೆಲ್ಲಾ ಅಲ್ಲಿನ ಕಷ್ಟದೇವಾಲಯದಲ್ಲಿ ಒಖಿಂದ ಸೇವಿಸಲ್ಪಡುತ್ತಿದ್ದರು.
೧೫
ಹಿರಣಾಸಾರ
ಆಗ ಸುತ್ತು ಮುತ್ತಣ ಪ್ರಾಂತ್ಯದಲ್ಲಿ ಕೆಲವರು ಸಂತರು ಬರು, ಕಲಿ ಯುಗದಲ್ಲಿ ಸನ್ಯಾಸಗ್ರಹಣವೂ ಸಿಸೇಸಪ್ಪಗೆನೀವು ಹೇಗೆ ಸನ್ಯಾಸಗ್ರಹಣ ವಿದು? ಎಂದು ಪ್ರತಿ ವಷತ್ರ, ಕಂಯತಿಗಳು ಆ ಜನರಲ್ಲಿಯೇ ಸನ್ಯಾಸೋದ್ಧಾ ರವೆಂಬ ಗ್ರಂಥವನ್ನು ಮಾಡಿ ಅವರನ್ನು ಒಂದು ಸನ್ಯಾಸತಿಪ್ಪಾಪನಾಚಾರ' ರೆಂದು ವಏಸುಟ್ಟರು.
ಆ ರಾತ್ರಿಯಲ್ಲಿ ಶ್ರೀಕೃಷ್ಣನು ಪ್ರತ್ಯಕ್ಷನಾಗಿ«« ನವಿಯು ನನ್ನ ದೇವಾಲಯ ವನ್ನು ಕರೆಯುತ್ತಿದೆ ನನ್ನ ತಾ ಮೂರ್ತಿಯನ್ನು ಬೇರೊಂದುಕಡೆ ಪ್ರತಿಕ್ಕಿಸಿ ಹೋಗು” ಎನ್ನಲು, ಕಾಚಾರೈರು ಆ ಮೂರ್ತಿಯನ್ನು ತನ್ನ ಸಿಪ ಬರುವಂತೆ ಪ್ರಾಕ್ಸಿ, ಮಂತ್ರಶಕ್ತಿಯಿಂದ ಆಳ-ಸಿ ಕರಕೊಟ್ಟು ಮ ರುಕಡೆ ಪ್ರತಿಕ್ಕಿಸಿ ಆಳ ರಕ್ಷಾದಿಗಳನ್ನು ಕಸಿ, ಬ್ರಾಹ್ಮಣ ಸಭವಾಗಲೆಂದು ಕಸಿ ಹೊರ
ಟುನೂರು,
(ಆಗ ಆಚಾಂಪ ರಚಿಸಗ್ರಂಥಗಳನ್ನು ಸಹಿಸುವಕಡೆಯಲ್ಲಿ ಈಗಲೂ ಮುರುಗಳಿಗೂ ಬ್ರಾಹ್ಮಣಾರಿ ಚಾತುರ್ವಣ್ಯ್ರ ಕ್ಷತಿಲ್ಲ.)
-~-:42 .35%
ಪಂಚಮವು.
ಶ್ರೀ ಶಂಕರೋ ಗುರುಗವೇಷಣ ತರಂ ' ಗೋವಿಂದಯೇಶಿತ ಪವಾಸಪತ್ಯ | ತಸ್ಮಾದಾನಿಶಾಗಮಾಸ್ತ್ರ ಗುರಾಜ್ಞಯಡ್ಕ ಮಹಿಮಾ ಪ್ರಯಯ ಔ ಕಾಶೀಮ್ ||
ಆ ಅ ತ ನಂತರ ಶಂಕರಾಚಾದ್ಯರು, ಮಾನ್ಯ ಮತ್ತು ಶ್ರೀಕೃಷ್ಣ ಪರಮಾತ್ಮರ ಓಯ ಅನುಜ್ಞೆಯಂ ಪಡೆದು ಕಾಮಕ್ರೋಧಾದಿಗಳನ್ನು ಬಿಟ್ಟು, ಶಮದಿ ಗಳಿಂದಲಂಕೃತರಾಗಿ ಮೋಕ್ಷವೆಂಬ ಆಶ್ವವನ್ನೇರಿ, ವೈರಾಗ್ಯದ ಛತ್ರವಂ ಪಿಡಿದು, ಉಪನಿಷತ್ತಮಳದೊಂದಿಗೆ ಸುಳ್ಳತರುವಾಕವೆಂಬ ಗಾಳಿಯು ಬೀಸುತ್ತಿರಲು, ವಿವೇಕ ಎಂಬ ಸೂಕ್ಷ್ಮನ ಬೆಳಕಿನಲ್ಲಿ ತಮ್ಮ ಗುರುಗಳನ್ನು ಹುಡುಕುತ್ತಾ ಪಟ್ಟಣಗಳನ್ನೂ, ಸವ
ಕಾದಂಬಸಗ್ರಹ
ತಗಳನ್ನೂ, ಗ್ರಾಮಗಳನ್ನೂ, ಜನಗಳನ್ನೂ, ಸುಗಳನ್ನೂ ನೋಡುತ್ತಾ ಉಪಷ ರೂಪಿಣಿಯಾರ ಗೆbವನ್ನು ಎಳೆಯುತ್ತಿರುವ ವಾದಿಗಳ ಕೆಸಿದ ಸಂರಕ್ಷಿಸಲು ಕೋಖು ಬೇಕಾಗಳು, ಈ ದಂಡವನ್ನು ಧರಿಸಿರುವರೋ ಎಂಬಂತೆ ದಂಡಧಾರಿಗಳಾಗಿ ಹೊರಟ ಗೋವಿಂದ ಭಗವತ್ಪಾದರ ತಪೋವನವನ್ನು ಸಾಯ೦ಕಾಲಕ್ಕೆ ಸುಯಾಗಿ ಸರಿ, ಚಂದ್ರಪ್ರಭಾನದಿಯ ತೀರದಲ್ಲಿ ನಿಂತರು.
ಆಚಾರರು, ಸಮಾಜದಲ್ಲಿ ಒಂದು ಗುಳೊಳಗೆ ಯೋಗಾರೂಢರಾಗಿ ಕುಳಿ ತಿರುವ ಗೋವಿಂದಭಗವತ್ಪಾದರನ್ನು ಕಂಡು, ಅಲ್ಲಿಗೆ ಹೋಗಿ ಗೋವಿ:ದಭಗತ್ಸಾದ ರನ್ನು ಬಹಳವಾಗಿ ಪ್ರತಿಸುಖ, ಅವರು ಒರ್ಮುಬರಾದಮೇಲೆ ಶಂಕರಯಶಿಯಂ ಕುರಿತು ನೀನು ಯಾರು ” ಎನ್ನಲು ಶಂಕರ “ ಸ್ನಾ: 1 ನಾನು ಸೃಥಿವಿಯಲ್ಲ; ಒಮ್ಮ; ತೇಜಲ್ಲ; ವಾಯವಲ್ಲ: ಆಕಾಶವಲ್ಲ; ತದ್ದು ಇಂದ್ರಿಯಗಳೂ ;
ಆನಂದಸ್ವರೂಪಿಯಾದ ಪರಶಿವನೇ ನಾನಾಗಿದ್ದೇನೆ” ಎಂದುತ್ತರವಿತ್ತರು.
ಅದನ್ನು ಕೇಳಿ ಗೋವಿಂರಭಗತ್ಪಾದರು 11 ತಂತರಯಯೇ ! ನಿನ್ನನ್ನು ಒಳ ರನಂಬದಾಗಿ ತಿರಿಯವನು; ನೀನು ಲೋಕಾನುಗ್ರಹಕ್ಕಾಗಿ ಅವಮಿಸಿರುವೆ ಎಂಬು ನ್ನೂ ತಿಳಿಯುವೆನು, ನಾನೇ ನೀನಾಗಿರುವ ಹೇಳಬೇಕಾದ್ದೇನೂ ಇರುವುದಿಲ್ಲ. ಆದರೂ, ಸಕಾಚಾರೈರ ಶಿಷ್ಯರಾದ ಗೌಡಪಾದಮಹರ್ಷಿಗಳಿಂದ ನನಗೆ ಉಪದೇಶಿಸು ಬೀರುವ ಬ್ರಷ್ಟಾರಗಸ್ಯನು ನಗೆ ಉಪದೇಶಿಸುತ್ತೇನೆ” ಎ:ದು ಹೇಳಲು
ದೇಶಿಕರು ಓಂಕಾರವನ್ನುಷ್ಟುಸಿ ಗುರುಪಾದಸ್ತಮಸ್ತಕರಾದರು.
ಆಗ ಗುರುಗಳು ಶಿಷ್ಯನನ್ನು ಮೇಲಕ್ಕೆತ್ತಿ, ಕ್ರಮಸನ್ಯಾಸತ್ತು, ಚತುರ್ವೇದ ಸಾರಗಳಾದ ಅನೇಕ ಮಹಾಮಂತ್ರಗಳನ್ನೂ ಬ್ರಹ್ಮವಿದ್ಯಾರಹಸ್ಯವನ್ನೂ, ಕಾಜ ಯೋಗವಿದ್ಯಾರಹಸ್ಯವನ್ನೂ ಉಪದೇಶಿಸಿದರು.
ಶಂಕರರು ಗುರುಗಳ ಸಮಾಜದಲ್ಲಿ ಸೇವೆ ಮಾಡಿಕೊಂಡು ಬಹಳಕಾಲ ಸಿದ್ದರು.
ಅಲ್ಲಿದ್ದ ಇತರ ರ್ಮ ಗಳು ಶಂಕರರನ್ನು 1 ಚಮಹಂಸ' ರತು ಸ್ತುತಿಸು ತ್ರಿದ್ದರು.
ಒಂದಾನಂದು ಕಾಲದಲ್ಲಿ ಮಹರ್ಷಿಗಳೆಲ್ಲರೂ ಚಾತುರ್ಮಾಸ್ಯವ್ರನಂ ಕೈಕೊಂಡು ಸಮಾಧಿಷ್ಟರಾಗಿರುವ ಕಾಲದಲ್ಲಿ ಚಂದ್ರಪ್ರಭಾ (ನರ್ಮಬಾ) ನದಿಯ ಪೂರ್ಣಪ್ರವಾಹದೊಡನೆ ದಶಮಿ ಯುಯುತ್ತಿದ್ದಿತು. ಪ್ರವಾಹವು ಕ್ರಮೇಣ
ಕಳಕಥಾಸಾರ
M
ಹೆಚ್ಚಾಗಿ, ಚಾತುರ್ಮಾಸ್ಯಸಂಕಲ್ಪವು ಕೈಗೊಂಡಿದ್ದ ಯತಿಗಳ ಬ್ರಹ್ಮಸೂತ್ರಶಾಲೆಗಳ ಕಡೆಗೂ, ವೇದಪಾರಾಯಣ ಮಾಡುತ್ತಿದ್ದ ಬ್ರಹ್ಮಂದಗಳ ಕಡೆಗೂ ಬಹಳ ಭಸ ದಿಂದ ಮತ್ತಿತ್ತು,
ಅದನ್ನು ಕಂಡು ಯತಿಗಳು ಏಕೋರುವಕ್ಕೂ ಅವಕಾಶವಿಲ್ಲವೇ ಈಗಿ ಕೊಳ್ಳಲಾರಂಭಿಸಲು ಯೋಗಾರೂಢರಾಗಿದ್ದ ಶಂತರವೇಶಿತರು, ವಸಿಷ್ಠರಾಗಿರುವ ಗುರುಗಳಿಗೆ ಮಾಡುವ ಕಾಲಾತಿಕ್ರಮಣವಾಗುವದೆಂತ, ತಮ್ಮತಮಂ ಡಲುವನ್ನು ಅಭಿಮಂತ್ರಿಸಿ ಪ್ರವಾಸಕ್ಕಪ್ಪಲಾಗಿತು ಹೆಚ್ಚು ನೀರೆಲ್ಲಾ ಆತನಡುವಿ ನಲ್ಲಿ ಅಡಗಿಹೋಯಿತು,
ಇನ್ನು ನೋಡಿ ಅಲ್ಲಿ ಜಾಸ್ಮಣರೂ ಆಗಷನಾದರೂ ಈ ರೂಪದಿಂದ ಬಂಪಾಜ' ಎಂದು ಶಂಕರರನ್ನು ಪ್ರೀತಿಸಿದ,
ಮತ್ತೊಂದುಳಾದ, ನವಿಯಲ್ಲಿ ವ್ಯಾನಾಳಗಳ ಮ ತ ಸಿಪ್ಪಾ ಶ್ರಮಕ್ಕೆ ಹೋಗುತ್ತಿದ್ದಾಗ ಮಧ್ಯಕ್ಕೆ ಭಾರ ಒಡಕಿರಣಗಳಿಂದ ತಪ್ತರಾಗು ಇಟುವ ಗುರು.ಗಳಂಕ ತರತರು ತಮ್ಮ ರಾಟಿ (ವ; ಯನ್ನು ಮೇಲ ಆಸೆಯು ಆದ ಛತ್ರದಂತೆ ಗುರುಗಳಿಗೆ ಸುತ್ತಾ ಬರುತ್ತಿತ್ತು.
ಅದನ್ನು ನೋಡಿ ಅಲ್ಲಿದ್ದವರೆಲ್ಲರೂ ಬಹಳ ಆತ್ಮರಸರು.
ಗೋವಿಂದರಗವತಾದರು, ವ್ಯಾಸರು ತಮಗೆ ಆಪ್ಪಣೆ ಕೊಡಿಸಿದ ಶಿಷ್ಯನು ಇವನೇ ಎಂತಲೂ, ಮತ್ತು ಇವನು ಬ್ರಹ್ಮಸೂತ್ರಗಳಿಗೆ ಸಿದ್ಧಾಂತಾರ್ಘವಾದ ಭಾಜ್ಯ ಮಾಡುವದೂ ಸವಸ
ಅನಂತರ ಗೋವಿಂದ ಭಗವತ್ಪಾದರು ಶಿಷ್ಯನನ್ನು ಕುರಿತು 1 ಯ ! ನಾನು ಅತ್ರಿಮರ್ಷಿಯು, ಮಾಡಿದ ಯಜ್ಞಕ್ಕೆ ಹೋಗಿದ್ದಾಗ ವ್ಯಾಸರನ್ನು ಕಂಡು * ಬ್ರಹ್ಮಸೂತ್ರಗಳಿಗೆ ಭಾಷ್ಯವಿದ್ದರೆ ಚೆನ್ನಾಗಿತ್ತು' ಎಂದು ಕೇಳಲು ಅವರು • ಇತ್ಯ ರನೇ ಮನುಷ್ಯಾಮಾರಮಂಗೈದು ನಿನ್ನಿಂದ ಉಪಚ್ಚನಾಗಿ ಭಾಷ್ಯವಂ ರಚಿಸಿ ಧರ್ಮ ಪ್ರತಿಷ್ಟಾನಿಯಂ ಗೈಯುತ್ತಾನೆ' ಎಂದು ಹೇಳಲು, ನಾನು ಆ ಮನುಷ್ಯರೂಪಿಯದ ಶಂಕರನನ್ನು ಕಂಡು ಹಿಡಿಯಲು ಕುಮುದೇನು' ಎನ್ನುವರು - ಮಹಾನದೀಘ್ರವಾಸವನ್ನು ಯಾವ ಜಾಲಸನ್ಯಾಸಿಯ ಕಮಂತಖವನ್ನು ಅಡಗಿಸುವನೋ ಅವನೇ ಈಶ್ವರನು ' ಎಂದು ಹೇಳಿದರು. ಅದರಂತೆ ನಿನ್ನಲ್ಲಿ ಆ ಲಕ್ಷಣಗಳು ತೋರ್ಪಟ್ಟ ಕಾರಣ, ನೀನು ಭಾಷ್ಯರಚನೆಯಂಗೈದು ಬಯಸಂ ಮಾಡಿಕೊಂಡು ಧರ್ಮಸಂಸ್ಥಾಪನೆಯಂಮd ನಮಲ್ಲಾ ಕೀರ್ತಿಯನ್ನು ತರಬೇಕು” ಎಂದರು.
ಕಾದಂಬರೀಷಿಗ್ರಹ
ಅವರ ಆಪ್ಪಣೆಯಂತ ಆಚಾರರು ಅವರಿಗೆ ವರನಾದಿಗಳನ್ನು ಮಾರಿ ಮಹ ಶ್ವರನ ರಾಜಧಾನಿಯಾದ ಕಾಶಿಗೆ ಹೋಗಿ ಭಾಗೀರಥಿಯಲ್ಲಿ ಸ್ನಾನಮಾಡಿ, ಅಲ್ಲಿ ಗಂಗಾ ಪ್ರಳವೆಂಬ ಸ್ತೋತ್ರಮ್ಮು ರಚಿಸಿ, ಕ್ಷೇತ್ರಯತ್ರೆಯಂ ನೆರವೇರಿಸಿ ಧುಂಡಿರಾಜ, ಇರ ವನಧವಾದ್ಯಷ್ಟಕವಗಳನ್ನು ಹೇಳಿ ದೇವಾದಿದೇವನಾದ ವಿಶ್ವೇಶ್ವರನನ್ನು ಪೂಜಿಸಿ, ಕಶಿಜನಗಳಿಂದ ಸೇವಿಸಲ್ಪಡುತ್ತಲ, ಸನ್ಯಾಸವನ್ನು ಪ್ರಚಾರಮಾಡುತ್ತಲೂ ಇದ್ದರು.
ಪಷ್ಟ ಮರೀ,
ಕಾಶ್ಯಾಂ ಪನ್ನಿ ಬಿದುಷ್ಟ ಮತಾನಿ ಭಿಂರ್ದ ಶಿಷ್ಯಂ ವಂದನಮರಾಮವೇ ತಸ್ಯ | ಹಕ್ಕೆ ೨ ಪದ್ಮಚರಣಾಯಮಾತ್ಮಬುಧ್ಯಾ
ಭಾತ್ಮಾದಿಕಂ ಜಿ ಖಚಾರಮಣಾನುಮತ || ಜಿsಜಸಿ ಇಲ್ಲಿ ಶಂಕರಾಚಾದ್ಯರು ಸನ್ಯಾಸಪ್ರಚಾರಮಾಡುತ್ತಿರುವ ಸಮಯದಲ್ಲಿ
ವಿ ಒಂದು ದಿನ ಒಬ್ಬ ಬ್ರಾಹ್ಮಣಬಾಲಕನು ಬಂದು ಆಚಾರರಿಗೆ ನಮಸ್ಕರಿಸಿ ನಿಲ್ಲಲು, ಶಂಕರರು ಅವನನ್ನು “ ನೀನು ದ್ವಿಜರಲ್ಲಿ ಯಾರು ? ನಿನ್ನ ವಾಸವು ಎಲ್ಲಿ 1 ಇಲ್ಲಿಗೆ ಏತಕ್ಕೆ ಬಂದೆ ? " ಎನ್ನಲು ಆ ಬಾಲಕನು « ಸ್ವಾಮಿ! ನಾನು ದ್ವಿಜ ರಲ್ಲಿ ಬ್ರಾಹ್ಮಣನು; ನನ್ನ ವಾಸವು ಜೋಲರೇತವು; ಈ ಸಂಸಾರಸಾಗರದಲ್ಲಿ ಮುಳಿ ಗಿರಥಾವನಾಗಿ ಏಳಲು ಶಕ್ತಿಯಿಲ್ಲದೇ, ಅದನ್ನು ನಿವಾರಿಸಲರ್ಹರಾದ ಗುರುಗ ಇನ್ನು ನಾನಾ ದೇಶಗಳಲ್ಲಿಯೂ ಹುಡುಕಿ ಎಲ್ಲಿಯೂ ಕಾಣಲೇ ಇಲ್ಲಿಗೆ ಬಂದಿದ್ದೇನೆ; ಇದೇ ನನ್ನ ಉದ್ದೇಶವು; ಆದ್ದರಿಂದ ತಾವು ನನ್ನಲ್ಲಿ ದಯವಿಟ್ಟು ನನ್ನನ್ನು ತಮ್ಮ ಶಿಷ್ಯ ನನ್ನಾಗಿಮಾಡಿಕೊಳ್ಳಬೇಕು ಎಂದು ಪ್ರಾರ್ಥಿಸಲಾಚಾರೈರು, ತಮಗೆ ಆಹಿ೦ದಣರಾ ತ್ರಿಯಲ್ಲಿ ಬಿಂದುಮಾಧವಸ್ವಾಮಿಯು 11 ನನ್ನ ಅಂತದೃವನಾದ ಓರ್ವನು ಬಂದು ನಿನ್ನ ಶಿಷ್ಯನಾಗುವನು' ಎಂದು ಸ್ವಪ್ನದಲ್ಲಿ ಹೇಳಿದ್ದು ನಿಜವೆಂದು ತಿಳಿದು ಅವನಿಗೆ ಸನ್ಯಾಸಾಶ್ರಮವಂ ಇಟ್ಟು ನಂದನನೆಂಬ ಹೆಮಿನಿಂದ ಹೃನನ್ನಾಗಿ ಮಾಡಿ ಕಂಡರು.
ಶಳರಳಫಾಸರ
ಆ ಸನಂದನ ಶಸ್ತ್ರಗಳಲ್ಲಿ ಶುಕ್ರರೇಖೆಗಳ, ಹೃರಯದಲ್ಲಿ ವನಮ ಲಾಷ್ಟಜಯ ರೇಖೆಗಳೂ, ಪಾದಗಳಲ್ಲಿ ರ್ಪತ್ಮರೇಖೆಗಳೂ, ಇದ್ರವ ಆನ ವಕ್ಷ ಸ್ಥಲವು ವಿಶಾಲವಾಗಿದ್ದಿತು; ಆತನು ಆಜಾನುಬಾತುವಾಗಿದ್ದನು; ನೇತ್ರಗಳು ಪದ್ಯಗಳತ ವಿಸ್ತಾರವಾಗಿದ್ದವು; ಈ ಮೇಲಿನ ಲಕ್ಷಣಗಳಿoದ ಅವನನ್ನು ಎಷ್ಟಶಸಂಭೂತನನ ಬಹುದಾಗಿದ್ದಿತು.
ಆಚಾರರು ಅಲ್ಲಿರುವಾಗ ಪ್ರತಿದಿನವೂ ಒಂದೊಂದು ದೇವರುಗಳನ್ನು ಶ್ರುತಿ ಸುತ್ತಾ, ಅನೇಕಸಾವಿರ ಸ್ತೋತ್ರಗ್ರಂಥಗಳನ್ನೂ, ಆತ್ಮಬೋವ್ರ ಅಪರೋಕ್ಷಾನುರೂ, ಜ್ಞಾನವಾಪ್ನಸಾಯೋದ್ಯಾಕೇತ್ಕಾರನೇಳಪ್ರಕರಣಗ್ರಂಥಗಳನ್ನೂ ರಚಿಸಿ, ಜ್ಯಂಗೆ ಕೊಡುತ್ತಾ, ದರ್ಶನಮಶ್ರದಿಂದ ಕಾಶೀಜನಗಳ ಕಷ್ಟನಿವಾತಕಯಂಮಾಡುತ್ತಾ ದುಷ್ಟನಿಗ್ರಹುತುಪಾಲನಾಚಾರರೆನಿಸಿಕೊಂಡು ವರ್ಣಾಶ್ರಮಧರ್ಮಗಳಂ ನ್ಯಾಯ ರಿಂದ ವಾರಿಸುತ್ತಿದ್ದರು,
ಈಕತರು ಅಲ್ಲಿಗೆಬಂದ ಭತ್ತು ಸಹಸ್ರಪದಿ ದ್ವಿತಿಗಳನ್ನು ನಾಶಮಾಡಿ ಗೋವಿಂಭಗವತ್ಪಾದರು ತಮಗೆ ಕೊಟ್ಟಿದ್ದ ಶ್ರೀ ಚಂದ್ರಮೌಳೇಶ್ವರಲಿಂಗವನ್ನು ರತ್ನಗರ್ಭಗಣಪತಿಯನ್ನೂ, ಶ್ರೀಚಕ್ರ, ನವಗ್ರಹಯಂತ್ರ, ನೃಸಿಂಹಸಾಲಗ್ರಾಮಾದಿಗ ಇನ್ನು ಕನಂದರುಗೆ ಈಜಿಮಾಡಿಕೊಂಡಿರುವಂತೆ ಕೊಡಲು ಅವರು ಅವುಗಳನ್ನು ಪೂಜಿ ಸುತ್ತಾ ನಮಗೆ ತಿಮೆಗಳು ಹೇಳುತ್ತಾ ಧರ್ಯರತರಾಗಿದ್ದರು,
ಒಂದುದಿನ ಶಂಕರಾಚಾರ್ಯರು, ಸುತರಾಗಿ, ಗಂಗಾಸ್ನಾನಕ್ಕೆ ಹೋಗಿಬರ ಇರುವಾಗ, ದಾರಿಯಲ್ಲಿ, ಓರ್ವಜಪಾನು, ಮದ್ಯಘಟವನ್ನು ತಲೆಯಮೇಲೆ ಹೊತ್ತು ಕೊಯ ನಾಲ್ಕು ನಾದಿಗಳನ್ನು ಓದುತೆರುರಿಗೆ ಬರಲು, ಆಚಾರ್ಯರು, 4 ಗಚ್ಚಗ' ಎಂದು ಕೈಸನ್ನೆ ಮಾಡಲಾಗಿ, ಆ ಹಂಪಾನು ಅಲ್ಲಿಯೇ ನಿಂತು ಓ ಯತಿ ವರನೇ! ಅನ್ನಮಯವಾದ ಶಬರದ ಸಮಾಪರ ಅನ್ನಮಯವಾದ ಮತ್ತೊಂದು ಬೀರವನ್ನು ದೂರಹೋಗುತ್ತೀಯೋ ? ಒಜಾತಿಯಲ್ಲಿ ಇದು ಇಬ್ಬರಿಗೂ ಯುಕ್ತವಲ್ಲವು ಸಮರ್ಥವಾದ ಆತನನ್ನು ವಿಚಾರಿಸುವ ಪರಮಹಂಬಿಗೆ ಈ ಭೇದಗಣನೆಯು, ಸತ್ಯವಲ್ಲವಷ್ಟೆ? ಓರ್ವ ಸೂರನೇ ಗಂಗೆಯಲ್ಲೂ, ಹೊಲಗೇ ರಿಯ ಬಚ್ಚಲಿನ ಪ್ರತಿಬಿಂಬಿಸಿ ಅನೇಕವಾಗಿ ತೋರಮಾತ್ರಕ್ಕೆ ಅನೇಕ ಸೂರ್ಯ ರು ಂಟರಾಗಿಹಯೋ” ಎನ್ನಲು, ಆಚಾರ್ಯರು ಅವನ ವಾಕ್ಯಗಳಿಂದ ಸತಷ
, « ಆಹಾ! ತೇವಾಂಶರಹಸ್ಯವ ಈ ಚಂಪಾನಿಗೆ ಹೇಗೆ ತಿಳಿಯುವುದು ಈ ರಹಿತ ಆರನೇ ಇ ದ್ದರಿಂದ ಇದನ್ನು ಬಿ ಡು '' dull
ಕಾದಂಬರಿಸಂಗ್ರಹ
ಯೋಚಿಸುತ್ತರವಾಗಲೀ ಸಂಸಾರವನ್ನ, ಬಯಲಾಗಿ 4ಟಿಸೂರ್ಯಪ್ರಕಾಶವಾದ ರಿವ್ಯರೂಂದಿಗೆ ಆಂರ್ಧಪಿತ ವೃಷಭಾಯಧನೂ ಪ್ರಮಥಗಣಯುತನೂ ಚತುವೇದಸ್ತೂಯಮನನೂ ಆದ ಜೀವೋತ್ತಮನೆನಿಸುವ ಪರಮೇಶ್ವರನು ನಿ೦ತಿದ್ದನು.
- ಆಗ ಮಹೇಶ್ವರನು, ಪoyಸಂಭೂತನಾದ ಯತಿಯೇ ! ನೀನು ಪ್ರಪಂಚದ ನ್ನು ದೃಷ್ಟಿ ವೇದಾಂತಪ್ರತಿಷ್ಠಾಪನಾರ್ಥವಾಗಿ ಅವಳುಸಿರುವ ಕಾರಣ, ಮಹಾವಿಷ್ಟ್ಯ ಶಜನಾದ ವೇದವ್ಯಾಸಂದ ರುವಾರ ಸೂತ್ರಗಳಿಗೂ, ಲೋಕಸತಂಡ ರುದ್ರ, ನೃತಾಪಿಸಿ, ಶ್ರೀ ರುದ್ರಾದಿದೇವಾಂತಗಳಿಗೂ, ಗೀತಾ, ಪಸ್ರನಾಮ ದಿಗಳಿಗೂ ಅವೈ ತತಿಪಾದಕವಾದ ಭಾಗ್ಯಮ ರಚಿಸಿ, ಶಿಷ್ಯರಿಗೆ ಪ್ರ ಮಾಡಿಸಿ, ದುರ್ಮತಗಳಂ :ಡಿಸಿ, ಜೀವತಾಳಗಳಂ ಪ್ರತಿ, ವಾಣಿ೬ರುಗರ್ದುಗೆ ಶಾಪ ವಿಮೋಚನೆಯಂಮು, ಗರಗ, ಏ. ರ್ಸನಾಮನಾಚಾರ್ಯನಿಸಿ ಸಿಕೊಡು, ಶಿಷ್ಟರನ್ನು ಧ್ವನಿಸಿ, ಶಾಂತರ್ತಿಯಂತಪರ, ಆಣಿಗೆ ಸರನಾಗಿ ನನ್ನೊಳಗೈಕ್ಯವಾಗೆಂದು ಹೇಳಿ ಅಂತರ್ಧಾನವನ್ನು ಹೊಂದಿದನು.
ಆಚಾರ್ಯರು ಅಲ್ಲಿಂದ ಬರುತಾಶ್ರಮಕ್ಕೆ ಹೋಗಿ, ಅಣ್ಣ ವ್ಯಾರು ಕಾಣದೇ ಹೋಲು, ಸಂನನ್ನು ಅಲ್ಲಿಯೆ ಒಟ್ಟು ನಾರಾಯಣಾಶ್ರಮಕ್ಕೆ ಹೋಗಿ ಅವರ ಅತಿವೃತಂ ಕೈಕೊಂಡು 44 ಒಣು ಮಣಿಕರ್ಣಿಕಾಭದಲ್ಲಿ, ಶಿಷ್ಯನಿಗೆ ಭಾಷ್ಯಪ್ರವಚನಮೂಡಿಸುತ್ತಿರುವ ಸಮಯದಲ್ಲಿ ವ್ಯಾಸ ಕಾಣುವಿ” ಎಂಬ ಅವರ ಮಾತಿನಂತ, ಹಿಂಗಿ, ಭಾಷ್ಯವ ರಜ- ತಿಗೆ ಉಪದೇಶಿಸುತ್ತಿದ್ದರು.
ಅಪ್ಪ ಇವ ಶಿಷ್ಟರು, ಸದ್ಯನಾಭಾವಶಾಲಿಯಾದ, ಸದರನ್ನು ಅಂತ ರಂಗದಲ್ಲಿ ದ್ವೇಷಿಸುತ್ತಿದ್ದರು.
ನವನಾಚಾರ್ಯನು, ಒಂದುದಿನ ಗಂಗಾನುಸು ಆತುರ, ಜೀವ ತಾರ್ಡಸೆಗೆ ತು2, ಬಿ, ಇಷ್ಟಗಳು, ಕುತ್ತಿರಲು, ಆಚಾರ್ಯರು ಆವ
ನ್ನು ಆಗಲೇ ಬರಹೇಳಿ ಇhರರು.
ಅದನ್ನು ಕೇಳಿದಕೂಡಲೇ ಗುರುಭಕ್ತಿಯುಳ್ಳ ಶಿಷ್ಯನು, ನದಿಯ ಪ್ರವಾಹದ ಮೇಲೆಯೇ ನಡೆಯಲಾರಂಭಿಸಿದನು. ಗಂಗೆಯು, ಇವನ ಗುರುಭಕ್ತಿಯನ್ನು ಕಂಡು ಅವನ ಪ್ರತಿಒಂದು ಹೆಜ್ಜೆಗೂ, ಒಂದು ಕಮಲವನ್ನು, ಒತ್ತುತ್ತಾ ಬಂದಳು,
ಸನಂದನರು ಜೀಗ ಬಂದು ಗುರುಗಳಿಗೆ ನಮಸ್ಕರಿಸಿ ನಿಲ್ಲಲು, ಶಂಕರಾಚಾ ರ್ಯರು ಬಹಳ ಸಂತೋಷದಿಂದ ಅವರನ್ನು ಕುಕ್ಷಿಸಿ ಪದ್ಧಪಾಣಿರು ಹೆಪಟ್ಟರು,
ರಕಥಾನಕ
೨೧
.
ಇತರ ಶಿಷ್ಯರು, ಅದನ್ನು ನೋಡಿ ಭಯೂಶ್ಚರ್ಯಯುಕ್ತರಾಗಿ, ಅವರಲ್ಲಿದ್ದ ದ್ವೇಷವನ್ನು ಬಿಟ್ಟುಬಿಟ್ಟರು.
- ಆನಂತರ ಒಂದುದಿನ ಆಚಾರೈರು ಶಿಷ್ಯರಿಗೆ ಭಾಷ್ಯಪ್ರವಚನಮಾಡಿಸುತ್ತಿದ್ದಾಗ ಸರ್ಗಗಳಾದ ಇವರು ಪಾಶುಪತರು ಆಚಾರರ ಭಾಷ್ಯವಂ ವಿಡಿಬೇಕೆಂಬ ಮನಸ್ಸಿನಿಂದ ಒಂದು 4 ಕಾರ, ಕಾವ, ಜೋಗ, ವಿಧಿ, ದುಃಖಾಂತಗಳೆಂಬ ಐದು ಪಾರ್ತಗಳು ಜನರ ಮೇಕ್ಷಾರ್ಧವಾಗಿ ಕರ (ಪುಟ) ನಿಂದ ಆಶಿಸ ಟಿವೆ; ಆತ್ರಗಳಲ್ಲಿ ಮಹತ್ಕಾಲಗತಿ ಕಾವ: ಪ್ರಧಾನವೇ ಕಾರಣವ: ಸಮಾಧಿಯ ಯೋಗವು: ಸವಣನಾರಿಗತೀ ಭಯ; ತಕ್ಷವೇ ದುತಿಖಾಂತವಾಗಿರು ಇವೆ; ಅವುಗಳು ಪ್ರಸಂಗ ಪ್ರಧಾನ ಪಾಪಾನಕಾರಣವ; ಜಾತಿಯದ ಈರಣೆ ನಿಮಿತ್ತಕಾರಣವ; 1 ಸs:-ಸಪ್ರಾವತ'ಇತ್ಯಾದಿ ಪ್ರಾಣಾ 0%ಷ್ಟಿಯನ್ನು ತಿಳಿಸುವ ಶಾಶ್ವತವಾದ ಪ್ರತಿಗಳಿಂದ ಭಕರ್ತನಾದ ಕುಶಾಲ ನಂತ ಆಳರ್ತನಾಳ ಸ ರಕು ಕಾವೈರಸ್ತಾಟಗಳ ನಿಮಿತ್ತ ಕಾರಣನಾಗಿ ದಾನೆ; ಮತ್ತು ಸಾವಯವ 11, 18:ವಾಗಿಯೂ, ಆತುರವಾಗಿಯೂ, ನಾನಾವಿಕವಾಗಿಯೂ, ಇರುವೆ ನಾ ಪ್ರಕಾರವಾದ ಘಟನಕಾದಿಗಳಂತೆ ಇತ್ತು. ಹಾನಗಲ್ಲ :ನಗಳವ; ಒಗತ್ತಿಗೆ ಬ್ರಹ್ಮನೇ ಆಸಾತವಾದರೆ ಗ್ರಜೆ.ಹಳ್ಳಿ ಬ್ರಹ್ಮಷಿತ: ಭಾಗವಾಗುವ ಪ್ರಸಂಡದ ದೋಷ ಗಳಿಂದ ಬ್ರಹ್ಮವದುಗ್ಧನೆಂದು ಒಡಂಬಡಬೇಕಾದೀತು; ಆದ್ದರಿಂದ ಅತಿಗಳಿಗಭಿಮತ ವಾದ ಬ್ರಸ್ಕೋಪವನಸತ್ವವಏದಲ್ಲವ”ಎಂದು ಇವೇ ಮೊದಲಾಗಿ ಹೇಳು
ಸನಂದನ ಕಳ್ಳರ ಆತ್ಮಳಯ ಸದು + ಪ್ರಮಂಚಕ್ಕೆ ಬ್ರಹ್ಮವು ಅಭಿ (ನಿಮಿತ್ತೂಪಾದಾನಂದ ಭಾಗ್ಯಾಶ್ರುತಿಗಳಲ್ಲಿ ಸ್ಪಷ್ಟವಾಗಿರುವ ಪ್ರತಿಭಾ ದೃಷ್ಟಾಂತಗಳಿಗೆ ಉ ಧವಿಲ್ಲ ಎಂದು ಬ್ರಹ್ಮಸೂತ್ರನೇ ನಿರ್ಣಯಿಸುತ್ತದೆ. ( ಉತ ತನಮಪ್ರಾ' ಇತ್ಯಾದಿಗ್ರತಿವಾತ್ಮಗಳು ಬ್ರಹ್ಮವೇ ಜಗತ್ತಿಗೆ ಉಪಾದಾನ ವಾಗಿದ್ದರೆ ಉಬೋಧಿಸಲ್ಪಟ್ಟವು; ಭಿತ್ರನಿಮಿತ್ತೋನಾಪಾನಸತ್ವವನ್ನು ಹೇಳುವುದಾದರೆ ತಮ್ಮಂತವಿಜ್ಞಾನದಿಂದ ಸರ್ವಮ್ಮಣ್ಣಯವಿಜ್ಞಾನವನ್ನು ದೃಷ್ಟಾಂತವಾಗಿ ತೀ ಸುವ ಛಾಂದೋಗ್ಯವಸನವು ಉಪಯೋಗಿಸಲ್ಪಟ್ಟಿತು; ಜಗದುತ್ಪತ್ತಿಗಿಂತ, ಪೂರ್ವ ದಲ್ಲಿ - ಏಕಮೇವಾದ್ವಿತೀಯಂ ಬ್ರಹ್ಮ' ಎಂಬ ಅವಧಾರಣದಿಂದಲೂ ಬೇರೆ ಅಧಿ ಜ್ಞಾತವಿಲ್ಲದ್ದರಿಂದ, ಬ್ರಹ್ಮವೇ ನಿಮಿತ್ತವರು ಹೇಳಹ.ದು; 4 ಸೋತಾಮಯತ ಬಹು ಸಾಂಪ್ರದಾಯದತಿ, ಇತ್ಯಾದಿ ಕೃತಿಗಳಿಂದ ಪ್ರಪಂಚಕ್ಕೆ ಪರಮಾತ್ಮನೇ
ಕದಂಬಯಸಂಗ್ರಹ
ನಾಗಿಯೂ ಪ್ರಕೃತಿಯಾಗಿಯೂ ಇರುವುದು ನಿಶ್ಚಿತವಾಗಿದೆ; ಉಪಾದಾನೋಪಾ ಲೇಯಗಳಿಗೆ ಸಾದೃಶ್ಯವು ಅನಪೇಕ್ಷಿತವಾಗಿರುತ್ತದೆ; ಆಚೇತನವಾದ ಗೋಮಯದಿಂದ ವೃಶ್ಚಿಕವೂ, ಚೇತನನೆಂದು ಪ್ರಸಿದ್ಧನಾದ ವರುಷನಿಂದ ಈಶನಲಾದಿಗಳೂ ಉವಾದ ಹಾಗೆ ಸಚ್ಚಿದಾನಂದಸ್ವರೂಪನಾದ ಬ್ರಹ್ಮದಿಂದ ದುಃಖಾನ್ಯತಬಹುಳವಾದೀಜಡ ಪ್ರಸಂ ಹವು ಆಯಾಗುವುದೆಂಬುದರಲ್ಲಿ ಕಾರಕಾರಣವೈಲಕ್ಷಣ್ಯವು ಬಾಧಕವಲ್ಲ; ಕಾರಣವಾದ ಮಣ್ಣಿನೊಂದಿಗೆ ಅವಿಭಾಗವಾಗುವಷ್ಟಸಘಾದಿಗಳು ಸ್ಕೂಪಾರಾನ ವಾರ ಮಟ್ಟಿಗೆ ದೂಷಕವಲ್ಲವೇ ಅನನ್ಯಗಳಾಗಿರುವಂತೆ ಪ್ರಳಯದಲ್ಲಿ ಪ್ರಪಂಚವು ಬ್ರಹ್ಮಾನಸ್ಯವೆಂಬುದಕ್ಕೆ : ಆತ್ಮವೇ, ಬ್ರಶ್ನಿವೇದ, ಯಥಾಮರೀಚ್ಯುರಳೇನ, ಇತ್ಯಾದಿ ಶ್ರುತಿಗಳು ಪ್ರಮಾಣಗಳಾಗಿವೆ; ಅನುಭವದಲ್ಲಿಯೂ, ಸುತಪ್ರತಳಿ ಕೈಯೊಳಗೆ ವಿಶ್ವಪ್ರಸಂಗವು ಪ್ರಾಕ್ಸಲ್ಲಿ ಅವ್ಯವಾಗಿತ್ತೆಂದು ತಿಳಿಯಬರುತ್ತೆ' ಎಂದೀಪ್ರಕಾರವಾಗಿ ಅವನ್ನು ಪ್ರತ್ಯುತಪ್ರಣಗಳಿಂದೊಡಂಬಡಿಸಿ, ಆದ್ರೆ ತಸ್ಟಾ ಪನೆಯಂ ಗೈದು ವಾರಕ್ಕೆ ಬಂದ ಭೇದವಾದಿಗಳನ್ನೂ ಬೌದ್ಧಾದಿಗಳನ್ನೂ ಆಡಾಕ್ಟರು ಸೋಲಿಸಿದರು.
ಹೀಗೆ ವೇದಾಂತವೆಂಬ ನಾಡಿನಲ್ಲಿ ಕೃತಪ್ರಚಾರಕರಾದ ಶಂಕರರು ಸದ್ಯುಕ್ಕಿಗ ಕೆಂಬ ತೀಕ್ಷ್ಯಗಳಾರ ನದಿಗಳಿಂದ ಕೂಡಿದವರಾಗಿ ವಾದಿಗಳೆಂಬ ಆನೆಗಳ ಎದುರಿಗೆ kತ್ಮದಂತೆ ಪ್ರಕಾಶಿಸಿದರು,
ಯಯಂಬ ಮುದ್ರದಲ್ಲಿ ಹುಟ್ಟಿದ ಭಾಷ್ಯವೆಂಬ ಚಂದ್ರನು ವಿಬುಧ (ದೇವ ತೆಗಳು ಮತ್ತು ವಿದ್ಯಾಸರುಗಳು) ಗೆ ಅಮೃತ (ಆವ್ಯತ ಮತ್ತು ಮೋಕ್ಷ ವನ್ನು ಕಟ್ಟು ವಾಗೃಕ್ಷಣಗಳೆಂಬ ಕಿರಣಗಳಿಂದ ಕುವತಗಳೆಂಬ ಅಂಧಕಾರಗಳನ್ನು ಕೊಳ ಗಿಸಿ ಬ್ರಾಹ್ಮಣರ ಮನಸ್ಸೆಂಬ ಹಾರಗಳನ್ನು ಸಂತೋಷದಿಸಿರನು; ಮತ್ತು, ಷ್ಟು ವಿನ ಪಾರದಿಂದ ಗಂಗೆಯು ಅವತುಸಿದಳು; ಶಂಕರನ ಮುಖರಿಂದ ಭಾಷ್ಯವೆಂಬ ಸೂಕ್ತಿಯು ಹೊರಟಿತು; ಗಂಗೆಯು ತನ್ನಲ್ಲಿ ಮುಳಿಗಿದವರನ್ನು ವರಿಸುತ್ತದೆ; ಶಂಕರಭ ವ್ಯವು ಸಂಸಾರಸಾಗರದಲ್ಲಿ ಮುಳಿಗಿಹೋಗಿದ್ದವನ್ನೂ ಉದ್ಧರಿಸುತ್ತದೆ.
ಹೀಗೆ ಮಹಾಮಹಿಮೆಯುಳ್ಳ ಶಕರಭಾಷ್ಯಾಮೃತವು ವರ್ಗದಮೇಲೆ Aಚಿಕ್ಕಟ್ಟು ಅವರನ್ನು ಜ್ಞಾನಮಾರ್ಗಗಾಮಿಗಳನ್ನಾಗಿ ಮಾಡುತ್ತಾ ಮೋಕ್ಷ ಯಕವಾಗಿ ಪ್ರಕಾಶಿಸುತ್ತಿದ್ದಿತು.
-----------------------------
3
ಪ ಹ್ನ ನ#ಪ್ತವುವಲ್ಲ್ರೀ, ೫ ತೆ 4 ವ್ಯಾನೀ ವೃದ್ಧ ಮಹೀಸುರಾಕೃತಿಯುತೇ ಗ ಭಾವ್ಕಾದಿ ವೀಕ್ಸ್ನ ಸ್ನಳ ಲ ಕ್ಲನ್ 9 ಪ್ರಾಪ್ತೀಂತಧಿಮಥ ಫ್ರಯಾಗಮುಪಲಭ್ಯಾರ್ಯೋ ತುಪಾಗ್ನೌ ಸ್ಫಿ ತಂ| ಟಾ ರಂ ಹೈ ಔ ‰ ಋಯಪವದಿಕ್ಕಿ . ತತ್ರ ಜ ತಶತಶ್ಕಿ ಮಂಡನಂತಾರದಾಂ ಒ ` ೬೫ ಶ ² ಈ ಮಾಹಿಷ್ಟ್ತ್ಯಧಿಥ€ ನಗರೇ ಪ್ರಾಯಾಗ್ಪಿಶಂ ದಕ್ಷಿ ಣಾಮ್|| | ೩೦ \ ದಾನೊಂದುದಿನ ಆಚಾಕ್ಬರು, . ಗಂಗಾತೀರದೆಲ್ಲಿ ಶಿಷ್ಕರಿಗೆ ಭಾಷಳಿ - ² . ಈಗ್ಮೆ 15 =ಗೊಥ್ತ್ ಅಕೆ = ೪ ಹೈ ಅ \ ಗ್ರಿ ಕ್ರಾಟ್ ಸಿ ಆಳ ಸನ್ಯಾಸ. ಎಮ್ ಎ \ % ಹೀಗ ಇಯಳ್ ಔ | «® ಪ್ರವಚನವೊಷಿಸುತ್ತಿದ್ದಾಗ ಮಥಧ್ಯಾಪ್ನೆ ವಾಗಲು, ಆಯಾಸ ಗೊಂಡು, ಕ ಸ್ಟಾನಳ್ವ ಏಳುತ್ತಿರುವಾಗ ಓರ್ವ ವೃದ್ಧಬ್ರಾಪ್ಶಣನು ಬಂದು ಆಚಾಕ್ಪುರನ್ನು ಕುರಿತು : ನೀನ ಯಾರು ? ಇವೆಗೆ ಏನು ಖೇಳುತ್ತಿಖೆ, ? ` ಎನ್ಷ್ಮಲು ಪದ್ಧವಾದಾದಿಗಳು : ಇವರು ನವ್ಮು ಗುರುಗಳು; ವೇದಾಂಶಭಾಷ್ಟಕಾತರು; ಬ್ರಹ್ಮ ಸೂತ್ರಭ. ಪೃವನ್ನು ನಮಗೆ ಬೋಧಿಸುತ್ತಿದ್ದಾರೆ ` ಎಂದರು. ಆರನ್ನು ಜ್ರೇಳೆ ಆ ವೃದ್ದಬ್ರಾಹ್ಮಣನು ಯಾವ್ರವಾರಕೂ ಒಂದು ಸಎತ್ರಕ್ಳೈ ಆಗ ವೃರ್ಬಬ್ರಾಹ್ಮಣನು , ತರೆಂತರ ಫ್ರತಿಪತ್ತೌರಂಪತಿಸಂಮಿತೃಳ್ತ1 ಪ್ರಶ್ನಷನಿ ರೂಪಣಾಲ್ಯಾಮ್ ` ಎಂಬ ಸೂತ್ರವನ್ನು ಕ್ಷೇಳೆ, . ಶಂಕರರು ಹೀಳಿದ ಅಥದಮೇಲೆ ಕ ವಿಕಲ್ಪಗಳನ್ನು ತೋರಿಸಿದರು. ಶಂಕರರು ಅವುಗಳನ್ನೆಲ್ಲಾ ಏಂಡಿಸಲು ಇಬೃರಗೂ ವಾದವು ಆರಂಭವಾಯಿತು. ಸಮೂಪದಲ್ಲಿ ದ್ದ ಪೆದ್ಧ ವಾದನು ಅವರಿಬ್ಬರನ್ನೂ ಅವರನ್ನು ಹರಿಹರಸ್ನರೂಪನೆಂದು ತಿಳಿದು (ಶಂಕರಃ ಶಂಕರ? ಸಾಕ್ಕಾ ತ್ ವ್ಯಾಸೋನಾರಾಯಣೋ | ತಯೋರ್ವಿವಾದೆ ಸುಪ್ರಾಪ್ಶೆಕಿಂಕರಃ ಪಂ) ‹ ಶಂಕರಾವತಾರಗೆ ಜ್ರಾದ ನಾರಾಯಣಾವತಾರಿಗಳಾದೆ ವ್ಯಾಸನಿಗೊ ವಿವಾದಪ್ರಾರಂ ಧವಾದರೆ ಕಂಕರನಾರ ನಾನು ಏನುಮಾಡಲು ಶಕ್ಷನು ? “` ಏನ್ಮಲು ಶಂಕರರು ತಕ್ಷಣ ನೆ ಆಶೆ - ಗ ಭಿವಂ ವ್ಯಾಸರು ತಮ್ಮ ನೃಜರೂಪವನ್ನು ತೋರಿಸಿದರು. ಖ್. ತಿನಿಲ್ಲು ವ ಕಲ್ ದಲ್ಲಿ ವ್ಯಾಸರಿಗ
-ಶಿಲ್ ಕಾದಂಬರೀಸಂಗ್ರಹ ಆಗ ಆಚಾಕ್ಬರನ್ನು ಕುರಿತು ,, ಯೆತಿಯೇ ! ನೀನು ನನೆಗೆ ಸಮಾನನು; ನೀಗು ನೆನ್ಟ ; . ತಾತ್ಸರೆ. ಜೆ ನು ನೆಸ್ಟ್. ತಾತ್ಪರ್ಯ ವನ್ನೇ ಜೆನ್ಬಾಗಿ . ಪ್ರಕಾಶಗೊಳಿಸಿದ್ದರಿಂದ್ ನನಗೆ | ಇಕ್ ವರನ್ನು ಪರಿಶುದ್ದ ಗೊಳಿಸುತ್ತದೆ; ನಿನ್ನ ಭಾಷ್ಠವ್ರ ತಗ್ಪ್ನನು $ ಸುತ್ತದಿ ² ಎಂದು ಸೆಂತಸದಿಂದುತ್ತೆರವಿತ್ತರು. ಅನಂತಂ ಶಂಕರರು: ಗುಯಗಳೇ! ನನಗೆ ಇದು ಜನ್ಮೆಹೋಡಶವಾದೆ ರಿಂದ ಮೆಣಿ ಕರ್ಣಿಕಾಘಟ್ಟದಲ್ಲಿ ತರ್ಕು ಜರಣೆಳ ಸಮಾನಡನ್ಲಿ ದೇಖೋಪಾಧಿಯನ್ನು ಕರೆಯಲು ಯತ್ನಿಸಿರುವೆನು “ .ನ್ನಲು ವ್ಯಾಸರು ಲ್ರಿಪೈನನ್ನು ಧ್ರಾಸಿಸಿ ಸ್ರೆತಕ್ಷನಾದ ವನನ್ನು ‹ ಶಂಕೆರಯೆತಿಯು ಮಾಡಬೇಕಾದ ಳೆಲಸೆಗೆಳು ಒಪೆಳವಾಗಿವೆಯಾಗಿ ಮತ್ತ ಸಳ ಸ್ ಜ್ 7 ಈ857 = 7೫೯೯೧೬ ೧೬೫೧೫ ೫೩, 15 = ೫೧೫ ಈ ನಾ೫× ೫೫೧ 5757 555೧೯ ಈ 5 ೧000 == 0 ಶ್ಲೈಟೆ ಇ 1554 $ ಹ 19 ಮು ೩ ಆಯುಸ್ಸನ್ನು ಕೊಡಬೇಕು `` ಎಂದು ಲ್ರಿಪೈನು ಇನ್ನೂ ದೆದನಾರುವರುಷ ಆಯುಸ್ಸ್ಬನ್ನು ಳೋಟ್ಬಿ, ಅವೆರ ಭಾಸ್ಸವಂಳೇ? ಸೆಂತುಪ್ಟನಾಗಿ ಅನಂತರ . ತಮ್ಹೆ ಧ್ಯುಪಾದಲಿಂದ . ವಾರ್ತಿಕವೆನ್ನು ರುದ್ಬವಪುರಳ್ಕೆ ಪ್ರೆಯಾಣಮೌಡಿ ಅನರು ತುಸಾಗ್ನಿ ಪ್ರವೇಶಮಾಡಿ ರುವರೆಂದು ತಿಳಿದು ಅಲ್ಲಿಗೆ ಬೇಗ ಹೋಗಿ ಅನರನ ಈಸಿ ವಿಕೆಮೊಢಿ= ರಿ ? ಎ9ರರು. ಆದಕ, ಛಟ ಪಾದರು :. ! ನಾನು ಸೌಗತಮೆತವೆಂ9 ತಿಳಿಯಲಿ ಸಿ ಅವರ ಗುರುಗಳ ಬಳಿಗೆ ಹೋಗಿ ಅವರ ಸಿದ್ದಾಂತವನ್ನು ವೇದದೂಷ ಣಪ್ರಸ್ತಾಪ್ಪ ಬಂವಾಗ್. ನನ್ನ ಳಣ್ಳನಲ್ಲಿ ನೀರು ಬಂದಿತು; ಆಗ ಅವರು . ನನ್ಷ್ರನು ಬ್ರಾಹ್ಮೆಣನೆಂದು ತಿಳಿದು ಉಪ್ಪಲಗಿಯ ಮೇಗಣಂದೆ ತಳಳಿವಿಟ್ಟರು; ನಾನು ಅಲ್ಲಿಂದ | ಳಿ ಅವುಗಳ ಪರಭಾವದಿಂದಳೇ ನಾನು ಆಪಾಯರಹಿತನಾದೆನು , ಪ್ರಮಾಣವಾಗಿದ್ದರೆ` ಒ೦ದು ಸೆಂಗೇಪವನ್ನಾ ಡಿದ್ದರಿಂದ ನನ್ನ ಓಂದು ಕಣ್ಣು ಶ)ರು ಡಾಯಿತು. ಅಲ್ಲಿಂದ ಮೊದಲ್ ನಾನು ನಾನ್ತಿಕುಗೆ ವಿರೋಧಿಯಾಗಿ ರಾಜನ ಮೊಲಕ ಲೌದ್ಧಕುಲವನ್ನೇ ಆ ನಾಶಮಾತಿಬಿಟ್ಟೈನು, ನಾಸ್ತಿಕರನ್ನು ತಳ್ಕೆ ಯುಕ್ತಿಗಳಿಂದ ಮಿಂಡಿಸಿ, ಬೈಮಿನಿಯ ನ್ಯಾಯಗಳಿಂದ ತರ್ಕಯುತ್ತಿಗಳನ್ನು ಖಂಡ ಈ . ಏರಡ್ಪು ಪಾಪಗಳ ನಿವೈಶ್ತೈಯರ್ಥವಾಗಿ ಈ ವ್ರತವನ್ನು ಕೈಕೊಂಡಿದ್ದೇನೆ. ತಮ್ಸ್ರ ದರ್ಶನದಿಂದ ನಾನು ನನಗೆ ತಾರಕೋ
೨೬ ಪೆವೇಶವನ್ನು.. ಮಾಡಬೇಳಂದ ಹೇಳೆ ಆಚಾರೈರು ಬಂದ ಕಾರಣವನ್ನು . ತಿಳಿದು ಕೊಂಡು ., ತಮ್ಸ್ರ ವಾರ್ತಿಕಮಾಡುವಬಗ್ಯೆ ನನ್ನೈ ಶಿಸ್ಕನೊ, ಕರ್ಮವಾ ದಿಯೂ, ಆದ ಮಂಡನಮಿಶ್ರನು ಆರಸ್ಸಿವರ್ತೆದಲ್ಲಿ ದ್ಯಾನ; ನೀವು ಆತನನ್ನು ವಾದ ರಲ್ಲಿ ಸೋಲಿನ ನಿಮ್ಮಿತ್ರವನ್ನು ನೆ3ನೆರಿಸಿಕೊಳ್ಳಬಸುದು “ ಎಂದು ಆಚಾಕ್ಕರಿಗೆ ಹೇಳಲು, ಆಚಾಕೃರು ಭಟ್ಟವಾಡರನ್ನು ಆ ನ್ರತವನ್ನು ವಿಡುವಂತೆ ಬಹಳವಾಗಿ ಹೇಳಿ ದರೂ ಅದು ನಿಷ್ಪ ,ಯೋಜಒನವದಾಗಲು, ಅವರ ಇಷ್ಟದಂತೆ ತಾರಳೋಪದೀಶವಂಗೈದು ಸಕಿಷ್ಕ್ರರಾಗಿ ಮಾಹಿಷ್ಕೃತೀನಗರದ ಕಡೆ ತೆರಳಿದರು. ನಗರವಂ ತಳನಿದನಂತರ ಆಚಾರ್ಯರು ಮಂಡನಲಂಡಿತನ ಮನೆಯ ಸವೂ ಪಕ್ಕ ಹೋದರು. ಆ ದಿನ ಮಂಡನವಂಷಿತನ ತಂಧದಿಯ ಶ್ರಾದ್ಧ ವಾದೃರಿಂದ, ಮಂಡನಪಂಡಿತನು ಮೆನಬಾಗಿಲುಗಳನ್ನು ವ್ಲಾಸರನ್ನ್ನ ಎಕೃಷಸ್ಟಾನರಲ್ಲಿ ಯೊ, ಓ 0 ಕ್ಯ #5 ಸಂತೌ, ಒಳ ಒಣ 65 ದಕಾರಣ) ಲಕ್ಷಿ ನಾರಾಯಣಮೂರ್ತಿ ಸಾಲಿಗ್ರಾಮುವನ್ನು ವಿಷ್ಣುಸಾನದಲ್ಲಿ ಯೂ ಇಟ್ಟು ಅರ್ಚಿಸುತ್ತಿದ್ದನು. ಆಗೆ ಶಂಕರರ ಯೋಗೆಶಳ್ಯಂಗರ ಪಂಡಿತನ ಮನೆಯ ಒಳಳ್ಳೆ ಹೋಗಿ ಇದು ಅವೆರ ಸಮಾಪಕ್ಕೆ ತೋರು. ಆಗ“ ರುಂಡನನಂಡಿತನಿ ಆಚಾರ್ಳರಿಗೂ ಈಲ್ಲತಿ ಪ್ರಶ್ನೋತ್ತರಗಳು ನಡೆದನು : ಮಟ @ ಬ ² ² ಎಇ ² ಟ. ಪ್ 7 ² © $ ® ಸ ರ ಟ ಯ © ² ² ² ಈ ², @ಸ್ಫಿ ಆ . ಇ ಈ . ~~~~~೯ 5 (5 ೪, ಇ ೧ ೨ ಆಲ್ ಈ ಓಲೆ ಆಆ ` ಓಳ ಜೀ { ಳ ೨ ಐ 5. ೫ ಆಲ್ಡಸ್ “ ಆ ಅ ಟೆ 5 6 ಇಗ ೫ ವ ಮುಂಡೀ`` ಒನ್ಟ್ನ ಲು ತಂ. . .ಯ.: -:: ಮುಂಡೀ`` ಎಂಬ ‹ ನೀಳ `? ಮಾಡಿ, :,, (ಕತ್ತಿನಿಂದಮೇಲೆ ಬೋಳ) ಎಂದರು. ಮಂ. ಪೆ6:-- ‹ ಹತಃ ಎಂಬ ಶಬ್ದದಿಂದ ದಾಲಯನ್ನು ಕೇಳದ್ರೇನೆಂದು ಹೇಳ « ಪೆಂಥಾಸ್ತೇಪ್ಠ ನನ್ನ ಡೆ ತೇಮಯಾ “ (% ನಿನ್ ದಾರಿಯು ಟನ. ದ ನ್ನಿಂದ ಕೇಳಲ್ಪಡುತ್ತದೆ) ಬಂಣೆನು. ಶಂ. ಯ. : --“ ನಿನ್ಷ್ನ್ನು ಕೇಳು ವ್ರದಿಲ್ಲ; ನಿನ್ನ ದಾರಿಯನ್ನು ಕೇಳುತ್ತೇನೆ“ ಎಂದರ್ಥಮಾಡಿಕೊಂಡು « (ದಾರಿಯು ನನುಹೇಳಿತು) ಏಂದರು. ಬಂದಿತ್ತು ಅಂದರೆ : ಮುಂಡೆಮಗನೇ? ಅಂದಿಕು, ಎಂಗುತ್ತರನಿತ್ತನು. ೪
5೬ ಕಾದಂಬಸೀನಂಗ್ರಹೆ ಶಂ. ಯ,:~_-‹ ಆ : ಉತ್ತರವು ಪೃಚ್ಛಕನಾದ ನಿನಗೆ ಸೇರುವುದೇಹೊರತು ನನಗಲ್ಲ್ವು “ ಟಳಿದು ಹೇಳಿ : ಹಾಗನ್ನಿ ಸಿಳೊ3ಣಯಾ “` ಬಳ ಮಂ, ವಂ:-(ಳೋಪದಿಂದ) .: ಸುರಾನೀತಾವಾ`` (ಹೆಂಡವು ದೆಯೋ?) ಎನ್ನ್ನ ಲು - `? . « ಹೆಂಡ ಸೀತ ಶಬ್ಳೆ « ಹೆಳದಿ ` ಎಂದರ್ಥ ಶಂ, ಯ,. ೪ಳಳ £ › “ಈ ವುಹಡ್ರಗಿಲ್ಲ `` ; ಅದರೆ « ಶ್ವೀತಾ “` (ಬಳುವು) ಮಂ. ಪಂ.:-(ಮತ್ತತತ 1 ಕೋಪದಿಂದ) ‹ ತಿಂತ್ಸಂಜಾನಾಸಿತದ್ಯಕ್ಕಮ್! ೨1 (ಸನ್ಯಾಸಿಗೆ ಅದರ ಬಣ್ಣವ್ರ ಹೀಗೆ ತಿಳಿಯಿತತು ? “` ಶಂ.ಯ.: -,, ಅಹಂವರ್ಣಂಛನಾನ್ರಸವು ` (ಸನ್ಮಾಸಿಗೆ ಬಣ್ಣ ತಿಳಿಯು ವುದು; ಗೃಹಸ್ತ್ರನಿಗೆ ರುಚಿ ತಿಳಿಯುವುದು.) ಮಂ. . ಪಂ. ಯೆತಿಯೇ ! ಹೊರಲಸಾಧ್ಯವಾರ ಕಂತೆಯನ್ನು ಹೊದಿರುವ ನಿನಗ ಮಟ್ಸ ಬನಿವಾರಗಳಂದೆ ಭಾರವಾಯಶೀ? ೮6. ಯ,: ಮೂಢವುತಿಯೇ! ಆದು ನನಗೆ ಭಾರವಲ್ಲ; ವೇರಳ್ಕೆ ಭಾರವು; ಮಂ. ಪೆ.:-=« ಕಳಂಬಾಸೀ ವಿಪನೀತಾನಿ ಭಾಷಸೀ ² (ಮಾಸಳಕ್ತಳನ ಈ ಕನೂ, . ಮತ್ತು ಮತ್ತನೊ, ಆಗಿರು # ಈ ವ ವೃತ್ಯಾಸಗಳಾದ ಮಾತೆ ತುಗಳನ್ನಾ ಡುತ್ತೀಯಿ 171 ಬನ್ಸ್ಮ ಲು ಈ ಮಣಿ ಬ ೬ ಯಹಶೆ ೪ ವತಿ ಲ ಎ -ಘ 4 . $9 ; ಎಜಿ ® ‡ ಮಾಸಿ - ಕ್ರೇಳಲಿ ಸ ಆಲೆ ಆಡಿ ೪ . 89 . ` - {{ ಒಂಳಿ ೪-೪ ಲಿ ೨ 5 ಇ‰ಳಇಸಇಳ್ವ $6 ಇಲ್ಫ್ನ © ಟಣ ನ ಬಂದರ್ಧಮಾಡಿ ,ಸೆತ್ಸಂ ನಿತೃವತ್ತ ,ತೆಖ್ತೀಚಾತಃ ಕಳಂಜಧುಕ್ “ (ನೀನು ಹೇಳಿದ್ದು ನ್ಯಾಯವೇ; ಕೀನು ಮಾಂಸಭಕ್ತ್ಗಳನಾದಕಾರಣ ನಿನ್ನ ಮಗನೂ ಮಾಂಸಭ ಕ್ ಕನಿ) ಬಂದರು ಮಂ. ಪಂ.:-_. ಪಾಣಗೃಹೀತಿಂ ಸ್ವಾಂ ಅಶಕ್ತಾ ಪುರಕ್ಸ್ನಣೇ ವ್ಯಾಖ್ಯಾ ತಾ ಬ್ರಷ್ಮನಿಪೃತಾ “ (ಮರುವೆಯಾದರಿ ಹೆಂಡ ತಿಯನ್ನು ಅನ್ನೆ ವನ್ತಗಳಿಂದ ರಕ್ಷೆ ಸಬೀಕಾ?\ ಬರುಶ್ತದಿ ಎಂದು ತಿಳೆದು, ಶಿಷ್ಕರನನ್ನಿ ವುಸ್ತುಕಗಳನ್ನೂ . ಸಂಗ್ರರಹಿಸಲಿಜ್ಜೆಯುಳ್ ನನ್ನಿಂದ ವ್ರಿಹ್ಮ ಜ್ಞಾನತತ್ತ್ವವು ತೋರಿಸಲ್ಪರ ಡುತ್ತ್ಷಣ) ಎನ್ನ ಲ್ ಶಂ. ಗುರುಹುಹಳ್ರಿಷಣಾಲಸ್ಯಾತ್.ಸಮಾವೃತ್ಕ ಗುರೋ!ಕುಲಾತ್ ಸ್ರಿಯಶ್ಕು ಶ್ರೂಷಮಾಣಸ್ಕ ದ್ಯಾಖ್ಯಾತಾ ` (ಗುರುಸೇವೆಮಾಡುವುದ
9ಕರಳಕಸಾನಾಕ _ [_| ರಲ್ಲಿ ಸೋಮಾರಿಯಾಗಿ ಸಮಾವರ್ಶನೆ ಎಂಬ ನೆವದಿಂದ, ಹೆಂಗಸರನ್ನು ಸೇವಿಸಲೋ ಸುಗ ನಿನ್ನಿಂದ ಕರ್ಮಕಶತ್ಕವು ಶೋರಿಸಲ್ಪಡುತ್ತದೆ) ಎಂದರು. ಮಂ. ಪಂ. - ಸ್ಫಿತೋಸಿ ಯೋಷಿತಾಂ ಗಕ್ಸೆ ತಾಭಿರೇವ ವಿವರ್ಧಿತ! | ಶಘ್ಯ ತಾ ಕಥಂ ತಾವಿವ ನಿಂಗಸೌ“ (ಹೆಂಗೆಸರ ಗರ್ಧದಲ್ಲಿ ಈ {. ಅವರಿಂದಲೀ ವರ್ಧಿಸಲ್ಪಟ್ಟ ವನಾಗಿ ಅವರನ್ನೇ ನಿಂದಿಸುವ ನೀನು ಕೃತಫಘ್ಮ್ನನೇಸರಿ) ಎನ್ನ ಲು 59, ಯ.!--“ ಯಾಸಾಂ ಸ್ತನ್ಯಂ ಪೀತಂ ಯಾಸಾಂ ಜಾಶೋನಿ ಯೋನಿತಃ | ತಾಸು. ಮರ್ವೋತವು ನ್ರೀಷು ಪಶುವರ್ರಮಸೇ ಕಥಮ್ “(ಎಲ್ಕೆ ಮೂರ್ಮಿನೇ | ಯಾರ್ ನ್ತನ್ಯವು ನಿನ್ನಿಂದ ಕುಡಿಯಳ್ಪಟ್ಟಿ ಯಾಕಯೋನಿಯ ನೀಗು ಹುಟ್ಟಿದೆಯೋ, ಹಂಗಸರಬ್ಲಿಯೇ ಪಶುಜಾತಿಯಂತೆ ಹೇಗೆ ರಮಿಸುವೇ 7) ಏ3ದರು. `ಮಂ. ಪಂ.:-.×ವೀರಪತ್ಸಾಮವಾಪ್ತಸಿ ವಲ್ಟ್ನುದ್ಯಾಸ್ತೆ ಯತ್ನ ತಃ| ಆತ್ಮ ಪತ್ಯಾಮವೌಪ್ತ ಸ್ತೃವವಿದಿತ್ತಾ ಪರಂ ಪದವು || ದಯೈವಾರಿಕಾಣವಂಡಯಿತ್ತಾ ಕಥಂ ಸ್ತೀನವದಾಗಕ? “(ನೀನು ಗಾಪೆಗತಾ.ದೆಗ್ನಿಪರಿತ್ಕಾಗವನ್ನು ಮಾಷಿರುವುದರಿಂದ ವೀರಹತ್ಕಾಣೋಷಳ 5% ನಾರೆ; 5ವಲ ವ್ರಿಷ್ಮೆ ಸೃರೊಪವೊ ತಿಳಿಯದೇಇರುವುದ ರಿಂದ ಆಶ್ಮ ಪತ್ಕಾದೋಷಳ್ಕೆ ಗುರಿಯೊಡೆ; ಆದರೂ ರ್, ವರನ್ನು ವಾಚಿಸಿ ಒಳಗೆ ಹೇಗೆ ಬಂದೆ ?) ಎನ್ಟ್ಗ ಳು -= ಶಂ. ಯ.“ ಛಿಕ್ಟು ಅಲ ೪ ನ್ಮೈಮೆದತ್ತಾ . ಶೈನವದಡ್ಗಕ್ಸ್ನ ಸೇ ಕಥಮ್ “ (ಮಳಾ.ಪ್ತ ಕಾಲಳ್ವೆ ಬಂದ ಉಳ್ಳು ಅನ್ನವನ್ನು ಕೊಡದೆ ಗಿಡುಗನಂತೆ ನೀನು ಹಗೆ ಅನ್ನ ವನ್ನು ತಿನ್ನು ವೆ 7) *±೨ದರು. ಮಂ. ಪಿ.. - ಕರ್ಬಕಾಲೇ ನ ಸಂಭಾಷ್ಠ ಅಹಂ ಮೂರ್ಖಣ ಸಂಶ್ರತಿ “ (ಕರ್ಮಮಾಡತಳ್ಕ ಸಮಯದಲ್ಲಿ ನಾನಃ ಮೊರ್ಟರೊಡನೆ ಮಾತನಾಡಲರ್ಹನಲ್ಲವು) ನನ್ನ ಲು--ಶಂಕರರು ಮಂಡನನು ಹೇಳಿದ ವಾಳ್ಸದಲ್ಲಿ ಯತಿಭಂಗದೋಷವನ್ನು ಕಂಡು # ಅಹೋ ಪ್ರಕಟಿತಂ ಜಿಸ್ಸಿನಂ ಭಾಷಿಣಾ ?? (ಯತಿಥಂಗದಿಂದ ಮಾತನಾಡಿದ ನಿನ್ನ ಮಾತಿನಲ್ಲಿ ನಿನ್ನ ಜ್ಞಾನವು ವಂದರು. ಮಂ. ಪಂ.:-~× ಯೆತಿಭಂಗೇ ಪ್ರವೃತ್ತಸ್ಯ ಯೆತಿಧಂಗೋ ನ ದೋಷಭಾಕ್ “ (ಯತಿಥಂಗದಲ್ಲಿ ತೊಡಗಿರುವವನಿಗೆ ಯತಿಭಂಗಗೋಸವಲ್ಲ್ರ) ಎನ್ನ್ನಲು -=
ಲೆ ಶಂ. ಯ.:~“ ಪ್ರವೃತ್ತಸ್ತೆ ಸಮಸ್ತತಾವು: “ (ಯತಿಛಂಗೆವೆಂಬ ಶಬ್ಬದಲ್ಲಿ ಷಷ್ಟೀತತ್ಪುರುಷೆಳ್ಳೆ ಒವಲಾಗಿ ತತ್ಪುರುಷವನು ಮಾಡು) ಸಂದು. ಮಿ., ಪ. ?-~- ಕೈ ಬ್ರಷ್ಠೆ ಕ್ವ ಇ £0 ಸನ್ಮಾಸಃ ಕ್ರೈ ವಾ | ಸ್ವಾದ್ವೆನ್ನ 9ಜಗ್ಳ ಕಾಮೇನ ವೇನೋಯಂ ಯೋಗಿನಾ ಧೃತಃ “ (ಬ್ರಷ್ ವೆಲ್ಲಿ ? ದುರ್ಜು ದ್ಧಿಯಾದನೀನೆಲ್ಲಿ ? ಸನ್ಭಾಸವೆಲ್ಲಿ ? ಕಲಿಖುಗನೆಶ್ಲಿ ? ರುಜೆಖೊದೆ ಅನ್ನ್ನಧಕ್ಷ್ನಣೆಗೋ ಸ್ಪೆರ ನಿನ್ನಿಂದೆ ಈ ವೇಷವು ಎನ್ನ್ನ ಲು__ ಶಂ. ಯ. :--« ಕ್ರಯ ಸ್ಲ್ಚ್೧1 ಶ್ ಡುರಾಚಾರಃ ಕ್ಲಾಗ್ನಿ ಹೋತ್ರಂ ಕರ, ವಾ | ಮನ. ಮೈಥುನಕಸಿಮೇನ ವೇನೋ › ಯ: ಕರ್ಮಿಣಾ ಧೃತ! || “ ಸ್ಕ್ವರ್ಗ ವೆಲ್ಲಿ ? ದುರಾಚಾರಿಯೂದ್ ನೀನೆನ್ಲಿ? ಅಗ್ನಿ ಪೋತ್ರವೆಲ್ಲಿ ? ಕಲಿಯೆತಗವೆನ್ಲಿ ? ಮೈಥು ಕರ್ಮಿಷರ ವೇಷವನ್ನು ಧರಿಸಿರುತ್ತೀಖೆ) ಎಂದರು. ಹೀಗೆಯೇ ಇಮೆಬ್ದರಿಗೊ ಬಪಳಕಾಲ ವಕ್ತರೋತಕ್ತಿಯುಕ್ತಗಳಾದ ಪ್ರಶ್ನೋ ಶಶರಗಳು ನೆರಫು ಅನಂತರ . ಮಂಡೆನಮಿಶ್ರನು ಮೇವವ್ಭಿಸ ಬೈವಿ3ನಿಗಳ ಬುದ್ದಿ ವಾದೆದಿಂದ ವಕ್ರೋಕ್ತಿಯನ್ನು ಬಿಟ್ಟು | ಅಚಾತ್ಸ್ರರನ್ನು ವಿಷ್ಲುಸ್ಮಾನದಲ್ಲಿ ಕೂಡುವಂತೆ ಪ್ರಾಥಿ ಏ ಉನ). ಅದಳ್ವೆ ಆಚಾಕ್ಳರು 44 ನಾನು ನ್ನ್ ಭಿಕ್ಲಾಥಿಯಾಗಿ ಬಂದವನಲ್ಲ ; ವಾರಳಭಿ ಕಾ ಧಿಯಾಗಿ ಬಂದಿರುವೆನು “ ಏಂರರು. ಆ ದಾಕ್ತವನ್ರನ ಕೇಳಿ ವುಂಡರಲೆಂಡಿಕನು ,, ನಾನೂ ಅದೇಕತಿ ನ್ಯತೆ ೨ ಚ್ ಈ “ ೨ ಛಿದ್ದಿನು; ನಾತಯದಿನ ಈ ದಿನ ಆಅನ್ಷ ಭಿಳ್ಳೆಯಾಗಲೀ; ² ಅವನ ವೂತಿನಂತೆ ವಿತ್ತು ಸ್ಥಾನದಲ್ಲಿ ತಳ [ ಇ ಕ್ರೌ ತರು, . ಅಕರ್ಮಾನಂತರ ಆಚಾಕ್ತರು . ಆಕು ವ ತಮ್ಮ ಶಿಸ್ರವ್ಲಿ ಗೆ ಒಂದು ಅಂದಿನ ಸಂಗತಿಗಳನ್ನೆಲ್ಲಾ ಅವರಿಗೆ ತಿಳೆಯಿನಿ ಪ್ರಾತಃಕಾಲ ಸ್ವಕರ್ಮಾನಂತರ ಮಂಡಗಪಂಡಿತನ ಮನೆ^ ಹೋದಕು. ವೆನ್ನ, ಪತಿಸಿದೆಳು. ಸರಸ್ತ ತಿಯೇ ಮಾಢ್ಯಸ್ತ್ ಫರಿವನ್ನು ಆಗ ಇಬ್ಬರ ಕೊರಳಿನಲ್ಲೂ ಒಂದೊಂದು ಫುಸ್ಪಮಾಲಿಳೆ ಯನ್ನು ಹಾತ : ಯಾರಳೊರಳಿನ ವುಷ್ಪವೊಕೆಯು ಬಾಡುರುದೋ ಅವಗು ಸೋತ ವರಂತೆ ಎಂದಳು.
ಶತಕಕಕಥಫಾಸಾರ ೨೪ ಅವರ . ಶಪಥವೇನೆಂಗರರೆ ಶಂಕರಯೆತಿಯು ಸೋತರೆ, ಸನ್ಮಾನವನ್ನು ದಿಟು › ಮಂಡೆನಪೆಂಡಿತನ ಶಿಷ್ಕನಾಗಬೇಕು; ಮಂಡನಪಂಡಿತನು ಸೋತರೆ ಗೃಹಸ್ಥಾ ತ್ರ ವನ್ನು ಬಿಟ್ಟು ಸ್ಯೀಕಾರಮಾಡಿ ಶಂಕರೆಯತಿಯ ಹೀಗೆ ಶಪಥಮಾಡಿ ವಾದವೂಡಳುಳ್ರಮಿಸಿದೆರು. ಆಗ ವುಂಡನರಂಡಿತನು , ಕಲಿಯೆಗದೆಲ್ಲಿ ಸನಾ ಸರ್ರ “ ಅಶ್ವಾಲಂಭಂಗವಾ ಲಂಧಂ ಸನ್ಕಾಸಂ | ದೀವೆರೇಣಸುತೋತ್ಪತ್ತಿಃ ಕಲೌವಂಜವಿವಜ್ ಯೇತ್, ಎಂಹ್ ಪ್ರವಾಣರೆಚನದಿಂದ ಕತಿರಸ್ತಲಿಸ್ಬಟ್ಸಿದ್ದರೂ ನಿನ್ನಿಂದೆ ಹೇಗೆ ಸ್ವೀಕ ರಿಸಲ್ಪಟ್ಟಿತು [ ಸವೇಪಾಂದ್ಕಿಬಾನಾಂಮುತ್ತಿ ಸಾಧನವ | ಯೇನೋಖಪಾತ್ತೇನೈನಿರ .›3ಬ €ಪವೀತತ್ಕಾ ಎ 4೪ ಈಎ ಕಕ್. ಈ ,. ಖ ನೆರೆ ತಾ | ಒ ಇರ್ ನ = ಹಜ್ ² ಮಿ ಜ್ ನಿ , ಕ್ಠಿ | ತೆ ೨ # ಕರ್ ಈ ® ಹಮ ® * ದೇವ ಓಲಯಂ3‡ ||. . .. . .ಬಂಬ ಋಖೆಚಿಸ್ನಿದಿಕರ್ನುಮತ್ಕಾಗವ. ಬಿ ಇ ಓ. ಶ್ರೀ ಹಾನಿಕರವಲ್ಲ ವೇ? , ಧೆತ್ತಿಮೋ˜ವಿದಯಃ ` ಎಂಬ ಪ್ರಮಾಣ ದಿಂದ ೩ ನಿಯಲ್ಲ ವೇ? ವೆ೫ನಗಳಿಂದ ನಿಷಿದ್ಧವಾದ ಸನ್ಕಾಸವನ್ನು ನೀನು ಸ್ವೀಕರಿಸಿದೆ? ಬನ್ರೆ ಲು === ಶಂಕರದೇಶಿಕರು « ಬಳ್ಳೈ, ಮೂತಢ್ಗನೇ! “ಯಾವದ್ಯ ಣವಿಭಾಗೋನ್ತಿಯಎನದ್ವೇ ದಃಶ್ರವರ್ತತೇ | ಸನ್ಜಾಸಕಾ ಗ್ನಿಹೋತ್ರಂ ಷ ತಾವಯವಳಕಶೌಯು^ || ` ಎಂಬ ವಾಕ್ಯದಿಂದ ‹ ಚಾತುರ್ವರ್ಣವಿಭಾಗವೂ, ವೇದಗಳೂ, ಎರುವರಿವಿಗೆ ಪ್ರ ರದಲ್ಲಿ ರು ಸನ್ಯಾಸವೊ ಅಗ್ನಿ ಹೋತ್ರವು, ಕಲಿಯುಗದ ಲ್, ಉಂಟು ² ನಂದು ಇರುವುದರಿಂದ ಸನ್ಮಾ ಸವು ಹಗೆ ನಿಷಿದೈ ವು !
೩ ೦ ಕಾದಂಬರೀಸಂಗ್ರ ಪ ತ್ರಂ | ಬ್ರಹ್ಮೆ ತಿನಸೂತ್ರಮಿ ಶ್ಯುಳ್ತಂತಾದೃಳ್ಸೂ ತರಂದಸೇದ್ಬುಧಃ | ಒಬಹಿಸ್ಲೊ ಗೀವಜೇನುಕ್ಶ್ ಪದೆ ಸ್ಕಿ ತಃ, (ಣ್ರಾನಿಯು ಶಿಖೆಯನ್ನೂ, ಹೊರಗೆಧರಿಸಿರುವ ಸೂತ್ರವನ್ನೂ ವಿಟ್ಟು ,ಬ್ರಹ್ಮೆ! ಬಂಬ ಸೂತ್ರವನ್ನು ಧಘೆಸಶತ್ಕ್ದ್ಬು; ವೇವನ್ನುಕ್ತಿಕಾಮನು ಹೊರಗಿನ ವೀಶವನ್ನು . ಎಂಬ ವಚನಗಳೆಂದ ಸೂತ್ರ ಶ್ಯಾಗವು ಹೇಗೆ ದೂಷ್ಕವು 7 ` | ಸನ್ಕಾಸಸ್ತಾಕ˜ದ ಹೇತ್ಸರ್ವಾಕ-. . .. . .. . || ಮತ್ತು ಚತ್ಕಾರೋಬ್ರಾಹ್ಮಣಸ್ಸೋಕ್ತಾ! ತಿಣೋದಿತಾಃ | ಶ್ || ` (ಸಂತಾನಜಗಳಾದ ದಮೋಷಗಳೂ, ಕರ್ಮಜಗಳಾರ ದಮೋಷಗಳೂ ಸನ್ಜಾಸದಿಂದ ನಶಿಸಲ್ಪಡುಶ್ತವೆ; ಮತ್ತು ಬ್ರಾಪ್ಣನಿಗೆ ನಾಲ್ಕು ಆಶ್ರಮಗಳಲ್ಲಿ ಯೂ ಆಅಫಿಕಾರವಿರು ನುದರಿಂದ ಸನ್ಕಾಸ ಸ್ನೀಕಾರವಿಂರ ಬ್ರಾಪ ಣ.ಪಾನಿಯು ಷೇಗೆ ೧) ಎಂಬ ಪ್ರಮಾಣ ೬೪೯ ಈ (- = ೬ ೧೬ £ ತ ೭ ‰ (- ಒ “ಹೌ ದಿಂದ ಸನ್ಮಾಸವು ನಿಷಿದೃವಲ್ಲ ವಳ್ಳೆ ! ಧ್ಯಾನಿಸುತ್ತಾ ಜಿತೇಂದಿಯನಾದವನು, ಮುತ್ತು ನಿತ್ರವ«ವ: ಕ^ = ² 5 ಗ = ಗಳನ್ನು ಮಿತ್ಸಜಿಸಬೇಕು) ಏಂಬ . ವಚನದಿಂದೆ, ವೋಕ್ಸಾಧಿಯೊಗಿ ಈರ್ಮಬಿಬ್ಬವ ನಿಗೆ ನಂಕಬಾಧಿಯು ಹೀಗೆ ? ಮತ್ತು ಇ೪ವನಿನೆ ಸೈರ್ಗೆ ಕ್ರಿಂತ ಅಧಿಕವಾದ ಮೋಳ್ತ ಪ್ರಾಪ್ತವಾಗಿರುವಾಗ್.. ಸ್ಕರ್ಗಾದಿಗಳಿಂದ ಪ್ರಯೋಜನವೇನು ? ಎಂದು ಹೇಳಲು, ಮಂಡನದಿಶ್ರರು . ಫ್ರತ್ತುತ್ತರ ಕೊಡಲು ಅಸೆಮರ್ಫರಾದ್ಬನ್ನು ಕಂಡು, ಶಂಕರರು ಮೂಢನೇ ! ಪೂರ್ವದಲ್ಲಿ ನೀನು ಏನು ಪ್ರಲಾಪನಿಸಿದೆ ? ಅಜೇತನವಾದೆ ಕರ್ಮವು ಹೇಗೆ ಮೋಳ್ ಶ್ರದವು ? ಆ ಮೋಕ್ತ ವತ್ನು ಕೊಡತಕ್ಕದು ಶ್ರುತಿಸಮೃತವಾದ ಬ್ರಪ್ಮವ ಲ್ಲವೇ ? ಮೆಶ್ಶು ಉತ್ತವುವಾದ ಸೆನ್ಕಾಸಾಶ್ರಮವನ್ನು ದೂಷಸಿದವನು ಅವನಿಗಿಂ ತಲೂ ದೂಷ್ಕನಲ್ಲವೆ ? ಎಂದು ಕೋಪದಿಂದ ಹೇಳಿದರು. “` ಆಗ ಮಧ್ಯಸ್ಕಳಾಗಿದ್ದ.. ಶಾರವಿಯು ಜಾಗ್ರತೆ ಶ್ರತಿನಿಶೃವೂ, ಯತಿಗ ಳಾದ ಶಂಕರರನ್ನು . ವೂಶ್ರ ಕರೆಯುತ್ತಿ ದ್ದಂತೆ ಆ ದಿನ ಪೆತಿಯತಿಗಳೇರ್ನ
59ಆರಕಥಾಸಾರ ೩ ೧ ರನ್ನೂ ಭಿಕ್ಸ್ನ ಕೈ ಕರೆದಳು, (ಹಿಂದಿತ್ರ ಶಪೆಥವೆಂತೆ ಮೆಂಡೆನೆಪುಷಿತನು ಸೋತದ್ದನ್ನಿ, ಅವನ ಕೊರಳಿನ ಮಾಲಿಕೆಯು ಬಾಡಿದ್ರನ್ನಿ ಕಂಡು ಆಕೆಯು ಈರೀತಿ ಹೇಳಿದಳು.) ಆಗ ಮಂಡನದಿಶ್ರರು ಧತ್ತಿಯಿಂದ ಮೇಲಳ್ಕೆದ್ದು ಆಚಾರ್ಸರಿಗೆ ನಮಸ್ಕರ ರಿಸಿ ನಾನು ಮಾಡಿರದ ² 7 ೩ .^` ಸನ್ಕಾ ಸಾಶ್ರಮನಿಂದೆಯನ್ನು ಕ್ರಮಿಸಿ, ನನ್ನ್ ಅಜ್ಞಾ ನವನ್ನು ಹೋಗ ನನಗ್ಗೂ ಸನ್ಸಾಸವನ್ನಿತ್ತು . ತಮ್ಮ ಶಿತ್ಯನನ್ನಾಗಿ ಮಾಡಿಕೊಳೈಬೀಕು ಬಂದು ಪ್ರಾಥಿ˜ಸಲು ಶಂಕರಾಚಾಕ್ಬ ರು ಮಂಡನಪಂಡಿಶನಿಗೆ ಸನ್ಯಾಸವನ್ನು ಕೊಟ್ಟು, ಸತ್ತ ಲೋಕಕ್ಕೆ ಹೋಗಟೀಕೆಂದು ಅಂಹುಳ್ಲೆ ಕ್ವೈ ಹಾರಿದ ಶಾರದಿಯನ್ನು . ವನದುರ್ಗಾಮಂತ್ರದಿಂರ ಆ ಸಭೆಯಲ್ಲಿರ್ತ ಪೆಂಡಿ ಶರೆಗುಲಿಗೆ ಆಕನಿಸಿ ಜನಗಳ ಥೊಮಿಯೆಲ್ಲಿ ನಿಲ್ಲಬೇಕೆಂದು ಆಳೆ ಯನ್ನು ವ್ರಾಥಿ“ಸಿದತು. ಆಗ ಶಾರದೆಯ ಪತ್ನಿಯ ಪತಿಯ ಅರ್ಥಾಂಗಿಯೆಂಬುದು ಲೋಕವಿದಿತ ವಸ್ಠೆ. ಅದರಂತೆ ನನ್ನ . ಪತಿಯು ಸೋತರೆ ನಾವಿಬ್ಬರೂ ಸೋಕಂತಾಗುತ್ತೇವೆಯೇ? ನಿಮಗೆ ಅರ್ಧೆಜಯ ಬಂದಿರ:ವುದಳ್ಲವೇ ಪೊರ್ಣಬಯನಳ್ಲ ; ತನ್ನನ್ನು ಸೋಲಿಸಿದಮೊ ರತತು ಪೊರ್ಣಒಯ ಬರಶಾರದಿಂದಳು. ಆಜಾಕರ್ರು ನೊದೆಲು ರಿಂಕಿ ರವ ಅನಂತರ ಒಪ್ಕಿದಿರು. ವಾರೋ ಪಶಳರಮವಾಯಿತು. ಶತಾರದಿಯು ಆಚಾರ್ಯರನ್ನು . ಕಾಮಶಾನ್ತರಲ್ಲಿ ಫ್ರಕ್ನಿ ಸಲಾರಂಭಿಸಿದಳು. 5 ವ ಆಚಾಕ್ಬೃರು ಸರಿಯಾದ ಉತ್ತರವನ್ನೀಯದಿದ್ದರೆ ಸವೌಜ್ಞಶೃಳ್ಳೆ . ಧಂಗಬ ರುವ್ರುದು. ಉತ್ತರವನ್ಷಿ ಕ್ತರಿ ಯತಿಧರ್ಮೆಳ್ಳೆ ಭಂಗಬಿರುವುವು ಎಂದು ಯೋಚಿಸಿ, ಅದನ್ನು ತಿಳೆದುಕೊಂಡುಒಬಕಲು ಒಂದುತಿಂಗಳ, ಈ ತೆ,ಸಿದ್ ಕೊಂಡ, ಸಶಿಸ್ಕರಾಗಿ . ಹೊರಟರು. ಅನಂತರ ಶಂಕರರು. ಅಮೃತವುರವೆಂ೬ ಪಟ್ಟಣದ ಹೊರಗೆ ನಿಂತು, ಆ ಗೀಶದ ರಾಋನು ವುತನಾಗಿರಲು ಅವನ ಪತಿಯ ಶವ ವನ್ನು ಸಳಕಲರಾಒಮರ್ಯಾಡದೆಗಳೊಡನೆ ಸ್ಕ್ರಶಾನೆಳ್ಳೈ ತೆಗೆಯಿಸಿಕೊಂಡುಹೋಗಿ ಅಳು ಕ್ಶಿರುವುದನ್ನು ಕಂಡು. ಶಿಷ್ಯನನ್ನು ಕುರಿತು « ಲಲ್ಬೈ ಸನೆಂದನೇ ! ಇಲ್ಲಿ ನೋಡು; ಜಾಣೆ ಯರಾದ ಹಲವುಮುಂದಿ ಯುವತಿಯರು ಸತ್ತ ತಮ್ಮ ಪತಿಯ ಸುತ್ತಲೂ ಶ್ರಲಾಪಿಸು
# ೨ ತಾರೆಂಒನೀಸಂಗರಹ ಶ್ತಲಿದಾರೆ. ನಾನು ಯೋಗಸಾಗಮರ್ಥ್ರದಿಂದ ಆ ರಾಜನ ದೇಹೆಕ್ಕೆ . ನನ್ನ್ 5 ಸಂ ಈರ್ ನುಗ್ಗಿಸಿ ಅವನಿಂದ ಳಳಾಶಾಸ್ತವನ್ನೆ ಲ್ಲಾ ಕಲಿತುಒರುವೆನು ²? ಬನ್ಟ್ಗಳು ಸನಂದನನ; ಗುರುಗಳನ್ನು , ಆಡಾರೈರೇ ! ಮತ್ಸೆ ಪರಕಾಯ ಪ್ರವೇಶವಿದ್ಯಾಬಳದಿಂದ ತನ್ನ ದೇಹವನ್ನು ಶಿಷ್ಯನಾದ ಗೋಂರಕ್ತ್ ನೆ ಒಳೆ ಇಟ್ಟು ಆತ್ಮ ವನ್ನು ಮೃತನಿಗಿರುವ ಓರ್ ಮಹಾರಾಜನ ದೇಹಕ್ಕೆ ನುಗ್ಗಿಸಲು, ಶವವು ಏದ್ದ ಕಂಡು ಬಲ್ಲ್ಮರೊ ಭೆಯಾಕ್ತರೈಯುಕ್ಕರಾಗಿ ಆ ದೀಹಳ್ವೆ ಸಂಸ್ಟಾರಾದಿಗಳಂ ಮಾಡ್ರಿ ಪಟ್ಟಣಕ್ಕೆ ಕರೆದುಳೊಂಡುಖೋರನಂತರದಲ್ಲಿ ಮಂತ್ರಿಗಳು . ಯಾರೋ ಯೋಗಿಗಳು ನಮ್ಸ್ರ ರಾಜನ ಸತ್ತದೇಪೆದೆಲ್ಲಿ ಸರಿ / ~ ದುರ್ಭಿಳ್ವು ದೇಶದ ಖೊನೆಭಾಗವಲ್ಲಿಯೂ ಇಲ್ಲವೆಂದೂಹಿನಿ ಆತನು ರಾಜನೀರ ೩೬7೩0 ಈ ೨ ಈ =೨ ವನ್ನು ಬಿಬ್ಬ ಸೋಗೆವೀ 3ರುವೆಪಾಗೆ ಮಾಡು, ನವಯಖೊನೆನಸುಪನ್ನೆ ಯರಿಇರ ಅನೇ ಕನುಂದೀವ್ಯೆಣ “ರಸ್ಟ್, ಕಎಡಿಪಾತ೩ ತನ್ಕೊಲಳ ಆ ಯತಿಗೆ ಮೋಸೊಳಿಸಲು ಆ ಯತಿ ಖ. ತನ್ನ ಸಿಮಾಢಿಮನ್ನು ಮರಿತು 33ಮ್ರೇಡಾಲಾಲಸನಾಗಿರುವ ಸಮ ಯದಲ್ಲಿ ಗೋರಕ್ಸ್ಗ+› ಬೇರೆಒನರೆ ಟ್ಸು; ತಾನು ಧರ ತಾಚಾರ್ಯನಂತೆ ವೇಸಧಿಸಿ ಸರಿಯಾದ ಸೆಮೆಯರಲ್ಲಿ ರಾಜನಿಗೆ ತಕ್ಸೋಪದೇಶವಂ ವಇಷಿ + ಗ 47 7 @. ಯತಿಋನ್ನು ಆ ದೀಪವನ್ನು. ಬಿಟ್ಟುಬರುವಹಾಗೆ ಮಾಡಿರನೆಂಬ ಕಧಿಯು ಪ್ರಸಿದ್ದ ವಾಗಿಲ್ಲ ರೆ ? ಏಂದತು. ಅವತ್ಕೈ €! ಆಚಾರ ರು ಖಳ್ಳೈ ಶಿಸ್.ನೇ ! ಕೃಷ್ಣ ನುರತಿಸ್ರೀಡಾಲೋಲನಾಗಿದೆರೂ ವಬ್ರೋಲಿಯೆಂಬ ಯೋಗದ ಇಂಧ್ರಿ ಯಸ್ಥ ಲನವಿಲವಿಲ್ಲ ರವನಾಗಿ ಅನಾಸಿ ಅಷ್ಮೆಚಿಕಿರಿ ಖಿಸರತ್ನು ಹೊಂದೆಲಿಲ್ಲ ಪ್ರ ? ಇದಲ್ಲದೇ ಇಂದ್ರನು. ಯತಿಗಳನ್ನು ಕೊಂಗು ತೋಳಗಳಿಗೆ ಹಾಕಿ ತೃಷ್ಟ್ಯಬ್ರಹ್ಮೆನ ವ,ಗನ “ಸ್ವ ಟ್ರೊ೨ದೆ›. ೪ಗೆ ಇ,ತಿಸತ್ಯೆ ಬ್ರಷ್ ಪಕ್ಕೆಗಳೆಂಬ ವು ಹಾ ಪಾಪಗಳನ್ನು ಮೂಡಿದರೂ ತನ್ನ ಒಂ೨ಮೆ ಕೋವೆನೊ ನೋಯಲ್ಜಿ ವೆಂದು ಆತ್ಮ ಜಿಕ್ಸಿ ನಪ್ರಭಾವ ವನ್ನು ಹೇಳಿರುವುದು ತಿಳೆದುಬರುತ್ತದಿ; ಮತ್ತು ಜನಕನು ಅನೇಕ ದಕ್ಷಿಣೆಗಳಿಂರ ಕ್ರೆತುಗಳನ್ನು ಮಾಡಿ ರೀವಶೆಗಳನ್ನೂ ಬ್ರಾಹ್ಮಣರನ್ನೂ ಶೃಸ್ತಿಶಡಿಸಿದನು. ಹೀಗೆ ಮಾಡಿವಾಗ್ಯೂ ತಕೃಲಭೋಗಾಹ“ವಾದ ಖೀರವು ಒಬರಧೇ ಬಂದಿತೆ9ಮೆ ಕಾಣ್ನಕಾಖೋಪನಿತತ್ತುಗಳೆಂದ ತಿಳಿಯಬರುತ್ತದೆ. ಆದ್ದ ರಿಂದ ವ್ರತಫಂಗಶಂಕೆಯು ಬರಲಾರದು. ಎಂದು ಹೇಳೆ ತಮ್ಮ್ರ ದೇಹವನ್ನು ಒಂದು
& ಟ ಅದನ್ನು ಕಾನಾಡುವಂತೆ ಶಿಷ್ಕರಿಗೆ ಹೇಳೆ ತಮ್ಮ ಆಶ್ಕರ ವನ್ನು . ಅವುರುಕರಾಯನ ದೆ:ಪೆಕ್ಕೆ ಪ್ರತೇತಗೊಳಿಸಲು, . ಅಮಕುಕರಾಯನು ಮೂರ್ಛೆಹೋಗಿ ಎದ್ದವನಂತೆ ಎದೃನಿ-. ಅದನ್ನು ನೋಡಿ « ರಾಬನ ರೂರ್ವೆವಯಸ್ವೆರೂ ಸುಂದರಿಗಳೂ ಆದ ಪತ್ನಿಯರು, ಮತ್ತು ಮೆಂತ್ರಿಗಳು ನಿಂದೆ ಅನೇಕ ಶಾಂತಿಕರ್ಮಗಳಂ ಮಾಡಿಸ ರಾಜನನ್ನು ಮಂಗಳ ವಾದ್ಯ ಪಟ್ಟ ಣಕ್ಕೊಯ್ದೆ ರು. ಆಚಾರ್ಬರು ನೃಪತಿಯೆ ಖೀರದಲ್ಲಿದು ಬಹಳ ರಾಜ್ಯವನ್ನಾ ಳುತ್ತಾ . ಅಂತಃಈ3ದೆ ಕಾಂತೆಯತ ಸಪವಾಸಬ :ದ ಕಾಮತಾಸ್ತ್ರವನ್ನು ತಿಳಿದರು. ರಾಜ್ಯವಾಳತಕ್ಕೆ ಕಾಲವೆ೩ ಕನಿಲಕಾಲಕ್ಕ ವುಳಿಯೊಗ\ ಸುಭಿಳ © ಕ್ ಗ್ಯ್ ಗ್] ಉರ ವ್ರನಿಗಿತು . __ ಈ ಆ ಪಟ್ಟ ಅತನ ಅಮಾ ನುಸಸ್ರಜ್ಞಾವಿಶೇಷಳ್ವೆ ಆಕ್ರರ್ರೈ ವನ್ನು ಹಿಂದಿ, ತಸ್ತ್ನ ಮೆಂತ್ರಿಯಂ ಳರೆದು ಅಯ್ಯ! ಈ ನವ್ಮ ಪತಿಯೇ ಆತ್ಮಿವ್ರ ಪತಿಯದಲ್ಲ. ಯಾವನೋ ಒಬ್ಬ ನನ್ಮ್ . ಪತಿಯು ದೇಪವೆನ್ನು ಪ್ರವೇತಿಸಿರುವಂತೆ ತೋರುತ್ತದೆ, ಆದ್ಬರಿಂದ ಈ ಪ್ರಾಂತದಲ್ಲಿ ಶವೆಗಳನ್ನೆ ಲ್ಲೌ ಸುಡಿಸಲೀಳಿಂದಾಬ್ತಾ ಸಿಸಲು. ಸುಡಿಸುತಸ್ತಿ ಶವನಿದೃಸ್ತ್ ಒಂದೆತಿ, . ಆತಾಕ ರ 55 ಪವನು ನೋಷಿ ಅದನ್ನ ಈಕ್ಮವಿ, . ನೋಷಿ ಅದನೆ, ಶ ೪ ^ ಕಚ್ಕೆ ೫ | ಆಗೆ ಶಿಷ್ಯರು, ಆಚಾರ್ಯರ ಸಮೂಪಕ್ಕು ಬಂದು ,, ಶತ್ತ್ವಮಸಿ, ತತ್ತ್ವಮಸಿ ರಾಜಣ˜! ` ಎಂದು ಸ್ತೋತ್ರಮಾಡಲು ಆಚಾರ್ಯರು ಆ ದೇಹವನ್ನು ಬಿಟ್ಟು ಗಿಣಯರೂಪದಿಂದ ಹಾರಿಬಂದು, ತಪ್ಪು ದೇಹವು ಸುಡುತ್ತಾ ಇರುವುದಂ ಕಂಡು ಅದರಲ್ಲಿ ಪ್ರವೇಶಮಾಡಿ . * ಶ್ರೀಮುತ್ತಯೋನಿಧಿ ನಿಳೇಶನಚಳರವಾಣೇ | || ಯೋಗೀಶ ಶಾಶ್ವತ ಶರಣ್ಳ ಭವಾದ್ದಿ ವೋತ | ಲಕ್ಷೈನೃಸಿಹ್ಮ ಮಮ ದೇಹಿ ಕರಾವನಲಂಬಮ್ ||೧|| ® ಭಕ್ತರಾದ ವಾಚಕರು ರಚಿತವಾದ ಈ ಈರಾವಲೆಬ್ಬ ಸ್ರೋಶ್ರವನ್ಶು ಗಿತ್ಸ ತೇಯಸ್ತೆ ಕವು. ಇ-,
ಹ ಬ್ರಶ್ಮೇಂಗ್ರಕುರ್ರಮಕುದರ್ಕಕಿರೀಟಳೋಟಿ | ಸಂಘಟ್ರಿ ತಾಂಫ್ಕಮಲಾನುಲಕಾಂತಿಕಾಂತ || ಈ ೬ ಸರೋರುಹರಟೌಸ | ಲಕ್ಸ್ಯ<ಲಸತ್ಕು ಲಕ್ಸಿನುಸಿಹ್ಥ ಮಮ ಔಹಿ ಕರಾವಲಂಬಮ್ || ೨ || ಸಂಸಾರಕಘೋರಗೆಹನೇ ಔರಕತೋ ವ3ರಾರೇ | || ಆರ್ತಸ್ಳ ಮತ್ಸರನಿದಾಘನಿಪೀಡಿತಸ್ಕ | ಲಕ್ಕಿ ಮೆಮು ೬ ಈರಾವಅಂಬಮ್ || ೩ || ಸಂಸಾರಕೂವಿಮತಿಘೋರಮಗಾಧಮೊಲತ್ | ಸಂಪ್ರಾಗ ದು‡:-ಶುಸರ್ಪಸಮೊತು.ಸ್ಳ || ಈ ಈ ನ್ _ ೬% __ ೨% ಮ ಮತು ಮು ಮತ ಮಡ್ ಮೀಟಿ ಕಟ . ಕ್. ಮ್. ೫ | ಇ × ೧೬೨ ಆನ ಇ ಈ ಜಾರ್ಜ ಎ ಸ ಇ , ಕ್ಯಾನ್ಸ್ = ೬ ಒ ಒನ್ (²), ಅ \ ಶ್ಯ ... | ಆಕ್ , ಆ #4 ಸಂಸಾರವೃಕ ವ.ಘವೀಬಮೆನಂತಳನ್ಶ್ | ಶಾಖಾಶಂ *=ರ?ಣಪತ್ರಮನಂ7.ಶ್ರಪ್ಷಮ್ || ಆರುತ್ಕ್ ಪತಕೋ ದಯಾಳೋ | ಲಕ್ಸೀನ್ಳಸಿಷ್ಠ ಮಮ ೧೩೭ ಕರಾವೆಲಂಬವು || ೬ || ಸಂಸಾರಸರ್ಪಘನವಕ್ತೃಭಯೋಗ್ರತೀವ್ರ | ಮಾ . . . ಕಕ್ “ಜಾ ) ರ ರಸ್ | ಅಕೆ ಎಳೆ ರಂಸ್ಕಾ || ನಾಗಾನಿವಾಹನ ಸುಧಾಬ್ಧಿರಿವಾನೆ ಈ | ಮನು ಏ ಕರಿಇವಲಂಒವು: || & || ೩ ೪೨೫೩೩ ೨ ಓ ಆ ಲಕ್ಸ್, ನೃಸಿಹ್ಮ
ಸಂಸಾರದಾವದಹನಾತುರಕಧೀಕರೋರು | || ಶೃತ್ಪಾದಪದ್ಧಸರಸೀಶರಣಾಗತಸ್ಗೆ | ಮಮ ದೇಹಿ ಕರಾವಲಂಬಮ್ || ೮ || ಜಗನ್ನಿವಾಸ | ಸರ್ನೇಂದಿ,ಯೂರ್ಥಬಡಿಶಾಧ್ ಝಘೋಪಮುಸ್ಕ || ಪ್ರೋತ್ವಂಡಿತಶ್ರಜುರತಾಝಿಕಮಸ್ತ್ರಕಸ್ಳರ | ಲಕ್ರಿ ಮುಮೆ ಣ ಈರಾವಲಂಬಮ್ || ೯ || | ೧೩ ಸಳಲಾರ್ತಿನಾಶ || ಆಸ್ 5೪ ಈ ಆ ಇ ಫಟ್ | ಲರ , ಗಬತೆ ಮಗ್ “ಷಿ ಕರಾವೆಲಂಬವತ್ || ೧9 ಒಹಸ್ಕಿ @, 5 £? ಅಲ ® “ಜ್ ೪ ಸೌ ಈಕೆಸಲಗ್ಸ್ ಘ ಎ ೪ಕ್ , ಆಜ್ ಇರ ಸಿಂಕ್ಯಾಗೆ ೨೩೩, ದಂಣ _) | ಭೀಕಸ್ಕ್ರ ಕವ್ರಿರಮತಿತೀಷಭೆಯೆಂಕರೇಣ || ಸಂಸಾರಸಾಗರ ನಿಮುಜನಮುಹಪ್ಪಮಾನವ | ದೀನಂ ವಿಕೋಕಯ ಕರುಣಾನಿರೇ ಮಾಮ್ || ಪ್ರಹ್ಲಾ ದಖೀದವನಿವಾರ ಪರಾವತಾರ | ಔ 4ನೃಸಿಷ್ಮೆ ಮವು ಹ ಕರಾವಲಂಬಮ್ || ೧೨ || ಸಂಸಾರಯೋಗಿಸೆಕಳಲ್ಸೈಶ ನಿಶ್ಯಕರ್ಮ | ಸಕಲೇಂದ್ರಿಯೆ ಮೃತ್ಕುನಾಶ || | ಮಮ ದೇಹಿ || ೧೩ ||
ಕಾರದಂಬನೀಸಂಗ್ರಿಪ ಓಧ್ವಾಕಣಿಯೆವುಭಟಾ ಬಹು | ಕರ್ಸಂತಿ ಯತ್ರ ಪಥಿ ಪಾಶಶಪ್ಫಿರ್ಯದಾ ಮಾವ || ವಿಕಾಕಿನಂ ಪರವತಂ ೫ತಿಕಂ ದಯಾಳೋ | ಮಮ || ೧೪ || ಮೆ ಹೃತ ವಿವೇಳಮಹಾಥಧನಸ್ಳ | ಇರ್! ಪ್ರಭೋ ಬಲಿಲಿನಿಂದ್ರಿಯನಾಮಥಯೈ! || ವಿನಿಪಾತಿತಸಿ | ಮಮ ೧ಹಿಳರಾವಲಂಬಮ್ || ೧೫ || ಪ್ರಹ್ಲಾದ ನಾರದ ಪರಾಶರ | ವ್ಯಾಸಾಂಬರೀಷ ೧ಳ ಕೌನಳ ಪೃನ್ನಿವಾಸ || | ಮೆವ || ೧೬ || ಏಳೇನ ಚಕ್ರಮಪನರೇಣ ಕರೀಣ ಶಂಬವ: | ಅನ್.ನ ಸಿಂಧುತನಯಾಮವಲಂಬ ತಿಷ್ತಕˆ || ವಾಮೇ ವರವಾಧೆಯಪಸ್ತಮಕ್ರ | ಲಕ್ಷಿ ಮಮರೇಹಿಕರಾವಳಂಬವು || ೧೭ || | ಆದಿತ ರುರರನಿಗಮಾದಿಶನುವರಭಾವವು || ವಿಜಾ ಸ್ ಮೆಧುಳೊ « ಲು ಪೆಮ | ಲಕ್ಸ್ ಮೆಮುರೀಲ ಕರಾವಲಂಬವಮ || ೧೮ || ವಾರಾಪ ರಾಮ ನರಸಿಷ್ಠ್ರ ರಮಾವಿಕಾಂತ | ಕ್ರೀಡಾವಿಲೋ೪ ವಿಧಿಶೂಲಿಸುರಪ್ರವಂದ್ಗ || ಹೆಂಸಾತ್ಮ್ಗಳಂ | ಮನು || ೧೯ ||
#6 ಷಿ ಶಿ, ಪ್ರಹ್ಲಾ | ಗಂಗಾತರಂಗ ಥವಳಾಂಗ ರಮಾನ್ಫಿ ತಾಂಗ || ಶೃಂಗಾರ ಸಂಗತ ಕಿರೀಟಲಸದ್ನರಾಂಗ | ವುಮ ೧೩ಕ೦ವಅಂಬವಮ್ || ೨೦ || ಸಿತಾ ಕ | ಮಾತಾ ನೃಸಿಹ್ಕಶ, ೦ ಷೈ ೩ £ 7 ಇ ಭ್ರಾತಾ ನೃಸಿಷ್ಮಶ್ತ || ನೃಸಿಪ್ಕೆದೇವಾನ್ನ ಪರಂ ನ | ² @ ಇ @ 1೩+ ಈ® ಈ ನ ಹೈ ವೈಮ || ೨೧ || ಆ . ಆಟ್ ಮಧುಸೊದನ || ಈಸ್ , ಆಟಮ್ ಆಸೆ ಬ್ರಪೃ| ೯೯. ೬ನ»೭5೧5 ದನೌಸ್ತವೇವೆ ಟೌ ಕೆ ಳ್ಳಿ ಐಂ ೪ › ಇಸ್ ( ಉದ್ಯ‰ಳಿ ಆಕ್ ಸ ಚಳ್ಲ ರ ಕ ಉರ ಕಕ್ ೨೫ ೩ 5. ಹಾಗ ಆ 3 ಶಿವನ್, ಶ್ರವಿನ್ಷೈನಿಸ್ವಿ? ಗರಳುಡೆಗ್_ ಬಾಯ. | ಎ ಈ ‰ 7 ಶ್ ೧,ಚ್ ^ ಪಿ ಈ { £®7 ಬ್ಲಿಕ್ಸ್ ತೌಪೆಶೆ ಯ೨×೭೪ನನೌಯಿ || 5 | ಶ್ರೀಶಂಶರಾಕ್ರಳತಂ ಸತತ ವೈನುಜ್ರ | @ ಈ ಈ, ಆಗ್ . ಈ ಎಲ್ಲ ಬಲ್ ಈ ಟ್ ಪೀದ್, < ಇ ಸರ್ತಗುಣಪ್ರಸನ್ನ್ ವ ;|] ಮುನಿವಕ್ತಗಣ್ಯಃ | ಹಿದಿ `~=® ಮೀ. @ ೬, \ ಗ ಅಕ್ ಸ ನಿರ್ಮಲಾತ್ಮಾ || ೨೪ || ಫ್ರುರಪ್ರವಾಹೆ | ==, ಇ) ದುಗ್ನಾರ್ಥಮತ್ರ ನಿವಹೋರುಳರಾವಲಂಬಮ್ || ಇನ - ಈ £ಗೆ ಲಕ್ಸ್ | ಸಿಧ್ಧೀತರ9 ಕೃತಂ ಸುವಕರಂ ಭುವಿ ಕಂಕರೇಣ || ೨೫ || “` ಬಂದು ಸ್ತುತಿಸಲು, ಲತ್ಸೀನುಸಿತ್ಮ್ನು ಪ್ರತ್. ಆ ನಾಗಿ, ಆ ವಹ್ನಿ ಯಂ ವೀಹವನ್ನು ತನ್ನ ಹಸನ್ತಸೃರ್ಶನದಿಂದೆ ಸುಖಶೀಶಲವುಂ ಟಾಗ್ಬವಂತೆನೊಡಿ, ಬಾರ್ಯಂ ಆಂತರ್ಹಿತನಾದನು.
೩ ಲ ಕಾದಿಂಬರೀಸನಿಂಗಿರ ಹ ಆನ9ಶರಕ ಶ೨ಳಕಕು ತುಂಡನ ಸಂಪಿಶನ ನುನೆಗ ಬಂದು,“ ವಮುಂಡನೆವಂಡಿತರಿಂದ ಪೊಜಿಸಲ್ಲ ಶಾರದೆಯಋಯನ್ನು ವಾಡಳ್ಗೆ ಕರೆಯಲು, ಶಾಂಕರವುಹಿಮೆಯನ್ನು ತಿಳಿದ ಕಾರಧಿಯು, ತಾವಿಬ್ಬರೂ ಸೋತೆನೆಂರೂ ಮತ್ತು ತನ್ನ ಅವ ಶಾರ ಆಬ್ತೆಯಿಲ್ಲ್ಲದೆ ಹೇಳಿ ಅಂತರ್ಹಿತಳಾಗೆಲು ಆಕಯನ್ನು ಬಮೋಗದೃಸ್ಥಿಯಿಂರ ನೋಡಿ ., ಎಲೌ, ಮಾತೆಯೇ! ನೀನು ಬ್ರಹ್ಮದೇವರ ಪತ್ನಿಯೆಂಬುಗಗನ್ನಿ , ಈತ್ತರನ. ಸಹೋದರಿಯೆಂಬುದನ್ಯೂ, ವಾಗ್ದೀವಿಯೆಂಬುದನ್ನೊ, ಪ್ರೆಪಂಜರಳ್ತಗೆಗೋಸ್ರವೇ ಲಕ್ಸ್ ಫರಿ ರೂಪಗಳನ್ನೂ ಧರಿಸುತ್ತೀಯೆಂಬುದನ್ಕೂ, ಬಲ್ಲೆ ನಾದ್ದರಿಂದ, ನಮ್ಪಿ²ದ ಕ್ಲೇತ್ರಗಳಲ್ಲಿ ಶೌರವಿಯೆಂಬ ಹಿಸನಿನಿಂದ್ ಒನರ ಉಸ್ರಾರ್ಥಗಳನ್ನೀಯುತ್ತಾ ಸಕ್ಬುರುಷರಿಂದ ಅರ್ಚಿಸಲ್ಪಡುತ್ತಿರಬೆ ಈ ` ಎಂದು ಪ್ರಾಥ್ಸಳು, ವೈಧವ್ಗ ಸಂಥೆವಿಸುವ್ರುದೆಂಬ ಶಂಕೆ ಯಿ ದ್ ೬ ೬ ೫ ಇಶ ಆ ಫ್ “‰. ಇ. ಒ ವೆನಿ ರಿದೆ & ಡೇ \ 8 ಆಡ್ಹ್“ ಖಿ ೪ ಖರ ೫ £ 3% ® ಡ್ರಿ) ೯೩ ನಳ £ 8 ಈ /] @ ಗ್ ತು ಕಾಸು ಸಂದು ಹೇಳೆ, ಹಾಗೆಯೇ ಆಂತರಿಕ್ಸ್ಳ್ಕೇಲದ ವೌಯವಾದ ತಾರದೆಯನನ್ನು ನೋಡಿ ಬಲ್ಜ್ ರೂ ಆಶ್ಮಯಗಛಲತರ?ರರು. ೮ನಂತರ ತಂಳರರೀತಿಕರು ಮಂಡೆನಮಿತ್ರನಿಗೆ ಸನ್ಸಾಸವ ನ್ಷಿ ತ್ತು ಪದೀಶಿಸಿ . ಸಕಿನ್ರ ಅ ಒ ಶೈ ರಾಗಿ ದಕಿ ಣಕ ಬಂಡು, ವೌಹಾರಾ˜ . ದರಗಳಲ್ಲಿ ಕೆಮ್ಮೆ ಜಡ್. ಗಳನು ಟಕ್ಕ್ನ ² 3 , ² ಕ್“ ಕ್ ೯ ೫ ಆ ಶರಚಾರಮಾಡುತ್ತಾ ತ್ರೀಲ್ಮಿ , ರಕಾಂಟನಸ‰ ಕನಾದ ಮಿ ಪಾಜಿಸಿ, ವೈಷ್ಣವರು, ವೀರತಿವರು, ಮಾಪೇಶತರರು ಮುಂತಾದವರನ್ನು ಸೋಲಿಸಿ, ಅವನಗೆಲಕ್ಲಿ, ಬ್ರಾ, ಡ್
ಈಸ್ ಈ ಸ್ ಈ ಅ % ಜ್ $4 ೪ ಕೆಕ್ಸ್ . ಟಕ್ತರು ಲ್ರೀರ್ಸಿ೬ ° 6? ಹ ಕ} ೨7 ಯ ಫೌ “ ಸ್ಥೂ ತ್ಶೀ= ಆ ಪಂ ಇವಿ ಉಣ ೯ರ 7 ಮಂ ಉ ಆಗ ರಣ ಜಗ 0 ಡೆ 5 ತು ಶ ಓಮ್ ಕ ನ ಸ್ಥ ಸಮಾಜ 5 ನ ತನ, “ ನನ ಸ್ಥಲ ೯ ೧ 5 ರ್ಹ ಶ ೨000೭ 0೫4 ² ಇಸ್ 5 «ಇ 9೩ ೮ ೪ .. ಒನ್, ತ್ ವಿ ಹುಳಿತಿಕತಕ ಗ 3ಕು “ ಇ ಇ ಇ ° % ಳ ** ಸ್ ವ್ ಓ ಕುಳ೨ರತಳ. 56.“ ಫಾ ವೆಜನಾನಂತರದಲ್ಲಿ ಒ »9ತˆಲ್ಲಿ ತಿರ 5 ² ² ೧೯೩೬೯೯೯೯ ಟ್-` ಳನ್ನು ನೋಡಿ 4 ! ಸಾರ್ವೆಜ್ಞ, ಸೌಕಿಲ್ಯ ಒ 1% 179 ಡ | { ®. € ಆ * %) #೬ (ಚ್ಚಿನ ೪ ೪ # , \ % # ಈ ರವಿರೇನೆ ೪೩ ಆ೫ ಗೌ. ನೀವು ೧೪3 ಸಮಸ್ವಾದೆ ಕಲಾ ಇಗುಣಗೆಳ್ಗ ಸಾ ಒಗ ಜಯಶಾಲಿಗಳಾಗವೆ ಹಿಂತಿರುಗುದ್ರದಿಲ್ಲ. ನಾನ್, ಸೆಯೇರನಾಗಿ ಹೋಗ ಲೇಳಂದು ಕವಾಲಿಯನ್ನು ಒಂರೆ.ನೆಎರು ವೆರು ಮ್ಸ್. ಮುಖ್ ‰... ಮ್ ಎಕ ಲ ಟ್ರಾ. ಮ್ ಮತ ಕ ಈ | ಒ ಕ್ತಿ , ನವಿ 3 =“ + ಆ =<೪_ ಇ ಭ ಗ್ಲೈ ಳ ‰ ಓರ ಈ ಔ 7೯ ೪೨) ಇಳಿ ಪ) ಹ ನಾದ ಒಬ್ಬ ಜಳ್ರವರ್ತಿಯ ತಲೆಯನ್ಮಾಗಳ, ಅಧವಾ ಬ್ರಿಪ್ತ ಪರಿವ್ರಾಜ ಸೆನ ತಲೆಯನ್ನಾ ಗಲೀ, ನನಗೆ ಮ ೨ನ ನಿನ್ನ ಅಭಿಲಾವೆ ಯಿ ಪಾತಿ ೯ಯಾಗುತ್ತದೆ ² ತೈ ಬಂದನು . . ನಾನು «5 ಅಂತೆ ಹಡುಕಳ. ›ಕ್ಮಾಬಂರೆನು. ತಲಿಯು ನಿಳ್ಟುವ್ರರು ದುರ್ಲಭವು. ರಹಾಢಿಮಾನವಿಲ್ಲದ ನಿವೃಂಥ ವಿರಳ್ತಲಗೆ ದೇಹದಿಂದ ಪ್ರಯೋಒನವಿಲ್ಲನೆಸೆ? ಆದ್ದರಿಂದ ನೀವು ತಮ್ಮ ತಲೆಯನು ಬಕ್ಯ ² ೧000190000 ಈ 7 ಎ. 10 - @ % _ ಈ ಸ ಐಂ ಜೆ ಅನುಗ್ರಹಿಸಬೇಳು. ದಧೀಚಿ ಕಲವರು ಳ್ಲಣಕವಾದ ಈ ಯಶಶ್ಕ ರೀರಳ್ಳೋಸ್ವರ ಆಲೆರ್ಪೆಣಿ ಮೊಡಳಿಲ್ಲ್ವೇ { 11 . ಆಗೆ ಆಚಾರ್ಯರು ,, ಏಲೈ ಕಾವಾಲಿಳನೇ ! ನನಗೆ ಈ ದಹೆದಲ್ಲ ಭಿಮಾನವಿ ಲ್ಲೈದಿದ ರೂ ನಮ್ಮ ಬಹಳ ಭೆಳ್ಳ್ಯಭಿಮಾನಗಳುಂಟ೩ ಅವರು ಇದನ್ನು ತಿಳೆ ೪ ನ -
ಒ © ಕಾರಿಂಬಲಲಸಂಗ್ರವ ದರೆ ನಿನ್ನ ನ್ನು ಸೆಂಪರಿಸಿವಿಡ ವರು. ಅದ್ತಲಂದ ಅಮೌಳ್ಲದಿರುವ ಕಡೆಯಲ್ಲಿ ನಇ*ನು ಸಮಾಧಿನಿಷ ನಾಗಿರುವಾಗ ನಿನ್ನ್ನಭಲಾಸೆಯಂ ತಿಲಸಕೋ “` ಏಂಡರು. ಅದರಂತೆ, ಅವರು ಒಓಬ ೨ಟಿಗ“ರಾಗಿರುವ ಸಮಯದಲಿ ಅಲಿ ಗೆ ಹೋಗಿ ತಲೆಯನ್ನು ಕಕ್ತರಿಸನೀ ಕೆಂದು ಕತ್ತಿಋಯನ್ನೆಕ್ತಲು ಯೋಗನಿಷ್ತರಾಗಿ ಕುಳಿತಿದ್ದ ಪದ್ಮ ವಾದರು ಸಂಥವಿಸಿದ ವಿಪತ್ತುಗಳನ್ನು ತಿಳಿದು ಸಿಪ್ ಕೂಪದಿಂದ ಒಂದು ತವು ದಶೆˆಗ ಮೌತ ದಿಂದ ಈವಾಲಿಕನನು, ಸಾಯ $,. ಆನ 7 ಈ ವಂತೆ ಮೊಡ್ತಿದರು. ಅವನು ಬಿದ್ದ ಶಬ್ರದಿಂದ ಒಳ ಮೆ೯5ರಿಗಿ ಅಲ್ಲಿ ನಡೆದ ವಿಷಯ ಬ್ರ ! ಣ್ಯ « ನೀನ್ ನ್ಡೈಕ್ಕಿಕ್ರ್ ಲೌಸ್ರೆ. ಹೀನ ವೆ 11 ವನ್ನೆಲ್ಲಾ ಅವನಿಂದ ತಿಳೆದ್ಯ , ನೀನ್ ಹೇಗ್ಗೆ ಪ್ರತ್ಬಳ್ತಮಾಡಿಳೊಂಡ 1 ಔ ಕರಣ, ಕಾವ -. ಫ್ರಾಂ ಕಚ್ಕೆ ಒ ಒರ ನ್ನ ಲು --- {4 ಗ್ ರ್ಗ { . ನಾನ್ಯು ಆಲಯೋಬಲಳದೆಲ್ಲಿ ನೃಹರಿಯಂ ಕ್ರುರಿಶು `, ನೀನು ಕಿ ಲಿಸ ವ ಇ ಖಳಗೆ ಪಿತಕ್ ಕವೆ,“ಡೆತ್ಲಿರ .? “ .ವಿ ? * ಇ ನನ್ನ ಭಿಪ್ರಾಯವನ್ನು ತಿಳಿಸ೭, ಬೇಡೆಗ್ಗ ಸೃಳ್ಬಕಾಲದಲ್ಲಿ ನರಸಿಹ್ನ ನನ್ನು ಬಳ್ಳಿಗಳಿಂದ ಬಿಗಿದು ನನ್ತಲಿಗೆ ತಿಂದನು. ಆಗ ನಾನು ಸ್ಕಾಮಿಯನ್ಶು ಪೊಜಿನಿ ಕಾಡೆಬೀಡನಿಗೆ ದೇವನು ವಶವಾದ ವಿಷ ಯವನ್ನು ಕೇಳಲು ಸ್ಯಾಮಿಯು ಇವನು ನನ್ನ್ನ್ನೆಳ್ಲಳಗಿಂತಲೂ ಥೆತ್ತಿಯಿಂದ ಭಜಿಸದ ನೆಂದು ಹೇಳ ಲೆದೃಹ್ಹನಾದನು “ ಎಂದನು. ಅದನ್ನು ಕೇಳಿ ಆಚಾಕ್ಕರು ನೃಹರಿಋಯೆಂಸ್ತುತಿಸಲಾಮಹಾತ್ತರನು ಫ್ರಶೃಕ್ಷನಾಗಿ ಸೌಮ್ಬರೂಪದಿಂದ ಪದ್ಬ ವೂರರನ್ನನುಗ್ರಹನಿ ಲೆಂತರ್ಧಾನವನ್ನು ಹೊಂದಿದನು. ಈ ಜರಿಕ್ರೆಯನ್ನು ತ್ರಿಸಂಧ್ಯಾಕಾಲಗಳಲ್ಲಿ ಯೂ ಯಾರು. ಪತನೆಮಾಡುತ್ತಾ ರೋ ಅಥವಾ ಅಂತಹರು ಅನವೃತ್ಕುವಿನಿಂದ ಬಿಡಲ್ಪಟ್ಟವರಾಗಿ ದೇವ ರಲ್ಲಿ ಧಕ್ತಿಯನ್ನು ಹೊಂದಿ ಶಪಲೋಕದಲ್ಲಿ ಸಳಲಭೋಗಗಳನ್ನೂ ಅನುಭವಿಸಿ ಮೋಳ್ಸ ವನ್ನು ಯೊಂಡುತ್ತಾರೆ. - ಅರ -ಈ. -
ಶ9ಕರಳಥಾಸಾರ ವವುವಲ್ಸ್ಗರೀ ಗತ್ವಾ ಗೋಕರ್ಣತೀರ್ಥಂ ಗುರುರಗತನಯಾಧೀಶವಮಾರಾಧ್ಯ ತಸ್ಮಾತ್ ಗಾಯ ಪದಜಖೆ.ಗವುಧ ಸಂಜೀವ್. ಜೊರೇವಫುತ್ರಮ್ | ಲಬ್ಬಾ _ ಬಳ್ಳಗ್ರಹಾರಂ ತದನು ಪುರಿ ಯ3ತತಶೃಂಗಗಿರ್ಯಾಂ ವಾಕ್ಬೀತಸ್ಮ್ರಂ ಸುರೇಶಂ ವಾಕ್ಪದಾಲಬ್ಬೇ ಸಿಪೇವೇ || |= ಆ. . , ಇನ ಅ / ನಂತರ ಆಚಾಕ್ಳರು ತೀರ್ಧಯೊತ್ರೆಗಳೆಂ ಮಾಡುತ್ತಾ ಗೋಕರ್ಣ ? ಕ್ರೈ ಶ್ರಳ್ಗೆ ಬರು ಗೋಕರ್ಗೇಕ್ನರನನ್ನು ಪೊವಿಸಿ ವಾದಿಗಳನು. × ಒಯಿಸುತ್ತಾ. ರರ್ಶನಾಧˆವಾಗಿ ತೆಂಳಿದರು ಸ ಒಜಯಿಸುತ್ತಾ. ನಾಥಧ್ವ ದಾರಿಯಲ್ಲಿ ಮೈ ತನಾಗಿರುವ ತಮ್ಮ ಏಕಮಾತ್ರ ವುತ್ರನನ್ನು ತೊಎಇಡಿಯಮೇವಿಟ್ಕು ಕೊಂಡ್ಪು ಪ್ರಲಾನಿಸುತ್ತಿರುವು ದಿನ್ನು ಆಚಾರ್ಯರು ನೋಡಿ ಬಹಳ ಪೃಸನಾಕ್ರಾಂತರಾಗುತ್ತಿರಳು ಆಕಾಶವಾಣಿಯು « ಸಂರಕ್ಕಿ ಸುವುರಕ್ಕ . ಶಳ್ತಿ . ಇಕುವ ಮನುಸ್ರ್ನಿ › 11 . ಟಳಿದಿತು. ಶ್ರೀಷ್ತವು ಅದನ್ನು ಆಟಾಕ್ಬರು ಹ್ರೇಳೆ 4 ಅದು ಸಶ್ಕವು “` ಏನ್ಸ್ನಲು ಆ ಮೃತಫುತ್ರನ- ನಿಧ್ರಿಯಂದ ಲದ್ದವನಂತೆ ಎಡ ಅನಂತರ ಆಚಾಕ್ಕೃರು ಸ್ಮುತಿಸಲ್ಪಟ್ಟವರಾಗಿ, ಮೂಕಾಂಬಾದೇವಾ ಲಯಕ್ಕೆ ಹೋಗಿ ಕ್ರೀ ಜಳ್ರವಂ ಸ್ಥಾವಿನಿ ಅನಂತರ ಕ್ರೀ ಬಲಿ ಸಂಚ್ಸ್ಗಳವಾದ ಅಗ್ರಹಾರಳ್ಳ ಸಕಿಷ್ಟ ರಾಗಿ ಒಂದಿರು. ಅಲ್ಲಿ ಗಿ ದಿವಾಕರನೆಂಬ ಬ್ರಾಹ್ಮಣನು ಮೊಳಕನಾದೆ ತನ್ನ ಮಗನನ್ನು ಕರೆದು ಆಚಾಕ್ಬರಿಗೆ ನಂದಿಸಿ «, ಸ್ಯಾಮಾ ! ನನ್ನ್ ಮೆನು ಒನ್ಮಾ ಧ್ಯದಿಂದ ಮೂಳನಹಾಗೆ ಇದಾನೆ. ವಿಶ್ರತ್ವಕ್ಕೆ ಭಂಗಒರುವುದೆಂದು ಸಕಾಲದಲ್ಲಿ ಯೇ ಉಪನಯನ ಮಾಡಿದೆನು. ಹುಡುಗರು ಆಟಕ್ಕೋಸ್ವರ ಗದ್ದಲವೂಡಿಳೊಂಡು ಹೋದರೂ, ನನ್ನ ಮಗನು ಹೋಗುವುದಿಲ್ಲ. ಹುಡುಗರು ಮೂರ್ಖನಾದ ಇವನನ್ನು. ನೋಡಿ ಹೊಡ ದರೂ ಇವನು ಕೋಪವನ್ನು ಹೊಂದುವುದಿಲ್ಲ. ಯಾವಾಗಲಾರಕ್ ತನ್ನ ಮನನ್ಸ್ ಬಂದಾಗ ಊಟಮಾಡುವನೇ ಹೊರ್ತು . ಸ್ವೇಚ್ಛಾ ವಿ ಹಾರಮಾಡುತ್ತಾನೆ; ಯಾವಮಾತನ್ನೂ ಆಡುವುದಿಲ್ಲ ` ಎನ್ನಲು ಆಚಾರ್ಸರು «, ನೀನು ಇ) ಫಿ “81 ದ) ಜ ಅಟ್ಟ ಜ ಉ ಈ - == ಜಮ) ² ೭ ಗರಿ \
@ ± ಕಾದಂಬರೀಸಂಗರಹೆ ಯಾರು ? ಯಾರಮಗನು ? ನಿನ್ನ ಹೆಸರೇನು ?ನಿನ್ನನ ಜಾತಿ ಕುಲ ಯಾಳೆ ಜಡನಂತಿರುವಿ ?! ಎಂದು ಆ ಬಾಲಕನನ್ನು ಕೇಳಿದರು. ಅದಳ್ಳೈ ಆ ಬಾಲನು «, ಸ್ವಾಮಿ ! ನಾನು ಮನುಷ್ಯನಲ್ಲ ; ದೇವ, ಯಕ್ ಬ್ಲಾ ಹ್ಮಣ ಹ ಕಿ,ಯ ಕಲಿ ನೂ ಅಲ ಚಾರೀ › ಕ್ಷತ್ರಿಯ, ವೈಶ್ಯ, ಶೂರ್ರರಲ್ಲಿ ಒಬ್ಬ ಬ್ರಹ್ಮ ಗೃ ಲಿ“... ಬ್ರ , @ ವಾನಪ್ರಸ್ಕನೂ, ಸನ್ಯಾಸಿಯೂ ಲಲ್ಲ್ನ , ಅಹಂಬ್ರಹ್ಮಾ ಸ್ಮಿ ` ಎಂಬ ಅದ್ವೆ ನಾನು `? ಎಂದನು. ಅವನ . ಉತ್ತರವನ್ನು . ಕೇಳಿ.. ಆಚಾಕೃರು. ಸಂತೋಷಪಟ್ಟು , ನಿನ್ನ್ನ ಮಗನ ಸನ್ಕಾಸಳ್ಕೆ ಅರ್ಹನು › ಅವನ ತಂಡೆಗೆ ಹೇಳಿ ಅವನಿಗೆ ಸನ್ಯಾಸವಂ ಳೊಟ್ಟು ಆದ್ವೈ ಕರದಲ್ಲಿ ರುವ ಆ ಮಲಕ (ನೆಲ್ಲಿ ಕಾಯಿ) ದಂತೆ ಶೋರಿಸಿದ್ದ ರಿಂ| ಅವನಿಗೆ , ಹಸ್ತಾಮಲಕ ` ನೆಂಬ ನಾಮಧೀಯವನ್ನಿಟ್ಸು ಭಾಷಸ್ಮೋಪದೀಶವಂ ಮಾಡ ಶ್ಮಿದ್ದಿರು. ಹೀಗಿರಲ್ಲು.. ಒಂದುದಿನ, ಪುತ್ರನಾದ ಕಳಾನಾಥನ ಬಂದು =~ ೨ ‹. | ಹೃದಯೇ ಕಲಿಯ ವಿಮಲ ಇರಣವು` ಧೆವ ಶಂಕರಡೀರಿಕ ಮೇ 5೮ಣವು || ೧ || ಕರು ಜಾವಕುಣಾಲಯ ಮಾಮ್ ಧವನಾಗೆರದುಃಖವಿದೂನಹಪೃದಿಮ್ | ರಹಿತಾವಿಲರರ್ಶನತತ್ತ ,ವಿದಮಃ ಧಿವ ಶಂಕರರೇಶಿಳ ಮೇ ಶರಣಮ್ || ೨ || ಛವತಾ ಜನತಾ ಸುಹಿತಾ ಭಎವಿತಾ ನಿಜಒಬೋಧವಿಚಾಕಣಚಾರುಮತಃ | ಕಲಯೇಶ್ವರಜೀವವಿವೇಳವಿದವು` ಭವ ಶಂಕರದೇಶಿಳ ಮೇ ಶರಣಮ್ || ೩ || ², ² ೨೭೨೨ರ ೨% ಸದ್ಪುರು. ಭಳ್ತರು ಈ ಸ್ತೋತ್ರವನ್ನು ನಿಶ್ಯವಾರಾಯಣದೆಲ್ಲಿ ಡುವುದು ಶ್ರೇಯಸ್ಕರವು.
ಶ9ಕಕಕಥಳಾಸಾರ +\& ಧವೆ ಏವ ಛವಾನಿತಿ ಮೇ ನಿಶರಾವತ್ ಸಮಜಾಯತ ಶು ಕೌತುಕಿತಾ | ಮವು ವಾರಕಯ ಮೋಹಮಹಾಜಒಲಧಿಮ್ ಛವ ಮೇ ಶರಣವು || ೪ || ಸುಳ್ಳಕೇ ೨ ಧಿಕೃತೇ ಬಹುಧಾ ಧವಶೋ ಧವಿತಾ ಪದದರ್ಶನಲಾಲನತಾ | ಆಷಿದೀನಮಿತವು೦ ಪರಿವಾಲಯ ಮಾಮ: ಭವ ಶಂಳಕರದೇಶಿಕ ಮೇ ಶಕಣವ: || ೫ || ಚಗಿ:ಕೀಮುವಿತುಂ ವಿಚರಂತಿ ಮಹಾಮಹಸಕೃಲತಃ | ದ್, ಭವ ಶಂಕರಣತಿಕ ಏ ಶರಣವು || ೭ || ನರ ಪಂಗವೆಳಕತನಕೇ ಸಮುತಾ ಮಯಿ ನ ಹಿ ಸುಧೀ | ಶಕರಣಾಗತವತ್ತ್ವಲ ತತ್ತ್ವನಿಊ ೪ವ ಯೇ ತರಣಮ್ || & || ವದಿತಾ ನ ಮಯಾ ವಿ೮ಗೈಕಳಲಾ ನ ಈ ಕ9ಱ5 ಜನ ಕಾಂಚನ ಮಸ್ತಿ | ಗ್ರು)ತಮೇವ ನಪಬಾವು` ಛವ ಮೇ ಶ5ರಣವ್ || ಲೆ || ಎಂದು ತೋಟಳವೃತ್ಶದಿಂದ ಸ್ತುತಿಸಲು ಅವರ್ ಅವನಿಗೆ ಪ್ರಸನ್ನ ರಾಗಿ, ಸನ್ಯಾಸವನ್ನು ಳೊಟ್ಟು, ಶಿಷ್ಕ್ರನನ್ನಾಗಿ . ಮಾಡಿ ಕ್ರೈಎಂಡರು. ಆನಂತರ ಆಚಾರ್ಯರು ಸಳಲ ಶಿಷ್ಯರಿಂದಲೂ ಕೂಡಿ, ವಿಭಾಂಡಳಖುಷಿಯು ಶಪಸನ್ಸುಮಾಡಿ ಋತಕ್ಕಶೃಂಗಮುನಿಯಂ ಪೆಡಿದು ತನು ಮಲ್ಲಿ ಹ್ರಾರ್ಜುನವ ಲಿಂಗರದೊಳ್ಳಿ ಕೃವಾದ ವುಣಳ್ತೆ ಶ್ರವೂ, ಚಂತುಗಳಿಗೆ ವಿರೋಧವಿಲ್ಲದೆ ಸ್ಕ್ರಳವೂ, ವರಾಹದಂತ್ಕ್ಯ_ ದ ಶೃಂಗಾನದಿಯಿಂದ ೬ (ಒಕ್ ² ಈ
ಓಯ್ 4 ಕಾದಂಓನೀಸಂಗ್ರಹ ಬಂದು ಆಳ್ಲಿರುವ ವಿದ್ಯಾಂಸರಿಗೆ ತಮ್ಮ ಭಾಷ್ಠ್ರಗೆಳಂ ಪ್ರವಚನ ಮಾಡಿಸಿ, ಅಲ್ಲಿ ಒಂದು ರಮ್ಮವಾದ ಸ್ಥಳದಲ್ಲಿ ಮನೋಹರವಾದೆ ಡೇದಾಲಯವೆಂ ಕಟ್ಟಿಸಿ, ಒಳ್ಳೆಯ ಸುಮುಹೂರ್ತದಲ್ಲಿ ಮಂಕ್ರತಾಸದ್ರೀಳ್ತಪ್ರಕಾರನಾಗಿ ಬೀಚಾಕ್ರ್ರಗಳಿಂದ ಕೂಷಿದ ಶ್ರೀ ಜಕ್ರವಂ ಒರೆದು ಅಲ್ಲಿ ಶಾರವಿಯನ್ನು ಆಕೆಯನ್ನೆ ನೇಕವಿಧವಾಗಿ ಪ್ರಾರ್ಥಿಸಿ, ವ್ಯಾಖ್ಮಾನ ನಿಹ್ಮಾಸನ ಪ್ರತಿಪ್ತಾ ನಂತರದಲ್ಲಿ, ದಕ್ಷಿಣಾಮ್ನಾಯ ಜಗ ದ್ಗುರು . ಶ್ರೀವುತದ ಶಾರದಾ ಸೀಠದಲ್ಲಿ ಸುರೀಶೃರಾಚಾರ್ಬರನ್ನು ಜಗೆದ್ಗು ರುಸೀತ ಪಟ್ಟಾ ಭಿವಿಳ್ತರನ್ನಾಗಿ ಮಾಡ ಕ್ರೀಮಠದ ಕಾರ್ಯನರ್ವಹಣಕ್ಕಾಗಿ ಶೃಂಗಗಿನಿ ಭಟ್ಟ್ ನೆಂಬ ಮಹಾ ಧೂತನನ್ನು ನಿಯಮಿಸಿದರು. ಆ ರ್ತುಕಇವಾಯಟೀಳಇಮ್ || ಇಕ್ ಸ್ಟ್ ೪ ಲಕ್ ಒನ್ ಫೆ ಗಿನ [ ಳಿಕೊಂರುದಿನ ಸುರೇಶ್ತರಾಚಾರ್ಯೆರು ಆಚಾರ್ಬರಲ್ಲಿಗೆ ಹೋಗಿ ೬.೨ \ \ ಎ - ಪ್ ಇಸಲ್ ಇಳಿಗ್ಗಿ - ಎರ್ತಿ೬ ನನ್ನು . # . . 1 ಟಟೌ ಲ್ | ಆ - ೫ - ೬೨ ಕ ೬58 # [ ಬ \] ನಮಸ್ಕರಿಸಿ, ,, ನಾನು ಭಾನ. ಗಳಿಗೆ ವಾರ್ತಿಕವನು, ರಚಿಸಬೇಳೆಂ ನನ › ನ ಕು ೬ ಆ ² ಈ , ಆ . ಜ ಬಳ ಜರಿ ಕತೆ ಆ 5 ಲೊ ೨೨೫೫೧ ೪ 1 ಪ್ರ ಬಟ್ 1. “ಓ ಕರ್ಢ್ ಆ `ಸ್ಜಿಕ್ @#ಇ® ೪೨ # ೪೪ .. ಜಿಶೇನೆ . ೧.1 [ಬೇ ಈ 1 . ಎಂಡು ೧೯೬೬೩3 ಆಲಾ ×.“ ದಿವೇನೆ ; . ಅಪ್ಪಗೆಯಾ/1ಬೀಕ ಇದು ಪ್ರಾರ್ಥಿಸಲು ಥ್ ಆ ಒ ಬ್ಯು ಕ್ಕು ರ್ಯೆ ಧಿ ಕು ಹನಿಗಿಯೇ ಇದನ್ನು ತಿಳಿದ ಚಿತ್ಸು ರೇ ಮೊದಲಾದವರು ಸಮಾಪಳ್ಕಿ ಹೋಗಿ « ಸುರೇಶ್ವರರು . ಕರ್ಮೆವಾದಿಗಳಷ್ಕೆ. . ಈಗ . ಅವರು. ಮಾಡುವ ವೃತ್ತಿಗ್ರಂಥವು . ಜ್ಞಾ ನಪರವಾಗದೇ ಕರ್ಮಪರನೆಲ್ತಾಗುವ್ರದು ? * . .ಏರಿಬ . ಶೊಈಯಿರುವ್ರದು. ಆದೆ ರಿಂದ ವಿಕ್ಕ್ ವವತಾರಿಯಾದ ಪದ್ಬರವಾದನನ್ನು ವನಿರ್ತಿಕ ಕಣಡನೆಮಾಡ್ಯವಂತೆ ಳ ಬಹುದು ` ಎಂದರು. ಇಷ್ಟರಲ್ಲಿ ಪದ್ಧೃಪಾದಮುನಿಯು ಬಂದು « ನನ್ನು ಭಾಷ್ಠಗಳಿಗೆ ವಾರ್ತಿಳವನ್ನು ಮೊಡ್ಯವಂತೆ ಹೇಳಬಹುದು “` ಎಂದನು.
ಶರಕಕಕಥಾಸಾಕ ತನ್ನ ಲದಲ್ಲಿ ಓರ್ವಸ್ರೀಯು ಹಾ ಡಾನೊಂದು ಟರ, ಕು , ಕ್ರೇಳೆ ಆಚಾಕ್ಕ ಅದನ್ನು ಬಳೆಯ ಹುಡುಗನನ್ನು. ನೋಡಿಕೊಳ್ಳುತ್ತಿರುವಂತೆ ಯಮುನಾನದಿಯ ದಡದಮೇಲೆ ಉಳಿತಿದ್ದ ಒಬ್ಬ ಯೋಗಿಯ ನಶಳ್ಕೆ ಕೆಎಟ್ಟು ತಾನು ತನ್ನ ಗೆಳತಿಯರೊಡನೆ ಎಲ್ಲಿ ಗೋ ಹೋಗಿ ಬರುವಷ್ಟರಲ್ಲಿ ತತ್ನನ ಮಗನು ವೃತನಾಗಿರ,ವ್ರದನ್ನು ನೋಡಿ ಆಕೆಯು ವೃ ನಾಕ್ರಾಂತಳಾಗ್ಯತ್ತಿರಲ) ಆ ಯೋಗಿಯ. ಪರಕಿ»ಯಪ್ರವೇಶವಿದ್ಭಾಬಲದಿಂದ ತನ್ನ ಆತ್ಮವನ್ನು ಆ ಮಗುವಿನ ದೇಸಗೊಳಳ್ಳೆ ನುಗ್ಗಿಸಿರ ಪ್ರಯೆಳ್ತ ಅವಳ ಮಗುವು ನಿರ್ರಿ ದ್ದು ಪ್ರಸಿರ್ರನಾದೀ ; ಇವನು ಸಕಲ ಶಾನ್ರ್ರಜ್ಞನ ನಾದರೂ ಅವಿಜಛನ್ನ ಸವ:-ಧಿ: ಅವನು ವೃತ್ತಿಯ ಅರಣನೆಗೆ ಅರ್ಹನಳ್ಲ . . ಸನಂದನನು ವ್ಯಾಖ್ಯಾನವಂ ಒರೆಯಲಿ `? ಎಂದು ಹೇಳಿ « ನೀನು ವಾರ್ತಿಕವಂ ಮಾಡಬೇಡ ; ನಿನ್ನ ಸಿದ್ಧಾ ನ್ತಜ್ಞಾ ನಶ್ರಕಾಶಗ ಳಾದ ಸ್ವತಂತ್ರಗ್ರಂಘಗಳಂ ರಚಿಸಿ 11 ಎಂನು ಸುರೇಶ್ತರಂಗೆ ರಪಸ್ಳದಲ್ಲಿ ಹೇಳಲು ಅವರು ಅದರಂತೆ : ನೈಸ್ಕ್ರರ್ಮ ನಿಸಿರ್ದಿ ` ಯೆಂಬ ಸೃತ್.ತ್ರಗ್ರಂಥವನ್ನು ರಚಿಸಿ ಗುರುಗಳೆ ಗರ್ನಿಸಲು ಅವರು ವುತ್ತು ಆದನ್ನು ನೋಡಿ ಸಂತುಷ್ಕರಾದರು. ಬಳಿಕ ಸುರೇಶ್ವರರು « ಈ ಭಾತ ಕ್ಲೆ ಇನ್ನು ಯಾರು ವಾರ್ತಿಕವನ್ನು ಬರಿದರೂ ಅದು ಪ್ರಚಾ ರಳ್ಳೈ ಬಾರವೀಹೋಗಲಿ “ ಎಂದು ಶಾವವಿತ್ತರು. ೮ನಂಶಕರ ಶ9ಕರದೀಕಿಶತರು , ನನ್ಟ್ನದು ಯುಯಶ್ಶಾ ಟೆ ; £ನ್ನ ದು ಕಣ್ನ ಆ . ರಠಡರ ಭಾಷ್ಯತ್ಯೂ , ನಿವೆರಣ, ವಾರ್ತಿಕ ` ಗಳೆಂಬ ಗ್ರಂಥಗಳನ್ನು ರಚಿಸು ` ಎಂದು ಳ ಗೆ . ಇಂ ) \ {& ಅಸ್ಟ್ಜ್ಗೆ \ ಸ ತ್ತಿ ಗಲ್ ಕಲ್ ಗಚ . . 94+ $5. ಗರಿಗೆ *.೧ಹಣ್ಸನ್ಗೈ . ಪದ್ಭ್ರವಾದರು ಅಪ್ಪುಗೆಯಂತೆಯೇ ಬರಡು ಭಾಗಗಳುಳ್ಳ ಟೀಕೆಯಂ ಒರೆದರು. ಅದರಲ್ಲಿ . ಪಂಡವಾದಿಳೆಯೆಂತಲೂ ಉತ್ತರ ಭಾಗವು ವೃತ್ತಿಯೆಂಕಲೂ ಪೆಸರುಹೊಂದಿ ವಿಜಒಯೆಡಿಂಡಿಮವೆನಿಸಿದವು. ಆಚಾರ್ಬರು ಬರಡು ಕೇಳಿ .. ಕೂರ್ವೆಭಾಗವಾದ ಪಂಜವಾ ಜೆನ್ನಾಗಿದೆ ; ಮತ್ತು ಅದೇ. ಫ್ರಪಂಚವಲ್ಲಿ ಪ್ರಖ್ಯಾಶವಾಗಿ ನಿಲ್ಲುವುದು. ಮುಂದಡಿ ನೀನು ವಾಚಸೃತಿಯೆಂಬ ಪೆಸಂನಿಂದ ಧೂವಿ.ಯಋಲ್ಲದೆತರಿನಿ ನನ್ನ ಭಾಷ್ಠ್ಯಕ್ಕೆ ಟೀಕೆಯನ್ನು ಕಚಿಸುವೆ ; ಲದು ಶಾಶ್ಯತವಾಗಿ ನ್ನು ವ್ರದು “` ಎಂದು ಹೇಳಿದರು. ಖ) ನ (ಕ್ರೌ ಬಳಿಳ ಡದೇಶಿಕರು ಉಳೆದ ತಮ್ಮ ಶಿಷ್ಕ್ಯರಂ ಹರೆದು « ನಿಮ್ಮ ೭ಮ್ಮ ಯೋಗ್ಳ ತಾನ„ಸಾರವಾಗಿ ಅದ್ವೈತಗ್ರಂಥ ಳು ರಚಿಸಿರಿ`` ನಂದಾಜ್ಞಾನಿಸಲು ಅವರು ಅದ ರಂತೆ ಗ್ರಂಥಗಳಂ ರಚಿನಿ ಗರುವಿಗರ್ಷಿಸಿದರು. ಈ ಪ್ರಕಾರವಾಗಿ ಆಚಾಕ್ಸಬರ, ಜ್ಞಾನಮಾರ್ಗ ರ್ರಜಾರವೂಡುತ್ತಿದ್ದರು. ಕ್ ಓಜ್ ಒ
೪೬, ಕಾದಂಬರೀಸಂಗಿಹ ರಿ ಪ್ರಾಬ್ತೇ . ಸ್ಕಿ“ ತೀಥˆಯಾತ್ರಾಮಟತಿ ತದನು ಸ ಸ್ನಾಜ್ತಯಾ ಪದ್ಮ ಪಾದೇ ಪ್ರಾ ದುರ್ಭೂತೋ ಜನನ್ಕಾ! ಸ್ಕೃತಿಮನುವಿದಧತ್ ಸಂಸ್ಥಿ ತಾಯಾ! ತಬ್ಗಾ__ಮಾಣಾಂಕ್ತರ ಶವ್ಶಾ_ವ ಸಮುಚಿತವಚನಾನಧ್ವನೀನಾನಥಾ 5 ಯಂ ಗ್ರನ್ಫಾ೧“ ಪ್ರಾಜೀಕಟಕ್ಕೀರಳವರವುಹಿಧೃತ್ಸದ್ಮವಾದ ಫ್ರಣೀತಾಃ˜ | ೯ಟಲ ‡ ಟ್ತ ;; ೨೯೬ ಓ ;“. * * \\ ಅ $ ನಂತರ ಪಡ್ಭಪಾದರು ಆಚಾರ್ಕರನ್ನು ಕುರಿತು. , ಸ್ವಾಮಾ ತೀರ್ಥ ಯೆಳ್ರಗಳಾದ ದೇಶಗಳನ್ನು ನೋಡಬೇಕೆಂದಿಚ್ಛೆಯುಂಟಾಗಿದೆ; ನಿಡ್ಠ, ಗ: 1 ಅನುಜ್ತಿಯಾಗಬೇಕು “` ಎಂದು ಪ್ರಾಥ್ಸಲು ,, ಗುರು ಯೆಕ್ರಗಳಾದ ದೇಶಗಳನ್ನು ನೋಡಬೇಳೆಂದಿಚ್ಛೆಯುಂಟಾಗಿದೆ); \ ;“. ಅನುಜ್ತ.ಯಾಗಬಲಳಕು “` ಎಂದು ಪ್ರಾರ್ಥಿಸಲು ,, ಗುರು ಗಳ . ಸಮಾಪದಲ್ಲಿ ಮಾಡಶಕ್ಕೆ ವಾಸನೇ ಕ್ಲೇತ್ರವಾಸವು, ಅವರ ವಾಡೀದಕವೇ ತೀರ್ಥವು; ಗುರೂಪರೀಶದಿ-ದ ಹೊಂದಲ್ಪಟ್ಟ ಆಕ್ಷ್ಯದೃ ನಯೇ ಸಕಲ ದೇವತ್ತಾ ದರ್ಶನಾದಿಗಳು ` ಎಂದರು ಹಳಿ. ಅವನ ಮನಸ್ಸು ತೀರ್ಥ ಯಾತಕ್ರೆಯಮೇಲಿರುವುದನ್ನು ತಿಳಿರು ಅನುಭೆವಿಸಿಯೇ ತೀರಿಸಬೇ ರೆಂಬ ಅನೆಕ ಉವೆದೇಶವಂ ಮಾಷಿ ಬೀಳ್ಲಿ ವ ಕು. ಇತ್ತ ಆಚಾರೈರು ಸುರೇತ್ಕರಾದಿಗಳೊಡ್ನ ಇರುತ್ತಾ ತಾಯಿಯಾದ ಆರ್ಯಾಂ ಬೆಯ ಸ್ಮರಣೆಯನ್ನು ಆಶ್ಮಯೋಗಸಾಮಧೈದಿಂದ ತಿಳಿದು, ಈ ವಿಷಯವನ್ನು ಶಿತ್ರ. ರಿಗ ತಿಳೆನಿ ಅಂತುಕ್ತ ಮಾರ್ಗದಿಂದ ಬಹು ಜಾಗ್ರತೆಯಾಗಿ ತಾಯಿಯ ಸಾನ್ನಿ ವನ್ನು ಹೊಂದಿದರು. ಆಗ ತಾನು ರೂರ್ಣಾನದಿಯಲ್ಲಿ ಸ್ಕಾ ನಮಾಡಬೀಕೆಂದೂ, ಹೋಳು ಹೇಳಲು ಆಚಾಢ್ಳರಃ, ತಮ್ಮ ಆ ನದಿ ಯನ್ನು ತಮ್ಮ ಮನೆಯ ಸಮಿಪಕ್ಕೆ ಕರೆರುಳೊಂಡುಬುದರು. ಇಷ್ಟರಲ್ಲಿ ಯೇ ಸ್ತಿ ತಾಯಿಗೆ ಅಂತ್ಯ ಕರ್ಮವನ್ನು ತಾವೇ ಮಾಡಬೇಕೆಂದು ಯೋಚಿಸಿ ತಮ್ಮ ಬಂಧುಗಳನ್ನು ಆರರ ಯಲು ಅವರು ಯೆತಿಗಿ ಕರ್ಮಾಧಿಕಾರವಿಲ್ಲ ದಕಾರಣ, ತಾವೊಬ್ಬರೂ ಬರುವುದಿಲ್ಲ ವೆರದು ಹೇಳಿದ್ದಲ್ಲದೇ ತಮ್ಮ ಮನೆಗಳಿಂದ ಬೆಂಕಿಯನ್ನು ಕೂಡ ಕೊಡಲಿಲ್ಲ. ಇದನ್ನು ನೋತಷಿ ಆ ಚಾರ್ಯರು ತಮ್ಮ ಒಳಗೈಯಲ್ಲಿ ಅಗ್ನಿಯಂ . ಮಥಿಸಿ ತಾಯಿಯಃ ವಾಸವಾಗಿದ್ದ ವನೆಗೇ ಅಗ್ನಿ ಶ್ರತಿತ್ಕಾ ಪನೆಯಂ ಮಾಡಿ, ಅನಂಶರ ಆ ಅಗ್ರೆಹಾಂದವಂನ್ನು ,, ಇಲ್ಲಿಂದ ಮುಂದೆ ನೀವು ವೇದಟಾಷರಾಗಿ ಯತಿಗೆಳಿಗೆ,
ಶಂಕಕಕಥಾಸಾರಕ \²7- ಭಿಕ್ಸ್ಗಳೊಡಲು ಅಯೋಗ್ಯರಾಗಿನಿ; ನಿಮ್ಮ ಹಿತ್ತ್ರಲುಗಳೇ ಸ್ಕೃಶಾನಗಳಾಗಿರಲಿ ²? ಎಂದು ಶವನಿಸಿ, ತಾಯಿಗೆ ಮುಕ್ತಿಯಾಗುವಂತೆ ದೈವಾನುಗ್ರೆಹೆಮಾಡಿದ್ದರಿಂದ ಅವಳು ಮುಳ್ರ ಜಾ ನಳ್ಳು ಆತಾಕ್ಬರ ವಚನವು ಅಮೋಘವಾದ್ದರಿಂರ ಕಾಲಟ್ಳಗ್ರಹಾಕದವರ ಅಚಾ ಕವು ಆಚಾಕ್ಕರ ಕಾಪದಂಕೆ ನೆಲೆಗೊಂಡಿತು. ಅತ್ತ. ಪದ್ಮ ಪಾದರು ಕಾಳಹಸನ್ತಿಶ್ವರನನ್ನು ಸೀವಿಸಿ, ಸುವರ್ಣಮುಖಿಯಲ್ಲಿ ಸ್ನಾನಮಾಡಿ, ಕಂಚಿಗೆ ಬಂದು ಡೇವ ನೇದೆಯಂ ಮಾಡಿ, ಅಲ್ಲಿ 9ದ ಹೋಗಿ ನಟರಾಜನನ್ನು . ಸ್ತುತಿಸಿ, ಅಲ್ಲಿ ಶಿವಗಂಗಾ ತೀರ್ಥವೆಂಬ ತೀರ್ಥವನ್ನು ನಿರ್ಮಿಸಿ, ರಾಮೇಶ್ವರಳ್ಕಿ ಹೊರಟು ದಾರಿಯಲ್ಲಿ ಸಿತ್ತಿದ, ಪೊರ್ದಾಶ್ರಮದ ಸೋದರ ಮಾವನಾದ ಭಟ್ಟ ವಾದರ ಶಿಷ್ಠನಿಂದ , ಆದಿ ಅಲ್ಲಿಯೇ ಇದ್ದು ಫಿಳ್ಟೈ ಯಂ ಸ್ವೀಳರಿಸ ಬೇಕು. ` .ಎಂದು . ಬಲಾತ್ತರಿಸಲ್ಪಟ್ಟವರಾಗಿ, ಅಲ್ಲಿಯೇ ನಿಂತು, ಸೈರಚಿಕಗಳಾದ ಗ್ರಂಥಗಳನ್ನು ನೋಡಿ ದಾದೆಳ್ಳಿ ಬಂದೆ ಸೋದರಮಾವನನ್ನು ಸೋಲಿಸಲವನು : ಪದ್ಮ ಪಾದನ ಗ್ರಂಥಗಳನ್ನು ಹೀಗಾದರೂ ನಾಶಮಾಡಬೇಕು ` ಎಂದು ಯೋಚಿಸುತ್ತಿದ್ದು, ದೈವೆಯೋಗದಿಂದ, ಪೆದ್ದ ವಾದೆರು ಗ್ರಂಥಗಳನ್ನು ಅಲ್ಲಿ ಯೇ ಇಟ್ಟು, « ತೀರ್ಥಯಾತೆ ಮಾಡಿಳೊಂಡು ಬರುವಾಗ ತೆಗೆದುಕೊಂಡು ಹೋಗುತ್ತೇನೆ, ಎಂದು 5೫ ರಾಮೇ ಶ್ವರಕ್ಕೈ ಹೊರಟು ತೀರ್ಥಯೊತ್ರೆಯೆಂಮಾಡಿ, ಅಲ್ಲಿನ ಒನರಿಗೆ ಅದ್ವೆ ಕ್ಟಿತತತ್ತ್ವವನ್ನು ಪ ದೇಶಿಸಿ ಹಿಂತಿರುಗಿ ಸೋದರಮಾವನ ಬಳಿಗೆ ಬರುವಾಗ್ಮಿ, ಅವನು ತಾನು ಅಪವಾದಕ್ಕೆ ಸಿಕ್ಟ್ರದ ಹಾಗೆ ಫುಸ್ತುಕಗಳನ್ನಿಟ್ಟಿದದ ಮನೆಗೆ ಬೆಂಕಿಯನ್ನು ಹತ್ತಿಸಿ ಎಲ್ಲ್ ವನ್ನೂ ಭಸ್ಕ್ರಮಾಡ್ರಿ. ಪದ್ಮ ವಾದರ ಎದುರಿಗೆ ನನ್ಷ್ನ. ಮನೆ ಸುಬ್ಬುಹೋದುದಕ್ಕಿಂತ ಸುಟ್ಟು ಹೋದ ನಿನ್ನ ಫುಸ್ತುಕಗಳಿಗೆ ಒಪಳವಾಗಿ ವೈಸನಪಡುತ್ತೇನೆಂದು ಹೇಳಿದ ಸೋದರ ಮಾವನ ಮಾತಿಗೆ ಅನುತಾಪಗೊಂಡರೂ, ರೈರ್ಕದಿಂದ ಈನಃ ` ಆ ಗ್ರಂಥಗಳಂ ರಚಿಸು 77೬ ಲ್ಸ್ ² ಕತ್ತಲ ೯ ನ್ ಣ ೧೧೧ ೧೬ ೧೨೪೭ ಒ ೨4, ಆಜ ! ಯತಿಗೆ ಕರ್ಮಾಧಿಕಾರವೆತ್ತಐದು, ಆಚಾರ್ಯರಿಂದ ವಾಡಲ್ಫಟ್ಟ ಮೂತೃವಿನ ರ್ಮವು ಅಶಾಸ್ತೀಯವಲ್ಲ ವೇ . ಎಂಬ ಸಂದೇಹವು ವಾಚಕರ ಮನನ್ಸಿನಲ್ಲು ಶ್ಲನ್ನ ವಾಗಒಹುದು. ಪರಶುರಾನುನ್ನು ಮಾಶೃವನ್ನು ತಂದೆಯ ಆಜ್ಲೆಯಿಂದ ಕೊಂಡರೂ ಹೇಗೆ ರೋಷವನ್ನು ಹೊಂರಲಿಲ್ಲ ವೋ ಹಾಗೆಯೇ ಸನ್ಯಾಸಕಾಲರಲ್ಲಿ ಶಂಕರರು ವೂಡಿದ್ದ ವಾಗ್ದಾ ನರಿಂರಲೂ, ರೇಹಾಂತ್ಯ ದಲ್ಲಿ ಆಕೆಯು ಅಪೇಕ್ಸಿ ಸಿದ್ಬ್ರನ್ನು ನೆರವೇರಿಸಿ ಮಾತ್ಪ್ರವಿನ . ಋಣವಂ ಪರಿಹಸಿಕೊಳ್ಳುವುದು ಧಮವಾ ದ ರಿಂದಲೂ ದೇಶಿಕರು ವೂಡಿದ್ಸು ಸೆಶಾನ್ಸೀ`ಯವಲ್ರ ರೇ ಅಕಾಸ್ತೀಯವಲ್ತ ವು. & ಎ ಆ% ಇ ಈ೩, 1 ಕಾಪವು ಶ್ರೀ ಶ್ರಿಂಗೇರಿ ಷೀರಾಧ್ಯಕ್ಸ್ನ ರಾಗಿದ್ದ ಶ್ರೀ ಸೆಚ್ಚಿದಾನಂದ ಶಿವಾಭಿನವ ವಿದ್ಮಾನ್ ಸಿಂಹಭಾರತೀ ಸ್ಟಾಮಿಗಳಿಂದ ವಿಮೋಚನೆ ವೂಡಲ್ಪಟ್ಟಿ ಶು.
೪ಲೆ ಕಾದಂಬರನೀಸಂಗ,ಹ ವೆನೆನ್ನ ಲು, ಸೋರರಮಾವನು ಅಸೂಯೆಂರ ಪದ್ಧ ಪಾದರಿಗೆ ಭಿಕ್ಟಾನ್ನ ರಲ್ಲಿ ಮದ್ದು ಹಾಕಿ ಬುದ್ಧಿ ಯು ಕೆಡ,ವಂತೆ ಮಾಡಿದನು. ಅನಂತರ ಪದ್ಧವಾದಿರು ಅವೇ ಚಿಂತೆಯಿಂರ ಕೇರಳವೀಶದ ಬಳೆ ಮಹಾಸುರಾಯದಲ್ಲಿದ್ದ ಗುರುಗಳ ಬಳಿಗೆ ಬಂದು, ತವ್ನು ಸಂಕಟವನ್ನು ತಿಳಿಸಲವರು . ನಿನಗೆ ನಾನು ಸುರೇಶೃರರಿಗೆ ಮೊದಲ್ಲೇ ತಿಳಿಸಿದ್ದಿ ; ಕರ್ಮಗತಿ ಯನ್ನು ಮಾರಲು ಯಾರುತಾನೇ ಶಳ್ತರು ? ನಾರು ಕೇಳೆದ್ದಷ್ಟು ನಿನ್ನ ಗ್ರಂಥವನ್ನು ಹೇಳುವೆನು ` ಎಂರು ಹೇಳೆ ಪೆಂಚನಾದಿಕೆಯಂ ಬರಿಯಿಸಲು ಪದ್ಮ = ಆಕ್ ದರು ಅಷ್ಟ್ಳ್ರೇ ತೃಪ್ಶರಾದರು. “ಶನದಾದಿಮೇಲೆ ಕೇರಳಯಶದ ರಾಜನು ಗುರುದರ್ಕನಳ್ಳು ಇರಲು ಶಂಆರರು ‹ ನೀನು ಬರೆದಿದ್ದ ಮಖರು ನಾಟಕಗಳೂ ಪ್ರಚಾರೆಳ್ಳ ? ಬನ್ಟ್ನಲು, ಅವು ಕತಿರಕಣಾಂತರದಿಂದೆ ಸುಟ್ಟು ಹೋದವನು ` ಐಂರು . ವೃಸನದಿಂದ ನಿರೂನಿಸಲು . ಶಂಕರಡೀಶಿಕರು ತಾವು ಭಾಗವನ್ನು ಈ“ . ಒರೆಯಿಸುನೆವ್ರು ` ಎಂದು ಹೇಳೆ, ತಾವು ಳೇಳಿದ್ದತ್ಟು ಭ ಗವನ್ಶ್ನ . ಆಗ ಒ೭೨೩ ಕಳುಓಸಿದಿರು. ~~×-೪-~~ 4 ಲ್ ಳ ದ್ವಾದಕವಲ್ಲ್ಗರಿ: ಅಫಾಚಾರ್ಯಃಶಿಷ್ಠಿ ಈಥಾವಾಡಿರ್ಯಳ್ಳೈರ್ನಿಗವನಗೋಪಾನಪಛಿಳ್ಳ! | ಪ್ರಥಾಭಾಜಸ್ಶಾಳ್ತಕ್ತ ಐಣಕಳಕವಾಲ್ಕಾದಿವಿಮತಾಕ˜ ಕಫಾಶೀಷೀಕೃತ್ಯಾದ್ವಯಮತಮುಪಾಬ್ರಹ್ಮೆಯದಖೋ || ಅಚಾರ್ಗಂಕೃತದಿಗ್ಜಯವರ್ಣನಫು. ಸ್ ಹ್ ಇ ೨ % ಅ | . ನಂತರ ಕ್ರೀಮಡ್ಛಂಕರಭಗವತ್ಪಾದರು, ದಿಗ್ವಿ ಜಯವಂ ಮಾಡ ಬೇಳೆಂದು « ಪದ್ಮ ನನ್ ಸೆನ ಒಳಳಂದು « ಪದ್ಮ ಪಾದಾಚಾಕ್ಕರು, ನಮ್ಮನೆ. ಜ್ಞಾನಕಂದಾ
ಗೆದ್ದು ಅವರನ್ನು ಅದ್ವೆ ತಿತಿಗಳನ್ನಾಗಿ ರೆದುರಿಗೆ ವಾದಕ್ಕೆ ನಿಲ್ಲಲು ಅವರನ್ನು ಶ್ರುತ್ಯುಕ್ತಶ್ರಮಾಣಗಳಿಂದ ಅಲ್ಲಿ ಗಿನಿಬಾರ್ಚಾರತರಾದ ಕಲವಕು ಬಂಗು ಆಚಾರ್ಯ ೪೨5 ,ವುತಖಂಡನವು. ಈಸ್ವರನಂತೆ ಆಚಾರ್ಕರು ಶಿಷ್ಮಸಹಿತರಾಗಿ ರಾಮೇಶ್ವರಳ್ಳೆ ಹೋದರು. ಹೀಗೆ. ಆ ದೇಶದವರನ್ನು ಅದ್ವೈ ತಿಗಳನ್ನಾಗಿ ಮಾಡಿ ಪ್ರಮಥಗಣಯುಳ್ತನಾದ ಆದರು. ಯಜ್ಜ್, ಪರಾಯಣರಾಗಿಯೂ, ಶ್ರುಶ್ಸುಳ್ತಕರ್ಮಾ ನಿಯಾಯಗಳಾಗಿಯೂ, ಹುದ್ಧಭಾ ದ್ವೆ ಕಿತ ಅಡ್ಮುತ,) ರೂಜಾರತರಾಗಿಯೂ, ವ್ರಿತನಸ್ನಿನಾದಿಗಳಂದ ವಿಹುದ್ಧರಾಗಿಯೂ, ಪಂಚ ನನ್ನೇ ಸದ್ಗುರುವನ್ನಾಗಿ (ಪಂಚ ಉಮಾ, ಗಣಪತಿ, ಈಶೃರ, ಸರ್ಯ, ಅನಂತರ ಆ ರೇಶದಲ್ಲಿದ ವರೂ ಮತ್ತು ಆ ಜವರ ಧಕಳ್ತರಎ ಕ್ರೀ ೨5೪ರ ಇ ಈ ವಮಹದ್ಕಾ.ಪಾರವೆನ್ನು ನೋಯಿತ್ತಿದ್ದ ಟಷಳವಾದ ಆಶ್ರರ್ಯ ೧5೩ 5೧ ಹಮ ನ್ರ - 5 5 5 55 5೯55 5೬7 55 ® 550 55 584 5 ~² 8% * * ಫ್ಲೈ ಬ ಅಗ್ಮೆಯನ್ನು ಮೇಕೆ ತ್ತಿ ಗಂಧಿ ! ಶಶಿ. ಗಂಥಿರೆದಾದೆ ವೊತಿನಿ ತಿನಿತದೆ «, ಸತ ಮೆಡ್ರೆ \ತಂ `? £ ಮಡ್ವೈ 5 `? ಎಂದು ‰. ಈ#೫ ರನು ಮಧ್ಯಾಒ:˜ನಶಲಿಂಗೆದಿ9ದೆ ಸೌ ಕೊಟು ತನ್ನ “ಬ್ರ $ . ನ್ ಟ್ಛೆ ಟೆ ಗೋಡರವಾದ ಅದಿ ದು ಡ್ರೆ / , ಗ್ರೈ ತವೇ ? ಅಧವಾ ಅರ ತವೇ ? “² ಎಂದು ² ಯ 9 ಪ್ರುರ್ಥಿಸಲು, ಶ್ವರನನ್ನು ಪೂಜನಿ « ಸಾಮಿ ! ನೀನ್ ನಿಗಮೌದಿ ತಾತ್ಪರ್ಯ ದಾರಿಯಲ್ಲಿ ಆಚಾರ್ಯರು ಮಧ್ಯಾಜುನಳ್ಲೇತ್ರಕ್ಕೆ ಬಂದು ಮಧ್ಭಾರ್ಜುನೇ ಕೂಡಿ ಸುಧನ್ವ ರಾಜನಿಂದ ಹಿಂಬಾಳಿಸಲ್ಪಡುತ್ತಾ ಮೊದಲು ನೀತುವಿನ ಕಡೆ ಹೊರಟರು, ಶುದ್ಮಭಾ ` ` ಇತ್ಕಾದಿ ಚಾಕ್ಕರು, ಒಳಳಕನಾಥಾಚಾ ಮುನೀಶ್ವರಾಚಾರ್ನ್ರರು, ವಿವಾಕರಾಚಾರ್ಬರು, ಲಕ್ಷ್ನ ಣಾ ಪಾದಾಚಾತೃರು, ಒತ್ಸು ಖಾಚಾರೈರು, ಶುದ್ಭಾಂತಾಚಾರ್ಳರು, ಭಾನುಮರೀಲ್ಕಾಚಾರ್ಬರು, ಬುದ್ಧಿ ವಿರಿಲಚಿ ಚಾಕೃರು, ಚಿದ್ವಿಲಾಸಾಚಾಕ್ಕರು, ಶುದ್ಧ ಕಳ ಕರಳಥಾಸಾರ {$೪೪
\೫6 ಕಾದಂಬರೀಸಂಗ್ರಹ ಅನಂತರ ಶಾರದೋಪಾಸೆನೆಯಲ್ಲಿ ಆಸೆಳ್ತರಾರ ಕೆಲವರು ಫುಸ್ತ, ಶಕಾಗಿ ಬಂದು ಆಚಾಕ್ಬರನ್ನು ಹ್ರುಧಿಶು «, ಸ್ಮ 1 ವೇದಳ್ಳಿ ನಿತೃತ್ಯವಿರುವುರರಿಂದ ಶಾಕದೆಯೂ ನಿತೃರೂಪಿಣಯೆಬ; ಅವಳೇ ಶೋಕಕ್ವೆಲ್ಹೌ . ಕಾರಣಘೊತಳು; , ಪ್ರಣೋ ರೇವೀ ಸಕಸ್ತೃತೀ 1 ಎ6ಬ ಶ್ರುತಿಯೆಂತ ಬುದ್ದಿ ಕೊಡಲ್ಪಡಬೀಳು; ಸಳಲ ಗುಣಗಳಿಂದ ಕೂಡಿರುವ ಅವಳು ಮುಳ್ಳು ಗಳಿಂದಲೂ ಸೀವಿಸಲ್ಪಡಲು ಅರ್ಹಳು. ಆದ್ದರಿಂದ ನೀವೂ ಅವಳ ಉಪಾಸನೆಯನ್ನು ` ಬನ್ನೈ ಲು . ಅಚಾರ್ಳಕು , ಬಲ್ಳೈ ಜನರೇ | ಕಂಠತಾಲಶ್ತಾದಿಗಳ ಸಂಗಮದಿಂದ ಪುಟ್ಟಿದ ವೇದಳ್ಳೆ ನಿತೃತ್ವವು ಹೇಗೆ ? ವರ್ಣಮಾತ್ರಳ್ಳೋ ಅಧವಾ ವಣˆ ಸಂತತಿಗೆ ನಿತ್ತ ಹೊರ್ತು ವೇದಳ್ಳೈ ನೆಟ್ನ ಸ 000 ಹಚ್ 17 ೨05೩೨ ಓ 4 ನಿಶೃತ್ತವಿಲ್ಲ ; ಸ್ಟ್ಬಕಸಲ-ಲ್ಲಿ ಮಪರ್ಷಿಗಳಿಗೆ , ಅಂಗಸ ಹಿತವಾದ . ಯುಗಾಂತ್ಸದಶ್ಲಿ . ಪ್ರಳಯ್ಯೆವ್ರ . ಎಂದು . ಹೇಳಿರುವನು.“ ನಿಂದ್ ಸೂರ ಸಿದ್ದಾಂತೆದಲ್ಲಿದೆ ಸೂರ.ನಿಂದ . ಪ್ರಳಯವನ್ನು ಹೊಂದಿದ ಶಾರ _) ಆ ಕಟ್ ಜ್ಕೆ ದೆಗೆ ಹೇಗೆ ? ಆದ್ದುಂದ ವಿಕ್ಲೆ ನುˆ ಬೇರೆ ಅಲ 11 ಅವನ ಲೋಹಿಸ್ಮಿ . ಆದೆಲೆ: ರಾರ ಅದ್ವೈತಿಗಳನ್ನಾಗಿ ಮೂಡಿ ವಾರೆ ನ9ತ3 ವ»ಮೊಚಿ»ರಂಕನ್ನು ಮಾಣಗೆಳಿ9ಗರ ಸೋವಿ, ಅಗೆಲಿಗಳಿಸ್ಲಿ ಮಾಡಿಸಿ, ಕ್ರೀರಾಮ ನಿ-ದ ಪ್ರತಿಷ ತವಾರೆ ರಾಮೇಶುರಲಿಂಗವನ್ನು ಕಮಲ, ಪನಿಖುಯೆನ್ನು ಗೊ ಡಿಸ್ತಿ ಪಾಂಡೈರನ್ನ ಒ ೬ ಅ ಮನ್ರೊ , ದ,ವಿಡಕನವಿ , ಸ ಹೆಸ್ನಿಣಔವೆˆತಈ, ತಟ ಯೇಕಿಣಾಗೊತ ನ“ ಕ್ರಿಸ್ ಒಕ್ರ“ ತೆಂಗ್ # == ಈ ಹ ಇಶ , ವಾಗ ಕಾಂಚಿ‹ನಗರಳ್ಳ ಪ್ರಯಾಣದೊಡಿದರು ೪ |6±ನ = ^ ಪನೆ. ಆಚಾರ್ಳರು ಕಂಚೆಯನ್ನು ತಲಪಿದಮೇಲೆ ಸಶಿಷ್ತ ರಾಗಿ ಒಂದು ಜಗುಲಿಯ ಮೇಲಿ ಕುಳಿತಿರಲು, ಆ ಮೆನೆಯ ಯುಎಮೊನನು ಒಂದು ‹, ಸ್ಯಾಮಿ ! ಸಾಯಂಕಾಲ ದಲ್ಲಿ ಇಲ್ಲಿ ರಬೀಡಿ, ಎಳೆಂದರಿ ಈ ಊಲನ ಅತಿ ಇವ್ರಿರಳು } . ಸಾಯಂಕಾಲವಾಡದನ್ಯೇಲೆ ಆಕೆಯು ಬೀದಿಯಋನ್ನೆಲ್ಲಾ ಸತ್ತಿ ಸಿಕ್ಕಿದವ ರನ್ನು ; ಆಡ್ರರಿಂಡ ತಾವು ಎಲ್ಲಿಯಾದರೂ ದಯಮಾಡಿ “ ಎಂದು ಹೇಳೆ ಜೊನರಕಟೋಗನು. ಆದಿನ ಸಾಯಂಕಾಲವಾಗುತ್ತಲೂ, ಆಚಾಕ್ತರು ಸ್ಥಕರ್ಮಾನಂತರ ಶಿಷ್ಯರ ನ್ನೆ ಲ್ಲಾ ಮಲಗಿಕೊಳ್ಳುವಂತೆ ಹೇಳಿ ತಾವು ಓರ್ವರೇ ಎಚ್ಚರವಾಗಿ ಕುಳಿತಿದ್ದರು ;
೫ ಸುಮಾರು ಅರ್ಧರಾತರೆಯ ಸಮಯದಲ್ಲಿ ದೇವಿಯು ಬಹಳ ಆರ್ಭಟವನ್ನು ಮಾಡಿ ಕೊಂಡು ಬಂದು ಜಗುಲಿಯಮೇಲಿರ, ಆಚಾಕ್ಕರನ್ನು ನೋಡದೆ ಹೊರಟಳು., ಆಗೆ ಆಚಾರ್ಳರು ಆವಳ ಹಿಂದೆಯೇ ಹೊರಕಳರು. ದೇವಿಯು ಊರನ್ನೆಲ್ಲಾ ಸುತ್ತಿ ಸಿಲ್ಲಿಯೂ ಯಾರನ್ನೊ ಕಾಣದೆ ದೇವಾಲ ಯದೆ ಹೊರಬಾಗಿಲಿನಲ್ಲಿ ನಿಂತಳು. ಆಗ ಶಂಕರರು ಆಳೆನಿ ನಮೆಸ್ಟರಲಸಿ ನಿಲ್ಲಲು ಆಕೆಯು “{ ನಮ ಯೊಕು ? ಏನಿಳಕಒಬಂದೆ ? ನಿನ್ಟನನ್ನಾರು-ರಖೀಳಿದರು? “ ಬನ್ನೈ ಲು ದೇಶಿಕರು « ಮಾತಃ | ನಾನು ನಿನ್ನಮಗನು ; ಇ‰˜ ಗೆ ನಾರಇಗಿಯೇ ಬಂದೆನು ; ಲೋಳರಕ್ಸ್ಗಳಳಾದ ನಿನಗಿ ಶ್ರಜಾಹಿಂಸಿಯು ಯಂಳಳ್ತವಲ್ಲ ; ^ ಅದಳ್ಳೆ ದೇವಿಯು ಸೃಲ್ಳ 599ತಳಾಗಿ , ಎಳ್ಳೈ, ನೀನು ಹೇಳುವುದು . ಆದರೆ ಈ ಊಳಿನನು ನನಗೆ ಸಂಪೂರ್ಣಾಹಾರವನ್ನು ಳೊಡರ “ ಎನ್ನಲ್ಮ . ಶಂಳ ರರ್ರು « ಅಮ್ಮಾ ! ನೀನು ಜನಗಳಿಂದ ಜೀಕಾವಷ್ನು. ಆಪಾರವನ್ನು . ತರಿಸಿಕೊಂಡು ಶೃಪ್ತರಳಾಗಬೇ ವಿಸಪಾ ೬ “.. ಎಂದು ಹಳೆ, ಪೀಠ ದಮೇಲೆ ಹ್ಲೊ.\ ೩-3 ದೇಖಯ ಪಾವರ ಸಮಾಪದನಲ್ಲಿದ್ದೆ ಕುಂಕುಮವನ್ನು ಜೆಲ್ಲಿ ಶ್ರೀ ಡಳ್ರವಂ ಬರೆದು ಹಿಂತಿರಿಗಿ ಒಂದರು, ಮರುದಿನ ಆ ಅಗ್ರಪಾರಿಕರು ಆಚಾಕೃರಿಗೆ ವಂದಿಸಿ ರಾತ್ರಿ ನದ ವಏಸಯವನ್ಯ ತಿಳಿದು ಆಚಾಕ್ಬಲಗ ನೆಂಡಿನಿದರೆ. . ಅನಂತರ ವವುತಖಂಡನವು. ಕಸಂಜೆಯಲ್ಲಿ ಆಚಾರ್ಬರು ಏರಡು ತಿಂಗಳು ಇರುತ್ತಿರಲು ಅವರ ಸಮಾಪಳ್ಳೈ ಲಿಂಗಾಂತಿತಧುಜದ್ಯಯರೂ ಆರ ಶೈವರು ತಲೆಯಲ್ಲಿ ಕ್ರಿಶೂ ಲವನ್ನೂ , ಲಿಂಗವನ್ನೂ ಇಟ್ಟುಕೊಂಡು ಷುದಯ, ನಾಧಿ ಮುಂತಾದ ಸ್ಪ್ಳಗಳಲ್ಲಿ ಲ್ಲಾ ಲಿಂಗದಿಂದ ಚಿಲ್ಸತರಾಗಿಬಂದು €4 ಸನಾನ |² ಪರಂಬ್ರಹ್ಮ . ೨ 90 & $ $ ® ವಿಶೃರೂಪಾಯವ್ಮೈನಮಃ ` ಮತ್ತು : ದ್ಯೌರೂರ್ಧಾನಂ. + $4 $ + 4. 4 4 4ರ ವನು ಪ್ರಪಣ ` ಇತ್ಕಾದಿ ಶ್ರುತಿವಾಕೃಗಳವ್ಲಿ ಹೇಳರುವಂತೆ ಈಶ್ವರನಲ್ಲಿ ಧಕ್ತಿಯುಳ್ಳವರಾಗಿ ದ್ರರೆ, ಅವನಿಗೆ ಶಿರಲೋಕಪ್ರಾಪ್ತಿಯಾಗುತ್ತದೆ ; ಮತ್ತು ಎಳ್ಳೈ ಯತಿಯೇ ! ಈಶ್ವ ರನು ದೂರ್ವಾಸರನ್ನು , ಪರಾತ್ತರನೂ, ವಿಕಾಕ ಕರೂಪಿಯೂ ಆದ ನಾನೊ
೫1 $ ಕಾದಂಬರೀಸಂಗ್ರ್ರಹ ಬ್ಬನೇ ಬ್ರಹ್ಮ ವಿಸ್ಕೃಗೆಳೆಗೂ ಮುತ್ತು ಲೋಕಗಳೆಗೊ ಕಾರಣಧೂಕನು ; ಜಗೆಶ್ಸಂಪಾರ * ಇ. (ಇಕ್ಸ್, » ಫ ಕಾರಿಣಿಯಾದ ಶಕ್ತಿಯು ; ನನ್ನಿಂದಳೇ ಸೃಷ್ಟಿ ಮೊಡಲ್ಪಟ್ಟ್ ಶ್ತಾಳ } ಏಕಾದಃಕರುದ್ರರೂ, ನೆನ್ನಿ ಸ್ಟ್ ಸಳ್ಬಟ್ಟರು ; ನೃಷ್ಟಿ : , ಗಿಯಿ ಣ ಕರ್ತನನ್ನು . ರಾಜಸಗುಣಯಳಳ್ತನನ್ನಾಗಿಯೊ, ರಕ್ತ ಕನನ್ನು . ನನ್ಕಾಗಿಯೂ, ನಾಶಿಕೆನನ್ನು . ತಮೋಗುಣಯೆಳ್ತನನ್ನಾಗಿ ನೊ ಸೃಪ್ಟಿನಿ-ನು ; ಅವರೇ ಬ್ರಹ್ಮ ವಿಷ್ಣು ಮಹೇಶ್ವರರ 1. ಒ9ದು ರುದ್ರವೂಜಾಸಕ್ತ ರೂ. ರುದ್ರಜಪವಮಾಡಕತತಕ್ಕಿ ವರೂ, ವಂಚಾಶ್ಲರೀಚರರ 3೨ರೂ, ರಾದ ಅಂಗಗಳುಳ್ಳವರೂ ಮತಕ್ಶು ಐ ಒಳಿಖಿಲ್ಬಟ, ದೇಹೆಗಳುಳ್ಳವರೂ ಆದ ಜನರು ಶಿವಲೋಕಕ್ಕೆ ; ಇಈವೆಲ್ಹದಿಸ ² ಷತ್ತ9 ಜ್ಞಾನವುನಂತೆಂ ಇತ್ಕಾರಿ ಶ್ರುತಿವಾಕ್ಕಗಳಂದಲೂ ಈತ್ಯಂತು ಷೇಳಲ್ಪಟ್ಟಿವಿಸಿನೆ ; . ಅವನು ತೆಸ್ಟ್ ತೇಚ ಸ್ಸನ್ನು ಸೂರ್ಯಾ ಸ್ಕಿಸಿದನು. ; ತನಿಯೆನ್ನೊ ಅವನ ಸೃಷ್ಟಿಸಿದನು ; ‹ ಚಂಡ್ರ೨»ರಕಂ ` ಇತಸಿದಿ ಳಿಂದ -ಈ#5 ಸ್ವಬೆ೨ . ಪ್ರಕಾರಿಸಳಾರವ್ರು; ಆದ್ ರಿಂದ ನೀವೂ ಆಸ್ರೆ ಈತ್ಯರಗಗು, ಉಪಾಸನೆ ವ. ` ` ಎರಡು. & * 44 ² 5 1 * ೪ ಆ ಬಿಗ ಆಕ್ತ {ಗೆ ಟ್... ಆಡಾತ ರು : ಎಳ್ಳೆ . ವೊಢರೇ ! ಒಬ್ಬ ಗೇವೀ ಬ್ರಹ್ಮ > ಒ ಹೌಸ್. { ಈ $ ಕ ಆಕ್ @ ಸಟಾನ್ ಇಸ್ ಟಟ, ಹ್ | > 45 ಓ ಈ == ೯-ಒ ಈಕ್ ಆಕ್ಸ್ . { ಆಜ ಳ ` ‹› #೪8 ಶನಿ \ ೪೬೪೨ ಸ . / ಈ . @, ೬೫೨ )ಅಳಕಿ ೪೪೪೦ ೬೪ ಲರ“ ² ಒಕ @, ಮಾಡುತ್ತಾನೆ. ನಾ:ಋನೇಲುಭಾ`ದಲ್ಲಿ ನೋಮವರತೂ, ನಾಧಿಖಿ ೪ಳಿಭಾಗದಲ್ಲಿ ಅನೋಮಪತೂ ಆದ ದೇಗೆಕೆಗಿಳ) ಇವತಿರೆ. ವೇದಮೇದಾಂಕಪಾರೆಗನಾವ ಬ್ರಾಹ್ರೆಣನ, ಶಿಖಾ, ಶಿರ, ಲಲಾಟ, ಕಿಏ. . ಸೋಗು, ತಲ, . ಓ, ಔಬುಕ, ಅಂಸದ್ವಯ, ಘುಓದ್ ರಂದು, , ಹೆಸ್ತಯುಗ, ವೆಕ್ಲೆ ಸ್ಸು, . ನಾಧಿ, ಕ್ರಬ, ಲಿಂಗ, ವೃಷಣ, ಊತಃ, ಗುಳ್ತದ್ಯಯ, ಪಾರದಯುಗೃ, ಇನ್ರಗಳನ್ನು ನಾನೇ ಮೊದಲಾದ ಡದೇನತೆಗಮೊ, . ‰ತತ,ಕೆಳಎ, .. ಈ, ಸ್ಕಾ ನಾದ ನಿತ್ತುಕರ್ವ್ಗಳಿಂದ ತೈಪ್ತರಾಗುತ್ತೇವೆ. ಎಂದು ಬ್ರಹ್ಮನು ಅರುಣಕೇಕುವಿಗೆ . ಬ್ರುಪೃಣನ ದೇಹದಲ್ಲಿ ಸಳಲ ದೇವಶೆಗಳು ವಾಸಿಸುತ್ತಾರೆ ` ಎ9ದು. ಹ್ರಿತಿನಾಳ ದ್ರ ಬೋಧಿಸದರೂ, ದೇಹಳ್ಕಿ ತಾವಮಾತಡಿದರೆ ಇವೆತನ್ನು ಈಪಿನಿ ಓಡಿಹೋಗುತ್ತಾರೆ; ವ್ಯಾಥಿಯಿ ಲ್ಲ್ ದೆ ಕರ್ಮಯೋಗ ವಾದ ವಿಶತ ಗ\ಹೆದಲ್ಲಿ ಚಿಳ್ನಿ ಯನ್ನ್ನ ಲೋಕಳೇಶ್ಸರರ ಇಚ್ಛೆ
ಕಕಿ & ನಾರ . ; ಅಧವಾ ಮಡುವಿಗೆ ದೀಳಬೇಕು ; ಸಮಸ್ತ ಪ್ರಾಣಿ“ಅಲ್ಲಿಯೂ ಅಬಿರನಾಗಿ ನೊ, ಅರನ್ಕಾರೆಹಗಳಾದ ಸ್ಟಾ ವರಪವಾಥ್ಗೆಳ ಲ್ಲಿಯೂ, ಇರತಕ್ಕ ಮಹತ್ತಾದ ನಿತೃವಾರ ತಿಳಿದ ಮನುಷ್ಯನು ದುಃ‡ವಿನಲಶಿರವು. ಆವ :ದ ಪೆಕನೆ.?3 ಮಿಣಿ . ಪಂಕಿಕನಾದ ಗುರುವನ್ನು ೬೨ +೨ ೬) ಗ್ಯಿ, ಹೊಂದಿ, ಆ ಗುರುಬಿನ ಭಛೇದಬಲ್ಲದವಾದವುಬ ಅಮೃತವಂ “ @ « 7 £ ಆಜ್ ಜಿಸಿ ಕುಡಿದ ತೃಶ್ತೆರಇಗಿ ` ಎಂಡದೆವೆವೀತಿಸಳು, ಅವರಂಶ್ಲಿ ಆತಾರ್ಯರನ್ನೈ ಪೂಜಿಸಿ, ಅ ವರ ಪಾದೋದಕವನ್ನು ಸೀನಿಸ, ಅವೆರಂರುಪದಿಸ್ಕದಾರೆ ಅಚನಿರಾಸುಯಾಯಿಗ ಸಸಳಿಂ ಲಕ್ ಈ ± ಇತ ಸ ಕಕ್ಸ್ ಸ್ರಿ ಸ್ಯೂ ಈ ಆಲ್ = ಸಂಘ ಇರ್ ಕ್ರೆಸ್ : ಸ್ಕ್, ಕ್ರಿ ಈ 1 . ಸ್ ಸ್“ ವ್ಯ ಕರ ತ್ರೆ ಈ ಸ್. ಹ ಕ ಇನ, 3 ೪ ಕ್ರೈ ೨ತˆಲೂ ನ ಸ್ಕೈಗ.ವು ಶ್ರೀಷ್ತವು ಡ್; ನ್ರ ೭೦೮ ಇಲ್ರ²೨ಇಅ, ಎಂದು ಬ್ರಹ್ನ ನು ನಾರವಲಿ: ಹೇಳಿದ್ತಾ ೨ ; ನಿಸ್ಮಿ ದ ಏಳೆ ಮಾಡ ಇತನ ಜ್ರ ಲ ಇ೩ಜಗ್ .... ಕಹ, ೬ # == 18೩ ಲ್ಪಟ್ಜಿ ತು ? , ನವಸ್ತೇ ` ಮಹೇಶ್ವರನ ಸ್ರತ್ಸನೇಸರಿ ; “ ೫ವರ್ರನನ ನ 3೯ ವ ಈ>ಶ ನೆ | ಸ್ಠಾತ್ರವ್ಗತಕ್ಕಿ ದ1 ` ಬಂದು ಶ್ವೀ ತಾತೃತ `ಜಿದೆನಿಸತ್ತಿನನ್ಹಿದೆ. ಮಹೇಶ್ವರನ ತೇಚ ಸ್ಸಿನಿಂದ ಹಿ, . ಈ ಉತ್ಪನ್ನ ರಾಗುತ್ತಾರಿ ; ‹ ಆ ಈಶೃರನು ಧೈಯನು `. ಬಂದಿ ವಿಷಯದಲ್ಲಿ ನಿನೆಗೆ ; : ಚಿಸ್ಸಿನಸ್ರದನು “. .ಏಕಿಬ ವಿತ ಯದಲ್ಲಿ ಶಳಋಖೆ\.ಋಯೂ ; :, ಸಳಳರಿ²ದಲೂ ವೇವನು “ ಐಂಬ ವಿಷಯದಲ್ಲಿ ವೇದ ಗಳೂ, , ಶಕ್ಚೆ ಶಕ್ತುಗೆತೆನಾಠ# ೫ ` ಅತಾಂಶಾವಿಗಳೊ, : ! ಎಂಬ ವಿಷ ಕಳೆಋಗ, ವೆ=ಎಳೆ ; ಶೂನ್ಯ ನು ` ಎಂಟ ವಿಜಇಋಖುದಲ್ಲಿ ಬ್ರಹ್ಮ ನೂ ಷಶಕ್ಲಿ ಗಳು ; ಇತ್ಪಿದಿ ಶ )ತಿವಾಳ್ರ್ಯಗೆ ²35 ಈಶೃರನದ್ಲಿ ಜಗತ? ರಣಶ್ವವವು ಸಿದ್ಧ € ೨ನೌ ಆಬೆ ತರ ದೆ ಈ *. $ ± ಈ ವಾಗಿವೆ; ಕೋಟಿ ಒನ್ಮಾಜಿ-ತವಾದ ಪ್ರಣ್ಳದಿಂವೆ ಕಿನನಲ್ಲಿ ಲಿಂಗದಿಂದ ಅಂಕಿತವಾದ ದೀಪವ್ರಳ್ರವನಾಗಿ ರುವ್ರಾಕ್ಸಿ ಎ‰ಜೂತಿಗಳಂ ಧರಿಸ ರುದ್ರಾ) ಧಶ್ಬಿಯಜಪನೂಡ್ಯವವನು ಸರ್ವೆ ಪಾಪವಿನಿರ್ಮುತ್ಶಿನಾಗಿ ಶಿವಶೋಕಳಕ್ಕೈ ಹೋಗ.
$ಕ್ಕೆ ಬ್ ಕಾದಂಬರೀಸಂಗರಹ ತ್ತಾನೆ. . ಕಳ್ಳತನವನ್ನು . ಮಾಡ್ರಿ ಗುರುಪತ್ನಿಯೆ ಸಂಗಡ. ಕ್ರೀಡಿಸಿ, ಹೆಂಡವನ್ನು ಕುಡಿದು, ಬ್ರಹ್ಮ ಪಶಿಯೆನ್ನಾ ಚರಿಸ, ದೇಹಕ್ಕೆಲ್ಲಾ ಧಸ್ಕ್ರಶಯ್ಕೆ ಯಲ್ಲಿ ಮಲಗಿ ರುದ್ರಾಧ್ಯಾಯೆನಾರಿಯಣಮೂಡಿದರೆ ಅವನು ಮೇಶೆಪೇಳೆದ ಸಳಲ ಪಾಪಗಳೆಂದಲ್ಲೂ ವಿನಿನೆ ರತತನಾಗುತ್ತಾನೆ. ... ಅತಪ್ತ ತೆ ? ಎಂಬ ವೇದವಾಕ್ಸ ದಂತೆ ಮುವಳ್ಳು ಗಳಿಗೆ ಲಿಂಗಾಂಕನವೂ ಅತ್ತಾ ಎಂದು ಹೇಳಲು ಆಚಾ ರು ., ಪಾ! ಇಲ್ಲಿ ವ್ರತಗಳಿಂದ ತಪ್ತವಾದ ದೇಹವಲ್ಲಗೇ ತಪ್ತವಾದ ವೇಷವಲ್ಜ; ಐಂರು ಒಪೆನ್ನಾ ರದೀಯದಲ್ಲಿ ಹೇಳೆದಿ. . ಅಸೆನಾ ಶಾಖಿಚಕ್ರಾಂತಿತನಾದ ದೇಹೆವನ್ನು ನೋಡಿದ ಮಾಶ್ರದಲ್ಲಿ . ಅಥವಾ ಸೂರ ದರ್ಕನನಮಾಡೆಬೇಕು. . ಹಾಗೆ ಮುದ್ರಾಂಕನವನ್ನು ಜಿ .ವ‰ಸ‰ಠ ವೆದೆಂತಿರುವನು ರೊರ್ರನಂತೆ ಬಿಡಲ್ಪಡ ಜ ಬೇಕು. ಅವನಿಗೆ ಕೊತ್ರಿಟ್ರ ಕದಾದಿಗಳು . ಅನ್ನ ತ್ರಾಧಿಮಂತ್ರಿತವಾದೆರೂ ಅಂಧವೆಸ ದಔರ೮೯ನದಂದ ಅಡೆ‰ ಡಬೀಳು. ಶೂರ್ರನಿಂದಲಾ ² ಈಗೆ , 84 ಒಕ್ ಔಕರೂ ಒ ಖಯಮ; ನುವಾ ತಗುವ್ರಳೆ.ನೆಂದ $ ಕೂಡದು, ಎಂದು ಜೂರದಲ್ಲಿ ಗೌಯತ್ರಿಗೊ ಬ್ರಾಹ್ರೆ ಇರಿಗೂ ವಾದ ನಜಿಖ್ಯಿಕು ಆಗ ಗಾಯತ್ರಿಯು ನೀವು ಕಲಿಯುಗದಲ್ಲಿ ಪಾಸಂಡರೂ, ತಾಂತ್ರಿ` ‰, . ಆ[\59ಗು . ಕೋಪದಿಂದ ಶ>೭ನಿದಳು. ಅದರಂತೆ ಅವರೆಲ್ಲಾ ಪಾಷಂಡರೂ, {೩ ® ೪೩, ಔ 6 ಲಿಂಗಡಕ್ರಾರಿಚಿಹ್ಟಿ ತಕರೂ, ಜ್ಞಾನತರ್ಪದಳ್ರಸ್ಥರೊ, ಸ ಥರ್ಮವೆಬ್ತರೂಣ, ಮುತ್ತು ೨5®ಪಭಇಗಿಗಳೂ, ಆದ ದ್ವಿಜಾಧೆಮ ರಾಗಿ ಹುಟ್ಟುತ್ತಾರಿ. «ಲಿಯುಗದಲ್ಲಿ ಮೂರುಸಾವಿರ ವರ್ಷಗಳು ಕಳದನಂತರದಲ್ಲಿ ಸತ್ಸಧರ್ಮೆವರಾಯೆಣರಿಗಿಯೊ, ೩ ನಾ ಕ್ಕೂ ಈಶಾ ಇನು ನಯಿಣರಿಗಿಯೊ, ೪ \ ಪವಿನಿ ಶೈ ಗೈ ಳಿತೌಸಾ˜ನೆಬೆ9 «೩ ಹಾಪೆ ಕ್ರರಾಗುತ್ತಾರೆ, ಎಂದು. ಹೀಳಲ್ಪಟ್ಟಿದಿ. ಪರಬ್ರಿ - ಋನ್ನುವೂಡೆಬೀಳೆಂದು ಶೃತಿಯೆಲ್ಲಿ ಹೇಳಲ್ಪಟ್ಟ ೧. ಅದನ್ನು . ತಿರಸ್ಕರಿಸಲು. ಯಾರ ಸಾಧ್ನ ವಿಲ್ಲ. ವತಿ, ರುದ್ರಾತ್ಸಿಗಳ ಧಾರ ಮನುಷ್ಕಲಂದ ಆದಿರೆ ಲಿಂಗಾದ್ಬೆಂಕನಗಳನ್ನು ಮಾತ್ರ ಮಾಡಕೊಡೆದು “ ಹೀಗಿ ಆಚಾರ್ಬರು ಅಮಗುಪೆರೇಕಿಸಿ ಅನರ ಸಂದೇಪೆಗಳನ್ನೆಲ್ಲಾ (ಚ. ಶ್ರುತ್ಯುಳ ಪ್ರಮಾಣಗಳಿಂದ ನಿವೃತ್ತಮಾಡಳು ಅನರು ತಮ್ಮ ಚಿಹ್ನೆಗಳನ್ನೆಲಕ್ತ ತೃವೆಸಿ ಶೈ ಆಚಾರ್ಯರ ಶಿಷ್ಯರಾಗಿ ವೇಮೋಕೃಕರ್ಮಾನುಯಾಯಿಗಳಾದರು.
34 ಮರಪ್ಲೆವವುತಖಂ೦ಡನೆವು. ಅನಂತರ ಶಂಳರಫೆವತ್ತಾದರು ಳೆನೆಂತಶಯನಕ್ಕೆ ಹೋಗಿ, ಅಲ್ಲಿದ್ದ ರಾಮ ರಾಒನಿಂದ ವಂದಿಸಲ್ಪಟ್ಟ, ಅಲ್ಲಿ ತಿದ್ದು ಪ್ರಚಾರಮಾಡುತ್ತಿರಲು, ವಮೈಷ್ಠ್ಯ ವಾಚಾರತಕ ೨ ವ $ಹೆ ಚಾರತತ್ಕರರೂ, ಶಂ, ಹಳ್ಳ, . ಗವಾ, . ರಾರ್ಜಐಚಿಹ್ಟೈಗಳಂದ ಪಲಚಿಲ್ನಿ ತರೂ, ತುಲಸೀ ಮತ್ತು ತುಲಸೀವುಣಗಳ ಮೊಲಿಗಳನ್ನ್ನ ಢಲಸರುವೆರೆರೊ, ಹುನಾಮಗಳನ್ನು ಜಪಿಸುತ್ತಲಿರುನಕೂ, ಲೇ.ಸಳ್ಪಟ್ಟ ಕರ್ಣಗೆ ಳಲ್ಲಿ ತುಳಸನೀಪಕ್ರವನ್ನು ೭೩ ಇಬ್ಬುಳೊಂಡವರೂ ಆದ ವಿಷ್ಣು ಶರ್ಮ, ವ್ಯಾಸವಾಸ್ತ ವರಾಹಾಚಾರ್ಯ ಎಂಬ ವೈಖಾನಸಾಗವುದರಳ್ತೆರೂ, ಪಾಂ ಸರಾತ್ರಾ˜ಮತತ್ತರರೂ, ದೇದವೂರ್ಗವನ್ನು ಅನಲಾ ಸದುಧˆರೊ ಆದೆವರಾಗಿ ಬಂದು ಕುರಿತು : ಎಲ್ಫೆ ಅಣ್ಣ, / 7 ಯತಿಗಳೇ ! ಪ್ರೆಪಂಚದನ್ಹಿ ವ್ರ: ವಿಷ‡. ಗೆ ಶ್ರೀಸೈನಾದೆ ಸ್ವಾಮಿಯು) ವೈಷ್ತವಮತೆರಿನಾ ೪ಇದೆ ಮೆಗೆಳಲ್ಲಾ ಒಗತ್ಯಯೆವು . ಮಹಾಬಸು.ವಿನಿ9ದೆ ಉತ್ಸೆನ್ನೆದಾಗಿ ಅಣನಿಂದಳೇ ರ ತ್ನಿ ಸಂಸಾರವೆಂ, ನಈ ? ಭಠ್ತೆಯೆ ಮೋಳ್ತಪರರವು; ಭಿತ್ತಿಯ ಛ ಆದ್ದರಿಂದ ಬಲ್ಬು ಯತಿಗಳ ! ನಮೃ ^ ನ್ನೆ ಲು ಶಂಕರರು ‹ ಏನ್ಸುಶರ್ಮೊಡಿಗಳೇ ! ಯಬ್ಧಾಭದಿಕರ್ಮಗಳನ್ನು ತೈಜಿಸಿ ಧಕ್ತಿ ಯನ್ನು ಅಪೇಕ್ಷಿಸುವಿನಿ ; ಬಿನ್ನರನವವಾದೆ ವ್ಯೈತಘಕ್ಶಿಯಿಂದ ಸಂಸಾರವು ವೃದಿ; ಹೊಂದುತ್ತದೆ. . ಅಬಛಿಕ್ನರೂಪವಾದ ಅದ್ಯೈತೆಫೆತ್ತಿಯಿಂದ ಮೋಕ್ಸ್ನ ಉಂಟಾಗುತ್ತದ್ಧಿ ದ್ವೈ ಫಿತರೊಪನಾದ ಧೆತ್ತಿಯಃ ಕ್ಲೇರವಾಯಕವು; ಅದ್ಯ. ಸುಖದಾಯಳವು; ಆದೆಲಿಂದ ಸರ್ವಸಿದ್ದಿದಾಯಕದಾದ ಅಡ್ಯೈತಭಕ್ತಿಯನ್ನು ಆಶ್ರ ಯಿಸಬೇಕು; ಆ ಧತ್ತಿಯಿಂದ ಚಿತ್ತವು ಶುದ್ಧ ವಾಗುತ್ತದೆ; ಚಿತ್ತೆಶುದ್ದಿ ಯಿಂದ ಜ್ಞಾನ ವುಂಟಾಗುತ್ತದೆ; ಆ ಜ್ಲಾ,ನದಿಂದಲೇ ಮೋಕ್ಸ್ನ-ರುವುದಲ್ಲದೇ ಕಲ್ಪ ಕೋಟಿಕತಗಳಿಂ ದಲೂ ಬರಲಾರದು; ಹರಿಯ ರೂನವನ್ನೇ ಶಂಧುವ್ರ ಧರಿಸಿರುತ್ತಾನೆ ; ಶಂಧುರೂಪವನ್ನೇ ಚರಿಯ್ರು ಧರಿಸಿರುತ್ತಾನೆ; ಅಮುಬ್ಬರಿಗೂ ಸ್ಕಲ್ಪವೂ ಭೇದವೇಇಲ್ಲ ;. ಯಾವನು ಭೇದ
7#ಓ ಕಾದಂಬರೀಸೆಂಗ್ರಹ ವನ್ನು ಮಾಡುವನೋ ಆವನು ರೋಔಣಭಾಗಿಯಾಗುತ್ತಾನೆ; ಪರಬ್ರಸ್ಮೆದಿಂದ ಟೆಭಿನ್ನ ನಾದ ತನ್ನನ್ನು ಯಾಗನು ತಿಳೆಯುಪೋ ಅದನನ್ ಸಾಕನ್ಸಿದ್ಬದ ಹ್ರೈ ಆಜ್ತಾನ ಜ್ಞಿನನಾಗರತುಗ್ನೆ ರಾದ ಪಾಸಿಗಳು ನಾತ, ಛೇ ತ್ರೆ. ಭೇದವನ್ನು ಏಣಿ ನುವರು ; ಯುಗಾಂತ್ಗದಲ್ಲಿ ಹೆರಿಯೇ ರುಡ್ರರೂನವಿಂದ ಸಕಲ್ ಜಗತ್ತನ್ನೂ ನಾಶ ವೊಡುವನು ; ಆ ರುಡ್ರನೇ ಬ್ರಪೈರೊಪೆವಿಂದ ² ನತರ ಜಗೆತ್ತನ್ನೊ ಸೃಷ್ಟಿಸಿ ವಿಷ್ಣುರೂಲದಿಂರ ರಕ್ಲಿಸುತ್ತಾನೆ. . ವಿತ್ತು, ಮಹೇಶ ರರೆಂಬ ಧೇದವಿಲ್ಲ ; ಪರಬ್ರಪೆ ಆ ಕಿವೆನೇ ಏಳ್ಣಲಗೊ ಗುರುವು ; ಆ ತಿವನಲ ಜೀವನು ; ತಿವನ್. ಬಂಧವ್ರ ; ಶಿವನೇ ಪ್ರಾಣಗಳ ಆಶ್ಕ್ನನು ; ಶಿವನೇ ದೇವನು ; ಆ ಶಿವೆನಿಗಿಂಕೆ ಯಾವ್ರರೂ ಲ್ಲತ › ಧ್ರಿಪ್ಟೆ, ವಿಷ್ಣು, ಮಖೀಶ್ನಯರರಲ್ಲಿ ಯೊವನು ಣೀದತನ್ನು ಬಣಸುವನೋ ಅವನು ಇಜಂದ್ರತಾರಳಗಳೆ ರುವವರವಿಗೂ ; ಖೆಎರದನು ಸ್ಕಶರ್ವವನ್ನು ನಿ ಧಕ್ತಿಮಾತ್ರರಿಂರಲೇ ದೀವಿಸುವನೋ ಅವನ್ ವಿಷಯದಲ್ಲಿ ವಿಸ್ಲುವು ತೃಸ್ತಿ ಯಾಗುವುದಿಲ್ಲಿ; ಏಳೆಂದು ವಿಷ್ಪುವ್ರ `೨ಚಾರದಿಂದ ದಿಸಲ್ರಡೆಕಕ್ಕವನು; ಸ್ನಧರ್ಮ ಹೀನರಿಗೆ ಈಡೆ ದುಃಏಸ್ರದವ್ರ; ಹಫಕ್ತೆನೇ ಆಗಲಿ ಹರಭಕ್ರನೇ ಆಗಲೀ ತೆ.ದಿಸಿದರಿ ಅವನು ಭರಸ್ತಯನಾಗುವುದರಲ್ಲಿ ಸಂಧೀಹೆಬಿಲ್ಲ್; ವೈ ಅ) ಒಸಳಲೆ ತ ಓ ಮೈ ೩ \. ಇ ಖ್ ,“ \ ಯೆ ಣ್ಳ ..... ಪ್ರನ್ತ್ .. ಇ ಸ್ ೨ ಸ್ಕ್ ಥ್ ಸ್ಕ್ ನ್ರ ನ್ನ್ಯೊಂ ಡಲ್ ಕೆ ಪರಬ್ರಹ್ಮನು ತನ್ನ ವಾಮಭಾಗದಿಂದ ವಿಸ್ಲಾವನ್ನು ಟೌ , ಉ - ಏಳ್ ಈ 4೩೯೩, ಸ್ನಿಕ್. ೭೭ ೪೭, ಹ * + ಹಲ“, 1 ಶಿ. 5೭. ತನ್ನ . ಬಲಭಾಗದಿಂದ ಬ್ರಹೈನನ್ನೊ, ತನ್ನ ತೃದಯಬಿಂದ ರುರ್ರನನ್ನಿ ಸೃಷ್ಟಿಸಿದನು; % ಈ) ಉ ಸ “ಅಗಸ ಕಕ್ ಸೇಲ್ ) “1 ಜ್ ಎ, ಈ ೭ ಮಿಮಿಕ್ ನ ಒ “೪7೬೭ ಫಪ್ ² ಹ್ಯಾಕ್ ಟನ್ನೆ 7 ಆಳೆ)ಇಟ್ಲೈಳ? | ಇ ೨74 ೨1 ೨೫ ೪೫೯ \ › ಓ ‰ 7 \ ಈಶ ೬ ಲಿ | ನೌ ಇಲ .. ‰ ಇ ಯದಲ್ಲಿ ದಾನ ; ಅದಔ^ ಆಕಾರವಿಲ್ಲ; ತಣ್ಣುತಿವಿಗಳಲ್ಲ ; ಇಸ್ಟಾದರೂ ಅವನು ನಾವಾಡುವುದನ್ನು ಕೇಳುತ್ತಲೂ ಮಾಡವ್ರುದನ್ನು ನೋಡುತ್ತ ಇರುತ್ತಾನೆ; ಸೂಕ್ಸ್ನ ದರ್ಶಿಗಳಾದೆ ಮೆ ‰\ಗಳು ಮಾತ್ರ ಆತ್ಮಾನುವರ್ತಿಯಾರ ಆ ಬ್ರಹ್ಮನನ್ನು ನೋಡುತ್ತಾರೆ ; ಆದ್ದರಿಂದ ಬ್ರಪ್ಮಸದುಶವಾದ ಈ ನಮೃ ದೇಹಾದಿಗಳೆಗೆ ಚಿಹ್ನ ಕಲ್ಪನ ವು ಹೀಗಿ ? ಅವನ್ನು ಝಸಡರೆ ಬ್ರಾನವ್ರಳ್ಳವನೂ ಮುಕ್ತಿಯುಳ್ಳವನೂ ಹೇಗೆ ಆಗು ತ್ತಾನ ? ಮನುಜನು ವೇದೋಕ್ತಳರ್ಮಗಳನ್ನು ಆಜರಿಸುತ್ತಾ ಕ್ರಮವಾಗಿ ಜ್ಞಾನ ವನ್ನೂ ಅನಂತರ ಮೋಕ್ಸ್ವನ್ನೂ ಹೊಂದುತ್ತಾನೆ ; ನಿತ್ಸಕರ್ಮವರಿತ್ಥಾಗದಿಂದ ನರನು ಪತಿತನಾಗುತ್ತಾನೆ ; ಶಂಮಿಚಕ್ರಾಂಕಿತನಾದ ದೇಹವನ್ನು ನೋಡಿದ ಕೂಡಲೇ ಸ್ನಾನಮಾಡಬೀಳು ; ಅಂತಹೆವನನ್ನು ಮಾತಿನಿಂದಿಳೂ ಅರ್ಜಿಸಕೂಡಗು ; ಜೇವಚ್ಛವ ಧಂತಿರುವ ಅವನು ಶೂದ್ರನಂತೆ ಬಿಡಲ್ಪಡತಕ್ಕ ವನು ; ಅವನಿಗೆ ಳೆಎಡಲ್ಪಟ್ಟ್ ಹವೃ ಕವ್ಯಗಳು ವೃರ್ಥವಾಗುತ್ತವೆ ; ಅವನು ವೇದೋಳ್ತೆ ಕರ್ಮಾನುಯಾಯಿಯಾದರೂ
ಕಂಕಕಳಕಥಾಸಾರ ೩ ಡಳ್ರ, ಲಿಂಗಾದಿಧಾಕಣಮಾತ್ರರಿಂದ ಸೆದ್ಯೆ\ಪತಿತನಾಗುತ್ತಾನೆ; ಆರ್ದರಿಂರ ಶ್ರುತಿ ಶಂಮಿಚಕ್ರಾದಿಧಾರಣವು ಅಯೋಗ್ಯವು ² . .ಎಂದು ° ಹೇಳಿ, « ನೀನೇ ರಳ್ತಕರು ` ವಿಂರು ಬಂರ ಅವನಿಗೆ ಸ್ಮೃತ ಳ್ರವಿಧಾನದಿಂದ ಪ್ರಾಯಕ್ಲಿ ತ್ತ ವಂವೂಡಿನಿ ಅವರನ್ನೆಲ್ಲಾ ಅರ್ರೆ ಳಿತಮತಾನುಯಾಯಿಗಳನ್ನಾಗಿ ಮಾಡಿರಕು. ಓ ಅನಂತರ ಶಂಕರರೇಶಿಕರು ಸೌಬ್ರಿಷ್ಠಣ ಹೋದರು. . ಆಗ ಅಲ್ಲಿ ನವ ರಾರ ಕೆಲವರು ಬ್ರಷೋವಾಸಳರು ಬಂದು , ಎಲ್ಕ ಯೆತಿಯೇ ! :, ಹರಣ ಗರ್ಧೆನ್ಸ್ನವ ವರ್ತಾಗ್ರೀ. . .. . .. - -ವಿಧಮ ` ಇತ್ಕಾದಿ ವೇದವಾಳ್ಯದಿಂದ ೬ ಸ್ಕೈನ ಸಳಲಕಫ್ಟಿ ಕರ್ತನು; ವಮಕ್ಶು ಪಾಲ೪ಕನೊ ಇವನೇ. . ಇದಲ್ಲದೇ ಯೊವನು ಕರ್ತನೆಂದು ಹೇಳಲ್ಪ ಟಿ . ಅಂತಹ. ಆನಂದದೌಯಕನೆ9ಗರು ಪೇಳಲ್ಪಟ್ಟಿದ್ದಾನೆ; ಇ ಈ ಫ್ರಿ ಸಿಸಿ ಹರ ೨0೫0000000 ೨೦00000000 ನಂ ಹುಂ ೪ 1 ² ಆ = ಥೆವ್ರ ಸಳಳಿ ಓಗೆ ನವಿ ) ² ಗ ) ಆಜಮ್ರ 7 ನ ಚ್ ಉ ಕ್ಯ ಟಕ್ ತ್ರ ರ೧೯° ಆ ಕ ನೆ ತನ9ದು ಆಈ „, [೩ ] ಗ್ ± ² ಕಳೆಯ @ + 5%, ಆಚೆ ತದ್ಮೈಳ್ಸ್ನತ ² ಇತ್ಕಾದಿ ಹ್ರಿತಿವಾಕ್ಕಗಳಿಂದ ಆವನೇ ತನ್ನ ಜೌಜಗಳಿಂದ ವಿಷ್ಣು ಮೆತು `ಆಘ್ಮಿ ಕಮ ೬ರ = ಟಾಷ್ಕ ಮೊಸಸ್ಲ ಅನ್ನ ಈಶ್ವರನನ್ನು ಸ್ಪಮ್ಹಸಿದನೆಂದು. ತಿಳಿಯೆಬರುತ್ತದ; . ಬ್ರಷ್ಫ = ²೩, ಮೌ ೯ ಫ್ರ್ ಲೋಳಗೊ ಅವನ ಉರ೦ಶು ತೋಗುತ್ತ; ಯೋಕ್ಸವೊ, ಆ ವ್ರಿಹ್ಮನಿಂದ ಲ್ಲ ದೇ ಬೇರೆ ಯಾರಿಂದೆಳೂ, ಬರಲಾರದು) ಆದ್ದರಿಂದ ನೀವೊ ನಮ್ಮಂತೆ ಕೊರ್ಡಳ ಮಂಡಲುಧಾಳಿಗಳಾರ ರಾ} ಗೋ ವೆ ಕ್ಷ ಆ ನವೆ ಕಾವು ವೆ \ ಕ್ 0 ಇಜಿ) 5೬, ಇನ್ ನೆಗ್ರೊ ಕ್ ೩೪. ಹ್ಲೌ ರಿಕಢಿನಕಾ ಶಂಕರಳಿಗೆವೆತ್ತಾದರು « ಖಳ ಯಾ ಗ್ ಖ. , ಕ್ವಿ, ೧ ಇ. # @, \ =೨, ಇ, ರಣದಿಂದ ಆಗುತ್ತಾರಿ ಎಂಬುದನ್ನು ತಿಳಿ“ ಏಂಬ ದ್ರಿತಿಯಿಂದ ಬ್ರಹ್ಪನನ್ನು ತಿಳೆಯು ವುದು ಮೋಳ್ಸ್ಕಳು ಯಾವಾ ಗಲೂ ಮಾಡತಳ್ಳದ್ದು. ಲಯವು ಮೋಕ್ಸ್ನವೆಂದು ಹೇಳಲ್ಪುಟ್ಬಲ್ಲ; ಕಾಯˆಬ್ರಹ್ಕ್ರನ ಸೇವೆಯಿಂದ ಸುಸುನ್ತಿತುಲ್ಳನಾದ ಪಕಮಾತ್ಕ್ಯನು ಹೊಂದಲ್ಪಡಲಾರನು. ಆಡ್ದಿರಿಂದ ನಿಮ್ಮ ಗುರುತುಗಳನ್ನು ಬಿಟ್ಟು, . ಗುರುಮುಖದಿಂದ ಆತ್ಮ ಬೋಥಯನ್ನು ಬೇಕು “ ಎಂದು ಇವೇ ಮೊದಲಾಗಿ ಹೇಳಲು ಅವರೆಲ್ಲಾ ಆಚಾರ್ಬರ ಶಿಷ್ಕರಾಗಿ ಅದ್ವೈ ಅಗ್ನಿ ವುತಭಂಜನವು. ಅನಂತರ ಅಗ್ನು ಸಿನಾಸಕರಾದ ಕ್ಲವರು ಬಂಗು ಹ್ರುರಿತು « ಸ್ಕಾಮಾ | :, ಅಗ್ಮಿರಗ್ರೀಪ್ರಥಮೋದೇವತಾನಾಂ ` ಎಂಬ ಕ್ರುತಿಯಿಂದ ಅಗ್ನಿ ಯೇದೇ ಐ ಒ [= ಸ್ಟು ಆತಿ ಲ್ಯು ೯%, ಫ | - 5)
೫ಲೆ ಕಾದಿಂಬನೀಸಂಗ್ರಹೆ ವತೆಗಳಲ್ಲೆಲ್ಲಾ . ಮೊದಲನೆಯವನು). ವಿಸ್ಚುಲಿಂಗಾಕ್ಕಕವಾರ ಮಣಿಗಳನ್ನು ಧರಿಸಿ ಅಗ್ನು ವಾಸನೆ ಮಾಡಿದರಿ ಮೋಕ್ಲ್ವ್ರ ಳರಗತದಾಗುತ್ತದ; ಆದ್ದರಿಂರ ಅಗ್ನಿಯು ಬ್ರಾಹ್ಮ ರೆಲ್ಲ ರಿಂದಲೂ ಸೇವಿಸಲ್ಪಡಲರ್ಹಗು “` ಎಂದು ಹೇಳಲು, : ! ಅಗ್ನಿಯು ಗೇವತೆಗೆಳಲವ್ಲಿ ವಿಷ್ಣುವು ಪರಮನೆಂತಲೂ, 3ರ ದೇವತೆಗಳು ಮಥಧ್ಯಮರೆಂದೂ, ಪೇಳಲ್ಪಟ್ಟಿದ್ದಾರೆ; ಹಾಗೆಯೇ ಕ್ರಿ ೨ 4 ಅಗ್ನಿಯು ರೇವತೆಗಳೆಗ ಆವೆರ ಭಾಗಗಳನ್ನು ಶಮರ್ಮೆದೇವತೆಯು; ಆ ಒಂದ ನೀವು ವಸಹ್ತ್ಯಧೀನವಾದ . ಮಾಡುತ್ತಲೂ, ವಿಷ್ಣುವನ್ನು ಫೊಬೆಸು ಶ್ತಲೂ, ಅದ್ಯೈತಮತಾನುಯಾಯಿಗಳಾಗಿರಿ “ ವದು ರೊ, ಆಚಾರ್ರರಿಗೆ ನಮಸ್ಕರಿಸಿ ಪಂಚಾಯತನ ಗೂಬಾರತರಾದ ಅದ್ಯೈತಿಗಳಾದರು. ಹೊರೀಕರ:ಇವು). ಹಣೆಯಲ್ಲಿ ಯೊ, ಭುಬದ್ಯಯೆಗಳಲ್ಲಿಯೂ, ಮತ್ತು ವಳ್ಳಸ ತಲದಲ್ಲಿ ಯೂ ಮಂಡಲ {% $ ೨ { `ಆಹಿಷ್ಮಿ .. ಚ್ಯನಿ } ,- ; ೯ , ಹ ಉ, * ಣನ (ಚುಳ್ ೬ ಹಸೆ 3 ತರಾಗಿಯೂ ಸೊರೈಗನ್ನು . ಆರಾಧಿಸುತ್ತಾರೆ. ಈ ಉಪಾಸೆಕರಿಗೆಲ್ಲಾ ಉತ್ಪನ್ನ ರಾಗಿವ್ತಿರಿ) ಅಡ್ತರಿಂದ ಮೋಕ್ಲಾ ಪೇಕ್ಸಿಗಳಾರ ಸಳಲ ರಿಂದಲೂ ಸೊಯನು ಪೂಜೆಸ್ಲ ಡಬಕು ` ಎಂದರು. ಅದಳ್ವೈ « ಏಲೈ ಮೂಫರಾದ ದಿವಾಕರಾದಿಗಳೇ | , ಸ್ಲೊ ರ್ಸೋ ಅಚಾಯತ ` ಇತ್ಕಾರಿ ಶ್ರುತಿವಾಶ್ರ ಗಳಿಂರ ಜೀಳ
5ರಕಕಅಈಥಾಸಾರೆ ೯ ಲ್ಪಟ್ಟಿದೆ; ತರ್ಅಸಿದ್ಧಾಂತಪ್ರಕಾರವಾಗಿ ಅನಿತ್ಯದಾದ ವಸ್ತುವಿನಲ್ಲಿ ಬ್ರಹ್ಮತ್ಕವು ಹೇಗೆ ಹೇಳಲ್ಪಡುತ್ತದೆ ? ಬ್ರಹ್ಮ ಬೋಧಳಗೆಳೊ ಆರ ಶ್ರುತಿವಾಳ್ಯಗಳು € ಸೊರ್ಳನು ಪ್ರಕಾಶಿಸುತ್ತಾನೆ ` ಎಂಬ ಅರ್ಥವನ್ನು ಸೃಷ್ಟ್ಯಗೊಳಿ ಸುಶ್ತವೆ; ಸೂರ್ಭಾದಿಗಳಿಗ ಬ್ರೋತಿಕಾನ್ತ್ರದನ್ಲಿ ಯೂ ಅನಿಶ್ನತ್ಯವು ಸಿದ್ದ ನಾಗಿದೆ; ಆದ್ದ ರಿಂದ ಪಾಷಂಡಚಿಪ್ನ್ ಗಳನ್ನು ಬಿಟ. ತುದ್ದೆವಾದೆ ಅದ್ದೆ ಫಿತಮೋಧಿಯಿಂದ ಶುದ್ದ ರಾಗಿ ಮತ್ತಿಯನ್ನು ಹೊಂದಿ `“ ವಂದುನೇಕಿನಲು ಅವರೆಲ್ಲಿ ಆಚಾರ್ಕಲಗೆ ವಂದಿಸಿ ಅವರ ಶಿಷ್ಠರಾದರು. ಅನಂತರ ಶಂಕರಧಗವತ್ಪಾರಪೂಜ್ಳರು, . ಯಾಪೇಕ್ಷೈಯಿಂದ ಆ ದಿಕ್ಕಿಗೆ ಮೂರು ಸಹಸ್ರೆ ಮಂದಿ ಮೆದ್ರಿತಿನ-ರುಗಳಿಂದೆ ಹಿಂಬಾಲಿಸಲ್ಪಡುತ್ತಾ ಕು. ಆ ಕಿಗ್ಭ್ಯ-ಲ್ಲಿ ಣ್ರೈನೆಕು ರನ್ನು ಕೆಲವಕು ಶುಧೋ ಶೈ ಗಳೆಂದೆಲೂ, ಆರವರು ವಾದ್ಯವಿಶೀಷೆಗಳೆಂದಲೂ, ಕೆಲವರು ಶಂಟಾನಾದದಿಂದಲೂ, ಕೆಲವೆಯೆ ಸೇವಿಸುತಾ ೫3 ಕ್ರೂ # ಒಲ್ಡ್ ಹರ ರು. { ಗ್ {೯೨೪೨ ಸೌಟ್ ಸ (ಘ್ ಣರನ್ನು ಸೋಲಿಸುತಿಸ್ಥಿ. ಅನಂಶೆರ.. ಸ್ಪ್ಳಳ್ಳಿ ಬಂದು, ಅಲ್ಲಿ ರುವ ಕೌಮುದೀನದಿಯಲ್ಲಿ ನಾದಿಗಳಂ ೧೨೩೫ ವಿಘ್ಮೇರಶೃರನಗ್ನು ಪೊಜೆನುತ್ತಾ ಬಹಳ ಕಾಲವಿದ್ದರು. ನಸರಾಗಿರ ರು. ಇತರೆ. ತಿಷ್ಕುರು, ಈ?ಇರ್ಯರಿಗೂ, ಪದೃವಾವಾದಿ೪ಗೊ ಭಿಳ್ಳೆಯನ್ನೀ`ಯಃ ತ್ತರಲೂ, ×3»ಯಂಕಾಲದ ಹೊತ್ತಿನಲ್ಲಿ ಗುರುಗಳೆಗೆ ದ್ಯಾದೆಂನಮಸ್ಥಾರಗಳನ್ನು ಸಮ _ ೨ ಡಕ್ಕಾ, ತಾಲ, ನೃತ್ತ ಇವ್ರಗಳಿಂದ ಸ್ತುಶಿಸುತ್ತಲೂ ಇದ್ದರು. “ ವೆ ಭಂ೦ಜನವು. ಅನಂತರ ಆಚಾರ್ಸರು ಗಣವರವುರಕ್ಕೆ ಹೋಗಿ, ಅಲ್ಲಿರುವ ಗಂಧವತೀನದಿಯಲ್ಲಿ ಸ್ನಾನಮಾಡಿ ಗಣಪತಿಯನ್ನು ಸೇವಿಸುತ್ತಾ ಏಂಟುದಿನಗಳು ಇರೆಲು ; ಮತ್ತು ವೀರವಿಘ್ಷೇಶರೆಂದು ಹೆಸಝಳ್ಳೆ ಇಬ್ಬರು ಒಂದು ಎಳ್ಳೈ, ಯೆತಿಯೇ ! ನಿನ್ನ ಮಶವು ನೋಡುವುವೆಳ್ಳೂ ಕೇಳುರ್ರದಳಕ್ಕೂ ಸನೂಜೀನವಾಗಿಲ್ಲ್; ಬ್ರಹ್ಮ
೬.0 ಕಾದಂಒರೀಸನಂಗ್ರಹ ಬೋಧಿಸುವ` ಅದ್ವೈತವು ಆಕಾಶದಂತೆ ಆಧಾರವಿಲ್ಲ ದೇ ಇದೆ ; ವನಸ್ಸ್, ವಾಳ್ಯು, ವೃತ್ತಿಗಳಿಗೆ ಆಗೋಡತವಾದದ್ದು; ಇಂತಹ ಏವುತ್ಬದಂಕೆ ಮು ಮುಳ್ಳು ಗಳಿಂದ ಧ್ರಾನವೂಡಲ್ಪಡುವುದಳ್ಳಿ ಹೀಗೆ ಬೋಗ್ಗರು ; ಆದ್ರರಿ²ರ ನಮ್ಮ ಮತಶವೇ ಉತ್ಕ್ಯನ್ಠಿಷ್ಠ . ವು ; ನಮ್ಮ್ನ ಗಣಪತಿಯೇ ; ಳವೆನೇ ಬ್ರಹ್ಮ, ವಿಷ್ಣು ಮಹೇಶ್ವರ ಮೊದಲಾದ ಗಣಗೆಳೆ!‰ಎ ಒಡೆಯನು ; ಅವನು ವಾಲ್ಕೀ $, ವ್ಯಾಸರೇ ; ಕಗಿಂಕವೀನಾದುರಶಳ್ರವನ್ರವುದು *1 ಎಂಬ ಶ್ರುತಿಯಂತೆ, ಶ್ರೀಸ್ತನು ; ಸಳಲ್ಲ ವಿದ್ಭಾಧಾಯಕರುಗೆಳಲ್ಲಿ ಇವನೇ ಶ್ರೀತ್ತ ನು ; ಬ್ರಹ್ಸೆನೇ ಮೊದಲಾವೆ ಸೃ.,. ಕರ್ತೆರಿಗೂ ಗಣಪತಿಯೇ ಕಾರಣನು ; ಆಂತಹ ಈ ಈ.. ಒ ಗಣಪತಿಯನ್ನು ಸೇವಿಸಿದರೆ :.ರುತ್ತದೆ “` ಸಿನ್ಟ್ರಲು --= ಶಂಕರರು « ಥಂಚಿವಿಫ್ನ್ ಶೃರರೀ !. ಬ್ರಪ್ಮಾದಿಗ ಳಿಗೆ ಗಣಪತಿಯೇ ಮೊಳಿಕಾತಇನೆಂದು ಪೇಳಲ್ಬಟಿ ಕಲ್ಲ < ? ವಾವ“ತಿಯ ಆಂಗಮ ಲದಿರಂದ ಚಿಶನಂದೆ ಗಣನೆ 3 ಶೈವ್ರ ವೇಗೆ ಯಾ ವೆನ ಈತ್ತೆರನು ತಂದೆ £ ) [ ಆ| ಯೋ ಅಂಶ ಈತಕ್ತರನಿಗಿ ಈ ಗಣತಿಯ 5೯೩ ಕಂಡದೆಯಾದಾನು ? ಬ್ರಹ್ಮೆನ€ ಮೊದಲಾದ ದೇವತೆಗಳಿಗೆ ವೇ ; ಆ ರ್ರಿಖ್ಮ ಐಸ್ಮುವಿಲ್ಲರ? ಜರಾ ಗೆ ಸ 007೯ ಸ್ಟ್ ಜರ ರೂಪನಾದೀ ೪೬ ; ಈ ಗೆಣಪೆತಿಮ್ಯ ಹಃಗಿ „ನ್ . ಆವೆ ಲಾದ ನಿ ನ್ನ ೧ಹೆದಲ್ಲಿ ಅಂ˜ಈನೆಗಳ “ ಆ ಲ್ ಯೋಗ್ಸನಾಗಿರ್ ರೂ, ಈಶ್ನರನಿಂರ ಉತ್ಪನ್ನ ನಾದಳಾಂಣ ಜಗತ್ನ ರ್ತೃತ್ತ್ಯವನ್ನು ಹೇಳುಧ್ರದು ಸರಿಯಲ್ಲ “` ಎನ್ನೈ ೪3, ಯ್, ತಮ್ಮ ಚಪ್ಪೆ ಗಳನ್ನು ಐಟಿ , ಆಚಾಕೆ.ರಿಗೆ ವಂದಿಸಿ ಅವರ ತಿನ. ರಾಗಿ ಅವೆರ ಜೊತೆಯೆ ಲ ಯೇ ಹೊರಟರು. ` ಅನಂತರ ಆಚಾರ್ಬರು ಅಲ್ಲಿಗೆ ಒಂದೆ ಆಂಥ್ರರಸ್ನು ಸೃಸೀವಾರಕರನ್ನಾಗಿಮಾಡಿ, ವೆಂಕಟಾಚಲೇಶ್ರರರನ್ನು ವಂದಿಸಿ ಕಾಳಷನಸ್ತಿಗೆ ಬಂದು ಕ್ರಥಕೈಶಿಕಾದಿಭೃರವ ಮತರವ ರನ್ನು ನಿಗ್ರಹಿಸಿ, ಆಯುಧಧಾರಗಳಾಗಿ ಬಂದವಂನ್ನು ಸುಥನೈರಾಯೆನಿಂದ ನಾಶಮಾ ಡಿಸ್, . ಅಲ್ಲಿಂದ ವಿರರ್ಧದೇಶಕ್ಕೆ ಹೋಗಿ, ವಾದಿಗಳನ್ನು ಜಯಿಸಿ, ಕರ್ಣಾಟಮೇಶಳ್ಳೈ ರು. ಆಗ ಅಲ್ಲಿ ಗೆ ಓವೆ“ಳ್ರಳಡನೆಂಬ ಕಾವಾಲಿಕನು, ಮದ್ಬದಿಂದ ಪೂರಿತವಾದ ಜಂದು ನರಕನಾಲವಕ `ಇ‰ಮೊಂಡ್ ವಾಲಿಗಳಿ9ದಲಂಕೃತ
೬೧ ಕಾದ ಶಂಕರಾಚಾರ್ಯರನ್ನು ಕುರಿತು ‹, ಬಳ್ಳೆ, ಬಾ ೩ )ಹ್ರೈಇನೇ ! ನಿನ್ನ ನ್ನು ಕೋಷಿದಕೆ ಶಿವವಾಜೌಧುರಂಧರನುತೆ ಕಾಣ್ಯವಿ ; ಆರೆ ನೀನು ನನ್ನ 93 ಕವಾಲವಂ ಮಾಕ್ರ ಧರಿಸಿಲ್ಲ ? ಕೆವಾಲವನ್ನು ಧರಿಸದಿದುರೆ ಶಿತೆನು ತೃಪ್ತನಾಗುವ್ರದಿಲ್ಲನೆ.ದು ವಿನರಿ ಯೆಯೊ ? ಇನ್ನುವೆ.ಲಾದರೂ, ನರಕವಾಲನಂ ಧರಿಸಿ ದೇವರನ್ನು ತೃಪ್ತಿಗೊಳಿಸು “ ಟಿ 5 ರದು. ಆದನ್ನು <# ಆಚಾರ್ಯರು . ಕೋಪದಿ೭ದ ಅರನನ್ನು . ತಮ್ಮೆ ಗುಂಸಿನ ದೆಸೆ ಯಿಂದ ಆ #, ಳಚಗ, # ದ ನಾಗಿ ಹೊರಳೆ `ಹೋಗಿ ತನ್ನ ಶಿಸ್ಕರಿದ ಅಕ್ಕಾಂತರಮುಂದಿಗಳಿಂ ಸಹಿಕನಾಗಿ ಯೆಡ್ವಿ ಕ್ರೈ ಬಂದನು. ಆಗ ಈನ್ ಕೃ ಅನ್ ಸುಧನ . ರಾಯನು ರನುಬಾಣಈರನೌಗಿ ಯರ «= ~ ²೨5 =, ನಂತರ. =ರರೂ ಕಾಪಾಲಿಕರು ನುಗ್ಗಿಬಂದೆರು. ಆರನ್ನು ನೋಡಿ ಶಂಳರಭಗವತ್ತಾದರು. ಕೋಪದಿಂದ « ಹಾ ` . ಅವೆಕೆಲ್ಲ್ನರೊ ಧಸ್ಮೀಕೃತ ಗ.. ಶನ್ನ ನು, ಕ ತನ «5, ೭5ಣ ಕವಾ ಟಕ್) (ಯ | [೪] [ | ಟ್ಸೆ @ ೬೨ ೬ <^ ಕ್ = <? ಇ ೪ ಹ್ನೀಜ್ ಅ £ ೪ .ಆ , #೫ ಲರ ಮದ್ಯದಲ್ಲಿ ಅರ್ಧವೆನ್ನೈ ಪಾಗವೆಣಡಿ ಧಾ.ಸಿಸಲು, ಜರ .#೫++ ತ್ ಈ ಈ ಮರ್ ನೆ ನ ೧೬೩ ತಕ್ತೆ . 4 ಗ್ = \ ಈಸ್ ಕಳ್ತೆ ೨5೫ ವನು ಕೂಡ ಪ್ರಕ್ತಿಳ್ಸ್ನನ ತ್ರ್ಕ್ತಜನ3 1 * ಇಲ್ಮೈನ ಹೂರ ಇವನನ್ನು ಕೊಲ್ಲು 1° ಬನ್ಮೈಳು ನನ್ನ ವಶಾರರೂವಿಯೌದೆ ಕ್ರೀಶಂಕರನಲ್ಲಿ ಲ್ ಹೇಗೆ ಅಪರಾಧನನ್ಮಾ ಜರಿಸುವಿ ? “? ಖಂದು ಕೋಪಗಂಡನನಾಗಿ ಆ ಕ್ರಕಡನನ್ನೇ ನ6`ಫ್ರರಿನಿ ಅಂತ˜೯ ತ ಕಫಿ“ ತನನಿ5ನೈ ಆನಂತ ಪೆ € ನಿ! ತ ತ. ಧಾರಿಯಾರೆ ಒಲಬ ಈ ಪಐಣಕನ @ ಕ್ರೆ ರ್ಇ { ಕಣು { ಆಟಿ ಕೈನಲ್ಲಿ [\ ಗೋಲಯೆಂತ್ರವನ್ನೂ, ವುತ್ತೊಂದರಲ್ಲಿ ತುರೀಯಂತ್ರವನ್ನೂ ಧನಿಸಿರೆವೆನಾಗಿ ಬಂದು ಆಚಾರ್ಬರನ್ನು ಕುರಿತು. « ಸ್ನಾವಿ೫ ! ಅಕ್ತಂತ ಆತ್ತರ್ಯಕೆರರೂ ಆದ ನನ್ನ ಮಾತನ್ನು ಕೇಳಿ }. ಪೂರ್ಣಸಮಯನೆಂದು . ನಾನು ಕಾಲಫ್ರವ ರ್ತಕನಾದ ಸೂರ್ಯನನ್ನು ಈ ಯಂತ್ರಗಳಿಂದ್ಯ ಬಂಧಿಸಿ ತ್ರಿಲೋಕಗಳಲ್ಲಿಯೊ ನಡೆ ² 1 ತಿಳೆಯೆತ್ತೇನೆ ; ನಾನು ಯಾವ್ರದನ್ನು . ಒಳ್ವಿಯಂದಿಂದು
&ಓ__೨ ಕಾದಂಬರೀಸಂಗ್ರಪ ಅದಕಳ್ವೆ ಶಂಕರರು « ನಿನ್ನಿಂದ ಚೆನ್ನಾಗಿ ಹೇಳಲ್ಪಟ್ಟಿತು ; ನೀನು. ನನ್ಷ್ ಸಿಮೊಶ ದಲ್ಲಿ ಯೇ ಇರು ; ವರೀಕ್ಲಾ ಸಮಯಬಂದಾಗ ನಿನ್ನನ್ನು ಕೇಳುತ್ತೇನೆ “ ಎನ್ಟ್ರ ಲ- ಅವನು ಹಾಗಿಯೇ ಆಗೆಲೆಂಗು ಒನ್ಪಿ ಅವರ ದ್ದನು. ಅನಂತರ . ಶಂಕರರು . ಶಂಳನೆಂಒ ಬೌದ ಮತನಾದಿಯನ್ನೂ, ಮಲ್ಲಾರಿ ಮತೋಪಾಸಕರನ್ನೂ , ದಿಸೃಳ್ಸೀನ ಮತಾನುಯಾಯಿಗಳನ್ನೂ , ಮನ್ಮಥ ಭೆಕ್ತರನ್ನೂ , ಕುಬೇರೋವಾಸಕರನ್ನೂ, ಇಂದ್ರಧಳ್ತರನ್ನೂ, ` , ಪ್ರಯಾಗ ದಲ್ಲಿ ದ. ವರುಣೋಪಾಸಳರನಲ್ನಿ, ಮತವಾದಿಯನ್ರೂ , ಪರಾಹೋಪಾಸಕರನ್ಕಿ, ಸಾಂಖ್ಧಿಮತಾನುಯಾಯಿಗಳನ್ತೂ, ಕಾ:.ಲಮತಾನುಯಾಯಿಗಳನೆಲ್ನಿ, ಸುಧೀರಶಿವ ರೆಂಬ ಅಣುಳಕಮತದವರನ್ನೂ, ಭರಣನೇ ರೊದಲಾರ ಣಂಗ್ರೋವಾಸಕರನ್ನೊ. ಮತ್ತು ಭೌಮಾದಿಗ್ರಹೋಪಾಸಕರನ್ನೂ, ಮೇಲೆ ಹೀಳಳ್ಬ್ಟ್ಜ, ಕ್ಲೆ ಪಣಳನು ಆಚಾಕ್ಕರನ್ನು ವಂದಿನ ಸ್ಕಾ £ ? ನಿಮ ಅಧೀನದಲ್ಲಿ ಯೇ ಆರು ತಿಂಗಳು ಕಾಲವು ಕಳದುಖೋಯಿತು ; ಕಾಲಬ್ರಪೆಬೋಧಕವಾದ್ ನನ್ ಮತವನ್ನು ನೀವು ಆಶ್ರಯಿಸಿ ಮುಳ್ತರಾಗಿ ` ಬನ್ಟ್ರ ಲು -= ಆಚಾರ್ಕರು ‹ ಈ ಕಳವು ಸಂವತ್ತ ರರಾಯಿತು ` » ಶು ತಿಯಿಂದ ಕಾಲಕ್ಕೆ ನಿಶ್ಕತ್ತವ್ರ ಹೇಗೆ? ಆದ್ದರಿಂದ ಎಲ್ಕಿ, |. ನಿನ್ಟ್ನ *5 ಸ ಕ್ಕಿಂತ , ತಮತವನ್ನು ಆಶ್ರಯಿಸಿ ಮುಕ್ತೆನಾಗು ಲನ್ಷ್ನಳಲ-.- ಅವನು, ನೆಮೆಸ್ತ್ರರಿಸಿ ಆದ್ವಯಬ್ರಷ್ಠದಲ್ಲಿ ಅನುರಳ್ತನಾದನು, ವುಲಸ್ಸಿರಿವುತಖಂ೦ಡನವು. ಅನೆಂತರ ಆಚಾಕ್ಸರು ಅನುಮಲ್ಲ ಪ್ರರಳ್ಳೆ ತೋಗಿ ಅಲ್ಲಿ ಇಪ್ತತ್ತೊಂದು ದಿನ ಇದ್ದು, ಅಲ್ಲಿನವರನ್ನು , ನೀವು ಪ್ರಭಾತಾದಿಕಾಳದೆಲ್ಲಿ ಮಾಡುವ ಕಾವನ್ನು ತಿಳೆಸಿ, ಬನ್ನ ಲು, ಆವರು , ಸ್ಪಾ ವಿ೫ ! ನಾವ್ರ. ವೆಲ್ಲಾ ಸುರನನ್ನು ಸಂಪಲನಿ ವುಲ್ಜಾ ರಿಯೆಂದು + ೨ ಪ್ರಸಿದ್ಧನಾದ ಆ ಶುನತ ನನ್ನೂ, ತ್ರಿಕಾಲದ ಲ್ಲಿ ಯೂ ರೂಬಿ, ಕತ್ತಿನಲ್ಲಿ ವರಾಟಕ (೪ವಡೆ) ಗಳನ್ನು ಧ್ರರಿನಿ ಸ್ವಾಮಿಯನ್ನು ಪ್ರಸನ್ನನಾಗಿ ಮೊಡಿಕೊಂಡಿರೇಡೆ; ಆ ಸ್ನಾಮಿಯ . ಕಟಂಳ್ಸ್ಮದಿಂದ ಸುಖನಾಗರಗೆಳು ಅಭಿವೃದ್ಧಿಯಾಗುವುವು; ಇದಲ್ಲಗೆ ಅವನವಾಹನಳ್ಳೆ ವೇದದಲ್ಲಿ € ` ಮ‰ಓಮೆಯು ಹೇಳಲ್ಬುಟ್ಟಿದಿ; ನಾವು ನಿಮಗೆ
ಶಂಕರಳಕಥಾಸಾರ ೬೬೩ ಅದಳ್ಳೈ ,: ಏಳಮೇವಾದ್ವಿತೀಯಂ ಬ್ರಹ್ಮ * ಪನಾದ ಓರ್ವನೇ; ಅವನಿಂದಲೇ ತ್ರಿಮೊರ್ತಿಗೆಲೊ ಕೆ. ಮತು ಉ ಔ ) ಲಯಹೊಂದುತ್ತಾರೆ ಕಲೆಗಳಿಗೆ ವಿಕಳೆಗಳು ಹೇಗೋಹಾಗೆಯ್ಯೇ ಆ ತಿಮೊರ್ತಿಗ ಳಿ9ದಲೂ ಉತ್ಪನ್ನೆ ರಾದಮರಿದಾರೆ; ರುಥ್ರನೆಲ್ಲಿ ಎಕಾದಶರುದ್ರರೆಂದು ಪ್ರಸಿದ್ಧರಾದ ಅಂಶೊತರುಂಟು) . ಪರಬ ಪೃನಿಗಿರುವ ರಕ್ತಿಯು ಕ್ರಿಮೊರ್ತಿ ಗಳಿಗೆ. ಹೀಗಿಲ್ಹವೋ ಹಾಗೆಯೇ ತ್ರಿಮೂರ್ತಿಗಳಿಗಿರುವ ಶಕ್ತಿಯು, ತದಂಶೀಯರಿಗಿ ಲ್ರ ವು; ಆದ್ಬರಿಂರ ನಿಮ್ಮ ಮೆಲ್ಲಾ ರಿಗೆ ಅಷ್ಟು ಪ್ರಾಶಸ್ಠ ಸ) ಹಿಂಗೆ ಒಂದಿಂತು ? ಕ್ವವೇ ಷವನ್ನು ಧನಿಸುವ್ರದು; ನಿತ್ಸೆ ಕರ್ಮವನ್ನು ಬಿಡುವ್ರದು; ತ್ರಿಕಾಲದಪ್ಹಿಯೂ ನಾಟ್ಮಾಸ ಕಳ್ಳಿ ನ ಇನ ಸನ್ ತ್ತಿ ತೌ=® 5೬ ರಿಸಿ ಕ್ಷಮಾಪಣೆಯೆಂ ಬೇಡಿದ ಅಮು, ತ್ತವಂ ವೂಡಿಸಿ ಅವರನ್ನೆಲ್ಲಾ ಶುದ್ದಾದೈ )ತಿಗಳಾದ ಬ್ರಾಪ್ತೇರಸ್ನೌಗಿ ವೊಡಿಯು ಕ್ರೂ. , ಅ ಇರಿ, ಆ ಆನಂತರ ಆಭಕ್ಸರು, ಉದಯನಿಬ್ ನ್ಸಾ ತಪ್ತಮುದಾ, ಔ ಈಸರನ್ , ವಾಮಾಚಾರಪೆವಷ %, ವರನ. , ಪ್ರಿವೆರನಲ್ನಿ, ವಾ ಸ್ರವಿಷ್ಟಯ ಧಾರಿಗಳಾದ ಒ ಪ್ಲ್ನ ನ , =೪ = , # \ 0೧0095 * ರಾದ ಶಾಕ್ತರನ್ನೂ, . ರಳ್ತಗಂಧಾರ್ಜನೆಯನ್ನು ` ಮೊಡುತ್ತಿದ್ದ ಸೌರರನವ್ನಿ , ನರ ಸಮರ್ ಕಕಕ ಕ್ರಿ ಸ್ಲಕ್ಲ್ ಕಈ \೩೯೩೩ವೆ ಈವನಿಲಿಕರನಿವ್ನಿ , ಉಚ ಡ ಗಾಗಾಪತ್ಯರನ್ನೂ ವಾದದಲ್ಲಿ ಸೋಲಿಸಿ, ಸಪ್ರಮಾಣದಾಗಿ ಅನುಧನನಿರರ್ನ ರ್ರೆಂತ್ತ ಸಿನಿಕ್ ² ಎಲಿ ಎಳ ವ ® ೯); “$. { ಧನ £#-® ಆಯ್ ~ 7 ಈ ೪ ಆ ಆನ್ ಈ ಪ್ಕೈಢ್ . ದೆಶ ಇಲ್ಲಿಂದ ಆಚಾಕ್ಕರು ‹ ಯಮಂಪೆ ಯೆಜಿಖ್ಸೀಗಜ್ಛ ತಿ ` ರದು ಹಳೆ ವಾದ ಕ್ರೈ ಬಂದ ಕಾಮಳರ್ಮನೇ ಮೊದಲಾದ ಯಮೋಪಾಸಳರನ್ನೂ, ಇಂದ್ರಾದೃಷ್ಟ್ಯದಿ ಕ್ಪಾಲಕೋನಾಸಕಳರನ್ಕೂ, ಫ್ರಘಾನವಾದಿಯೇ ನೊದಲಾ ದವರನ್ನೂ , ನಿತೃದೇವಕೋಪಾಸಕಂಇದ ಶಂವಿಪಾದನೇ ಮೊದಲಾದವಂನ್ನೂ ಮತ್ತು ಬೇತಾಳೋಪಾಸಕರನ್ನೂ ಸೋಲಿಸಿ ಪಕ್ಲಿ ಹೋದಿರು. ಆತಾಕ್ಕರು ಆಲ್ಲಿ ಭಾಷಠಪ್ರವಚನ ಮಾಡಿಸುತ್ತಿದ್ದ ಸಮಯದಲ್ಲಿ ಹರದತ್ತನೆಂಬುವನು ಬಂದು ಶೈವಸೂತ್ರಭಾಷ್ಟಕರ್ಶನೊ, ಆದ ನೀಲಕಂ ತನನ್ನು. ಪ್ರರಂಸಮಾಡಲು ಆಚಾಕ್ಸರು ಆ ನೀಲಕಂತನನ್ನು ವಾದರಲ್ಲಿ ಸೋಲಿಸಲು
೪ ಕಾದಂಬನೀಸಂಗ್ರಹ ಅವನು ತನ್ನ ಭಾತೃವನ್ನು ಬಿಟ್ಟು ಹರದತ್ತನೇ ಮೊದಲಾದ ಶಿಷೆರೊಡನೆ ಶಕಣಾಗತ ವನಾದಿನು. ಅಲ್ಲಿಂದ ಆಚಾಕ್ಕರು ಸೌರಾಷ್ಠ್ಯ ಳ್ಲೈ ಹೋಗಿ, ಅಲ್ಲಿದೆ ಸೋಲಿಸಿ, ದತ್ಸಿರತಿಗೆ ಬಂದು ಪಾಂಚರಾತ್ರರನಲ್ನಿ, ಅವರ ಗುರುವಾದ ರನ್ನೂ ವಾದದಲ್ಲಿ ಗೆದ್ದು ಅವೆಂತಿಗೆ ಹೋಗಿ ಆವ್ಲಿ ದ್ದ ಮೊದಲಾದವರನ್ನು ತಮ್ಮ ವಜ್ರಾಯುಧದಂತಿರುವೆ ಸವರಾಮಾಣುಗಳಾದ ವಾಕ್ತಮೊಹಗಳಿಂದ ಹೆತಗರ್ವರ ನ್ನಾ ಗಿಮಾಡಿ ಸೃಭಾಷಸೃವಂ ಒಂರ ಕ್ರೀಹೆರ್ಷನೇ ಮೊದಲಾದವರನ್ನು ಸೋಲಿಸಿ, ಅನಂತರ ದರದ, , ಪಾಂಚಾಲದೀಶಗಳಲ್ಲಿ ದ್, ವಾದಿಗಳಂ ನಿಗರ್ವಿಗಳನ್ನಾಗಿವಾಡಿ, ಅಲ್ಲಿಂದ ಕಾಮರೂಪಕಳ್ಗೆ ಹೋಗಿ ಶಾಳ್ತ ಭಾಷ್ಠ ಕರ್ತನಾದ ಗೆದು , ಗೌಡಪದದೇಶಳ, ಮುರಾರಿಮಿಶರರಂ ಸೋಲಿಸಿ, ಬೌದ ರನ್ನೂ, ನ್ಕಾಯಸಿದ್ಧಾಂತಜ್ತಾ,ನದಿಂದಲೇ ಮೋಕ್ ಬರುವ್ರದಿಂದ- ಹೇಳುತ್ತಿದ್ದೆ ಸನಿದ್ಭಾಂತಙ್ಞಾನಯಾಯಿಗಳಾದ ತಾರ್ತಿಕರಗ್ಳೂ, ಕೇವ... ಮೋಕ್ಸ್ನ ಬರುವುದೆಂದು ವಾದಿಸುತ್ತಿದ್ದ ಕಾಪಿಲಮತಾಗುಯಾಂಬಗಳನ್ನಿ, ಶವಿ ಪಾತಂಚಲ ಮತಾನು ೬ ಫ್ರೊ ಯಾಯಿಗಳನ್ನೂ, ಮತ್ತು ಮ ಮತಾವಇಂಬಿಗಳನ್ನೂ ವಾದದಲ್ಲಿ ಗೆದ್ದು ತನ್ ಪನೆಯಂಗೈಣರು ಆವರಿವಿಗೆ ಈ ಧರತಬಂಡದಲ್ಲಿರ್ಲ೬ ದುರ್ಮೆತಗಳು ಶಾಂತವಾಗಿ ಅಡಗಿದವು ಗಣಲಿ ± ® . ‰ ಈ‰ ಆವ ಣ < ತೆ ಪೆಂಡಿತಕು ನಿರೇಯೆರಾಡೆರು. ಮಹ ಘೆಯಯನ ಸಿದಿ ನಿ ~~ ×೩ಝನ್ನು ಕಂಡೆ ಧಳ್ತರು ತ್ಯಾ ಒಂದರು. ಮೊರ್ಟರಾಗಿ ಹೆತದಿಂದ ಚಿಗಳಳ್ಕೆ ನಿಂತವರು ರಾಜನಿಗೆಹ ಸತ್ಸ್ಯಗುಣವನ್ನು ಆನುಸಲಿಸಿರಕು. ಮೋಸತನದಿಂದ ಗುರುಗಳನ್ನು ದ್ಯೇಷಿಸಿದವರು ಲಚಾರ್ಬರ ತಪಃಶಠ್ತಿಯಿಂದ ನಷ್ಪರಾದರು. ಕೋಟ್ಮಾನುಕೋಟ ಬ್ರಾಖ್ಮಣರು ದುರಾ ಗೌ) [೫1 { <-೫ ಚಾರಗಳಂ . ಗೈದಿಕಮಕವನ್ಷ್ನನುಸರಿಸಿ ಪಂಚಾಯತನ ವೂಚಾರತರಾಗಿ ಆತ್ಮ [ಗೀದಾನುಸಂಧಾನದಿಂದ ಪರಮೇಶೃರನನ್ನು ಕರ್ಮಮಾರ್ಗಫ್ರಕಾರವೇ ಆರಾಧಿಸುತ್ತಾ ಭಕ್ತಿಯೋಗ, ಕರ್ಮೆಯೋಗೆ, ! ಹತಯೋಗ, ಸಾಂಟ್ಳಿಯೋಗ, ಮುಂತಾದ ಸರ್ವ ಮಾರ್ಗದಲ್ಲಿ ಯಿ ಗೋಷಮಾರ್ಗವಂ ಬಿಟ್ಟು, ಶ್ರುತಿಯುಕ್ತ್ರವಾರ ಬ್ರಹ್ಮಾತ್ಮೆ ಫಿಳ್ಳಾ ನುಸಂಧಾನದಿಂದಲೇ ಫ್ರವರ್ತಿಸುತ್ತ, ಸರ್ವ ಮಾರ್ಗವನ್ನೂ ಬ್ಲಾನದಲ್ಲಿ ಮುಗಿಯಿಸ್ರಿ ಡಿ @ ಕಾಮಳ್ರೋಳಾದಿಗಳಂ ತೃಜಿಸಿ ಅನ್ತಯಾಹಿಂಸಾಸತ್ಕ ಶೌಡದಯಾದಿ ತಡ್ಲು ಣಗಳಂ ಪಡದು ಶಪನ್ವಿ ಗಳಾಗಿ .. . ಬ್ರಾಹ್ಮೆಣಕಿಲ್ಲ್ನರೂ ಪರಮಾದ್ವೈ ತ ೧೯ 5 ನಿ ೧ ದ್ರಿಣ
೮9೯5 ರಳಕಥಾನಾರ ೬೫ ಮತಾನುಯಾಯಿಗಳಾಗಿದ್ದರು. ಉಳಿದವಕೆಲ್ಲತರೂ ಶಕರಚರಣಸೇವಾಧುರೀಣರೆನಿ ಸಿದರು. . ಈ ಪ್ರಕಾರವಾಗಿ ಆಚಾರ್ಯರು ಆಸತು೭ವೂಚಲದಮಧ್ಯದಲ್ಲಿರುವ ಕರ್ಮ ಧೂಮಿಯಲ್ಲಿ ಪ್ರಧಾನಮಲ್ಲನಿಒಪಣಣನಾ,ಯದಿಂದ ೭೩೨೦ ಮಂದಿಗಳನ್ನು ವಾದದ ಲ್ಲಿ ಸೊಲಿಸಿದರು. ಆಗೆ ಕರ್ಮಯೋಗ್ಳ ವ»ದೀಭರಶಮಿಂಡವು ಜ್ಞಾನಮಯವಾಗಿತ್ತು, ‰ಲಗಿ ಪರಮಾತ್ಕ್ರನು ಥೂಮಿಯಲ್ಲಿ ಒನಗಳ ಮನಸ್ಸಿನಲ್ಲಿ ಅಡಗಿದ್ದ ಆಜ್ಲಾನಾಂಧಕಾರವನ್ನು ಜ್ಞಾ ನವೆಂಬಸೂರ್ಸರನ ಬೆಳಕಿನಿಂದ ಹತ್ರೀರಾಶಿಗೆ ಬಿಗ್ಡ ಬೆಂಕಿಯಂತೆ ತೊಲಗಿಸಿದನು. ಅವರ ಶಿಷ್ಯರೂ ಮಾನವರ ರೀಹದಲ್ಲಿ ಪಹಾ ಅಡಗಿದ್ದ ಕಾಮ, ತಮ್ಮ ಸದುಕ್ಶಿಸದುವದೇಶ ಗಳಂಬ ತೀಕ್ಷೈಗಳಾರ ನಲಬಗಳಿಂರ ತಿವಿದು ಥ್ರೆಂಸಮಾಡಿ .- = ೬೨೬ ಜ್ಜ ೨ ಸ- ದೀ. ಸವಲ್ಹ್ನ € ಈ ತ ², ಭಗಂಧರಾರ್ತಿಭಂಗಮೇತ್ಯ ಪದ್ಧರವಾರಶೋ ಗುರು› ನಿಕೃತ್ತ ದುರ್ಮತಸ್ತು ಗೌಡಪಾದಮುತ್ತರೈರ್ಯುತಮ್ | ವಿಧಿಯ ವಾಗ್ವಷಶ್ವ ಸೀಠಸಂನ್ಫಿ ತಸ್ಲು ನಿ, ೧೭ ಜ | ಬದೆರ್ಯೆವನ್ಮುವಾಂತಮಾವ ತತ್ರಸನ್ನಿ ಶೃಜ || ಬಟ್ಟ ಓನ್ £. ಯ ಟ್ ಹಿಂದೆ ಅಭಿನವಗುಶ್ತನೆಂಬ ಕಕ್ತು ಸವಾಸಕ (ಮಂತ ೧000 ಹ “= 00000 -ಈ ಓ 00000000 . ಹ್ಯಾಲೆ ೫೧ ಟ್ರ <=೨ ^ ನ್ . ನ ಕೊಳೆ . . ಕಿನ್ ಯಂ ಟಣ. ಗೆ ಓಡ್ ವಾದಿ) ನನ್ನು ಸೋಲಿಸಿದ್ದ ರಷ್ಟೆ; ಅವನು ಆಟಾರ್ಬರ ; :“. ಆವರ ಜೊತೆಯಲ್ಲಿಯೇ ಇದ್ದು ದಿಗ್ವಿ ಜಯಾನಂತರ ಅಭಿಚಾರ ಪ್ರಯೋಗಮಾಡಿದನು. ಇದರಿಂದ ಆಈಚಾಕ್ಕರಿಗೆ ಭಗಂದರಕವೆಂಬ ಜಾಡ್ಯವು ಬಂತು. ಈ ವಿಷಯವು ಶಾಟಿಯನ್ನು ಒಓಗೆಯುತ್ತಿದ್ದ ತೋಟ ಕಿಳೆಯಲು ಅವರು ತಿಳಿಸಿದರು. ಅದಳ್ಕೆ ಆಚಾಂರ್ಸರು ಈ ಚಿಕಿಕ್ಸಿಯು ಬೇಡವೆನ್ನ್ಲು ತೋಟ ಕರೇ ಮೊದಲಾದ ಶಿಷ್ಯರು ಆಅನೇಳ ೯೪ಒಮೈಡ್ಯ ರನ್ನು 5 ಕೋಗವ್ರ ಐರಿಹಾ ನವ “ಇ , ಕ್ )
² ಹ್ ಕೌ ಆ೦ಒನಲನಿಂಗ್, >; ಆಗ ಶಿಷ್ಕ್ರರು « ಈ ಜಾಡ್ಯ ವಿನದರೂ ಮಾಡಬೇಕು ` ಬಳಿದು ಆಚಾಕ್ಸರನ್ನು ನಿರ್ಬಂಧದಿಂದ ಪವ್ರಾಥ್ಸಹು, ಆಚಾರ್ಕರು ಅವರ ನಿರ್ಒಂಥಧ ವನ್ನು ಸಹಿಸಲಾರದೇ ಮಹಾರೇವನ ಪ್ರಾರ್ಸಲಾದೇವದೇವನಾಬ್ರ ಯಿಂದ ಅಶ್ವಿ ನೀಡೇವೆಕೆಗೆಳು ದಿ.ಬವೇಷದಿಂಗ ಆಚಾರ್ಯರವರ ಸಮಾಲಳ್ಳೆ ಬಂದು , ಉಬ್ಬಿ ಯತಿಯೆ! ನಿನ್ನ ಈ ರೋಗವು ಉತ್ಪನ್ನ ವಾದ ತಾರಣ ಚಿಕಿತ್ತಿಮಾಡಲಶಕ್ಯವು 11 ಹೇಳಿ ಹೊಎರಾಹೋಣದರು. ಆನಂತ 7 ಕೋಪವನ್ನು ಜ೩ಎಂದಿದ ಪದ್ಬಪಾದರಝ, ಶತ್ರುಗಳ ಏತಯದಲ್ಲಿ ಯೂ ದಯಾದ್ರ“ಹೃದಯವುಳ್ಳೆ ಗುರುಗಳಂದ ತಡೆಯಲ್ಪಟ್ಟರೂ, ತಮ್ಮ ಗುರುವಿನ ರೋಗೆ ನಾಶಳ್ಕಿ ಇನ್ನೊಂದು ಮಂತ್ರವನ್ನು ಜನಿಸಲು ಅದರಿಂದ ಅಭಿನವಗುಪ್ತನೂ ನಾಶವಾ ದನು; ಆಚಾರ್ಯರ ರೋಗವೂ ನಾಶವಾಯಿತು. ಸ್ಪ್ರಸ್ತ್ರರಾದ ತಕಂಕರರು, ಒಂದುರಿನ ಗಂಗಾನಶಿಯೆ ಮರಳಿನಮೇಲೆ ಮಾಡುತ್ತಿರಲು ಅವರ ಗುರುಗಳಾದ ಗೌಡಪಾರರು. ಬಂದು ದರ್ಶನವಿಕ್ತು, ರಚಾರ್ಯರ ನೋಡಿ ಸಂತೋಷವು › ಮುಂಗರಿದರು. ಅನಂತರ ಶಂಕರರು ಬಂಬೂದ್ನೀಪರ ಕಾಶ್ಮೀರದಲ್ಲಿ ರುವ, ಸರ್ವಜ್ಞ ಶಾರದಾವೀಠವನ್ನಾ ರೋಹಿಸದೇ, ಅಲ್ಲಿನವರ ಫ್ರಕ್ನೆ ಗಳಿಗೆ ಸದುತ್ತರರವನ್ನಿ ಶ್ತು ಶಾರದಾಸದನದ ಬಾಗಿಲುಗಳನ್ನು ತೆರೆಯಿಸದೇ ಸರ್ವಜ್ಞ £, ಬರುವುದಿಲ್ಲ ವೆಂದು ಳೇಳಿ ಸಕಿಷ್ಕರಾಗಿ ಅಲ್ಲಿ ಗೆ ಹೊರಟು, ದಕ್ಷಿ ಣದ್ವಾರವನ್ನು ಸೇರಿ ನಕಲ ಮತವಾದಿಗಳನ್ನೂ ಸೋಲಿಸಿ ಒಳಗೆ ಪ್ರವೇಶಿಸಿ, ಸನಂರನನ ಹಸ್ತ್ಯವನ್ನು ಹಿಡಿ ದುಕೊಂಡು ಹತ್ತಲುದ್ಭುಕ್ತರಾದ್ಬನ್ನು ಕಂಡು ಣಯು , ಎಲ್ಬೆ, ಯತಿಯೇ ! ನಿನೆಗೆ ಸರ್ವಜ್ಸತ್ವವಿಲ್ಲ ದಿದ್ದರೆ ಬ್ರಹ್ಮಾ ವತಾರಿಯಾದ ಮಂಡನಮಿಕ್ರನ್ರು ನಿನಗೆ ಹೇಗೆ ? ಈ ಪೀಠವನ್ನು ಹತ್ತಲು ಸರ್ವ ಜ್ಸನ ತೃ ವೊಂದೇಕಾರಣವಲ್ಲ. ಏಳೆಂದರೆ ಶುದ್ಧತ್ತವೂ ಬೇಕು; ಕಲಾರಹಸ್ಕರವನ್ನು ತಿಳಿ ಯಲಿಚ್ಛಿ ಸಿದ ನೀನು ಸ್ರೀ ಸಂಭೋಗವನ್ನು ಮಾಡಿದ್ದರಿಂದ ನೀನು ಹೇಗೆ ಶುದ್ಧರನು [ 11 ಬನ್ಷ್ರಲು ಶಂಕರರು , ಮಾತ ! ನಾನು ಅಮುರುಕರಾಯನ ಗೇಹದಿಂದ ಹೋಗಿ ಕಲಾ ಶಾನ್ರ್ಯವನ್ನು ಕಲಿತೆನೇ. ಖೊರಕು ಯತಿಯ ಗೇಹದಿಂದಲ್ಲ ; ಆದ್ದರಿಂದ ನಾನು ಹೇಗೆ ಉಶುದ್ರನು 11 ಬಂದರು.
ಅಲ್ಲಿ ರ್ದ ಪಾತಂಜಳಶಕಾನ್ರ್ರನಿಸ ರಾದ ಕ್ಷಲವಲಿಗೆ ತಮ್ಮ ಭಾಷ್ಠ್ಯವನ್ನು ಪದೇಶಿಸುತ್ತಿದ್ದರು. ಮಳಿಕ ಶಿಕರಣಶಿಕರು ಬಗುಕಾಶ್ರಮಕ್ಕೆ ಹೋಗಿ ಅಲ್ಲಿ ದಿನಗಳಿದ್ದು ವಾತಿ˜ಕವನ್ನೂ , ಕಣಸಿದರ.. ಭಾಷ್ಠಯ್ಯಗಳಿಗೆ ವಾರ್ತಿಕನನ್ನೂ, ರತ್ಸಿ ವತಾನನೋಲ್ಲಾ ಸನೆಂಬ ಅನಂತರ ಸುರೇಶುರೆ0 ೨೦333 ಇಸ್ಷೆನಂತೆ ಸಿ ವನ ಟ್) [ಶ್ -; “ ಕತ . ವೇ ೪ ನ೧೦ವೆರೆ .ಲವಠ್ಮಾದಿಗೆಳನ್ನೂ , ಸುತೇಶ್ರರಗೆ ಕೊಟ್ಟು ಸ್ಮ ಅಳ , ಈ ಕ ಒ ® ಮರಿ ಬಳ 7%? ^ ಇಕ್ ಟೌ ಯೋರ್ಗತ್ತಿಯಿಂದೆ ಲಿಸಳ್ಳ ತೋ, . ದಿವ್ಯಲಿಂಗವನ್ನೂ, ೬೨ ಟ ವುತವನ್ನು ನಿರ್ಮಿಸಿ ಶೋಟಕರನ್ನೆ ಅಲ್ಲಿ ಗೆ . ಅಧೀಶರತ್ನಾಗಿಮಾಡಿ, ಅನಂತರ ನಿಚ ಪುಲಕರನ್ನು . ಒಡೆಯ:ನ್ನಾ ಗಿನೆಡಿ, ಉತ್ತರದಿಲ್ಲಿನಲ್ಲಿ ಬರರಿಕಾಕ್ರಮೆದಲ್ಲಿ ಒಂದು ಪಕ್ಲಿ ಮದಿಲ್ಪಿನಲ್ಲಿ ಕುರ ದಾರತಯಲ್ಲಿ ಇಂದ‡ ವಿಶರಸಗ್ನೌ ನಿಮಿ²ನಿ ಅಲ್ಲಿಗೆ ಹೆಸ್ತಾ ವರ್ಧನನೆಂಬ ಮತಠನನ್ನು ನಿರ್ವಿಸಿ, ಅಲ್ಲಿಗೆ ಪದ್ದವಾದರನ್ನು ಅಧೀಕರನ್ನಾ [\ ಮಾಡಿ * 3 . 7ರ 3 ೧ ರ್ದಿತ್ಕಿನಲ್ಲಿರುವ ಒಗನ್ನಾಥದನ್ಲಿ ಜೋಗ ವೆಲ್ಲವೂ ಔರುನೆಂತ3 ವಾದೆಬೇಕು,`` ಎಂದು ಪ್ರಾಘಿಸಿದೆರು. ಪರಿನಾಲಿಸುತ್ತಿರುವಂತೆ ಮತನಿಧಿಪತಿಗಳನ್ನಾಗಿ ಏರ್ಪಡಿಸಿ ಲೋಕ ಈ ಈ೮ಕಬಂಕವಲ . ನಡದಾಚಾರನಿಚಾರಕಗಿದ ಧರ್ಮವಕಿ ೫ ಣ @ 1 * = ದಂತೆಯೂ, ಥಧವು“ ಬ್ರಪ್ತೆ ಆಸ ಮೊಡಲಾದನರ್.. ಒಂದು « ಸ ೨ ! ಳೋಶದಲ್ಲಿ ವರ್ಣಾಶ್ರಮ ಧರ್ಮ ಕೆಡೆ ನರ ಮನೆಯನ್ನು ಕೇ?ದ ²೬ನಿಗಳೂ, ರಾಬರೂ, ಸಂಘಈಪತಿಗಳೂ ಥರಿಂಗಗಿರಿಯಲ್ಲಿ ಇರುವೆ. ಈ = › ಕಂ ಕ್ಲಹೆ , ಟೆ ಳ ಡ್ ಗ ಮಾಡಿ ಜಗದ್ಗುರುಕ್ನನನ್ನು ವೆ‰೬ಸ. ಸರೀಶೃರನೆ ಗೊಡಲಶಾದ ಕೆಲವರು ಶಿಷ್ಯರನ್ನು ಬಳಿಕ ಶುಕರರೀಕಿತರು. ತನ್ಮೆ ಛಾಷ್ಪಕ್ಗೆ ಬಿಸ್ರಿನರಾಜ್ಛಪಟ್ಟಾ ಭಿಷೇಕ .ಯೆನ್ನು . ಸುಲಿಸಿ ಸಂಕೋಸದಿಂರ ಆಗ ಇಂದ್ರಾದಿ ಆಚಾರ್ಯರ ಶಳಯಮೇಲೆ ದೆ ಪೊಜಿಸನಲ ಟ್ರು. ವಿದ್ವಾಂಸರುಗಳಿಂದ ); ಮತ್ತು ವಿ ಶಾಕರಾ ಲ್ಯು ಕು ಸೇವಿಸಲ್ಪಟ್ಟಂತೆ, ಫರಿ ಜ್ಸ್ನವೀಶವನ್ನು ಅಧಿಕೋಷಿಸ್ . ಗಾಗ್ನಳಗ, . ಕೋಲ. ಮುಂತಾದವರಿಂದ ಯಾಜ್ಞ, ವ ಆಗ ಶಾಕಸಿಯು ಏನೂ ಉತ್ತತವನ್ನು ಕೊಡದಿರಲು ಶಂಕರದೇಶಿಕರು ಸಮ್ && ಶ೨ಳಕಕಕಥಫಾಸಾರಕ
೬ ಲೆ ಕಾದಂಬರೀಸಂಗ್ರ ಪ ಹೀಗೆ ಕಲಿಕಲ್ಕ ಷ್ರಘ್ನ ಗಳೂ ಆದ ಡರಿತ್ರೆಗಳಿಂದ ಪ್ರಕಾಶಿಸುತ್ತಲಿ ರುವ ಕರ್ತಿರಶಿಶಿ ಋಳ್ಳ ಶಂಕರಾವತಾ›*ಗಳಾರ ಶೆಂಕತೌಗೆ ದ್ಯಾ ತ್ರಿಂಶದಬ್ಬ ಗಳು ಕೆಳ್ರವ್ತ. ಒಳಿಕ ಶಂ˜ಕಕರು ಸಶಿಸ್ತ್ಯರಾಗಿ ಕೇವಾರಕ್ಕೆ ಹೋಇ, ಅಶ್ಲಿ ನೆ ಶೀತದಿಂದ ಶಿಷ್ಕ್ರೆಲ್ಲ್ನ ಕೂ ಪೀಷಿತರಾಗುತ್ತಿರುವುಡ್ನು ನೋಡ್ ವುಸಾವೇವನತ್ನು ವನ್ನು ಕೊಡಬೇಳೆಂದು ಪ್ರಾರ್ಥಿಸಿದರು. ಣಂದ್ರಶಮ ನು ೬ , ಶ ಎಡೆ ಉಷ್ಣೋದಕಪ್ರದಾಹಪವುಳ್ಳ ಒಂದು. ನದಿಖೆನ್ನು . ತನ್ನಪದಾರವಿಂದದ ಗೆಸುತ್ತಿಂದ ಸೃಮ್ತಿಸಿದನು. (ಅದು ಈಗಲೂ ಮೊಳ್ಯದಲ್ಲಿ ಪ್ರಸಿದ್ಧವಾಗಿವೆ.) ಅನಂತರ 3€ಗೆ ದೀವಕಾಕ್ಕ್ರವನ್ನು ಮಾಡಿರಿ ಈತ್ತ ರಾವೆತಾರಿಗಳಾದ ಶ#9ಕರ ದೇಶಿಳಕರಲ್ಲಿ ಗೆ, ಬ್ರಿಪ್ಮೇಂದ್ರಾದಿ ಸುರತುರು, ಪ್ರಸಿದ್ಧರು ಈಔವರ: ಗಳಿಂದ ಸಹಿತರಾಗಿಬಂವಿ3, ಲ ಖೊದ್ದ ೨ . ಸ್ಕೈತಿನಿ “ಎ ೯% | 3 + #* ಪ್ =ಣ ಡ , ಸ ಈರ್ ಶ್ = ೩ ೬ - ಶ « # 5 ಬಲ್ಮೈ ಸ್ಕಾ ೪6 ೪ * ಆ ² ಡ ವಿರ್ಣನಸು ಪ್ರಪಂ೫#ರೆ { ಗೆಗೋಸ್ಕರ ಆಳಿ ಹಾಲಾಹಲನೆಂಬ ವಿಸವನ್ನು ಫನಿಸಿದ್ದೀಖು ; 3ನಿಮುನನ್ನ್ನ ; ಸ್ರಿವುಂವಸ್ನು ನಾಶಮಾಡಿರುವ ; ಒಗದುತ್ಪತ್ತಿಕ ರಣನಾದ್ದೆ ತ್ರಿನಿಖಯೆ.ನನ ನೀನಾಗಿನ್ಲೀವೆ; ಈಗ ವೇದಮುರ ಒದಿ ಋನ್ನು ದ್ರಲಿಸೆಲು ಅರಖ ದ್ರ ಕೌಕಠಣ ನಮೆ ಸು ಲೈವಿ 6 ಇ ಈ \ ಗ್ ತ ೬ ೨ ರಿ ಹೀಗೆ ದೇವೆ -- ಪೈರ;›ಬಕ 1೪೨9೨ ಪು ,ಶಿಸಲ್ರ ಟ \² ಸ ಸಾಗ ಅಕ್ಟನ್ = ನ ಸ್ಥಲ] ಒ ೬ ° -ನ; ಕ ೬ ರ | -] \ ಈ ೩ 6 ವಿದ್ “ಛೆ ² ಹ್ ೧ ನಂದಿಋನ್ನು ಹತ್ತಿ 14, ಆಂದ್ರನನೂ ಉಳ್ಳವ ರಾಗಿ ಋಷಿಗಳಿಂದ ನಸ್ತುತಿನಶ್ಯಿಡೆತ್ತಾ ಸಕರರನಾಗಿ ಕೈಲಾಸ ತತ್ತು ಧಡ್ರಂ ! ಶುಭಂ !! ಮೆಂಗಳಂ ||] ಜಯತು ಜೇವೋಬ್ರ ದಾತ್ತಾ ಜಯತು ಬಯೆತ್ಕ ಜಯತು ಜಯತು ನಿಶ್ಗಂತತ್ತ ಹ್ಮ` ಉ ಸ್ ವ್ ೪ ನ್ರ ಜಯತು ಜೆ‰ಖ್ತಶ ಶುದ್ರಾ ದೈ \ತನಾ ಚಂರ್ರತಾರವಮ್ || ತತ ಈ. ^ ನ೨ಫ್ರನಿಣಣವುಳೆ.
/ ಶು೦7ಗಿರಿ ವಿದಹ್ದಿಧವು“ಪೀಠದಲ್ಲಿದ್ದ ಕಂಕರಾಚಾ ರ್ರೇ ಅ ದಿಯಾ ~~+೯೪-೧ಳ್ಳೈಕ್ ಸನ್ಸ್ ತ (೧) ಮಹಾರೇವಃ -= ಸದಾಶಿನಃ== (೨) ಮೆಹಾವಿತ್ತು$, (೩) ಡತ›ರಾನನಃ, (೪) ವಸಿಷ್ಪಃ, () ಶಕ್ತಿಃ, (೬) ಪಾಕಂ, (&) ವ್ಯಾಸಃ, (೮) ಶುಕ, (೯) ಗೌಡರಾದಃ, (೧೨) ಗೋವಿಂದಳಗೆನಾಣ˜; ಗ )ಗಳ ೭5; \ ದಿವಂಯತಸ್ಸೊ, ೧೧. _ ಶ್ರೀ ಶಂಕರಾಚಾಕ್ಕರು * ೨ + . ಜ್ಲಿತ್ರ. ವರುಷಗಳು, $ @ $ ಆಕೆ. | | ೧೨, ಶ್ರೀ ಸುರೇಶ್ವ ರಾಚಾರ್ಬರು ಸನ್ಕ ಸ್ರರರಾಗಿವ ಕಾಲ- ೧೩, ಕಂ & 8 ‹... . ±5೦ ವರುಷಗಳು. ೧೪, * & ಶ ೩. $ &. ಒ ೪ } ² ೧೫. _ ಜಸಿನೋಕ್ತ . . . + 84 ಸಳ ಧ 000} ೩ ೩, , ೧೬. ಜ್ಞಾನಗಿರ್ಯಾಚಾಧ್ಯರು 40 8 8 + . < . ಅಳ . . }] ಕ @ $008 805 ²_ ೫ ೧೭, ಟ್ 1 ) ()ಲೆ. ಈಶ್ವರತೀಥೆರು ² ೬೦ ಕತ $0 $ ೪೬ ೧ ²} ೧೯, . ೬0 ಕಾ 40 8 $ ೨೦. ವಿದ್ಯಾ ‹. ‹.+. . ೧೦ || 5 438 & 60 8 ಸ # 7} ೨೧. _ ಭಾರತಿ ೨.೨. . ವಿದ್ಲಾ ರಗ್ಯರು ಕ & 1 & 60800 0000 ೨೩. . ಜಂದ್ರಶೀತಿರಭಾರತಿ ಸ್ ± $ + . ಈಗಿನ | ೨೬೪, . ನರಸಿಂಹಳಾರತಿ 40 605 * * $ . ಈಗ | ಟಾ ಷ = 7 ೬ ೫೨೫ 7ಪ ೬೫೯೫೫೨೫೬ ೯೯ ಟಾ ನ್ಸನ | . ಫ್ರಿವೇಸೇಸೆಂಗೆಮೇತಿರೆ+ , ಶಕ್ತೈ,ವುಸ್ಯುರಿಲಕ್ಸೆ ಕೇ | ನಾ. ನ €3ಐತ್ರ ಶ್ರಾ , ರ್ಥಳುವೇನ , £? ,)೧`| ಚಿ, ಅರಳಗೈಸೆಂಸ್ಕಿ ಕೋನಿಶ್ಯಂ | ಆನಂರೇನಂದನೇನಸೆ` | ಶ್ಯಕ್ತಾ ,ಸೆರ್ವಮಿನಂವಿಕ್ಕಂ | ಅರಣ್ಯ (ರಿಕೇಶ್ಶಳಶೇ 1೨] $. ವನಿಧ್ಯಿಭಾರೆ? ಸಂ೨ಔಣಳ | | ಸೆರ್ವಳಾರಂಪಶರಿಶೃಜಕ- , | ಭಾಂತೀಶರ ಕಶ್ಯಳ# ||೩] (ಮಳಾಮವ್ಮೂಯಸೇಕು.]
@. ೪ ೨%. & ೨4. 5. .೨×೯°, ಔ ೪ . ಟ್ { ), & 5. [ ಜ್ಞ ಈ . . ಅಳಿನರಿ ನ೮ಸಿ೨ವೆಭಾರತಿ ಕಾರಂಓರೀನಿಗ್ರಹೆ ವುಕುಷೋತೃತ ಮಭಾರತೀ # 4. ಹ ಡಂ + ® & 3% & $ ಕೈ ವು: ಭಾರತೀ ರಾಮಜಂದ್ರಭಾರತೀ ಸ ನರಸಿಂಪ್ರಭಿಕತೀ 80 8 4 ೩. 3 4 ಇಮ್ಮ ಷೀ ಗರಸಿ`ಸ ಭಾರತೀ ನಿ ದಾನೆಣಿ ಭರತಿ: .. ಹೀ ೬ ದಾನಂ ವೆಭಾರತಿ ಅಧಿದವೆ ಸ±೨ ನಾನಾಗ; ನಳ ನಂ ಹ .. ಸಚ್ಛೆ ದಾನಂದಭಾರೆತೀ ಅಳಗವ ಸೀ ದೌನಂದೆ! ೩0 8 ಕ ಛಾರ ೩೪ &. & ಈ € ಹಯನ್ % ಸೆಬಿ ದಾನ೨ದ ವಿವ್ . . . ±. ೩0 ಹ 5 9 ೨೫ “ಚ ೫ ? ಈ, ೫ ೨
ಗರಂಥಮಾಲಾ ನಂ. ೨೮. ಕನಾಟಕ 1ಪ`ˆರಿಹ` ಸಾಂ ತ್ಯ ಪˆರಿಷ ಢ್ಲು ( ಸಾವತಾಜಿಕರೊಬ್ರ ರಿಂದ) \\ [› \, ಸ್ಕಿ ಸ್ಮೆಲ್ |%\|1 ಕ| \ 5೩೬ ಸ್ಮಿಗಿ ೩೬ ^ . [ | | 8% 16%. | ²ಣಔಇಲ, \೪50೧ಔ | ೬} | {\
ತ#›೧೦ಒಬರೀ ನ೦ಗ ಈ. (ತಿಳಿಗಸ್ತಡೆ ವಣಸಪತ್ರಿಳ, ) ತ್“ $²%೯೯೬ ರ: | . | .|!!, ಈ ಪಕ್ರಿಕಯು ನಾಲ್ಕು ಆವಿಚ್ಸಿನ್ನ ವಾಗಿ ಪ್ರಕಟವಾಗುತ್ತಿಕು ನವುರು. ವಿಧವಿಧ ನಾಟಕ, ಕಾರಂಬರಿ, ಪರ್ಬ, ಉಪನಾಸಗಳು ೨೮ರಲ್ಲಿ ಮುರ್ರಣ ವಾಗುತ್ತಿರುವುವು. . ಕನ್ನ ಡಿಗರ ಬೇಕಾಗಿದೆ. ಎಳಾ£ :- ಕಾರಂಬೀಸಂಗಹ, ಮೈಸೂರು.
= ನನ 5 ೬ರ 5 ನ ೩3 ತನ್ಲಿ ನ ರಿ ವ -- -- ಅ --- -- -- ನಿಬಂಧನಗಳು ತಿವ. ೯ \ - @ ೬೯1 ಈ. (ಸಾಮಾರೆಕನೊಟ್ಲ ರಿವ. ` ತನ್ನ ಷಿಗರಾದ ನಮ್ಮ ಗೊರ್ವ ಒರಯರ ಆಕರರ೯ದಬಒಬಲದಿ ದಲೂ, ದೀರ್ಘಕಾಲಾನಂತರದೆಲ್ಲಿ ಯಾದರೂ, ನಾವು ನಮ್ಮೆ ವಿಷಯದಲ್ಲಿ ಜಾಗರೂಳರಾಗಿ : ಮೈಸೂರು ಸಮಾಜ`` ದವರ ನ್ ೫) ತ್ಲಾ ಹದಿಂದ <ಳೆದ ೧೯೧೫ನೇ ವರ್ಷದ ಮೇತಿಂಗಳಲ್ಲಿ ಪ ಸಮ್ಮೇಳನ ಸೇರಿ , ಕರ್ಣಾಟಿಕಸಾಹಿತೃ ಪರಿಷತ್ತು? ಎಂಬ ಸಂಸಸ್ತಿಪನೆಯ ಸನ್ನು ಕೂರ ಸಿದ ಸಂಗತಿಯು ಜನಜನಿತವಾಗಿ ಸರ್ವರಿಗೂ ತಿಳಿದೇ ಇರುವ್ರರಲ್ಲ ವೇ ! ಈಜಿಗಿ ಆ ನಮ್ಮೇಳನದಲ್ಲಿ ನಿಣ್ಯಗಳೊ, ಮತತ್ತಿನ ನಿಒಂಧನೆಗಳೊ ಮಂತಾ ಮುಖ್ಯ ವಿಷಯಗಳನ್ನೂ ಳಳೊಂಡ ವರದಿಯು ಉಭಯ ಭಾಜೆಗಳಲ್ಲಿ ಯೂ ಅಚ್ಲಾಗಿ ಸಾಮಾಜಿಕರ ಕೈಗೆ. ಬಂದಿರುವುದು, ಕಣಾಟದೇಶದ ಹಲವು ಭಾಗ ಗಳಿಂದ ಪರಸ್ಪರ . ಪರಿಡಯವಿಲ್ಲದ ಜಳವ್ರ ರೊಡ್ ಮನುಷ್ಯರು. ಮೊದಲನ್ಲಿಯೇ ಯಾವಶ್ತೂ ಸಾಧಕ ಬಾಧಳಕಾರಣಗಳನ್ನು ಸೂಳ್ಲ್_ವಾಗಿ ಆಲೋಚಿಸದೆ--.ಹೇಗಾ ದರೂ ಒಂದು ಬಾರಿಗೆ ಪರಿಷತ್ತು ಹೊರಡಲಿ ; ಮುಂದೆ ನೋಡೋಣ!` ವೆಂದು ಅತ್ಯ ವರದಿಂದ ಮಾಡಿದ ಇಂಥ ಈ ನಿಬಂಧನೆಗಳೊಳಗೆ ನ್ಮೂನತೆಗಳಿದ್ದರೆ “೯೪೬ ೪ಕ್ಸ್ 7, ೭೯ . ಸು 1 - ಹಜ “ಲ್ಸ್ ೪ 7೭೬೯೭, #77 #5] | ೫ - “ ಈ_ಅಗ್ಮ್ ಆತಿ ಇಟ್ಕ ಆಜ ೩ರ“ $ = ಅಥ ಅಸ್ಯ“ =^೬೩ ಆಗ ೧೪) ಮುಂದಿ ಸಹ ಸದಸ್ಯರು ಒಟ್ಟುಗೂಡುವ ಸಂದರ್ಭವು ವರ್ಷದಲ್ಲಿ ಏರಡು ಮೂರು ದಿನ ಮಾತ್ರವೇ ಆದುದರಿಂದಲೂ, ಬರುವ ಸೂಚನೆಗಳನ್ನೆ ಲ್ಲ ಸಭಿಕರು ಶಾಂಕಚಿಕ್ತರಾ ಗಿ [ ಆ) ಆಗೇ ವಿಮರ್ಶಿಸಿ ನಿಬಂಧನೆಗಳನ್ನು ತಕ್ಕಂತೆ ತಿದ್ಪುಪಗೆಮಾಡುವುದು ಪ್ರಾಯಃ ದುಸ್ಸಾ ಧ್ಯಷಾದುದನಿಂದಲೂ, ಅಶ ಏವ ಇಂಥ ಸೂಚನೆಗಳನ್ನು ಸ್ಕೈಲ್ಜ್ರ ಮುಂದಾಗಿಯೆ ಪರಿಷತ್ಮಿನ ಹಿತಚಿಂತಕರ ಸನ್ನಿಧಿಯಲ್ಲಿ ಟ್ಟ ಕೂಲಂಕ+ಳವಾದ ಜರ್ಜೆಗೆ ಅವಕಾಶಳೊ ಡುವುದು ಯುಳ್ತವೆಂದು ನನಗೆ ತೋರಿ ನನ್ನ ಮಿತ್ರರು ಕೂಡ ಈನೀತಿ ಮಾಡುವಂತೆ ಪ್ರೋತ್ಸಾ ಹಿಸಿದುದುಂದಳೂ, ನನ್ನ ಮನೆಸ್ಸಿ ಗೈ ಹೊಳೆದೆ ಬೇರೆ ಬೇರೆ ನೂಡನಿಗಳನ್ನು ಈ
# ಗ್ರಜ್ ~ ೨, ಕಳೆ \ ೨ + ಹಲ್ ಕೆಳಗೆ ಕೊಟ್ಟಿಕುವೆನು. ಇವನ್ನಲ್ಲ್ಗ ಪ್ರಾಂತದ ಸಭಾಸದರು ತಮ್ಮ ತಮ್ಮ ಸೀಮೆಯ ಫ್ರಮುಬವಾದ ಪತ್ರಗಳಲ್ಲಿ ರಿರ್ಮೊತ್ತರೆ ದಿಂದ ಚರ್ಚಿಸ್ತಿ ಪಂಷತ್ತಿನ ಕಾಲ ರಲಿ ಮುಂಡಿ ಬರಕಒಹದಾದ ಸೊಸ#ನೆಗಳಿ, ನಿತತ-«ವಾದ ಕಾಲಋಯಾಪನೆಯಾಗೆದೆಂತೆ ವ್ಯತೆಗತೆನ್ನು < ± ಕೆರ್ ಈ ಲೇಖಿ ನವನ್ನು ಒರೆದುದರ ಮುಖ್ಛೋಗ್ಯೇಶವಾಗಿದಿ. ೧ ನೆಯ ನಿಬಂಧನೆಯು ಪು ಹಸನ್ನ, 5 ನಯದು ಅದು ಇರಕಳ್ಳ ಸ 57% ಗೊತಾ ತಾದ: :, ಶಣಾ“ಓಳದ ಬೀರೆ ಭಾಗೆ ಗಳಲ್ಲಿ ಕ.ಸನಾ. ಮುತ್ತಿನ ಶಿ ಸಿ ಲಿ ಕ.ಸಾ. ಶಾಖಿಗಳನ್ನು ಸ್ಥಾಮಿಸಿ, ಏರ್ಪಟ್ಟ ಬೇರೆಬೇರೆ ಸಭೆಗಳನ್ನು. ಪುತತ್ತಿಗ . ಬೋಡಿನೆವ್ರದು (\(11!!1೮) ` ಎಂಬುದನ್ನೂ ೧೧ ನೆಯ ಹೇಳಿರು 5 ಅಂತಕ್ಗೆ ಸಿನಿ ಅದನ್ನು ವಿಸ್ತಾರವವಿಸುವ್ರದು ಉಕಸಾಹಿತ್ಕಮಡತ್ತಿನ ಉದ್ದೇಶ “ ವೆಂದು ಈಗಳಿನ . ಮಾತುಗಳಿಗೆ ಬದ ಲಾಗಿ ಪಾತಿದು ಬೆನ್ನಾ ಗಿರಹಿಹುದೆಂದು ನನಗಿ ತೋರುತ್ತಿದೆ. ಹೀಗೆ ಮಾಡಿದೆವಾದರೆ, ನಾಟಕಗಳು, ಹು+ತ“ˆನೆಗಳು, ಚಿತ್ರಳೇಖತ್ರ ಗಾನ ಮುಂತಾದನವ್ರುಗಳು ಕೂಡ ನಮ್ಮ ದಳ್ಳ ಅವಳಕಾಶವಾಗಿವ್ರಣು. ೪ .ನೆಯ್ಪೆ ನಿಲಂಧನೆಖ ಪುತತ್ತಿನ ಘಟನೆಯನ್ನು ಕುರಿತು ಹೇಳುವುದು. ಪರಿತತ್ತಿ ಗೆ ರುತ್ನೈ ಗಾನ ಶರ್ಕ (|²(!›1ಇ), ಉನಲೋ(ಷ ಕರು (\ |ಛ೬ |\1೪11ಜಿ), ಫ್ರದಾತ್ತಗಳು ([ ಅಶರೆಯೆದಾತತ (ಅಲ! [ಅಗು), ಆಟೀರೆ ರು ಒಂರನೆಖ ವಿತ್ತ
ಕರ್ನಾಟ ಸಾಹಿಶ್ಯಪರಿಷಕ್ತು ೮ ತರಗತಿಯ ಸಾಧಾರಣ ({}|!|ಗ²1“\ ಗೌ೦ಗ1೦ಗ ೧{ {116 | { & ² ಮತ್ತು ಗೌಕವಾಥ-ಸಧ್ಭೃರಃ ([!೧11೧1“೫!“` ವಿಂಬ ವಿಳುತರಗತಿಗಳಾಗಿ ವಿಂಗಡಿಸಿಯಿದೆ. ಇವಕಲ್ಲಿ ಧನಳ್ತ್ಫ್ತಿ ಯನ್ನು ಹೇಳದೆ, ೧ ಸಾವಿಶ ರೂನಾಯಿ ಕೊಡತಳ್ಕವೆರು. ಪ್ರದಾತೃಗಳೆಂರೂ, ೫೦೦ ರೂನಾಯ್ದಿ ಳೊಡಕಳ್ಕ ವರು ಆಶ್ರಯದಾಕರಂಗೂ ಹೇಳಿದೆ. ಕಲ್ಕಿ ಹೇಳದ ಮೊರ ಲನೆಯ ಏರಡು ವರ್ಗದವಂನ್ನು ಮಹಾಗೋಷಳರು ((;!\೧! [²²{|೧ನ) ಮತ್ತು ಮೋತಳರು (೧;\{೧ಗನಿ) ಎಂಬುದಾಗಿ ಹೆಸರು ಬದಲಾಯಿಸಿ, ೧೦೨೦ ರೂಪಾಯಿ ಳೊಡತಕ್ಕ ವರನ್ನು ಉಪೋಷಳರೆಂದೂ, 1೯೨ ರೂ. ಆಕ್ರಯದಾಕ ರೆಂದೂ, ೨೫೦ ರೂ. ಳೊಡತಳ್ಳವರನ್ನು . ಒಂರು. ಹೊನರರ್ಗವಾಗಿ ಏರ್ಷಿಸಿ ವ್ರೋತ್ಸಾವಕರೆಂದೊ ಕರೆದರೆ ಹಾಗಿಬೆ. ಈಗ #8 [7 ನೆ ಣ ೭ ಇ ಜ ಸೃರ ಧಾರ? ಸಾ ಗಿ ಈ ಕ್ ಬ ದ್ರ [@ ದ ವೆ =ಈ ಫ್ 4 ಒ ಕ ನೌ ವೆನಂಧೆ. 1 ಆ ಣ್ವ ಇ ಕು ಬ್ರಿ ೪ಗೆ . ಸರಿಶೋಗುವಂತೆ ೧೨೦ ರೂ. ಕಡತಕ್ಕೆ ವರನ್ನು ಹೊದಳನೆಯ ನವರ್ಗಗ ಅಖೀವಸಧ್ಗಿರೆಂರೂ #೫೦ ರೂ. ಯುವಕನ್ನು +*ರಡನೆಖ್ ವರ್ಗದೆ ನಿಬಂಧಿಸಿದಿವಾರಿರೆ ಹಲವ್ರ ನವೆರಾದೆ ಅನುಕೂಲತೆಗಳನ್ನು ಕೊ 9ತಾಗುವುದು. ಹಾಗಿಯೇ ಸಾದಿ„ರಗಣ್£×-~ಕ ಕಡು ತ೭`3ಗಳೆಗೊ ²ತು ಇಔಡಿಸಿ.ಗರ ಎರ್ ನಗರ್ಗ ಯು ನಾನು ೧೦೨೨ ರೂ. ಗೆ ವರ್ಣಷಳೈ ರಂತೆ ಬಡ್ಮಿಯೆ~ಸಿ ಮೊರಲನೆಯೆ ವೆರ್ಗದವ `ಗೆ ವರ್ಸಕ್ಕೆ ಬರ 3 ಮ್ . == ² ² ೪ . = ²® ನ, . ಘ, ಬ್ರ = ಕ್ಯ ಸಸ್ತೊ 88೯55 ಸ್ಕಾನ್ ಕಸ ನ ತ ² ೨೯೭೭೨೨ ೨ ಸಲ ಕಿ ಒಕಿ) £ = -® ಇಕಪ ಪೌ, ೩ ಫ್.) ² ಆತ್ತ ೬ ವ್ಯ) £ ಈ) ೭] - , ಇನ್ ಕ ಪ ಲ , ಈ ಇಕ“ - ತಿನ್ ² ಇ) 1 # ‰× ಒಫ್ ² ಇಜ್ರೆ ಡನ್ “ಕು *. ೭. ಈ ಇಚ್ ೩ 4 & 1 ೬ಳ ಪ್ರಡೆ \ “ಹ ಆಳಳ್ ‰ # ೪ ೪ ೨ 7 “೨ ೨ \ « ಕ 8; ಫಿಆ-೨° ® 1% ® ಅಳ ರಾ ೨೪೪3 ೨ ಇಗೆ {ತ ೬ ಸ್ ಸ್ಸ ಒ ಬೌ ಕಲಂಗೆ ಷೈನೆ .*೨ ಕೊ. ಯ . ಆನೀರವಸಭಾಸದರ ಪೆರ್ಗಳ್ಳೆ ವೆ ಘ್ ಪನ . ತಳೆದು ತ *. ಆಂಧ್ರನಾಹಿತೈವರಿಷೆತಿನವೆರೆ) ೫ ನವಿ ರ. . ಕೊಡುವವತನ\). ([- ಕೆಂದೂ, ^ ಸಾವಿಕ ಕೊಮವನಕ್ಸ್. ಪೋಪ್ ರೆಂನೊ, ೧೨೨ ಕ. . ಕೊಡುವವರನ್ನು. .ಬಇರಚಿ ಳಿಇಡ್ಯೂ . ಗಸಳಳ್ಕೆ ೬. ಧ್ರೂ..ಕೊಗುವವರನ್ನಿ ಇವಂಲ್ಲರಿಗೂ ಆಂಲ್ರ ಸಾಎಳ್ಯ (ಮಾಸ) ಪತ್ರಿಕೆಯು ಉಚಿತವಾಗಿ: ವೊರೆಜಖಖಿವು. ಮಹಾರಿಕೆ ರಿಲಿಈಸೆ ಗಳು ಇನ್ನೊ ಈಮವಾಗಿ ಎರ್ಲಟ್ತ 93 ಇರಯ ೧೯೩ ಊ ಕೆ೨ಷನವಲ್ನೌ ಆಜೆವ ಸಭ್ಮರೆಮೊ ವರ್ಣಕ್ಕೆ ೩. ರೂ ಕೊವೆ ದವತನ್ನೆ ಸಾಧಾಕಣಸಧ್ಯೈರೆಂವ್. ಪ್ರಕೃತ ಗೆ ಗೆಇತು ಕˆಕಾಕೌವೆ ೩೯ತ. ಕಿ ಕೆಗೆ ಈ=ಸ‰ಸಳಕೊ ಕೊಪಾಯಿಳೆ೨ಡಲೇಳಾಗಿದೆ.
ಟ್ವೈ ಕಾರಂಬರೀಸಂಗ್ರಹ ೫ .ನೆಯ ನಿಒಂಧನೆಯಲ್ಲಿ .: ಎರಡನೆಯ ವರ್ಗದ ಸಾಧಾರಣಸಧ್ಯರು ಹೊರತು ಮಿಕ್ಕ ಸಭೃಕಿಲ್ಲ್ನರಿಗ್ಗೂ ಪರಿಷತ್ತಿನ ಶಮ್ಮ ಅಛಿಮುತ ವನ್ನು ತಿಳಿಸುವ ಸ್ವಾತಂತ್ರ್ಯವಿರಳ್ಕುದು ; ಮತ್ತು ಮಷತ್ತಿನಿಂದ ಫ್ರಕಟವಾಗುವ ಗ್ರಂಥಗಳ ಮತ್ತು ಪತ್ರಿಕೆಗಳ ಒಂದೊಂದು ಪ್ರತಿಯ. ಆವರಿಸಿ ಉಚಿಶವಾಗಿ ದೊರೆಯ ತಳ್ಳು ದು “? ಎಂದು ಹದಿ. ಇದರಲ್ಲಿ ಬರಡೆನೆ ನ ಎಗ್ದನಂನ್ನು ಮಟ್ಟಿಗೆ ಈ ನಿಬಂಧನೆಯನ್ನು ತಿವಿ ಕೊಳ್ಳೆಬೇಕಾಗಿವೆ. ಅದರ ವಾರ್ಷಿಕ ವರ್ಗಣಯನ್ನೂ &. ರೂ.ಗೆ ಇಳಿಸಿ ಮರೌಥಕಾರವನ್ನೂ ಪ್ರಸ್ತಳಾದಿಗಳನ್ನು ಪಡೆಯುವ ಸ್ಯಾ ಕಂತ್ರ್ಯ ವನ್ನೂ ಕೊಡ ಅಮಗೆ ಳೊಡೆಬೇತೆಂನ ನಾರು ಹೇಳುವ್ರದು ಳೆಲವರಿಗೆ ವಿನೀತ ಸೂಚನೆಯಾಗಿ ತೋರಬಹುದು. ಆದರೆ ಗಮ್ಮ್ನ ವೇಶರದಟ್ಟೆಗೆ ದಾರಿರ್ರ್ಯವನ್ನೂ ಒಂದು ರೆನೆರಾಧವಾಗಿ ತಿಳಿಯಶಳು, ೯ . ಸರಳ ಗ ಯಾವ ಶರಗತಿಯ ಸಧ್ರಲ್ಲಿ ಯೊ ಬಲು ಗಂಗೆ ಭಾಗರರರು ಲೆಂಗಳೊಲನ ಹೊತಗಿರುವದದರಾಗಿ ಅವರಿಗೆ ಪರಿಷತ್ತಿನಿಂದ ಅಚರ ಇ#ಸ್ತತಲತ್ರಿಕಾವಿ“€˜›, ಪಡೆಯವ ಮತ್ತು ಸೆವೈಳನದ ಕಾಲದಲ್ಲಿ ಮಕ (\ (1೪) 93 ಪೆ“\ನ ಯಗ ನರಯೋಓನೊ ದೊರೆ ಯು ವಂತಿಲಿ ವೆಂಬುದಗು, ಈ ., ಔಲ . ಔ ಶ | $ | ²› = 3 ಲ) 5 15 ಯನ ವೈಟ್ಗೆ ನಗೈಸ್ಸೆ ೨೧೯೧೯ \ ೪೭೮ +೩° \ ಸಗೆಸ್ತೆ ತ ಉಚಿಕನಾ?\ ಇಟ್ ವಿಷಯ ದಿ ನಂದಿನಿ ಸಿ ಈ ೧೪ [ನ್ನರೆ ಹೆನ್ಲಿ “ಷೆ ಸ್ಲೆ =“ . 5೭ [7 3533-೬೪೦1 ೭ ಅಧಿಕಾರ ೪ ೧ ಔ ಇಪ್ರೆ ==, ೩, ಒ° ². ಒನ , ೨ . - ೬೯ ೫ ೨ ಇನ್ಕೆ. ೧ ಖ? > ನಿನ ²ಇರಯದ ಪೆಯೋಬ “ಟ - 3 ೩5, ಈ £ % ಷ್ ಕ ಮಂ ಸ್ಲಳ್ವಿಗ ಉಲಟ ² ಗ್ ಎಚ್ ಎ ಮಾ ಪಕ್ಕ @ ಈ ® ೨ 5೬ ಆಳ್ = . ಈ 60 ಒ ಇರ್ ಕಲೆ - ಎಕ್ 1 = = 3 ಅಕ್ ಇಸಲ್ \ | =ಳೆ ೬ ೬೮ ೫° ಈಟ್ ಯ ದಲ ಕ್ರ ಕಟ್ @5 ಕ - = ೨ ವನ್ಯೂ ಇಂತ 30 ಖಿಡಿಸ್ಸ್ ರೆ ೩ © & ಳ ಆಜ್ « ಫ್ಲೈ ೫೭೭೨ ಸ್ಪಳ್ಳೇಯ ವೆ ೯ಣತೆ ವರ್ಕಳ್ಕೆ ೧›ಕೊ. ಯೆ೨3 ಎ `3೩ \ ನೆಯ . ಇ ೨ರೆ ಸದಸ್ಭರು. ಕೂಡೆ ತಮ್ಮ ತಮ್ಮ ಪಟ ಗಳಲ್ಲಿ ಉಕಾ. ಅಖೊ ಕಂವೆಖ್ಕೆ ಗಾಗಿ “ರೇ ಮೇರೆಗೆ ^. ಸ್ಟ್ಮಳ್ಗ 33 ಳೊಡಕಳ್ಳುವಿಂಮ ನಿಬ-ಥಸನ ಸು ಗ್. ಹಾಗೆಯೇ, ೨ ನೆಯ ವರ್ಗವ ಸಭ್ಯರಿಗೆ ಮತಾಧಿಕಾರವು ವಿತಕ್ವೆ ಇರಬಾಕದೆಂ ಬುದ ಆಲೋಚಿಸತಕ್ಕ ಒಂದು ವಿತತಯವಾಗಿಡೆ. ಅನತು ಳೊಡ್ಯವ ವರ್ಗಣಿಯು ಕಡಿಮೆಯೆಂಬ ಒಂದೇಕಾರಣದಿಂರ ಅವಕನ್ರು ಈ ರೀತಿಯೂಗಿ ನಡೆಯಿಸಿಳೊಳ್ಳುವುದು ಎಷ್ಟು ಮಾಶ್ರಕ್ಳೂ ಯೋಗೃನಲ್ಲ ವೆಂದು ನಾನು ಭಾಏಸುವೆನು. ಈ ವಗ್ಕ್ಕೆ ವಿದ್ಯಾರ್ಥಿಗಳೂ ಆನುಭವ ತರುಣರಕೂ ಇತ: ಸ್ನಲ ಬ್ರ ಬ) ಆವಾಯವುಳ್ಳೆ ಜನರೂ ಸೇರುವರತಿಮದುಂದೆಲ್ಲೂ ಈ ವರ್ಗದವರ ಸಂಖ್ಯೆಯೇ
ಕನಾ೯ಟಳ ಸಾಹಿತ್ಯಶರಿಷತ್ತು ಈ ಹೆಚ್ಪಾ ಗಿ ತನ್ಮೂಲಕ ಏನಾದೆರೂ ಮಾ (ಉದಾಹರಣೆಯಾಗಿ, ರಾಜಕೀಯ ಅಥವಾ ಸಾಮಾಜಿಕ «ಲೌ) ಟಲ್ಲಿ ಪ್ರವರ್ತಿಸಬಹುರೆಂಬ ಒಂದು ಧಯವು #ಳೆಲವರ ಮಸನಸ್ತ್ರನ್ನು ಬಾಧಿಸುತ್ತಿದ್ದುರೂ ಇರಬಹುದು. ಪರಂತು ಕೇವಲ ಸಾಹಿಶ್ರವರ್ಧನಕ್ಕಾ ಗಿಯೇ ಹುಟ್ಟಿ ರುವ ಬಹುಶಃ ಇಂಥ ಇಯೆಳ್ಳಿ ಅವ ಕಾಶೀ ಇಅಕಲಾರರು. ಒಂದು ನೆಳೆ,, ಇತಿವ್ .50ು ಯೊರಾದಕೂ ನಾಡಿನುವು ದಾಳಿ ಅದನ್ನು ೧ ನೇ ೩ಒಂಠಧ^ಗಿ « ಪರಿಷತ್ತಿಗೆ ಮತ್ತು ಮತ್ ವಿಷಯಗಳಲ್ಲಿ ಯಾವ ಸಂಬಂಧವೊ ಇಔರಲಾಗೆದು (!? ಆ!1|| |6 ಗಿ೧ಗ -[೧|!{|€\| ›!!14| 1111-5೪೦1 ||1 111168) ಏಂಬ ಳನ್ನು ಪೇರಿಸಬಹುದು. ಹಾಗೆಯೇ ಮಂಡಲದಲ್ಲಿ ಆ ವರ್ಗದ ಪ್ರ ನಿಧಿಗಳ ಸಂಖ್ಯಿಯನ್ನು ಕ್ನೌಪ್ಶಪಿಸಿ, ಮುಂದಿ ಬರತಕ್ಕರ ಯಾ ನಿಣ˜ಯಗಳು ರೊದಲು ಕಾರ. ೩ರ್ವಾಪಕ ಮಂಡಳದಲ್ಲಿ ಅಂಗೀಕರಿಸಲ್ಪಡತ ಕು, ದು “ ಸಿಒ೨ಧಿನಓಹಮದು. ಗೆ ವೂಡಿದರೆ ತರುವಾಯ ಯಾವ ಭಯ್ಕೊ, . . ಆವೆರೆ ಆ ವೆಗೆವಿ ಸದಸ್ಯಳಗೆ 5 ದಾ 9ಗವಾಗಿ ೪ ಕ್ ಎ, 1೫. @೫ \ ಶೌ ಳ ಜ್ ೪೯ 3೭ + ಒಕ ಈಶ ಇನ್ 1873೩೯5080 › 89೮058 ೬8೧೧೯೩ 18೫ 8 ಇ ೬೩ ಈ ತೈ ಈ` $5} ಟ್) ಕಲ ಮತಾಧಿತೆಂರವಿರದಿತರನ್ನಾ [\ ವೂತ್ರ ಮಪತ್ತರನಾದ ಔ ೫೬ ೬ ೩ £ನ5/ $ 5% ಜ ಣ £ ೨ \. ಕ ಚ › 5 -. = ., . ಯಕ್ಷ ) ಸ್ಲಥಿಡಿ . ಕ ೩ ನ ೩ ಹ್ ವಿ ನಳ್ಳಿ ೨ = ಮ ದಯದಿಂದ ಸಿಯ ನದಿಯ, - ಬೌಹ ೪೫ ೫ ಆ ಕ ಆ ಜ್ಲ ಈಚ್ 57 398 [ 8 { | ಲಿ ಜಟ್ಟಗಿ. ಜ್ ಸಾಕ್ಷ ನ ಕಾರ್ನ್ ಸ್ಯಾಂ ಕ್ ೫೫ ೫57 ² 4007 #5 ² ೩ ಉ ಕೌ = ವರ ವಿನಾ ಉಳಿರವಲಗೆ ದೊ :, ೨೨ರ ಖೇದ ; ಹೀಗ ಇ ಒಂದಳ್ಳೂ ಮ ಇನನ್ನು ಅಗತ್ಯವು, ಇನ್ನು ಪರಸಿಕ್ತತ್ರಿಕೆಯೆ .ವಗಯವೆ ಬ್ನ ೯೯ ೫ ನೇ ನಿಬಂಧನೆಯಲ್ಲಿ ಮ್ .ವ ನೆಯದರಲ್ಲಿ ನ್ . ಈ5ರತಕ್ತಿ ದೋಷವನ್ನು ಝೋಗಗೊಳಿಸುವುದಕ್ಕಾಗಿ ಇವುಗಳೊಳಗಿ ಒಂದನ್ನು ಬಿಟ್ಟು ಬಿಡಬೇಕಾಗುವುದು. ೭. ನೇ, ೮ ನೇ. ಮತ್ತು ೯ ನೆಯೆ ನಿಬಂಧನೆಗಳಲ್ಲಿ ಕಾರ್ಬರಿವಾ-ಪಳಮಂಡ ಯವರ,. ಮತತ್ತಿನ ಆಅಡೆಳಿತೆ ಗಡೆಯಿಸಶಕ್ಕುದಿಂದೂ ಆ ಮಂಡಳದಲ್ಲಿ ಅಧ್ಯ ಕ್ರೈ, & 5 ಸ್ವೆದಿ (ಒಟ್ಟು * ಳೋಕಢಧೃಕ್ಸ್ನ ಕರ ವಿನಾ ದಶ ಮತ್ತು ಧೃಕ್ಸ್ನ, . ಕಾರ್ಳ ಉಪಾಧ್ಯಕ್ನ ೩೪) ಬೇಕೆಂದೂ ಅವರನ್ನು ಆರಿಸುವ ಕ್ರನುವು ಯಾವ್ರ - .: ಡೊ ಹೇಳಿದೆ. ಇದರಲ್ಲಿ ನಾನು ಸೂಚಿಸತಕ್ಕ ತಿದ್ದುಪಡಿಗಳು ಹೆಲವವೆ:- ವಿ ) ತಳಿ ಡ್ರೇ ~-೫
© ಕಾದಂಓಶಿ:ಸಂಗ್ರಹ (೧) ೭ನೇ ಮತ್ತು ೮ ನೇ ನಿಬಂಧನೆಗಳನ್ನು ಒಂದ ನಿಬಂಧನೆಯಾಗಿ ವಿಶ ದ್ರ. (೨) ಕಾರ್ರನಿರ್ವಾಹಳಮಂಡಲಿಗೆ [5+90೦ಟ7!+0 ಎಂಬ ಇಂಗ್ಸೀಪ್ ಹೆಸರಿನ ಬದಲಾಗಿ ಆಂಧ್ರಸರಿಷತ್ತಿನಂಕೆಯೇ ಎಂಬ ಹೆಸರು ಕೊಟ್ಟರೆ ಕಿವಿಗೆ ಗಂಭೀರವಾಗಿಯೆ - _ ಪಿಷತ್ತೆಂಒ ಮಾತಿಗೆ ಅನುಗುಣವಾಗಿಯೊ `ಶಕೆವ್ರದು. (೩) ಅಥ್ಲೆಳ್ಲೆ ರನ್ನೇ ಕಾಕ್ಸನಿರ್ವಾಹಳಮುಂಡಲಿಯ ಮುಖ್ಖರ ನ್ನಾಗಿ ಮೂಡುವುದಕ್ಕೆ ಬದಲಾಗಿ ಆ ಉದ್ಯೋಗದ ಬಹುಮಾನವು ಇತರ ಭಾಗೆಗಳ ಡೊಡ್ಡ ಮನುಷ್ಕರಿಗೂ ರೊತಿಯೆಲು ಅವೆಕ್ಶನಾಗುವಂತೆ, ಕಾರೈನಿರ್ವಾಹಳಮಂಡೆಲಿಯ ಅಗ್ರಾಸನಾಧಿಪತಿಯಾಗಿ ‹1[ ಬೇರೊಬ್ಬರನ್ನು ನಿಖ . ಉ ± ಜಲ್ರಿ ನೌ, ಆಯ್ ನಾಸ್ ಕವಿ ² ಮಿಸಿ, ಅಧ್ಯಳ್ಸ್ಗರನ್ನು ಹೀಳುವ ಅಸಾಧಾರಣಸಧೃರನ್ನಾಗಿ `ಈಟ್ಟ ಕೊಳ್ಳಬಹುದು. ಇಂಥ ಅಗ್ರಾಸನಾಧಿಪತಿಗಳು ಬಿಂಗಳೂರಿಗವರೇ ಆಗಿರಬೇಳೆಂಬುರನು, ಪ್ರತ್ಶೇಕವಾಗಿ ನಾನು ತಯಾ ಸಮ್ಮೇಳನದ ಆಧ್ಯಳ್ಳೆ 5 ಮುಂದಿನ ಸಮ್ಮೇಳನದೆ ತ ವನಿಸತ್ತಿನ ಅಧಳ್ಳೆರಾಗದೆರೆ ಜನ್ಕಾ ಗಿರುವ್ರದು. (೪) ಈ.ನಿ. ಮಂಣಲಿಯ ಸದಸ್ತರೆ ಒ ಸಂತ೩ಯೆನ್ನು ೦ ಈ ಎಳಸಬ ಹುದು. ಮತ್ತು ೪ವೆರ ವಿನಾ ಖಳೆ ಸೊಚಿಸಿದ (ನಡೆ ಯುವೆ ವಸˆದ ಮ್ಮಿ ವರ್ಷಗಳ) ಅಧ್ಯಕ್ಷರೂ ಅದರ ಯಾಧಖ್ರೇವ ಅಸಾ ಧಾರಣ =‰ಇಸದೆ 7೪೫! \|!|]|1;||\“ 1110111015) ಏರ್ಪಡಿಸ * (× ಸಂ» ಯ ಪರಮಾವೆಧಿಯು `^ ಯೆಂರೂ, ಕಾಕ್ಲದಶಿ“˜ಗೆ ² ಶ ಳೆಗೊ ಕೋಶಿಧ್ನ ಈ ಲಿಗೂ ಒಬ್ಲೊಬ ರು ಒಂಟಿಯಾಗಿ ಅಥವಾ ಸಹಾಯಳ ರಾಗಿ ೪ರಬಿಹುರೆಂದೂ, ಅಂತು ಯುಳ್ಳ ({×-0|10|0)) ನದಸ್ತರ ಸಂಖ್ಯಯ ಪರಮಾವಧಿಯು ೧೦ರವರೆಗೆ ೪ರಬಹುದಿಂದೂ ದಿರ್ಪಡಿಸಬಹುರು. ಬೇರೆಬೇರೆ ಪ್ರಾಂತ್ಯ ಗಳಲ್ಲಿಯ ಮಸತ್ತಿನ ಬೇರೆ ಯಾವ ಅಧಿಕಾ ರವ್ರೂ ಅವರನ್ನು ಗೌರವಿಸುವ್ರದಕ್ಕಾಗಿ ಉಪಾಧ್ದಳ್ತ ರ ನಂಖ್ಯಿಯನ್ನು ಆದರೆ ಯಾವುದೊಂದು ಪ್ರಾಂತಶ್ಕದಿಂದ ಕನಿಷ್ಕ ಪಕ್ಸ್ನ ೨೫ ಮಂದಿ ಸಭಾಸದರಾರರೂ ಇಲ್ಲತರಿ ಅವರಿಗೆ ಆ ಪ್ರಾಂತೃದ ಒಗ್ಗೆ ಉಪಾಧ್ನಕ್ತ ರನ್ನಾ ರಸಲು ಬಿಡದಿರಬಹುದು. ²-0 3 ೪೯೯೯೯ ೫೧೧೪೯ =18 « ಈ 488885 - « >²7²× ೬% ೩೩೭೪೩೧೭೬ - ೬, ನ ² ಣ 5 ಈಶಲುಗು ಸಿ. ಸರಿಷಕ್ರಿಗೆ ಕಾರ್ಯದರ್ಶಿಗಳು ಮಖ²ವ6ಕೂ ರಿಟ್ಬರೂ ಇರುವರು ಮರಾಟೀ ಸ್ಕಾ. ಪರಿಪತ್ತಿ ಗೆ ಉಪಾಧೃಕ್ತ ಕೈವರೂ ಶೋತಾಢ್ಯಕ್ಸರೊಟ್ಬ ರೂ ಕ
ಕರ್ನಾಟಕ ಸಹಿತ್ಯಪರಿತತ್ತು 7 (೬) ನಲವತ್ತು . ಸಕ್ಷಿನಗಳನ್ನು . ಸಭಾಸರರು.. ಆಯ್ದುಕೂಳ್ಳುವುದಳ್ಕಾಗಿ “ಶಟು ನ ಳೆವಿಳ್ನ ಬಹು ದು. ಈ ವಿಷಯವನ್ನು ಒಂದಿಷ್ಟು. ಸೂಕ್ಸ್ಮವಾಗಿ ಖಸೀತ್ಸಿಸಬೇಕಾಗಿದೆ. ಇಂಥ ಪಾ ನೆ { ಪ್ರತಿನಿಧಿಗಳು ಕಾರ್ಯನಿರ್ವಾಹಕಮಂಡಳಿಯಲ್ಲಿ ರಬೀಳೆಂದು ಕಳೆದ ಸಮ್ಮೇಳನದಲ್ಲಿ ಗೊತ್ತು ಪಡಿಸಿವಾಗ ಯಾವ ಪರಾಂತ್ಯದಿಂದಲೂ ಸಭಾಸದರಿರ ಲಿಲ್ಲ ವಸ್ಟೇ ಅಲ್ಲದೆ, ಏವ. ಏತ ,ಮಂನಿ ಪುತತ್ತಿಗೆ ಸೀಕಬಹುದಿಂಬುದೂ ತಿಳಿದಿರ @ ಆಲ ೬ --೨ ಲಿಲ್ಲ. ಇಂಥ ಸ್ಥಿತಿಯಲ್ಲಿ ಆಗೆ ಮಾಡಿದ ಕ್ರಮವೇ ಜೆನ್ನಾ ಗಿತ್ತೆನ್ನಬಹುದು. ಆದರಿ ಈಗ ಆಯಾ ಪ್ರಾಂತ್ಯದ ಸಭಿಕರಿಸ್ಟೇ ಆನುಕುವಕಿಂರು ಒರೀ ಸೀಮಾನುಸರವಾಗಿ ಪ್ರತಿನಿಧಿಗಳನ್ನು ಆಯ್ದು ರೀತಿಯಾಗಿ ಆರಿಸುವ್ರುರು ಯುಳ್ತವೆಂದ, ನನಗೆ ಶೋರುತ್ತಿದೆ. ಆದುದರಿಂದ ಈ #ಕಳಗಿನಂತೆ ನಿಬಂಥಧಿಸಿ೧ಣರೆ ಅನುಕೂಲವಾಗೆಒಮೆದು:- (!) 3೦ ಮಂದಿಯನ್ನು ಆಯ್ಲಾ ಪ್ರಾಂತ್ಯದ ಸದೆಸ್ಕರೆ ಪ್ರಮಾಣಾನುಸಾರ ವಾಗಿ ಅರಸುವುದು. ಉವಾ ಸರಣಿಯಾಗಿ, ಬಲಸ್ಲಿ ವೆಗೆಗಳು ಸೇರಿ ಒಟ್ಟು ೪೦೦ ಸಭಿಕರಿದ್ದು ಅವರಲ್ಲಿ ೨೦೦ ಮಂದಿ ವೈಸೂನಿನನರೂ ೧೦೦ ಬೊಂಬಾಯಿಯ ವರೂ, ೩೫ ಮದ್ರಾಸಿನವರೂ, ² ಕೊಡೆಗಿನವರೂ ಇದ್ದರೆ ಕ್ರಮವಾಗಿ ಮೈಸೊ ರಿಗ ೧೯, ಬೊಂಬಾಯಿಗೆ ², ಮದ್ರಾಸಿಗೆ ೪, . ಕೊಡಗಿಗೆ ಒಂದರಂತೆ ಪ್ರತಿನಿಧಿ ಗಳನ್ನು . ಳೊಡಬೇಕಾಗುವ್ರದು. ಈ ಪ್ರಮಾಣವನ್ನು ಆಯಾ ಚುನಾವಣಯ ಕಾಲ ೪, ಸಂಸ್ಥಾನಗಳನ್ನು ಪ್ರತ್ಯೇಕವಾಗಿ ಗಣಸಬೇಕಾದ ಆವಶ್ಯಕತೆ ತೋರಲಿಲ್ಲ. (11) ಉಳಿದ ೨೦ ಮಂದಿ ಶ್ರತಿನಿಧಿಗಳನ್ನು ಆಯಾ ವರ್ಗೆ 5 9ದೆಕೊಟ್ಟ್ ನಾನು ಹಿ ದಾ ಹಂಕಗೆಯಾಗಿ, ಗಳಿಗೆ . ಹಂಚಿಹಾಕಬಹುದು. ಉ ಕರಣವು ಆಂಗೀಕರಸಲ್ಪಟ್ಟ ಪಕ್ಷದಲ್ಲಿ, ಉಪಪೋಷ#, ಆಶ್ರಯದಾತ, ಪ್ರೋತ್ಸಾಹಳ ಕಿಂಬ ಈ ಮೂರು. ವರ್ಗಗಳಿಂದ ಒಬ್ಬರು ಅಥವಾ ಇಬ್ಬರು, ಒಂದನೇ ವರ್ಗೆಣ ೫ ಜನರು, ಎರಡನೇ ವರ್ಗದ ಆಜೀವ ಸಥ್ಯರಿಂದ ೪ ಜನರು, ೧ ನೇ ವರ್ಗದ ಸಾಮನ್ಯ ಸಭಾಸದನಿಂದ ಮೂವರು, ೨ ನೇ ವರ್ಗದ ಸಾಮಾನ್ಳ ಇಬ್ಬರು, ಮತ್ತು ಇದುವರೆಗೆ ಆಯ್ಪುಕೊಳೈಲಾದ ಅಧಿಕಾರಗಳೂ ಕಾರ್ಬನಿರ್ವಾಹಳ ಸಬ್ಕರೂ ಓಟ್ಸು ಗಿ ಆಯ್ತು ಕೂಳ್ಳು ವ ೪ ಈಅಘವಾ × ಒವರು - ೩೮ಗೆ ೨೦ ಜನೆ ನಿಳೊಳ್ಳಬಹು ² {ಗಿ ಜನಂನ್ನು . ಆರಿಸಿಳೊಳ್ಳಬಹುದು. ಈ ಕೊನೆಗೆ ಹೇಳಿದೆ ೪ ಅಧವಾ 1 ಮಂದಿಯನ್ನು ಕಾರ್ಮ:ವಾ-ಹಕಳೀ ಆಯ್ತು ವ ಕ್ರಮ ಮೂಲವಾಗಿ,
ಕ್ರಾಲೆ ಈ ೭ಬತಿನ- ಗೆ “ಗ್ರೈಪ ಸಾಮಾನ್ಯವಾಗಿ ಚುನಾವಣಗೆಳಲ್ಲಿ ದುರಾಗ್ರಹವೇ ಮುಂತಾದುವುಗಳ ದಿಸೆಯಿಂದ ಉಂಟಾಗಬಹುದಾದ ಯಾವ್ರವಾದರೊ ಅಳ್ರಮಗಳನ್ನು ಅವಕಾಶ ಗರೊರೆ ಶಂತಾಗುವುದು. ಜುನಾವಣಿಯೆ ಮಟ್ಟಿಗೆ ಗೌರವಾರ್ಥ (| 0|10|“!“)`) ಸಭಾಸದ ರನ್ನು ಸಲಿನ ಯಾವ್ರದಾರರೊಂಗದು ವರ್ಗದವರಿಂದು ತಿಳಿಯತಕ್ಸ್ರದು. \ . ಕಾರ್ಯವಿರ್ವಾಹಕ ಮಂಡಲಿಯ ಸೆರಸ್ಳರು & ವರ್ಷಗಳ ತನಿ೬ ತಮ ( ಮ ತಮ್ಮ್ ಸ್ಥಾನಗಳನ್ನು . ವಹಿಸಿರಬೇಳೆಂರು ಸೃಷ್ಟಯಪಡಿಸಬಹುದು. . ಇದರ ಮಥ್ಪ 3ರ ವಾಗುವ (\7೫೮ಇ೫೧೦1೮೩) . ಸ್ಪಳಗೆಳನ್ನು ಕಾ. ನ. . ಮಂಡೆಲಿಯವ ತುಂಬಿಸಿ ಮುಂದಿನ ವಾಎ< ಸಭೆಯ ಊರ್ಜಿತವಿಡಬೇಳೆಂದು ಉಪನಿಬಂಧನೆಗಳಲ್ಲಿ ಹೇಳಿರುವ್ರದನ್ನು ತೆಗೆದು ನಿಬಂಧನೆಗಳಲ್ಲಿ ಯೇ ಸಮಾವೇಶಗೊಳಿಸಒಹುದು. ೧೦ ನೇ ನಿಬಂಧನೆ. ಇದರಲ್ಲಿ ಆಯಾ ಕಾಲದಲ್ಲಿ ನರೆದ ಕಾ. ನಿ. ಸಭಿಕರ ಬಹು ವುತದೆಂತೆ ರ್ಮಿಸತಳ್ಳುದೆಂರು ಮಾತ್ರ ಹೇಳೆದೆ. ಆದರೆ ಮುಖ್ಯವಾದ ಕಲವು ವಿಷಯಗಳಲ್ಲಿ ಯಾವಕ್ಶು ಮತಗಳನ್ನು ಪಡಯುವಂತೆ,----ಉದಾ ಹರಣೆಯಾಗಿ, (7) ತೆರವಾದ ಕು. _ ಸ್ಠಳಗಳನ್ನು ತಾತ್ಪಾಲಿಕವಾಗಿ ತುಂಬಿ ಕೊಳ್ಳುವ ಸಂದರ್ಭದಲ್ಲಿ, () ಯಾವುದೊಂದು ನಿಬಂಧನೆಯ ಅರ್ಥದ ವಿಷಯದಲ್ಲಿ ಮುಕರೇದವುಂಟಾದಾಗೆ, (೧) ವಾರ್ಷಿಕ ವುಹಾಸಭಿಗಾಗಿ ಯಾರಾದರೂ ಸೂಚನೆಗ ಳನ್ನು. ಕಳುಹಿಸಿರುತ್ತ ಅವನ್ನು ಆ ಮಹಾಸಭಗೆ ತರಬೇಕೇ, ಬೇಡವೇ ? ಎಂಬುದನ್ನು ನಿಣಣಯಿಸುವಾಗೆ, ಕಾರ್ಳನಿರ್ವಾಹಕಸಧಯರೆಲ್ಲರ ಅಭಿಪ್ರಾಯವನ್ನು ಪಡೆಯುವುದು ಉತ್ತಮವೆಂದು ನನಗೆ ತೋರುತ್ತಿದೆ. ಮೊದಲಲ್ಲಿ, ಕಾರ್ಳನಿರ್ವಾಹಕರ ಬಳಿಗೆ ಕಳುಹಿ ಪ್ರತಿಸೂಚನೆಯನಷ್ನಿ ಅವರು ಅಗತ್ಯವಾಗಿ ಮಹಾಸಭಿಗೆ ತರಬೇಳೆ ? ಅಥವಾ ತಮ್ಮ ವಿವೇಕ ಬುದ್ಬಿ ಯನ್ನು ಪಯೋಗಿಸ ಹಾಗೆ ತಾರದೆ ಬಹುಮತದಿಂದ ತಮ್ಮ ಸಭಿಯಲ್ಲಿಯೆ ತಳ್ಳಿ ? ಎಂಬ ವಿಷಯವನ್ನು ಈ ಸಂದರ್ಭದಲ್ಲಿ ಸ್ಪಷ್ಟಪಡಿ ಸುವುದು ಅಗತ್ಯವಾಗಿದೆ. ೧೧ ನೆಯ ನಿಬಂಧನೆಯನ್ನು ಸಂಪೂರ್ಣವಾಗಿ ತೆಗೆದುಬಿಡೆತಕ್ಕರದ್ಧು. ೧.೨ ನೆಯ ನಿಬಂಧನೆಯನ್ನು ಮ್ರಿ.೮ ನೇ ನಿಬಂಧನೆಗಳನ್ನು ಸರಿಸಿ ಉಂಟಾ ಗುವ ಹೊನ ನಿಬಂಧನೆಯಲ್ಲಿ ಸಮಾವೇಶಗೊಳಿಸಬಹುದು. ಮತ್ತು ಮೂರು.. ತಿಂಗಳೆಗೊಂದುಬಾರಿ ಸೇರಬೇಕಾಗಿದ್ದರೂ ೧೦ ಕೈ ಕಡಿಮೆ ಯಲ್ಲ ದಷ್ಟ್ಯ ಸಧಿಕಕು ಅವೇಲ್ಲ್ಸಲಾಗಿ, ಆ ಅನೇಕ್ಷೆಯು ಶಲು ಎದ ೧೫ ದಿನದೊಳಗಾಗಿ ತಪ್ಪದೆ ಸಭೆ ಕೂಡ ಆದಳೈ ಹೆಚ್ಚಾಗಿ ಸೇರಿ ಸಮಿಸ್ರಗು.
ಕನಾಟಳ ಸಾಹಿತ್ಯ 6 ೧೩ ನೇ ನಿಬಂಥನೆ`--~ಈ. ನಿ. ಮಂಡಲಿಯ ಒಟ್ಟು ಸಂಖ್ಯೆ ೫೦ ಎಂದು ಗೊಕ್ತಾದಪಕಳ್ಟ ದಲ್ಲಿ ಕನಿಷ್ಕ ಸಂಖ್ಪಿಯನ್ನು ಹತ್ತಳ್ಳ ಏರಿಸಬಹುದು. ಮತ್ತು ಇವರಲ್ಲಿ ಕ.. ಜನರಾದರೂ ಅದಿಕಾರಿಗಳಲ್ರ ದವರಾಗಿಕಬೇಶಂದು ಅಸಾಧಾ ರಣ ಸಭ್ಯರನ್ನು . ಕನಿಷತ ಸಂಖ್ಯೆಯಲ್ಲಿ ಣಸದಿರಕಬಹುದು. ೧೫ ನೇ ನಿಬಂಧನೆಗೂ ೧ ನೇ ಉಪನಿಬಂಧೆನೆಗೊ ಏನು ಭೇದನೆಂದು ಲಕ್ಮ್ನ ರಲ್ಲಿ : ಬರುವುದಿಲ್ಲ. ಭೇದೆನಿಳ್ಲವೆಂದಾದರೆ ಉಪನಿಬಂಧನೆಯನ್ನಶನು ನಿಬಂಧನೆಯ ೧ ಯೇ ಸರಿಸಿ ಬಿಡಬಹುದು, ೧೭ ನ ನಿಬಂಧನೆಯಲ್ಲಿ , ?\]\|\|!²1\|1{ !} [1೧|1€}1\|“` |11611. “[] ಎಂದರೆ :, ಸನ್ಜಾನಿತ ಮೆನುನ ಮಾಡುವ ಯಾವನಾದರೂ,`` ಬಲ೬ಬ ಮಾತುಗಳು ಇಂಗ್ಜಿ ಪ್ಪ್ರತಿಯಲ್ಲಿ ~ ಈ ಒಯೆಮೊನರ ಪದವಿಯನ್ನು ಮನು ಮಾಡಿ ಪಣಿಯತಳ್ಳುದೇ ಅಲ್ಜ್ಬಗೆಂದು ನಾನು ಕನ್ನೆ ಡಪತ್ರಿ ಕಯಲ್ಲಿ ಆ ಮಾತುಗಳಿಲ್ಲವಾದುದೆಂದ ೭ಗ್ಸಿಇಡ್ ತಿಯನ್ನು ತಿದ್ದಿ ಕವಳ್ರಬೀಕಾಗಿದಿ. £ ೬ ಡೆ ಇಂಥ ಸೂಚನೆಯ ಸೆತ್ತಮೊದಮಿ ೮೨೮.ನಿರ್ವವೆಳರ ಬಳಗೆ ಬಂದು ಅವರ ಮೆಪಾಸಭೆಯಲ್ಲಿ ಬಂದತೆ ನ್ರ ಗಿರುವುದೆಂದು ನನಗೆ ತೋರುತ್ತಿದೆ. ೨.೨ ನೆಯ ನಿಬಂಧನೆಯ : ಅಧಿ ತ್ಲರ ` ನಂಬ ಪರದೆ ಬವಲಾಗಿ , ಅಗ್ರಾಸೆ ನಾಧಿಪತಿಗೆಳೆ ² ಸಾನು ಧಿಪತಿಗಳ 1 ಏಂಬ ಮಾತನ ತಮೆ, ಹಾಳಕಒಓಪುದೆ ನ ನ ನ ಈ ಓ ಫೆ ಆ ಫೊಣಡಿದೆ ಸೂಣನೆಯ ನ್ನು ಪಳ ^ ಇವೆ ಕಲ ದಲ್ಜಿ ಇಮ ಆಗ ತ. ದಾಗ .ವ ಗುವ್ರಿಣ. ೪೭ ನೇ ನಿಬಒಂಧನೆ:-~-(ಕನ ಡಶ್ರಿತಿಯೆಲ್ಲಿ ಇದನು ೨೭ ನೆಯವಾಗಿ ಅಸ ಸಿದಿ ಮತ್ತು ನಿಜವಾದ ೨೦ ಗ ನಿಎಂಧನೆಯು ಐಟ್ಟುಷೋಗಿಗೆ). ಸಧ್ಬರುಗಳು ದೇಶದ ದೂರದೂರರಾದ ಭಾಗಗೆರಲ್ಲಿ ವಸಿಸತಳ್ತವರಿದುದಲಂದೆ ಮ ಕತ್ತಿನ ಸಾಮಾನ್ಯ ಸಭೆಗಳ ನೋಟಸುಗಳನ್ನು ೬೮೮ ೧ ಶಿಂಗಳೆ ಮುಂಜಿ ಕೊಟ್ಟರೆ ಸಾಕಾಗಲಾರಡಿಂದು ಮೋರುತ್ತೆದೆ. ಮುಖ್ಖವಾಗಿ, ನಿಬಂಧನೆಗಳಲ್ಲಿ ಆಗೆ ಬೀಕಾದ ಬದಲಾವಣೆಗಳನ್ನು ಆ ನೋಟೀಸ್ ತಳುವನಿದಂದಿನಿಂದೆ ೧ ವಾರಗೊಳಗಾಗಿ ಕಳುಹಿಸಬೇಕೆಂದು ೨೦ ನೇ ನಿಬಂಧನೆಯಲ್ಲಿ ಹೇಳಿರುವ ಅವಕಾ೭ವು, ವಿರಾಮವಾಗಿ ಕುಳಿತು ಆಲೋಚಿಸಿ ಬರೆಯುವುದಕ್ಕೆ ಕಡಿಮೆಯೆಂದು ಹೇಳಬೇಕಾಗಿ-. ಸಾಮಾನ್ಯ ಸಭೆಯ ನೋಟೀಸನ್ನು ಓ ವಾರಗಳಿಗೆ ಮುಂಜೆ ಕೊಟ್ಟು ಸೂಚನೆಗಳನ್ನು ೪ ವಾರಗ $ಗೆ ಮುಂಜೆ ಬರಮಾಡಿಕೊಂಡು ಅವನ್ನು ಈ=ನಃ & ವಾರಗಳಿಗೆ ಮುಂಜಿ ಸದಸ್ಗೆ
| ರಿಗೆ ಕಳುಹಿಸಿ ಬೇರೆ ಏನಾದರೂ ತಿದ್ದುಪಡಿಯ ಸೂಇನೆಗಳಿದ್ದರೆ ಅವನ್ನು ೨ ವಾರಗಳಿಗೆ ಮುಂಳ ಬರಮಾಡಿಕೊಂಡು, ಕೊನೆಯ ಕಾರ್ಯಕ್ರಮ ಪತ್ರಿಳೆ [೫[ಗ೦!“) ಯನ್ನು ಒಂದು ವಾರಕ್ಕೆ ಮುಂಚಿತವಾಗಿ ಫ್ರಕಟಪಡಿಸಿದರೆ ಸರವ್ವರಿಗ್ನರೊ ತುಂಬ ನೆನಝೆರೆನು. ೩ ೧ ನ ನಿರ್ಣಯದಿಂದ , ತಮ್ಮ ಅಭಿಮತವನ್ನು ಸೂಚಿಸುವ ` (5೧೪೪! {೧ \`೧{೦ [› |) ಎಂಬ ಶಬ್ದಗಳನ್ನು ತೆಗೆದುಹಾಳತಳ್ಕದ್ಬು. ಇದು ೫ ನೇ ನಿಬಂಧನೆಯೆಲ್ಲಿ ಮಾಡುವ ತಿದು ಪಡಿಗೆ ಅನುಗುಣವಾಗಿ ಆಗತಕ್ಕುದಾಗಿದೆ. ಹೀಗೆ ಪ್ರಕೃತರ ಅಗಬೇಳೆಂರು ನನಗೆ ತೋರಿದ ಕೆಲಳೆಲಿವು ತಿದು ಪಡಿಗಳನ್ನು . ಈಗೆಳೆನ್ಶು ಅವ್ರಗಳಲ್ಲಿ ಕಂಡು ಕತ < || ಟ್ರೆ ಗ್ರೀಟ ವುವ್ರಗಳಾಗಿಯೊ _ ನೂತನದಾ?\ ವಿವ ಯೊ ನೂ @ ಷಿ ೭ ತಕ್ಕನು ವಾಗಿಯೂ ಕುವ ಜೆಲ್ರಫ್ರ ಸೋಂ²ನೆಗೆಳಗು ಣ್ಯು “೩ಡರಡಿ ತನ್ ಡ²ಣು $ = (1). ಮೆ ),. ಮೈನೂರು ಸಂಪದಧ್ಯುದಂ ಧ್ಯುದಯ ಸಮಾಜದವರ ಫ ಹವೇ ನಮ್ಮೆ ಪರಿಷತ್ತಿನ ಹೇತುದಾಗಿಯೆವುದಸ್ಬೆ ! ಆದುರುಂದ ಈ ಸಂಗ - ತಿಯು ನಿರಂತಂದಾಗಿ ನವ್ದ ಸಸನˆನಪ್ಲಿ ನಿಲ್ಲುವಂತೆ ಆ ಸರ್ಕಾರವನ್ನೇ ಆಗಲೀ ಸಮೊ ಜವನ್ನೇ€ ಆಗಲಿ ನಮ್ಮ ಪೌಳತ್ತಿನ ಕಾಇಸುವುದಿ ನಮ್ಮ ಕರ್ತ ವ್ಯವಾಗಿವಿಯೆಂದು ನಾನ್, ಭಾನಿಸುನೆನು. ಆಂಧ್ರಸಾಏತ್ತವೌಸತ್ತಿನದರು, ಉದಾರ ವಾಗಿ ಧನಸಹಾಯವೂ ಆ ಪರಿಳತ್ತಿನೆ ಸ್ರಾಶನೆಗೆ ಕಾರಣಧೂಕತರಾದ ಸಿತಾ ರದ ಮತ್ತು ವೇಂಕಟಗಿರನಿಯ ೦9ರುಗಳನ್ನು ತವ್ಹೈ ಪ್ರತಿಸ್ಥಾಪಳರೆಂದು ಏರ್ಪೆಡಿ ಅಯಂ ಇಕ್ © ಉರು ವೆರು. (೧). ಒಂದು ದೇಕರ ಸಾಹಿತ್ತ ಅಥವಾ ವೈಜ್ಞಿನಿಕ ಮತತ್ತುಗಳ ಸದಸ ಫ್ರಿ ರುಗಳು, ಬೇರೆಬರೆ ದೇಶಗಳಲ್ಲಿ ಅದೇ ವಿಷಯವಾದ ಮತತ್ತುಗಳ ಸದಸ್ಭರಾಗಿದ್ದು ಗಣ್ಳರಾಗಿರುವ ಕೆಲಳಲವು ರೊಡ್ಡ ಮನುಸ್ಕರನ್ನು ಗ‡6ಗ007ಗ ಏಂಬದಾಗಿ ಗ*ರವಿಸುವ ವಾಕ್ಸಿ ರುವುದು. 5ದರ ಮೂಲಕವಾಗಿ ಒಂದು ದೇಶದ ಪರಿಷತ್ತಿನವರು ಮಾಡಿದ ಅಭಿವೃದ್ಧಿಯು ಉಳಿದ ದೇಶದವರಿಗೆ ಅಂಥಾ ಸದಸ್ಸರ ಮೂಳವಾಗಿ ತಿಳಿಯುವುದಕ್ಕೆ ಅವಕಾಶವಾಗುವ್ರದು. ವಿಶೇಷವಾಗಿ, ಗ19ಗಾ563 ಆಗಿರುವವರಿಗೆ ಆ ಗೌರವವು ಯಾವ ದೇಶದವರಿಂದ ವ್ರಾಪ್ಶವಾಗಿರುವುದೋ ಆ ದೇಶದ ಭಾಷೆ ತಿಳೆಯಡೆ ಇಕುವು
ಕನಾ೯“ಟಳ ಸಾಸಿಶ್ಯಪಕಿಷಕು, ] | . ಇಂಥ ವಿರ್ಪಾಡು ಅತ್ಮಾವಶ್ಬಳವೆಂದು ಪ್ರಶ್ಶೇಕವಾಗಿ ಹೇಳಬೆಕಾದುದಿಲ್ಲ. ಆಅದುದಿಂದ ಕನ್ನ ಡವನ್ನು ಒಳ್ಲ್ಯವರಾಗಿಯೂ ಭಾಜಿಗಳಲ್ಲಿ ಶ್ರವೀಣರಾ ಗಿಯೂ ಇರುವ ದೊಡ್ಮಮನುಷ್ಕರನ್ನು ನನ್ಮು ಮೆಂಬರಾಗಿ ನಿಯದಮಿಸಿರರೆ ತನ್ಮೊಳಳ ಗವುಗೆ ತುಂಬ ಸದಾಯ ವಾಗುವಂತಿದೆ. ಇಂಥವರನ್ನು ನಾವು ವಿಕೀಷ (ದಿ||!) ಸಫ್ತರೆಂಬ ಪ್ರಕ್ತೇಕವರ್ಗ ವಾಗಿ ಇಟು / ಬಹುದು. ಪ್ರಕೃತದಲ್ಲಿ ತವಿಳು, ತೆಳುಗು, ಮೆಳೆಯಾಳ ಮರಾಟಿ, ಭಾಷೆಗಳ ಮಟ್ಟಿ ಗಿಇದರೂ ಇಂಧ ನಮೆಗೆ ನಿಕ್ಳು ಅಆಕಂಳವಾಗೆಲಾ ರವಿಂದು . ಕೋರುತ್ತದೆ. ಕಳೆದ ನವೆಂಬರು ೨೦ ನೇ ಶಾಲೀವಿನ್ದ ದಿನ ನಡೆದ ಕಾಕ್ಕದಿ ರ್ವಾಹೆಕ ಸಳೆಯವರು ಉಳಸಳೆಯ, ರಿಮೋಟ್ನ ಗೇಲಿಂದ ನಿರ್ಧರಿ ೪ ನೆಯ ವಿನಯಕೂ, ೪ದುಂದ ಐನೆ ಓಐಫ್ರದು, (@). ಕಾಕ ನಿದಾ ಈ< ಈ ^ ಈಶ 7 [ಕ್ ² ಸಮೆನ ೯ “೨ ೬ ನ ೨ ತಿರಿ (7 ಓಟಗಳ . ಅಝೆವರಾಣಕೊ, ಇಪರೆಬ್ಲ್ ಮಂಡಲಿಯ ಗ್ರತಿ ಸಭೆ ಕೇವ ಆನಾಢ್ಯ ಸಷ್ಟವಾಗಿದೆ. ಹೀಗಾದುದೆಂಗರ ಬೆಂಗಳೂರಿಲ್ಲಿರುವ ೮೨-೧೦ ಜನ ಮೂತ್ರ ಸೇರ ನಿರ್ಣಯಗಳು ಮಂಡಲಿಯ ನಿಣ್ಯಗಳಾಗಿ ನಿಲ\ ವೆ ಸಂಭೆವೆವಿಕುವ್ರೆದು. ೦3 ಗೆಸಿಯಿಂದ ಯಾವ ಆಡುಕಳೂ ಆಗಲಾರದು ನಒವಾದರೂ ಮಂಣಿವಿಯ ಸದಸ ರ (ವತ್ರವುಖೀನು) ಅಭಿಪ್ರಾಯ ಪಣದು ನಿರ್ಣಯಿಸಕಕ್ಕು ರೆಂದು ಮುಖ್ಖದುದೆ ಹ ರಿಶೆಲವು ವಿಸಯಗ ಳನ್ನ್ನ ನಿಬಂಧನೆಗಳಿಂದಲೇ ಉತ್ತವುವೆಂದು ಭಾವಿಸುವೆನು. ಹೀಗೆ ಮಾಷಿರರೆ ಉಳಿದವರ ಕಾತ್ಸನಿರ್ವಾಹಳ ಕೇವಲ ಗೌರವಾರ್ಫ ಮಾತ್ರ ವಾಗದಡೆ ಅವರ ಆಶೋಷನಿಯ ಶ್ರಯೋಜನವು ಕೂಡ ಮತತ್ತಿಗೆ ಗೊರೆತಂತಾ ಎನರಮ. (೮). ಪ್ರತಿ ವಿಷಯದಲ್ಲಿ ಯೊ ಪ್ರತಿ ಬಾರಿಯೂ ಕಾಕ್ಸ್ದಶಿಯೇ ಲಾದ ಉದ್ಘೋಗಸ್ಕ್ರರು ಮೇಲ್ಪಟ್ಟವರ ಯನ್ನು ವಾದ ಕಾಲ್ರರಿಳಂಒವಾಗುವ್ರದು. ಹಲಗಾದುದಿರಿಂದ ಬಂದ ವಿಷಯಗಳನ್ನು ಕೀರ್ಮಾನಗೊಳಿಸಿ ಸುವ್ರು; ನಾಗೆಡೆ ಕಾರ್ಯನಿರ್ವಾಹಕ ವತಂಡಲಿಯ ವರು ಅವುಗಳ ತತ್ತ್ವವನ್ನು ಗ್ರಹಿಸಿ ಅವುಗಳಿಂದಲೆ? ಸಾಮಾನೃಳ್ರವುಗಳನ್ನು ಎರ್ ಡಿಸಿ, ಮುಂಡೆ ತದನುಸಾರವಾಗಿ ಕೂಡಲೇ ವರ್ತಿಸುವಂ# ಅನುಕೂ
| ² ಕಾರಂಬಕೀಸಂಗ್ರ್ರಹ ಲಪಡಿಸಿ ಳೊಳ್ಬರೆ ಏಸ್ಟೋ ಮೇಲುಂಟು. ಇಂಥ ಳ್ರಮವು , ©ಣಗ!!ಗ 4 ಬಂದರೆ ಕಾಯಂ ಹುಕುಮು ಗೆರೊಬ ಹೆಸರಿದೆ ಸರ್ಕಾರದಲ್ಲಿ ಯೂ ಸಳಲುವಳಿಯಲ್ಲಿದೆ. (€). ಕಳೆರ ನವೆಂಬರು ೨೦ ನೇ ತಾಲ:ನ ದಿನ ನಣದ ಕಾಕ್ಗನಿರ್ವಾಹಳರ ಸಿಯಲ್ಲಿ ಒಂದು ವಿಶೇಷವು ಒರಗಿಕು. , ಫರಿಸತ್ತು ಪ್ರಶಸ್ತಿಯನ್ನು ಪವೆದುಕೊಳ್ಳು ವುದಳ್ಕೆ ಮುಂದೆ. . .. “ ಸಮ್ತೇಳನದಲ್ಲಿ ಆಡದ ನಿಣೆಯಗಳ ವಿಷಯದಲ್ಲಿ ಕಾಕ್ಸ್ಯಗ ಳನ್ನು ನಡೆಮಿಸುವುದು ಅಷ್ಟು ಫಲಕಾರಿಯಾದುದಲ್ಲ ವೆಂದು ಕಾಣುವುದರಂದ ಸದ್ಯ ದಲ್ಲಿ ಈ ವಿಷಯವನ್ನು ಮನ್ನಾ ಮಾಡಬಮುದು` ಬಿ6ರು ಜಾ. ನಿ. ಸದಸ್ತರರು ನಿಣಣಯಿಸಿ ದರು. ಪರಿಜಿತ್ತಿನ ಪರಮ ಓತಣು ಸೂವಾಪರಬ್ಸ್ನಕೂ ಆದ ದೊಡ್ಬಮನುನ್ಕಕು ವಾಡಿದ ಈ ನಿಣ“ಯವ್ರು ಯುಳ್ತವಾದುದೇ ಎಂಗು ಜೆನಸ್ನಿಗಿ ಆಲೋಟಿಸಿ ನೋಡಿದ ವರಿಗೆ ಗೋಡರಿಸದಿರದು. ತಥಾವಿ, ಸಮ್ಮೈಳನದನ್ಲಿ ಆದ ನಿರ್ಣಯವನ್ನು ಸಮ್ಮೇಳನ ರವರಿಂದಲೇ ನೆ೦ಇದ ಕಾಕ್ಲನಿರ್ವಾಹಕ ಮಂಡಲಿಯೆವರು ಈ ರೀತಿ ತಳ್ಳವಿ ಡಲು ನೈತಂತ್ರರೇ ? ಇದು ನ್ಯಾಯಸಮೃತ‡ ? ಎಂದು ಕೆಲವರು ಆಕ್ಸ್ಪಿಸಲನಎಬ $ ೨ ಹುದು., ಸೂಕ್ಸ್ನದಾಗಿ ಆಲೋಚಿಸಿದರೆ, ಇದು ನ್ಜಾಯಸೆಮೃತವಲ್ಲವೆಂದು ಕೂಡ ಹೇಳಬಹುದು. ಆರೆ ಸೆವೆ, ಆನವ್ರ ಸಸತ್ತಿನ ಪರವಾಗಿ ನಡೆಯತಳ್ಳುದು ; ಆದರಲ್ಲಿ ಪರಿಷತ್ತಿನ ಸದಸ್ಯರಿಗೆ ಮಾತ್ರವಲ್ಲದೆ ಇತರರಿಗೂ ಫ್ರವೇತಿಸಲು ಅವಕಾಶವಿರುವುದು. ೨೩೬, . ದಿನದ ಹಬ್ಬದಲ್ಲಿ, ಉತಸ್ಸಿಪವೇ ಅಧಿಳವಾಗಿರಬಸುದಾರ ಸಮ್ನೇಳಗಣ ಸಭ ಯಲ್ಲಿ ಆದ ಫ್ರತಿ ನಿರ್ಣಯವನ್ನು ಸ್ಥಿರವಾದ ಮಿತತ್ತಿನ ಕಾರ್ತನಿರ್ವಾಹಕರು ನೆರವೇ ೨೩ ೭೫ - ೮೦ ೩ ಆರತಿ ಬ = ² 1 ಮೆ ಮಂ) 58ನೆ ಚಿ 3೩ “ಕ್ಲಾ #೬1 ೯, == ಪ್ರಿ ^ + ‰ ಉ ಸಿರೆ ೩೧೩೬೪ ಚ * ಹಸಿ, ನ್ಮಾ ವ ಅಸ೬ಸ ಊತಕ ಳಲ್ಲಿ ! 1 ಈ ² ಅ)©೪೪ ಈಸ್ಟ್ನ ೦೪೨ ಇರ, ~-ಳಳಳ ಆಅಲೋ೪ನ೨ಳಸ್ವಿಆಈ; ಸಿಳ್ಳ ಆದರೆ ಸಮ್ಮೇಳನದ ಯಾವ ನಿಣ್ಯವೊ ಕಾನಿ. ರನ್ನು ಬದ್ಧ ಪಡಿಸಲಾರದಿನ್ನುವ್ರುದಾದರೆ ಸಮ್ಮೇಳನವನ್ನು ಯಾವ ಪ್ರಯೋಜನವೂ ಉಂಟಾದ ಹಾಗಾಗ ಲಾರದು. ಆರುದೆರಿಂದ ಉಭಯಪಕ್ತ್ನದವರಿಗೊ ಅಸಮಾಧಾನವಾಗದಂತೆ ಒಂದು ಮಧ್ಯ ಮಾರ್ಗವನ್ನು ಗೊತ್ತುಪಡಿಸುವುದು ಅಗತ್ಕವು. ಸಮ್ಮೇಳನದಲ್ಲಿ ಆದ ಯೌವುದೊಂದು ೧೯ ಕಾರಕಣಾಂತರಗೆಳಂಗ ನರಕಗೆಲಸೆಬರುವು 7 ನಿರ್ಣಯವು 9ತರಗೆಳಂರ ನರರೇಲಸೆಬರುವುದಿಲ್ಲ ವೆಂದು ಸಮಸ್ತ ಹಳರೂ ಬಹೆಮೆಕದಿಂದ ಅಳಿಪ್ರಾಯಪಟ್ಟರೆ, ಪ್ರನಃ ಅದೇ ನಿಣಣಯವು ಮುಂದಿನ ಸಮ್ಮೇಳನದಲ್ಲಿ ಆಗುವಶನಕ ಅದನ್ನು ತಡಿದಿಡಬಹುಡದೆಂದು ಒಂದು ನಿಬಂಧನೆಯನ್ನು ಏರ್ಪಡಿಸಿದಕೆ ಈ ಅಡಡಣಯು ದೂರವಿ˜ಗೆಬಸುದೆಂದು ನನಗೆ ತೋರುತ್ತಿದೆ. (೧. ಕಳೆದ ಸಮ್ನೇಳನವು ಕೂಡಿದ ಕಾಲದಲ್ಲಿ , ಬೊಂಬಾಖಿ, ಮದ್ರಾಸು, ಹೈದರಾಬಾದು ಮತ್ತು ಕೊಡಗು ಕರ್ಣಾಟಕ ಸಾಟತ್ಕ್ ಪರಿಷತ್ತಿಗೆ ಶಾಖೆ (೧|`^೧೦[6°=) ಗಳಿರಬೇಕು ; ಮತ್ತು ಈ ಪರಿತತ್ತಿನ ಉದ್ದೇಶಗಳನ್ನೇ ಇಟ್ಟು,
ಕನ್೯ಟಳಸಾಹಿಶ್ಯಶರಿತತು, | 3 ಕೊಂಡು ಇಶ ಸಂಘಗಳನ್ನು ತನ್ನ ಒತೆಗೆ ಸೇಯಿಕೊಳ್ಳುವುದಳ್ಕೆ (೧ |\[[||11\{6) «. ಸ್ಯಾ ಪಂಷತ್ತಿಗೆ ಅಧಿಕಾರವಿರಬೇಕು`` ಎಂಬುದಾಗಿ ಓದು ನಿರ್ಣಯವು ಮಾಡಲ್ಪ್ಟ್ಟಿದ್ದಿತು. ಪನಿಷತ್ತಿನ ವರ್ಕಮಾನಸ್ಕರತಿಯಲ್ಲಿ ಈ ಭಾಗದಲ್ಲಿ ಯಾವ ಅಲಸ‡ ಕರ್ಣಾ\:ಸಾಹಿತ್ಕಾಧಿರುಚಿಯೂ ಸಧ್ಯ ತೆಯೂ ಜನರಲ್ಲಿ ವಿಸ್ತರಿಸಲು ಇದೇ ಮುಖ್ತ. ಉವಾಯವಾದಪರಯುಳ್ತ, ಒಂದಲ್ಲ ಒಂದು ದಿನ, ಆಡಷ್ಟು ತೃರಿಯಾ?\, ಈ ಕಾರ್ಯವನ್ನು ಮಿಷತ್ತಿನವರು ರುವುರ:. ತಫಾಸಿ, ಜೆನ್ನಾ ಗಿ ಆಲೋಜಸಿ ನೋಡಿದ, ಇದರಷ್ಟು. ಪ್ರಯಾಸಳರ ವಾದ #ಈಲಸವ್ರ ಚೀರೊಂದಿಲ್ರ ನೆಂಬದು ಕೂಡ ತಕೋಲಬಾರದಿರದು. ಶಾಬಾಸಂಘ` {. ವೆಂದರೇನು ? ಸಂಘವೆಂದಲಿ:ನು ?-ಈ ಮೊದಲ- ಸ್ಪಷ್ಟವಾಗಿ ತಿಳಿಯಬೀಕು. ಇವಕ್ಕೂ ನನಿಷತ್ತಿಗೂ ಇರುವ ಪರಸ್ಪರ ಸಂಬಂಧವು ಗೊತ್ತಾಗಬೇಕು. ರಾಖಿಗಳ ಅಥವಾ ಸ್ಪೀಕೃತ ಸಂಭ:ಗಳ ಒಳ ಆಡಳಿತೆಯ (!!1{²7ಗ೩| ಲ್ಲಿ ಬಷ್ಕುಮಟ್ಟ್ಗಗಿ ಕೈಹಾಕಬಹುದು ? ಹರಿವ ತ್ತಿನ ಮೇಲ್ತಿಚಾರಗಣಿಗಿ . ಒಳಪೆಡಿಸಿಳೊಂಡುದರ ಮೂಲವಾಗಿ ಉಳಿದ ಸಂಘಗಳಿಗೆ ಆಗತಕ್ಕ ಲಾಭವೇನು ?-ಇವೇ ಮುಂತಾದ ವಿಜೆಯೆಗಳು ನಿಣಣಯನಾಗಬೇಕು, ಆಂಧ್ರ ಸಾಹಿತ್ಯಕ ಮುಷತ್ತಿನವರೂ ಒಂದು ಉದ್ದೇಶವನಿಟ್ಟುಕೊಂಡಿರುವರು. ಈ ಆಂಥ್ರ ಪರಿಷತ್ತು ನಿರ್ಮಾಣವಾಗಿ ನಾಳ್ಕೆ ಫಿದು ವರ್ಷಗಳ ಕಾಲವು ದಾಟಹೋಯಿತಾದರೂ ಈ ಉದ್ದೇಶವನ್ನು ಸಾಧಿಸುವುದಕ್ಕಾಗಿ ಅವರು ಮಾಡಿದ ಪ್ರಯತ್ನ ಗಳಲ್ಲ್ರ ಇದುವರೆಗೆ ಕೇವಲ ನಿರಕರ್ಥತವಾದಂತಕೆ ತಿಳರುಬಗುತ್ತಿದೆ. ಇಷಾ ಗಿ ನ್ನೀಕ್ರತ ಸಂಘಗಳಿಂದ ಯಾವ ಸಹಾಯವನ್ನೂ ಅಪೇಕ್ಷಿಸದೆ ಒಂದಿಷ್ಟು ಮೇಲ್ವಿಚಾರಣೆಗ ಮಾತ್ರ ಒಳಲ ಡಿಸಿ ಪ್ರತಿ ವಿಷಯದಲ್ಲಿ ಯೂ ಅಂಥ ಸಂಘಗಳಿಗೆ ತಾವೇ ಸಹಾಯಮಾಡಲು ಆ ಮಿ ಷತ್ತಿನವರು ಸಿದ್ದರಾಗಿದ್ದರು. ಇದಲ್ಲದೆ, ಮದ್ರಾಸುಆಧಿಪಶೃಳ್ಕೊಳಪಲ್ಟ ಆಂಧ್ರರೇ ಬಹ್ಪು . ಪಕ್ಸ್ ರವರಾಗಿಯೂ ನಾಗುಳತೆಯಲ್ಲಿ ಮುಂರಿಬಂದವಕಾಗಿಯೂ ಇದ್ದು ಉಳಿದ ಪ್ರಾಂತೃಗಳವರು ಯಾವ ವಿಷಯದಲ್ಲಿ ಯೂ ಅವರೊಡನೆ ಸಮಾನಸ್ಕ್ರಂಧ ರೆನ್ನಿ ಸುವ ಯೋಗ್ಳ ತೆಯನ್ನುಳ್ಳವರಲ್ಲ ವಾದುದುಂದ, ಎಲ್ಲರೂ ಮದ್ರಾಸಿನ ಆ. ಸಾ. ಪರಿಷತ್ತನ್ನೇ ಮುಮ್ಮಿವಾಗಿ ತಿಳಿಯಲು ಅಭ್ಭಂತರವಾವುದೂ ಇರಲಿಲ್ಲ. ಕನ್ನ್ನಡಿಗರ ಸ್ಥಿತಿಯೇ ಬೇರೆ, ಕರ್ಣಾಟದೇಶವು ಕೇವಲ ಫ್ರಹೀಕವಾದ ಅಯಿದು ಭಾಗೆಗಳಾಗಿ ಏರ್ಪಟ್ಟಿದೆ. ಬನಸಂಖ್ಳೆಯಲ್ಲಿ ಯೂ ಕ್ಲೇತ್ರಫಲದಲ್ಲಿ ಯೂ ಮೈಸೂರು ಸೀಮೆಯು (ಕೊಡಗು ಬಿಟ್ಟು) ಉಳಿದ ಫ್ರತಿ ಭಾಗಲ್ನಿಂತ ಸುಮಾರು ಎರಡರಿಂದ ರೊಡ್ ದಾಗಿರುವುವಾದರೂ, ಕರ್ನಾಟ ಪಾಂಪಿಕ್ಕೃದ ವಿಷಯ
| ಲೆ ದಲ್ಲಿ ಯೂ ಅದು ಮೇಲ್ಗ ಯ್ಯಾಗಿರುವುದಾದರೂ, ಸಾಮಾನೃತಃ (೧1೬79) ಸಥಧೃಶೆಯ ವಿಷಯದಲ್ಲಿ ಮದ್ರಾಸು ಮತ್ತು ಬೊಂಬಾಯಿ ಕರ್ಣಾಟಗಳು ಕೂಡ ಮೈ7ರಿಗಿಂತ ಸ್ವಲ್ಪವೂ ಹಿಂದಿಲ್ಲ ವೆನ್ನ ಬಹುರು. ಸಾಲದುದಕ್ಕೆ ಈಗ ೨೫% ವರ್ಷದಿಂದ ಜೆನ್ಮಾಗಿನಡೆದು ಬಂದಿರುವ ಧಾರವಾಡದ ಕರ್ಣಾಟಳ ವಿದ್ಯಾವರ್ಧಕ ಸಂಘವೂ ಒಂದು ಇರುವನ್ರದು. ಇದನ್ನು ಪರಿತತ್ತಿನ ತಾಖಿಯೊಗಿ ಏರ್ಡಿಸುವುದು «ಳ್ತ ನ. ಸುಮ್ಮನಿರುವುದು ಅಸಾಢ್ಯ, ಇಂಥ ಫ್ರತಿ ಕೂಲಸ್ಮಿ ತಿಯಲ್ಲಿ ಶಾಖಾಸಂಘ/ಗಳನ್ನು ಹೇಗೆ ಸ್ಪಾ-:ಸಬೇಕೋ ? ಇತರ ಸಂಘಗಳನು ಹೇಗಿ ಖ್ |ಭಸ್ಕಿಳೆ ಕ್ರವ್ ?- ತ್ ೬ ಶಾ {ಕಲಸಿ.ಕೊಳ ಆಜ` ಒ ನಿರ್ಣಯಿಸಲ್ಪಡತಕ್ಕುದೆಂಬುದು ಸಭಿಳಲಗೆ ತಾನಾಗಿಯೇ ತಿಳಿದು ಬಾರದಿರದು. ಇದಳ್ಳೈ ದೀ ರ್ಘಾನುಧವವೂ ಪೂರಾ. ಪರವನಿಸೇಕವೂ ಬೇಕಾಗುಡದೇ ವಿನಾ ಬರೀ ಭಾಸಾ ವಾಂಡಿ ಶೃವ್ಣು ; ಯಾವ ಭಾಗದವುಗೂ ಯಾನ ಪಕ್ಸ್ನದಮಗೂ ಮನಸ್ಸು ನೋಯದ ಹಾಗೆ ಈ ಕಲಸವನ್ನು ನರವೇರಿಸಚೀಕಾಗಿದೆ. ೬೪ಗಾದುದಲಿಂದ ದರ ವಿಳಂಬಿಸಗೆ, ಪ್ರತಿ ಭಾಗದಿಂದಲೂ ಎರಡು ಮೂರು ಮಂದಿ ದೊಡ್ಡ ಮನುಷ್ಯರನ್ನು ಸಭಿಕರಾಗಿ ಏರಡಿಸನಿ ಪರಷದಧ್ಬಕ್ಸ್ನರಾದ ಶ್ರೀಯುತ ನಂಜುಂಡೈಯ್ಯೆನವರು ತಾವೇ ಈ ಉಪಸನಭೆಯ್ಪೆ ಫ್ರವರ್ತಕರಾಗಿ ನಿಂತು, ಈ ದೊಡ್ಡ ಪ್ರಶ್ನ ವನ್ನು ಸರ್ವಸಮ್ಮತವಾದ ರೀತಿಯಲ್ಲಿ ತೀಲಿಸುವ್ರದು ಅಗತ್ತವಾಗಿವೆ.
‹ ಸಿರಿಗ್ನನ್ನ ಡಂಗಳೆ ??
==============================
ಕಾದಂಬರೀ ಸಂಗ್ರಹ ಗ್ರ೦ಥಮಾಲಾ ನಂ 29
ರೋಹಿಣಿ
ನ೦ಜು೦ಡಯ್ಯ
ಬೆಲೆ 4 ಆಣೆPrice 4 As
-----------------------------------------------------
ಪೀಠಿಕೆ
ಇದು ಈಶ್ವರಲೀಲಿಯನ್ನು ವಿಚಿತ್ರಘಟನಾವಳಿಗಳ ಮೂಲಕ ಪ್ರದರ್ಶಿಸುವ
ನೀತಿಬೋಧವಾದ ಕಾಲ್ಪನಿಕ ಕಾದಂಬರಿಯು. ವೀರರಸ ಶಾಂತರಸಗಳೇ ಈ ಗ್ರಂಥ
ದಲ್ಲಿ ಪ್ರಧಾನಗಳಾಗಿವೆ. ಅನೇಕ ಚಮತ್ಕಾರದಾದ ವರ್ಣನೆಗಳೂ ನೀತಿಬೋಧೆಗಳೂ
ಅಲ್ಲಲ್ಲಿ ಅಡಕವಾಗಿವೆ. ಇದು ಮುದ್ರಣಕ್ಕೆ ಪ್ರಾರಂಭವಾಗಿ ೩ ವರ್ಷಗಳಾದರೂ ಅನೇಕ ತೊಂದರೆಗಳಿಂದ ಮಧ್ಯಕಾಲದಲ್ಲಿ ನಿಲ್ಲಿಸಲ್ಪಟ್ಟಿದ್ದುದಕ್ಕಾಗಿ ವಿಷಾದಿಸಬೇಕಾ
ಗಿದೆ. ಕಥಾಭಂಗವಾಗಬಾರದೆಂದು ಯೋಚಿಸಿ ಕಾದಂಬರೀಸಂಗ್ರಹ ಮಾಸಪತ್ರಿಕೆಯ
ಸಂಪಾದಕರಾದ ಮ|| ಸಿ. ವೆಂಕಟರಮಣಶಾಸ್ಯಿಗಳು, ಈ ರೊಹಿಣಿಯನ್ನು ಅಮೋ
ಘವಾದ ತಮ್ಮ ಮಾಸಪತ್ರಿಕೆಯಲ್ಲಿ ಸಂಫೂಣಣವಾಗಿ ಪ್ರಕಟಸಿದುದಕ್ಕಾಗಿ ನಾನು
ಅವರಿಗೆ ಕೃತಜ್ಞನಾಗಿರುವೆನು . ಈ ಗ್ರಂಥದಲ್ಲಿರುವ ಸುಗುಣಗಳನ್ನು ಸ್ವೀಕರಿಸಿ ಪ್ರಾತ್ಸಾಹಿಸಿ ಮುಂದೆಯೂ ಇಂತಹ ಗ್ರಂಥರಚನೆಗೆ ಅವಕಾಶಗಳನ್ನು ಕಲ್ಪಿ
ಸಿಕೊಡುವರೆಂದು ನಂಬಿದೇನೆ. ಈ ಗ್ರಂಥವನ್ನು ಬರಿಯುವ ಕಾಲದಲ್ಲಿ ಮೈಸೂರು ಮಹಾರಾಣಯವರ ಕಾಲೇಜು ಅ|| ಮಾಸ್ಟರಾಗಿದ್ದು, ಸದ್ಯಃ ತುಮಕೂರು ಎಂಪ್ರೆಸ್ ಗರ್ಲ್ ಹೈಸ್ಕೂಲಿನ ಸಹಾಯೋಪಾಧ್ಯಾಯರಾಗಿರುವ ಮ|| ನಾರಾಯಣಶಾಸ್ತ್ರಿಗಳು ಬಹಳ ಸಹಾಯಮಾಡಿರುವುದರಿಂದ ಅವರಿಗೆ ನಾನು ಕೃತಜ್ಞನಾಗಿದೇನೆ.
ಮೈಸೂರು ಟಿ. . ನಂಜುಂಡಯ್ನ,
1916 ನೇ ಆಗಸ್ಟ್
===============================
ರೋಹಿಣಿ
ಪ್ರಥಮ ಲಹರಿ.
ದಿಕ್ಕಿಲ್ಲದ ಮಗು.
ಹಿಮಗಾಲದಲ್ಲೊಂದುದಿನ ಕರುಣಾಕರನು ಕಲ್ಯಾಣನಗರದಲ್ಲಿದ್ದ
ತನ್ನ ಅಕ್ಕನನ್ನು ನೋಡಲು ಅಶ್ವಾರೂಢನಾಗಿ ಹೊರಟನು. ಆಗ ಸಂಧ್ಯಾ ಕಾಲವಾಗಿದ್ದಿತು. ಹಿಮವು ಅವಿರಳವಾಗಿ ಸುರಿಯುತ್ತಿದ್ದಿತು. ಹಿಮದ
ಸರ್ವ ವ್ಯಾಪಕತೆಯಿಂದ, ಇದು ಮಾರ್ಗ, ಇದು ಹಳ್ಳ, ಇದು ದಿಣ್ಣೆ, ಇದು ಮೈದಾನವೆಂಬುದೊಂದೂ ಗೋಚರವಾಗುತ್ತಿರಲಿಲ್ಲ. ಆದರೆ ಕರುಣಾ
ಕರನ ಅಶ್ವವು ಎಂತಹ ಮಾರ್ಗದಲ್ಲಿ ಹೋಗುವುದಕ್ಕೂ ಅಂಜುತ್ತಿರ
ಲಿಲ್ಲ. ಈ ಅಶ್ವದ ಬಲದಿಂದಲೇ ಮಾರ್ಗವು ದುರ್ಗಮವೆಂದು ಸಹ ಲಕ್ಷಿ
ಸದೆ ಕರುಣಾಕರನು ಸೋದರಿಯನ್ನು ನೋಡಲು ಹೊರಟಿದ್ದನು. ಅಶ್ವವು
ಸ ಬುದ್ದಿ ಕೌಶಲದಿಂದ ಅನೇಕ ಕಷ್ಟಗಳನ್ನನುಭವಿಸುತ್ತಾ ಮಾರ್ಗ
ಕ್ರಮಣ ಮಾಡತೊಡಗಿತು. ಅಷ್ಟರಲ್ಲೇ ಅಂಧಕಾರವು ಸರ್ವತ್ರವ್ಯಾ
ಪಿಸಿತು. ಇಂತಹ ರಾತ್ರಿಯಲ್ಲಿ ನಿಬಿಡವಾದ ಹಿಮವರ್ಷದಲ್ಲಿ ಕುದು
ರೆಯು ಕಲ್ಯಾಣ ನಗರದ ಉದ್ಯಾನವೊಂದರ ಸಮೀಪದಲ್ಲಿ ಬರುತ್ತಿರು
ವಾಗ ಕರುಣಾಕರನಿಗೆ ಒಂದು ಶಿಶುವಿನ ರೋದನ ಧ್ವನಿಯು ಕೇಳಿಸಿತು.
ತಕ್ಷಣವೇ ಅವನು ಅಶ್ವದಿಂದಿಳಿದು ಆಲಿಸಿ ಕೇಳಲು ಪ್ರಚಂಡಮಾರು
ತರವವಲ್ಲದೆ ಮತ್ತೇನೂ ಕೇಳಲಿಲ್ಲ. ಪುನಹ ಕುದುರೆಯನ್ನು ಹತ್ತಿ ಮುಂದುವರಿಯುತ್ತಿರುವಲ್ಲಿ ಕುದುರೆಯು ಥಟ್ಟನೆ ಒಂದುಕಡೆ ನಿಂತು
ಬಿಟ್ಟಿತು. ಏನು ಮಾಡಿದರೂ ಮುಂದರಿಯಲೇ ಇಲ್ಲ. ಆಗ ಕರುಣಾ
ಕರನು ಪ್ರನಹ ಇಳಿದು ಸುತ್ತಲೂ ನೋಡಿದನಾದರೂ ಆ ಕತ್ತಲೆಯ
ಲ್ಲೇನೂ ಕಾಣಬರಲಿಲ್ಲ. ಆದರೂ ಬಿಡದೇ ಶೋಧಿಸತೊಡಗಳು ಕುದು
ರೆಯ ಮುಂಗಡೆ ಹಿಮವಾಪ್ನವಾದೊಂದು ಪ್ರದೇಶದಲ್ಲಿ ಏನೋ ಬಿದ್ದಿ
ರುವಂತೆ ಬೋಧೆಯಾಯಿತು. ಕರುಣಾಕರನು ಪರಿಶೀಲಿಸಲು ಅವನಿ
ಗೊಂದು ಎಳೆಯ ಮಗುವು ದೃಗ್ಗೋಚರವಾಯಿತು. ಅವನು ಅದನ್ನು
ಎರಡು ಕೈಗಳಿಂದ ಎತ್ತಿ ನೋಡಲು ಜೀವವಿರುವುದೆಂದು ತಿಳಿಯಿತು.
೨-----------------------------
ಮಗುವು ಮೆಲ್ಲನೆ ಅಳುತ್ತಿತ್ತು. ಕರುಣಾಕರನು ದುಃಖದಿಂದ-“ ಅಯ್ಯೋ ! ಪಾಪ” ಯಾರೂ ಈ ಶಿಶುವನ್ನು ಬಡತನದಿಂದಲೋ ಅಥವಾ ಇನ್ಯಾವ ಕಾರಣದಿಂದಲೋ ಹಿಮಾವೃತವಾದ–ನರಸಂಚಾರರಹಿತವಾದ ಇಂತಹ ಪ್ರದೇಶದಲ್ಲಿ ಹಾಕಿ ಹೋಗಿರುವರು. ಆಹ !! ಎಂತಹ ನಿರ್ಘೃಣರು
ಎಂದು ಹೇಳಿಕೊಂಡು ಸುತ್ತುಮುತ್ತಲೂ ನೋಡಲು ಯಾರ ಧನಿಯ ಕೇಳಿಸಲಿಲ್ಲ. ಮತ್ತು ಯಾವ ಮನುಷ್ಯನೂ ಸಿಕ್ಕಲಿಲ್ಲ. ಆಗ ಅವನು
ಈ ಮಗುವನ್ನು ಇಲ್ಲಿ ಯಾರು ಹಾಕಿ ಹೋಗಿರುವರೋ ಅಂತಹರ ಶೋಕ
ನಿವಾರಣೆಗಾಗಿ ಈ ಶಿಶುವನ್ನು ಸಂರಕ್ಷಿಸುವೆನೆಂದು ಘಟ್ಟಿಯಾಗಿ ಹೇಳಿ ಆ ಮಗುವಿಗೆ ತನ್ನ ಪಂಚೆಯನ್ನು ಹೊದಿಸಿ ಬೆಚ್ಚಗೆ ಮಾಡಿ ಕುದುರೆಯ
ಮೇಲೆ ಹತ್ತಿ ಮಗುವನ್ನು ಜೋಪಾನವಾಗಿ ಎತ್ತಿಕೊಂಡು ತನ್ನ
ಅಕ್ಕನ ಊರಿಗೆ ಹೋಗುವುದನ್ನು ನಿಲ್ಲಿಸಿ ಹಿಂತಿರುಗಿ ತನ್ನ ಮನೆಗೆ ಬಂದುಬಿಟ್ಟನು.
ಇವನ ಬರುವಿಕೆಯನ್ನು ನಿರೀಕ್ಷಿಸುತ್ತಿದ್ದ ಅವನ ತಮ್ಮ ದಯಾ
ಕರನು ಬೇಗ ಬಂದು ಕುದುರೆಯನ್ನು ಹಿಡಿದುಕೊಂಡನು. ಕರುಣಾಕ
ರನು ಕುದುರೆಯ ಮೇಲೆ ಕುಳಿತಿದ್ದಂತೆಯೇ ಮಗುವನ್ನು ತೆಗೆದು ದಯಾ
ಕರನ ಕೈಯಲ್ಲಿ ಕೊಟ್ಟನು.
ದಯಾಕರನು ಅದನ್ನು ನೋಡಿ, ಅಣ್ಣಾ ! ಈ ಮಗುವು ಎಲ್ಲಿ
ಸಿಕ್ಕಿತು ? ಇದನ್ನು ಕಾಪಾಡತಕ್ಕವರು ಯಾರು ? ಇದರ ವೃತ್ತಾಂತ
ವೇನು ? “ ಎಂಬಿವೇ ಮೊದಲಾದ ಪ್ರಶ್ನೆಗಳನ್ನು ಮಾಡಲು ಕರುಣಾ
ಕರನು, ನಮ್ಮನ್ನು ಹೊರತು ಸಂರಕ್ಷಿಸತಕ್ಕವರು ಮತ್ತಾರು ? ಎಂದು
ಹೇಳಿ, “ ಆ ಮಗುವನ್ನು ಬೆಳಕಿನ ಕಡೆಗೆ ತೆಗೆದುಕೊಂಡು ಬಾ ” ಎಂದನು. ದಯಾಕರನು ಬೆಳಕಿನಲ್ಲಿ ಕ್ಷಣಕಾಲ ಮಗುವನ್ನು ಚೆನ್ನಾಗಿ ನೋಡಿ
" ಆಹಾ ? ಇದೆಂತಹ ಸುಂದರವಾದ ಹೆಣ್ಣು ಕೂಸು ! ಇದರ ಕಣ್ಣುಗಳು
ಎಷ್ಟು ರಮ್ಯವಾಗಿವೆ ! ಆಗಲೇ ಇದು ಸುತ್ತುಮುತ್ತಲೂ ನೋಡಿ ಹೇಗೆ ನಗುವುದು ! ಪಾಯಶಃ ಇದಕ್ಕೆ ಹತ್ತು ಹನ್ನೊಂದು ತಿಂಗಳಿರಬಹುದು.
ಅಯ್ಯೋ ಪಾಪ ! ತುಂಬ ಹಸಿದಿರಬಹುದು. ಸ್ವಲ್ಪ ಹಾಲನ್ನು ಕುಡಿ
೩------------------------------------------------------------------
ಸೋಣ ! ಎಂಬದಾಗಿ ಹೇಳಿ ಹಾಲನ್ನು ಬಿಸಿ ಮಾಡಿ ಮಗುವಿಗೆ ಕುಡಿಸಿ
ದನು. ಮಗುವು ಮೆಲ್ಲಗೆ ಕುಡಿಯಲಾರಂಭಿಸಿತು. ಅಷ್ಟರಲ್ಲಿ ಹಿಮ
ದಲ್ಲಿ ತೊಯ್ದು ನಡುಗುತ್ತಲಿದ್ದ ಕರುಣಾಕರನು ಬೆಂಕಿಯನ್ನು ಕಾಸಿ ಕೊಳ್ಳುತ್ತಾ ದಯಾಕರನನ್ನು ಕುರಿತು ತನಗೆ ಮಗುವು ಸಿಕ್ಕಿದ ಸಂಗತಿ
ಯನ್ನು ವಿಸ್ತಾರವಾಗಿ ಹೇಳಿದನು. ದಯಾಕರನು ಈ ಮಾತುಗಳನ್ನು
ಕೇಳಿ ಬಹು ಕೋಪಗೊಂಡು ಇಂತಹ ಸುಂದರವಾದ ಮಗುವನ್ನು
ಹಿಮದಲ್ಲಿ ಹಾಕಿ ಹೋದವರೆಂತಹ ಕ್ರೂರಾತ್ಮರೋ ! ಆಹಾ ! ಇಂಥವರೂ ಈ ಲೋಕದಲ್ಲಿ ಇರುವರೇ ? ಅಯ್ಯೋ, ನೀವು ಆ ಮಾರ್ಗವಾಗಿ ಪ್ರಯಾಣಮಾಡದೆ ಇದ್ದರೆ ಈ ಕೂಸಿನ ಗತಿ ಏನಾಗುತ್ತಿತ್ತೋ ? ಇಂಥ
ಮಗುವನ್ನು ಅದರ ಮಾತಾಪಿತೃಗಳೇ ಈ ರೀತಿ ತ್ಯಜಿಸಿದ್ದ ಪಕ್ಷದಲ್ಲಿ
ವಿಚಾರಣೆ ಇಲ್ಲದೆ ಅವರನ್ನು ಗಲ್ಲಿಗೆ ಹಾಕಬೇಕು ” ಎಂದು ಹೇಳಿ
ಮಗುವಿಗೆ ಬೆಚ್ಚಗೆ ಹೊದ್ದಿಸಿದನು. ಇದನ್ನು ಕೇಳಿ ಶಾಂತನಾದ ಕರು
ಣಾಕರನು- "ದಯಾಕರನೇ ! ಸಜ್ಜನರಿಗೆ ಪರನಿಂದೆಯು ಯೋಗ್ಯವಾದ
ದ್ದಲ್ಲ. ಆ ರೀತಿ ದೂಷಿಸುವುದು ಮಹಾ ಪಾತಕವು. ಆದರೆ ಯಾವ
ಕಾರಣದಿಂದ ಮಗುವನ್ನು ಹಿಮದಲ್ಲಿ ಹಾಕಿ ಹೋದರೋ ಅದನ್ನು ವಿಮ
ರ್ಶಿಸದೆ ಅವರನ್ನು ನೀಚರು, ಘಾತುಕರು, ಕ್ರೂರಾತ್ಮರು, ಎಂದು ನಾವು ನಿಂದಿಸುವುದು ಕೂಡ ನ್ಯಾಯವಲ್ಲ” ಎಂದು ಹೇಳಿದನು.
ಅದಕ್ಕೆ ದಯಾಕರನು-ಈ ಶಿಶುವು ಯಾರದೋ ತಿಳಿಯಲಿಲ್ಲ.
ಮೈಮೇಲಿನ ಬಟ್ಟೆಗಳಾದರೋ ಬಹು ಶುಭ್ರವಾಗಿವೆ. ಆದರೂ ಅವು
ಅಷ್ಟು ಬೆಲೆಯುಳ್ಳವುಗಳಲ್ಲ. ಅದಿರಲಿ. ಇದಕ್ಕೆ ಏನು ಹೆಸರಿಡೋಣ ?
ಎಂದು ಕೇಳಿದನು. ಅದಕ್ಕೆ ದಯಾರ್ದಹೃದಯನಾದ ಕರುಣಾಕರನು ಪಂಚಾಂಗವನ್ನು ತೆಗೆದುನೋಡಿ “ ಆ ಮಗುವು ದೊರೆತ ದಿವಸವು ರೋಹಿ ಣೀನಕ್ಷತ್ರ ಯುಕ್ತವಾದ್ದರಿಂದ, ಬಹು ಸುಂದರವಾದ್ದರಿಂದಲೂ, ರೋಹಿಣಿಯೆಂದೇ ನಾಮಕರಣವನ್ನು ಮಾಡೋಣ ಎಂದು ಹೇಳಿದನು.
ಅದನ್ನು ದಯಾಕರನು ಒಪ್ಪಿ ಮಗುವಿಗೆ ರೋಹಿಣಿಯೆಂದೇ ನಾಮಕರಣ
ವನ್ನು ಮಾಡಿ ಆ ರೋಹಿಣೀನಕ್ಷತ್ರಾಧಿದೇವತೆಯೆ ಇದನ್ನು ಕಾಪಾಡಲಿ
ಎಂದು ಆಶೀರ್ವದಿಸಿ ಮಗುವಿಗೆ ಬೆಚ್ಚಗೆ ಹೊದಿಸಿ ಮಲಗಿಸಿದನು.
೪----------------------------------------------------
ಕೂಡಲೆ ಮಗುವಿಗೆ ನಿದ್ರೆಯ ಬಂದಿತು. ಅನಂತರ ಸಹೋದರರಿಬ್ಬರೂ ಭೋಜನವನ್ನು ಮಾಡಿ ಮಲಗಿದರು. ಕೂಡಲೇ ಪರೋಪಕಾರ
ಬುದ್ದಿಯು ಇದೇ ರೀತಿ ಕೊನೆಯವರಿಗೂ ಇವರಲ್ಲಿ ಸ್ಥಾಯಿಯಾಗಿ ಇರುವುದೋ ಇಲ್ಲವೋ ಎಂಬುದನ್ನು ಪರೀಕ್ಷೆ ಮಾಡುವಂತೆ ನಿದ್ರೆಯು ತ್ವರಿತವಾಗಿ ಬಂದಿತು. ನೋಡಿರಿ : ಪಾಠಕರೆ ! ವಿಧಿವಿಲಾಸವು ಎಂತಿರು
ವುದು ? ಸ್ವಲ್ಪಕಾಲದ ಮುಂಚೆ ಹಿಮದಲ್ಲಿ ಬಿದ್ದು ಮರಣೋನ್ಮುಖವಾ
ಗಿದ್ದ ಮಗುವು ಈಗ ಹೇಗೆ ಸುಖವಾಗಿ ನಿದ್ರಿಸುತ್ತಿರುವುದು ? ಕರುಣಾ
ಕರ ! ನೀನೇಧನ್ಯ ! ನಿನ್ನಂತಹ ಕರುಣಾಶಾಲಿಗಳು ಜಗತ್ತಿನಲ್ಲಿ ಅತಿ ವಿರಳ ರಲ್ಲವೆ ?
----------------
ದ್ವಿತೀಯ ಲಹರಿ
ವಿಚಾರ
ಮರುದಿನ ಬೆಳಗ್ಗೆ ಆ ಮಗುಏನ ವದಂತಿಯ, ಅಂದರೆ ಕರುಣಾ
ಕರನ ಶಪಥವೂ ಮಗುವಿಗೆ ರೋಹಿಣಿ ಎಂದು ನಾಮಕರಣ ಮಾಡಿದ್ದೂ ಊರಲ್ಲೆಲ್ಲಾ ವ್ಯಾಪಿಸಿತು. ಮಗುವು ದೊರೆತ ಕಾಡಿನಲ್ಲಿ ಒಂದು ಗುಡಿ
ಸಲು ಹಾಕಿಕೊಂಡು ಒಬ್ಬ ಕೃಷಿಕನು ವಾಸಮಾಡುತಲಿದ್ದನು. ಅವನು ಕರುಣಾಕರನ ಹೊಲದ ಕಾವಲುಗಾರನು. ಆ ದಿನ ರಾತ್ರಿ ನಿದ್ರಿತನಾಗಿ
ದ್ದಾಗ ಬಾಗಲಿಗೆ ಏನೋ ಬಡಿದಂತೆ ಬಹಳ ಗಟ್ಟಿಯಾದ ಶಬ್ದವಾಯಿತು. ರೈತನು ಅದನ್ನು ಕೇಳಿ ಮೇಲಕ್ಕೆದ್ದನು. ಆ ಸಮಯದಲ್ಲಿ ಅವನ ಕಿವಿಗೆ
ಒಂದು ರೋದನಧ್ವಸಿಯು ಕೇಳಿಬಂದಿತು. ಅದನ್ನು ಕೇಳಬಹುಭಯ
ಪಟ್ಟು ಬಾಗಿಲನ್ನು ತೆಗೆಯದೆ ಭದ್ರವಾಗಿ ಹಾಕಿಕೊಂಡು ನಿದ್ರೆ ಮಾಡ ತೊಡೆ ಗಿದನು. ಮಾರನೆಯ ದಿನ ಪ್ರಾತಃಕಾಲ ಬಾಗಿಲನ್ನು ತೆಗೆದು ನೋಡಲು
ಒಬ್ಬ ಸಿಪಾಯಿಯು ಬಿದ್ದಿದ್ದನು. ಇದನ್ನು ರೈತನು ಕಂಡು ಭಯಪಟ್ಟು
ಈ ಸಂಗತಿಯನ್ನು ತನ್ನ ಯಜಮಾನನಾದ ಕರುಣಾಕರನಿಗೆ ತಿಳಿಸಿದನು. ಕರುಣಾಕರನು ಇದನ್ನು ಕೇಳಿ ಆ ಸಿಪಾಯಿಯ ಮೂಲಕ ಈ ಮಗುವಿನ
೫-----------------------------------------------------------
ಸಮಾಚಾರವು ಏನಾದರೂ ತಿಳಿಯಬಹುದೆಂದು ಊಹಿಸಿ ರೈತನ ಜೊತೆ ಯಲ್ಲಿಯೇ ಬಂದನು. ನೋಡಲಾಗಿ ಸಿಪಾಯಿಯುಮೃತನಾಗಿದ್ದನು. ಅವನ ದೇಹವನ್ನೆಲ್ಲಾ ಶೋಧಿಸಲಾಗಿ ಒಂದು ಕಾಗದವು ಸಿಕ್ಕಿತು. ಅದರಲ್ಲಿ
ಹೀಗೆ ಬರೆದಿತ್ತು
ಯುದ್ದದಲ್ಲಿ ಮರಣೋನ್ಮುಖರನಾದೊಬ್ಬನು ಈ ಮಗುವನ್ನು ನನಗೆ ಸಾಕುವುದಕ್ಕಾಗಿ ಕೊಟ್ಟನು. ನಾನು ವೃದ್ದನಾದ್ದರಿಂದ ನನ್ನ ಸ್ಥಳ
ವನ್ನು ಸೇರಬೇಕೆಂದು ಇದ್ದ ನೌಕರಿಯನ್ನು ಬಿಟ್ಟು ಮಗುವನ್ನು ಜತೆ
ಯಲ್ಲಿ ಕರೆದುಕೊಂಡು ಬರುವಾಗ ಮಾರ್ಗದಲ್ಲಿ ಹಸಿವು, ಬಳಲಿಕೆ,
ಆಯಾಸ, ಚಳಿ, ಮುಂತಾದುವುಗಳನ್ನು ಸಹಿಸಲಾರದೆ ಈಕುಟೀರವನ್ನು
ಕಂಡು ಇಲ್ಲಿಯಾದರೂ ಸ್ವಲ್ಪ ಸಹಾಯದೊರಕಿತೆಂದು ಯೋಚಿಸಿ
ಕೂಗಿದೆನು, ಅತ್ತೆನು. ಗೋಳಾಡಿದೆನು. ಏನು ಮಾಡಿದರೂ ಕುಟೀರದ
ಬಾಗಿಲು ತೆಗೆಯಲ್ಪಡಲಿಲ್ಲ. ಆದ್ದರಿಂದ ಇಲ್ಲಿ ಬಿದ್ದು ಪ್ರಾಣಬಿಡುವ ಅವ
ಸ್ಥೆಗೆ ಬಂದೆನು ” ಎಂದು ಬರೆದಿತ್ತು.
ಕರುಣಾಕರನು ನೋಡಿ ವಿಸ್ಮಯಾವಿಷ್ಟನಾಗಿ ಮಗುವಿನ ನಿಜವಾದ ಸಂಗತಿಯೇನೋ ಗೊತ್ತಾಗಲಿಲ್ಲ. ಬಹುಶಃ ಈ ಮಗುವು ಆ ಸಿಪಾಯಿ
ಯರೇ ಎಂದು ಊಹಿಸಿ ಅತಿ ಪ್ರೇಮದಿಂದ ಸಾಕುತ್ತಾ ಬಂದನು. ರೋಹಿ
ಣಿಯ ಕೊಡ ತನ್ನ ಸಾಕು ತಂದೆಯಲ್ಲಿ ಅತ್ಯಂತ ವಿಧೇಯಳಾಗಿಯೂ
ವಿಶ್ವಾಸವುಳ್ಳವಳಾಗಿಯೂ ಇದ್ದುದೂ ಅಲ್ಲದೆ ಆ ಪಟ್ಟಣದ ನಿವಾಸಿಗ
ಳೆಲ್ಲರ ಪ್ರೀತಿಗೂ ಪಾತ್ರಳಾಗಿದ್ದಳು. ಹೀಗೆ ರೋಹಿಣಿಯು ಶುಕ್ಲ
ಪಕ್ಷದ ಚಂದ್ರಮನಂತೆ ವೃದ್ಧಿ ಹೊಂದುತ್ತಾ ಮನೆಯ ಕೆಲಸಗಳನ್ನು ಮಾಡಿಕೊಂಡು ತನ್ನ ಸಾಕುತಂದೆಯ ಮತ್ತು ದಯಾಕರನ ಶುಶ್ರೂಷೆ
ಯನ್ನೂ ಮಾಡಿಕೊಂಡು ಎಲ್ಲರಿಗೂ ಬಹಳ ಅಚ್ಚು ಮೆಚ್ಚಾಗಿದ್ದಳು.
ಹೀಗೆ ಹನ್ನೆರಡು ವರ್ಷಗಳ ಕಳೆದವು.
ಒಂದುದಿನ ಕರುಣಾಕರನು ರೋಹಿಣಿಯನ್ನು ಕುರಿತು '' ಅಮ್ಮ
ಮಗುವೆ ! ಕಲ್ಯಾಣನಗರದಲ್ಲಿರುವ ನಮ್ಮ ಸಹೋದರಿ ಕರುಸಾಂಬೆಗೆ ದೇಹದಲ್ಲಿ ಬಹಳ ಆಲಸ್ಯವೆಂದು ಸಮಾಚಾರ ಬಂದಿದೆ. ಅವಳು ಮುದುಕಿ!
೬-----------------------------------------------------
ವಯಸ್ಸಾಯಿತು. ಏನುತಾನೆ ಮಾಡಿಯಾಳು? ಕೆಲವು ಕಾಲದ ವರೆ
ವಿಗೂ ನಿನ್ನನ್ನು ಅವಳ ಸಮೀಪಕ್ಕೆ ಕಳುಹಿಸಬೇಕಂಬ ಇಚ್ಛೆ ಇದೆ.
ನಿನ್ನ ಅದೃಷ್ಟದಿಂದ ಆಕೆಗೆ ಆರೋಗ್ಯವಾಗಬೇಕು. ಎಂದು ಹೇಳಿದನು.
ಅದಕ್ಕೆ ರೋಹಿಣಿಯು ಕರುಣಾಕರನನ್ನು ಕುರಿತು ಅಪ್ಪಾ ! ತಮ್ಮ ಇಷ್ಟ ದಂತೆಯೆ ನಡೆಯಲು ಸಂತುಷ್ಟಚಿತ್ತಳಾಗಿರುವೆನು. ತಮ್ಮ ಸಹೋದ
ರಿಯರಾದ ಕರುಣಾಂಬೆಯರ ಸೇವೆಯನ್ನು ಮನಃಪೂರ್ವಕವಾಗಿ ಮಾಡು ವನಾದರೂ ತಮ್ಮನ್ನು ಅಗಲಿ ಹೇಗಿರಲಿ ” ಎಂದಳು.
ಅದನ್ನು ಕೇಳಿ ಕರುಣಾಕರನು ಮಗುವೇ ? “ ನಾನೇ ಜಾಗ್ರತೆ
ಯಾಗಿ ಬಂದು ನಿನ್ನನ್ನು ಕರೆದುಕೊಂಡು ಬರುವೆನು. ನಾನು ಬಂದು
ಕರೆದ ಹೊರ್ತು ನೀನು ಮತ್ತಾರ ಸಂಗಡ ಬರಕೂಡದು ” ಎಂದು
ಹೇಳಿದನು.
ರೋಹಿಣಿಯು ಆತನ ಮನೋಭಿಪ್ರಾಯವನ್ನು ತಿಳಿಯದೆ ಇದ್ದು
ದರಿಂದ ಸಂತೋಷದಿಂದ ಪ್ರಯಾಣಸನ್ನದ್ಧಳಾದಳು. ತಂದೆ ಮಗಳಿಬ್ಬರೂ ಪ್ರಯಾಣಮಾಡಿ ಪೂರ್ವದಲ್ಲಿ ಈ ಮಗುವು ಬಿದ್ದಿದ್ದ ಸ್ಥಳವನ್ನು ಕಂಡು ಕರುಣಾಕರನು- ರೋಹಿಣಿ ಈಗ ಹನ್ನೆರಡು ವರ್ಷಗಳ ಮುಂಚೆ ನೀನು
ಈ ಪ್ರದೇಶದಲ್ಲಿ ಬಿದ್ದಿದ್ದೆ ” ಎಂದು ಆ ಪ್ರದೇಶವನ್ನು ತೋರಿಸಿದನು. ಅದನ್ನು ಕೇಳಿ ರೋಹಿಣಿಯು ಆ ಪ್ರದೇಶದಲ್ಲಿ ನಿಂತು ಭಗವಂತನ ವ್ಯಾಪಾರವನ್ನು ಕುರಿತು ಆತನನ್ನು ಸ್ತೋತ್ರ ಮಾಡಿದಳು. ಅನಂತರ ಕರುಣಾಕರನ ಕಡೆಗೆ ತಿರುಗಿ ಗದ್ಗದಧ್ವನಿಯಿಂದ ಎಲೈ ತಂದೆಯೆ?
"ಈಗ್ಗೆ ಹನ್ನೆರಡು ವರ್ಷಗಳ ಹಿಂದೆ ಈಶ್ವರಾನುಗ್ರಹದಿಂದ ನೀನು
ನನ್ನನ್ನು ಕಂಡು ಕಾಪಾಡಿದೆ. ಮತ್ತು ಈಗಲೂ ಕಾಪಾಡುತ್ತಲಿರುವಿ.
ನನ್ನ ಸಂರಕ್ಷಣೆಗೋಸ್ಕರ ಜಗದೀಶ್ವರನು ನಿನ್ನನ್ನು ಹೇಗೆ ಕಳುಹಿಸಿ
ದನೋ ಹಾಗೆಯೇ ನಾನು ಈಗ ಮಾಡತಕ್ಕ ಪ್ರಾರ್ಥನೆಯನ್ನು ಕೇಳಿ
ಆತನು ನೀನು ಮಾಡಿದ ಉಪಕಾರಕ್ಕೋಸ್ಕರ ದೀರ್ಘಾಯುಸ್ಸನ್ನು
ಕೊಟ್ಟು ನಮ್ಮೆಲ್ಲರನ್ನೂ ಸಂರಕ್ಷಿಸಲಿ ” ಎಂದು ಪ್ರಾರ್ಥಿಸುತ್ತೇನೆ
ಎಂದಳು.
೭----------------------------------------------------------
ಈ ಮಾತನ್ನು ಕೇಳಿ ಕರುಣಾಕರನ ಮನಸ್ಸು ಕರಗಿತು, ಆಕೆಯ
ತಲೆಯ ಮೇಲೆ ಕೈಯನ್ನಿಟ್ಟು “ಸಕಲ ಪ್ರಾಣಿಗಳನ್ನೂ ಸಂರಕ್ಷಿಸತ
ಕ್ಕವನು ಈಶ್ವರನು. ಆತನ ಸಂಕಲ್ಪಕ್ಕೆ ವಿರೋಧವಾಗಿ ಯಾವುದೂ ನಡೆಯಲಾರದು. ಆತನ ಚಿತ್ತವಿದ್ದಂತೆ ಆಗಲಿ, ನನ್ನ ಆಯುರ್ಮಿತಿ ಎಷ್ಟಾ
ದರೂ ಇರಲಿ. ನಾನೇನೋ ನನ್ನ ಜೀವಮಾನವನ್ನೆಲ್ಲಾ ಭಗವಂತನ ಸೇವೆಯಲ್ಲಿಯೇ ಕಳಯಬೇಕೆಂದು ದೃಢ ಪ್ರತಿಜ್ಞೆಯನ್ನು ಮಾಡಿದ್ದೇನೆ. ಒಂದುವೇಳೆ ನಾನೇನಾದರೂ ಅಕಾಲಮೃತ್ಯುವಿಗೆ ತುತ್ತಾದರೂ ನಮ್ಮ ಕರುಣಾಂಬೆಯು ನಿನ್ನನ್ನು ಕಾಪಾಡದಿರಳು.
ನಾನು ನಿನಗೆ ವಿದ್ಯೆಯನ್ನು ಕಲಿಸಲಿಲ್ಲ. ಧನವನ್ನು ಕೊಡಲು
ಧನಿಕನಾಗಿಲ್ಲ. ಆದರೂ ಈಶ್ವರನಲ್ಲಿ ಭಕ್ತಿಯನ್ನೂ ವಿಶ್ವಾಸವನ್ನೂ ಉಂಟುಮಾಡಿರುವೆನು. ನೀನು ಸುಗುಣಿಯು. ವಿಧೇಯಳು. ಸತ್ಯವ್ರ
ತಳು. ನೀನು ಪರಮೇಶ್ವರನನ್ನು ಮಾತ್ರ ಯಾವಾಗಲೂ ಮರೆಯಬೇಡ;
ಆತನ ಅನುಗ್ರಹವಿಲ್ಲದೆ ಯಾವ ಪ್ರಾಣಿಯ ಭೂಮಿಯಲ್ಲಿ ಒಂದು ನಿಮಿಷವಾದರೂ ಜೀವಿಸಲಾರದು. ಆತನಿಗೆ ಸಮ್ಮತವಾದ ಕೆಲಸವನ್ನೇ
ಮಾಡು. ಒಬ್ಬರ ಮನಸ್ಸಿಗೂ ವ್ಯಥೆಯುಂಟಾಗತಕ್ಕ ಮಾತನ್ನು ಆಡ
ಬೇಡ. ಉಪಕಾರಿಯಾಗಿರು. ದೇವರು ನಿನಗೆ ಒಳ್ಳೆಯದನ್ನು ಮಾಡು
ವನು. ಋಣಾನುಬಂಧವಿದ್ದರೆ ಈ ಲೋಕದಲ್ಲಿ ಇನ್ನೊಂದಾವರ್ತಿ ಒಬ್ಬರನ್ನೊಬ್ಬರು ನೋಡುವೆವು. ಇಲ್ಲದಿದ್ದರೆ ಜಗದೀಶನ ಸನ್ನಿಧಿಯಲ್ಲಿ ನೋಡಲು ಯಾವ ಅಡ್ಡಿಯೂ ಇಲ್ಲ. ಎಂದು ಬುದ್ದಿ ಹೇಳಿ ಮಗ
ಳನ್ನು ಕಲ್ಯಾಣಪುರಕ್ಕೆ ಸೇರಿಸಿ ಕರುಣಾಂಬೆಯೊಡನೆ ಸಂಗತಿಯಲ್ಲವನ್ನೂ
ತಿಳಿಸಿ ಕರುಣಾಕರನು ಪುತ್ರಿ ವಿರಹ ವ್ಯಸನದಿಂದ ಕೂಡಿ ಆ ದೇಶದ ರಾಜ ಧಾನಿಯಾದ ಸುವರ್ಣಪುರಕ್ಕೆ ಪ್ರಯಾಣ ಮಾಡಿದನು.
ಪಾಠಕಮಹಾಶಯರೇ ! ದೈವಘಟನೆಯು ವಿಚಿತ್ರವಾದುದು. ಆಹಾ ! ರೋಹಿಣಿಯು ಎಲ್ಲಿ ಹುಟ್ಟಿದಳು ! ಎಲ್ಲಿ ಬೆಳದಳು ! ಈಗ ಎಲ್ಲಿರುವಳು ? ಕರುಣಾಕರನಿಗೆ ತನ್ನ ಸಾಕುಮಗಳನ್ನು ತನ್ನ ಸಹೋದರಿಯ ಮನೆಗೆ ಕಳುಹಿಸುವಾಗ್ಯೆ ಉಂಟಾದ ದುಃಖವೇ ಇಂತಿರುವಲ್ಲಿ ಸ್ವಂತ ಹೆಣ್ಣುಮ ಕ್ಕಳನ್ನು ಪ್ರೀತಿಯಿಂದ ಸಲಹಿ ಮದುವೆ ಮುಂತಾದುವುಗಳನ್ನು ನಡೆಸಿ
೮--------------------------------------------------------------------
ಪತಿಯ ಮನೆಗೆ ಕಳುಹಿಸತಕ್ಕ ಕಾಲದಲ್ಲಿ ಉಂಟಾಗತಕ್ಕ ತಾಯಿತಂದೆಗಳ ವ್ಯಥೆಯು ಎಷ್ಟೋ ಅದನ್ನು ವರ್ಣಿಸಲು ಶಕ್ಯವಲ್ಲ. ಅದನ್ನು ಪ್ರಾಜ್ಞ
ರಾದ ಅನುಭವೈಕವೇತ್ತರಾದ ಪಾಠಕರಿಗೇ ಬಿಟ್ಟಿರುವೆವು. ಇನ್ನು ಮುಂದೆ ಕರುಣಾಂಬೆಯು ಯಾರು ? ಎಂಬುದನ್ನು ವಿಚಾರ ಮಾಡುವ
=== =
ತೃತೀಯಲಹರಿ.
ವಿದ್ಯಾಭ್ಯಾಸ.
ಕರುಣಾಂಬೆಯು ಒಬ್ಬ ಬಾಲವಿತಂತುವು. ಆಕೆಯು ಸುವರ್ಣ
ಪುರದ ಪುರಾಧ್ಯಕ್ಷನ ಮೂರನೆಯ ಪತ್ನಿಯು, ಪುರಾಧ್ಯಕ್ಷನು ಬಹು
ದ್ರವ್ಯ ವನ್ನೂ, ಯಶಸ್ಸನ್ನೂ, ಸಂಪಾದಿಸಿ ಮೃತಪಟ್ಟನು. ಕೂಡಲೇ ಆತನ ಪ್ರಥಮ ದ್ವಿತೀಯ ಪತ್ನಿಯರ ಪುತ್ರರು ಕರುಣಾಂಬೆಗೆ ಮಾಸಾಶನ
ವನ್ನು ಕೊಟ್ಟು ಕಳುಹಿಸಿಬಿಟ್ಟರು.
ಕರುಣಾಂಬೆಯು ಸುವರ್ಣಪುರದಲ್ಲಿ ವಾಸಿಸಲು ಲಜ್ಜಿತಳಾಗಿ ಕಲ್ಯಾ
ಣಪುರಕ್ಕೆ ಬಂದು ವಾಸಮಾಡಲಾರಂಭಿಸಿದಳು: ಈಕೆಯು ಸುಗುಣಿ ಸದಾಚಾರಸಂಪನ್ನಳು. ಯಾವಾಗಲೂ ಸತ್ಕಾಲಕ್ಷೇಪದಲ್ಲೇ ಕಾಲಯಾ
ಪನೆ ಮಾಡುತ್ತಾ ವಿದ್ಯಾವತಿಯಾಗಿದ್ದುದರಿಂದ ಅನೇಕಗ್ರಂಥಗಳನ್ನು ಪಠನ ಮಾಡಿ ಅದರಿಂದ ತಿಳಿದು ಬಂದ ನೀತಿ ಮಾರ್ಗದಲ್ಲಿ ಸಂಚರಿಸುತ್ತ ಇತ
ರರಿಗೂ ಸನ್ಮಾರ್ಗವನ್ನು ಬೋಧಿಸುತ್ತ ತಪಸ್ಸಿಯಂತೆ ಇದ್ದಳು.
ರೋಹಿಣಿಯು ಬಂದ ಸ್ವಲ್ಪ ದಿನಗಳಲ್ಲಿಯೇ ಕರುಣಾಂಬೆಗೆ
ಪೂರ್ಣವಾಗಿ ದೇಹಾರೋಗ್ಯವುಂಟಾಯಿತು. ಮನೆಯ ಕೆಲಸಗಳನ್ನು
ಎಂದಿನಂತೆ ಮಾಡತೊಡಗಿದಳು. ಆಗ ರೋಹಿಣಿಯ ಕೂಡ ತನ್ನ
ಪ್ರೇಮದ ಸೋದರತ್ತೆಯ ಸಂಗಡ ಕೆಲಸ ಮಾಡಲುದ್ಯುಕ್ತಳಾದಳು. ಕರುಣಾಂಬೆಯು ಬಹು ಸಂತೋಷಪಟ್ಟು ವಿರಾಮಕಾಲದಲ್ಲೆಲ್ಲಾ ಕಸೂತಿ ಮೊದಲಾದ ಕೈ ಕೆಲಸಗಳನ್ನು ಅಭ್ಯಾಸ ಮಾಡಲಾರಂಭಿಸಿದಳು. ಚತು
ರೆಯಾದ ರೋಹಿಳೆಯು ಬಹು ಶೀಘ್ರದಲ್ಲಿಯೇ ಕರಕೌಶಲ ವಿದ್ಯೆಗಳಲ್ಲಿ ನಿಪುಣೆಯಾದಳು. ಇದನ್ನು ನೋಡಿದ ಕರುಣಾಂಬೆಯು ರೋಹಿಣಿಗೆ
೯-------------------------------------------------------------
ವಿದ್ಯಾಭ್ಯಾಸ ಮಾಡಿಸುವುದು ಉತ್ತಮವೆಂದು ಯೋಚಿಸಿ ಒಂದು ದಿವಸ ಮನೆಯ ಕೆಲ
ಸಗಳನ್ನೆಲ್ಲಾ ಮುಗಿಸಿ ವಿರಾಮದಲ್ಲಿರುವಾಗ ರೋಹಿಣಿಯನ್ನು ಕರೆದಳು. ಕೂಡಲೆ ರೋಹಿಣಿಯು ಸಮಾಪಕ್ಕೆ ಬಂದು ನಿಂತು ಏನು ಅಮ್ಮ ! ಕರೆದು ಎಂದು ಕೇಳಿ
ದಳು. ಕರುಣಾಂಬೆಯು ನಿನ್ನನ್ನು ನಾಳೆಯಿಂದ ಪಾಠಶಾಲೆಗೆ ಕಳುಹಬೇಕೆಂದಿರು
ವೆನು ಎಂದಳು.
ರೋ-ಅದೇತಕ್ಕೆ ?
ಕ-ವಿದ್ಯಾಭ್ಯಾಸಮಾಡುವುದಕ್ಕೆ.
ರೋ-ಮನೆ ಕೆಲಸಗಳನ್ನು ಮಾಡಿಕೊಂಡಿರುವ ಸ್ತ್ರೀಯರಿಗೆ ಓದುಬರಹವೇ
ತಕ್ಕೆ ? ನಾವೇನು ಪುರುಷರಂತೆ ನ್ಯಾಯಸ್ಥಾನಗಳಲ್ಲೂ, ಪಾಠಶಾಲೆಗಳಲ್ಲೂ ಕೆಲಸ ಮಾಡಬೇಕೆ ?
ಕ-ಪುರುಷರೇ ವಿದ್ಯೆಯನ್ನು ಕಲಿಯಬೇಕೆಂದೂ ಸ್ತ್ರೀಯರು ಕಲಿಯಬಾರ
ದೆಂದೂ ಜಗದೀಶನ ಸಿದ್ಧಾಂತವಲ್ಲ. ವಿದ್ಯಾಭಿಮಾನಿದೇವತೆಯಾದ ಸರಸ್ವತಿಯೇ ಸ್ತ್ರೀಯಲ್ಲವೆ ?
ರೋ-ಅಷ್ಟು ಮಾತ್ರಕ್ಕೆ ಸ್ತ್ರೀಯರು ವಿದ್ಯೆಯನ್ನು ಕಲಿಯಬೇಕೊ ?
ಕ-ಅಲ್ಲ. ಅದರಿಂದ ಪತಿಭಕ್ತಿ, ಮಾತಾಪಿತೃಭಕ್ತಿ, ದೈವಭಕ್ತಿ, ರಾಜಭಕ್ತಿ, ಗುರುಹಿರಿಯರಲ್ಲಿ ಭಕ್ತಿ, ಭೂತದಯೆ, ಇವೆಲ್ಲವೂ ಉಂಟಾಗುವವು.
ಕ-ಇನ್ನೂ ಇದೆ. ಮುಖ್ಯವಾಗಿ ತಾಯಿಯ ಮಕ್ಕಳನ್ನು ಪೋಷಿಸಬೇಕಾ
ದುದರಿಂದಲೂ, ತಾಯಿಯ ಬಳಿಯಲ್ಲಿಯೇ ಮಕ್ಕಳು ತಮ್ಮ ಬಾಲ್ಯಾವಸ್ಥೆಯನ್ನು ಕಳೆಯಬೇಕಾಗಿರುವುದರಿಂದ, ಸ್ತ್ರೀಯರೆಲ್ಲರೂ ವಿದ್ಯಾವತಿಯರಾಗಿದ್ದರೆ ಒಳ್ಳೆಯ ದಲ್ಲವೆ?
ರೋ-ಹಾಗಿದ್ದರೆ ಪೂರ್ವಕಾಲದಲ್ಲಿ ಯಾರಾದರೂ ವಿದ್ಯಾವತಿಯರಾ
ಗಿದ್ದರೋ ?
ಕ-ಅನೇಕ ಮಹಿಳೆಯರು ವಿದ್ಯಾವತಿಯರಾಗಿದ್ದರು. ಅತ್ರಿವಂಶದಲ್ಲಿ
ಹುಟ್ಟಿದ ವಿಶ್ವವರೆ, ಅಗಸ್ತ್ಯರ ಪತ್ನಿ ಲೋಪಾಮುದ್ರೆ, ಯಾಜ್ಞವಲ್ಕ್ಯರಪತ್ನಿ ಮೈತ್ರೇಯಿ, ಇವರಲ್ಲದೆ ದೇವಹೂತಿ, ಸಂಗಮಿತೆ, ಖನೆ, ಶಕುಂತಲೆ, ರುಕ್ಕಿಣಿ, ಸತ್ಯ ಭಾಮೆ, ಚಂದ್ರಮತಿ ಮೊದಲಾದವರು ವಿದ್ಯಾನಿಧಿಗಳಾಗಿದ್ದರು.
ರೋ- ಈಗ ಇವರಲ್ಲಿ ಯಾರಾದರೂ ಇರುವರೋ ?
ಕ-ಇಲ್ಲ. ಇವರುಗಳೆಲ್ಲಾ ಪೂರ್ವಯುಗಗಳಲ್ಲಿ ಇದ್ದ ಮಹಿಳೆಯರು.
೧೦-------------------------------------------------------------
ರೋ-ಹಾಗಾದರೆ ಈ ಯುಗದಲ್ಲಿ ಯಾರೂ ಇಲ್ಲವೆ?
ಕ-ಭಾರತಿ, ಲೀಲಾವತಿ, ಸರೋಜಿನಿ, ಸುಬಾಲೆ, ಸೂರವತಿ, ಶೀಲವತಿ
ಮೊದಲಾದವರು ಈ ಯುಗದವರು. ಇವರೂ ಕೂಡ ಪರಲೋಕಯಾತ್ರೆಯನ್ನು ಮಾಡಿದ್ದರೂ, ಅವರಿಂದ ರಚಿಸಲ್ಪಟ್ಟ ಅನೇಕ ಗ್ರಂಥಗಳು ಅವರ ಪ್ರಸಿದ್ಧಿಗೆ ಕಾರಣ ವಾಗಿವೆ.
ರೋ-ಅತ್ತೆಮ್ಮ ! ಅವಗಳಾವುವು.
ಕ-ಪೂರ್ವಯುಗದ ಮಹಿಳೆಯರು ರಚಿಸಿರತಕ್ಕ ಗ್ರಂಥಗಳನ್ನು ಹೇಳಿಲೋ ?
ಅಧವಾ ಈ ಯುಗದ ಮಹಿಳೆಯರಿಂದ ರಚಿಸಲ್ಪಟ್ಟ ಗ್ರಂಥಗಳನ್ನು ಹೇಳಲೋ ?
ರೋ-ಎಲ್ಲವನ್ನೂ ಹೇಳಿ,
ಕ-ವಿಶ್ವವರೆಯು ಋಗ್ವೇಗೈದದ ಐದನೆ ಮಂಡಲದಲ್ಲಿ 28 ನೆಯ ಸೂಕ್ತ
ವನ್ನೂ, ಲೋಪಾಮುದ್ರಾದೇವಿಯು ಋಗ್ವೇದದಲ್ಲಿ 179 ನೆಯ ಸೂಕ್ತವನ್ನೂ ರಚಿಸುವರು. ಮೈತ್ರೇಯಿಯು ಮಿತ್ರರಾಜನ ವೇದಪಾಠಾಲಯದಲ್ಲಿ ಉಪಾಧ್ಯಾಯಿನಿ ಯಾಗಿದ್ದಳು, ದೇವಹೂತಿ ಯೆಂಬುವಳು ಕಪಿಲಮುನಿಯ ತಾಯಿಯು, ಈಕೆಯೇ ಮೊದಲು ತನ್ನ ಮಗನಿಗೆ ವಿದ್ಯಾಭ್ಯಾಸವನ್ನು ಮಾಡಿಸಿ ದರ್ಶನಶಾಸ್ತ್ರವನ್ನು ಪ್ರಚುರಪ ಡಿಸುವುದಕ್ಕೆ ಉತ್ತೇಜನ ಕೊಟ್ಟಳು. ಸಂಗಮಿತೆಯು ಸಿಂಹಳದ್ವೀಪಕ್ಕೆ ಹೋಗಿ ಬೌದ್ಧ ಮತಧರ್ಮಗಳನ್ನು ಬೋಧಿಸಿ ಅನೇಕರು ಬೌದ್ಧಮತವನ್ನವಲಂಬಿಸುವಂತೆ ಮಾಡಿದಳು, ವಿಕ್ರಮಾದಿತ್ಯರಾಯನ ಸಭೆಯ ಮಹಾಪಂಡಿತನೊಬ್ಬನ ಕುಮರಿಯಾದ ಖನೆಯು ಜೋತಿಷಶಾಸ್ತ್ರವನ್ನು ಅಭ್ಯಾಸಮಾಡಿ ಲೋಕೋಪಕಾರಮಾಡಿರುವಳು. ಶಕುಂತಲಾದೇ ವಿಯು ರಾಜನಾದ ದುಷ್ಯಂತಮಹಾರಾಜನಿಗೆ ಬರೆದ ಪತ್ರಿಕೆಯಿಂದಲೇ ಆಕೆಯು
ವಿದ್ಯಾವತಿಯಾಗಿದ್ದಳೆಂಬುದು ವ್ಯಕ್ತಪಡಿಸುವುದು. ರುಕ್ಕಿಣೀದೇವಿಯು ತನ್ನ ತಂದೆಯು ತನ್ನನ್ನು ದುಷ್ಟನಾದ ಶಿಶುಪಾಲನಿಗೆ ಕೊಟ್ಟು ವಿವಾಹವನ್ನು ಮಾಡಬೇಕೆಂದಿದ್ದ ಸಂಗ ತಿಯನ್ನು ಪತ್ರಮುಖೇನ ಬ್ರಾಹ್ಮಣನ ಮೂಲಕ ಶ್ರೀಕೃಷ್ಣ ಪರಮಾತ್ಮನಿಗೆ ತಿಳಿಸಿ
ಲ್ಲವೆ ? ಸತ್ಯಭಾರ, ಚಂದ್ರಮತಿ ಮೊದಲಾದವರೂ ಕೂಡ ಹೀಗೆಯೇ
ಕಲಯಗದಲ್ಲಾದರೋ ಮಂಡಮಿಶ್ರನ ಪತ್ನಿಯಾದ ಭಾರತೀದೇವಿಯು ತನ್ನ
ಗಂಡನಿಗೂ ಶ್ರೀಮಚ್ಛಂಕರಭಗವತ್ಪಾದಾಚಾರರವರಿಗೂ ನಡೆದ ವಾದದಲ್ಲಿ ಮಾಧ್ಯ ಸ್ಥ್ಯವನ್ನು ವಹಿಸಿರಲಿಲ್ಲವೆ ? ಭಾಸ್ಕರಾಚಾರ್ಯರವರ ಕುವರಿಯಾದ ಲೀಲಾವತಿಯು ಗಣಿತಶಾಸ್ತ್ರದಲ್ಲಿ ನಿಪುಣೆಯಾಗಿ ಲೀಲಾವತಿಯೆಂಬ ಗ್ರಂಥವನ್ನು ರಚಿಸಿರುವಳು. ಹೀಗೆ ಯೇ ಎಷ್ಟೋ ಮಂದಿ ಮಹಿಳೆಯರು ವಿದ್ಯಾವತಿಯರಾಗಿದ್ದರು,
೧೧------------------------------------------------------
ರೋ- ಅವರಂತೆಯೇ ನಾವೂ ಅಭ್ಯಾಸಮಾಡಲು ಆಗುವುದೇ ? ಏನೋ
ಸ್ವಲ್ಪ ಓದುಬರಹವನ್ನು ಕಲಿತರೆ ಸಾಲದೆ ?
ಕ-ಹಾಗಾದರೆ ನೀನು ನಾಳೆಯಿಂದ ಪಾಠಶಾಲೆಗೆ ಹೋಗುವಿಯೋ ?
ರೋ-ಸ್ವಲ್ಪ ಕಲಿಯುವುದಕ್ಕೂ ಕೂಡ ಪಾಠಶಾಲೆಗೇ ಹೋಗಬೇಕೆ ? ಮನೆ
ಯಲ್ಲಿ ಓದುಕೊಳ್ಳಲಾಗುವುದಿಲ್ಲವೆ ?
ಕ-ಪಾಠಶಾಲೆಯಲ್ಲಿರತಕ್ಕೆ ಅನುಕೂಲಗಳು ಮನೆಯಲ್ಲಿದ್ದರಿಂದ ಸುಲಭ
ವಾಗಿಯೂ ಜಾಗ್ರತೆಯಾಗಿಯ ಕಲಿಯಲು ಅವಕಾಶವಿಲ್ಲ.
ರೋ-ಪಾಠಶಾಲೆಯಲ್ಲಿರತಕ್ಕ ಅನುಕೂಲಗಳೇನು ?
ಕ-ಸರ್ಕಾರದವರು ಯೋಗ್ಯರಾದ ಉಪಾಧ್ಯಾಯರನ್ನು ನಿಯಮಿಸಿ ಸುಲಭ
ವಾಗಿ ವಿದ್ಯೆಯನ್ನು ಕಲಿಸಲು ಅನುಕೂಲವಾದ ಸಲಕರಣೆಗಳನ್ನು ಕಲ್ಪಿಸಿರುವರು.
ಅಲ್ಲದೆ ಅನೇಕರು ಅಲ್ಲಿ ವಿದ್ಯಾಭ್ಯಾಸಮಾಡುತ್ತಿರುವರು. ಆದುದರಿಂದ ಅಮೂಲ್ಯವಾ ದ ವಿದ್ಯೆಯನ್ನು ಕಲಿಯಲು ಪಾಠಶಾಲೆಗೆ ಹೋಗುವುದು ಒಳ್ಳೆಯದು.
ರೋ-ವಿದ್ಯೆಯು ಅಮೂಲ್ಯವಾದದ್ದೆಂದು ಹೇಳಿದೆಯಲ್ಲ. ಅದು ಹೇಗೆ ?
ಕ–ಅದನ್ನು ವಿವರಿಸಿ ಹೇಳಬೇಕಾದರೆ ಅನೇಕ ದಿನಗಳು ಹಿಡಿಯುವುವು.
ರೋ-ಅಮ್ಮ ! ಚರ್ಚಿಸಿದುದಕ್ಕಾಗಿ ಅಜ್ಞಳಾದ ನನ್ನ ತಪ್ಪನ್ನು ಕ್ಷಮಿಸ
ಬೇಕು. ಎಂದು ನಮಸ್ಕಾರಮಾಡಿದಳು. ಅದನ್ನು ನೋಡಿ ಕರುಣಾಂಬೆಯು ಮಗೂ ! ರೋಹಿಣಿ ! ನೀನು ತಿಳಿದುಕೊಳ್ಳುವುದಕ್ಕಾಗಿ ಇಷ್ಟು ವಿಚಾರ ಮಾಡಿದುದು ಬಹಳ ಒಳ್ಳೆಯದೇಆಯಿತು ಎಂದು ಹೇಳಿ ಆಕೆಯನ್ನು ಆಲಂಗಿಸಿದಳು ಮತ್ತೆ ರೋಹಿಣಿ
ಯನ್ನು ಕುರಿತು ಮಗೂ ! ನೀನು ನಾಳೆಯಿಂದ ಪಾಠಶಾಲೆಗೆ ಹೋಗುವಿಯೋ ಎಂದು ಪ್ರಶ್ನಿಸಲು ರೋಹಿಣಿಯು ಬಹು ನಮ್ರತೆಯಿಂದ ಅತ್ತೆ ! ತಂದೆಯು ಇದುವಗೆ ನನ್ನನ್ನು ಶಾಲೆಗೇತಕ್ಕೆ ಕಳುಹಿಸಲಿಲ್ಲ ಎಂದು ಕೇಳಿದಳು.
ಕ-ಮಗೂ ! ನಿಮ್ಮ ತಂದೆಯು ಇದ್ದ ಊರು ಬಹಳ ಸಣ್ಣದು. ಅಲ್ಲಿ ಪಾಠಶಾಲೆ ಯಿಲ್ಲ.
ಕರುಣಾಂಬೆಯ ಮಾತಿನಂತೆ ರೋಹಿಣಿಯು ಮಾರನೆಯದಿನದಿಂದ ಪಾಠಶಾ
ಲೆಗೆ ಹೋಗಲಾರಂಭಿಸಿದಳು.
ಈ ಲೋಕದಲ್ಲಿ ತಿಳಿಯದವನಿಗೆ ಸುಲಭವಾಗಿ ತಿಳಿಸಬಹುದು. ತಿಳಿದವನಿಗೆ ಇನ್ನೂ ಸುಲಭವಾಗಿ ತಿಳಿಸಬಹುದು. ತಿಳಿದೂ ತಿಳಿಯದ ಮೂರ್ಖನಿಗೆ ತಿಳಿಸಲು ಬ್ರಹ್ಮನಿಗೂ ಕೂಡ ಅಸಾಧ್ಯವು, ಎಂಬ ಭರ್ತೃಹರಿಯ ನುಡಿಯಂತೆ ನಮ್ಮ ರೋಹಿ
೧೨------------------------------------------------------------------
ಣಿಗೆ ತಿಳಿಸುವುದು ಅತಿ ಸುಲಭ. ಅವಳಾದರೋ ಅತಿ ಚತುರೆ, ಕುಶಲಮತಿ, ಇಂಧವ
ಳಿಗೆ ಜಾಗ್ರತೆಯಾಗಿ ವಿದ್ಯೆಯು ಒರಲು ಅಭ್ಯಂತರವೇನಿರುವುದು ! ಅವಳು ಶಾಲೆಗೆ
ಹೋದ ಸ್ವಲ್ಪ ಕಾಲದಲ್ಲಿಯೇ ಓದಿ ಬರೆವುದರಲ್ಲೂ ಗಣಿತದಲ್ಲೂ ಬುದ್ದಿಮತಿಯಾ ದಳು. ಆಗ ಸುಂದುಯಾದ ರೋಹಿಣಿಗೆ 16 ವರ್ಷಗಳು ತುಂಬಿದವು. ಕರುಣಾಂಬೆ
ಯು ಅವಳ ಸೌಂದರ್ಯವನ್ನೂ ಅವಳ ಜಾಣ್ಮೆಯನ್ನು ನೋಡಿ ಹಿಗ್ಗುತಲಿದ್ದಳು. ವಾಚಕರೇ ಇನ್ನು ಕರುಣಾಕರ ದಯಾಕರ ವೃತ್ತಾಂತವನ್ನು ವಿವರಿಸುವೆವು ಇತ್ತ ಬನ್ನಿ,
--+--
ಚತುರ್ಥಲಹರಿ.
ಲೋಕದಲ್ಲಿ ರಸಿಕಜನರು ಸಾಮಾನ್ಯವಾಗಿ ಪಚ್ಚಕರ್ಪೂರ ಮುಂತಾದ ವಾಸ
ನಾದ್ರವ್ಯಗಳಿಂದ ಮಿಶ್ರಿತವಾದ ದಿವಸುಗಂಧಾನುಲೇಪನದಲ್ಲಿಯ ವಿವಿಧ ವಿಹಾರಗಳ
ಲ್ಲಿಯೂ, ನವನವಪದಾರ್ಧದರ್ಶನದಲ್ಲೂ ಉತ್ಸುಕರಾಗಿರುವರೇ ವಿನಾ ದುಃಖಕಷ್ಟ ಗಳನ್ನನುಭವಿಸಲಾರರು, ಚಳಿಗಾಲಪ್ರಾಪ್ತವಾದರೆ ರಾತ್ರಿ ಕಾಲದಲ್ಲಿ ಕಂಬಳಿಗಳನ್ನು ಹೊಡೆದುಕೊಳ್ಳುವುದರಲ್ಲಿಯೂ, ಬನಾತಿನ ಅಂಗಿಗಳನ್ನು ತೊಟ್ಟುಕೊಳ್ಳುವುದರ ಲ್ಲಿಯೂ, ಕಸ್ತೂರಿಯ ಜಲದಿಂದ ಸುವಾಸಿತವಾದ ಅಡಿಕೆಯೂ, ಚಂದ್ರಬಿಂಬದಂತೆ ಧಳಧಳಿಸುವ ವೀಳೆಯದೆಲೆಯೂ, ಶುಭ್ರವಾದ ಸುಣ್ಣವೂ ಇವುಗಳಿಂದ ರಂಜಿತವಾಗಿ ಕಾಂತಾಕರದಿಂದ ಅಲ್ಪವಾದ ತಾಂಬೂಲವನ್ನು ಸೇವಿಸುವುದರಲ್ಲಿ ಆಸಕ್ತರಾಗಿಯೂ, ಧೂಮವಿಲ್ಲದೆ ಜ್ವಲಿಸುವ ಕೆಂಡಗಳಿಂದ ತುಂಬಿರುವ ಅಗ್ಗಿಷ್ಟಿಕೆಯ ಸೇವನೆಯಲ್ಲಿಯೂ, ವಿಶಾಲವಾದ ವಟವೃಕ್ಷಛಾಯೆಯಲ್ಲಿ ವಿಹರಿಸುವುದರಲ್ಲಿಯೂ, ಶುಭ್ರವಾದ ಜಲದಲ್ಲಿ ಸ್ನಾನಮಾಡುವುದರಲ್ಲಿಯೂ, ವಿನೋದವ್ಯಾಪಾರಗಳಲ್ಲಿಯೂ ಆಶೆಯುಳ್ಳವರಾಗಿ ರುವರು. ಆ ಕಾಲದಲ್ಲಿ ಹಕ್ಕಿಗಳು ತಮ್ಮ ತಮ್ಮ ಗೂಡುಗಳಿಂದ ವಿಶೇಷವಾಗಿ ಹೊರಗೆ ಹೊರಡದೆ ತಮ್ಮ ತಮ್ಮ ಮರಿಗಳನ್ನು ರೆಕ್ಕೆಗಳಲ್ಲಿ ಮುಚ್ಚಿಕೊಂಡಿರುವುವು. ಗದ್ದೆಗ ಳಲ್ಲಿ ಭತ್ತದ ಪೈರುಗಳು ಸುವರ್ಣವರ್ಣದ ತೆನೆಗಳಿಂದ ಭೂಮಿಗೆ ಬಾಗಿರುವುವು. ವಸಂತಕಾಲದಲ್ಲಿ ಪಥಿಕರ ಶ್ರಮಪರಿಹಾರಕ್ಕಾಗಿ ಧರ್ಮಾತ್ಮರಿಂದ ಇಡಲ್ಪಟ್ಟಿದ್ದ ಅರವ ಟ್ಟಿಗೆಗಳು ಈಗ ಶೂನ್ಯವಾಗಿರುವುವು. ಉಷಃಕಾಲದಲ್ಲೆದ್ದು ನದಿಯಲ್ಲಿ ಸ್ನಾನಮಾಡಿ ಮೇಲಕ್ಕೆ ಬರುವ ತಾಪಸರ ತುಟಿಗಳು ಶೀತದಿಂದ ಗಡಗಡನೆ ನಡುಗುವುದನ್ನು
ನೋಡಿದರೆ ಇಂತ ಉಪದ್ರವಕರವಾದ ಈ ಕಾಲವು ಶೀಘ್ರವಾಗಿ ತೊಲಗಿಹೋಗಲಿ
ಎಂದು ಶಪಿಸುವಂತೆ ಕಾಣುವುವು. ವೃಕ್ಷಗಳನ್ನು ನೋಡಿದರೆ ಸದ್ಗುರುವಿನಂತಿರುವ
೧೩--------------------------------------------------
ವಾಯುವಿನ ಸಹಾಯದಿಂದ ಸಂಚಿತಕರ್ಮಗಳಂತಿರುವ ಎಲ್ಲಾ ಪತ್ರಗಳನ್ನೂ ದೂರ ಮಾಡಿ ನಿರ್ಲಿಪ್ತನಂತೆ ನಿರ್ಮಾಣವನ್ನು ಹೊಂದಿದಂತೆ ತೋರುವುವು. ಮೃಗಗಳು ಕಾಡಿ ನಲ್ಲಿ ಬೆಳೆದಿರುವ ತೃಣಗಳನ್ನು ಯಥೇಚ್ಛವಾಗಿ ಉಪಯೋಗಿಸಿಕೊಂಡು ಆಶಾಪಾಶಬದ್ಧ ರಾಗಿರುವ ಕೃಪಣರ ಲೋಭದಂತೆ ನಿರಂಕುಶಗಳಾಗಿದ್ದವು. ಕೋಗಿಲೆಗಳು ಈ ಕಾಲವು ತೊಲಗಿ ವಸಂತಕಾಲವು ಬಂದು ವೃಕ್ಷಗಳೆಲ್ಲವೂ ಚಿಗುರುವವರೆಗೂ ತಾವು ಅಧರಸ್ಪಂದ ಮಾಡಬಾರದೆಂದು ನಿಯಮವನ್ನು ಮಾಡಿಕೊಂಡಿರುವಂತೆ ಮೌನವಾಗಿದ್ದವು. ಕಾಗೆ
ಗಳು ತಮ್ಮ ಗೂಡಿನಲ್ಲಿ ತಮ್ಮ ತತ್ತಿಗಳೊಡನೆ ಕೋಗಿಲೆಗಳು ತಂದು ಇಟ್ಟ ಮೊಟ್ಟೆಗೆ ಳನ್ನೂ ಕೂಡ ತನ್ನವುಗಳೇ ಎಂಬ ಭಾಂತಿಯಿಂದ ಅವುಗಳ ಮೇಲೆ ಕುಳಿತು ಪ್ರೀತಿ
ಯಿಂದ ಮರಿಗಳನ್ನು ಮಾಡುತಲಿದ್ದವು. ದುದ್ರರ ಗೃಹಗಳ ಭಿತ್ತಿಗಳಲ್ಲಿರುವ ತಿಗಣೆ
ಗಳು ಮೊದಲು ಮನುಷ್ಯರ ಶರೀರಗಳನ್ನು ಕಚ್ಚಿ ರಕ್ತ ಪಾನಮಾಡುತ್ತಿದ್ದ ದುರ್ಗುಣ ವನ್ನು ಬಿಟ್ಟು ಸಜ್ಜನರ ಹಾಗೆ ಪರಹಿಂಸೆಯನ್ನು ಮಾಡದೆ ಮುನ್ನ ಮಾಡಿದ ಪಾಪವು ಕಳೆಯಲಿ ಎಂದು ಉಪವಾಸವ್ರತದಿಂದ ಕೃಶವಾಗಿವೆಯೋ ಎಂಬಂತೆ ಚರ್ಮಮಾತ್ರ
ದಿಂದ ಪ್ರಾಣವನ್ನಿಟ್ಟು ಕೊಂಡಿರುವುವು. ಲೋಕಕ್ಕೆಲ್ಲಾ ತೆಜಸ್ಸನ್ನೂ ಔಷ್ಣ್ಯವನ್ನೂ ದಯಪಾಲಿಸತಕ್ಕ ಸೂರ್ಯದೇವನು ಸೌಮ್ಯನಾಗಿ ಹಿಮಕರನಂತಿರುವನು. ಸಂಚಾರಕ್ಕೆ ಮಧ್ಯಾನ್ಹ ವೇಳೆಯು ಅತಿ ರಮ್ಯವಾಗಿರುವುದು, ನಿಶಿಯಲ್ಲಿ ನಿರಾಕಾಂತನು ಹಿಮಾವೃತ ನಾಗಿ ಕಳೆಗುಂದಿರುವನು. ಪಡುವಣ ಗಾಳಿಯು ಶೀತಲವಾಗಿ ಬೀಸುತಲಿರುವುದು. ಧರಣಿಯು ಎಲ್ಲಿ ನೋಡಿದರೂ ಪೈರುಪಚ್ಚೆಗಳಿಂದ ತುಂಬಿತುಳುಕಿ ಆಹ್ಲಾದಕರವಾಗಿ ರುವುದು, ಚಾಡಿಕಾರರ ಮಾತಿಗೆ ಕಿವಿಗೊಡುವ ಪೃಥ್ವಿಪಾಲನ ಸಿರಿಯಂತೆಯೂ ಉತ್ತಮವಾದ ಸ್ತ್ರೀಪುರುಷರ ಕೋಪದಂತೆಯೂ ಹಗಲು ಬೇಗ ತೊಲಗುತಲಿರುವುದು. ಕ್ಷಿತಿಪರೆಲ್ಲರೂ ತಮ್ಮ ವೈರಿಗಳಮೇಲೆ ಚತುರಂಗಸೇನಾಸಮೇತರಾಗಿ ಕದನಕ್ಕೆ ತೆರಳು ವರು. ವಿಪಿನಗಳಲ್ಲಿ ಹಸ್ತಿಗಳು ಚಳಿಯನ್ನು ತಾಳಲಾರದೆ ತಮ್ಮ ತಮ್ಮ ಸೊಂಡಲುಗ ಇನ್ನು ಬಾಯಲ್ಲಿ ಮುಚ್ಚಿಕೊಂಡು ಶೀತಳವಾದ ಜಲವನ್ನು ನೀರಡಿಕೆಯಾದಾಗ್ಯೂ ಕುಡಿಯಲಾರದೆ ಬಳಲುತಲಿರುವುವು. ವನಾವಳಿಗಳು ಪೂಗಳಿಲ್ಲದೆ ಮಲಗಿ ನಿದ್ರೆಹೋ ಗುತ್ತಿವೆಯೋ ಎಂಬಂತಿರುವುವು.
ಇಂತಹ ಶೈತ್ಯಗಾಲದಲ್ಲಿ ಒಂದಾನೊಂದು ದಿನ ಸಚ್ಚಿದಾನಂದನು ಅಗ್ಗಿಷ್ಟಿಕೆ
ಯಲ್ಲಿ ಬೆಂಕಿಯನ್ನು ಕಾಯಿಸಿಕೊಳ್ಳುತಲಿದ್ದನು. ಈತನ ವಾಸಸ್ಥಳವು ಸುವರ್ಣ
ಪುರಕ್ಕೆ ಅನತಿದೂರದಲ್ಲಿರುವ ಪದ್ಮ ಪುರಿ ಎಂಬುವುದೊಂದು ಸಣ್ಣ ಗ್ರಾಮ. ಈತನು ಪೂರ್ವದಲ್ಲಿ ಕೇರಳದೇಶದವನು. ಬಾಲ್ಯದಲ್ಲಿಯೇ ಮಾತಾಪಿತೃಗಳ ವಿಯೋಗವನ್ನು
೧೪--------------------------------------------------
ಹೊಂದಿ ಕಡುತರವಾದ ಕಷ್ಟಗಳನ್ನನುಭವಿಸಿ ಕೊನೆಗೆ ಈ ಪದ್ಮ ಪುರಿಗ್ರಾಮಕ್ಕೆ ಬಂದು ಅಲ್ಲಿಯ ಜನರ ಅನುರಾಗಕ್ಕೆ ಪಾತ್ರನಾಗಿ ಅಲ್ಲಿ ವಾಸಿಸುತ್ತಿದ್ದನು. ಈತನು ವೇದಾ ಧ್ಯಯನ ಸಂಪನ್ನನು, ಸದಾಚಾರಶೀಲನು, ಕರ್ಮಠನು, ದಾನಶೀಲನು. ಸತ್ಯವಂತನು, ಬಹು ದರಿದ್ರಾವಸ್ಥೆಯಲ್ಲಿದ್ದ ಈತನು ಬಹುದಿವಸದಮೇಲೆ ಸತ್ಕುಲಪ್ರಸೂತೆಯೂ, ಸದಾಚಾರಸಂಪನ್ನಳೂ, ರೂಪವತಿಯೂ ಆದ ವಿಮಲಾಂಬೆಯೆಂಬ ಕನ್ಯಾರತ್ನ ವನ್ನು ವಿವಾಹಮಾಡಿಕೊಂಡು ಗೃಹಸ್ಥನಾಗಿ ಆ ಗ್ರಾಮದ ಜನರಿಂದ ಲಭಿಸಿದ ದ್ರವ್ಯದಿಂ
ದಲೇ ಕಾಲಯಾಪನೆಮಾಡುತಲಿದ್ದನು. ಬಹುದಿವಸವಾದಾಗ್ಯೂ ಈ ದಂಪತಿಗಳಿಗೆ ಸಂತಾನವುಂಟಾಗಲಿಲ್ಲ. ಇದು ತಮ್ಮ ಪೂರ್ವಾರ್ಜಿತಪಾಪವೆಂದೂಹಿಸಿ ಇದಕ್ಕೆ ಪುಣ್ಯ ತೀರ್ಥಸ್ನಾನ, ಮತ್ತು ಭಗವತೇವೆಯೇ ಪರಿಹಾರವೆಂದು ಯೋಚಿಸಿ ಸಕಲ ಪುಣ್ಯತೀರ್ಥ ಗಳಲ್ಲಿಯೂ ಮಿಂದು ಸಕಲ ಕ್ಷೇತ್ರಗಳಲ್ಲಿಯೂ ಭಗವಂತನ ಪಾದಸೇವೆಯನ್ನು ಪರ ಮಭಕ್ತಿಯಿಂದ ಮಾಡತೊಡಗಿದರು, ಕೂಡಲೆ ಮಾಡಿದ ದುಷ್ಕೃತ್ಯಗಳು ತೊಲಗಿ
ದವೋ ಎಂಬಂತೆ ವಿಮಲಾಂಬೆಯು ಈರ್ವರು ಪುತ್ರರನ್ನೂ ಓರ್ವ ಪುತ್ರಿಯನ್ನೂ
ಪಡೆದು ಮಕ್ಕಳ ಆಟಪಾಟಗಳನ್ನು ನೋಡದೆಯೇ ಸ್ವಾಮಿ ಪಾದಾರವಿಂದವನ್ನು ಸೇರಿ ದಳು. ಪತ್ನಿ ಹೀನನಾದ ಸಚ್ಚಿದಾನಂದನು ಮಕ್ಕಳ ಅಭಿವೃದ್ಧಿಯನ್ನೇ ಮುಖ್ಯವಾಗಿ
ಟ್ಟು ಕೊಂಡು ಪತ್ನಿಯ ದುಃಖವನ್ನು ತೊರೆದು ಜೇಷ್ಠ ಪುತ್ರನಿಗೆ ಕರುಣಾಕರನೆಂದೂ ಕನಿಷ್ಟನಿಗೆ ದಯಾಕರನೆಂದೂ ಕುವರಿಗೆ ಕರುಣಾಂಬೆಯೆಂದೂ ನಾಮಕರಣಗಳನ್ನು ಮಾಡಿ ಮಾತೃಹೀನರಾದ ಮಕ್ಕಳೆನಿಸದಂತೆ ಸಂರಕ್ಷಿಸುತ್ತಲಿದ್ದನು. ತಾನು ದರಿದ್ರನಾ
ಗಿದ್ದಾಗ್ಯೂ ತನ್ನ ಇಬ್ಬರು ಮಕ್ಕಳನ್ನೂ ಒಂದೇಸಮನಾಗಿ ವಿದ್ಯಾವಂತರನ್ನಾಗಿ ಮಾಡಬೇಕೆಂಬ ಕುತೂಹಲವು ಇವನಿಗೆ ಬಹಳವಾಗಿದ್ದಿತಾದರೂ ದ್ರವ್ಯಸಹಾಯವಿಲ್ಲ ದ್ದರಿಂದ ಚಿಂತಾಬ್ಧಿಯಲ್ಲಿ ಮುಳುಗಿದ್ದನು.
ಇತ್ತ ಸುವರ್ಣವುರದ ಪುರಾಧ್ಯಕ್ಷನ ದ್ವಿತೀಯಪತ್ನಿಯು ಲೋಕಾಂತರವ
ನ್ನೈದಿದಳು, ಸೌಂದರ್ಯ, ಸುಗುಣ, ವಿವೇಕದಲ್ಲಿ ಬುದ್ದಿಮತಿಯಾಗಿ ಕರುಣಾಂಬೆ
ಯು ಹೆಚ್ಚು ಹಣ ಇರುವುದನ್ನು ಆ ಪುರಾಧ್ಯಕ್ಷನು ಕೇಳಿ ತನಗೆ ಆ ಕನ್ಯೆಯನ್ನು
ಕೊಟ್ಟರೆ ಬಹಳವಾಗಿ ಧನ ಕೊಡುವುದಾಗಿ ಹೇಳಿಸಿದನು. ಇದನ್ನು ಕೇಳಿ ಸಚ್ಚಿದಾನಂ
ದನು ಬಹು ದಃಖಿತನಾಗಿ ಮನಸ್ಸಿನಲ್ಲಿ ಇಷ್ಟವಿಲ್ಲದಿದ್ದರೂ ತನ್ನ ಗಂಡಮಕ್ಕಳ ವಿದ್ಯಾಭಿವೃದ್ಧಿಗೋಸ್ಕರವಾದರೂ ಇದು ಒಂದು ಪಕ್ಷ ಅನುಕೂಲವೆಂದೂ ಯೋಚಿಸಿ ಮಗಳನ್ನು ಕೊಡಲೊಪ್ಪಿದನು, ಬಹಳ ವಿಜೃಂಭಣೆಯಿಂದ ಕರುಣಾಂಬೆಗೂ ಸುವರ್ಣ ಪುರದ ಪುರಾಧ್ಯಕ್ಷನಿಗೂ ವಿವಾಹವು ನೆರವೇರಿತು. ಸಚ್ಚಿದಾನಂದನಿಗೆ ಅಪಾರವಾದ ದ್ರವ್ಯವೂ ಲಭಿಸಿತು.
೧೫----------------------------------------------
ಎಲೌ! ಲಕ್ಷ್ಮೀದೇವಿಯೇ ! ನಿನ್ನ ಅನುಗ್ರಹವೊಂದಿದ್ದರೆ ಎಂಥವನಾದರೂ ಸತ್ಕುಲಪ್ರಸೂತನೂ, ರೂಪವಂತನೂ, ವಿದ್ಯಾವಂತನೂ, ವಾಚಾಳಿಯ, ಸದ್ಗು
ಣಿಯ, ಆಗುವನು, ನಿನ್ನ ಕಟಾಕ್ಷ ಮಾತ್ರದಿಂದಲೇ ಎಲ್ಲ ಜನರೂ ಮಿತ್ರರೂ, ಬಂಧು ಗಳೂ, ಆಗುವರು; ನೀನು ಮಾಡಬಾರದ ಕೆಲಸಗಳನ್ನೂ ಕೂಡ ಮಾಡಿಸಿಬಿಡುವೆ.
ಇಷ್ಟೇ ಅಲ್ಲ. ನೀನು ಮಾತಾಪಿತೃಗಳನ್ನೂ , ಭ್ರಾತೃಗಳನ್ನೂ, ಬಂಧು, ಮಿತ್ರರನ್ನೂ ಕ್ಷಣಮಾತ್ರದಲ್ಲೇ ಅಗಲಿಸುವೆ. ಪುನಃ ಸೇರಿಸುವೆ. ಹೇ ! ಧನಮಾತೆ ! ನಿನ್ನ ಶಕ್ತಿ
ಯು ಅಪಾರವಾದುದು. ನೀನು ವಿಮುಖಳಾದರೆ ಅಗ್ನಿ ಸಾಕ್ಷಿಯಾಗಿಯೂ, ಪಾಣಿಗ್ರಹ ಣಮಾಡಿಕೊಂಡು ಅರ್ಧಾಂಗಿಯೆನ್ನಿಸಿಕೊಂಡಿರುವ ಸತಿಯೂ ಕೂಡ ಜರಿಯುವಳು ! ಮುಖ್ಯವಾಗಿ ಲೋಕವೆಲ್ಲವೂ ನಿನ್ನ ದಯದಿಂದಲೇ ನಿಂತಿರುವುದು. ನೀನು ಮುನಿದರೆ ಲೋಕವೇ ನಾಶವಾಗುವುದು. ಹೇ ! ಚಂಚಲಸ್ವರೂಪವೇ ನಿನಗೆ ಅನೇಕ ನಮಸ್ಕಾರ ಗಳಿರಲಿ ! ನಮ್ಮನ್ನು ಅನುಗ್ರಹಿಸು, ಪ್ರಕೃತಸಚ್ಚಿದಾನಂರನೂ ಕೂಡ ನಿನ್ನ ಕಟಾಕ್ಷಸಂ ಪಾದನೆಗಾಗಿ ಮಾತೃವಿಹೀನಳಾದ ತನ್ನ ಮುದ್ದು ಕುವರಿಯನ್ನು ವೃದ್ಧನೂ, ಪುತ್ರನಂ ತನೂ, ಪರಲೋಕಪ್ರಯಾಣೋನ್ಮುಖನೂ ಆದ ಸುವರ್ಣ ಪುರಾಧ್ಯಕ್ಷನಿಗೆ ಕೊಟ್ಟು ವಿವಾಹಮಾಡಿದನು.
ಈ ದ್ರವ್ಯದಿಂದ ಸಚ್ಚಿದಾನಂದನು ತನ್ನ ಪುತ್ರರೀರ್ವರಿಗೂ ವಿದ್ಯಾಭ್ಯಾಸಮಾ ಡಿಸತೊಡಗಿದನು. ಕೆಲ ಕಾಲದಲ್ಲಿಯೇ ಸಕಲವಿದ್ಯಾಪಾರಂಗತರೂ, ಯೌವನಸ್ಥರೂ, ದೃಢಾಂಗರೂ ಆದ ಪುತ್ರರನ್ನು ನೋಡಿ ತಂದೆಯು ಸಂತೋಷಾಬ್ಬಿಯಲ್ಲಿ ಮುಳುಗಿ ಇಂತು ಆಲೋಚಿಸಿದನು. ನನಗೆ ವೃದ್ಯಾಪ್ಯವು ಸನ್ನಿಹಿತವಾಗುತ್ತಾ ಬಂತು. ತನ್ನ ಪುತ್ರರೀರ್ವರಿಗೂ ಸುತ್ಕುಲಪ್ರಸೂತೆಯರಾದ ಕನ್ಯಾರತ್ನ ಗಳನ್ನು ತಂದು ವಿವಾಹವನ್ನು ನೆರವೇರಿಸಿದರೆ ತನ್ನ ವಂಶವು ಆಚಂದ್ರಾರ್ಕಸ್ಥಾಯಿಯಾಗಿ ನಿಲ್ಲುವುದೆಂದು ಭಾವಿಸಿ ಅನುರೂಪರಾದ ಕನ್ಯೆಯರನ್ನು ವಿಚಾರಮಾಡಲುಪಕ್ರಮಿಸಿದನು. ಇದನ್ನು ಅರಿತ ಕನ್ಯಾಪಿತೃಗಳನೇಕರು ಯೌವನಸ್ಥರೂ ರೂಪವಂತರೂ, ವಿದ್ಯಾವಂತರೂ, ಸದ್ಗುಣ ಶೀಲರೂ, ಆದ ಕರುಣಾಕರ, ದಯಾಕರರಿಗೆ ಹೆಣ್ಣು ಕೊಡಲು ನಾನುತಾನೆಂದು ಮೇಲಾಡಲಾರಂಭಿಸಿದರು. ಪಾಠಕರೇ ! ಕನ್ಯಾಸಂಖ್ಯೆಯು ಅತ್ಯಧಿಕವಾಗಿರುವ ಈ ಕಾ ಲದಲ್ಲಿ ಕನೈಯಪಿತನು ವರಪಿತನ ಸನ್ನಿಧಿಯಲ್ಲಿ ತನ್ನ ಕನ್ಯಾಪಿತೃತ್ವವನ್ನು ಹೋಗಲಾ ಡಿಸಿಕೊಡಬೇಕೆಂದು ಬಹು ನಮ್ರಭಾವದಿಂದ ಬೇಡಿಕೊಂಡರೆ ಆಗ, ವರಪಿತನ ಅಹಂ ಕಾರವನ್ನೂ ಔದಾಸೀನ್ಯವನ್ನೂ ವರ್ಣಿಸುವುದು ಅಸಾಧ್ಯವೇಸರಿ, ಮತ್ತು ವರದಕ್ಷಿಣೆ, ವಿವಾಹದ ವೆಚ್ಚ, ವರನಮುಂದಿನ ವಿದ್ಯಾಭ್ಯಾಸದ ವೆಚ್ಚ ಇವುಗಳೆಲ್ಲವನ್ನೂ ವಹಿಸಿ
೧೬-----------------------------------------------------------
ಕೊಂಡರೆ ತಮ್ಮ ಕನ್ಯೆಯನ್ನು ತಂದುಕೊಳ್ಳುವೆನೆಂಬುದೇ ಮೊದಲಾದ ವಾಗ್ದಾನ
ದಿಂದ ದರಿದ್ರನಾದ ಕನ್ಯಾ ಪಿತನನ್ನು ಹೊಡೆಯುವುದೂ, ಈ ಮೂಲಕ ಸುಯದವರ ರಿಲ್ಲದೆ ಹೋಗಲ, ಕುರೂಪಿಯೋ ವೃದ್ದನೋ ಆದ ಆವನಾದರೊಬ್ಬನಿಗೆ ಕನ್ಯಾದಾ ನಮಾಡುವುದೂ ವಿಶೇಷಪ್ರಚಾರವಾಗಿ ಹೋಗಿದೆ. ಪಾಠಕಬಂಧೋ ! ಇದೇಕಾರಣ ದಿಂದಲೇ ಅಲ್ಲದೆ, ಸ್ನೇಹಲತೆಯು ತನ್ನ ಪ್ರಾಣಬಲಿಯನ್ನಿತ್ತು ಲೋಕದಲ್ಲಿ ಯಶಃ ಕಾಯದಿಂದ ವಿರಾಜಿತಳಾಗಿರುವಳು.
ಇಂತು ಈಗಣಕಾಲದಲ್ಲಿ ಎಷ್ಟೋ ಕನ್ಯಾಪಿತರರನ್ನು ಸುಲಿದು ಅನೇಕ ಮಹ
ನೀಯರು ದೊಡ್ಡ ಮನುಷ್ಯರಾಗಿರುವರು.
ವಿವಾಹವೃತ್ತಾಂತವನ್ನರಿತ ವಿರಕ್ತರಾದ ಕರುಣಾಕರ, ದಯಾಕರರು ತಮ್ಮ
ಜನಕನೆಡೆಗೈದಿ ನಮಸ್ಕರಿಸಿ ವಿನಯಪೂರ್ವಕವಾಗಿ ಇಂತು ವಿಜ್ಞಾಪಿಸಿಕೊಂಡರು. ಲೋಕದಲ್ಲಿ ಪರೋಪಕಾರ ಶ್ಲಾಘವಾದ ಗುಣವೆಂದೂ ಅದನ್ನನುವರ್ತಿಸಿ ತಾವು ಆಮರಣಾಂತವಾಗಿ ಪರೋಪಕಾರ ನಿರತರಾಗಿಯೇ ಇದ್ದು ಈ ಕಳೇಬರವನ್ನು ತ್ಯಜಿಸ ಬೇಕೆಂದೂ ಧೃಡಸಂಕಲ್ಪರಾಗಿರುವೆವ. ಪ್ರಕೃತದಲ್ಲಿ ತಾವೇನೋ ನಮಗೆ ವಿವಾಹ ಮಾಡಲುದ್ಯುಕ್ತರಾಗಿರುವು, ದಯವಿಟ್ಟು ಅದನ್ನು ಮನ್ನಿಸಬೇಕು; ಎಂದ ಮಕ್ಕಳ ನುಡಿಗಳನ್ನಾಲೈಸಿ ಸಚ್ಚಿದಾನಂದನು ಅಪ್ಪಾ ಮಕ್ಕಳಾ ! ವಿವಾಹಿತರಾದರೆ ನಿಮಗೆ ಆಗತಕ್ಕೆ ತೊಂದರೆಗಳೇನು ? ಎಂದು ಕೇಳಿದನು.
ಮಕ್ಕಳು- ಅನೇಕವಿವೆ. ಅವುಗಳನ್ನೆಲ್ಲಾ ಸನ್ನಿಧಿಯಲ್ಲಿ ವಿಜ್ಞಾವಿಸಲು ಭೀತ
ರಾಗಿರುವೆವು.
ತಂದೆ--ಚಿಂತೆಯಿಲ್ಲ. ನಿರ್ಭಯರಾಗಿ ಹೇಳಬಹುದು.
ಮಕ್ಕಳು-ಅಸ್ಥಿ, ಮಾಂಸ, ಚರ್ಮ, ಇವೇ ಕೋಟೆಯಾಗಿಯೂ; ರಕ್ತ,
ಕೀವು, ಇವುಗಳೇ ಕಂದಕವಾಗಿಯೂ ಇರುವ ಈ ಅಸಹ್ಯಕರವಾದ ಶರೀರಸೌಖ್ಯ
ಕ್ಕೋಸ್ಕರ ನಾವು ವಿವಾಹ ಮಾಡಿಕೊಳ್ಳಬೇಕೆ ?
ತಂದೆ -ಇದು ಎಲ್ಲರಿಗೂ ತಿಳಿದಿರತಕ್ಕ ವಿಷಯವೆ ಎಲ್ಲರೂ ನಿಮ್ಮಂತೆಯೇ ಅಭಿಪ್ರಾಯಪಡುವರೆ ?
ಮಕ್ಕಳು- ಲೋಕದಲ್ಲಿರುವ ಪಟ್ಟಣಗಳ ಕೋಟೆಗಳಿಗೆಲ್ಲಾ ಸಾಧಾರಣ
ವಾಗಿ ನಾಲ್ಕು ದಿಕ್ಕುಗಳಲ್ಲೂ ನಾಲ್ಕ ಬಾಗಿಲುಗಳಿರುವುವು. ಈ ಶರೀರವೆಂಬವೆಂಬ ಕೋಟೆ ಗಾದರೋ ಒಂಭತ್ತು ದ್ವಾರವಿರುವುದು, ಅಸಹ್ಯಕರವಾದ ಇಂತಹ ದ್ವಾರಗಳನ್ನುಳ್ಳ
ಈ ಶರೀರಸುಖಕ್ಕೋಸ್ಕರ ವಿವಾಹಿತರಾಗಬಹುದೆ ?
೧೭------------------------------------------------------------------------
ತಂದೆ-ಈ ವಯಸ್ಸಿನಲ್ಲಿ ನೀವು ಇಷ್ಟು ಜಿಗುಪ್ಸೆಯನ್ನು ಹೊಂದಬಾರದು. ನನ್ನ ಸಂತೋಷಕ್ಕಾದರೂ ನೀವು ವಿವಾಹವನ್ನು ಮಾಡಿಕೊಳ್ಳಲೇಬೇಕು. ನೀವು ಧನಿ ಕರಲ್ಲದಿದ್ದರೂ ಅಪಾರವಾದ ವಿದ್ಯೆಯೆಂಬ ಧನವನ್ನು ಆರ್ಜಿಸಿರುವಿರಿ.
ಮಕ್ಕಳು-ಜನಕನೇ, ತಾವು ಅಪ್ಪಣೆ ಕೊಡಿಸುವುದು ಯುಕ್ತವೇಸರಿ, ನಾವು ಬ್ರಹ್ಮಚರ್ಯದಿಂದಲೇ ಇದ್ದು, ಪರೋಪಕಾರವನ್ನು ಮಾಡಿ ತನ್ಮೂಲಕ ಲಭಿಸತಕ್ಕ ಪುಣ್ಯದಿಂದ ಸದ್ಧತಿಯನ್ನು ಪಡೆಯಬೇಕೆಂದಿರುವೆವು.
ತಂದೆ-ವಿವಾಹಿತರಾದರೆ ಅದು ಆಗುವುದಿಲ್ಲವೇ?
ಮಕ್ಕಳು-ಬಹಳ ಕಷ್ಟ.
ತಂದೆ - ಅದು ಹೇಗೆ ?
ಮಕ್ಕಳು...ಅರಿಕೆಮಾಡುವೆವು; ಸಾವಧಾನದಿಂದ ಲಾಲಿಸಬೇಕು.
ಕೋಮಲವಾಗಿ ಬೆಳೆದಿರುವ ಪುರುಷನೆಂಬ ವೃಕ್ಷಕ್ಕೆ ಸ್ತ್ರೀಯೆಂಬ ಲತೆಯು
ಸುತ್ತಿಕೊಂಡು ಮಕ್ಕಳೆಂಬ ಪುಷ್ಪಗಳು ಆ ಲತೆಯಲ್ಲಿ ಬಿಡುವವು. ಈ ಮಕ್ಕಳ ಇಂಪಾದ ಮಾತುಗಳೇ ಆ ಪುಷ್ಪಗಳ ವಾಸನೆಯು; ಇದರ ಆಘ್ರಾಣದಿಂದ ವೃಕ್ಷ
ವೆಂಬ ಪುರುಷನ ಪರವಶನಾಗಿ ನೀರಿನಲ್ಲಿ ಸುಖವಾಗಿ ವಾಸಮಾಡುವ ಮೀನು ಮಾಂಸದಾಶೆಗೆ ಸಿಕ್ಕಿ ನರಳುವಾ ಅತ್ತೆ, ಮಾವ, ಭಾವ, ಮೊದಲಾದವರ ದುರ್ಬೋಧನೆಯಿಂದ ಮಾಡಬಾರದ ಕೆಲಸಗಳನ್ನು ಮಾಡಿ ಪಾಪಿಷ್ಟನಾಗಿ ಈ ಲೋಕ ದಲ್ಲಿ ಜೀವಿಸಿರುವುದಕ್ಕಿಂತ ಚಿರಬ್ರಹ್ಮಚಾರಿಯಾಗಿಯೇ ಪರೋಪಕಾರ ನಿರತನಾ
ಗಿದ್ದು ಈ ದೇಹತ್ಯಾಗಮಾಡುವುದು ಉತ್ತಮವಲ್ಲವೆ?
ಇದನ್ನಾಲಿಸಿದ ಸಚ್ಚಿದಾನಂದನು ತನ್ನ ಮಕ್ಕಳ ಅಭಿಪ್ರಾಯವು ಯುಕ್ತವಾ
ಗಿದ್ದಾಗ್ಯೂ ತನ್ನ ವಂಶವು ಅಂಕುರಿಸದೆ ಇಲ್ಲಿಗೇ ನಿಲ್ಲುವುದೆಂಬ ಮನೋವೃಥೆಯನ್ನು ಹೊಂದಿದವನಾಗಿ ಆ ವ್ಯಥೆಯಿಂದ ಸ್ವಲ್ಪಕಾಲದಲ್ಲಿಯೇ ಇಹಲೋಕವಂ ಬಿಟ್ಟನು. ಅನಂತರ ಉಳಿದವರು ಕರುಣಾಕರ, ದಯಾಕರರೀರ್ವರೆ. ವಾಚಕರೆ ! ಮುಂದೆ ರೋಹಿ ಣಿಯ ವಿಚಾರವೇನು ? ಎಂಬುದನ್ನು ವಿವರಿಸುವ!
- -~--
೧೮----------------------------------------------------
ಪಂಚಮವಲ್ಲರಿ.
ರೋಹಿಣಿಯು ಸಕಲವಿದ್ಯಾ ಪಾರಂಗತಳಾಗಿಯ ವಿವೇಕಿಯಾಗಿಯೂ ಇರುವು
ದನ್ನು ಕರುಣಾಂಬೆಯು ನೋಡಿ ಅನುರೂಪ, ಗುಣವಂತನೂ, ಪ್ರಾಪ್ತ ವಯಸ್ಕನೂ, ವಿದ್ಯಾವಂತನೂ ಆದ ವರನಿಗೆ ಕೊಟ್ಟು ವಿವಾದವಂ ನೆರವೇರಿಸಬೇಕೆಂದು ಉದ್ದೇಶಿಸಿ
ಈ ವಿಚಾರವನ್ನು ತನ್ನ ಸಹೋದರನಾದ ಕರುಣಾಕರನಿಗೆ ತಿಳಿಸುವುದು ಉತ್ತಮವೆಂದು ಯೋಚಿಸಿ ಸುವರ್ಣ ಪುರಕ್ಕೆ ಕಾಗದವನ್ನು ಬರೆದಳು ಅದರ ಒಕ್ಕಣೆಯು ಹೀಗೆ ಇದ್ದಿತು.
ಪ್ರಿಯಸಹೋದರನೇ !
ನೀನು ರೋಹಿಣಿಯನ್ನು ಇಲ್ಲಿ ಬಿಟ್ಟ ಬಹು ದಿನಗಳಾದಾಗ್ಯೂ ಅವಳನ್ನು ನೋಡಲು ಒಂದಾವರ್ತಿಯಾದರೂ ಬರಲಿಲ್ಲ. ಕಾಗದವನ್ನು ಸಹ ಬರೆಯಲಿಲ್ಲ. ಬಹುಶಃ ನೀವು ಯಾವುದೋ ಒಂದು ಪರೋಪಕಾರ೮ರ್ಯದಲ್ಲಿ ನಿರತನಾಗಿರಬಹದು. ಚಿಂತೆಯಿಲ್ಲ. ಪ್ರಕೃತ ರೋಣಿಗೆ ವಿವಾಹಕಾಲವುಮೀರುತ್ತಾ ಬಂದಿತು, ಇನ್ನು ಮೇಲೆ ಸಾವಕಾಶಮಾಡುವುದು ಯುಕ್ತವಾಗಿಲ್ಲ. ಯೋಚಿಸಿ ಅನುರೂಪನಾದ ವರನನ್ನು ಗೊತ್ತು ಮಾಡಿ ಬರೆಯಬೇಕಲ್ಲದೆ ಕೂಡಲೆ ಇಲ್ಲಿಗೆ ಬರಬೇಕೆಂದು ಪ್ರಾರ್ಥಿಸುವ,
ಕಲ್ಯಾಣಪ್ರರ. ನಿನ್ನ ಪರಿಯಸಹೋದರಿ ಕರುಣಾಂಬೆ.
ಈ ರೀತಿ ಬರೆದು ಅಂಚೆಗೆಹಾಕಿದಳು. ಯಥಾಕಾಲದಲ್ಲಿ ಅದು ಕರುಣಾಕರನ ಹಸ್ತಗತವಾಯಿತು. ಆದರೆ ಆಗ ಕರುಣಾಕರನು ಬರಲು ಅವಕಾಶವಾಗಲಿಲ್ಲ.
ಹೀಗೆ ಎರಡುದಿನಗಳು ಕಳೆದವು. ಮೂರನೆವಸ ರೋಹಿಣಿಯು ಮನೆಕೆಲಸಗ
ಳನ್ನೆಲ್ಲಾ ನೆರವೇರಿಸಿ ಅನಂತರ ಬೀದಿಯವರೆಗೆ ಬಂದಳು. ಆಗ ಅವಳಿಗೆ ಯಾವದೋ ಒಂದು ಶಬ್ಬವು ಗಟ್ಟಿಯಾಗಿ ಕೇಳಿಸಿತು. ಇದೇ ಇರಬಹುದೆಂದು ಅದನ್ನೇ ಆಲೈಸುತ್ತಲಿ ರುವಾಗ ಶಬ್ಬವು ಇನ್ನೂ ಹೆಚ್ಚಾಗಿ ಕೇಳುತ್ತಾಬಂತು. ಅಲ್ಲಿಯೇ ಕಂಭಬೊಪಾದಿ
ಯಲ್ಲಿ ನಿಂತುಬಿಟ್ಟಳು. ಕರುಣಾಂಬೆಯ ಕೊನೆಯ ಹೀಗೆ ಸ್ತಂಭೀಭೂತಳಾಗಿರು
ವುದನ್ನು ನೋಡಿ ಅವಳನ್ನು ಕುರಿತು ರೋಹಿಣಿ, ಏನು ಮಾಡುತ್ತಲಿರುವೆ? ಎಂದಳು.
ರೋ ---- ಅತ್ತೆಯವರೆ! ಏನೋ ಒಂದು ಶಬ್ಬವು ಕೇಳುತಲಿರುವುದು. ಅದು ಏನಾಗಿರಬಹುದು?
೧೯----------------------------------------------------
ಕ-ಇದು ಗುಡುಗಿರಬಹುದು, ನಡಿ ಒಳಗೆ ಹೋಗೋಣ.
ರೋ- ಅಮ್ಮ ಇದು ಗುಡುಗಿನ ಶಬ್ದವಲ್ಲ. ಫರಂಗಿಯ ಶಬ್ದದಂತೆ ತೋರು
ತ್ತದೆ. ಚೆನ್ನಾಗಿ ಆಲೈಸಿರಿ!
ಕ...ಇದ್ದರೂ ಇರಬಹುದು. ಸುವರ್ಣಪುರದಲ್ಲಿ ಏನೋ ಉತ್ಸವವಿರಬಹುದು. ಅದಕ್ಕಾಗಿ ಸಂತೋಷಸೂಚಕವಾದ ಫಿರಂಗಿಗಳು ಹಾರುತ್ತಿರುವವು. ಅದನ್ನೇ ನುಕೇಳು ಇದು, ನಡಿ ಒಳಕ್ಕೆ ಹೋಗೋಣ.
ರೋ-ಉತ್ಸವವಾದರೆ ಇನ್ನೊಂದು - ಫಿರಂಗವನ್ನೇಕೆ ಹಾರಿಸುವದು ? ಬಹಳ ಹೊತ್ತಿನಿಂದ ಹಾರುತಲೇ ಇರುವುದು.
ಈ ...ಬಹುಶಃ ಈ ದಿನ ಸುವರ್ಣಪುಪುರಾಧೀಶನ ವರ್ಧಂತಿಯಾಗಿರಬಹುದು.
ರೋ --ಅಲ್ಲ. ಅತ್ತೆಮ್ಮ ಇದನ್ನು ಕೇಳಿದಾಗಿನಿಂದ ನನ್ನ ಮನಸ್ಸು
ಏಕೋ ಕಳವಳಪಡುತಲಿರುವುದು. ನನ್ನ ತಂದೆಯು ಇಲ್ಲಿಗೆ ನನ್ನನ್ನು ಕಳುಹಿಸುವಾಗ್ಗೆ ತಾನೇ ಬಂದು ಕರೆದುಕೊಂಡುಹೋಗುವೆನು. ಋಣಾನುಬಂಧವಿದ್ದರೆ ಇನ್ನೊಂದಾ
ವರ್ತಿ ಈ ಲೋಕದಲ್ಲಿ ನೋಡುವೆವು ಇಲ್ಲದಿದ್ದರೆ ಜಗದೀಶನ ಸನ್ನಿಧಿಯಲ್ಲಿ ನೋಡಲು ಯಾವ ಅಡ್ಡಿಯೂ ಇಲ್ಲವೆಂದು ಹೇಳಿದ್ದನು. ಅದನ್ನು ಸ್ಮರಿಸಿಕೊಂಡರೆ ನನ್ನ ಮನೋ ವ್ಯಥೆಯು ಇನ್ನೂ ಹೆಚ್ಚುವುದು. ಅದಕ್ಕನುಸಾರವಾಗಿ ಸುವರ್ಣಪುರದ ಕಡೆ
ಯಿಂದಲೇ ಫಿರಂಗಿಗಳ ಶಬ್ದವು ಹೆಚ್ಚಾಗಿ ಕೇಳುತ್ತ ಬರುವುದು. ಇದಲ್ಲದೆ ತಂದೆಯು ಬಹಳದಿನಗಳಿಂದ ಇಲ್ಲಿಗೆ ಬರಲಿಲ್ಲ. ಯೋಚಿಸಿದರೆ ಆತನಿಗೇನೋ ವಿಪತ್ತು ಸಂಭವಿಸಿರಬಹುದು ಎಂದು ಅತ್ತಳು.
ಕ - ರೋಹಿಣೀ ! ಇದೇನು ನೀನು ಹೀಗೆ ಅಳುವೆ? ಕರುಣಾಕರನಿಗೆ ಪತ್ರ
ಬರೆದಿರುವೆನು, ಬಂದರೂ ಬರಬಹುದು. ಇಲ್ಲವಾದರೆ ಉತ್ತರವಾದರೂ ಬರವುದು.
ನಡಿ. ಒಳಕ್ಕೆ ಹೋಗೋಣ.
ರೋಹಿಣಿಯು, ನಿಂತಿದ್ದ ಸ್ಥಳವನ್ನು ಬಿಟ್ಟು ಚಲಿಸಲಿಲ್ಲ. ಅಷ್ಟರಲ್ಲಿಯೇ
ಒಬ್ಬ ರಾಹುತನು ಒದು ವೇಗದಿಂದ ಕುದುರೆಯನ್ನು ಓಡಿಸಿಕೊಂಡು ಬಂದು ರೋಹಿಣಿ ಯೆದುರಿಗೆ ನಿಂತು ಕರುಣಂಣಿಯರು ಎಲ್ಲಿ ? ಎಂದು ಕೇಳಲು ರೋಹಿಣಿಯು,
ಅತ್ತೆಮ್ಮ ! ಒಬ್ಬ ರಾಹುತನು ತಮ್ಮನ್ನು ನೋಡಬೇಕೆಂದು ಬಂದಿರುವನು ಎಂದು ಹೇಳಿದಳು.
೨೦---------------------------------------------------
ಕರುಣಾಂಬೆಯು ಕೂಡಲೆ ಬಂದಳು. ರಾಹುತನು ಕಾಗದವನ್ನು ಕೊಟ್ಟು
ಹೀಗೆ ಹೇಳಿದನು, ಸುವರ್ಣಪುರ ಆದಂತಿಪುರದವರಿಬ್ಬರಿಗೂ ಬಲು ಘೋರವಾದ ಯುದ್ಧವು ನಡೆಯುತಲಿರುವುದು. ಯುದ್ಧದಲ್ಲಿ ಗಾಯಪಟ್ಟು ಏಟುತಿಂದ ಸೈನಿಕರನ್ನು ಕರುಣಾಕರ, ದಯಾಕರರು ಉಪಚರಿಸುತಲಿರುವರು. ನಾನು ತಲೆತಪ್ಪಿಸಿಕೊಂಡು ಬರುವದೇ ದುಸ್ತರವಾಯಿತು. ಕರುಣಾಕರನು ಈ ಕಾಗದವನ್ನು ತಮಗೆ ಕೊಡು
ವಂತೆ ಆಜ್ಞೆ ಮಾಡಿದ್ದಾನೆ ಎಂದು ಹೇಳಿ ಅದನ್ನು ಆಕೆಯ ಕೈಗೆ ಕೊಟ್ಟನು.
ಕರುಣಾಂಬೆಯು ಕಾಗದವನ್ನು ತೆಗೆದುಕೊಂಡು ನೋಡಿದಳು. ಅದರಲ್ಲಿ ಹೀಗೆ
ಒರೆದಿತ್ತು.
ಪ್ರಿಯಸಹೋದರಿ !
ನಿನ್ನ ಕಾಗದವು ಬಂದು ತಂದಿತು. ವಿಷಯಗಳು ಕ್ಷಿಪ್ರದ ನಡೆಯತಕ್ಕವು
ಗಳಾಗಿದ್ದರೂ, ನಡೆಸಲು ಅವಕಾಶವಿಲ್ಲವಾಗಿದೆ ಯಾವುದಕ್ಕೂ ಕಾಲವೊದಗಬೇಕು. ರೋಹಿಣಿ . ಎಲ್ಲಿ ಇದ್ದಳು ? ಇಲ್ಲಿ ಬೆಳೆದಳು ? ಈಗ ಎಲ್ಲಿರುವಳು? ಯೋಚಿಸಿದರೆ ಹೀಗೆಯೇ ಅವಳು ನಿರಂತರವೂ ಸುಖವಾಗಿರುವಳೆಂಬ ಪೂರ್ಣ ಭರವಸೆಯುಂಟು.
ನಾನೇನೋ ಪರೋಪಕಾರದಲ್ಲಿಯೇ ಈ ನಶ್ವರವಾದ ದೇಹವನ್ನು ತ್ಯಾಗಮಾಡುವೆನೆಂ ಬುದು ಹೊಸ ವಿಷಯವಲ್ಲ. ದೇವರು ಎಲ್ಲರಿಗೂ ಕಲ್ಯಾಣವನ್ನುಂಟುಮಾಡಲಿ.
ಇತಿಪ್ರಿಯಸಹೋದರ
ಸುವರ್ಣಪುರ ಕರುಣಾಕರ.
ಕರುಣಾಕರ.
ಇದನ್ನವಲೋಕಿಸಿ ಕರುಣಾಂಬೆಯು ಭಯಭಾಂತಳಾಗಿ ನಡುಗಲಾರಂಭಿಸಿ
ದಳು. ಅದರಲ್ಲೂ ದಯಾಕರನ ವಿಷಯವೇ ಇಲ್ಲ , ಇಂತು ಸಹೋದರವತ್ಸಲೆಯಾದ ಕರುಣಾಂಬೆಯು ವ್ಯಥೆಪಡುವುದನ್ನು ನೋಡಿ ಬಂದಿದ್ದ ಸವಾರನು, ಸುಮ್ಮನೆ ವ್ಯಥೆಪ ಟ್ಟರೆ ಫಲವೇನು ? ನಿಮ್ಮ ಸಮೀಪ ಬಂಧುಗಳಾರಾದರೂ ಸುವರ್ಣಪುರದಲ್ಲಿರುವರೋ ? ಎಂದು ಕೇಳಿದಳು.
ಕರುಣಾಂಬೆ-- ಇದ್ದರೇನು ?
ಸವಾರ ...ಇಂತಹ ಕಾಲದಲ್ಲಿ ಅವರಿಗೆ ಸಹಾಯಮಾಡದಿರುವುದುಂಟೆ ?
ಕ...ನಾವು ಮಾಡುವ ಸಹಾಯವೇನು ?
ಸವಾರ - ಶತ್ರುಗಳ ಕೈಗೆ ಸಿಕ್ಕದಂತೆ ತಪ್ಪಿಸುವುದು ಅಥವಾ ಸಿಕ್ಕಿ ಏಟು ತಿಂದು ಗಾಯಪಟ್ಟವರನ್ನು ಉಪಚರಿಸುವದು.
೨೧---------------------------------------------------------
ಕ-ಇವು ಸ್ತ್ರೀಯರಾದ ನಮ್ಮಿಂದ ಸಾಧ್ಯವೆ?
ಸವಾರ-ಪರೋಪಕಾರ ಮಾಡುವುದಕ್ಕೆ ಸ್ತ್ರೀಯರಾದರೇನು ? ಪುರುಷ
ರಾದರೇನು ?
ಕ-ಇರಲಿ, ವಿಪತ್ಕಾಲದಲ್ಲಿ ನೀನು ನಿನ್ನ ಬಂಧುಗಳನ್ನೂ, ಮಿತ್ರರನ್ನೂ
ಇಷ್ಟರನ್ನೂ, ಆಪ್ತರನ್ನೂ ಬಿಟ್ಟು ಇಲ್ಲಿಗೆ ಏತಕ್ಕೆ ಬಂದೆ ?
ಸವಾರ- ಪರೋಪಕಾರಪರಾಯಣನಾದ ಕರುಣಾಕರನ ಆಜ್ಞೆಯಂತೆ ನಾನು
ಬಂದಿರುವೆನೇ ವಿನಹ ಮತ್ತೆ ಬೇರೆಯಲ್ಲ.
ಕ--ಹಾಗಿದ್ದರೆ ಕರುಣಾಕರ, ದಯಾಕರರು ಅಲ್ಲಿ ಏನುಮಾಡುತಲಿರುವರು?
ಸವಾರ-ಸುವರ್ಣಪುರದಮಗೂ, ಅವಂತಿವುರದಮಗೂ ನಡೆಯುತಲಿರುವ
ಯುದ್ಧದಲ್ಲಿ ಘಾಯಪಟ್ಟ ಸೈನಿಕರನ್ನು ವೈದ್ಯಶಾಲೆಗೆ ಸಾಗಿಸಿ ಅಲ್ಲಿ ಉಪಚರಿಸು ವುದೂ, ಮರಣೋನ್ಮುಖರಾಗಿರುವವರು ತಮ್ಮ ಪ್ರತ್ರಪೌತ್ರ ಕಳತ್ರಾದಿಗಳಿಗೆ ಅಂತ್ಯಕಾ
ಲದಲ್ಲಿ ಹೇಳುವ ಮಾತುಗಳನ್ನು ಬರೆದುಕೊಳ್ಳುವುದೂ ಇದೇ ಮೊದಲಾದ ಕಾರ್ಯ ಗಳಲ್ಲಿ ಸ್ವಲ್ಪವೂ ಬೇಸರಪಡದಿರುವರು.
ಕ... ಇಷ್ಟು ದಿನಗಳ ಇಲ್ಲದ ಯುದ್ಧಕ್ಕೆ ಈಗ ಕಾರಣವೇನು ?
ಸವಾರ ಸುವರ್ಣ ಪುರದಮಗೂ, ಅವಂತಿವುರದವರಿಗೂ ಬಹುದಿನಗಳಿಂದ
ದ್ವೇಷವಿದ್ದಿತು. ಇದಕ್ಕಾಗಿ ಅವಂತಿವುರದವರು ಸುವರ್ಣಪುರದವರನ್ನು ಜಯಿಸಬೇ
ಕೆಂದು ಅನೇಕಾವರ್ತಿ ಪ್ರಯತ್ನ ಪಟ್ಟಾಗ್ಗೂ ಉಪಯೋಗವಾಗಲಿಲ್ಲ.
ಆ ---ಹಾಗಾದರೆ ಈಗ ಜಯಿಸಿದವರು ಅವಂತಿಪುರದವರೇ ?
ಸದಾರ-ಸಂದೇಹವೇನು ? ಜಯಲಕ್ಷ್ಮಿಯ ಐಶ್ವರ್ಯಲಕ್ಷ್ಮಿಯೂ ಬಹಳ
ಚಪಲೆಯರು, ಈ ಹೊತ್ತು ಇದ್ದಹಾಗೆ ನಾಳೆ ಇರುವುದಿಲ್ಲ. ನಾಳೆ ಇದ್ದ ಕಡೆ ನಾಡಿದ್ದು ಇರುವುದಿಲ್ಲ. ಆದರೆ ನಿರ್ಭಾಗ್ಯಲಕ್ಷ್ಮಿಯು ಅದು ಒಂದಾವರ್ತಿ ಬಂದರೆ ತೊಲಗಲು ಬಹು ಕಾಲಬೇಕು. ಮತ್ತು ತೊಲಗಿಸಲು ಬಹು ಪ್ರಯತ್ನ ಬೇಕು. ಅದರಂತೆಯೇ ಅವಂತಿ ಪುರದವರೂ ಬಹು ಪ್ರಯತ್ನ ಮಾಡಿ ಕೊನೆಗೆ ಜಯಲಕ್ಷ್ಮಿಯನ್ನು ಹೊಂದಿದರು.
ಕ-- ಇನ್ನು ಮುಂದೆ ಸುವರ್ಣಪುರದರಸನಿಗೂ, ಪ್ರಜೆಗಳಿಗೂ ಏನುಗತಿ ?
ಸವಾರ - ಯುದ್ದದಲ್ಲಿ ಪ್ರತಿಭಟಿಸಿ ನಿಂತವರಲ್ಲನೇಕರು ಯಮಪುರವನ್ನೂ
ಕೆಲವರು ಕಾರಾಗಾರವನ್ನೂ ಸೇರಿದರು.
೨೨---------------------------------------------------------
ಕ-ಅಯ್ಯೋ ! ಸುವರ್ಣವುರದವರ ಗತಿಯು ಈ ಸ್ಥಿತಿಗೆ ಬಂತೆ ?
ಸವಾರ-ಯಾವ ಸ್ಥಿತಿಗೂ ಬರಲಿಲ್ಲ. ಪ್ರಜೆಗಳಿಗೆ ಯಾವ ವಿಧದಲ್ಲೂ ತೊಂದರೆಯನ್ನುಂಟುಮಾಡಕೂಡದೆಂದು ಅವಂತೀಶನು ಕಟ್ಟಪ್ಪಣೆ ಮಾಡಿರುವನು.
ಕ -ಪಾಗಾದರೆ ಅಷ್ಟೊಂದುಮಂದಿ ಯಮಾಲಯವನ್ನೂ, ಕಾರಾಗಾರ
ವನ್ನೂ ಸೇರಿದುದೇಕೆ ?
ಸವಾರ-ಜನ್ಮಪ್ರಭೃತಿ ಆ ದೊರೆಯ ಉಪ್ಪನ್ನೇ ತಿಂದು ಕಷ್ಟ ಕಾಲದಲ್ಲಿ ಸಹಾಯಮಾಡದೆ ಇರಲು ಸೈನಿಕರ ಮನಸ್ಸೊಪ್ಪದೆ ರಣಕ್ಕೆ ನಿಂತರು. ಪ್ರಜೆಗಳಾ
ದರೋ ದೇಶವಾತ್ಸಲ್ಯದಿಂದಲೂ, ತಮ್ಮನ್ನು ಮಕ್ಕಳಿಗಿಂತಲೂ ಅತಿಶಯವಾಗಿ ಕಾಪಾ ಡಿದ ದೊರೆಗೆ ಸಹಾಯ ಮಾಡದೆ ಇರುತ್ತದೆಂಬ ಉದ್ದೇಶದಿಂದ ಅವಂತೀಶನಿಗೆ ಪ್ರತಿ ಭಟಿಸಿದರು.
ಕ-ಇಂತಹುದು ಯುದ್ದಕ್ಕೆ ತಕ್ಕೇತಕ್ಕೆ ನಿಂತನು ?
ಸವಾರ --- ತನ್ನ ಪೂರ್ವಿಕರ ಹೆಸರು ಶಾಶ್ವತವಾಗಿ ನಿಂತು ಅದರ ಕೋರಿ
ಕೆಯು ನೆರವೇರಲೆಂದಾಗಿ.
ಕ - ಹಾಗಾದರೆ ನಾವು ಈಗ ಏನುಮಾಡಬೇಕು ?
ಸವಾರ-ತಮ್ಮಿಷ್ಟದಂತೆ ಆಚರಿಸಬಹುದು ಎಂದು ಹೇಳಿ ಸವಾರನು ಉತ್ತರ
ವನ್ನು ನಿರೀಕ್ಷಿಸಿ ಕುದುರೆಯನ್ನೇರಿಕೊಂದು ಸುವರ್ಣ ನರದ ಕಡೆಗೆ ಹೊರಟು
ಹೋದನು.
------
ಷಷ್ಟ ಲಹರಿ.
ಸೂರ್ಯನು ಅಸ್ತಾಚಲಪ್ರಣಯಿಯಾಗಿದ್ದನು. ಪಕ್ಷಿಗಳು ಗೂಡುಗಳನ್ನು
ಸೇರುತಲಿದ್ದವು. ಮೆಲ್ಲನೆ ನಿಶಿಯು ತನ್ನ ರಾಜ್ಯಭಾರವನ್ನು ಆರಂಭಿಸಿದಳು. ಒಂದೆ
ರಡು ನಕ್ಷತ್ರಗಳು ಅಲ್ಲಲ್ಲಿ ಮಿಣುಗುತ್ತಿದ್ದುವು. ಹಿಮಕರನು ಲೋಕಕ್ಕೆ ಶಾಂತಿ
ಸುಖವನ್ನುಂಟುಮಾಡಲು ಪೂರ್ವದಿಗ್ಭಾಗದಲ್ಲಿ ಉದಯಿಸಿದನು. ಆಹಾ ! ಇಂತಹ ಆಹ್ಲಾದಕರ ವಾದ ನಿಶಿಯಲ್ಲಿ ಲೋಕವೆಲ್ಲವೂ ನಿದ್ರೆಯಲ್ಲಿ ಮಗ್ನನಾಗಿರುವುದು.
೨೩-----------------------------------------------------
ಆದರೆ ರೋಹಿಣಿಯಮಾತ್ರ ರೋದಿಸುತ್ತಲೇ ಇರುವಳು. ಕರುಣಾಂಬೆಯು ಇದನ್ನು ನೋಡಿ ರೋಹಿಣಿ! ಏತಕ್ಕೆ ರೋದಿಸುವೆ? ಈಗ ಸುವರ್ಣಪುರಕ್ಕೆ ಪ್ರಯಾಣಮಾಡುವ ಸಮಯವು ಸರಿಯಾಗಿಲ್ಲ. ಬೆಳಗಾಗುತ್ತಲೇ ಸುವರ್ಣ ವುರಕ್ಕೆ ಹೋಗೋಣ ಎಂದು ಸಮಾಧಾನ ಮಾಡಿದಳು. ವಾಚಕರೇ ! ರೋಹಿಣಿಯು ಏತಕ್ಕೆ ರೋದಿಸಿದಳು
ಬಲ್ಲಿರಾ ? ಲೋಕದಲ್ಲಿ ಹೆತ್ತ ತಂದೆ, ಅನ್ನ ಹಾಕಿದವನೂ, ವಿದ್ಯೆ ಹೇಳಿದವನೂ, ಆಪತ್ಕಾಲದಲ್ಲಿ ಸಹಾಯಮಾಡಿದವನೂ, ಮಂತ್ರೋಪದೇಶ ಮಾಡಿದವನೂ ಇವರೈ ವರೂ ತಂದೆಯ ಸಮಾನರು. ಇದನ್ನು ರೋಹಿಣಿ ಅರಿತವಳು. ಅಲ್ಲದೆ ತನ್ನ ಸಾಕು ತಂದೆಯಾದ ಕರುಣಾಕರನಲ್ಲಿ ಬಹು ವಿಖ್ವಾಸ ಉಳ್ಳವಳು. ಇಂತಹ ತಂದೆಯನ್ನು ಈ ಕಷ್ಟ ಕಾಲದಲ್ಲಿ ನೋಡದೆ ಹೇಗಿರುವಳು ?
ಕರುಣಾಂಬೆಯ ಸಮಾಧಾನ ವಂಚನೆಗಳು ಎಳ್ಳಷ್ಟಾದರೂ ಪ್ರಯೋಜನವಾಗ
ಲಿಲ್ಲ. ಇವರ ದುಃಖವನ್ನು ನಿವಾರಣೆ ಮಾಡುವುದ ಕ್ಕಾಗಿ ಲೋಕರಂಜಕನಾದ
ಭಾನುವೂ ಪ್ರಕಾಶಿಸಿದನು. ಕೂಡಲೆ ರೋಹಿಣಿಯು ಕರುಣಾಂಬೆಯೊಡನೆ ಸುವರ್ಣ
ಪುರಕ್ಕೆ ಹೊರಟರು. ಪಟ್ಟಣಪ್ರವೇಶಸಮಯದಲ್ಲಿ ಒಬ್ಬ ಮನುಷ್ಕನು ಬಂದು
ಇವ ರುಗಳನ್ನು ತಡೆದು "ನೀವು ಯಾರು ? ಎಲ್ಲಿಗೆ ಹೋಗುತ್ತೀರಿ '' ? ಎಂದು ಕೇಳಿ ದನು. ಅದಕ್ಕೆ ರೋಣಿಯ “ ನಾವು ಎಲ್ಲಿಗೆ ಹೋದರೆ ನಿನಗೇನು ? ದಾರಿಯನ್ನು
ಬಿಟ್ಟು ತೊಲಗು, ” ಅಂದಳು. ಆ ಮನುಷ್ಯನು ಈಕೆಯ ಧೈರ್ಯವನ್ನು ನೋಡಿ
ಆಶ್ಚರ್ಯಪಟ್ಟ ಕೂಡಲೆ ಆಗ್ರಹವುಳ್ಳವನಾಗಿ ಒಂದು ಕೈಯಿಂದ ಕಡಿವಾಣವನ್ನು ಹಿಡಿದುಕೊಂಡು ಇನ್ನೊಂದು ಕೈಯಿಂದ ಆಕೆಯನ್ನು ಹೊಡೆಯಬೇಕೆಂದು ಯತ್ನಿ
ಸಿದನು. ಅಷ್ಟರಲ್ಲೇ ಆಕೆಯ ಅಬಲೆಯೆಂದು ಗೊತ್ತಾಯಿತು. ಹೊಡೆಯಬೇಕೆಂದು
ಎತ್ತಿದ ಕೈಯನ್ನು ಹಾಗೆಯೇ ಕೆಳಕ್ಕೆ ಇಳಿಸಿ ಮೃದುವಚನಗಳಿಂದ " ನೀನು
ಯಾರಮ್ಮ ? ಈಕೆಯು ಯಾರು ? ಎಲ್ಲಿಗೆ ಹೋಗುತ್ತೀರಿ" ? ಎಂದು ಕೇಳಿದನು.
ಅದಕ್ಕೆ ಆಕೆಯು " ಅದರ ಯೋಚನೆ ನಿನಗೇತಕ್ಕೆ ? ನನಗೆ ಬಹಳ ಕೆಲಸವಿದೆ. ನನಗೆ
ಅಡ್ಡಿ ಮಾಡಬೇಡ. ದಯವಿಟ್ಟು ನನ್ನನ್ನು ಒಳಕ್ಕೆ ಬಿಡು" ಎಂಬದಾಗಿ ಹೇಳಿದಳು. ಆ ಮನುಷ್ಯನು "ಈ ರಾಜಧಾನಿಯನ್ನು ಅವಂತಿ ದೇಶದವರು ಆಕ್ರಮಿಸಿಕೊಂಡಿದಾರೆ
ಎಂಬ ವಿಷಯವು ನಿಮಗೆ ತಿಳಿದಿರಲಾರದು. ನೀವು ಈಕೆಯ ಸಹಿತ ಈ ರಾಜಧಾನಿ
ಯನ್ನು ಪ್ರವೇಶಿಸಿದಕೂಡಲೆ ನಿಮಗೆ ಅನೇಕ ತೊಂದರೆಗಳು ಸಂಭವಿಸುವುವು.
ಒಂದುವೇಳೆ ನಿಮ್ಮಗಳ ಪ್ರಾಣಕ್ಕೂ ಕೂಡ ಹಾನಿ ಬರಬಹುದು. ನೀವು ಈ ರಾಜ
ಧಾನಿಗೆ ಪ್ರವೇಶಮಾಡುವುದು ಖಂಡಿತವಾಗಿಯೂ ಉಚಿತವಲ್ಲ" ಎಂದು ಹೇಳಿದನು
೨೪-------------------------------------
ರೋಹಿಣಿಯು ... ಅಯ್ಯೋ ! ಈ ವಿಷಯವು ನಮಗೆ ಮೊದಲೇ ತಿಳಿದಿತ್ತು.
ಆದರೂ ನೀನು ಈಗ ಪುನಃ ಆ ವಿಷಯವನ್ನೆ ವಿಶದವಾಗಿ ತಿಳಿಸಿದುದಕ್ಕೆ ನಾನು
ಬಹಳ ಕೃತಜ್ಞಳಾಗಿದ್ದೇನೆ. ಆದರೆ ಈ ರಾಜಧಾನಿಯಲ್ಲಿ ಅತ್ಯಾತುರವಾದ ಒಂದು ಕಾರ್ಯವು ಇರುವುದುಂದ ಎಷ್ಟು ಕಷ್ಟಗಳು ಪ್ರಾಪ್ತವಾದರೂ ಅನುಭವಿಸಿಕೊಂಡು ಪ್ರವೇಶಿಸಬೇಕು. ನನಗೆ ಮರಣಭಯವಿಲ್ಲ. ಕಾರಾಗೃತಭಯವಿಲ್ಲ. ಇಂತಹ ಸಮ ಯದಲ್ಲಿ ನೀನು ಅಡ್ಡಿ ಮಾಡಬೇಡ '' ಎ೦ದು ಬಾರಿಬಾರಿಗೂ ಪ್ರಾರ್ಥಿಸಿದಳು.
ಆ ಮನುಷ್ಯನು ನಿನಗೆ ಕಾರಾಗೃಹ ಪ್ರಾಪ್ತಿಯಾದರೆ ಏನುಮಾಡುದೆ ?
ರೋ -ಅನುಭವಿಸುವೆನು.
ಮನುಷ್ಯ....ಅಂತಹ ಕಷ್ಟವೇನು ನಿನಗೆ ಬಂದಿರುವುದು ?
ರೋ ...ನನ್ನ ಸಾಕು ತಂದೆಯಾದ ಕರುಣಾರರು ಈ ಯುದ್ಧದಲ್ಲಿ ಏಟು
ತಿಂದು ಗಾಯಪಟ್ಟ ಸೈನಿಕರನ್ನು ಉಪಚರಿಸುವುದರಲ್ಲಿ ನಿರತನಾಗಿರುವನು. ಆತನನ್ನು ನಾನು ನೋಡಿಯೇ ತೀರಬೇಕು.
ಇದನ್ನು ನೋಡಿ ಆ ಮನುಷ್ಯನು ವಸ್ಮಿತನಾಗಿ " ನಾನೇನೋ ಒಳಗೆ ಬಿಡು
ವೆನು. ದೇವರು ಮಾಡಿದಂತೆ ಆಗಲಿ; ನಿನ್ನನ್ನು ದೇವರು ರಕ್ಷಿಸಲಿ" ಎಂದು ಹೇಳಿ
ಸ್ವಲ್ಪ ದೂರ ನಿಂತನು.
ರೋಹಿಣಿ, ಕರುಣಾಂಬೆಯರು ಪ್ರವೇಶ ಮಾಡಿ ಉದ್ಯಾನವನವನ್ನು ಸೇರಿದರು.
ಆಹಾ! ಕಾಲವು ಒಂದೇ ರೀತಿಯಲ್ಲರುವುದಿಲ್ಲ. ಚಕ್ರದೂಪಾದಿಯಲ್ಲಿ ತಿರುಗುತ್ತಲೇ ಇರುವುದು. ಈಗ ಸ್ವಲ್ಪ ದಿನಗಳಿಗೆ ಹಿಂದೆ ಪ್ರೇಕ್ಷಕರಿಗೆ ದು:ಖನಿವಾರಣೆಯನ್ನು
ಮಾಡಿ, ಸಂತೋಷವನ್ನು ಉಂಟುಮಾಡುತಲಿದದ ಸಸಿಗಳೂ, ಬಳ್ಳಿಗಳೂ, ವೃಕ್ಷಗಳೂ, ಕೃತಕಾಚಲಗಳೂ, ವಿಶ್ರಾಂತಿಗಾಗಿ ಏರ್ಪಸಿದ್ಧ ಆಸನಗಳೂ ಸಹ ಶೂನ್ಯವಾಗಿರು
ವುವು. ಹಾವಸೆಗ೦ಬ ಕೂದಲುಗಳಿಂದಲೂ, ತಾವರೆ ಎಂಬ ಮುಖದಿಂದಲೂ, ಮೀನುಗಳೆಂಬ ಕಣ್ಣುಗಳಿ೦ದಲೂ, ದಡದಲ್ಲಿರುವ ಮಾವಿನ ಮರದ ಚಿಗುರುಗಳೆಂಬ ಚಂದ್ರಗಾವಿಯ ವಸ್ತ್ರದಿಂದಲೂ, ಸಂಪಿಗೆ ಹೂವೆಂಬ ಮೂಗಿನಿಂದಲೂ, ಸೆಳೆ ಎಂಬ ಸೊಂಟದಿಂದಲೂ, ಕುಮುದಪುಷ್ಪಗಳೆಂಬ ಮುಗುಳುನಗೆಯಿಂದಲೂ, ಕುಂದವೆಂಬ ಹಲ್ಲುಗಳಿಂದಲೂ, ನಿರ್ಮಲೋದಕವೆಂಬ ಲಾವಣ್ಯದಿಂದಲೂ ಕೂಡಿ ರಮಣೀಯವಾ ಗಿದ್ದ ಸರಸ್ಸುಗಳು ಕಾಂತಿಹೀನವಾಗಿರುವುವು. ಅವರು ಇವೆಲ್ಲವನ್ನೂ ಅವಲೋಕಿ
ಸುತ್ತ ಮುಂದಕ್ಕೆ ತೆರಳಿದರು. ಅಷ್ಟರಲ್ಲೇ ಮತ್ತೊಬ್ಬ ಸೈನ್ಯಾಧಿಕಾರಿಯು ಬಂದು ಇಬ್ಬರನ್ನೂ ತಡೆದು “ ನೀವು ಯಾರು ? ಎಲ್ಲಿಗೆ ಹೋಗುವಿರಿ ? '' ಎಂದು ಪ್ರಶ್ನೆ
೨೫---------------------------------------
ಮಾಡಲು ಅಷ್ಟು ಹೊತ್ತಿಗೆ ಎಲ್ಲಿಂದಲೋ ಒಂದು ಪಿರಂಗಿಯ ಗುಂಡು ರೋಹಿಣಿಯ ಕೈಯನ್ನು ಸವರಿಕೊಂಡು ಹೋಯಿತು, ಮತ್ತು ಅನೇಕ ಜನ ಸಿಪಾಯಿಗಳು ಬಂದು ಇವ ರನ್ನು ಸುತ್ತಿಕ್ಕೊಂಡರು. ಅಷ್ಟರಲ್ಲಿ ಈ ಸಮಾಚಾರವು ಸೈನ್ಯಾಧಿಪತಿಗೂ ತಿಳಿಯಿತು. ಆ ಸಮಯದಲ್ಲಿ ಆತನು ಅಲ್ಲಿಗೆ ಬಂದು ಬಾರಮ್ಮ ಹುಡುಗಿ ! ನನ್ನೊಡನೆ ! ಎಂದು ಕರೆದನು ಆ ಸಮಯದಲ್ಲಿ ರೋಹಿಣಿಯು " ತನ್ನ ಸುತ್ತಮುತ್ತಲೂ ಸುತ್ತಿಕೊಂಡಿರುವ ಜನರು ತನ್ನನ್ನು ಹಿಂಸೆಮಾಡುತಲಿದಾರೆ ಅದನ್ನು ತಪ್ಪಿಸಿಕೊಡಬೇಕು. ನಾನು
ಯಾರಿಗೂ ತೊಂದರೆಯನ್ನು ಕೊಡುವುದಕ್ಕೆ ಬಂದವಳಲ್ಲ. ನಾನು ಸಹಾಯವಿಲ್ಲದ ಅಬಲೆ ಕಾರ್ಯಾಂತರವಾಗಿ ಈ ಯುದ್ಧರಂಗಕ್ಕೆ ಬಂದಿರುವೆನು. ಆದ್ದರಿಂದ ನನ್ನ ಗೋಜಿಗೆ ಬರದಂತೆ ಈ ಸಿಪಾಯಿಗಳಿಗೆ ಕಟ್ಟಪ್ಪಣೆಯನ್ನು ಮಾಡಬೇಕೆಂದು" ಪ್ರಾರ್ಥಿ ಸಿದಳು. ಅದಕ್ಕೆ ಆತನು ಈ ಪಟ್ಟಣವನ್ನು ನೀವುಗಳು ಪ್ರವೇಶಮಾಡುವುದಕ್ಕೆ ಮುಂಚೆಯೆ, “ ನೀವು ಪ್ರವೇಶಮಾಡಬೇಡಿ ಹಾಗೆ ಪ್ರವೇಶ ಮಾಡಿದರೆ ತೊಂದರೆ ಯುಂಟಾಗುವುದು" ಎಂದು ಯಾರು ಎಚ್ಚರಿಸಲಿಲ್ಲವೆ? ಅದನ್ನು ನೀವು ಲಕ್ಷಿಸದೆ ಹೇಗೆ ಪುರಪ್ರವೇಶಮಾಡಿದಿರಿ? ಈಗ ಸಿಪಾಯಿಗಳು ಹಿಂಸಿಸುವರು. ಅದನ್ನು ತಪ್ಪಿಸಬೇಕೆಂದು ಹೇಳುವಿರಿ ? ಬಂದದ್ದನ್ನೆಲ್ಲಾ ಅನುಭವಿಸಿಯೇ ತೀರಬೇಕು. ಎಂದು ಆಕೆಗೆ ತಿಳಿಸಿ ನಿಂತಿರುವ ಸಿಪಾಯಿಗಳನ್ನು ಕರೆದು ನೀವು ಅವರ ಗೋಜಿಗೆ ಹೋಗಬೇಡಿ ನಿಮ್ಮ ಕೆಲಸಗಳಲ್ಲಿ ನಿರತರಾಗಿ ಎಂದಪ್ಪಣೆ ಮಾಡಿದನು.
ನಂತರ ರೋಹಿಣಿಯ ಕಡೆಗೆ ತಿರುಗಿ ನೀನು ಯಾರು ? ಈಕೆಯು ಯಾರು ?
ನಿನ್ನ ಹೆಸರೇನು ? ಈಕೆಯ ಹೆಸರೇನು ? ಈಕೆಗೆ ನೀನು ಏನುಆಗಬೇಕು ? ನೀವು ಇಲ್ಲಿಗೆ ಬರಲು ಕಾರಣವೇನು ? ಎಂಬೀ ಅಂಶಗಳನ್ನು ನಿರ್ವಂಚನೆಯಾಗಿ ತಿಳಿಸಬೇಕು ಎಂದು
ದಕ್ಕೆ ರೋಹಿಣಿಯು ಆ ಸೈನ್ಯಾಧಿಪತಿಯನ್ನು ಕುರಿತು ನನ್ನ ಹೆಸರು ರೋಹಿಣಿ ಈಕೆಯ ಹೆಸರು ಕರುಣಾಂಬೆ ಈಕೆಯು ಪೂರ್ವದಲ್ಲಿ ಈ ವುರಾಧ್ಯಕ್ಷನಾಗಿದ್ದವನ
ಪತ್ನಿಯು ನಿನ್ನೆಯದಿವಸ ನನ್ನ ಸಾಕುತಂದೆಯಾದ ಕರುಣಾಕರನು ಈ ಯುದ್ಧದ ಸಂಗತಿಯನ್ನು ಸವಾರನ ಮೂಲಕ ನಮಗೆ ತಿಳಿಸಿದನು. ಆತನನ್ನು ಇಂತಹ ಕಷ್ಟ ಕಾಲದಲ್ಲಿ ಖಂಡಿತವಾಗಿಯೂ ನೋಡಲೇಬೇಕೆಂಬ ಕುತೂಹಲದಿಂದ ಈ ತೊಂದರೆಗಳ ನ್ನೆಲ್ಲಾ ಅನುಭವಿಸಿಕೊಂಡು ಒಂದೆವು. ಆತನನ್ನು ನೋಡಲು ಸಾವಕಾಶವಾಗುವುದು. ಜಾಗ್ರತೆಯಾಗಿ ಅಪ್ಪಣೆ ಕೊಡಿ ಎಂದು ಹೊರಡಲುದ್ಯುಕ್ತಳಾದಳು.
ಸೇನಾಪತಿಯು ಈಕೆಯ ಧೈರ್ಯವನ್ನೂ, ಪಿತೃವಾತ್ಸಲ್ಯವನ್ನೂ, ನೋಡಿ ಆನಂದಭರಿತನಾದಾಗೂ ಅದನ್ನು ತೋರ್ಪಡಿಸದೆ ಕರುಣಾಕರನು ನಿನಗೆ ಹೇಗೆ ಸಾಕು
೨೬------------------------------------------------
ತಂದೆಯು ? ಆತನಿಗಾಗಿ ನೀನು ಹೋಗಿ ಕಾರಾಗಾರವನ್ನು ಸೇರುವುದು ಯುಕ್ತವಲ್ಲ ಎಂದು ಸಾರಿ ಹೇಳುತ್ತಿದ್ದರೂ ರೋಹಿಣಿಯ ಕೂಡ ಸೇನಾಪತಿಯೇ ! ಲೋಕದಲ್ಲಿ ಹೆತ್ತ ತಂದೆ, ವಿದ್ಯೆ ಹೇಳಿದವನು, ಆಪತ್ಕಾಲದಲ್ಲಿ ಸಹಾಯಮಾಡಿದವನು, ಒಪ್ಪತ್ತು ಊಟಕ್ಕಿಕ್ಕಿದವನು, ಹೆಣ್ಣು ಕೊಟ್ಟು ಮನೆಯನ್ನು ಉದ್ಧಾರಮಾಡಿದವನು ಇವರೈ ವರೂ ಪಿತೃಗಳು, ಮರಣೋನ್ಮುಖಳಾಗಿ ಹಿಮದಲ್ಲಿ ಬಿದ್ದಿದ್ದ ನನ್ನನ್ನು ಕರೆತಂದು ಸಾಕಿ ಸಲಹಿ ಕಷ್ಟಪಟ್ಟ ಕರುಣಾಕರನು ಇಂತಹ ಯುದ್ದದಲ್ಲಿ ಏನಾದನೆಂಬುದನ್ನು ಸಹ ನೋಡದೆ ಇರಲು ನಾನೇನು ಅಂತಹ ಕೃತಘ್ನವಳಲ್ಲ. ಇದು ನಿನ್ನಂಥ ಪ್ರಾಜ್ಞನಾದ ಮನುಷ್ಯನು ತಿಳಿಯದ ವಿಷಯವಲ್ಲ ಎಂದು ಹೇಳಿ ಪ್ರತ್ಯುತ್ತರವನ್ನು ನಿರೀಕ್ಷಿಸ
ದೆಯೇ ರೋಹಿಣಿಯು ಕರುಣಾಂಬೆಯ ಸಹಿತವಾಗಿ ಪುರವನ್ನು ಪ್ರವೇಶಿಸಿದಳು.
ರೋಹಿಣಿಯು ಲಕ್ಷ್ಯಮಾಡದೆ ಪ್ರವೇಶಿಸಿದ್ದನ್ನು ಸೇನಾಧಿಕಾರಿಯು ಚಕ್ರವರ್ತಿ
ಯವರಿಗೆ ಅರಿಕೆಮಾಡಿದನು. ಚಕ್ರವರ್ತಿಯು ಕೂಡ ಈಕೆಯ ಧೈರ್ಯ, ಸ್ಥೈರ್ಯ, ಪಿತೃವಾತ್ಸಲ್ಯ ಇವುಗಳನ್ನು ಕೇಳಿ ಆಶ್ಚರ್ಯಭರಿತನಾಗಿ ಆಕೆಯನ್ನು ನೋಡಲು ಕುತೂ ಹಲಪಟ್ಟು ಸೈನ್ಯಾಧಿಕಾರಿಯನ್ನು ಕುರಿತು ಆಕೆಯೊಬ್ಬಳೇ ಪ್ರವೇಶಿಸಿರುವಳೇ ? ಅಥವಾ ಮತ್ತಾರಾದರೂ ಜೊತೆಯಲ್ಲಿ ಬಂದಿರುವರೆ ? ಎಂದು ಪ್ರಶ್ನಿಸಲು ಸೇನಾಧಿಕಾರಿಯು ತಾನು ಆಕೆಯನ್ನು ಕಂಡುದು ಮೊದಲ್ಗೊಂಡು ಸನ್ನಿಧಿಗೆ ಬರುವವರಿಗೆ ನಡೆದ ಸಮಾ ಚಾರವನ್ನು ಅರಿಕೆ ಮಾಡಿದನು. ಇದನ್ನೆಲ್ಲಾ ಸಾವಧಾನದಿಂದ ಕೇಳಿದ ಚಕ್ರವ
ರ್ತಿಯು ಆಕೆಗೇನೂ ತೊಂದರೆ ಕೊಡದೆ ತನ್ನ ಬಳಿಗೆ ಕರತರಬೇಕೆಂದು ಸೇನಾಧಿಕಾರಿಗೆ ಆಜ್ಞಾಪಿಸಿದನು.
ಇತ್ತ ರೋಹಿಣಿಯು ಕರುಣಾಂಬೆಯೊಡನೆ ಯುದ್ಧರಂಗದಲ್ಲಿ ತನ್ನ ಸಾಕುತಂದೆ ಯಾದ ಕರುಣಾಕರನನ್ನು ಹುಡುಕುತ್ತ ಅನೇಕ ಶವಗಳನ್ನು ತುಳಿಯುತ್ತಲೂ ದಾಟು
ತ್ತಲೂ, ಮರಣಸಂಕಟದಿಂದ ನರಳುತ್ತಿರುವ ಅನೇಕ ಯೋಧರನ್ನು ನೋಡಿ ಕನಿಕರಪ ಡುತ್ತಲೂ, ಬಹುದೂರ ಅಲೆದಾಗ ಕರುಣಾಕರ, ದಯಾಕರರ ಸುಳಿವೇ ತಿಳಿಯ
ಲಿಲ್ಲ. ಅಷ್ಟರಲ್ಲಿ ಸೂರ್ಯದೇವನು ಅಸ್ತಂಗತವಾದನು. ರಣಾಂಗದಲ್ಲಿ ನಾಯಿ ನರಿಗಳು, ಗೂಬೆಗಳು, ಭೂತಪ್ರೇತ ಪಿಶಾಚಾದಿಗಳು ತಮ್ಮ ಬಳಗಗಳೊಳಗೊಂಡು ಶುಭಶೋಭನಾದಿಗಳನ್ನು ಮಾಡುತ್ತ ಅನೇಕವಿಧವಾದ ಭೋಜನಗಳಿಂದ ಉಪಚರಿಸುತ್ತ ತೃಪ್ತಿ ಹೊಂದಿ ಬೊಬ್ಬಿಡುತ್ತಲಿದ್ದುವು. ಅಂಧಕಾರ-ಅದರಲ್ಲೂ ಈ ಘೋರಭೀಕರವಾದ ಶಬ್ದ ಇವುಗಳ ನಡುವೆ ಸಂಚರಿಸುತ್ತಿರುವ ರೋಹಿಣಿಯ ಮನಸ್ಸಿನ ರೀತಿಯನ್ನು ಪಾಠಕಮಹಾಶಯರೇ ಊಹಿಸಿಕೊಳ್ಳಲಿ.
೨೭-------------------------------------------------
ಚಕ್ರವರ್ತಿಯ ಅಪ್ಪಣೆಯಂತೆ ಸೇನಾಧಿಪತಿಯು ನಾಲ್ಕು ಕಡೆಗೂ ತನ್ನ ಸೇವ
ಕರನ್ನು ರೋಹಿಣಿಯನ್ನು ಹುಡುಕುವುದಕ್ಕೆ ಅಟ್ಟಿದನು, ಎಷ್ಟು ಹುಡುಕಿದಾಗ್ಯೂ ರೋಹಿಣಿಯ ಮತ್ತು ಕರುಣಾಂಬೆಯರ ಸುಳಿವೇ ಗೊತ್ತಾಗಲಿಲ್ಲ. ಮುಂದೆ ಮಾಡ
ತಕ್ಕ ಕೆಲಸದ ಯೋಚನೆಯಲ್ಲಿ ಎಲ್ಲರೂ ಕುಳಿತಿರುವಾಗ ಅಲ್ಲಿಗೆ ಸೇನಾಧಿಪತಿಯು ಬಂದನು.
ರಾತ್ರಿಯಲ್ಲಿ ಹೊದ್ದು ಕೊಂಡಿದ್ದ ಕಪ್ಪು ಶಾಲನ್ನು ದೂರ ಬಿಸಾಟು ಪೂರ್ವನಿ ಶಾದೇವಿಯು ಶುಭ್ರವಸ್ತ್ರವನ್ನು ಪರಿಧಾನಮಾಡಿಕೊಳ್ಳುತ್ತಿರುವಳು. ನಿಬಿಡವೃಕ್ಷಗ ಳೊಳಗಿಂದ ಒಂದೆರಡು ಪಕ್ಷಿಗಳ ಮಂಜುಳರವವು ಕಿವಿಗೆ ಕೇಳಿಬರುತ್ತಿರುವುದು. ಸೂರ್ಯೋದಯಕ್ಕೆ ಇನ್ನೂ ಎಷ್ಟೋ ಅವಕಾಶವಿದ್ದಿತು, ಪಕ್ಷಿ ಸಮೂಹವು ಇನ್ನೂ ತಮ್ಮತಮ್ಮ ಗೂಡುಗಳಿಂದ ಹೊರಬಿದ್ದಿರಲಿಲ್ಲ. ಶೀತಲವಾದ ಮಂದಮಾರುತನು ತನ್ನ ಮಹತ್ವವನ್ನು ತೋರ್ಪಡಿಸುತ್ತಿರುವನು. ಪ್ರಾತಃಕಾಲದ ಶೀತವಾಯುವಿನ ಮಹತ್ವ ವನ್ನು ಎಷ್ಟು ಬಣ್ಣಿಸಿದರೂ ಸ್ವಲ್ಪವೇ ಸರಿ ! ಎಷ್ಟು ಶೀತಲ, ಸುಗಂದ, ಮನಸ್ಸಿಗೆ ಎಷ್ಟೊಂದು ಆಹ್ಲಾದಕರ, ಇದರ ಸುಖಕರಸ್ಪರ್ಶದಿಂದ ಸರ್ವಾಂಗವೂ ಅಮೃತರಸ ದಿಂದ ಅಭಿಷಿಕ್ತವಾದಂತೆ ಭಾಸವಾಗುತ್ತಲಿದೆ, ಅಂತಃಕರಣವು ಸುಪ್ರಸನ್ನವಾಗಿ ಉಲ್ಲಸಿತವಾಗುತ್ತದೆ. ಸೃಷ್ಟಿದೇವತೆಯ ಈ ಕಾಲದ ಸ್ವರೂಪವು ಎಷ್ಟು ಮಧುರ ! ಎಷ್ಟು ಕೋಮಲವಾದ ಆನಂದವನ್ನು ಕೊಡುವಂತಹದು ! ಈ ಮಾಧುರ್ಯದ
ಅಥವಾ ಕೋಮಲತೆಯ ಅನುಭವವನ್ನು ಸ್ವತಃ ಅನುಭವಿಸಿದ ಹೊರತು ಬರಿಯ ವರ್ಣನೆಯಿಂದ ವ್ಯಕ್ತಮಾಡಲು ಅಶಕ್ಯವು. ದಿನಮಣಿಯು ಸ್ವಲ್ಪ ಸ್ವಲ್ಪವಾಗಿ ತನ್ನ
ಮುಖಮಂಡಲದ ಕಾಂತಿಯನ್ನು ಪ್ರಪಂಚಕ್ಕೆ ತೋರ್ಪಡಿಸಹತ್ತಿದನು, ಪಕ್ಷಿಗಳೆ
ಲ್ಲವೂ ಆಹಾರಾರ್ಥವಾಗಿ ಹಾರಿಹೋಗುತ್ತಿರುವುವು. ಪತಿಸಮ್ಮುಖದಿಂದ ಎದ್ದು ಗೃಹಿಣಿಯರು ತಮ್ಮ ತಮ್ಮ ಗೃಹಕಾರ್ಯನಿರತರಾಗಿರುವರು. ಕೆಲಸವಿಲ್ಲದ ಸೋಮಾ ರಿಗಳು ಇನ್ನೂ ಹಾಸಿಗೆಯಮೇಲೆ ಮಲಗಿಕೊಂಡು ಮುಸುಕುಗಳನ್ನು ಬಲವಾಗಿ ಎಳೆ ದುಕೊಳ್ಳುತ್ತಿರುವರು. ಸಣ್ಣ ಮಕ್ಕಳು ತಮ್ಮ ಮಾತೆಯರನ್ನು ಹಿಂಸಿಸಿ ತಿಂಡಿಯನ್ನು ಇಸುಕೊಂಡು ತಿನ್ನುತ್ತಾ ತಮ್ಮ ತಮ್ಮ ಕಪ್ಪುಹಲಿಗೆಗಳೊಂದಿಗೆ ಪಾಠಶಾಲೆಗೆ ಹೋಗು ತಿರುವರು. ಹೀಗಿರುವಲ್ಲಿ ಸೇನಾಪತಿಯು ತನ್ನ ಸೇವಕರನ್ನು ಈಗ ಇನ್ನೊಂದು ಬಾರಿ ಹುಡುಕಿ ಎಲ್ಲಿದ್ದಾಗ್ಯೂ ಆ ಹುಡುಗಿಯನ್ನು ಕರತರಬೇಕೆಂತಲೂ ಹಾಗೆ ಕರತರದೆ ತಪ್ಪಿದಲ್ಲಿ ಚಕ್ರವರ್ತಿಯ ಎದುರಿನಲ್ಲಿ ಅಪಮಾನ ಹೊಂದಬೇಕಾಗುತ್ತದೆಂಬದಾಗಿಯೂ ಹೇಳಿ ಅವರನ್ನೆಲ್ಲಾ ಕಳುಹಿಸಿ ತಾನೂ ಬಂದದಾರಿಯಲ್ಲಿ ಹೊರಟನು.
೨೮-------------------------------------------------------------
ರೋಹಿಣಿಯು ತನ್ನ ಅತ್ತೆಯೊಡನೆ ರಾತ್ರಿಯೆಲ್ಲಾ ಭಯದಿಂದಲೂ, ಕರುಣಾ
ಕರ, ದಯಾಕರರು ಸಿಗಲಿಲ್ಲವೆಂಬ ವ್ಯಸನದಿಂದಲೂ, ಕಲ್ಯಾಣಪುರದಿಂದ ನಡೆದು ಬಂದುದರಿಂದುಂಟಾದ ಆಯಾಸದಿಂದಲೂ, ಮುಂದಕ್ಕೆ ಒಂದು ಹೆಜ್ಜೆಯನ್ನಾದರೂ ಇಡುವುದಕ್ಕೆ ಆಗದೆ ಹೋಗಲು ಅಲ್ಲಿಯೇ ಕುಳಿತುಬಿಟ್ಟಳು. ಭೃತ್ಯರಲ್ಲಿ ಒಬ್ಬನು ಇವರಿ
ಬ್ಬರನ್ನೂ ದೂರದಿಂದಲೇ ನೋಡಿ ಶವದುರ್ಗಂಧವಾದ ರಣಾಂಗದಲ್ಲಿ ಹೀಗೆ ಯೋಚ
ನಾಪರಳಾಗಿ ಕುಳಿತಿರುವ ಯುವತಿ ಯಾರು ? ಇವರು ಯಾವ ಕಾರ್ಯಾರ್ಥವಾಗಿ ಕುಳಿತಿರಬಹುದು? ನಮ್ಮ ಸೇನಾಪತಿಯು ಕರತರಬೇಕೆಂದು ಆಜ್ಞಾಪಿಸಿದ್ದು ಇವರನ್ನೇ ಇರಬಹುದೆ ? ಹಾಗೆ ಇವರೇ ನಾವು ಹುಡುಕುವ ವ್ಯಕ್ತಿಯಾದಲ್ಲಿ ನನ್ನ ಅದೃಷ್ಟಕ್ಕೆ ಎಣೆಯೇ ಇಲ್ಲ ಎಂದು ತನ್ನಲ್ಲಿ ತಾನೇ ಆಲೋಚಿಸುತ್ತಾ ಅವರ ಬಳಿಗೆ ಹೋಗಿ
ತಾಯೆ ! ತಾವು ಯಾರು ? ಇಲ್ಲಿಗೆ ಯಾತಕ್ಕಾಗಿ ಬಂದಿರುವಿರಿ? ಎಂದು ಕೇಳಲು ರೋಹಿಣಿಯು ನಾವು ಯಾರಾದರೇನು ? ನಿನಗೆ ತಿಳಿದಿದ್ದರೆ ಕರುಣಾಕರ ದಯಾಕರರ ಸಮಾಚಾರವನ್ನು ತಿಳಿಸು ಇಲ್ಲವಾದರೆ ನಿನ್ನ ದಾರಿಯನ್ನು ಹಿಡಿದುಕೊಂಡು ಹೊರಡ ಬಹುದು. ನಮ್ಮ ವೃತ್ತಾಂತವನ್ನು ತಿಳಿಸುವುದಕ್ಕೆ ಮುಂಚಿತವಾಗಿ ಕರುಣಾಕರ
ದಯಾಕರರ ಸಮಾಚಾರವನ್ನು ತಿಳಿಯಲು ನಮ್ಮ ಮನಸ್ಸು ಬಾಧಿಸುತ್ತಿರುವುದು.
ಎಂದು ಹೇಳಿದಳು ಈ ಮಾತುಗಳನ್ನು ಕೇಳಿದ ನೃತ್ಯನು ತನ್ನ ಸೇನಾಪತಿಬಳಿಗೆ
ಹೋಗಿ ಅಲ್ಲಿ ನಡೆದ ವಿದ್ಯಮಾನಗಳನ್ನು ಆದ್ಯಂತವಾಗಿ ತಿಳಿಸಿದರು. ಕೂಡಲೇ
ಸೇನಾಪತಿಯು ಭೃತ್ಯನ ಜೊತೆಯಲ್ಲಿ ಆ ವನಿತೆಯರಿಬ್ಬರಿದ್ದ ಸ್ಥಳಕ್ಕೆ ಹೊರಟನು. ಪೂರ್ವಪರಿಚಿತನಾದ ಸೇನಾಪತಿಯನ್ನು ನೋಡಿ ಕರುಣಾಂಬೆ ಯು ಅವನ ಬರುವಿಕೆಗೆ ಕಾರಣವನ್ನು ಕೇಳಿದಳು. ಅದಕ್ಕೆ ಸೇನಾಪತಿಯು ಚಕ್ರವರ್ತಿ ಸಾರ್ವಭೌಮರು
ತಮ್ಮನ್ನು ಅವರ ಬಿಡಾರಕ್ಕೆ ಕರೆತರುವಂತೆ ಆಜ್ಞಾಪಿಸುವರು. ಅದೇ ಪ್ರಕಾರ
ನಿಮ್ಮನ್ನು ಹುಡುಕುವುದಕ್ಕೋಸ್ಕರ ಅನೇಕ ಸೇವಕರನ್ನು ಕಳುಹಿಸಿ ಕಡೆಗೆ ಈ ಭೃತ್ಯ
ನಿಂದ ತಮ್ಮ ಸಮಾಚಾರವನ್ನು ತಿಳಿದು ನಾನೇ ಬಂದಿರುವೆನು. ಜಾಗ್ರತೆಯಾಗಿ ತಾವು ಹೊರಟರೆ ತಮ್ಮನ್ನು ಚಕ್ರವರ್ತಿಸಾರ್ವಭೌಮರವರ ಸನ್ನಿಧಿಗೆ ಕರೆದುಕೊಂಡು
ಹೋಗುವೆನು ಎಂದು ಬಹು ನಮ್ರಭಾವದಿಂದ ಹೇಳಲು, ರೋಹಿಣಿ ಮತ್ತು ಕರು ಣಾಂಬೆಯರು ತಮ್ಮನ್ನು ಚಕ್ರವರ್ತಿಯು ಕರೆಸಲು ಕಾರಣವೇನಿರಬಹುದು? ರಣಾಂಗಕ್ಕೆ ಪ್ರವೇಶಿಸಿದ ಸಂಗತಿಯನ್ನು ತಿಳಿದು ತನ್ನ ಅಪ್ಪಣೆಗೆ ವಿರುದ್ಧವಾಗಿ ನಡೆದಿರಬಹುದೆಂದು ಶಾಸನಮಾಡಲೇನಾದರೂ ಕರೆಸಿರುವನೋ ? ಹೇಗಿದ್ದರೂ ಹೋಗಿಯೇತೀರಬೇಕು. ಅವರ ಬಲಾತ್ಕಾರದಿಂದ ನಾವು ಹೋಗುವುದಕ್ಕಿಂತಲೂ, ಮರ್ಯಾದೆಯಾಗಿ ನಾವೇ
೨೯-------------------------------------------------------
ಹೋಗುವುದು ಉತ್ತಮ. ಆದರೆ ನಾನೇನೋ ವೃದ್ದಳು ರೋಹಿಣಿಯು ಯೌವನಾ ರಂಭದಲ್ಲಿರುವಳು. ಅಲ್ಲದೆ ಅಸಾಧಾರಣರೂಪವತಿಯು, ಜಗದೀಶ್ವರನು ಹಿಂದೆ ಅನಾಥ ಳಾಗಿದ್ದ ರೋಹಿಣಿಯನ್ನು ಕಾಪಾಡಿದಂತೆ ಈಗಲೂ ಪಾಲಿಸುವುದರಲ್ಲಿ ಸಂಶಯವೇನಿ ರುವುದು ಎಂದು ಮನಸ್ಸಿನಲ್ಲಿ ಯೋಚಿಸುತ್ತಾ ಸೇನಾಪತಿಯೊಡನೆ ಹೊರಟಳು.
ಎಲ್ಲರೂ ರಣಾಂಗಣವನ್ನು ಬಿಟ್ಟು ಒಂದು ಬಯಲಿಗೆ ಬಂದರು. ಅಲ್ಲಿ ಒಂದು ನದಿಯು ಹರಿಯುತ್ತಿತ್ತು. ತಪೋನಿಧಿಗಳಾದ ಬ್ರಾಹ್ಮಣರು ಲೋಕಕಲ್ಯಾಣಾರ್ಥವಾಗಿ ಸಂಚಾರ ಮಾಡಿಕೊಂಡು ಅಸ್ತಾಚಲಶಿಖರದಮೇಲೆ ವಿಶ್ರಮಿಸಿಕೊಂಡ ಸೂರ್ಯನಾರಾಯಣನಿಗೆ ಸೀತೋಪಚಾರಮಾಡಲೆಸಸಗಿರುವಂತೆ ಅರ್ಘ್ರಗಳನ್ನು ಕೊಡುತ್ತಲಿರುವರು. ಸುವಾಸಿನಿ
ಯರು ತುರುಬಿನಲ್ಲಿ ಹೂ ಮುಡಿದು ತಾಂಬೂಲವನ್ನು ಸವಿಯುತ್ತಾ ಥಳಥಳಿಸುವ ಕೊಡಗಳನ್ನು ತೆಗೆದುಕೊಂಡು ದಂಡೆಯ ಮೇಲೆ ಕುಳಿತು ಪರಸ್ಪರ ವಿನೋದ ಹಾಸ್ಯಾ ಸ್ಪದವಾದ ಮಾತುಗಳನ್ನಾಡುತ್ತಿರುವರು. ಇದನ್ನು ನೋಡಿದರೆ ಸುರಾಂಗನೆಯರು,
ಗಂಗೆಯ ಸುಧಾಮಯ ಸಲಿಂಕ್ಕಿಂತಲೂ ಈ ನದಿಯ ನೀರು ಹೆಚ್ಚು ಸವಿಯಾಗಿ ಕಂಡುಬಂದುದರಿಂದ ಸುವರ್ಣಕಲಶಗಳನ್ನು ತಂದು ಈ ನೀರನ್ನು ಒಯ್ಯುವರೋ
ಎಂಬಂತೆ ಕಾಣುತ್ತಿತ್ತು. ರೋಹಿಣಿ ಕರುಣಾಂಬೆಯರು ಈ ಸೃಷ್ಟಿ ವೈಭವವನ್ನೂ ಕೂಡ ನೋಡದೆ ಸೇನಾಪತಿಯ ಹಿಂದೆ ಸಾಗಿದರು. ಒಂದು ರಮ್ಯವಾದ ವನಸಿಕ್ಕಿತು, ಸಂತ
ಸವಾಗಿ ಹರಿಯುವ ಹಳ್ಳವು ನಾಗಮುರಿಯಂತೆ ಈ ಉದ್ಯಾನದಲ್ಲಿ ಹಾಯ್ದುಹೋಗಿ ದ್ದುದರಿಂದ ಅದು ಬಹು ರಮಣೀಯವಾಗಿದ್ದಿತು. ಹೀಗೆ ಮುಂದೆ ಎರಡು ಮಗ್ಗು
ಲಿಗೂ ವಿಧವಿಧವಾಗಿ ಗಿಡಗಳು ಹಾಕಲ್ಪಟ್ಟಿದ್ದವು. ಸ್ವಲ್ಪ ದೂರದಲ್ಲಿ ಒಂದು ರಮಣೀ ಯವಾದ ಸೌಧವು ಕಾಣಿಸುತ್ತಿತು. ಸೌಧದಿಂದ ವನವನ್ನು ಸೇರಲು ನಾಲ್ಕು ಹಾದಿ ಗಳಿದ್ದುವು. ಅಲ್ಲಲ್ಲಿ ವೃಕ್ಷವಾಟಿಕೆಗಳಿದ್ದು ಅವುಗಳ ಮಧ್ಯದಲ್ಲಿ ವಿಶ್ರಾಂತಿಗಾಗಿ
ಹಲಗೆಯ ಮತ್ತು ಕಬ್ಬಿಣದ ಆಸನಗಳನ್ನು ಹಾಕಿದ್ದರು. ಉಪವನದಿಂದ ಮಂದಿರಕ್ಕೆ ಹೋಗುವುದಕ್ಕೆ ಕೆಂಪು ಮಣ್ಣು, ಮರಳುಸೇರಿಸಿ ಅದರಿಂದ ಮಾಡಿದ್ದ ಪ್ರಶಸ್ತವಾದ ಮಾರ್ಗ. ಎದುರಿಗೆ ಮೂರು ಅಂತಸ್ತಿನ ಮಹಡಿಯವನೆ, ಅದಕ್ಕೆ ಹತ್ತುವುದಕ್ಕೆ ಅಮೃತಶಿಲೆಯಿಂದ ನಿರ್ಮಿತವಾದ ಮೆಟ್ಲುಗಳು, ಮನೆಯ ಮುಂಭಾಗದಲ್ಲಿ ಉಭಯ ಪಾರ್ಶ್ವದಲ್ಲಿಯೂ ಪಹರೆಯವರು ಇರುವುದಕ್ಕೆ ಮನೆಗಳು, ಮಹಡಿಯಮೇಲೆ ಸುಂದ ರವಾದ ನೆಲಕ್ಕೆ ಚಿತ್ರಮಯವಾದ ರತ್ನ ಗಂಬಳಿಯನ್ನು ಹಾಸಿದ್ದರು. ಮಧ್ಯಭಾಗದಲ್ಲಿ ಒಳ್ಳೆಯ ನುಣುಪಾದ ಕರಿ ಹಲಗೆಯ ವಿಸ್ತಾರವಾದ ದುಂಡುಮೇಜವಿದ್ದಿತು. ಅದರ ಸುತ್ತಲೂ ನಾಲ್ಕಾರು ಕುರ್ಚಿಗಳಿದ್ದುವು. ಗೋಡೆಗಳನ್ನು ನಾನಾವಿಧವಾದ ಸುಂದರ
೩೦---------------------------------------------
ವಾದ ಚಿತ್ರಪಠಗಳಿಂದ ಅಲಂಕರಿಸಿದ್ದರು. ಈ ಗೃಹವು ಮೊದಲು ಸುವರ್ಣಪುರಾಧೀ
ಶ್ವರನ ಬೇಸಿಗೆಯಕಾಲದ ಆರಾಮಮಂದಿರವಾಗಿದ್ದಿತು. ಅವಂತೀಶನು ಆ ರಾಜ್ಯ
ವನ್ನು ತನ್ನ ಕೈವಶಮಾಡಿಕೊಂಡ ಕೂಡಲೇ ಪಟ್ಟಣದ ನಾನಾ ಭಾಗಗಳಲ್ಲಿಯೂ ಯುದ್ಧದಲ್ಲಿ ಮೃತಪಟ್ಟವರ ದೇಹಗಳು ನಾರುತ್ತಾ ಕೊಳೆತು ದುರ್ಗಂಧಗಳನ್ನು ದೆಸೆ ದೆಸೆಗೂ ಬೀರುತ್ತಿದ್ದುದರಿಂದ ಆ ದುರ್ಗಂಧವನ್ನು ಸಹಿಸಲಾರದೆ ಈ ಮಂದಿರದಲ್ಲೇ ವಾಸಿಸುತ್ತಿದ್ದನು.
ಸೇನಾಪತಿಯು ರೋಹಿಣಿ ಕರುಣಾಂಬೆಯರೊಂದಿಗೆ ಆ ಮಂದಿರಕ್ಕೆ ಪ್ರವೇಶಿಸಿ
ದನು. ದಿವಾನಖಾನೆಯಲ್ಲಿ ಆರಾಮ ಕುರ್ಚಿಯಮೇಲೆ ಸುಖಾಸೀನನಾಗಿದ್ದ ಅವಂತೀಶ್ವ ರನಿಗೆ ರೋಹಿಣಿ ಕರುಣಾಂಬೆಯರನ್ನು ತಾನು ಹುಡುಕಿಸಿ ಕರತಂದಿರುವೆನೆಂದು ವಿಜ್ಞಾಪಿ ಸಿಕೊಂಡು ಆ ಯುವತಿಯರಿಬ್ಬರನ್ನೂ ದಿವಾನಖಾನೆಯಲ್ಲಿಯೇ ಬಿಟ್ಟು ತಾನು ಹೊರಟು ಹೋದನು. ಆ ಅವಂತೀಶನು, ಮೌನದಿಂದ ತಲೆವಾಗಿ ರೋಹಿಣಿ ಕರುಣಾಂಬೆಯರನ್ನು ಕುರಿತು ನೀವು ಯಾರೆಂದು ಪ್ರಶ್ನೆ ಮಾಡಲು ಯಾವ ಉತ್ತರವೂ ಬರಲಿಲ್ಲ.
ಅವಂತೀಶ:-ಎಲೌ ಸುಂದರಿಯರೆ ಏತಕ್ಕೆ ಮೌನವನ್ನು ಧರಿಸಿರುವಿರಿ? ನನ್ನನ್ನು ನಿಮ್ಮ ಸಹೋದರನೆಂದು ನಂಬಿ ನಿಮ್ಮ ವೃತ್ತಾಂತವನ ತಿಳಿಸಿ.
ಕರುಣಾಂಬೆ:-ಭೂಮೀಶ್ವರನೆ ! ನಾನು ಸುವರ್ಣವುರಾಧೀಶ್ವರನ ತೃತೀಯ
ಪತ್ನಿಯು. ಈಕೆಯು ನನ್ನ ಸೋದರಪಾಲಿತ ಪುತ್ರಿ.
ಅವಂತೀಶ :ಹಾಗಾದರೆ ನಿಮ್ಮ ಸೋದರರು ಯಾರು ?
ಕರುಣಾಂಬೆ:-ಆ ಪರೋಪಕಾರಶಿಖಾಮಣಿಗಳು ತಮಗೂ, ಸುವರ್ಣಪುರಾ
ಧೀಶ್ವರನಿಗೂ, ನಡೆದ ಯುದ್ಧರಂಗದಲ್ಲಿ ಘಾಯಪಟ್ಟು ಮರಣೋನ್ಮುಖರಾಗುವವರ ಸಹಾಯಕರಾಗಿ ಇಲ್ಲಿ ಇರುವರೆಂದು ತಿಳಿದು, ಬಂದೆವು.
ಅವಂತೀಶ:-ಹಾಗಾದರೆ ನೀವು ಕರುಣಾಕರ, ದಯಾಕರರ ಸಹೋದರಿಯರೊ?
ಕರುಣಾಂಬೆ :- ಹೌದು, ಮಹಾಪ್ರಭು !
ಅವಂತೀಶ :-ನಿಮ್ಮ ಬಳಿಯಲ್ಲಿ ನಿಂತಿರುವ ಈ ಸುಂದರೀಮಣಿಯು ಕರುಣಾಕ
ರರ, ದಯಾಕರರ ಸಾಕುಮಗಳೆಂದು ಹೇಳಿದರಷ್ಟೆ ? ಅದು ಹೇಗೆ ?
ಕರುಣಾಂಬೆಯು ಅವಂತೀಶನೊಡನೆ ರೋಹಿಣಿಯು ಶಿಶುವಾಗಿದ್ದಾಗಿನಿಂದಲೂ ಅವಳ ಚರಿತ್ರೆಯನ್ನು ಸವಿಸ್ತಾರವಾಗಿ ವಿಜ್ಞಾಪಿಸಿಕೊಂಡಳು. ಇದನ್ನು ಕೇಳಿದ ಕೂಡಲೇ ಅವಂತೀಶನು ತುಂಬಾ ವ್ಯಸನಾಕ್ರಾಂತನಾಗಿ ರೋಹಿಣಿ ಕರುಣಾಂಬೆಯರ
ಕಡೆಗೆ ತಿರುಗಿ---
೩೧-----------------------------------------
ಎಲೌ ! ಭಾತೃವಾತ್ಸಲರಾದ ರಮಣಿಯರೆ ? ನೀವು ಯಾವವಿಧವಾದ ಯೋಚ
ನೆಯನ್ನೂ ಮಾಡದಿರಿ ! ಕರುಣಾಕರ ದಯಾಕರರೀರ್ವರನ್ನೂ ಈ ದಿನ ಸಂಧ್ಯಾಕಾಲ ದೊಳಗಾಗಿ ಎಲ್ಲಿದ್ದರೂ ಹುಡುಕಿಸಿ ತಮ್ಮ ಬಳಿಗೆ ಬರಮಾಡುವೆನು ಎಂದು ಹೇಳಿ ರೋಹಿಣಿಯನ್ನು ಕಣ್ಣು ತುಂಬ ನೋಡಿ ಆನಂದಪರವಶನಾಗಿ ಸೈನ್ಯಾಧಿಕಾರಿಯನ್ನು
ಕುರಿತು ಈ ಯುವತಿಯರಿಬ್ಬರನ್ನೂ ಕರೆದುಕೊಂಡು ಹೋಗಿ ಅವರಿಗಾಗಿ ಬೇರೆ
ಯೊಂದು ಕೊಠಡಿಯನ್ನು ತೆರವುಮಾಡಿಕೊಡಬೇಕು. ಮತ್ತು ಇವರ ಉಪಚಾರಗಳನ್ನು
ನೀನೇ ಸಾಕ್ಷಾತ್ತಾಗಿ ನೋಡಿಕೊಳ್ಳಬೇಕೆಂದು ಆಜ್ಞೆಯಿತ್ತು ಭೋಜನಶಾಲೆಯನ್ನು
ಹೊಕ್ಕನು.
ಭೋಜನಾಲಯದಲ್ಲಿ ಪದ್ಧತಿಗನುಸಾರವಾಗಿ ಎಲ್ಲವೂ ಸಿದ್ದವಾಗಿದ್ದಿತು. ರಾಜಬಂಧುಗಳೂ, ಮಂತ್ರಿಗಳೂ, ಸೇನಾಧಿಕಾರಿಗಳೂ ಇತರ ಅಧಿಕಾರಿಗಳೂ ತಮ್ಮ
ತಮ್ಮ ನಿಯಮಿತಸ್ಥಳಗಳಲ್ಲಿ ಕುಳಿತರು. ಎಲ್ಲರೂ ಭುಂಜಿಸಿದರು. ಆದರೆ ಚಕ್ರವ
ರ್ತಿಯು ಮಾತ್ರ ನಿತ್ಯವೂ ಇದ್ದಂತೆ ಇರದೆ ಯಾರಜೊತೆಯಲ್ಲಿಯೂ ಮಾತನ್ನಾಡದೆ ಸುಮ್ಮನೆ ಯಾವುದೋ ಯೋಚನೆಯಲ್ಲಿ ಮಗ್ನನಾಗಿದ್ದುದನ್ನು ಕಂಡು ಉಳಿದವರೆ
ಲ್ಲರೂ ಚಕಿತರಾದರು. ಆದರೆ ಕಾರಣವನ್ನು ಕೇಳಲು ಯಾರಿಗೆತಾನೇ ಧೈರ್ಯ. ಯಾರೊಬ್ಬರೂ ಯಾವ ಪ್ರಸ್ತಾಪವನ್ನೂ ಮಾಡಲಿಲ್ಲ. ಸೇನಾಪತಿಯು ರೋಹಿಣಿ, ಕರುಣಾಂಬೆಯರನ್ನು ಕರೆದುಕೊಂಡು ಬಂದುಬಿಟ್ಟ ಸಂಗತಿ ವಿನಹ ಮತ್ಯಾವದನ್ನೂ ಅರಿಯನು,
###
ಸಪ್ತಮಲಹರಿ.
ಚಿಂತೆಗೂ ಚಿತೆಗೂ ಒಂದು ಬಿಂದು ಮಾತ್ರ ವ್ಯತ್ಯಾಸವಿರುವಾದರೂ ಮೊದಲ
ನೆಯದು ನಿರ್ಜೀವ ವಸ್ತುಗಳನ್ನೂ ಎರಡನೆಯದು ಸಜೀವ ವಸ್ತುಗಳನ್ನೂ ದಹಿಸಿಬಿಡು ವುದು, ಲೋಕದಲ್ಲಿ ಎಲ್ಲಾ ರೋಗಗಳಿಗೂ ಔಷಧಗಳೂ ಚಿಕಿತ್ಸೆಗಳೂ ಉಂಟು.
ಆದರೆ ಈ ಚಿಂತಾರೋಗಕ್ಕೆ ಯಾವ ಔಷಧವೂ ಚಿಕಿತ್ಸೆಯೂ ದೇವಲೋಕದ ವೈದ್ಯ ಶಿರೋಮಣಿಗಳಾದ ಅಶ್ವಿನೀದೇವತೆಗಳೂ ಕೂಡ ಕಂಡುಹಿಡಿದ ಹಾಗೆ ಕಾಣಬರಲಿಲ್ಲ.
೩೨----------------------------------------------
ಮತ್ತೆ ಮಾನುಷವೈದ್ಯರ ಪಾಡೇನು. ಈ ರೋಗವು ಒಂದಾವರ್ತಿ ಆಕ್ರಮಣಮಾಡಿ
ದರೆ ತನ್ನ ಇಷ್ಟಾ ಪೂರ್ತಿಯಾದಹೊರತು ಕದಲುವುದೇ ಇಲ್ಲ.
ಪಾತಕ ಮಹಾಶಯರೆ! ಚಿಂತೆಗಳು ಹಲವು ತರಗಳಾಗಿರುವುವು. ನವವಧು
ವಿಗೆ ಪತಿಯಚಿಂತೆ. ಅಪುತ್ರನಿಗೆ ಪುತ್ರನಚಿಂತೆ, ಬ್ರಹ್ಮಚಾರಿಗೆ ವಿವಾಹಚಿಂತೆ. ಕುರು
ಬನಿಗೆ ಕುರಿಯ ಚಿಂತೆ, ಲುಬ್ಧನಿಗೆ ಧನದಚಿಂತೆ, ಗೌಳಿಗನಿಗೆ ಆಕಳಚಿಂತೆ, ಬೇಡನಿಗೆ ಮೃಗಗಳಚಿಂತೆ, ಬೆಸ್ತನಿಗೆ ಮೀನಿನಚಿಂತೆ, ರೋಗಿಗೆ ಮರಣದಚಿಂತೆ, ದರಿದ್ರನಿಗೆ ಸಾಲ ದಚಿಂತೆ, ವೇಶ್ಯಗೆ ಧನಿಕಪ್ರಿಯವಿಟನಚಿಂತೆ, ದೇವತೆಗಳಿಗೆ ಭೂಲೋಕದಚಿಂತೆ,
ಮಕ್ಕಳಿಗೆ ತಿಂಡಿಯಂತೆ, ರೈಲ್ವೆಯವರಿಗೆ ಪ್ರಯಾಣಿಕರಚಿಂತೆ, ವಿಧುರನಿಗೆ ಪತ್ನಿಯ
ಚಿಂತೆ, ವಿತಂತುವಿಗೆ ಪತಿಯಚಿಂತೆ ಹೀಗೆ ಇರುವುವು.
ಇವೆಲ್ಲಕ್ಕಿಂತ ಪ್ರಬಲವೂ ದುಸ್ಸಹವೂ ಆದ ಚಿಂತೆಯೊಂದು ಇರುವುದು.
ಲೋಕದಲ್ಲಿ " ಅಪುತ್ರಸ್ಯ ಗತಿರ್ನಾಸ್ತಿ” ಎಂಬ ಶೃತಿಯಂತೆ ಮಕ್ಕಳಿಲ್ಲದವನಿಗೆ ಗತಿಇ
ಲ್ಲವೆಂಬುದೇನೋ ನಿಜ. ಮಕ್ಕಳಲ್ಲಿ ಎರಡು ವಿಧವೆಂಬುದು ಸರ್ವಸಾಮಾನ್ಯವಾದ
ವಿಷಯ ಅದರಲ್ಲಿ ಮೊದಲನೇಯದು ಗಂಡುಮಕ್ಕಳ ವಿಷಯವನ್ನು ನೋಡೋಣ. ಇವ ರಲ್ಲಿ ಹುಟ್ಟಿದಕೂಡಲೇ ಸಾಯುವರು ಕೆಲವರು, ಮಧ್ಯಕಾಲದಲ್ಲಿ ಸಾಯುವರು ಕೆಲ ವರು. ಬಹುದಿನಗಳವರಿಗೆ ಬದುಕಿ ಬಾಳಿ ದೇಹವನ್ನಿಡುವರು ಕೆಲವರು. ಇದು ಮೃತಪ ಡುವರ ಸಂಗತಿಯು, ಇನ್ನು ಜೀವಿತಪುತ್ರರ ಸಂಗತಿಯನ್ನು ನೋಡುವ ಬಾಲ್ಯದಲ್ಲಿ ಮಾತಾಪಿತೃಗಳಿಂದ ಪೋಷಿತರಾಗಿ ವರ್ಣಾಶ್ರಮಧರ್ಮಕ್ಕನುಸಾರವಾದ ಕರ್ಮಗ
ಳನ್ನೂ ಯೌವನಾವಸ್ಥೆಯನ್ನೂ ಹೊಂದಿಸಿ, ತನ್ನನ್ನು ಹೊತ್ತು, ಹೆತ್ತು, ಸಾಕಿ, ಸಲಹಿ, ವಿದ್ಯಾಭ್ಯಾಸಮಾಡಿಸಿದ ಮಾತಾಪಿತೃಗಳ ಇಷ್ಟಾನುಸಾರವಾಗಿ ನಡೆದು ಬಾಳುವವನು ಸುಪುತ್ರನೆನ್ನಿಸಿಕೊಂಡು ತಾನು ಸಂತೋಷವಾಗಿದ್ದು ತನ್ನ ಮಾತಾಪಿತೃ ಗಳನ್ನು ಆನಂದಾಬ್ದಿಯಲ್ಲಿ ಮುಳುಗಿಸುವನು. ಇಂಥವರು ದುಷ್ಪುತ್ರರಾದರೆ ಅವರು ಲೋಕಕಂಟಕರಾಗಿ ಮಾತಾಪಿತೃಗಳಿಗೆ ಶೂಲಪ್ರಯರಾಗಿ ತಾವೂ ದುಃಖಪಟ್ಟು ಅವ
ರನ್ನು ಚಿಂತಾಸಾಗರದಲ್ಲಿ ಯಾವಜೀವವ ಮುಳುಗಿರುವಂತೆ ಮಾಡಿ ತಾವೂ ಕಷ್ಟಪ ಡುವರು. ಎಂತಹ ದುಷ್ಟುತ್ರರಾದರೂ, ಹೊತ್ತು, ಹೆತ್ತು, ಸಾಕಿ, ಸಲಹಿದ, ಮಾತಾ ಪಿತೃಗಳು ತಮ್ಮ ಪುತ್ರರು ಎಲ್ಲಿಯಾದರೂ ಸುಖವಾಗಿರಲಿ! ಎನ್ನು ವರೇ ವಿನಹ ಅವರಿಗೆ ಯಾವ ವಿಧದಲ್ಲಿಯೂ ಕೇಡನ್ನು ಹಾರೈಸರು.
೩೩-------------------------------
ಅವಂತೀಶನು ಭೋಜನಾಲಯದಿಂದ ತನ್ನ ಕಿರುಮನೆಗೆ ಹೋಗಿ ಒಂದು
ವೇತಾಸನದಮೇಲೆ ಕುಳಿತು ಕಣ್ಣೀರು ಸುರಿಸುತ್ತಾ ರಾತ್ರಿಯನ್ನೆಲ್ಲಾ ಕಳೆದನು. ಸೂರ್ಯೋದಯಾತ್ಯತ್ವವೇ ಪ್ರತಿದಿನವೂ ಎದ್ದು ಗಾಳಿಸವಾರಿಹೊರಡುತ್ತಿದ್ದ ಚಕ್ರವ ರ್ತಿಯು ಸೂರ್ಯೋದಯವಾಗಿ ಎರಡುಗಳಿಗೆಯಾದರೂ ಕಿರುಮನೆಯಿಂದ ಹೊರಗೆ ಬಾರದಿದ್ದುದನ್ನು ನೋಡಿ ಮಂತ್ರಿ ಮೊದಲಾದವರು ಕಳವಳಗೊಂಡರು. ಮುಖ್ಯಾ ಮಾತ್ಯನು ಚಕ್ರವರ್ತಿಯ ಕಿರುಮನೆಯ ಬಳಿಗೆ ಬಂದು ಬಾಗಿಲಸಂದಿನಲ್ಲಿ ನೋಡಲು, ರಾಜನು ಒಂದು ಆರಾಮವೇತ್ರಾಸನದಮೇಲೆ ಕುಳಿತು ಕೆನ್ನೆಯಮೇಲೆ ಕೈಯನ್ನಿ
ಟ್ಟುಕೊಂಡು ಏನನ್ನೋ ಯೋಚಿಸುತ್ತಿದ್ದುದನ್ನು ಕಂಡನು. ರಾಜನ ಪ್ರಕೃತಸ್ಥಿತಿ
ಯನ್ನು ನೋಡಿ ಮುಖ್ಯಾಮಾತ್ಯನಿಗೂ ದಾರಿ ತೋರದೆಹೋಯಿತು. ರಾಜನು
ಏತಕ್ಕೆ ಈರೀತಿ ಶೋಕಿಸುತ್ತಿರುವನೆಂಬುದಕ್ಕೆ ಕಾರಣವನ್ನು ಎಷ್ಟು ಯೋಚಿಸಿದರೂ ಕಂಡುಹಿಡಿಯಲಾರದೆಹೋದನು, ಕಡೆಗೆ ತನ್ನಲ್ಲಿತಾನೆ ರೋಹಿಣಿಯನ್ನು ನೋಡಿದ ದಿನದಿಂದಲೂ, ರಾಜನ ಸ್ಥಿತಿಯು ವಸ್ತುತಃಸರಿಯಾಗಿಲ್ಲವು. ಆಕೆಯ ರೂಪು,
ಲಾವಣ್ಯ, ಬುದ್ಧಿ ಶಕ್ತಿ ಮೊದಲಾದುವುಗಳಿಗೆ ಪರವಶನಾಗದ ಮನುಷ್ಯನು ಪಾಮ
ರನೇ ಸರಿ! ಹಾಗಿರುವಾಗ್ಗೆ ನಮ್ಮ ಚಕ್ರವರ್ತಿಯು ಆಕೆಯನ್ನು ನೋಡಿ ಮೋಹಿಸಿರ ಬಹುದೆಂದು ಯೋಚಿಸಿದರೆ ಅದು ಸುಳ್ಳಾಗಲಾರದು. ಏಕೆಂದರೆ ಆಕೆಯು ಅವಿವಾಹಿ
ತಳು, ಯವ್ವನವತಿಯು, ರೂಪವತಿಯು, ಮತ್ತು ವಿದ್ಯಾವತಿ, ಚಕ್ರವರ್ತಿಯೂ ಕೂಡ ರಾಜ್ಯ ಕಾರ್ಯದಲ್ಲಿ ನಿಪುಣನು, ಯುವಕನು, ರೂಪಿನಲ್ಲಿ ಅನಂಗನನ್ನೂ ಮರೆಸು
ವನು. ಈತನ ರಾಜ್ಯಸ್ಥಿತಿಯು ಹೇಗಿರುವುದೆಂದರೆ :--
ಬಡತನವು ಸ್ತ್ರೀಯರ ನಡುವಿನಲ್ಲಿಯೂ, ಮಾಂದ್ಧವು ಅವರ ನಡೆಯಲ್ಲಿಯೂ, ಕಠಿಣತ್ವವು ಅವರ ಎದೆಯಲ್ಲಿಯೂ, ಚಾಂಚಲ್ಯವು ಅವರ ಕಡೆಗಣ್ಣಿನ ನೋಟದಲ್ಲಿಯೂ, ಕುಟಿಲತ್ವವು ಅವರ ಗುಂಗುರು ಕೂದಲುಗಳಲ್ಲಿಯೂ ಕಂಡುಬರುತ್ತಿರುವುದೇ ಹೊರತು ಜನರಲ್ಲಿ ಹುಡುಕಿದರೂ ಸಿಗುವುದಿಲ್ಲ. ಈ ವಿಧವಾದ ಬಿಕ್ಕಟ್ಟಿನಲ್ಲಿ ರಾಜ್ಯಭಾರಮಾ ಡುತ್ತಲಿರುವ ಸಾರ್ವಭೌಮನು ಒಬ್ಬ ಸ್ತ್ರೀಗೆ ಸೋತುದು ಆಶ್ಚರ್ಯವಲ್ಲವೆ?
ಹೇ ಮನಸ್ಸೇ ! ನಿನ್ನ ನಿರ್ಧರವೇ ನಿರ್ಧರ! ನಿನ್ನ ನಿಶ್ಚಯವೇ ನಿಶ್ಚಯ ! ನಿನ್ನ ನ್ಯಾಯವೇ ನ್ಯಾಯ ! ನಿನಗೆ ತಕ್ಕ ಹಾಗೆ ನಿನ್ನ ಸ್ನೇಹಿತರೀರ್ವರೂ (ಕಿವಿ, ಕಣ್ಣು) ಸಹಾಯಮಾ ಡುವರು. ಭಗವಂತನ ನಿಯಾಮಕವಿದ್ದಂತೆ ಆಗಲಿ ಎಂದು ಯೋಚಿಸುತ್ತಾ, ಚಕ್ರವರ್ತಿ ಸಾರ್ವಭೌಮರಿಗೆ ಜಯವಾಗಲಿ' ಎಂದು ನನ್ನ ಭಾವದಿಂದ ಹೇಳಿದನು. ರಾಜನು ಝಗ್ಗನೆ ತನ್ನ ಪೀಠದಿಂದ ಎದ್ದು ಮುಖ್ಯಮಾತ್ಮನನ್ನು ಬಳಿಗೆ ಬರಹೇಳಿದನು.
೩೪-----------------------------------------------
ಮಂತ್ರಿಯು ಉಚಿತಸ್ಥಾನದಲ್ಲಿ ಕುಳಿತುಕೊಂಡಮೇಲೆ ರಾಜನು ತನ್ನ ಪ್ರಕೃತಸ್ಥಿತಿಗೆ ಕಾರಣವನ್ನು ಹೇಳದೆ ಬೇರೆ ಯಾವವೋ ಒಂದೆರಡು ವಿಷಯಗಳನ್ನು ಪ್ರಸ್ತಾಪಿಸು
ತ್ತಿದ್ದು ತನಗೆ ಸ್ವಲ್ಪ ಅಸ್ವಸ್ಥತೆಯುಂಟಾಗಿರುತ್ತದೆಯೆಂತಲೂ ತನ್ನಿಂದ ನಿರ್ವಹಿಸಲ್ಪಡ ಬೇಕಾದ ಯಾವತ್ತು ಕಾರ್ಯವನ್ನೂ ಮಂತ್ರಿಯೇ ಸ್ವಲ್ಪ ಕಾಲದವರೆಗೆ ನಡೆಸಬೇ
ಕೆಂದೂ ಆತನಿಗೆ ಹೇಳಿ ಕಳುಹಿಸಿ ತಾನು ಹುಚ್ಚನಂತೆ ಆ ಕಿರುಮನೆಯ ಒಂದುಕಡೆ
ಯಿಂದ ಮತ್ತೊಂದುಕಡೆಗೆ ಶತಪಥ ಸುತ್ತುತ್ತಾ ಇದ್ದನು.
++ + ++
ಅಷ್ಟಮಲಹರಿ.
-------
ದಿವಾಕರನ ಪುತ್ರನಾದ ಶನೀಶ್ವರನ ದೆಶೆಯಲ್ಲಿರತಕ್ಕ ಯಾವ ಮನುಷ್ಯನಾದರೂ
ದುಃಖ, ಅಪಮಾನ, ಅಪಯಶಸ್ಸು, ಋಣ, ದಾರಿದ್ರ, ಇವುಗಳಿಂದ ಕಷ್ಟನಷ್ಟಗ
ಳಿಗೆ ಗುರಿಯಾಗಬೇಕಲ್ಲದೆ ಸುಖವನ್ನನುಭವಿಸುವ ಸಂಭವವು ಇಲ್ಲವೆಂದೇ ಹೇಳಿ
ದರೆ ಅದು ಅತಿಶಯೋಕ್ತಿಯಾಗಲಾರದು. ಅದರಲ್ಲೂ ಈ ಮಹಾರಾಯನು ಜನ್ಮ, ದ್ವಿತೀಯಾ, ಚತುರ್ಥ, ಪಂಚಮ, ಸಪ್ತಮ, ಅಷ್ಟಮ, ದ್ವಾದಶ ಈ ಏಳು ಸ್ಥಾನಗ ಳಲ್ಲಿದ್ದರೆ ಹೇಳಬೇಕಾದ್ದೇಇಲ್ಲ.
ಇತ್ತ ರಾಜ್ಯಭ್ರಷ್ಟನಾಗಿ ಓಡಿಹೋಗಿ ಕಾಡಿನಲ್ಲಿ ತಲೆತಪ್ಪಿಸಿಕೊಂಡು ತಿರುಗಾಡು
ತಿದ್ದ ಸುವರ್ಣಪುರಾಧೀಶ್ವರನು ಒಂದೆರಡುತಿಂಗಳುಕಾಲ ಗೆಡ್ಡೆಗೆಣಸುಗಳನ್ನು ತಿಂದು ಒಂದೇಮನಸ್ಸಿನಿಂದ ಈಶ್ವರನನ್ನು ಧ್ಯಾನಿಸುತ್ತಿದ್ದನು. ಈತನ ಧ್ಯಾನದಿಂದ ಈಶ್ವರನು ಪ್ರತ್ಯಕ್ಷನಾದನೋ ಎನ್ನುವಹಾಗೆ ಸುವರ್ಣ ಪರಾಧೀಶನಿಗೆ ಸ್ವಲ್ಪ ದೂರದಲ್ಲಿ ಒಂದು ದೇವಸ್ಥಾನವು ಕಾಣಿಸಿತು, ಆ ದೇವಸ್ಥಾನವು ಕಟ್ಟಲ್ಪಟ್ಟು ಬಹುಕಾಲವಾಗಿದ್ದಿತು. ಅದರ ಪ್ರಾಕಾರದ ಗೋಡೆಗಳೆಲ್ಲವೂ ಬಿರುಕುಬಿಟ್ಟು ಆಲ ಮತ್ತು ಅರಳಿಗಿಡಗಳಿಗೆ ಆವಾಸಸ್ಥಾ ನವಾಗಿದ್ದುವು. ದೇವಸ್ಥಾನದ ಪ್ರಾಂಗಣದಲ್ಲಿ ಒಂದು ದೊಡ್ಡ ಕೈಸಾಲೆ, ಮತ್ತು ಸುತ್ತಲೂ ಕಲ್ಲಿನಿಂದ ಕಟ್ಟಲ್ಪಟ್ಟ ಸಣ್ಣಸಣ್ಣ ಮಂಟಪಗಳು. ಅವುಗಳಲ್ಲಿ ಪ್ರತಿಯೊಂದರ
ಲ್ಲಿಯ, ಒಂದೊಂದು ಲಿಂಗ ಮತ್ತು ಬಸವ, ಜಗದಂಬೆಯ ದೇವಸ್ಥಾನದ ಮುಂದುಗಡೆ ಪಾರಿಜಾತ, ಮತ್ತು ಒಂದು ಸಂಪಗೆಯ ವೃಕ್ಷವು ಬಹಳ ಎತ್ತರವಾಗಿ ಬೆಳೆದು
೩೫---------------------------------------
ತಮ್ಮಲ್ಲಿ ಬಿಟ್ಟ ಪುಷ್ಪಗಳ ರೇಖುಗಳನ್ನೆಲ್ಲಾ ಶ್ರೀ ಜಗದಂಬೆಯಮೇಲೆ ಉದುರಿಸು ತಿದ್ದುವು. ಈಶ್ವರನ ದೇವಸ್ಥಾನದ ಮುಂದುಗಡೆಯಲ್ಲಿ ಒಂದು ದೊಡ್ಡ ಬಿಲ್ವಪ
ತ್ರೆಯ ಗಿಡವಿದ್ದಿತು, ದೇವಸ್ಥಾನದ ಹೊರಗಡೆ ಎಡಭಾಗದಲ್ಲಿ ಅನೇಕ ಬೇಲ ಮತ್ತು ಹಲಸಿನಮರಗಳು ಅನೇಕ ಮುಳ್ಳುಗಿಡಗಳಿಂದ ಆವೃತವಾಗಿದ್ದುವು. ಒಂದು ಸಣ್ಣ
ನದಿಯು ದೇವಸ್ಥಾನವನ್ನು ಸುತ್ತುಗಟ್ಟಿಕೊಂಡು ನಿದಾನವಾಗಿ ಪ್ರವಹಿಸುತ್ತಿದ್ದಿತು. ಸುವರ್ಣವುರಾಧೀಶನು ಅಲ್ಲಿ ಹರಿಯುತ್ತಿದ್ದ ನದಿಯ ಶೋಭೆಯನ್ನೂ ದೇವಸ್ಥಾನ
ವನ್ನೂ ತನ್ನ ಮನಸ್ಸಿನಲ್ಲೇ ವರ್ಣನೆಮಾಡುತ್ತಾ ದೇವಸ್ಥಾನದ ಸುತ್ತಲೂ ಸ್ವಲ್ಪ ಹೊತ್ತು ಅಲೆದಾಡುತ್ತಾ ಅಲ್ಲಿ ಒಂದು ಹಲಸಿನಮರದಲ್ಲಿ ಪಕ್ಷವಾಗಿ ಬಿರುಕುಬಿಟ್ಟಿದ್ದ ಒಂದು ಹಲಸಿನ ಹಣ್ಣನ್ನು ಕೊಯ್ದು ತಂದು ನದಿಯದಡದಲ್ಲಿಟ್ಟು ತಾನು ಉಟ್ಟು ತೊಟ್ಟಿದ್ದ ಬಟ್ಟೆಗಳನ್ನೆಲ್ಲಾ ಒಗೆದು ಒಣಗಿಸಿಕೊಂಡು ತನ್ನ ನಿತ್ಯಕರ್ಮಗಳನ್ನು ತೀರಿಸಿ ಕೊಂಡು ದೇವಸ್ಥಾನದ ಒಳಕ್ಕೆ ಹೋಗಿ ದೇವರಸಾನ್ನಿಧ್ಯದಲ್ಲಿ ನಿಂತು ಒಂದೇಮನಸ್ಸಿ
ನಿಂದ ದೇವರನ್ನು ಧ್ಯಾನಮಾಡಿ ತಾನು ತಂದಿದ್ದ ಹಣ್ಣನ್ನು ದೇವರಮುಂದೆ ಇರಿಸಿ ನಮಸ್ಕಾರಮಾಡಿ ಹಣ್ಣನ್ನು ತೆಗೆದುಕೊಂಡು ಕೈಸಾಲೆಯಲ್ಲಿ ಕುಳಿತುಕೊಂಡು
ಹಣ್ಣನ್ನೂ ಸಿಪ್ಪೆಯನ್ನೂ ಬೇರೆಬೇರೆಮಾಡಿ ತಾನು ತಿನ್ನಬೇಕೆಂದಿರುವಷ್ಟರಲ್ಲಿಯೇ ತನ್ನೆದು
ರಿಗೆ ಒಬ್ಬ ಮುದಿಬ್ರಾಹ್ಮಣನನ್ನು ಕಂಡು ಆತನಿಗೆ ದಂಡಪ್ರಣಾಮವನ್ನು ಮಾಡಿ ಹಲ
ಸಿನ ಹಣ್ಣಿನಲ್ಲಿ ಅರ್ಧಭಾಗವನ್ನು ಆತನಿಗೆ ಕೊಟ್ಟು ತಾನೂ ತಿಂದನು. ಮುದಿಬ್ರಾಹ್ಮ
ಣನು ಸುವರ್ಣಪುರಾಧೀಶನ ವೃತ್ತಾಂತವನ್ನೆಲ್ಲವನ್ನೂ ಸಮಗ್ರವಾಗಿ ಕೇಳಿ " ಎಲೈ
ಅರಸೇ ! ಇಲ್ಲಿಗೆ 8 ಮೈಲಿ ದೂರದಲ್ಲಿ ಜಯಪುರಿಯಲ್ಲಿ ಭೀಮರಾಜನೆಂಬುವನು ರಾಜ್ಯ ಭಾರಮಾಡುತ್ತಿರುವನು. ನೀನು ಆತನಬಳಿಗೆ ಈದಿವಸವೇ ಹೊರಟು ನಿನ್ನ ವೃತ್ತಾಂತ
ವನ್ನೆಲ್ಲ ವನ್ನೂ ತಿಳಿಸು. ಆತನು ನಿನಗೆ ಸಹಾಯಮಾಡುವನು. ಜಾಗ್ರತೆಯಲ್ಲಿಯೇ
ನಿನಗೆ ಮಂಗಳವುಂಟಾಗಲಿ'' ಎಂದು ಹರಸಿ ಎಲ್ಲಿಯೋ ಹೊರಟು ಹೋದನು.
ವಿಪ್ರವಾಕ್ಯದಂತೆ ಸುವರ್ಣವುರಾಧೀಶನು ತಕ್ಷಣವೇ ಹೊರಟು ಸಂಧ್ಯಾ
ಕಾಲಕ್ಕೆ ಸರಿಯಾಗಿ ಜಯಪುರಿಗೆ ಶೇರಿದನು. ನಿತ್ಯ ಪದ್ಧತಿಗನುಸಾರವಾಗಿ ಭೀಮರಾಜನು ದರ್ಬಾರನ್ನು ತೀರಿಸಿಕೊಂಡು ಊಟಕ್ಕೆ ಹೋಗುತ್ತಿರುವ ಹೊತ್ತಿಗೆ ಸರಿಯಾಗಿ ದೂತನೊಬ್ಬನು, “ ಯಾರೋ ಒಬ್ಬರು ತಮ್ಮ ದರ್ಶನಾರ್ಥವಾಗಿ ಬಂದಿರುವರು "
ಎಂದು ವಿಜ್ಞಾಪಿಸಿಕೊಂಡನು. ರಾಜನು ತಕ್ಷಣವೇ ಆತನನ್ನು ಕರೆದುಕೊಂಡು ಬರು
ವಂತೆ ಆಜ್ಞೆಯಿತ್ತು ಅಲ್ಲಿಯೇ ಇದ್ದ ನೇತ್ರಾಸನದಮೇಲೆ ಕುಳಿತುಕೊಂಡು ಬಂದಿರ
ತಕ್ಕವರು ಯಾರಿರಬಹುದೆಂದು ಯೋಚಿಸುತ್ತಿರುವಷ್ಟರಲ್ಲಿಯೇ ದೂತರನಡುವೆ ಇದ್ದ
೩೬------------------------------------
ವ್ಯಕ್ತಿಯು “ ಭೀಮಮಹಾರಾಜರಿಗೆ ಜಯವಾಗಲಿ'' ಎಂದು ಸಾರಿದನು. ವ್ಯಕ್ತಿಯನ್ನು ಕಂಡಕೂಡಲೆ ಭೀಮರಾಜನ ಮನಸ್ಸಿನಲ್ಲಿ ಯಾವುದೋ ಒಂದುವಿಧ ಸಂತೋಷವು ಉತ್ಪನ್ನವಾಯಿತು. ಆದರೆ ಅದಕ್ಕೆ ಸರಿಯಾದ ಕಾರಣವನ್ನು ಕಂಡುಹಿಡಿಯಲಾರದೆ ಹೋದನು. ವ್ಯಕ್ತಿಗೆ ಕುಳಿತುಕೊಳ್ಳಲು ಒಂದು ಆಸನವನ್ನು ತೋರಿಸಿ ಆತನ ಸ್ಥಿತಿ
ಗತಿಗಳನ್ನು ವಿಚಾರಿಸಲು ಆ ವ್ಯಕ್ತಿಯು ಸುವರ್ಣಪುರಾಧೀಶ್ವರನೆಂದು ತಿಳಿದುಬಂದ
ಕೂಡಲೆ ಭೀಮರಾಜನು ಆತನಿಗೆ ದಂಡಪ್ರಣಾಮವನ್ನು ಮಾಡಿ, " ಪ್ರಭುವೇ ! ತಪ್ಪನ್ನು ಮನ್ನಿಸಬೇಕು ನನ್ನನ್ನು ಪರೀಕ್ಷಿಸಬೇಕೆಂತಲೋ, ಅಥವಾ ಇನ್ನಾವಕಾರಣದಿಂದಲೋ
ತಾವು ಇಲ್ಲಿಗೆ ಏಕಾಕಿಯಾಗಿ ಬಂದಿರುವುದನ್ನು ನೋಡಿದರೆ ನನ್ನ ಮನಸ್ಸಿಗೆ ತುಂಬಾ ಅನುಮಾನವಾಗುತ್ತದೆ. ಬಾಲಕನಮೇಲೆ ಕೃಪೆ ಯಿಟ್ಟು ತಮ್ಮ ಆಗಮನಕ್ಕೆ ಕಾರಣ
ವನ್ನು ವಿಶದವಾಗಿ ತಿಳಿಸಬೇಕು ದೆ ನನ್ನಿಂದಾಗಬೇಕಾದ ಕಾರ್ಯವೇನಾದರೂ ಇದ್ದಲ್ಲಿ ಅದನ್ನು ಮಾಡಲು ಅಪ್ಪಣೆಯನ್ನೂ ದಯಪಾಲಿಸಬೇಕೆಂದು : ಬೇಡಿಕೊಂಡನು. ಅದಕ್ಕೆ ಸುವರ್ಣಪುರಾಧೀಶ್ವರನು ತನ್ನ ವೃತ್ತಾಂತವನ್ನೆಲ್ಲ ಆದ್ಯಂತವಾಗಿ ತಿಳಿಸಲು ಭೀಮ
ರಾಜನು ಸುವರ್ಣವುರಾಧೀಶ್ವರನಿಗೆ ಊಟ ಉಪಚಾರಗಳನ್ನು ಮಾಡಿಸಿ ಮಾರನೆಯ
ದಿವಸದ ದರ್ಬಾರದಲ್ಲಿ ತನ್ನ ಮಂತ್ರಿ ಸೇನಾನಾಯಕರಿಗೆ ಸೈನ್ಯವನ್ನು ಸಜ್ಜುಗೊಳಿಸ
ಬೇಕೆಂದು ಕಟ್ಟಪ್ಪಣೆ ಮಾಡಿದನು. ಮಾರನೆಯದಿವಸ ಚತುರಂಗ ಸೈನ್ಯಸಮೇತವಾಗಿ ಸುವರ್ಣಪುರಾಧೀಶ್ವರನೂ, ಭೀಮರಾಜನೂ ಹೊರಟು ಅವಂತೀಶನು ಆಕ್ರಮಿಸಿ
ಕೊಂಡಿದ್ದ ಕೋಟೆಗೆ ಮುತ್ತಿಗೆ ಹಾಕಿ ಕ್ಷಣಕಾಲದಲ್ಲೇ ವಶಪಡಿಸಿಕೊಂಡು ತಮ್ಮ ಧ್ವಜಪತವನ್ನು ಎತ್ತಿ ಕಟ್ಟಿದರು.
ಹಠಾತ್ತಾಗಿ ಶತ್ರುಗಳು ಕೋಟೆಯನ್ನು ಮುತ್ತಿದುದನ್ನು ಕೇಳಿ ಅವಂತೀಶನು
ಗಾಬರಿಬಿದ್ದನು. ಆಗ ತಾನೇ ಯುದ್ದ ಮಾಡಿ ತುಂಬಾ ನಷ್ಟಪಟ್ಟಿದ್ದುದರಿಂದಲೂ, ಯಾವುದೋ ಒಂದು ಚಿಂತೆಯಿಂದ ಕೊರಗುತ್ತಿದ್ದುದರಿಂದ, ಅವಂತೀಶನು ಕೌಲು ಮಾಡಿಕೊಳ್ಳಲುದ್ಯುಕ್ತನಾದನು.
ಏತನ್ಮಧ್ಯೆ ಅವಂತೀಶನು ರೋಹಿಣಿ ಮತ್ತು ಕರುಣಾಂಬೆಯರನ್ನು ತನ್ನ ಕಿರು
ಮನೆಗೆ ಕರೆಯಿಸಿ ರೋಹಿಣಿಯು ಕರುಣಾಕರನಿಗೆ ಸಿಕ್ಕಿದ ವಿವರವನ್ನೆಲ್ಲಾ ಮತ್ತೊಂದು
ಸಲಕೇಳಿ ಕರುಣಾಂಬೆಯನ್ನು ಕುರಿತು, " ಎಲೆ ತಾಯೆ, ಈ ಹುಡುಗಿಯೊಡನೆ ನಿಮಗೆ ಕಾಗದ ವೊಂದುಸಿಕ್ಕಿತೆಂದು ನೀವು ಹೇಳಿದರಷ್ಟೆ ? ದಯಮಾಡಿ ಆ ಕಾಗದ ವನ್ನು ನೋಡಲು ಕೊಡುವಿರಾ ?'' ಎಂದು ಕೇಳಲು ರೋಹಿಣಿಯು ತನ್ನ ಜೇಬಿನ ಲ್ಲಿಟ್ಟು ಕೊಂಡಿದ್ದ ಚೀಟಿಯನ್ನು ಅವಂತೀಶನಿಗೆ ಕೊಟ್ಟಳು.
೩೭---------------------------------------
ಅವಂತೀಶನು ಕಾಗದವನ್ನು ಮತ್ತೆ ಮತ್ತೆ ಓದಿನೋಡಿ ಕಿರುಮನೆಯಲ್ಲಿದ್ದ ತನ್ನ
ಚಿಕ್ಕ ಪೆಟ್ಟಿಗೆಯೊಳಗಿನಿಂದ ಬೇರೆ ಇನ್ನೊಂದು ಕಾಗದವನ್ನು ತೆಗೆದು ನೋಡಲು, ಅದರ ಬರವಣಿಗೆಯ, ರೋಹಿಣಿಯುಕೊಟ್ಟ ಕಾಗದದ ಬರವಣಿಗೆಯ, ಒಂದೇ ಆಗಿತ್ತು.
ಅವಂತೀಶನು ತನ್ನ ಪೆಟ್ಟಿಗೆಯಿಂದ ತೆಗೆದ ಕಾಗದವನ್ನು ರೋಹಿಣಿಯಕೈಗೆ ಕೊಟ್ಟು
ಓದ ಹೇಳಿದನು. ರೋಹಿಯು ಓದಿದಳು. ಅದರಲ್ಲಿ ಹೀಗೆ ಬರೆದಿತ್ತು :
ಚಕ್ರವರ್ತಿ ಸಾರ್ವಭೌಮರಿಗೆ
ತಮಿಗೂ ಮತ್ತು ಸುವರ್ಣ ಪುರದವರಿಗೂ ನಡೆಯುತ್ತಿರುವ ಈ ಪ್ರಾಥಮಿಕ
ಯುದ್ಧದಲ್ಲಿ ತಾವು ಸೋತು ಓಡಿಹೋಗುತ್ತಿದ್ದಾಗ ತಮ್ಮ ಪ್ರೀತಿಪಾತ್ರಳಾದ ಅಹಲ್ಯೆ
ಯನ್ನು ಹೊರಕ್ಕೆ ಕರೆದುಕೊಂಡುಬರುವುದು ಬಹಳ ದುಸ್ತರವಾಯಿತು. ನಾನು
ಹೊಟ್ಟೆಗಿಲ್ಲದೆ ಕಲ್ಯಾಣನಗರದಬಳಿ ಉದ್ಯಾನವನದಲ್ಲಿ ರೂಪುಮರೆಸಿಕೊಂಡಿರುತ್ತೇನೆ.
ತಮ್ಮ ಪುತ್ರಿ ಅಹಲ್ಯೆಯಮೇಲೆ ಕೃಪೆಯಿಟ್ಟು ಜಾಗ್ರತೆ ಬಂದು ಆ ಮಗುವನ್ನು
ಕರೆದುಕೊಂಡು ಹೋಗಬೇಕು. ಸಾವಕಾಶಮಾಡಕೂಡದು. ಛಳಿ ಮಳೆ ಗಾಳಿಗಳ
ಬಡಿತಕ್ಕೆ ಸಿಕ್ಕಿ ನರಳುತ್ತಿರುವೆನು.
ರಾಮಲಾಲ್, 1 ನೇ ಪಟಾಲಂ.
ಕಾಗದವನ್ನು ಓದಿಕೊಂಡು ಅದನ್ನು ಅವಂತೀಶನಿಗೆ ಹಿಂದಿರುಗಿಕೊಟ್ಟುಬಿಟ್ಟಳು.
ಅವಂತೀಶಟು ಕರುಣಾಂಬೆಯಕಡೆಗೆ ತಿರುಗಿ " ಎಲೌ ತಾಯೆ ! ಈ ರೋಹಿಣಿಯನ್ನು ನೋಡಿದರೆ ನನ್ನ ಪ್ರೀತಿಪುತ್ರಿ ಆ ಅಹಲ್ಯಯ ಜ್ಞಾಪಕವು ಪದೇಪದೇ ಬರುತ್ತಿರುವುದು.
ಆ ಅಹಲ್ಯೆಯ ಕತ್ತಿನಲ್ಲಿದ್ದ ತಾಯತಿನೊಳಗೆ ಕೆಲವು ವಿಪ್ರವಾಕ್ಯಗಳನ್ನು ಬರಸಿ ಕಟ್ಟಿ
ದ್ದೆನು, ರೋಹಿಣಿಯ ಕತ್ತಿನಲ್ಲಿರತಕ್ಕ ತಾಯಿತಿಯೊಳಗೇನಿದೆ. ಅದನ್ನು ತಾವು ಕಟ್ಟಿ
ದಿರಾ ? ಇಲ್ಲದಿದ್ದರೆ ಅದರೊಳಗೇನಿರುತ್ತದೆಂದು ತಾವು ದಯವಿಟ್ಟು ತಿಳಿಸಿದರೆ ನನ್ನ ಅನುಮಾನವು ಸುಳ್ಳೇ ಅಧವಾ ದಿಟವೆ? ಎಂಬುದು ವ್ಯಕ್ತವಾಗುತ್ತದೆ' ಎನ್ನಲು ಕರು ಣಾಂಬೆಯು ರೋಹಿಣಿಯ ಕತ್ತಿನೊಳಗಿದ್ದ ತಾಯತಿಯನ್ನು ಬಿಚ್ಚಿ ತೆಗೆದು ಅದರೊಳ
ಗಿದ್ದ ಸಣ್ಣ ಚೀಟಿಯನ್ನು ತೆಗೆಯಲು ಅವಂತೀಶನು ಹೇಳಿದ್ದಂತೆಯೇ ಕೆಲವು ವಿಪ್ರವಾ
ಕ್ಯಗಳು ಅದರಲ್ಲಿ ಬರೆಯಲ್ಪಟ್ಟಿದ್ದಿತು, ಅದನ್ನು ನೋಡಿದ ತಕ್ಷಣದಲ್ಲಿಯೇ ಅವಂತೀ
ಶನು ರೋಹಿಣಿಯನ್ನು ತಬ್ಬಿಕೊಂಡು ಮುದ್ದಾಡುವುದಕ್ಕೆ ಮೊದಲುಮಾಡಿದನು,
ಕರುಣಾಂಬೆಗಂತೂ ಎಲ್ಲವೂ ಸ್ವಪ್ನ ಭಾಸವಾಗಿದ್ದಿತು.
---------------
೩೮---------------------------------------------
ನವಮಲಹರಿ.
ಇತ್ತ ಕಡೆ ಭೀಮರಾಜನೂ, ಸುವರ್ಣಪುರಾಧೀಶ್ವರನೂ ಕೋಟೆಗಳನ್ನೆಲ್ಲಾ ಸ್ವಾಧೀನಪಡಿಸಿಕೊಂಡು ಜಯಭೇರಿ ಹೊಡೆಸುತ್ತಿರುವಾಗ ಅವಂತೀಶನ ಮುಖ್ಯ
ಮಂತ್ರಿಯು ಸುವರ್ಣಪುರಾಧ್ಯಕ್ಷನ ಬಳಿಗೆ ಒಬ್ಬ ರಾಜದೂತನ ಕೈಯಲ್ಲಿ ತಾವು ಕೌಲುಮಾಡಿಕೊಂಡು ಅವರವರ ರಾಜ್ಯಗಳನ್ನು ಅವರವರಿಗೇ ಕೊಟ್ಟು ಪರಸ್ಪರ ಸ್ನೇಹಿ ತರಾಗಿ ವರ್ತಿಸಲು ಅಭಿಪ್ರಾಯಪಟ್ಟಿರುವುದನ್ನು ಹೇಳಿಕಳುಹಿಸಲು ಅದೇಪ್ರಕಾರ
ಕೌಲಿಗೆ ಸುವರ್ಣ ಪುರಾಧೀಶನು ಒಪ್ಪಿ ಯುದ್ಧವನ್ನು ನಿಲ್ಲಿಸಿಬಿಡುವಂತೆ ಸೈನಿಕರಿಗೆ ಆಜ್ಞೆಯಿತ್ತನು. ಮಾರನೆಯ ದಿನ ಅವಂತೀಶನು ಎಲ್ಲರಿಗೂ ರಾಜಯೋಗ್ಯವಾದ ಔತನ
ವನ್ನು ಮಾಡಿಸಿ ಔತಣವಾದಮೇಲೆ ಸಭೆಯಲ್ಲಿ ನೆರೆದಿದ್ದ ಅನೇಕ ರಾಜರುಗಳು, ಪಂಡಿ
ತರು ಮೊದಲಾದವರೆದುರಿಗೆ ತನ್ನ ಪುತ್ರಿಯು ತನಗೆ ಲಭಿಸಿದ ವಿಷಯವನ್ನು ತಿಳಿಸಿ
ಅದಕ್ಕಾಗಿ ದೇವರನ್ನು ಕೊಂಡಾಡಿ ಸಭೆಯನ್ನು ಮುಕ್ತಾಯಮಾಡಿದನು. ಮತ್ತು
ಮೊದಲೇ ತನ್ನ ಚಾರರೆಲ್ಲರಿಗೂ ಆಜ್ಞೆ ಮಾಡಿದ್ದಂತೆ ಎಲ್ಲರೂ ಹುಡುಕಿ ಕರುಣಾಕರ ದಯಾಕರರನ್ನು ಆರೋತ್ತಿಗೆ ಸರಿಯಾಗಿ ಕರೆದುಕೊಂಡುಬರಲು ಅವರಿಬ್ಬರನ್ನೂ
ರೋಹಿಣಿ ಕರುಣಾಂಬೆಯರನ್ನೂ ಸುವರ್ಣ ಪುರಾಧ್ಯಕ್ಷ, ಭೀಮರಾಜರನ್ನೂ ಮೊದಲೇ ಅಣಿಮಾಡಿದ್ದ ಒಂದು ಚಿಕ್ಕ ಮನೆಗೆ ಕರೆದುಕೊಂಡು ಹೋಗಿ ಎಲ್ಲರೆದುರಿಗೂ ತನ್ನ
ಮಗಳು ಅಹಲೈಯು ಪುನಃ ಲಭಿಸಿದ ಸಂಗತಿಯನ್ನು ತಿಳಿಸಿದನು. ಎಲ್ಲರ ಕ್ಷೇಮ ಸಮಾಚಾರಗಳೂ ವಿಚಾರಿಸಲ್ಪಟ್ಟನಂತರ ಭೀಮರಾಜನು ಸುವರ್ಣಪುರಾಧ್ಯಕ್ಷನ
ಜೇಷ್ಠ ಪುತ್ರನೆಂದೂ, ರೋಹಿಣಿಯು ಅವಂತೀಶನ ಪುತ್ರಿಯೆಂದೂ ಗೊತ್ತಾದ ಬಳಿಕ ರೋಹಿಣಿಯನ್ನು ಭೀಮರಾಜನಿಗೆ ಕೊಟ್ಟು ವಿವಾಹಮಾಡಲು ಪ್ರಶಸ್ತವಾದ ಶುಭ
ಲಗ್ನವನ್ನು ಗೊತ್ತು ಮಾಡಿಸಿದರು. ಗೊತ್ತಾದ ದಿವಸ ಮದುವೆಯ ಆಗಿಹೋಯಿತು. ಕರುಣಾಕರನು ಅವಂತೀಶನ ಆಸ್ಥಾನದಲ್ಲಿ ಪ್ರಧಾನಮಂತ್ರಿಪವರನಾದನು. ದಯಾ
ಕರನನ್ನು ಭೀಮರಾಜನು ತನ್ನ ಬಳಿ ಮಂತ್ರಿಯನ್ನಾಗಿ ನೇಮಕಮಾಡಿಕೊಂಡನು.
ಪಾಠಕಮಹಾಶಯ! ಆವಂತೀಶನಿಗೆ ರೋಹಿಣಿಯ ಗುರುತನ್ನು ಮಾಡಿಕೊಟ್ಟ ಸುವರ್ಣಪುರಾಧ್ಯಕ್ಷನಿಗೆ ಭೀಮರಾಜನ ಸಂಬಂಧವು ಹೇಗೆ ಲಭಿಸಿತೆಂದು ಕೇಳ
ಬಹುದು. ಭೀಮರಾಜನ ಜನನಕಾಲದಲ್ಲಿ ಈತನ ಮಲತಾಯಿಯು ತನ್ನ ಸಂತಾನಕ್ಕೆ ಮುಂದಕ್ಕೆ ಪಟ್ಟ ಕಟ್ಟುವ ಸಂಭವವು ತಪ್ಪಿಹೋಗಬಹುದೆಂಬ ಸಂಶಯದಿಂದ ಭೀಮ
೩೯--------------------------------------------------------
ರಾಜನನ್ನು ಒಂದು ತೊಟ್ಟಲಿನಲ್ಲಿ ಮಲಗಿಸಿ ಎಲ್ಲಿಯೋ ಒಂದು ಹೊಳೆಯಲ್ಲಿ ಬಿಟ್ಟು
ಬರುವಂತೆ ತನ್ನ ಕಡೆ ಆಳುಗಳಿಗೆ ತಿಳಿಸಿ ಅವರಿಗೆ ಬಹಳವಾಗಿ ಹಣವನ್ನು ಕೊಟ್ಟಿದ್ದಳು. ಅವರು ಅದರಂತೆಯೇ ಹೊಳೆಯಲ್ಲಿ ಬಿಟ್ಟು ಬಂದಿದ್ದರು. ಒಂದು ದಿವಸ ಭೀಮರಾಜನ ಸಾಕುತಂದೆಯು ಕಾಡಿಗೆ ಬೇಟಿಮಾಡಲು ಹೋಗಿದ್ದು ತುಂಬಾ ದಣವಾಗಿದ್ದುದರಿಂದ ಹೊಳೆಯಬಳಿಗೆ ಬಂದು ನೀರನ್ನು ಕುಡಿದು ತನ್ನ ತೃಷೆಯನ್ನು ನೀಗಿಕೊಳ್ಳುವಷ್ಟರ
ಲ್ಲಿಯೇ ನದಿಯ ಪ್ರವಾಹದ ಮಧ್ಯದಲ್ಲಿ ತೇಲಿಕೊಂಡು ಬರುತ್ತಿದ್ದ ತೊಟ್ಟಿಲನ್ನು ನೋಡಿ
ಅದೇನೋ ಒಂದು ವಿಶೇಷವಿರಬಹುದೆಂದು ಊಹಿಸಿ ತನ್ನ ಬಳಿಯಲ್ಲಿದ್ದ ಅಂಬಿಗರಿಗೆ ತೊಟ್ಟಿಲನ್ನು ತರುವಂತೆ ಆಜ್ಞಾಪಿಸಲು ಅವರು ಆಜ್ಞೆಯನ್ನು ಶಿರಸಾವಹಿಸಿ ಈಜು
ಬಿದ್ದು ತೊಟ್ಟಿಲನ್ನೂ ಮತ್ತು ಅದರಲ್ಲಿದ್ದ ತೇಜೋವಂತನಾದ ಮಗುವನ್ನೂ ಸುರಕ್ಷಿ
ತವಾಗಿ ದಡಕ್ಕೆ ತಂದು ದೊರೆಗೆ ಅರ್ಪಿಸಿದರು. ತನಿಗೆ ಮಕ್ಕಳಿಲ್ಲದೆ ಇದ್ದುದರಿಂದ
ಭಗವಂತನು ಕರುಣಿಸಿ ದಯಪಾಲಿಸಿದ ಮಗುವನ್ನು ತನ್ನ ಮಗನೆಂದೇ ಭಾವಿಸಿ ಊರ
ನ್ನೆಲ್ಲಾ ತೋರಣ ಮೇಲ್ಕಟ್ಟುಗಳಿಂದ ಅಲಂಕಾರಮಾಡಿಸಿ ಬಹಳ ವಿಜೃಂಭಣೆಯಿಂದ ಪುತ್ರೋತ್ಸವವನ್ನು ಮಾಡಿಕೊಂಡನು. ಭೀಮರಾಜನಿಗೆ ಕೈಕಾಲದಲ್ಲಿ ವಿದ್ಯಾಭ್ಯಾ
ಸಮಾಡಿಸಿ ಸ್ವಲ್ಪ ಕಾಲದಲ್ಲೇ ಸಕಲವಿದ್ಯಾಪಾರಂಗತನನ್ನಾಗಿ ಮಾಡಿಸಿ ಆತನಿಗೆ ರಾಜ್ಯಭಾರವನ್ನು ವಹಿಸಿ ತಾನು ಪರಲೋಕವನ್ನೈದಿದನು.
ಭೀಮರಾಜನನ್ನು ಹೊಳೆಯಲ್ಲಿ ಹಾಕುವಂತೆ ಅಪ್ಪಣೆಮಾಡಿದ ಆತನ ಮಲ
ತಾಯಿಯು ತನ್ನ ಪ್ರಾಣೋತ್ರ ಮಣಕಾಲದಲ್ಲಿ ತಾನು ಮಾಡಿದ ಈ ಘೋರಕೃತ್ಯ ವನೊಪ್ಪಿಕೊಂಡು ಪ್ರಾಣಬಿಟ್ಟಳು.
ಭೀಮರಾಜನ ಸಾಕುತಂದೆಯು ಈತನು ತನಗೆ ಹೇಗೆ ಸಿಕ್ಕಿದನೆಂಬುದನ್ನು ಬರೆ
ಸಿಟ್ಟಿದ್ದು ತಾನು ಪ್ರಾಣಬಿಡುವಾಗ ಭೀಮರಾಜನನ್ನು ಹತ್ತಿರಕ್ಕೆ ಕರೆಯಿಸಿ ಎಲ್ಲಾ ವಿಷಯವನ್ನೂ ಆತನಿಗೆ ಸಾಂಗವಾಗಿ ತಿಳಿಸಿದ್ದನು. ಅದೇ ಪ್ರಸ್ತಾಪವು ಅವಂತೀಶನ ಕಿರುಮನೆಯಲ್ಲಿ ಬರಲು ಕಡೆಗೆ ಸುವರ್ಣಪುರಾಧ್ಯಕ್ಷನಿಗೂ ಭೀಮರಾಜನಿಗೂ ಇದ್ದ ಸಂಬಂಧವು ವ್ಯಕ್ತವಾಯಿತು.
ಈ ರೀತಿ ಸುವರ್ಣಪುರ, ಅವಂತಿಪುರದವರಿಬ್ಬರಿಗೂ ಅನ್ಯೂನ್ಯ ಬಾಂಧವ್ಯ ಬೆಳ
ದುದರಿಂದ ಒಬ್ಬರೊಬ್ಬರಿಗೆ ಆಗಾಗ್ಗೆ ನಡೆಯುತ್ತಿದ್ದ ಕಲಹವು ತಪ್ಪಿ ಉಭಯಪಕ್ಷ
ದವರೂ ಸೌಖ್ಯವಾಗಿದ್ದರು.
ಸಂಪೂರ್ಣಂ.
PRINTED AT THE ROYAL PRESS, MYSORE-1916.
=======================================
“)ಈ 7 “)೦ಫಮಾಲೆಯಲಲ್ಲಿ ಪ , )ಕಟವಾಗಿರುವ ನವೀನ ಗ = ಕ್ರಿಸ್ಲರ್ £ \ . ನೀತಿಚೊ 1 . ಮೃಶ್ಕುಪರೀಕ್ಸ್ 0-~-²--0 | 14. ನೀತಿಜೋಫಿನಿ ± . ದೇವಾನುಗ್ರಹ (--- | . 17 . ಹರಿಣಾಕ್ಸಿ {)-1--೧ › . ಏನೋ ಆಗಿಹೋಖ್ಯಿತು ೪--೬-0 | 35 . ಕ್ಲಾ ತರತೀಬ {)- £%-€ 4 . ವಿಲಳ್ಸ್ಬಣ ದೈವಘ`ಟನೆ ‹)-4- | 1% ಬಿಲ್ಲು ಗಾರ ಮಳ್ಲು .- $ .. 0-8} | . 0 . ರನಾಮಭಾಒಂಗೆ --1 |] 0 . ಸುಮನೋರವೊ ೧ . | . 38೬ . ವಿಶಾಲ್ಯಕ್ತಿ ()²®-0 [ .. ಹುಮಾರಕಧೀಮುಗಂತ್ರ ೧-೬ | . ಆಳೆ . ಹರ ಮಲ್ರಳು ಮೊಲ ೪-೬ - ಶ, ಷ ಸ ,, ೧೧೪೫೧0 | ೪1 ಸ್ರೆ 5 ಒಜೃಂದಾವನ $ ಮಾಲಿನೀ ೧-೬~ | . 4 . ಡಂದಿಕಾವಿಬಯ ೪-1) \0 ಫರೇಮವಪಿವಾನೆ {)--} . | 58 . ನನ್ನ ಸಂಸಾರ ಗ [ 1 . ಸುಲೋಡನಾ {~ | 51 . ಮಧುಸೂದನ {೬-.|-{} 18 ನದಾಹಾರವಿವೇಡನೆ ೪-5) | % ೪-5-{) 18 ವಿನೋದಚಂದ್ರ {)-- | 5 . ವನಾಯಕವಿಒಯ )-- 1. . ಡಶಾಯಿತಿ 0-0 | .. 8 ಕ್ರೋಸಇ {\,. 15 . ಕರಾವಲಂಬಸ್ತವ 9-೬-0 | 80 ಸೊಬಗಿನಬಳ್ಳಿ ೬-0 ಇನೌ ಳ್ಳಿ ಗೆ ಸ್ಟಾಟ್ ಸ್ಟ್ + = ಹ ಯೂತ್ ಡೆ ಯಂ ಈಸ್ 5 - . 1 | | =ಇ‰‰ ² ೪ ಇಂ 8 ಆಸ್ ... ಕ್ರೂಕ್ಸೆ \ 7 ,ಆಗ . ಐ ೨೨57 ೨೩, ಪ ಕ ) ೨ ವ್ಯ [ಕ ೬1) ೩, ² $ ಈ ಆ ೬೪)~=ಆ8 ಓಸ್ಲಿಟ್ಜಿಲ್ಲ ಈಟ್) ಆ ಲ ಕಿ 54% => ಓಟ) _, ನ 5 371 ನಿ ` »ನ ವೆಂಕಟರಮುಣಕಾನ್ತಿ ) “ಹ ವ್ರಿಸೂರು.
5»ವಂ೦ಬರೀನ೦ಗರಹ ನಂ೦ಬರು ೩೦ ನ ನಾ ಯರ ಕ ಛಿ ಐ ಉರರಿ ವೆ ೦ # ವ ನು ಬ್ರಿ ಯ್ಯ, ಬೆಲೆ 4 ಆಣೆ. 0೧ ೧ 4 «,
- ೦ ಕ ಇ {^ ೩7
ಔ ಥಿ ಈ . ಗ್ವೌ ಈ ಗಣಪತಿಯ ಮಹಿಮೆಯಲ್ಲಿ 84 ಅಧ್ಯಾಯಗಳಿರುವುವು. ಇದುವರೆಗೂ ಈ ಗಣಪತಿಯ ಮಹಿಮೆಯು ಕನ್ನಡದಲ್ಲಿ ಪದ್ಮ ರೂಪವಾಗಿ ಪರೆಕಟವಾದಂತೆ ಕಾಣಿಸಲಿಲ್ಲ. ಈಗ ಗಣವೆತಿಯ ನ್ನು ಸರ್ಯರೂ ಕಾರ್ಬಾ ರಂಛದಲ್ಲಿಯೇ ಅರ್ಚಿಸೆ:ತ್ತಿರುವುದು ಸುಶ್ರಸಿದ್ಧ ವಾಗಿದೆ. ಹೀಗೆ ವಿನಾ ಯ˜ಕನ ಅವಕಾರ ಕಥಿಯನ್ನು ಸರ್ರರೂ ಕಿಳಿಯೆಬೇಕಾದುದು ಬಹಳ ಅವಕ್ಸಕವಾದ ಕಾಕಣ ಇದನ್ನು <ನ್ಟ್ನಡದಲ್ಲಿ ಬರೆದೆನು. ಪ್ರಕಾಶಕ್ಕೆ ಅವಕಾಶವಿಲ್ಲ್ತರಿ ಬಹಳ ದಿನ ಹಂದಲೂ ಹಾಗೆಯೇ ಇದ್ದ ಈ ಗ್ರಂಥವನ್ನು ಮೊದಲು ವೈಸೂರು ನಾರ್ಕಲ್ ಸ್ಕೂ ಲಿ ನಲ್ಲಿ . ನಮಗೆ <ನ್ಟ್ರಡ^ ಗ್ರಂಥವನ್ನು . ಬೋಧಿಸುತ್ತಿದ್ದು, ಪ್ರಕೃತದಲ್ಲಿ ಮದ್ರಾಸ್ ಗೌರ್ನ್ನ ಮೆಂಟ್ ಕನ್ನ ಡ ಟ್ರಾನ್ಸ್ಲೇಟರಾಗಿರುವ ವು|| ರಾ|| ಬಿ. ರಾಮರಾವ್ ಗ್ಕಿಸಕಿ . ಸ್ಕಿ. 1. ೭, ರ. ಯವರು ದಯವಿಟ್ಟು ಪರಾಂಒನಿಸಿ ನನಗಾಗಿ ಕೊಂದಕೆ ಯನ್ನು ಶೆಗೆದುಕೊಂಡು ಅಧ್ಭಾಗವನ್ನು ಪ್ರೈಕಾಶಳ್ಳೈ ಬಕುವಂತೆ ಅವಕ್ಟಾ `ಇಡಿಳೊಟ್ಟ ರಲ್ಲದೆ, ಈ ಫುಸ್ತಕಳ್ಳೆ . ವಿನಾಯಕವಿಚಯವೆಂಬ ಹೆಸರನ್ನು ಇಟ್ಟು ಎ... ... ,ಐ0ಗ್ಕಾರೆ, . ಅದಕ್ಕಾಗಿ ಆ ಮಹನೀಯೆರಿಗೆ ಬಹಳ ಕೈತಬಜ್ಸ್ನ ನಾಗಿರುವೆತು. „. .. |, ಮುಂಜೆ ಈ ಗ್ರಂಥವನ್ನು ಆಮೂಲಾಗ್ರವಾಗಿ ನೋಡಿ ಸಕೋಧಿಸಿದ ಮ| ರಾ|| ಆರ್ ಶ್ರೀನಿವಾಸರಾಯರ ಸಹಾಯವು ಚಿರಸ್ತ್ರರಣೀಯವಾಗಿರುವುದು. ಮೊದಲಿಂದಲೂ ನನ್ನ ಮೇಲೆ ಪೊರ್ಣವಿಶ್ನಾಸವನ್ಷಿಟ್ಟುಪರೇಶಿಸಿದ ಕ್ಯಾಮ ಗೊಂಡ್ಡು ಎ. ವಎ.ಸ್ಯೂಲ್ ಸಂಸ್ಕ್ರ ವೇ|| ಬ್ರ|| ಶ್ರೀ|| ಚಾರ್ಯರ ಅಮೋಘವಾದ ಅನುಗ್ರಹವೇ ಸಕಲ ಶ್ರೇಯಸ್ಸಿಗೊ ಕತಿರಣವಾಗಿರುವು ದೆಂದು ತಿಳಿನಲು ಸಂತುಷ್ಕೆನಾಗಿರುತ್ತೇನೆ. ಇದನ್ನು ತಮ್ಮ ಅಮೋಘವಾದ ಕಾದಂಬರಿ ಸಂಗ್ರಹ ಮಾಸಪಶ್ರಿಳೆಯಲ್ಲಿ ಸ್ರಕಟಿಸಿ ಸಖಾಯಮಾಚಿದ ವೇ || ಚಾ || ವೆಂಕಟ ರಮಣಶಾನ್ರಿಗಳಿಗೆ ನಾನು ಕೃತಬ್ಸ್ ನಾಗಿದೇನೆ. _ *ನ್ನ್ನ ಡಭಾಷಾಭಿಮಾನಿಗಳೆಲ್ಲ್ಲರೂ ಇದಳ್ಳು ತ್ತೇಜನವನ್ನಿತ್ತು ಪ್ರೋತ್ಸಾ ಹಿಸುವರೆಂದು ನಂಬಿರುವ ತಮ್ಮ ವಿಥಯನಾದ ವೆಂಕಟಸುಬ್ಬಯ್ಯ ಆನೆಳಲ್ |1 ಆನಈಲ್ ರ ತಾ|| \0-8-೬016 | ಮುಖ್ಯೋಪಾಧ್ಯಾಯ, ಆನೆಳಲ್ , ಕರ್ಣಾಟಕವಾಓಟಕಾಲಾ.
ಕಂ|| ಗುರುವೇ ಬೊಮ್ಮೆ ಗುರುವೇ! ವ|| ವರನಿಷ್ಣುವೆ ನಿಪ್ತ || ಸಾಳ್ತಾ ಕ ದಜನ್ಫ| ಕರಿದಾಗಕುಡರೆಣ ಮೆರೆವುದೊ ಮೈಸರ್ನಾ ಡೋಳ್ ವರಶಿವಗಂಗಾಭಿಧಾನ ಯಾತ್ರಾಸ್ಕ್ರಲಮೇಂ || ಕರೆವರ್ ದಳ್ ಣಕಾಶೀ| ಪುರಮೆಂದವನೀಧರಮಂಕಕುದ್ಗಿರಿಯೆಂಬರ್ `ಅದರೆಡೆಯೊಳ್ಲಾವನ ಮೆನ| ಲದುನೆ ಈರಂ ತ್ಯಾಮಗೊಂಡ್ಲ ವೆಂಬಾಪೆಸರಿ || ಪಣರೇಂ ಮೆರೆಗ್ಮೊ ಸುಜನಾ | ಸ್ತದಮಾಗಿರ್ಫುದು ಸಮನ್ತವಸುಸಂಜಯದಿಂ ಆ ಪ ಆಸ ಶ್ರೀಕಂನೇಶ್ವರ ಭಧಳುತಂ | ಶರಿಕಂತಾಹ್ರಯ ಮಹೀಸುರಂ || ಶ್ರೀಕರ ನಾಕಕರುಣಾಶಕನದೆಂಕು ಮೆರೆದನೊಜಸನದಿತಿ ನನರಿದುಂ ಪರಮೌದಾರ್ಯಂಗಳೊಳಗೆ ಪಾಸಟಿಯಿಲ್ಲ 9 |] ನೆರೆಮೆರೆವಾತನ ತನಯಂ | ವರನಂಜುಂಡಯ್ಯ ನೆಂಬ ಧೂಸುರನೆಸೆನ್ ವರನಂಜುಂಡಯ್ಯಸುತಂ| ವರಗುರುಜರಣಾರವಿಂದಮಧುರೋಲಂಬಒಂ || ಬರಿದಂ ವೇಂಕಟಸುಬ್ಬಂ| ವರವಿಫ್ನಶ್ವರ ಔರಿಶ್ರಮಂ ಷಟ್ಕದಿಯೊಳ್
ತಿ $,, , ೪ನಮಃ ದಿಯೆ ವೆಂಬ ಛ ನೆಕ ನ ವೆರಿಪಿ೦ ವ್ ಸೂ .. . ಸ೨ತನ 5ನವನಾಲಿ, ೭ - ರನ ವಿಶಕನಿದಿ ಪ್ರವನ ವಿಘ್ನ ಕ,ರಯಚಲಿತವನು ಭಾ|| =|| ಗರುಡಗಮೆನಂಗೆರಗುತಲಿತಾಂ | ನರಗೆ ವಂದಿನಿ ಪರಮವುರುಷಗೆ | ²ಬದುವೂಜಿಯನೆಸಗಿ ವಾಣ^ಯಜಚರಣಳಲಿನದಿಸಿ || | ವರದವೇದವ್ಯಸಗರ್ಚಿನಿ | ಢರೆಯೊಳಲ್ಲಂ ಬಳ ಕೆವಿಜಯವನೂರೆಯೆಲೀಸಮದು || ೧ || ಶಂಭು ! 5೭4 ಈ ! 1 ಪಕವ ಇಸ ಪರಮಡೇವನೆ ! | ಜ ರಿಚಿವಿನು ತನೆ | ದಂಭರಹಿತನಿ ! ನನಗೆ || ಸಂವಂಗಳ ಕೇಳು ಚಿತ್ತಂ | ತಾವಿ | ನರಂಧವಾಂತಿಹದೆಂದುಪೇಳ ನುತಿವಗೆಷಣ್ಳು ಖನು || ೨ || ದುರಶರಾಶಕಿಯನೋಡಿಸುತ್ತಿಹ | ಪರಮವಾವನಶಶ್ತಶಂಕರ | ವ ಸತ್ತ ಘಾವಳ೪ಯ || ವರಗತಿಪ್ರದಕ್ಬವದೈಷ್ಠ್ಯವ ಸತ್ಸರಫ್ ಕರಮೆಕೇಳೆನು | | ನರರಕಿಲ್ಲಿ ಮನೋಡಿಳುಮೆಂದು ನೇಳೆದನು @ || 4೬ || ಪರಮಶಂಘಧುವೆ | ಡಿತ್ತಮೆನ್ನಯ | ವರಗಗೇಶನ | ನರಿಯಲಾಕಿಸುತಿತುದು 6ಶ್ತಕನು || ಧರಿಯೊಳಾಜರಿಸಿರ್ದಳೈತ್ಯವ | ಭರದೊಳಾಲಸಿ | ದು £ನ್ನ ಐ? ದಣನು || ೪ ||
ಬಂದು | ಕಂದ ರೇಳೈನು ಈಳುಸಂತಸ | ದಿಂದ ಒನಕನು || | ನಂದವನು ತಾಂ ಮಾಲಳ್ಪುದದನಿಂ | ಸುಂದರಾಂಗೆ ! ನಾವಿಧಾನರೊಳ೪?ಲಿಸೀತರಿಯೆ || ೫4 || ಅಲಯಿ, ನಿರ್ಗೆಣ £ಲ್ನಳಲ್ನು | ಆತ್ತ, ,ರೂಪನು | ಒರ್ವ ನ್ನ ೨೪ ಭೂ ಪರಿಸವಾಶಳ್ರಿತಸತ್ತನೀಶನು ೪ಕೃಪರವಶನು || ಸ್ತರ ಸೇದೇಣ್ನು | ಪರಮತಾನೆನೆ ವಿಷ್ಣಲುಶಂಳರ | ಸುರಕವಿರಾರ್ಚೆತನಾಗಿ ಮತಿವೆನು ಕೋ ಕಯೊ || + || ಪ್ರಳಯ ಲೋಕಂ | ಒಳಮಳಳ ರೆ ಮುಂದಿನೋಡು | ತ್ರಳುಕುತಲಿಚಿದೂ ಪಧರನಾರೇವನರೆಯೊಳಗ || ಒರ್ವನಿವ-ದಿತಕ್ತುದಳ್ತದು | ಳಂಜಿಳೆ | ಬತ್ತ್ಳ ವ || | ಮೊಸಿ ಒನಿದೆನೆನುತ್ತೆಒನಿಯಿಸಿ ಟಿ || ೨ || ೬ ೨ ಜಾತನು | ಮಿರದೆಮೂರುಂಗುಣದೊಳೊಗೆದರು | ನೆಕೆರಜೋಗುಣಕಂದುಸಂದುದು ಬೊವು |] ಪನಿದುದಾಗೆಮು ಕಾಸ್ತವವೇದೆಗೆ | ರೇವದೇವೆನು | ಹರಿಸದಿಂದಲೆವೇದಶಾಸ್ತ್ಯತ±ರಾಣಪಾತಗಳ || ೯ | ವಿಳಿ ತತೆ,ವೆವಿ “ =೫ ,ವೆ ಔಗಿರೆ ² ² 81 ಈ ಆ˜=೫ ಇ ಸೇವನು | ಒಳಿ 5 „ನರೆ ಕೇಳಲು ² 4 ೩-4 ಓ || | ಈಳಲನಾಬಿದಿ ಕರವ ಪಸರಿಸ | ಒಳಿಕೆಬಂದುವು ವಿಘ್ನ ನವಹಗಳಾಗಳೇನಂಬೆ || ೧೦ || ಅಲರೊರೊರ್ರನು ಬಿದಿಯಸೆಳೆದನು | ತಟೆಯ ಕೂದಲನೊರ್ರನೆಳೆದನು | ವಲರುಮೀಕರಮಾಗಿ ಕೂಗಿದರು | | ಕೆಲದೆ | ನಡಿಯ ನನ ² || ೧೧ ||
ಕಾದಂಬರಿ ಸಂಗ್ರಹ ಫ ಎಡರನೆಸಗುತೆಕಂಡುಕಾಣರೊ | ಲಡಗಿಕೊಳ್ಳು ವಭೂತರಾಶಿಯ | ನಡಿಗಡಿಗೆ ಕಾದುತ್ತೆ ಲೆದರುತೆಚಿಂತೆಯೊಂದಿದನು || ಯು | ಈ ತೆ ಎಡ ತರದೇಶಕೆ ? ದೇವನಾಜ್ಞೆ ವಿಡದ್ರೆಶನ್ನ ನೆ ಬಾಧಿಗೆಯ್ಸುವು | ಖಡೆತಿರೆ ಮುಡುಗುವಂತಾಯ್ತಾ ಗಳನೆಂದೊರಿವೆನೀಪಲಯ || ೧.೨ || | ದಂರುಕನಗೆಸಹಾಯವಪ್ತರು | ದಾರಿ ಶೋರಿನಿ ಸೃಷ್ಟಿ ಸಂದೊರದಜನುನವೈಗರೆದ || ಬೇರೆ ದಾರಿಯ ಕಾಣೆನೆಂದಿಗೆ | ಬಾರಿಸಲ್ಪು ಹುದದನೊರೆದೊಡೀ | ಧಾರುಣಯೊಳಾಜರಿಸಿ ಸೌಮ ಇರಿಸಿ ಸೌಮ ದೊಳಿ ²೯ನೆಂದೊರೆದೆ || ೧೩ || ದೆಜಿಂತಿಸೆ ತಕಂಟಬಾತನು | ಈಗೆ | - ಯುಕೊ7 ಓ ಔ ವರವಮನ್ನೆ || ಚರಣಕೆರಗುತೆ ಸೇಳ ನಾಕಗೆ | ಗುರುವೆ ! | ನಳ್ಲದೆ ×ಳೈದಿನ್ನೇಗು || ೧೪ || ಬಿಡದೆಮೌಳ್ತುವು ಧೂತರಂಇಶಿಗೆ | `ಇಡರೆ ಸೃಗಿ [\˜ನ್ನ ಸಾಹಸ | ಸಿತ್. ಲ . | ೫ | [೫1 | ಸಿಡಿದಕನಿರ್ಗ ದ ವ್ಮಿವೆಲ್ತದೆ | ಇದಶಾಸ್ತ್ರಂ | ತಡೆವೆಮಾಡೆಲ್ಡೆನ್ನನೀಪೌನುಂಗೆ ಗ್ರವು || ೧೫ || ನಿಂದು | ತಂದುವೇವನು ಸುತಗೆದಯೆಯಂ | ಒಂದು ಸೇಳ್ಬನು ಬಿದಿಗುದನಿಯವ 7 ನಾರಗೆಯ || @ ಈ% ೩. ಔ ಸ- 5೩೫ ಕಂದಕೇಪ್ಪಿವಳ್ರತುಂದೆಗ | ನಿಂದು ಮಂತ್ರ | ವು ವಿಘ್ನ ವಿನರಗಳಂದು×=ನ»ರದನು || (೧೬ || ಇದುವೆ ವುಂಕ್ರವು ಸಿದ್ದಿದಾಯಕ | ಮಿರುವೆಮು²ಲವು | £ ಆನಿ ` ಹ 5 ಆವ ಇಗ ಸ್ಥ ೨ || ಪೆಲನು ಹಾರೆ ವೆ ಒಳ ಈವಾ ನು 3 ಸ್ಪೈನಿ ಕ್ಲೆ ವೆ ಪು ೪ ೩ ೪ ೨ ವಿದಿಯೆ ! ಗೇಳ್ಸೆನು ನಿನಗೆ£ನಿಮಜ | ವದನ ಮಂತ್ರದಸಾರವಿದನಾಂ | ಮುದದೆ || ೧೩೭ || ಪರಮಮಂತರವನಂಕರಂಗಗೊ |3ರುಳುಳಾಜ್ದರೆಯೊಳಗೆವತಸು | || ನಿರುತದಿಂದಲಿ ನಮಿಸಿಗ??ಪನ | ಆಇರಣವಪಂಕಜಳೆರಗುತಿರ್ದನು | ವರುಷ ಹನ್ನೆ ರಡಾಗೆ ಮಂತ್ರವನಂತುಜಾನಿಸದ || ೧೮ ||
ಚೆನಕ್ನ ಯಹಿತು ನೆನೆದಮಾತ್ರಳೆ ವಳ್ರಶುಂಡನು | ಮನರದೆಮುದವನುತಾಳು ಭಕ್ತನ | ಮನಳೆ ಸಂತಸಗೈದನಾಗಳೆ ಧಕ್ತವತ್ಸಲನು || ವಿನುತ ಮಹಿಮನುವೂತೃಕೂಪವನ | ನನಿತನಜನಿಗೆ | ತನುಜ ! ಪಳ್ಳದೊಳಿರ್ದುನೋಡಿದೆನದನೆನೇಳುವೆನು || ೧೯ || ರಕ್ತ ವಣ್ನ ಸಿಂಧುರಾಸ್ನ | ರಶಳ್ತನೇತ್ರನ ಡಂದ್ರಕೋಟಿ | £^ } ತೇ -ನ. ಸ್ರ ಈ ಉ ವ್ಗಳ್ತ ಜನ, ಸೂರ್ಬ ಕೋಟಸಮಾನಭಾಸನನು || ಧಕ್ತನುಗ್ರದರೊಪದಂದವ | ಮುಕ್ತ ಲೋಜಡನನಾಗಿ ಕಂಡನು | ತ್ಯಕ್ತ ಧೈರುನು ಜಪವಮಾಣುತೆ ಮುಚ್ಕಿಯೆಯ್ತಿದನು || #0೦ || ಕೆಲಿಡೊಳೊದವಿದಕಾಂತಿರಾತಿಯ | ನಲಘುವಿಕರಮನಂದುನೋಡುತೆ | ಛೆಲರೊಳೆದ್ದನು. ಸಾವಧಾನರೊಇಷ್ರದೇವತಿಯ || ಬಲರಶೇಯೋರೂಪವನುಆಂಡಲುಗೆದಿದೆನು. ವಿವಿಯು ಳೈಮುಗಿ | ದಲಸನಾಗರಿ, ಧೈರೈದಿಂದಲೆನಿಂದುನುತಿಸಿದನು || ೨೧ || ಜಯ ಜಯಾನಂದ ಸ ! | ಜಯಜಯ ಫೆರಾಧಾರಧೂತನೆ | | ಸಿಶ್ಯನೆ | ಸಿನಗೆನವಿತಿಸುವೆನು || ಸತ್ತಾ ಶ | ನಿಶ್ವೈನೆ ! ನಿನಗೆ: ²೫ ತಾ ಸೈ, ಒಯ ಸ | ಧಯೆನಿವಾರಳ ! ದೇವದೇವನ ! _ ನಿಯೆತನೀಹೆ » ಸಿಚ್ ಓ4 ವಿಧಿಯೈ | = = ಜಯವ ಪೇಳೈನು ಮತ್ತೆ ನಂದಿಗೆನೆಂದುಸಗೊಂಡ || ೨೨ || { ಬಿ“ 3ನವಂಗೆನಿಜಸಂ | ಪರಮ ದೇವನು ಕೇಳ್ತು ಭಕ್ತನ | ನ೮ದಮನುತಿಯನವ ಶ್ಮು ಸೃಷ್ಠಿ ಈಳ || ದರುಶನಂಗಳನಿಶು ಸೃಸ್ಮಿವಿ ಕರುಣದಿಂದಲಿ ತನ್ಷನ ಛಳ್ತನಿ | ಗರೆದನಜನಿಗೆ ದೇವದೇವನು | ಧರಿಣಗೇಳ್ಗೆಯ ವಾಳ ಪರಿಯಿಂ ಕುವರ ಸಂತಸದೆ || -೨೩ || ಆರಮಂತ್ರವ ನೀನು ನೆನೆದೆಯ | ದಾರುಮಂತ್ರವ ನಿನಗೆ ಪೇಳ್ತರೊ | ಸಾರಕವಹದೇವೇಶನಾತನಯೋಗಮಾರ್ಗಯೊಳು || ಪಾರುತಿವˆರೊಸವಳಕಮೊದಲಹ | ವಳ್ರಶುಂಡನು | ಧೀರನಾನೆಯ್ತಂದಿ ನಿನ್ನಿ || ೨೪ || ನನ್ನ ಕರೆವರು ವಳ್ತುಮುಖನೆನು | ತಿನ್ನು. ಲೋಳದ ವಸ್ತುವೆಲ್ಲವು | ನನ್ನ ರೂಪವು ನಾನೆ ಜಗನೆನಿಪೆ || ನನ್ನಿಯೈ ಕೇಳಿಂಬ ದೇವನ | ಸನ್ನು ತಾಲಾಪವನು ಳೇಳುತೆ | ತನ್ನ ಚಿತ್ತದೊಳಾಂತುಮುದವನು ಬಿದಿಯು ಬೇಡಿದನು || ೨೩4 ||
ಔರಂಬರ ಸಂಗ್ಸರಚ ಗ ಐನಗೆ ಮರುಕವ ಶೋರಿರೊಡೆಧ | ನೃನಹೆನಾಲಿಸುವಳ್ರೆತುಂಡನೆ | ಯೆನಗೆ ಜಗವನು ಸೃಜಿಸಲೀವುದು ಪರವುಶಕ್ತಿಯನು || ಮನೆ ನಿಕ ಲಮಾದಭಕ್ತಿಯು | ಮೆನಗೆನೆಲಗೊಳಿಲಂತೆತವಪದ | ವನಜಯುಗಳದೆ ಮಾಳುದೆಂದೆನೆವರವಬೇಡಿರನು || ೨೬ || ಪರಮುದೇವನು ಕರುಣಸಿದಸೆ | ದ್ವರವನಾಂತನು ಬಳಿಕಮಣಿದನು | 0000000000} 000 ಓ 0000 ಚರಣಕಿತ್ತನು ತನ್ನ ಮಾನಸಪುತ್ರಿಯರನವಗೆ || ಧರವಿಸಿದ್ದಿ ಸುಬುದ್ಧಿಯೆಂಬರ |_ ನಿರದೆಪತಿಕರಿನುತ್ತ ಭೊಮ್ಮಗೆ | ಹರಿಸಿನಡೆದನು` ತನ್ನ ಲೋಕಕೆ ಕನ್ನೆ ಯೊಡವೆರದು ೧ | ೨೭ | ಬಳಿಕ ಬೊಮ್ಮನು ಕನ್ನ ಲೋಕದ | ಬಳಿಗೆ ಪೋದನು ಮೇಣ್ ರಾಜರ | “ನು ನಿಲ್ಮಿನಿ ವಿವಿಧ ಸೃತ್ಟಿಯ ಮಾಡಿ ಮುಗಿಸಿದನು || ತಿಳರನಾಪರಮೂತ್ತದಯೆಯಿಂ | ದಯ ಸೃಷ್ಟಿಯ ವಿಘ್ನ ಮೆಲ್ಲವು | ನುಬಗೆಯ ಬೇನೆಯನು || ೨೮ || ಬಂದು ಮನಗೊಳೆ ೬ಗೆದೆನಾತನು | ಸಂದ ! ನೀಕೇಳಂದು ಶಂಕರ | ನಂದು ನುಡಿಯಲು || ವಂದಿಸುತ ಬೇಡಿದನು ಪರನನು | ವಳ್ರತುಂಡನು | ವೆಂದು ನಾ || ೨೪೯ || ಒರ @ « ಕಹ | $ ಹರನು ವ್ರಕ್ರನ ನುಶಿನ.ನಾಲಸಿ | ಖೊಎರೆವನೀಮ ಸುತನೆ ! €ಳಾ | ದರದೆ, | ರಿದುವಳ ವತುಂಡದಿಂದವಿ | | ಎ ಕ್ಸನ್ ಯ್ ರರ ಕಂದರಾತನ ವಕತುಂಡಾಹ್ತಯದಿ ಸೂರಿಗಳು || ೩೦ || ಹನಿಯೆ ! ಸತ್ಸದಿ ನೀನು ಪಾಲಿಸು | ಧರೆಯನಲ್ಲವ ವಿವಿಧಯತ್ನದೆ | ಹರನು ಪೊರೆಯ ನೆ3ತ ಳೋಕವನು | ಧರಕದೊರೆಂದನುವಳ್ರಕುಂಡನು | ಪರಮರೂಪನು ಮೂತ್ತಮಎರಕೆ | ರೊರೆಯುಮಾತನ ವೈನೆಯರವೊಡಲೋಕಳಸದಳವ್ರ || &೧ || ಸ್ಕನ್ತಿನಿಜಯವನಿಶ್ತು ಮೆರಿವುದು | ಶಸ್ತಸತ್ತ | ನಿಸ್ಮುಲಾಂತಃ!ಕರಣವಾಲಿರಜನದಕಾರು ಗೆ || ಶ್ರಶೆ ೪ ಹ್ | ಧ್ವಸ್ತಮಫ್ಬೆವು ಹಸ್ತದಲ್ಲಿಸ | ಮಸ್ತ ವಾಂಳೆಗಳಿರ್ಯು ಮೆಂದಾತ್ತೃಜಗೆನೇಳಿದನು || ೩.೨ || ಇಲ್ಲಿಗೆ. ಸ್ಕಾ ೧ವವಿರಾಜದೆಲ್ಲಿ ಮೊಂಲನೆಯದಿವ ವಕ್ರಕುಂಡಾನಕಾರ ವಣಳನನೆಂಬ ಪಥವು ಪ್ರಳರಣವು ಮುಗಿದುದು, ಯಾಮ,
ಮಹಿನೆ ಪರ)ಕರಣವು. ೫೩. ಆಲಳಿಸಿದೆ“ನು ವ ತು೨ಡಳೆ . ಥಾಲಿಸರಿಯನು ನಿನ್ನ ವೊಗಡೆಳ $ ಎ ° & ಒ ನಾಲಿಯಿನ್ನುರೆ ಪೇಳು ಸುತನ ಮಾತನು ಗೌಲೀ | ಪತಿಯು ಚಿಂತಾಮಣಿಯ ಪಾವನ | ಶತೆಯ, ದುರಿತವಿನಾಶಹೀಶುವನಾಗಳಾಗುಪೆಗೆ || ಹಿತದೆ ಪೇಳ ಗು ಕೇಳು ! ತಗುಒನೆ ! |. ವಿತೆತವೊದೀಳಧೆಯ ನೊರೆವೆನು | ಈ ಕ್: ಸಶಶಭತ್ತಿಯೊಳಾಲಿಸೆಂದನು || ೧ || . ಥಈ ದೋ | ತ್ರಮನನಿಗ್ರವಿಖೆನ್ನ ಮೀಪತಿ | ಯಮಿತಧಕ್ಳ ಡಿತಿತೆಯಗೊರೆದೆನು || ಕರಮದವೆನಿಯೆಮವ ನಿತತ ಮೆಸಗುವ | ನಮಿತದೈದುಂಬನ್ನೆ ವೆಸಗುವ | ನವುರ ಪೂರೆಯೊಳತಿ || -5 || ಇ: ದಬ ನಸುರವಮೂನ್ನನು ಷತ್. ವಿಕಮೆ | ನಿರದಿ ಈ ೩ ನರ7೯ನಿ “ಮರಿ ಊ = × 165೨ 8 | ವರಯ ಶೋಧ ನು೩ ೨ || ಭನಿತಳೋಶನು 1 ಅಇಯಊ ನು | ಕರಶುರಗರಘದತ್ತಿಪರವೃತನಾಗಿರಿಡ 5೧ . =: || ೩ || ಅವನ ಪ‰ಟಣಔರ»ಣ | ನಿಯಮ | ಧವಮನೋಪಹ್ಲಾ ದಿನಿಯು, || | ಆಈದೆನುತನಿ | ತವಕಗೊಳ್ಳುತೆ || ೪ || ಒಂದು ದಿನ ಮಾರಾಯನರಸಿಯ | ಷಂದದಾನನವನ್ನು ೭ರು<ನ^ | ನುಂದರಾಂಗಿಯೆ || ಸಂದಧನಕನಕಾದಿವಸ್ತಗ | ಳಿಂದೆ ಛಣಇಣಣವಿಂದೆನೊಗಮೊಂಳು | ನಿಂದುನಲಿವೆಂದೇ# ? ಪೇಳಿದೆಕು || & || ಏನನೊರೆವೆನುನಾಥ ! ಚಿಂತಿಯೆ | ನೇನಿನಿತ್ತುದು ಔ5ಣ-ಕರ ವ | ರೇನನಿಶ್ಮುವು ಗಳು || ಗ ನೀನು ಮಾಡಿದ ನಿಯಮೆವೇನಾ | ಯ್ತಾನುಗೈದವಾದಾನಮಾನ | ಳೆನುಮೊಂದುಂ || ೬ ||
ಕ²5 .ಬರಿ ±9ಗ್ರವೆ ² . ಕೈ ಎಂದು ನುಡಿದಿಮಾತಕ4ಳುತ3 | ಹಿಂದಿ ನಾವೇಗಯ ವದುಂ | ವ್ರಬ್ಜತೆವ ² ಈ ಈ ೬ ೪ ಈ | | ಮೆಂದುಬಗೆದುಪಯೋಗಮಿಲ್ಲೆ ನುತಿರ್ರರಾಡಿದರು || ೭ || ಓಬಳೆಕರಾಯನು ಫ್ರಶಕ್ರಕಾಮೆ® | ರಂಡಕೋಶವ | ಸಿ ಮಂತ್ರಿಯ ತೆಗಲಮೇಲತ್ಕವಂನನುಸುಸಿ || ೬೫೯ < ಬಳೆ ಯೈಳ-ಎಂದಿ? ರಕಢವೇರುತಿ | ರ ತ`ರಿಕೆಯುಲ ನೆ | ತಳಣು ವಿ²ನಳೆ ತವನಗಯೆ.. ಓ || ೮ || | | ದಂತೆ ನೀ9 ಇ೩೫೨ ಇಲಸಾಳು ದಿನುತ್ಶಿನೇವಿ೩5 || & ಸಫಿ $ 367೪ ೬ ಕರ್ ಅಣೆ, ನ್ ಕ್ ಗಿಜ್ ಕಲ್ಲ ಜ್ಯಾ ತ್ 9ತಿರ ಒನಿವ್ರಿ ಸೃವತಾ | ನಂತು ವಾದಿಯೊಳತ್ತಗೋದನು | 5#ರ8ಳರ || ೯ || ಆಅರಸಿವೆರನುತಲರಸಒನಗೊಳು | ತಿರುಗಿಕಂಡನು ವೇದೆಘೋಷರೆ | ಮೆರೆನಿವಣನಿಯ ಪಣ ಪಣಣಶಾಲಯನಗಿ 5 ಜೋತ್ರವನು || ತರುಸಮ²ವವೆ | ಪರ್ಣಶಾಲೆಯ | ನಿರುತಿಸುತ್ತಲಿನಲಿರನಾತ £4±೪ಮವ²ವನು || ೧೨ ಮಡದಿಯೊಡೆನಾರಾಯು, ವುಇನಿಗೆ | ಕಂಡುತಿಶ್ಶಡಿ | ಯೊಡನೆನಿರುತಿಸಿ, ಬಾಷ್ಪ ವೃ ತ್ತಿಯೆನಾಂತು ಮುನಿಪತಿಯು || < ಓಡೆನಿ ಆನ್ = ೩ 5 ಕ್ರೌ ೩-೫ 1 ನಕುರುವನು ನೋಡಿಯಾಗಳಿ | ಇಡವಿಯಾಣ ನೆನುತ್ತೆಯೋಚಿಸಿ || ಯೊಡೆಯ ನೀ ನಾಸಿಲ್ಲಸಿ ನೀ ನಾಸಲ್ಲಸೀಳೆಯತಂದೆ ಸೇಳಿಂದ ಬ್ರ || ೧೧ || ನುಷಿಯಕೇಳ್ಳು 9ನಲವಮುಟ್ಟಿರ | ಮುಡಿಯು ರಾಯನ, ನೋಡಿಮುನಿಶನು | ಫ್ತ ಯೆನಾಡನರೀತಕಂಗವೆಸದುಯೋಗೆರಲಿ || | ರೊಡೆಯ ನೀನೇಳೆಂದು ಬೇಗನೆ | ನುಡಿದನಾತಗೆ ಮಗನುಬನಿಪನು || ೧೨ || ಎಂಬ ನುಡಿಯನು | ವಿಂಬವಂದಾನಂಗಲಹನಿಯ | ನಿಂಬಿನಿಂರಲಿಸೂನ, ಮುನಯನುನಮಿಸಿ ]| ನೆ | ನಂವಿದೆನು ನಿನ್ಶು ಶ್ತಿಸತೃವಿ | ಗೆಂಜಿಗುಣವೆತಿಯೊಕೆ ನಾನ:ಶಿನುತ್ತಿ6ದ || ೧೩ ||
<ಕಿಣಕ್ನ ಬನಗ ತನುಜರದೆಂತುವುಟ್ಟುವ | ರೆನುತನುಗ್ರಹದಿಂ೭ | ನಿನಗೆ ನಿನ್ನನುಡಿ || ಮುನಿಗಳಾಡಿದ ಮಾತಿಗೇಗಳು | ಹನನ ಖಾಕರನುತ್ತರಾಯನು | ಮನದಿ ಪಲಯನೇನೆಂರೊರೆರೆ ಕೇಳೆಂದ || ೧೪ || ನರನ ಕೇರಳ ಸಿಂಧುತಟರದೊಳು | ಸರಸಿಯೊಂಬಮರಮತೋಯದಿ | ಮೆರೆಗುಮಲ್ಲಯೆ ಕಂದಮೊಲಸು ಘಷ್ಷಸಮಿಧಿಗೆಳು || ರೊರೆಗುಮಲ್ಗಿಗೆ ನೀನು ಪೋಪ್ರದು | ಮಾಡುಹೋಮವ | ತಕುಣಫೂಜಾ ರ್ರವ್ಯಮೊದಗಿಸಿ ನಿನ್ನ ಸೇನಿಸಲಿ || ೧೫ || ಅರಸ ಳೇವ್ಫಿ ಮಾಸನಾಲ್ಕರರೊ | ಳಿರದೆ ನಿಯವಮುವ ನೀನು ನಡೆಯಿಸಿ | ಬಳಿಕಮಲ್ಲಂ || ತೆರಳಿ ರಾಜ್ಯವ ಪಾಲಿಸುತ್ತಿರು | ತಕಳನುದಿವನು ನಿಮಗಿ ನಿಒದಿಂ ದರಸನಳಳುದೆನುತ್ತೆವೇಳಲ್ನು ನಿಯನುತಿನಿದನು || ೧೬ || ಒಳಿಕರಸು ಸತಿವೆಂಸಿವಮುವಿಪರ | ನೆನನಯುಗಳಳೆನಮಿಸಿ ನಡಿದಿನು | ನ೪ನಲೋಜನೆಯೊಡನೆ ಸಂಧ್ರಮದಿಂದಪಲ್ಯಲಕೆ || ಕೊಳದೊಳರಸನು ಮಿಂದುಹೋಮಾ | ವಳಯೆ ಯ | ತಳೆದು ಮಾಡಿದ ನೆಲ್ಹ || ೧೨ || ಆನಸರೋವರದಂಚನೊಳ್ತಾ | | ವಾಸಮಿದˆನು ವಾಣಿಯಿಂರಲಿ ಸೇವೆಕ್ಳೈಳೊಂಡು || | ಆನರಸೃತಿಖಬೆ , | ಭಾಸುರಾಂಗಿಯು, ಕಾಂತಿರಾಶಿವೊ | ಲಾಸುಮಾನಿನಿಯಂದಮೊರಿವೊಡಿಸಾಢ್ಯಮಿಲ್ಲಿ ನಗೆ || ಇಲೆ || | ಮೊದಲು ಜಚಮಲಯು #ಈಸವಪಿಂತೆಗೆ | ದದುವೆ ಕಾರಣದಿಂದ ನಾಣ,ಯೆಬನವಸತಾರದುದು || ವದನದಂದಕಳೆ ಸೋಲ್ತುಗಗನಕೆ | ಬಿದುವುಪಾರಿದನಂತೆ ಜಿಲ್ಕೆಯ | ಘರದಗತಿಯನು ಜಲವನೀರದುದು || ೧೯ || ದನಿಯನೊಂದಲ್ಲಿಕವು ಸುದತಿಯ | ಬನರೊಳರ್ಫುದು ಜರಣಸಾಮೃಳೆ | ವನಜಮಾಶಿಸಜಲಗಿ |; ಘನರ | ಳನಘಸುದತಿಯನೇಹವಾಂತುರೆ | ಇವತಿತಕಲು ಗೆದ್ಠೆಗೆಳಸುಗಳ || ೨೦ ||
ಸಂಗ್ರಹ { ಪಲವ್ರಕಾಲಂ «ಳೆಯೆ ವಾಣಯು| ಒಲಒಫುತ್ರನ ಶೊಡೆಯನೆಯುತೆ| ಸಲಿಗೆಯಿಂದಲಿವಸನಮಿಲ್ಲರಿ ಸಿತಗಶಂತಿಸರೆ || ಕೆಲಡಿಕು+ ರೆ ಜಪರಳೊನೆಮೊಳು| ನಲರುನೋಡಿದನಒನುವಾಣಯ ನಲುಪಮೆತಿಯಿಂದಾತನಾಕಯಮೇಲ ಮೋ-ಸಿದ || ೨೧ || ಮನಸಿಬಾರ್ತಿಯ ನೊಂದಿತಾ ಕಾ; ಮಿನಿಯನಿಟ್ಟಿಸಿಬಾಕೆ ರಂಜಯೊರತಿಯೊ || ಬನತುತಪವನು ಆಡಿಸಲಿಂರ್ರನು| ಮನ೦ಯೋಜಿಸಿ ಕಳುವ೭ಶಚಿಯನು| ಬಐನದಗೈವನೋ ನಾಗೆಕನ್ನೆಯೊ ರೋಹಿಣಯೊ || ೨೨ || &ವಳು ವಿದ್ಯಾ ಧರಯೊ ಇವಳು ಯಕ್ಷಿಯೊ ಯಾತುಧಾನೆಯೊ| ಶ»ವಳು ೪ಳುಮನಿಯೊ ಹಸಿಯಮಾಯೆಯು ಒಂಗು ಮೋಹಿಪುರೊ | ಬವಣೆಯೇನಿರೆನುತ್ತೆ ಬೊಮನನು| ತವೆ ವಿಮೂರ್ಲಿತನಾಗೆ ಕಾಮರೊ| #ವನ ಮೆಯ್ಸ್9 ಜಾರ್ದೆವಿಸನವಳಂಡು ಸರಸತಿಯು || ೨೩ || ಬಿದಿಯೆ ಧರಂಯಿಸು ಬೀಗೆಬಟ್ಸಿಯ| ನದೆಗೆ ಶಾಂತಿಯ ಬೇಗೆಮೊಂದಿಸು] ವಿದಿತ ತತ್ತೆಗೆ ತಳ್ಕುರಲ್ರ ವಿದೆಂಬ ನುಡಿಗಳ | ಸುದತಿಯೆನ್ನ ನೊರವಿಸೀ ಗೆಳೆನಿಪ್ಷನುಡಿಯನು| ವರನಡೆ ವರಸಡೆ ಕೇಳಿವಾಗಯುನ ಸಸೆನೆಯಿ ದಳು || ೨೪ || ವ) ಇ $ ಖ ದ ಹ್ ಮೆ | 4 = |\ | ಆಆ “® ಶಾ ಈ; ವ್ ಓಕ್) =, ಫ 7 # ಓ °ನ ಟೆ ೨. | 35 @ * ~೨ ಎ- 3 = ® ಪನ್ನೆ ಸಾಹಿ 1೪) || ಸೊನ್ತೆ ಯೆಸದುವು ಮ ಸಲಾನೆನು| ಮನ್ನ ವೋಡುವುದೊಳೈತನ್ನುತೆ| ಒಬಗೆಯೊಉ ಒಂಶಂದಿವಳು || ೨೫ || ಒಶ್ಲೆ ನಿನಗಾನಣುಗಿ ಮೇಣ್ನೀ| ನೆಲ್ಲ್ನ ವಿಧಮೊಳು ತಂಡೆಯಾಗಿಹ| ;;ಲ ಲ ವೇ*ದಳು || ೨೬ {| ನಿಜದ ರೂನವನೆನೆದು ನೋರೈ| ಯಜನೆ ಬಗೆಯನು ಮಿ -= ನ 4 ೬) ೪° ಒನವಂದಿತ ಳೇ€ಳು £೮×ನೆ || ಅಜನು ವಾಣಿಯ ಮಾತಕೇಳದೆ| ಕುಜನು ಮತಿಯನು ಬೊಜಗನೆಂಬಾ ರುಸ್ಬನಾಮುಕೆ ಕಾನು ಗುರಯಾರ || ೨೩ ||
ಕಾಣದೆ ನೋಗು ಮೆರಳದನು || ೨೮ || ಇಂದರನೇರಸಿ ರುಂದ್ರನಾಗಿಯಿ ತಿರವ ಬಾಗಿಸು| ತಿಂದ್ರಿಯಾಶ ಳ ನೋಲೆಟಿಮ್ಮೆ, ಗ ನಂತರು ೯೧ಗಿದೆರು |! ಗೆ ನಿ ಈ ಕ ೬ ` ದೆ ರೆ ?, ಲಿಟೊ ಆಚ ? ೩.೭ ಒ | \ ® ವ { ವರನು ವ ತೊ| © ಟಕ್) ಖ # ದೆ. ಓ ² ೨೪ ನ “ದಿದಿ || ೨೯ || € ಈ ಜ್ ೫ > ೨ ನುರತೊ ಟ್ರ ಈ ಈ # ಈ | | # ೬೧೭ 1ಚ್` ೬ ² ಹಿಚ್ | ² ೩ ಶೊರೆನ್ರದಸದಳಮುದುರಾ˜‰ ಸಮನುಬ || ತೊರೆವುದೇಗಳೆ, ಸೆ ಮೆಂಬರು| ೨ರಳಮುಗವನು ಪರವನೃದುವನ , || ಈ © || ಕರಣಮಿವ್ರಗನ್ಸೀಗ || ತವಪಾವಿದಿಯೊಳಿಂದನು € ಪರೆಗೂತ್ಕ್ರ || ಈ“ಣಇಗಇರೊಳ್ಳು ನಾನೆ ವೆ›ನೆವೆಷೆ| ೭ರ ಯೆಂಬೀನುಡಿಯನಾಲಿಸಿ; ತೆರೆದುಃನಿಶನಾ?\ 3®ನು || &೧ || ಚಾರೆತೇಒವು ಬದಿಯ ಸ೮ಸಿಯ | ವಾಲಿಜಾಗರೆ ಗಡೆಆಗಿಸಿಯೊಳು; ಸೀರೆ ಗಂಗಾಸಾಗರೆಂಗೆಳ ಸೊಗೆಮೆಂಗೆಗೊಳ೪ || ವಾರಿಬ್ನಿನೆ ೨ ನನನಹ್ಲು ರೈ ವೆ| ವಾರಬಾಕ್ತನ ೯ನೆದು ಶನ್ತಯ ಲೋಳ || ಈ - ಸ್ಕಾಂವಕಣಾಬಾಂ ತಗತವೂ {.ಸ ೪೪ ಯೆಕೊಳ್ ಸ್ರೈಕ್ಳಣ9 ಸಮೊರ ೨,
ಕಾಜ ಗಿಗ್ ಮೂರನೆಯ “ ಇಸ ೪7೪ ಈ [ಬಗೆಗೆ ನನಸ‰ಸಬಲಸಂನನ್ನ ನುಗಣಾಭಿವನು ಜೊಮಿನ1 ಇತ್ತಲಭಿಜಿನ್ನಾ ಮಭೊಮಿಪ| ಮಾಯ| ಲ್ಲೆ ತ್ತುಪರದೆ ಪತ್ನಿವೆರಸಿಯೆ ಗೋಗಿಮುಳುಗಿದನು || ಬಿಕ್ತರಡಿ ೫ ಸೇತಿಯೊಳೆಗೆ| ಇಂಟಿದಳ :ಸಂಭೃಮಂಗಳೆಲಿ || ೧ || ನರಸಿಜಾಸನತೇಒವಾಗಳಿ| ತರ:^^ಯಮುದರತೆ ನೀಲೊಡನೆಯೆ| ದಳೇನೆಂಚೆ || ಗರ್ ಋಖೊಔಣಳೇ? ಧರದೆಸೇರಲ್ಕಾ ಕೆ ಗಭಿ ಮಾಸವಿ>ಗಲ| ದೊ*ಯುತದೆಸಯ ನುಡಿಯನೆನೆಯುತೆ! ತರುಇಣದೆತಸಾಮುನಿಯ ನುತಿಸುತೆ ಗರ ತೆ ::. || ೨ || ಆಗ್ಲ ಡ 8 ೩ ® ಒವ +. ಲ್ ತಡವಮಾಡಡೆ ನೊಳಲೀನಗೆಳ್ಳೆ| 3 ಇಳೆಲನು| ಸಮ್ರು || ನಡಿದರರಸನ ಸಮ್ನು ಮಿಳ್ಕೆ $5 || ಫೊಡವಿಪಾಲಂಗೆರಗಿ ರೊದೆಯೆನೀದೆ,ಸೈಂದ ತತದೀ| ಕಡುಸೆನಾಧಕು ನಾವ್ರ, #ಈತೆಲಂ ೨ || & || ಅರಸನಂನೆಖೆನೇಲ‰ ತೆನೆ | ಧೆ ತ.ನಃ| 3೩ ಜ | ಒಣ “- ೫೨ ] |] ತಿರೆಯಧರ್ಳದೆ ನೃಪಮೆ ಅ»ಖ\ನ,| ಕೆರು: ೧೫೩ ,ಬಐತು ತಿಂಗಳಾಗಳಲು| ವಂಸು?ತ್ರನ ಪೆತ್ತಳಾ ಕೆಯೆ, ತಶುನವತುಹೊತ±` ೧೦ || ೪ || ಬಳಿಕ ಪಶ್ಶುಂ ದಿನವ್ರ ಕತೆಯೆಲು| ±ರನಿ ಶನುಚಂ| ಗಿಳಿಯನಾಥಧನು ನಾಮಕರಣವ್ಬದನುತ್ಲ್ಯವರೆ || ವಿಳಸಿತಾಳ್ಲ ರನಾಮಸುಗಣಾ| ಗಳ ಝಯ3ನಿ›ವೆ`:9 ಮೆರೆವಕಾಂಣ| ದಿಳೆಯೊಳಾದುದು ಶಿಶುಗಿ ಗಣನೆಂಬಾ: || | ||
ಬೆನ್ನ ನುಹಮೆ ದಿನದಿನಳ್ಕಾ ಮಗುವು ಬಳೆದುದು| ತನುವಬಣ್ಣವು ಘನವವೋಲ್ತುದು| ವಿನುತವಿಕವುನೆನುತಗೆಯ್ತದಿ ತಂದೆತಿಳಿದಿರ್ದ || ಬನದತಾಳೆಯ ತರುವನಾದೊಡ| ಮನುವಿನಿಂದಲಿ ಕಳ್ಳುನಲಿವನು| ತುರಗ ಗೆಜಗಳನವನು ಶಿಕ್ಸಿಐನು || ಸ್ನಾ ನದೇವಾರ್ಚನೆಯ ಶಾಸ್ತ್ರವಿ| ಧಾನದಿಂದಲಿ ಹೋಮಜಪಗಳ[ ಮೌನಮುದ್ರಿಯೊಳಿಸಗಿ ಶಿಷ್ಟಾ ಚಾರಯುತನಾದ | ಜ್ಞಾನವಂತಗೆ ಗಣಗೆ ರಾಷ್ಕ್ರವ| ಧೀನವಾದುರು ನೂರಕುಯೋಆಜನ| ಲೆಕ್ ವೂ ? ಗಣನು ಚಿಗಿಯುತೆ ನಿಡಿವನಾಕತಿಯ || ೭ || ಇರಲು ಕಾಲಾಂತರಝರೊಳಲ್ಲಿ ಗೆ! ಕರಯುನುದವೇರ್ದೊಂದು ಮೆಯ್ತರಿ! ಪುರದದಾರಿಗೆ ಒಬಂಧಖಾಗಳಲು ಗಣನು ತಾಕಂಡು | ಕರದಮುಷ್ಟಿಗಳಿಂದ ಕರಿಯನಾ ಗಜಕಾಗವೇಹರೆ[ ಪರಿಯೆಳೆನ್ನೀರ್ಯೊನಲು ಮಲ್ಲಿಂದಡವಿಗೋಡಿದುದು || ೮ || -ರದಜನುಗೆ ಮೋದ್ಭವಾದುದು| ತರಳತಪವನುಗೆಯ್ನೆ ಚಿಂತಿಸಿ] ಮೋದಿ ಬನಳತೆರಳಿದೆನು || ಹರನ ಪಂತಾ ರವ ಜನಿಸುತ| ನಿರಕನವ್ರತದಿಂದ ವರುಷನಮಿರ್ದನು || ೪೯ || ಭ ಸನಿಪತ್ತುವರ್ಸೆಧ್ರ| ^ ಸಿಪತ್ತುವರ್ಸವ್ರ| ದಿ || ಜಲಜದಿಂದಲಿ ಫಲಗಳಿಂದ೨ ತಣಸಿಯತಿಋಯ| ಕೆಲತವಂಗಳಮಾಡಲ್ರವೇಂಲೆಂದದಿಂದೆಸಿತೆ || ೧೦ || ಕೊರೆದು ಸಿಂಹ ಗಬಗಳು| ನರೆದುವಾತಳು ವ್ರಶಿಯಸೇಲದು! ದುರಗನಳುಲಗಳಾಡುತಿರ್ದುನ್ರ ತವದಮ್ಮೆದೆಯಲಿ || ಕರದಬಿನುವನು ಳಡಿವೆಗೆಯ ನು | ತರಣ ದಿವಿಷದರವನತೇಬನೋ| ಛರದಿ ಶಸಿಸುತೆ ನಡುಗಿನಿಚ ರೆ ಧಘಯೆನ್ಸೆದಿದರು || ೧೧ || ಅಜನಪಟ್ಟವನಿವನು ಸಾರ್ತನೊ| ನಿಒದೆಸುರಪ ಸ್ಪಾನವಾಂಪನೊ| ಭುಜಗಧೂಸಣ ಹರನತಪದೊಳಗೊಲಿನನೀತೆರದೆ || : ಧುಬೆಸದಿರ್ನನು ಸೂಗವನೆಂದೆನು| ತಜನಕೂಡುತೆ ಗುಜಿಸಿ ಛಯವನು ಶಿನನಲೋಕಕೆ ಪೋದರಂದವರು || ೧೨ || ± ಫಲ
ಕಾದೆಂಬಕೀ ಸಂಗ್ರಹ {ಶ ಕ ಅಬ, ಕ್ರಿ | ಆ) ಶ ಈ ನೇ ರೀತಿ ಉಬ್ಲಿ ಮೇ ಇಕ ® 95ರ ತಲ್ಲ ಣಐಂಗಳ ಹೇಳಿಕೊಂಡರು ಭೆಯದಿ ಮೊರೆಯಿಟ್ಟು || ಬಲ್ಲ ರೊಡೆಯನೆ ಳೇಳುನಿನ್ನ ನು| ಮೆಲ್ಲ ನೊಲಿಸೆಲು ಬಂದಃವೂನಿಸ| ನಲ್ಲಿ ತನವನು ಗೆಯ್ತು ತಸಿಶನು ನನ್ಮನೀಸಲಹು || ೧೩ || ಕಂದಕೇಳೆ, ದೇವನಾ ಳ್ಸಂಡೆ ನೆಡೆದೆನು ತವಸಿಯಿರ್ದೆಡೆ| ಗೊಂದುನಿಮಿಸದೊಳಮರಕಲ್ಲಿಯೆ || ಬಂಮು ಜಪಸರವಾಂತ ಬಳುಶನ| ಜಂದರದೊಡಲಿನ ಸಿ| ಬಂಧುರೋಕ್ತಿಯೊಳೆದನಾಗೆರೆ ಧೆಕ್ತಿಧೂನಸಣಗೆ || ೧೪ || ಸುಕನೆ ! ಕೊಡುವತವಳಡಿ| ಹಕಡಿ ಬ ) ಕಡಿ ಒಂದಿಖಿನಾನು ನೋದೆನೆನಿಲಿದು ತಿಂಕರನು ] ವ್ರತಕೆಮೆಚಿರ್ಡೈನ್ನ ವರದಾ| ಶೃತಕೆಯುನಾಲಿಸಿ ಜರಣಳೆರಗುತೆ| ನುತಿಸಿವರವನು ಬೀಗೆನಿಂದವೆಎಡನೆ ಟೇಳೆದೆನು || ೧೫ || ಗ^೯ನು | ನಿನ್ನ ಕಂಡೀ | ಟೈ ನಳ ಕ್ ಧಗ್ಯದಇದು ಯುದ್ದ ಅರ್ಮುಗಳು || ಬೀಗನೆ ಗ್ ಇನು | ಫಣವಿಭೂಷಣ ಮವನಳರ್ತನಿ! ಸಿವಗೆ ನವ್ಯಿಸ್ಯವೆನು || ೧೯ | | ಗುರುವೆ ! ಯೋಗಿಧ್ಮಾನಗಮ್ಯನೆ | ಈರುನುಳ`ಲದನ ! ಆಜ %ಇ`ಲದನೆ 1 ಛೇ + ೩ « ? ಡಿಮ್ ತ್ರಿಪ್ರದನೆ ! ನˆ.›ಸುವೆದ್ || ಮೆನಳೆವೊತಿಗೆ | ಘರರುಬೊವ್ನುನೆ ನೀನು ನಿಶ್ಕನು | ಸುರಪೆಮೊನ್ಸ್ರನನ್ಶಯತ್ತ ವರರೀಡಿದನು || ೧೭ || { ಎ ಈ 40 ಥಈ ನೆ {\ ಕಆಗ « | ವಾಡದೊಡೆ, ನಿನ \ | - ಈ + ಒ \ ೬ ನ ಆ ೯ , ಡಿಸ್ಯ-ವ್ರಕ |]! ಔ $ಖೊಳಗಾಳತ್ತಿರಸೆವನು ಕೊಡೆವ್ತದೆನ, || ಮಾಳಳಳಗ ವಾನ. ಲೇಳು, ಶೃ| ತಘಾಸ್ತುವೆಂಗಿನೆ! ವರನವನಿತ್ತತ್ರೆವೆಂದು ಪೆಡದೆನು || ೧೮ || ಮೂರುಲೋ7ವೆ ಸಿಳಿವಶತಕ್ತಿಯ| ಕೂಟ್ಸ್-| ವ ನಳಿನಿ ಬ ತ್ {× @ ಈ ಆಲ್ - ಈ 51 {` ಕೌಫ್ ೪-೬ 5೨5 ಈ {= * ಥ ೬ನಆ ೩ ಫ್ರ4 ) + ಕ ೪ £ @ $ [ಒ) || ಯು ದೆ| ²ರದಿಂಟಲಿ ಸಾರ ± ನಾಸನೀ ಲೋಕ ತೆಯ್ತಂದಿ || ೧೪೯ || “
೪೫ ತು ಅನೆ ಮರಳಿಪೋಗನು ಗಣನುನಿಲಯಕೆ| ಹರುಷದಿಂದಲಿ ಸುತನನೋಡಲು| ಚಿರದೆತವಕಿಪ ತಾಯಿತಂದೆಯನವನು ವಂದಿಸಲು || ಧರದೆ ತಳ್ಳಿ ತರಳನಾಗಳ್ಳನಯೊಳಾದಾ| ಜಚಲಯಣೆಲ ಋ 5೧೯೯ || ೨೦ || ಸುತನ ಶಿರವನು ಸಿಶನುನೊಸದ| ನಶುಕತರ ಸಂಮೋದವಾಂಶನು| ವಿತತ ಸರ್ಷವನೆಲ ರೊಂದು ತೆ | ಪಿತನು ಮಗನನು ಕರೆದುಕಳ್ಳೈ| ಸುಕಲಿಪೇಳೆದ ನವಗೆಸೂಕ್ಶಿಯ| ! ಳೆ(ಲೆಂನೀಅತಾನೊರೆದ || ೨೧ || ಆರಿವುಬಿಜ್ಞೆಯು ತಗರು ಬಪಗಳು| ಳುಲವುತಾಮಿವು| ಮೆರೆಗು ಯುಂಬಂತಣು “ ನಿನ್ನೊಳಗೆ|| ತರಳನದರಂ ನಿರಿರು ರಾಜ್ಯದ| ಹೊರೆಯನಿಳೆಸುವೆ ನಿನ್ನೊ ಳೆನುಶವ! ನೊರೆದು ಮಂತ್ರಿಯೆತೂಗ ಯೋಲಳಸಿತವರ್ನಲ್ಲಿರ್ಣ || ೨ || ಪ್ರಕೃತಿಸಮ್ಮ ಸುಕೃಪೆಯಿಂರಲಿ ಮಾಡಿಯೊದಗಿಸಿ| ಲಗ್ನ ವನು || ಪ್ರಶೃತನೈಭವ ನೊ ಮಗನಿಗೆ| ಪ್ರಕೃತಿ ಸೆತಸಿಯೆ ಪ.ಗಟ್ಟ ತ| ಧೃಳುಟವಿಧ್ರರಧುದಿಂದ ಮೆಳ್ತರ ತಾನು ಮೆಚ್ಚಿಸಿದ || ೨೩ |] ಪಟಿಗಟಿ,ದ ಬಳಿಕ ರಾಯನು ನೆ‡,ಸಡವಿ ಸತಿಜೊಡನೆ ಪೊರ| ಮಟ್ಟನಾಗಳೆ ಮುಕ್ತಿಗಾಕಿಸಿ ನೃಪತಿರಕೋರುಣೆಯು || ಮಂ| ದಟಿನೊಳ್ಳಾಗಣಸದಿತರರ| {ಓಕೆ ಕೆಲರು. ಗಣನನೆ ಸೇವಿಔರ್ದರು| ನೆಲದೆತದಕದೆ ಧಾಳಿಯಿಟ್ಟಿನು | ಶತ್ರುಂ»ಯರಮೇಳೆ || ಬಳಲುದಿನಂಗಳಿನೊಲಿಸುತಿರ್ಪರು| ಬಲಿಯು ವಿಶ್ವಬೆತಾಖ್ಯನುಂ ಮೇ| ಗುಣವಂತನುಂ ಫ್ರಮಶಾಷ್ಯಿನಾಗ್ರಂಗ || ೨೩೫ || ತೆರಳಿ ನಾಲ್ವರು ರಳದೆಸಬೆವರು| ರೊಸಗೆ ಖರ್ನದನೊವದಿಸುತ್ತಲಿ] ಶರಲು ಮೇಳಿದರಸ್ತಶನ್ತವ ಬೀಗ ಪನಿಚನಕೆ || ತರಶರದ ಶಸ್ಥಾಸ್ಶಗಳ ತಾವ್ | ಕೆಲರುಯೋಧಕ;| ಕರಿಯನಮೇಲೆತ್ತಶಿಟ್ಟರಾಗಳೆ ಕೈರುಗಳನವಕು || ೨೬ ||
೪5೬0 £5ಗ್ರಜ ಗ ದಳವ್ರಸುಶ್ತಲ್ ಗಣನಬಳಸಿರೆ| ಬಳದೆಬಿರಸುತೆ ಬೈ ತ್ರಯಾತ್ರೆಗೆ| ಘಳಿಲನಾಗಳ ನೂರುಯೋಬಒನರದೆಡಿಯನಾವಸಸಿ | ದಳವು ನಾಲ್ಕು9 ಕಡದೆಯೊಳವನನು ಒಳಸಿ ನಡೆದುದು ಕವನೀ| ತಳವ, ವಾದ್ಯತಬ್ಧ ಕ್ರೊ ಡೆದುದೆಕ್ಹೆಸೆಯು || ೨೭ || ಕೆಲದೊಳೆಡರೊಳ್ತೂ ಲಿನಿಣಯು| ಬಳದೆ ಸುಅಭನು ಸೈನ್ಫಮಧ್ಯದೆ| ಕಲತುಗಣನಿರೆ ಬಳಿಕ ತಾರಾಮಂಡಲಾಂತರದೆ || ನೆಲಸಿ ಕಣ್ಗೊ ಳಿಪೋಷಧೀರನ| ಕಲೆಯಪಳಿವಂತಿರ್ಣ ನೀ ಘೂ| ಯುದ್ಧ ವಿರರನೆಲ್ಲ ಸೋಲಿಸಿದ || ೨೮ || ಗಿರುವವಿಲ್ಲದ ನೃಪರ ತಿರಿಯೊಳರ್ವಾ ಧೂಪರಿಲ್ಲರ ಒಜತಿಸಿಕೊಳುಗೊಳದೆ || #೪ ತಿರಯನೆಲ್ಲವಗೆಲಿದು ಕಾನಿಕ| ಆರನು ಕುವರರು ಶಾಂಕರಾಗಡೆ! ಮರಳಿ ಛಟರು || ೨೪೯ || ಇಂತುಸ್ಕಾಂದರುರಾಣಾಂತಗಳಶವ ವ ವುನ೨ರಕನೆಯ ನಾಲ್ ನೆಯ ಈ )[ಕರಣ. ಸ್ ಮುನಯೆವುಯನ್ಯ ಶೆರದೆಮೆರೆರನಸೊ ಮೂರುಲೋಕದೊಳಾರುಝಿಳೆ ನುಶ| ಮಹಿಯೆನೇ ತೆ ಗಿ 3ನು ಮಹಿಯನೆಲ್ಲ್ವ| ನುಂತೆಗೆಲ್ಲಾಬಳಿಕ ಚಿತ್ತದೆ ಚಿಂತಿಸುತ್ತಲಿ ದೇವಲೋಕದ ಗೆಲವನಾಕಶಿಸಿದ || ನಿಂತು ಗೆಲ್ಲ್ಗಲು ಬೇಗನಡೆದುದ ನಂತಸನೀನೆಯು ? || ೧ || ಸುರಳೆಬನಡೊಳು ಕಂದುಳಕುಮುರೆಯ | ನರನನಾಗೆಳೆ ಬಲುಮೆಯಿಂದಲಿ| ಹರಿಯನಾಂಕೆಲಿದನು ಸುರವಹಖಿತಲಯಡೆನೆತಾನು || ನ ಫೋಗಿದೈತ್ತಗ| ಕರುವುನೆಲ್ಲವ ಶೇಳೆಲಿಂಗ್ರನು| ಕೆರಳಿಗಜವನು#ತ್ತಿಸುರಗಣ ರೊಡನೆ ಈ ರವೈಟ್ಟ || ೨ ||
ಚೆನಕನಿ ವಖ್ತೆ 5ರವಬವ‰ಳನಾಂತು ತೇಒಮೊ| $ರದಿಳೆಂಡವ |; ತೆರಳಿಕಂಡಾಗಣತಿನಿಂರ್ರನು| | ರೊರೆದು ಕೇಳ್ಬನಕ್ಕವನು || 4 | ಅದನುಳೇಳನ್ತಿ ಗಣನುಬಳಿಯಿಂ| ನೀಯೆತೇಬೆಯ ! ವಿದನು ನೀಡು ವಿಬುಧೆಗತಿಗೆಗನು || ತ್ರದಶರಾಲಿಸಿ ಗಣಗನುದಿಯನಃ| ಸಡೆಯೆ ಗಲು ಕೋಪಣೂಳಸುರ| ನೊದರೆ 5ರಗಳನವರು. ಬೀತಿಯೊಸೋರೆ ಡೌರಸ್ಗಿ || ೪ |] ಕರಿಯನೇರಿದ ಹುಗೆವೇಳ ನು| ಶುಕುಗೆವೆ®× ಮತ್ತ ವೆ ತ್ಯವಿ\ ರಾವೆತವೆ ತೋರ ರ ವೆತವೆ [[[ ಸಳಿಯಮೇಲಂದಿಳೆದು | ?-ಲಗುನೀತಿಯೆವೂರ್ಗಮವಿಡೆವೆನ| ಲಿರಡೆ ಸಮಿತಿಗೆ ೨ರಳದನು || #%|| ಇಕ್ # ಕ್ 4೩೬೨, ೨ ಸದೆಯಲಳಿಂರ್ರನು ಪವಿಖೊಇಗ?| ನೊದುಬಿಗ ನು ಮುಳ ` ಗೋದನು | ವಿದಿತವಿಕರಮನಂತೆ ದಇವನುನೀಗಿ ಛೇತೆನಿಸಿ || -= # \ = ೭ ಈ. ಎ ತರಿದಕಪತಿಯೆನು ಶ#ರದೆಖೊಡೆಯು| ನೆಲಳೆಳಡಲು| ಬೆದರಿಶಳಕ್ರನು ತೊಂದುಏಡ್ಡವ || ಓ | ² 7\ { ಮುಸ್,ಯಿಂದರೆ ಗಣನು ಶಶ್ರನ| ನೆ ರ ಹ4ಣಯಿಲಾಗಳ`| ಪಿಷ್ಕೃಗಾತ್ರನುಮನಾಗಿ ಮುಳ್ || ತಣ 7: ನಿನ < ೨೩ ಗೈ ಮ 1 ೧ ೭೫ ೫ಸವ: || ೨. || ‹ನ೯| ಇ ಕ ಮೈ ೬ ಬನ್ಷೆ ರಾ ನ 4೩೫ ೪. ರಿಇಬ್ಬ ಸಿ 9 ಸಿ - ೪ ನಾಳುನೆನು ಬದ * ಆನ ನ್ನ ಒನ್ನ ಮಾಂತುದು ಹರಿ=ರ ದ್ರಿವ್ಹಿದಿ || # \ $ ಸನ್ನು ತಾಧಿಪಗಣನು ಸುರಗಣ| ಶೊಡೆದು ಒಬಮಬ್ಕದೊಳು| ತನ್ನ ನಕ್ತನದೆಷೆಗೆ ನಣದನು ಪವೆವೆಳಸಿಕೂಡೆ || ಅ || ಅಣುಗನೆಯ್ತಹ ಸುದ್ದಿಯಾಲಿಸಿ| ಗಣನಗ^ಲ್ಲ ಕೆ ತದತಾಯ್ತಿರು| ತಿ ಮುಕನಾದನೆನೆ || ಕ್ರನು ಸೆರೆಯೆನೊಂದಿಯೆ ಮುಕ್ತ ತಣದು, ಶಕ, ಗಣನತಳ್ವೈ ಸಿಪನಿಸಿ ನಲಿಸಲು| ತಣದರೆಲ್ಲ್ನರು ಜಯಳೆ ಬಳಿಕಾ| ಗಣನು ಧರ್ಬದೊಳಾಳ್ಳು ಧರೆಯನು || ೯ ||
ಕರಂಬರೀ ಸಂಗ್ರಹ ಒ ² ಜೇಲವನುಟ್ಟು, ತಲೆಯೊಳು| ನೀಲಪಟವಂ ಮದೆಯೆ ಧರದಿಂ| ವೆಸೆರದೆ || ದರೆ ಚೇಂಟೆಯೆವೆ % “ಈ ಇ # ==, ಭ. ಅ)ಭಛೆತ,ವೆ ನೀಲಹೆಯವನು ಪಶ್ತಿಗಣನಾ| ನೀಲಮಾಳೆಯ ಧರಿಸಿ ಸೂಗೆಯಿಸಿ | ನೀಲಬಾಣ ನಿ˜ಲಥಧನುವಿಂದ || ೧೦ || ವೈರೆವಭೂವನು ಶ ೭ ಧರಿಸಿಗೋಧಾಕತನು ವೃತಾಂಗುಳ೪| ಯಿರಠಲಿ ಸೇವಕರವಗ ಸುತ್ತಲುನೆರೆದು ಒಓನಡಿಡೆಗಿ || ಗಣನದೃಷ್ಟಿಗೆ| ಪಿರದುಕಇಣಿಕೆಯಾಯ್ತು ಮೃಗಗಳ್ | ಚರರು. ಮಿಗಗಳಳೊಂದು ತಮ್ಮಯನೆಳೆಗೆ ಕೊಂಡೊಯ್ಮೆ || ೧೧ || ಭರದೆ ತಮತಮಗೆವರು ಸಾಗಿಸೆ| ಯರಸಮಿಗವನು ಕುರುಪವಿಡಡೆಯ್ದೆಂದು ಮಾರ್ಗಣಿಪರ್ಣಶಾಲೆಯನು || ವನಿಕಿಸುತ್ತಂ ಭೃತ್ತರೊಡನವ| ನಿರದೆಗಕ್ಕರನು ನೊಂದರವರುಂ! ಸರದೆಮಿಂದರು ತಿಂದರಲ್ಲಿಯ ಗೆಡ್ಡೆ ಗೆಳಸುಗಳ || ೧೨ || ತಿ9ಬಒನಗಳನೋಡಿ ಮುನಿಗೆಳ| ಡಿಂಥಭಮೋಡಿದರತ್ತ ಗುರುಡರ| ಕಳ ನುಡಿಯನಾಕನ೪ || ಇಂಬಿನಿಂದುಪಚರಿಸಿ ಗುಣನಿಧಿ| ಯಂಬಳಿಕಬರನೇಳ್ವುದೀಯೆಡೆ| ಗೆಂಬವೂತಂಳೇಳ್ಳು ನಡೆದರು ಕಿಡ್ಗರವನೆಡೆಗೆ || || ೧೩ || ಒಂದುಬೆಸಗೊಳೆಭಾತರರರಗನ,| ಸುಂದರಾಂಗನೆ | ಕಸಿಲಮುನಿಪನು| ಕಥಿಯ ನೆ ಸಂ ಆನ್ಸ್ ನೆಲ್ನ ಯಮ ಮೌ ಉ ಓ ೪ ಎಣೆ ಮೌಳಿ « ² . ಇದೆ ರಕ್ಷಿಸಿ ಆಣ್ಷೆ ಇತ್ತೆ ² | | ಒರಿಣ-+ ಕರಿ ಕಳು೩~ಟಣಿ || ಬಂದೆವದರಿಂದೆಮ್ಮೊಡನೆ ಬಾ| ರೆಂದುನುಷಿಯಲು ಕೇಳ್ದುಕ೭ಲನ| ಸಂದರುಶನವಬಯಸಿ ರಾಯನುನಯೋದನವರೊಡನೆ || ೧೬೪ || ನೃಪನು ಒಂದನೆನುತ್ತೆ ಗುರುವಿಗೆ! ರುಪಲು ಶಿಷ್ಕಾವಳೆಯು, ಕನಿಲನ! ನೃಪನು ನೋಡುತೆ ಮನದೊಳಾತೇಚಳ್ಕೆ ಬೆರಗಾಗಿ || ಕೃಶೆಗೆನಿಧಿಯಾದಿವನು ದಿವಸಾ| ಧಿಪನಪರಿಯಿಂದೀಪೃನಾಗಿಹ| ಮೆರೆವುರಿಂದವನು || ೧೫ || ಪರವುಭತತಿಯೊಳೆರಗೆಯೋಗಿಗೆ| ಹರಸಿಳಕಸಿಲನು ನುಡಿದನರಸಗೆ| ೩46 ಸಾ*-® ಭರದಿನೀನಾರಿಲ್ಲಿ ಶೆಸರೇನು || ಒರೆವ್ರರದಿಂರೆನೆ ದ್ರೆತ್ಯನಾಲಿ೩| ತಿರೆಯೊಳಾಂಗಣ ದ್ರೈತ್ಸನೆನಿಪೆನು ಸಳದೆನಡವಿಗೆ || ೧೬ |
ನ ರಿಶಿ ² ೨, ಎಟಿ ಮಳಲ ಮತ 8೯7 ² ² ಸ ಬನ್² 3 00 ನ ² ಈ ನ $0 ² ೪ ಶ ಔ 4 ಈ ಪ ಇಕ್ ಚ್ ಈ. ಪನೊ ಸತ್ತ ಒ, ನ ಈಸ್ ಪ್ 98, ಕಂಡನಾಶರವುವಿದೆನು - 7೨,೭4೪ ‰ಒಳ್ತ್೪ ವ²°೩„ | ೩೨೫೧೪೫೦೨೦0 ೫೨000000 05900೫0000 ಈಟ್, ², + - * > ಘಂ ಕಈ ಓ # „, ೫ ಎ, ೪೬ ಫ ಟೌ. ಎಚ್ 1೩ ಸ ೩4 08೨0884೪ = 040 ಶ ಕ್ಯಾರ = ಗ ನಿ೭೪-#] . .೨ ೨೩.೬.“ ಎಹೌಕ್ಷ್ 157೫] ಗ್ಲು. 7೪೫ ೫ ೫೫೫ ೫೫೫° ೨ , 50, ² ಜ ತತ ಯೌ 5 ² % % #5 ×® ಓಫ್ ತಂ ಈ} 3 , ಹೆಪ್ಟ ಬ್ರ ಇಜ ಹರ ೬ ಸೀನಿನೆತಸಿಯೆ ತಡಿ... * ಸ್ಯಾ ೪ ಕೈ ಈ -33× ದಜಂ‰ತಿದಿನಲಿನಿರೆನು | ಮೌನಿಯೆನಗಾ ವಾ 7,^ © “1೪ ೨ : ಣ || ೧೮ || ಮನೆಋಖುನೊ ಯೆ . ೪, ೨೨ ಎ ಗನಿ ನ} ನಿನ || ೧೪ || ಗ ² “ - £ 8 ೫11 ೬® -; ಈ =, ಸುತನೆ ! ಬಿಂತಾವು?` ::. ಐ.? :] ಕೇಳ್ತುನೀನೆಯು| 1 ೬ ಈ “ ಹ್ ಯೌ 10 100 ಈಟ್ ೨ ೧೩ ತ ತ ಸಸ್ಥಾಚ್ ² ೨೩0 ೨09೬೧000 ೨ ² ಉ ಆಗೆ “ ಕಂ ಇಬು ಆಹ ಪನ್ನ ಲದ ಸ್ಥ ಹಸೆ ಸ್ಟನ್ 8೬5೬ ೬0 ಕೆಪ್ಟ್ ತ್ ? ² 5 %, ೪9೧ ಸಸ್ಶಾವಿ ಗಿ 4೩೬ ೩ನ) ಸಿಒಗಿದಿ9| ಎಲ್ ಎಲ್,. @ ೭ ೨ ಹ ಟಿ ² ಈ - %. ² 7 ಹ ಆಕ್ ಕರಕಲು 36 ಆಂತರಿಕ ಹ # ೩ , £ ® ವಿನಿ ೪೩೯-೭೯3 ಒ ಕನ್ ಅಹಂನ 8 8೬ ² ನ್ನ ಸ್ || ಆಲ್. ಮಲ್ ಫ್ರಿ ಮು ² ಎ ² ಸ ರಂ ²0 ಈಸ್ ಹ ² ಆಗ್ ² 5 ² ೯೫೪ ಸ್ಥ ಸ ಕರೆ ಪಸ್ಟ್} ಹ ಸ೯ ೧೯ ೧೯೬ 0090 ಸರ ಸ್ಕ್ ತ ನಂ ಇಕ್ಸ್ \ ಬ್ ೩5 5 ಣ ನ 7 ಶ್ವಸಸ್ಥಿಷ್ ಸೆ ನ್ನ್ ಸ್ಥ ಸತ ಹೊಂ ಅಹ ತ 33 ಕ್; ಕ - ² 8 $0 ² ಈ ೭ ೨ ² 54 ² ಗ್ಲ್ 7 # ® ಸ * ² ಕೌ ಈ - 7 - , ಗ್ಲಣಯ್ಯೆ 1 ² _ ಸ್ಥ ನ್ನೆ ಸ್ಥ ಸ್ನಸ್ ಗಂ ಸ್ ನನ || ೨೧ || - [ ಚ) ೨.೨ 4. ಲಸ್. , , ಟರ = ಅನ್, ² ಔ8೫ ೪ 198987 ೫1 ಕ 5%. ಹ ಆ ಆಲಸ್ ಕ್ನಟ್ ನ # ಘ ಈ ಸಾನ್ = ಆನಿ“ ನ. ೩, ವಿನತಿ ಈ ² ² ಯೈ - ಕ ೨0 ಚೇನ್ ತತ ಪಂ ಶಂ ಸ್ಥ ಕನ್ ಕಸ್ ಪಿಗ ಸಂ ಇನ್ « « ² | ಫ್ ಅಭಿ ನ = ದಲ ಗ್ಲಾಕ ನಡಿ ೨08 4008ರ ಕ್ಲಚ್ ಪ ಸ್ಟನ್ ೯ ಸ ಪ್ಲಸ್ 0 ಜ್ ==, ಕಸಲೇ °. ² 400೬7 0೩೫ 30 ² ಒನ್ ² ² ಹ ಮೆನೆಗಿ ದಿಕ್ “೯ - ಈ ನ್ಮೈಂತತೆ 008 ಹ ಕೈ ೨ ಸಸಸ ಟ್ | # ಒಂ ಕ್ರ್ “ಕಳ ಣ ಣ. ಸ್ಕ್ 7 ಡೆನು ಬ ಈ $ | ಟು ೧ ೧ 3೯ ಸಿ ² ಒ ೫, [ಳಿ £ ೧9೩೯೬ - @ ® ಹ { ಆಕ್ ಔರ್ ಪ್ರ“ ಇ,೨ಗ « ಸೌ ಕಥೆ ಉ $. 8 || ೨೨ || ® ೪೩೩, ೨೭೭557೨೧ .±77×ಋನಾಗಳೆ| -ಈ ೪ . ಶ . ೩, ೬ ೪ ಕಾಲಗ ೪೪ ಮ್ 1 @. ಆಲೆ ಸಂಟ್ ಇಹ ನಂ ೬ #೨3 ಆಕ್ ಓಲೆಗೆ - ಕಾಂಗ್ ೪ ೬ ೭0೪೩, ಕಣ 7 ೧ - 5 5% ೬ #55 ೯೬=೫ ದೆ ಇ‰‰೪ ನ 3 ಈ ಬಿ |
ಸೆಂಗ್ರೆಹ ೪ ಮುಂದೆ ಜನಿಸುವನೊರ್ನನಾಗಳ್ | ಮಂದಮುತಿನೀನೆನ್ನ ಸಮ್ಮ ತಿ| ಔ_) #3 «ನಿರಣಗೆ || ನು ಒ 9ದುಯೆ ಮಣಿಯಿದನು ಒ ಯೊಂದರಿಯೆ ಬಂದಿಗೆಯ್ಯು ತ್ತಂತೆ ಕೊಳ್ತನು| ಒಂದೆದೀವಸಾನಕಾಲವ| $ ಈ ೧ ಆಶ್ಲಿ ಈ ಒಕ್ ದಿಂದುದುಷ್ಕನೆ ! || ೨೪ || ಒರೆಯೆ ಮು: ಪನು ನಡಗುತೆ! ಮರೆ:ಗೋದನು ಬಳಿತತನ್ನಯ!| || ಗುರುವಿನಂಘ ಗೆನಮಿಸಿಚರ್ಗೆವೆ| ಸೇರುತೆ! ತಿರೆಯಪಾಲಳಿ < ಗ ಪಾಲಿಸು ತಂದು ಛ4ಣಗೆಗಳ || ೨೫ || ದಿಡಡೆವೋಗಿಸಿ ಮೆ (ಗಿಸಿಬಳಿಕಮೆ?^® ೨೬39 ಇ ; ಸ, ಇ ವೆ? || -- ಕೊಣಿನಿಯೊಡೆಯ-ನು 7[1ಇನು ಡೆ ತೆ ರ| ನು ಕೋಶಮೂರನು | ಒಗಡಿ..ಸೆ:ಗೆ || ೨೬ || ಇಲ್ಲಿ ಗೆ . .×೫೯೨5.೩:× ಶಿ: ತಾಮಗ್ಳುಪಾಖ್ಯಾನವೆಂಬ ೫ 708 = 9೧೬ ಲಕ್, ಲಿ ನ,೭: ± 5 ೧೫ -: . ವ ಗಿ ಗಣನವುರಣಳೆ ಕೌರಗ:3ಗಳಿ :- ಕಿಸ್ನಿಣಿ ²: ~ . ಅಕ್, 1 ® =ಸ ವ 3 ಈ ಈ ನ್ಯೋಂ ಇಕ ² 88 ಇದೆ ಆ ಈ - ಲ್ಸ್ - ೪ ೩೨,೬೩೬೩ “ಈ೬ ೨೨೯೪, ನವಪತಿ 1 || ೧ || ತ @ 5 ಶ › * | ²: ೧೯, ಈ“ = ಸಃ ಟಂಕ 1| ಇನ್ == ಈ ಆಫ್ನ ಹಂತಿ ಇಟ್ಜ್ ಸ ಕಿಫಿಂ ಉ ಈ ± 3 1 ಕ್ಮೌ. 7 ೧, 55 ಓ ಅಂ ನಾರ್ಮ್ ಹ್ ೬ ರ್ಒಲ್ರಿ ನ್ ೫ ಮೊ $. | 5೬೧೬೫ ೧ | ಪದೆದಿತುಳಿರುದು ಫೇ˜ ಖ್ 4 ಗ್ # ಸ್ ›“. ²71 - | ೬ ೨ ೨7% ಡ್ರೆ ಳದಳಸಿಲ್ಫಿ ತು ಆಡೆಲ್ಲ, ನ37 , ಖಿ || ೨ ||
ಚೆನಕನ ಸುನ ಶರುಣವೇಕವರಿಸಿ ಶೇಜವು| ಡರಿಸೆಮುಂಗಡೆಯೊಳಗೆ ವಿರಿರುಮೆಲ್ಲೆ ಡೆಯೊಳಗೆ ಕಾಣುವ ಮಾಯೆಗಂಜುತ್ತ || ನಿಕುಕಿಸಿರ್ದುದಿದೇನು ? ಚಿಂತಿಸ| ದೊರತಿತೇನಿದು ? ಮೆಂದುಕಿನ್ನೊಳೆ| ಧರದೆಚಿಂತಿಕಾಂತನಾಗಲು ಮಾಯ್ವೇಳಿದಳು || ೩ || ನೆನೆದುಜಪವನು ಮಾಡಿಶಿಗನಾ| ವರಂಗೆಳವಡದು ತರಿದನುಮೂಕುಲೋಕವನು || ಬೆನಕನಲ್ಸ್ಬರೆ ಗಣನವಧಿಸಲು| ಶನಗೆಸಾಧ್ಯ ವದಲ್ತುಮಿಕ್ಕಾ | ವಿನುತಸುರರಿಗೆ ನಿಜವ್ರ ಳೇಳ್ಳೈಜತಿಯೆ ! || ೪ | ಜಗವನೆಲ್ಲವ ಜಗವನೆಲ್ತ್ನವ ಕೊರೆವನವನೇ| ಜಗೆವನೆಲ್ಲ್ನವ ಳೊಲ್ನ್ರನಾತನು ಫುಸಿಯವಣಕ್ಣ್ | ಮಿಗಿಲುಬೆನಕನು ಇಟಿಬೇಗನೆ| ಮುಗಿಸಿಳೊಂಬನು ದೈತ.ಗಣನು| ಜಗರೊಳಾರ್ಗಂಸಾಧ್ನಮಿಳ್ಲೆನು ತೊತೆದಾ ಮಾಯೆ || ^ |] ಅದನುಕೇಳ್ಬ ಮುನಿಯು ೭ ನನಿಯಿ ! | ಪುದನುತೂಲಿಕ್ನೊ ಸದ್ಯ ನೀ 7 ಜಗದೊಋ || ಸದಯೆ | ನೇಳಿನೆಮಾ 3 ನುಡಿದಳು| ನೀನು ಬಿನೆತನೆ! ಹೈದಯಪದ್ಮ ರೆ, ನಿನ್ನ ಮನೆಯೊಳಗವನು ಡ್ರಟ್ನ ವನು || ೬ || ನ9ದಮಾಯೆಯ ವಃ‰ನೆನಾರವ| ನೀದುನವಿದನು ನರಿನೀ| ಮಿಂದು ಬೆನಕನು‡ ಹೇತುವನೆನೆಗೆ ಲಸಸೀಗ || ಸಂದಭಕ್ತಾ ›.ದಂದೆ £ತೆಋಯ| ಮೇದಪಾಸದಿ ರಗಳನಿಮುನಿಗೆ || ೩ || ಮಂತ್ರವಿದು ಬಳುಸಿದ್ದಿ ದಾಯಳ| ! ಒಸಿಸುವವಾನಣ| ನೀನಃ ಮೋಂಕಾರಾದಿಯಂವುನದೆ | ಮಂತ್ರವನು ಪದಿನೆಂಟುಲಕ್ಸ್ನದಿ| ವುಂತ್ರಿಸೈವಿಧಿಖಿ3 ಮಂತರಭಾಗರೆ ಹೋಮಮಾಡಿ ದಕಾಂಶವಿಂತಗನು || ೮ || ಯ| ನೆ:ಸನಾಹಿತನಾಗಿ ಕುಂದ್9| ತರರೊಳೊಗೆವನು ನಾಲ್ಪು ಬಾಹುವಿನಿಂದಲಾಬೆನಳ || ಢನಾಗುತೆ| ಡೆನಿಂಹಾರೂಢನಾ ಧರಿಸಿದಿವ್ಯಾಂಬರವಧೂಕಣ| ವಿರದಿಸಿ ಔಈಗೆಗಸಓಡ್ಡಿ || € ||
ಕಾರಂಬರೀ ಸೆಂಗ್ರಹ ಣ ನಮೋದಳಂಗಳ] ಬಿಡದೆಳಕಮಲವ ಫಸ್ಟ್ | ವುಡಿಮಜನಿಯಿಸಿಬಂದು ನಿನ್ನಿಷ್ಟರವನು ಸಲಿಸುವನು || ಒಡಿದುಳೊಳ್ವನು ತಾನುಗಣನನು| ಬಿಡದೆಚಿಂತಾಮಣಯ ಬೇಗನೆ] ಬಿಷಿಸಿಲೊಡುವನೆನುತ್ತೆ ಮಾಯೆಯೇ ಮ್ಮೈಗರೆಯೆ || ೧೦ || ಮಾಯೆಯೊರೆದುದನೆಲ್ಲ ವನು ತಾ|| ನಾಯದಿಂದೆಲಿ ಮುನಿ| ಹೋಮ ಜಪಾಗಟೆಲ್ಲ್ನ › || ಮಾಯೆಯಾಡಿದರೀತಿಯಿಂದೆ ವಿ| ನಾಋಕಾಖ್ಫಿನು ಗೆರದನು ಬೀರಿಸಂತನವ || ೧೧ || ನೋಡಿ ಗು,ನಿಸನು ಚೆನಳರಂದನ| ಬೇಡಿ ಯಾನ ನಾಗಿ ವಂದಿಸಿ! ಬೋಷಿಸುತ ಕರೆಯು ಮೆ ೨ £ ಈ = ಯ ತರ ಎಕ್ ವೆ ಒಗ್ಗಿ, ಧನ್ತ ನನಾ ೨ದು || ಕಣಡಿಮೀದಲಿ ವಾಪವೆಲ್ಲವು| ಸೊ ಡಿಯೋಮದೆವು ನನ್ನ ತಿಗಳ || ೧೨ || ಳೋ˜ಆಕ್| ನೆತೆಗುಣಾತಿ + ಮೂರು 75 ಮಗಇಣ @ ಪೈ “47 7 ಗನನಿನ್ಟ್ನಡಿಯೆ || ಆರು ತನದ «| ರೊರೆದನೆ ೫ ದ] 15 -೬ಒ-ಕ್ಲ ಆ ೯5 £% € ಹ.. ೬೨ 5 4 ಆನ್ ಚ್ $ ಹಂ ಈ == ಬ್ರ ೫ರ ಒಂ ಎರ || ೨೩ | ಪ್ರಶತ.ಳು ಬೆಂಕುಂಟಾನುಗೊ.‰ಋಯಲು| ಹಾಸ್ಯ ಧಾದಿಯ | , ಈ ೪ ನು ,ಗೆ || ಇ ನಿರದೆ ತಲದು ಧರೆಕೇಳೆ :ದ || ೧೪ || ಬನತ ನೆಗುತನಿ? 1$ದ| ಆಧಿಯನಃ | ಜಂದ್ರರೇಖರಂರನಂದು ನೇಳಿದನು || ಘ`ನದಗಕ-.. ², ೭ ಈ ಇ ಷಿ ಕಈಧಿಯ ಲ್ಲಯಕ್| , || ೧೫ || “ಜ 7 ಕುಸ್ಕಾ೭ವೆದುರಂಣಿ೦ತಗ೯ತನ‡ವೆ ವಿನಾಯಕವಿಜಯರೊಳ್ ಚಿಂಕುಮ್:ರೂಖ್ಮಾ ತವೆಂಟ ಏನೆ ಮುಗಿಮರು. ಎ ಬ
ಟೆನಳನಕ ಅರನೆಯು ವೆ ಕರಣ, ಸೂ || ಹನೆ ! ಬೆನಳನು ವೈಶ್ಯ ಗಣನನು ತ ಕಿ 3 ರಿನೆ ಲ ಗ್ರಹ ಯೆರೆ ಇರಲು ಕೋಣಪನೊತತನಾಢಸ್ನ| ಕರದ ಸಿವಿಣವ ಕಂಡನೆಲ್ಲ್ಗಳೆ| ಪಿರಿದು ಛಯವನು ತನ್ನ ನಾಶಕೆ ಹೇತುವಾದುದನು || ಭಂರೊಳಿಲ್ಲರಂನೆದ್ದು ಕರೆ&3×| ತತಳರಿ+೯ ಸಿತಿ ವೆಂತ್ರಿಗ! ಳೆರರೆ ನಲ್ಲಣನಿತತನ3 || ೧ || ತಿರಿದು ಚಿಂತಾಧಗದಿನವನಿರೆ| ಮೌನದಿಂದಲಿ! ನಿರುತಿನುತ್ತಂ ಟಣನವಂತ | ದೊರೆಯ ನಿನ್ನಯ ದೊರೆಕಿನೀವ್ಬ<ಯೇತತಿರುಳೊಳು ಕರೆದು ರೇತಳೆ ? ನಮ್ಮನೆಲ್ಜರ ೭೦ಗು *೪9ದೆ || ೨ || ಒಳೆಕ ಳಅಂಡ,ತೆಂದೆಯು| ` ಮೊಗೆವಿರು| ಈಳೆಯನುಳಿದಿ ಹುರೇ ತ ? £ ? ನ್ರ: ಸುತನ ಘಳಿಲನೆಂಬಾ 3ಇತನಾ೦\೩| ಒಳವಗು?ದುತರಾಯನೊ ಗಳಿಶಶುಧದಾ ಸ,ಪ್ನ ದಂದನನುಡಿದನೋಲಗೆದಿ || & || ದಳವೆನೊಡಗೊ ಸರ್ಟ್ ಚ| ಗಳಲಿಮೆರೆಯುತ : ಜಳಚವೆರಡೆನು ಸಿಡಿದು !! ದಳ ನನೆಲ್ಲ ವತಿಂದು ದೆನಿಯ| ಳದೆ : ರನ] ಬಳಿಳಮೆಸ್ನ ಯಕಶಿರವು ಶ3ನಂದೆರಷುನೋಳಾಯ್ತು || ೪ || ಳರೆವೆನ್ಶ| ×`ನದನಿತೆಯೊಳ್ಗೆ ವುಗೆ | ಲ್ಯೆನಲು ಕೇಳ್ತುಂ ಶ್ರಮ:ನೊಂದ ಐ ಬ 1 ಸತಿಯೊಳು || ಜನವ : ಹೆ ಫೆಯುವರದೇ± ನಿನಗೆ, 3 / ಫ್ರೇಳ್ಳುದೆ : ? 14೪ 1 \ ) ಇಸಿಲ ಸ್ಡಿಳ || ಗ || ಪ್ರವುಥನಾಶಿದನು “:ಮಮುಳರ ವು ನೂಕ , ತದ ||
ಸಮ ಜ| ಬೀಗಮೆಂದಿನು| ಶವ.೬ವೊನಿಗೆ ಅದು | ಯೆರವೆರು ನರರನೋಂತಿನಫಲವ್ರ ತಮ್ಬದಗಿಂದು ವಿನ್ನೈಸಿ || ಮೊದಬು ಲ್ಲ ! ಕೇಳಂದ || ಮಿ { &. ನ) ಸಿಕ ) ಒ [೨೫ ೧೯೫ ಇ ಗೈ < ) ಪ್ರಾ % ಳಿ 7೨, ನ ತ್ರ, ಫ್, ಈ ಅರಸನಿನಗಿರಿಂದೆಸಯನೂ| ನಂನೆತಿತ್ಸಿ ನ ನೀನು ಯೋಬ] ದಿರವಿಬಿಂತೆಯ ವುದು || ಳ ನಲುದಾ | ನೆರೆದುನಡೆಯೆಲಿ ಮುನಿಯದಂಡಿಸಮೆತಿಮ ಗಣನುಡಿದ || ೪ || ಸುತನೆಮಾತಿಗಿತಂದಡೆತೋ.: | ! .ಜˆ3 ೧33ಣೆಯ್ಸುದನು || ,. . ! ಶೈ ೨೫±²ದೊ-,± 5ನೀಗು ಈ ನಿ೭೧ || ೧೦ || ಪ್ರ “ವೆ ² ± ಒ ೬ ಕಂ | ಗೃರುವಚಗವಾ®ಸ್ಯತ 5 . | ಖೈನುಡಿಖ. == ೨ { #೬ »,೬ 1 ೬) ಈ ತೈ ಒ.) ಈ ೧ 3 ‰ ± ಒ ವೆ == ೨ _ ೨. ಟ್ರೆ ² ಇ‰೪% ಅಕ್ = / | “ಕಹ ಕಕ್ಷ 1 1 ಆಚ ²4 @ ಈ! {) {) ಚಿಂತೆಯೊಂದಿಖಯೆ || ೧೨ || ಅದನು ಈಳುತೆ ಶಿಸ್ಕರಾಗಳಿ| ಬೆಮುನಿರುತಿಸ ಸೀನೆಯೊಡಗೊಂ| ಡಿದುನೆದೈತ್ತನು ಬಂದನೆಂದವರೊರಯೆತಿತ್ತೆಡಿಗೆ |
ಚಿನಕ್ತನ ಮ. ; | ಕೇಳಿ | “ಣಗುಬಂದಿನೆ ® ಈ೨ ನಿದನು ವನತಿಸು ? || ೧೩ || ನಾವು ಮೆಂದವಮುತಿಗಳುಪಾಯವ| ನಾ ದಾವುದಪೆಮೊ ? ಗೈವುದಾವರಿಯೆಂದು ಬಸಸಿದರು |] ನೋವದನಾಂತಾಗಣತು ಸಿವಿಣದೊ| ನಜವಮುನಿಯ ನೋಮದನು || ಗಳ | ಮಗ <ಳೇಕ್ಕಿ ಮುನಿಯು ದೈಕೈನ| ಈದ್ಮನಮೊಳು| ನುಗಿದುಳಂ೩ಸಬೇ/1 ಪೊವಿಮ ಬೆನಳನೊಳು || ಜ 5 ಜಿಯು ಲ್ಲ್ ಇಸ, @, @, ಇ ಗದೊಡೆಯ ಬರಮಣಯ ಕಳ್ತನ| ಬಗೆದುನಂಹುಸನತ್ತೆ ವ ಸಸಶ್ಶ ವಿಶ್ವಂಜರೆಯಸನಲಹುವುದು || ೧೫ || ದುಷ್ಷರನು ಸುಖರಿಸಲವಕರಿ| ಸಿಳ್ಳೈಬನು ಪಳಲಿಯಿನುತೊರಿಯ| || ನುಂಗುವ ಇಲವನೆವ| ಶಿಷ್ಠ್ರಮಾಗಡೆಕೆರವ,ಭಕ್ತಾ| ಭೀಷ್ಕ್ಯಮೊಡೆನಿಸಿ ರಣವಗಿಯ್ಯಲು ಗಣಪಲಿಂತಿಸಿದ || ೧೬ || ಜರೆರುಸಿದ್ಬಿ ಸುಬುದ್ದಿ ಯರ್ತ೪| ನುರದಿಸಿಂಗವನಲಗೆಣವನು| ತರಳಕಾಳಗಕಾಗನಿದ್ಧಿ ಯು ನಮಿಸಿಯೇಳಿದಳು || ಎರೆಯ ! ನಾಂಗಣನೊಡನೆ ಸಣಸುವೆ| ನಿರದೆನಿನ್ನಯದೆಯದೆ ವಿಚಯೆವು| ನುಡಿಯಲುಳೇಳ್ಳುಗಣರತಿಯು || ೧೭ || ಮನದಿಮೆಚ್ತಿದನರನು ಸಿದ್ಧಿಯ| ಳನುವಿನಿಂರಲಿ ವಿವಿಧವೊಗಿಯೆ ನಿದ್ದಿಧುಸುತ್ತೆ || ತೊನೆದುಶತವನು ಕ್ರೂರವದನದೆ| ನೋಡಿಗಣಪನು! ಮನನೆಪರ್ಮಿನಿ ಧುರಳೆನಿಳ್ಲೆ ನಸಿಲ್ಪಿನಿಅಲಾಗ || ೧ $ {| ರಾಋಗುವೆರೆರು ಕಂಡುಚನಳನ| ಮಾಯಿಗೆಯ್ಕಿ ವಳನ್ನು ತೊಳ್ತೆವೆ| ಹ @ ೨ ನಾಯಸಯೊಳೆಂಗೆನಮಿ ಏವಿಧನನ್ಯವನು || ದಾಯೆದಿಂಪುಟಿಸಿಯೆದಾನವ| ರಾಯನೈಮೊಗಮೊರು೪ಣರ| ಸಂಪೆಸ್ತರ ಸಣ್ಮುಖಾದಿ1ಳ || ೪೯ ||
ಕಾದಂಬರೀ ನ ಡತುಕಮುವಿರೈ ಮೊಗರಮೂಗಾ|ಲ ತರಕರದ ದ್ಯಾದಕಶಾಸ್ಭರ| ವಿಶತಮುದ್ಗ ಮೊದಲಾದುವನು |] ನುತಸುತೀಕ್ಲಾ_ನಿಯನು ಬಾಣವಎ| ತತಿಯಕಾಲತರುಗಳ ಫಿಡಿದಾ| ನಿರಿ ಸಿಯವಲೊಳಿಂತೆಂದ || ೨೦ {| ಧುರದೆ ಒಲವ ಪೌರುಜ| ದುರುಒನೀಕ್ರಿವೆ ತಿರಣಮೊಳ್ಳಿ ನುಡಿಯಋಲೋಂ || ಮೊರೆದು ತೊಡೆಗಳ ಒಡಿದು ವೈಲಿಯ| ನಿರಿದು ಭೂಮಿಗುರುಳ್ಳಿ ವೀರಭಘ ಓನಿದೊಸಿದ್ದಿಯನು ಮತಿಯೊಂದಿಯೆ ಒಲವ ವುತತ್ತಿದರು || ೨೧ || ಕೆಲರು ತಾಂತಾಂ ಕೆಲರು ಮುಷ್ಟಿ ವಿಘಾತದಿಂದಲೆ!| ನೆಲದೆ ಕಾಯ್ದರು ಒಳೆಕ ಗುಣವಂತಾಮ್ಮಿನ್ನೆಕರದಿ || ಕೆಲದೆವಿಶ್ವಬೆಕಂ ಚತುಷ್ಪದ| ದಲಿಯೆ ತಾಂಗ್ರಂಥಪ್ರಮಥರಂ| ಸಲೆಯುಮೂಗಣಗಿ ಯಾರಹಿಯಾಗಿ ಕಾದಿದರು || ೨೨ || ವದನ ಪನ್ನೆರಡಾಗೆ ಶೂಲಿಯು| ಮೊದಲು ದಳಮೊಳು ನಿಂದು ಶಸ್ತ್ಯದ| ಸದಿಯೆ ಎರ್ನರನ \ರಿಗಳೊಡನೆ ಯೂರ್ನರನೂರ್ನರೀಕರಮದೆ || ಆಧಟಿನಿಂದಲಿ ಜಯದ ಭಂಗವ| ಕುದುರೆಯೊಂಟೆಯ ಕರಿಯಪತ್ತಿಯನೆಲ್ಲ ಮಡುಹಿದರು || ೨೩ || ನದಿಗಳು | ಧರದ ನೆಲರಿಂ ನಾಲು, ಕಡಯೊಳು| ಕೊ | . ಆಕ್ಟ್ನ | ಕಿರಿದು ಸಿದ್ಧಿಯ ಗರಣದೊಳಗೆ || ಕರೆದು ಲಕ್ಹಾ ಹೃಯರ ಸಕತನನು| ಭೆರಮೊಳೇತನು ಮೊಂದುಶರದಿಂ] ಕೆಳಂಬನಿತರೊಳುಬಂದೆ || ೨೪ || ಒರುತ ಬೇಗನೆ ಗಣನ ಒಲವನು| ಭರರೆ ಓಳನಿದೆ ನಸುರನಿರ್ವರು| ತರಳರಾಗಳ ತೊಡಗಿದರು || ಓಒನಿಸಗಾಲದ ಮೋಡದಂದ| ಶವವ ವರ್ಷವ ಕರೆಯೆ ಗ ಗನರ| ವರೆನೆ ಶರಗಳ ರಾಶಿಬ(ಳಳಲು ಕವಿದುದ್ಬೈತಮವ್ರ || ೨೫ || ನಿರುಕಿಸುತ್ತಂ ಚಿರದೆಲಳ್ತನನು| ಶರಗಳೆಲ್ಲ್ವ ಕಡಿದು ವೈರಿಯ | 5ರವನಿರ್ಕಷಿಮಾಡಿ ಭೂಮಿಯಮೇಲಿ ಕಡವಿದನು |; ನರವೀನೆಯನೆಲ್ಲ ತಾಂಸಂ| ಹೆಂಸಿಲಕ್ತನನು ಗಣನಸುತರಿ|
ಕಿಹ್ಸಿ ಬೆಕಕನಮಹಯೆ ಬೃರನು ಬೆನಕನ ಸನಿಯಳ್ಳೈದಿಸಿ ಜಯವಬೆಸಗೊಂಡ || ೨೬ || ಮಡಿದರೆಲ್ಲ್ಲರು ಗಣನ ನೃನಿಕ| ರಿಡಿದುಬಂದೆನು ತಂದೆ! ರಣದೊಳು ನಿಡಿದುಮಿವರನು, ಗಣನು ಮೊರ್ನನುರಿಂತನಿಂದಿನೊಳು || ಬಿಡದೆ ನೀನೇ ಕೊಂದು ಗಣನನು| ಮೊಡರಿನಮೃತವ ನವಗಮಿಳೆಯೊಳ! ಗೊಡದಿಯದ್ಮೈತ್ಯನ ಸುತರಿಗೆವನಿಯ ನೀಡುನೀನೆಂದ || ೨೩೭ || ರಶ್ ಚಂತಾಮಖ್ಯು ನಾಖ್ಯಾ ನವಿಂಟ ಆರನೆಯ ಪ್ರಕರಣವು ಮುಗಿದುದು. ವಿಳನೆಯ ಪ )ಕರಣವು. ಸ೩& || ಗಣನನು ಗಣಪನ ಶರಮಟಿ೨ಶಾಮಣೆಯ ಫಿರೆಯೊಳೆಎಂದಿಯೆ ಮುನಿಯ ಕಪಿಲನಕಾಯ್ಡ ನೇನೆಂಬೆ)| ಶನುಜ ಳೇಳ್ಳೈ ಸಿದ್ದಿ ಇಕ್ರನು| ವಿನುತಲಳ್ತ್ನನು ಜಯಿಸಿ ಬಲವನು| ಜನಪಸೂನುಗಳೆಂದು ಕುವರ ತಿಳಿದು ಸಲಹಿದನು | ಮನಯೊಳಂವಿಕೆಯಾಂಶರುಳಿದರು | ಕೊನೆಗೆ ತಾಂಗ್ರಂಥನರಗ-ವರ| ೨೬ ಶೂಲನಾಣಯು ಕಾಲಬಒಲದಿಂ ಯುದ್ಧ ಮಾಡಲು| ಕೋಲನೆಲ್ಜ9 ವಿಷಿದು ರೋದರ್ಗೇನು || ಮೇ ಗಣ ನಾಅಂಮನು ತುಂನುಷಿಯುತಿಕಣಾ | ನೇಳೆಗೊರ,ನು ಭರರಿ ಬಂದಾ ಗಣಗ || ೨ || ಸೆ ಕೇಲ್ ನಿನ್ನ ಮಳ್ಕೈಳು| ಧುರದಿ ಕಾಯ್ದರು ಪಿರಿದು ರಳವನು| ತಿರೆಗಿಮ‰ಗಿನ ಘೋರರೂಪನು ಬಂದುದಳವಿಡಿದು || ಪುರುಸಹನಿಗಳ ಸಿಡಿದು ನಿಜಬಲ| ಮೆಸರಕ್ಕರ ಭರಮೊಲೇಗೆಯ್ದಪರೊ ? ಕಾಣೆನು ಮೀವಕೇಳಂದ || &೩ || ಬರಿದು ನುಡಿದನ ಮೂತನಾಲಿಸು| ತಂದು ರಾಯನು ಒಳಲಿನೊಂದನು | ನಿಂದು ಕಣ್ಮೀರೊಳಗೆ ಸುಲಭನೆ | ಶೂಲನಾಣಗಳೆ ||
ಕಾರಂಬಕೀ ಸಂಗ್ರಹ ಚೆಹಿ ಶಂಗು ನೀ ವೇನಾಗಿ ಫೋದಿರಿ| ವೃಂದವೆಲ್ಲವು ಸೋಶವಿವುನಿ| ಸಂದಿರೆಂದೊರೆದ || ೪ || ಮಿಡಿದು ಕಣ್ಣೀಗˆಳನು ಗಣನುಂ| ಪೊಡವಿಯಲ್ಲಿರಲಾರೆನಾಂಕೇ! ಡಡಿಸಿತಿಂತು ಕುಲಕ್ಕೆ ವೀರರು ಮರಣವೈದಿದರು |] ಉಡುಗಿವೋಗುವೆವೆನ್ನ ಹರಣ| ಗಳಡಿಗಡಿಗೆ ನಾವೇಗನೆಂದೆನೆ| ನಡಿದರಾಶೂಗಂದು ನಚೆವರು ಶಾಂಶವಣನವನು || ೫ || ತಿಕೆಯೊಳಾರೈ ದ] ಶರಿದು ಮಡಿದಿರಲದಕೆ ಬೀರರುವೃಧಿಯಮಾಣುವರು || ಹೆಗೆಗಳ| ಧುರರೊಳದಿರಿಸಿ ಬೇವಿಸರ್ದೊಡೆ| ತರಳರಿರ್ರರ ಬಿಡಿಸಿ ಬರ್ಪೆವೆನುತ್ತೆ ಬಿಸಸಿದರು || ಓ || ಆರಿಪೆ, ಕೇಳ್ಸುಂ ಗಣನು ಬಳಿಕಾ| ನಿರದೆ ಭಕ್ತಿ ಮುನಿಗೆಳ| ಧರೆಯೋಗಳೆನುತ್ತೆ ಸ್ಳನ್ಯಳೆ ಪೇಳ್ತು ರಫದೊಡನೆ || ಶೆರಳೆ ಪಿಂತೆನೆ ನಾಲ್ಫು ದಳವುಂ| ಬರಲು ಚಣರೊಳ್ಳೈನಳನಲ್ಲಿಗೆ | ಧರಿಸಿ ಬಂದನು ಪರಶುಕಮಲವ ಕರದೆಮೋದಕವು || ೩ || ಕರಣಕುಷ್ಕೃಯಯದಲ್ಲಿ ಧರಿಸು] ತ್ರಿರದಿ ಸಿದ್ಧಿ ಸುಬುದ್ಧಿಯಂಬಒರು] ಮೆರಡುಪಳ್ಳ ದೊಳಿರಲು ಸಿಂಗವನೇರಿ ಮಕುಟದೊಳು || ಮೆರೆವ ತೇಯೋನಿಧಿಯ ವಿಘ್ನೇ| ಶ್ಯರನ ಮುನಿಯುಂಸ್ತುತಿಸುತಿರೆತಾ| ಮಿರಕದೆ ಕಂಡರು ಗಣನ ಸೀನಾಚಕಕು || ೮ || ನಾವು ಮಿಂದಿನ| ವರೆಗೆ ಪೇಳಿನೆ ಗಣನ ಸೈನ್ಯವು ಕೆರಳಿ ಗಣನು <ಳಪಿಲನಕೂಡೆ ಬೆನಸಿದನು | ವರಮುನೀಶ್ನರ ಪೇಳು ಬೇಗನೆ] -ರುಷನಾವನು ನಿನ್ನೆ ಸನಿಯದೊ| ಳೆರುವ ನಿಲ್ಲ ದೊಡವನಜತೆಯಲಿ ನಿನ್ನ ಕೂಲ್ಲುನೆನು || ೯ || ಆರುಮಂದಿಯ ಹಗೆಗಳೊಡನೆಯೆ| ಹಾರಿಯಾಡುವೆ ಹೀನಳಕರುಣನೆ| ಯಾರು ಪೀಳ್ಳಿಯಿವನು ? ಲೋಕದ ಜನಕೆ ಕೇಡುಗಳ || ಬಾರಿಬಾರಿಗು ದಾರಿಯಾಯ್ತಾ ಜಗಳಳಂ| || ೧೦ || ರೆಬಿಡೆಮ ದಿಟಿನೆಂದ ದೀರನೊಡನಯೆ ನಿನ್ನ ಕೊಲ್ಲ
ಬೆನಕನಮಃ&ತೆ ಎನಲು ಗಣನಾನುಡಿಯಲಾಲಿಸ| ಮುನಿಯುಳೋವಪರಿ ನುಡಿದನಸುರಗೆ| ಗನುಜ ಪಾಪಗಳೊಡೆ ನುತ್ತಭಿಜಿಕನುಗಣನೆಂದು || ನಿನಗೆ ವೆಸೆರಿಸೆ ನೀನುಗಕ್ವದೊ; ಳೆನಿಶೊ ಮುನಿಗಳ ಸಾಧು ಇಕ್ಕಷಕ| ನೆನಿಶೊಶಕ್ರಾದ್ಯವುರ ನಿಕರವ ಹಿಂಸೆ || ೧೧ || ಪರಮಶಿವನು ವಿನಾಯಕಾಕೃತಿ| ಧರಿಸಿತಿರೆಖೊಳು ಫುಟ್ರನಿನ್ನ ಯ| ಶಿರವಖಂಡಿವನೆಂದು ವೌನಿಯುನುಡಿಯೆತಾಳಿಳ || ಕೆಕಳೆಗಣತಾಂಳಕಡಿದು ಪಳ್ಬಳ| ೭5೮ವ ಸಿಡಿದುತ ಗಣಪಗೆಲ್ಲೊಡೆ! ಶರವು ಗಣಪನತಲೆಯ ಕೈಳಾಲ್ಡ್ಗಳನು ಭೇಧಿಬಕು || ೧೨ || ಶರದಪೆಟ್ಟಿಗೆ ಬೆನಳ ಮೂರ್ಛಿಸಿ| ಕೆರೆಳುತೆದ್ದನು. ಓಳಿಕಗಣನನು| ಪರಕಶುವಿಂಸಡೆಬಡಿಯೆರವಿಯದೊಲಿ೮೯ |] ಹಕತಿ ಕಿಲಿ ನಿಕದಿಮಸೆಸಿತು ವೆರೆಶುನಸ್ಯರೆ| ಶಿರವಳಕಡಿದುದು || ೧& || ಗಣನು ಬೀಳಲು ಗಣವ್ರ ರೋದಿಸಲಾಗ:.ತನಸು| ಗಣವಶಕೊರೆದಾ ಸುಕನ ಕಂಡೊಡನೆರೆಳೆ ತನುಬಾತ || ಗಣನೆ ಮುದವನನೆಂತು ನೀವಃ| ಟ್ಜಣುಗ ರಣವರೊರೆಡೆಯ ರಿತ್ತ ಜೋದೆಯೋ? ತಣಯೌ, || ೧೪ || ನಿನ್ನ ಶೇಬೋ ಓಲಮದಿ:ನಾ| ಯ್ತಿಪ್ನು ವನು ಗೆಲಿದಾ! ನಿನ್ನನೇ ಕೊಂದರೆಲೆ ಶಿವವತವೆತ್ತ || ನಿನ್ನ ದುಷ್ಕ್ರ ತ ಕರ್ಬವುದುವುಂ| ಬೆನ್ನ ಸತಿರ್ವತ್ತಿಂದುವೆರೆಗಂ| ಬಿನ್ನ ಮರಿಯರ್ಪಿರಿಯರಿದಿರೊತಿ ತಿರಿಯ ರಿಕೆಯೊಳಗೆ || ೧೫4 || ಮಗನೆ ಕೇಳ್ಳಮಡಿದ ಡತ್ರನ| ಸುಗುಣಳೆಲ್ಲರು ವುರುಗೆಯಳಿಜೆಖ| ಬಗೆದು ಮಂಕ್ರಿಗ್ರಂಥ ನೊರೆಯು ಮಡಿದ ತನುಒನಿಗೆ || ಮಿಗಿಲು ಕರ್ ವಗಣಗೆ ವಾಡಿಸು| ಚಗದೊಳತ್ತೀಂ ಫಲವನಾಂಪರು| ದುಗುಡವೇತಕ್ಕೇಳು ರಾಯನೆ ಒಣಿಕೆಯಿಂದೀನು || ೧೬ || ಬಳಿಕ ಗಣನಿಗೆ ನುಳಿದರೊಡನಧಿಜಿತ್ತು ಬೇಗನೆ] ಮಿಳಿಶನಾಗಿಯಿ ಪೌತ್ರರಂ ಕರೆಯಲೆ, || ತಳೆದು ಕರದೊಳು ಮಂತಿ,ವೆಂನುತೆ| ಘಈಳಲನೊಳಿ ನರಲ್ಗಿ ನಡೆದನು |
ಕಾದಂಬರೀ ಕಂಗಕ್ರಹ ಈ“ ಶಿಳಿದು ಕಸಿಲವಿನಾಯಳಈರ್ಕಳ ನೊಲಿಸೆ ಯೆಳೆವನೆಗೆ || ೧೭ | ವರಗಜಾಸ್ಕರನ ಮುನಿಯ ಕಂಡರ| ರೆರಗಿ ಬಳಿಕ ಭಿಜಿತು ವಿನಾಯಳ ! | ` ಕಿರೆಯೊಳಿರ್ಫುವಿವೆಲ್ಲ್ನ ನಿನ್ನಂಶಗಳೆ ನಿನ್ನೆನಿವು || ಅರಿಯದಿವು“ವು ನಿನಗ ವೆಳ್ತೆ ಯ | ಚರಿಪರೆಗ್ಗರು ಮೊದಲ ಸಸಿಂ | ಗರೊತೆತು. ದೀನ ಜನ್ಮ ವೆಂಬುದ ನರಿಯರಾ ಖಳರು || ೧೮ || ಉನ್ನ ತನ್ಶ್ಳ ಮೊಂದಿ ಜನಗಳು ಮುನ್ನ ಧಃಶತನವನು ಸಾರ್ರರು| ನಿನ್ನ ಬಿಣಳ ಹರಣವಿತ್ತರು ಪರವ ನೊಂದುವರು || ನಿನ್ನ ೫ಔರಣಳೆ ಶರಣನಃದೆತು| ನನ್ನಿ ಯೊಳು <ಈವೆಗೆಯ್ಯು ದೀಗಳೆ| ನಿನ್ನ ಕಂಡೆನು ಅಣ್ಗಳಿಂದಲಿ ಬೋಗಿಸೃದ್ಧೈ°ಯ || ೧೪ || ಪರನು ಲೊಮ್ಮನ ನಿಂದು ಸಿರುತಸಿ| ಹರುಷ ಗೆಡಳೊಳು ಮುಳುಗಿಲೋದೆನು!| ವರಗಣೇಶನೆ ನೀನು ಸದ್ಬತಿ ನೀಡ ಕರುಗೊಂಡೆ || ದರುಶನಂಗಳು ನೆದ್ಮನೆ ಪಾಪವೆ| ನೆಸರಸಿ ಕರೆಯಲಿ ಮಗೆಯನೀಪತಿ| ಈರಸಿ ವರ್ಚಿಸು ಶೊರಿವಾಣಯಋಯ || ೨೦ || ೩ ೬ ಪಿ ಇರಿಸು ಸುತರನು ಗಣನತಾಜ್ನದೆ| ಸಚಿವನು | ಮಿರಲಿ ನಿನ್ನಾ ಲೋಕ ವೂಶದೆ ಅಡಯಲೈಸಿನಿಯ || ಕರುಣಸನಗಂ ಜ್ರಾನಮಾರ್ಗವ| ಪಲಸು ವೇಪದಸೆರೆಯ ನಾಕ್ಕಗೆ| ಭರಮೊಳೆಗುತಂ ಮಣಿಯ ವಿಂದಿಟ್ಟವನು ಬೆಸಗೊಂಡ || ೨೧ || ಸಿರನದನು| ಳೇಳುತ ನಲಿದು ಬಿಟ್ಟನು ಗಣನ ಸುತರನು| ಕೆಲ ನಿತ್ತನು ತೆಗೆದು «ಈಪಿಲನಿಗೆ || ಒಬಒಒಓಇಳುತ್ತಿಲಿ ದೇರಿಗಾಶಈಕ| ೭೬ನು ಹರ್ಷವನಾಂತು ಚಿನಳನೆ| ಗೆಲಿದು ದೈತ್ಯನ ಮಣಿಯ ನಿತ್ತ ನಿಯಾದ ಕತದಿಂದ || ೨೨ || ನಿನಗೆ ಚಿಂತಾ ಮಣಯನಾವುವು| ಜನದೊಳಾಗಲಿ ದೇವಡೀವನೆ| ಳೊಂಡು ಧರಿತುದಿದೆಂದು ಬಿನ್ನೈನೆ || ಮುನಿಯು ಮಛಿವೆಖ ಮಿರ್ನರೊರೆಯಲು| ತನಶುಕಂತದವೆ ಧರಿಸಿ ಧರೆಯೊಳು| ವಿನುತ ಚಿಂತಾಮಣಯ ನಾಮದೆ ಮೆರೆದನಾಚೆನಕ || ೨೩, || ಮುನಿಯ ಮನೆ ಚೊಳು ಶನಿ^ ಸಾಂರುದು ಕಪಿಲನಾಮವು| ತನಗೆ ಪೂಮಳೆಗರೆದು ವಿಬುಧರು ಸುಮುವಿನೆಂದೊರೆಯೆ |
ಜಲಿ © ಟೆನಕನಮಹಮೆ ಕೊನೆಗೆ ವಿಘ್ನೇಶ್ವರನು ಮೆಂದೇ| ಘನಸುನಾಮವ ಸಾರಿನಡೆದನು|| ಔನಕ,ನಗರಳೆ ರಾಜಸನಚಿವರು ಸುತರು ತೆಂಳಿದಕು [| 3೪ || ನಿನಗೆ ಗಣಸ| ಶತಂದವನು ಚೆಂತಿಮಣಯೆನುತೆ| ಸಂದಬೆನಕಂ ಪ್ರಧಿತನಾರುರನೊರೆರೆನೀಕಧಿಯ || ಸಂದಭಕ್ಶಿಯೊಳಾಲಿವಾಜನ| ವೃಂದಕಿಷ್ಟವವು ಸಿದ್ದಿ ಸುವುದೈ| ಯಿಂದು ಡೂಡನ ಜನುಮುವೆರಡಿದು ಳೇಳ್ವೃಸುಜನರಿಗೆ || ೨೫ || ಇಂತು ಸ್ಕಾಂದಶುರಾಣಾಂಶಗಳತವಣವೆ ಚಿಂಕಾಮಯ್ಮು ಪಾಖ್ಯಾ ನವೊಟ ವಳನೆಯೆ ಪರಶಕಣವು ಮುಗಿಮದು. ನಿ೦\ನೆಯು ವ ಕರಣ. ಸ೩ || ಶರಳಳೆಳ್ಳು ಚರಿಸಿಯೆಳೆವನೆ ವೊಕ್ಕು ಕಪಿಲಗೆ ಪರಮಚಿಂಶಾಮಣಿಯ ನಿತನೆನುಶ ಹರನೆಎರೆದ | ಗೊರವವೇಲರೆಂತೆಡರುಗೀಡಿಯ | ರಿರರೆ ಕಂಡನು ಮುರಿಯ ಬನದೊಳು | ಕರಣಗೆಳ್ಲಾ ಯಶ್ತನಾಗದ ಪರನುಮುಣಿಗಾಗಿ || ಳೆನ| ದೊರತಿರಂರವಗುಪನುವೇ 9| ವಿರಿಡಳಲ್ದಾ ತಂಗೆಂತ್ನ ಲೊರೆದನಾತಗೆ ಶಿವನ್ರು ವಿಸ್ತರದಿಂದ ಸತ್ಕ್ರಧಿಯ || ೧ || ಕಂದಕೆಳ್ಳಿ ನಿನಗೆ ಪೇಳೈನು | ಹಿಂದೆನಡೆದಿತಿಹಾಸವನು ಮೇ! ಲಿಂದಡಗುವುದು ನಿನ್ನ ಸಂಗಿಗವಿಂದು ಪೇಳಿದನು || ಇಂದಿಕನು ತಾನೊಮ್ಮೆನಿಜ್ಜರ| ವೃಂರದಿಂದಲಿ ಆವನಿಕಲಳೆ ಯ್ಮಂದು ಕಂಡನು ಮೆರೆವ ಪರ್ಣತುಟೀರಕಂಗಳನು || ೨ || ತಿರುಗಿ ಕನಿಲನ ಪರ್ಣಶಾಳೆಯ.| ನಿರುಹಸಲ್ಪದು ತರುಸಮೂಹದೆ| ನೆರಳಿನಿಂದಲಿ ಮಿಗಿಲುಪಣ ಳಿನಂದಮಾಗಿರ್ವೆ || ಕರಮೆತಿಳಿಗೊಳದಿಂಗೆ ಹರಿವೃಳ| ರುರು ಸೆಮೂಹಡೆ ರಾಜಸಂಸರೆ| ಮೆರೆವ ಕಲರರಡೆ || ೩ |
ಕುವೆಂಬರಿ! ಹ್ನಿ ಗಿ ಬಗೆಬಗೆಯ ಳಲೆಗಲ್ನರಿಂರಲಿ| ಮಿಗಿಲು ತೆಂಗುಲವತಗೆ ಕೌಂಗುಬ| ಳಗಗಳಿಂದಲಿ ಮೆರೆವನಚ್ಚ ಣವೆಣ್ಣಗಾನದೊಳು || ಸೊಗಯಿಪಾಕುಂಜಂಗಳಿಂದಲಿ| ಒಗೆಜಗಿಪ್ಟಾಸುಮದಳಂಪಾ| ಸೊಗಮನೀವುದು ಪರ್ಣಶಾಲೆಯು ಳುಶಡೆನಮಿರೆಯಲಿ || ೪ || ಹರಿಯು ಬನದಲಿ ತಿಕುಕಿರುಂಗಿಯೆತಿ ಹೆಯವನೋಡಿಸ; ಸಕದೆಮಿಂರನು ಬೇಗೆ ಸ್ನಿಕರೊಡನೆ ಬಳಿಕನನು |] ಸರದಶಡಿಯೊಳು ನಿಂದು ನಿತ್ಕದ| ಕರಝುಮವನು ತಾಂಮಾಡಿಒಳಿಳಂ| ವರಮುನೀಶಕ ತೆರಳಿ ಬಳೆಳಲ್ಲ || ೫ | ವಿಜಿತ ಕರಣನ ಕೃಶನ ಶೀಲನ! ವಿವೆತಕರೋಷನ ಜತಿಯ ಸತ್ವನ| ವಿಜಿತ ಜೋಗನ ವೇದವೇತ್ತನ ಡೇವತಾರ್ಜಳನ | ಸುಜನನಾರವಿನುತನ ಛಾತ್ರ] ವ್ರಜಕ ವೇದಾಧ್ಯಾಪಕನುಮಂ| ವಜ್ರಿಕಂಡನು ಕಾಲವೇದ್ಭನ ತ್ರಿಗುಣ ಸಮಯುತನ || ೬ || ಮುಂಗಡಿಯೊಳಗೆ ನಿಂದು ತಾಸಾ| ಪ್ಟಾಂಗ ನತಿಯನು ಕಪಿಲಮುನಿಪಗೆ] ಹಿಂಗದಾಡರಿಸುತ್ತಲಿಂದರನು ಮಾನದಿಂದಿರಲು || ಸಂಗಹೀನಂ ಮುನಿಯಯೋಗದ| ಸಂಗವನುಳದು ಹರಿಯೆ | ಬಂದಾ ಸಂಗತಿಯ ಪೇಳೂರ್ರ ನಿಲ್ಲಿಸಿ ಬಂರ ಹದನೇನು || ಪ || ಓ . ಟನ ಏ ಇಲ ಸ ಗ್ ಉಬ್ಲಿ ನ (ಲ, ಶಸಕ ಸ ಅಚೆಗೆ ಆಕ್ಸಿ ಇಗೆ) ಇಕಜೆ \ . ಜ್ ಮುನಿಯೆ | ಸೀನೆಯ ಸರವ ತಡಿಯೊಳ್ ನಿಲಿಸಿ ನಾನೋಕ್ನ || ಒನಕೆ ಬಂದೆನು ವಿಪ್ರನಗ್ನಿ ಯ| ವಿನುತ ನೀಶನ ಮತ್ತೆ ಜಕ್ರಿಯ| ಘನದ ಪಯನ ನರಳಿಯ ನೋಡಿ ವಂದಿಸದೆ || ಲೆ || ನಡೆಯಲ್ಶೈಸಿನಿ ಘೋಪುದೆಂಬಾ| ನುಡಿಯ ಳೇಳಿಹಿನದುವೆ ಕಾಂಣ| ಡಡಿಗೆ ನಮಿಸಿದೆ ನಿನ್ನು ಕಂಡೆನು ಪಸಿವು ಮಡೆಗಿದುದು || ಮಡಿಯನುಟ್ಟೆನು ಸಕದೆ ಪವಾಪದ| ಗಡಣವಾಗದುದಿನ್ನು ನೋಡಿದೆ] ನಡಿಯ ನದರಿಂ ದಿಟದಿ ಕಿತ್ತಡಿಯೇ || ೯ || ನಾನು ತೆರೆಳುವೆ ರೇವನಗರಿಗಿ! ಸೀನೆಯೊಡನೀಗಳಿನ ಗಾಣತಿ| ಯನು <ಳುಡುವುಡೆಂಡೆನುತ ಬೆಳ್ಳಾ ಹರಿಯವಾಣಯನು || ಮಧ್ಯದಿನದೊಳ| ದೇನುಕಾರಣ ಎಕ, ಇಲೆ ಎ ಟ್ ಔ. |. ` )\೪ತಈ 8 $17 [ ಎ ೭೫
| ಜ್ ಚನಳಕನಮಹಿನು ನೀನೆಯಿಂದಲೆ ನುತ್ತ ಚಿಸಗೊಂಡ || ೧೦ || ಕರ್ಕ ಮಾತ್ರದೆ ಜಪಿಸಿ ಮುನಿಗಳ ರಿಲ್ನಿನೀನೆಯ್ತರ್ಪೆಯೆನ್ನ ಯ| ಧರ್ಕ ಜಔಯದಿಂದೋರ್ರನೆಯ್ತೆಂದೆ ಗಡತನತನಗೆ || ಘಕ್ಕ ಪೀಷಿತಮಾದ ಒಲದಿಂ| ಭನ್ಮ ಕಯ್ತಂ ದೆಲ್ಲ್ರೊಂದಿಯೆ! ತತ್ || ೧೧ || ಎನುತ ಶಿಷ್ಯರ ಘನದ ದಳವನು ಕರೆಖ್ತಿಸಲುವಾ!| ಹನಿಯು ಬಂದಾವುನಿಯ ಕಂಡಿತು ಭಕೈಭಾವದಲಿ || ಮುನಿಯು ಒಂದಿಹ ದೇವಗಣವನು| ಮನದಿ ಪಾಜಿಸಿಯಜಒನಜಾವಿಸಿ| ಜನವನಮೃತರೆ ಶೃಸ್ತಿಗೊಳಿಸಿದನಂತು ಸಂತನಡೆ || ೧೨ || ತಣದುಸುರವನು ಮುನಿಗೆ ನೀಡುವೆ| ನೆಣಸಲಾಗದೆನ್ಯತ್ತೆ ಚಿಂತಿಸಿ] ವುಣಯನಿತ್ತಳೆ ಮರುತ! ತರ್ಪುದು ಹೋಗಿನೀನೆನಲು || ಅಣಯರಂತಾಂಗೋಗಿ ಚಿಂತಾ| ಮಣಿಯ ಮಣಯು ಯೋಗಿಗೆ ನೀಡೆಧರಿಸಿದನಸುಗೆ ಸಾಮ್ಮವೆನೆ || ೧೩ || ಧರಿಸಿ ಮಣಯನು ಮುನಿಯು ಸುರಪಗಿ| ತ್ಯರವೊಲೇನೆಸಿದಿರ್ದನೀಕ್ಷಿಸಿ ಜನರು ಮೆಜ್ಜಿದುದು || ಹರಿಯು ಮುನಿಯನು ಕೇಳಿ ತನ್ನ ಯ| ಫೆರಳೆ ತೆರಳಿದ ನಿತ್ತಲಿದನುಂ| ತಿರೆಯೊಳಾಲಿಸಿ ಪಡವರೆಲ್ತರು ಸುಕೃತರಾಶಿಗಳ || ೧೪ || ಕಂತು ಸ್ಕಾಂಡರುರಾಣಾಂಕರ್ಗತವಎದ ನಿನಾಯಕವಿಚಯದೊಳ್ ಚಿಂತಾಮಯ್ಯುಪಾಖ್ಮಾನವೆಂಟ ಖಳಿಟಿನೆಯೆ ಮುಗಿಝಯೆ. ಒಂಭತ್ತನೆಯ ಪ)ಕರಣಫು. ಸೊ . ಸಾರಮಾಗಿಪ ನಿದ್ಧ ಗೂಪನ ಮ್ಯೂಕನೆ ಯೆ ಕೆಳುಕ ಮಾರನೆ | ಗಜಾಸ್ತ್ಯನೆನೆಕರೆದರು ಈಕೇನರೆವನನು : ದುರುಳಚನ ಸಂಹಾರಕವಿದುಂ| ತಿರೆಖು ಹೊರೆಯನು ತಗ್ಗಿ ಸುವುದ್ದಿ| ತರಿಸುವರದನು ಳೇಲಳ್ವರೆಲ್ಲ್ರು . ದುಃಖಸಾಗರವ || ಭಳ್ತಜನರಿಗೆ| ವರವಿಮುಕ್ರಿಯನಿತ್ತು. ಸ›ಜನರ|
ಕಾದುಬರೀ ಸರಗರಹ ಫ್ಲಿ ಥ್ನಿ ಗೊರೆಗುಮಾಕರಿಮೊಗನಚನ್ಕ್ದ ಕಧಿಯು ಳೇಳ್ವರನು || ೧ || ಸಶಕ್ಕಲೋಕದೊಳಾಳಳಿಸೆ ವಿಧಿ| ಯತ್ಕದುಭುತದ ಕತಿಯದನರಂ| ಮು ವಿದೊಳಾ ಸಮಯದೊಳಗೆ || ಅತ್ಯಧಿಕರಳುತಾಂಗನಾಗಿ| ರೌದ್ರಮುಖನುಂ| ನಿತ್ಮಾತನ ದೇಹಗಂಧಗಿ ದೆನಿಯಿ ಘಮಘಮಿಸ || ೨ || ಬಿದಿಯು ನಿರುಕಿಸಿ ಮನದೊಳಂಜಂತ| ಮಿದಿರೊಳಿರ್ದಿವನೊಡನೆ ಪೇಳ್ವನು | ಪರುಮಧವನೀನಾರು ಮಿಲ್ಲೆಗೆ ಬಂದಹದನೇನು || ಮುದದೆ ತಿಳಿಸೆನೆ ಜೃಂಭಜಾತನು| ಬಿದಿಗೆಬೇಳ್ಳನು ನಿನ್ನ ಮೊಗದೊಳೊ| ಗಿರನು ನಾನು ಚರಾಡಕಡೊಡಯನೇಳೆ ಳೆಳುವೆಯೊ || ೩ || ಕರುಣಿಸೆನಗಂ ರವ್ಯುವಸತಿಯ| ತಿರೆಯೊಳಿಂದೆನಗಜನೆ ನೀನೆನ| ಲಿರದೆ ನಿನಗಂ ಚಗದೆ ಸಿಂಧುರನೆಂಬ ಪೆಸರಕ್ಕೆ || ನೆರಿ ನಿಬೇಜ್ಮೆಯೊಳಣುಗ ವರಗಳ ಧರದೊಳೇವೆನು ಮೂರುಲೋಕದೆ ನೀನೆ ಒಲ್ಲಿದನು || ೪ || ದೀವಬೃಂದಗ| ೪೦ದ ಶಂಕರನಿಂದ ಮಾಧವ| ನಿಂದ ನೃಪಶರದಿಂದ ಮೆಂದುಂನಿನಗೆ ಸಾವಿಲ್ಲ || ಮುಂಡೆ ನಿ ಆ ತೆಟೆ ಸಿ ಫಿಸಿದಂದೇ ೯ | ಚೆಂದು ನೋಪನದಾ ವೆನಾದೊ ಡೆ| ಮೆದು ಬೊಮ್ಮ ನು ಳೊಟ್ಟನಾತಗೆ || ೫ || ಅದಳೆ ಮೆಚ್ಚುತ್ತೆರಗಿ ಸದಯೆನಾನೇಂ ಮುದಿ ನೀನೊಲಿದಿರ್ಪೆ ಸವನವಬವಪವ || ದಿದಿಯೆ ! ನಾರಿಂ ಪೋಪೆನೆಂದೆ| ಯ್ಡಿದನು ಮಾರ್ಗಾರ್ಧವನು ಸಿಂಧುರ| ನೆದೆಯೊಳೊಗೆದುರು ಒಬಂಡನೆಗ್ಮೈದನೆಂಬುದುದು || ೬ || ಪುಸಿಯನುಡಿದೇ ನಟ್ಟಿ ದನೊಫೊಂ| ಬಸಿರನಂತೇಂ ನಿಜವೊನಾಂ ಪರಿ| $ಸುವೆನೆಂದಾ ಬೊಮ್ಮ್ರನಲ್ಲಿಗೆ ಬಂದುಭುಜಗಳಲಿ || ಒಸದುತಳ್ಳಿಸಿ ಗರ್ಜಿಸಲ್ಕಾ | ಗಸವು ನಡುಗಿದುದಜನು ಧೈರದೆ| ಮಸಗಿಕೇಳ್ತನದೇಳೆ ದುರ್ಕ ತಿಯಾಯ್ತ ನಿನಗಿಂತು [| ೭ || ನಾನೆ ವರಗಳ ನಿನಗೆ ಳೊಟ್ಟೆನು| ಬೇನೆಯೊಡರಿಪಿಯೆಂದು ನೀನು ವರಗಳನಿತ್ತ ನನ್ಷ್ನನೆ ಬಂದೆಶಳ್ಳೆ ಸಲು || ನ
ಫಿ ೪ ಟಿನಶಕನಮಹಿವೆ; ಮಾನಹೀನನೆ ನಿನ್ನ ನಿರಿವನು| ತಾನು ಬೆನಳನು ದೀನನೋತಷಳನೆಂದು ಪೇಳಲು ದುರುಳಗೆರ್ಜಿಸಿದ || ಲೆ || ಬಿಟ್ಟಿದ್ದು ಬೇಗನ| ವಿಷ್ಕೃರಶ್ರವನಲ್ಲಿಗೇಳಲು] ತಾನುಸಿಂಧುರಬೆನ್ನ್ ನಟ್ಟಿದನು || ದೃಷ್ಟಿಸುತ್ತ ಜನೆಂಗಿ ಶೌರಗೆ| ನಿವೆ ಯಿಂದಲಿನುತಿಸೆ ಮುರಹರ| ಏಳೆಚಿಂತಿಪಿಸುತನೆ! ವೇಳೆ | ಸಾಕುಕಡುಸುಯ್ ನಿನ್ನ ಪಿಂದಿ| ರ್ವಾ ಕುಮಾರಳ ನಾರುರೇಳೆಂದಾತಚಿಸಗೊಳಲು || ನಾಕಜಾಧಿಪನಾನು ಬೃಂ?ಸ|ಲೀ ಕುಮಾರನು ಚಾರುಗಂಧನು| ಮಾಕುಮಂಡಲದೊಗೆದು ಪಡೆದನು ನಿಂಧುರಾಖ್ಯೆಯನು || ೧9 || ಇವನು ಬೇಡೆಲು ಸುಂದರಸ್ಮಾ | ನವನು ಕಟ್ಟಿನು ಮತ್ತಮಾಕಂ| ಬುವಿಯೊಳಾರನು ತಳ್ಳಿ ಸಲ್ಕ್ರವನಂದು ಸುಟ್ಟಪನು || ಕವಿಯದಂತೆಯೆ ಸೋಲಮೇಗಳ್| ದಿವಿಷದರ್ಕಳಿ ನಿಳೆಯನ್ಬಪರಿಂ| ದಿವಗೆ ಕೊಟ್ಟಿನು ವಕವನೆನ್ನು ಮನಪುಲೈತಂದ || ೧೧ || ಅದುವೆಕಾರಣಮಳ್ಳ ನಾಂತಾಂ| ಪದುಮನಾಭನ! ಬಂದೆನಿಲ್ಲಿಗೆ| ಪದಿದುಕಾವುದು ವರದನಿಜಕಾಂ ಲಳ್ಸ್ಯವಿ»ಗಿ+ನು || ನದಯಕೇಳೆಂಯೊರಿಯೆ ಶೌಲಯು| ಬಿದಿಯೆಚಿಂತಿಸದಿಂತು ಮೆಲ್ಲ ವಿ| ಬುಧಸಮೂಹಳೆ ಛಯವ ಮೊಳ್ಳೀವರವನೇಠಿತ್ತೆ || ೧೨ || ಇಡುವರೆಗೆ ಕಂಡಿಲ್ಲ | ಲ್ಲದನು ಬೊಮ್ಮ್ರನೆ ನಿನ್ನ ನುಷಡಿಯುಂ| ಶೊದಳು ಮಲ್ಲಿವ ನೆಮ್ಮಯಾಒಲ ಪೌರುತಷಂಗೆಳನು || ನೋಷಶಿದನಲ್ಲ್ನವ ಸುರನು| ಮೊದಲವರದಾಓಲಳೆ ಲೋಳವ| ನದುರಿಪಂಗಡ! ಶಿವನು ಕರುಣಸಲಿನನು ಮಡಿಯುವನು || ೧೩ || ಪರಿಯು“ ಸಿಂಧುರ| ನಿರದೆ ಹರಿಯನು ಳರೆಯೆಳೊಳಗೊಳ! ಕೆರಗದಿರ್ದೊಡೆ ನಿನ್ನ ನೀಬಿದಿಸಹಿತ ದಹಿಸುವೆನು || ಇಳೇಳುನೀನೆನೆ| ನಿರುಕಿಸುತ್ತೆಲೆ ಶಕ್ಶಿಹೀನರು; ನೆರೆರಿರೀಹರು ಬಗೆವೊಡೆಂತುಟುಕಾಗಲೆಳಸುವರು || ೧೪ ||
ಕಾದಂಬರೀ ಸಂಗ್ಸರಹ ೬ವನು ಬೊಮ್ಮ ನು ವೇದಜಡನ್ಳೆ| ಜವದೆ ಸೃಷ್ಟಿಯ ಮಾಡೆಶೊಡಗಿ| ರ್ವಿವನು ಶಾನ್ಯ ೪ರಾಣವೇದೆಂಗಳನು ಪಠಿನುವನು || ಬವರಮೇತಕ್ಕಿ ವಗೆ ಬಗೆವೊಡೆ| ಜವದೆಳ್ಳಲಾಸಕ್ಕೆ ವೋವುದು | ಶಿವನು ಸೆಣಸು ನೀನಲ್ಲಿ || ೧೫ || ಹರಿಯನುಡಿಯನು ಕೇಳಿದನುಜನು| ಹರಿಸದಿಂದಲಿ ಬವರ ಮೆಸಗೆ| ಲ್ಪಿರದೆ ಪಾರಿರನಂದು ಕೃಲಾಸಾದ್ರಿನಿಕಟಳ್ಕೆ || ಸುರವಿರೋಧಿಯು ಚಿಗಿದರಭಸಳೆ | ಸತಿರರು ಮನಿಚರು ಯಳ್ತ್ನನಾಗೆರು | ಗಿರಿಯುನದಿಗಳು ನಡುಗಿಮೋಡದುವು ಭಗಣಮುರುಳಿದುದು || ೧ಓ || ತೆರಳುತಲ್ಲಿಂಜಪವ ಹರನಕಂಡನು ನೊಸಲಬೂದಿಯ| ಕೊರಳರುದ್ರಾಕ್ಷೆಗಳ ವಾಮಾಂಕಸ್ಮಿಯಂಬಿಕೆಯ]| ಮನಯೊಳ್ | ಭರದೆ ಚಿಂತಿಸಿಯವನ ಮಡೆದಿಯ;| ನಿರದೆವಾತಾಳಕ್ಕ ಮುಯ್ನೆನನುತ್ತೆ ಒರೆಸೆಳದ || ೧೩ || ಗಿರಿಣಿಯಾಗಳೆ ಮೊರೆದು ಮೂರ್ಛಿತಳಾಗಿ ನಾಥನೆ| ಗರಳನೀತನು ಮೆನ್ನ ಬಲ್ಮೆಯೊಳೇಗ ಸಳೆದುಯ್ನಂ || ಹಕನೆ | ನೋಡಿಯು ತ್ತರಿಸಿ ಮೌನಧ್ಮಾನಗಳ ನೀ] ಮೆರೆಯಿಸ್ಳೆ ಧುಜದಳವ ವರಿಸನಿಸನ್ನ ಬಂಧವನು || ಇಆ || ಇಲ್ಲ್ತದಿರಲಿವನೆತ್ನ ಮುಟ್ಟುತ| ಮಿಲ್ಣವಹ್ನಿಗೆ ವಶವನೆಸಪನು| ಖುಲ್ಸ್ರನೆಂದೆನೆ ಗಿರಿಜ್ರೆ, ಗಣಗಳು ಬೇಗಬೊಬ್ಬಿರಿಯೆ || ನಿಲ್ಲ ದಾಂಕಣ್ಗ ಳನು ತೆತೆಯಲ| ವೆಲ್ಲ ಗಣಗಳು ನುಡಿರು ವೀಶನೆ| ಸೊಲ್ಲ ನಾಲಿಸು ? ಜಪವಮಾಣನ್ನು ಮೆಗೆ ಶೋಕಿಪೆವು || ೧೪ || ನಿನ್ನ ಶಕ್ತಿಯಶೋರ್ದು ಟೇಗನೆ| ಒನ್ನ ವಂ ನೀ ಹರಿಸು ಶಿವನೆ] ಮುನ್ನ ಮೆರಗುವೆವೆನಲು ಗಣದರೋದನವ || ಖಿನ್ನ ನಾಗುತೆ ತಿಳಿದನಾದೊಡ| ಒನ್ನ ಮೇಂ ನಿಮಗೆಂದು| ಲ್ಕೈ ನ್ನ ನೋಡಿಯೆ ದುರುಳನುಮೆಯನುಳೊಂಡು ಸಾರಿದನು || ೨೦ || ಬನಲು ಳಕೇಳ್ಬಾ ಧೂಶಗಣದಾ | ಧೈನಿಯ ನಂದಿಯನೇರಿ ಬೇಗನೆ! ವಿನುತಶೂಲವಡಮರುವನು ಪಿಡಿಡೋಡಿ || ಜನಿವ್ಯಜರೆಯಲ್ನು ದಯೆಯ ವುಡಿಯಕು| ಕನಜ ಗಾಹಕ ಗಕ್ಮೈ ಕೆಸ್ಸ ಓ ||೨ಗಿ ||
ಫಿಹ್ಯಿ ಜೆನಶನಹುಓಮೆ ಜಾನುಮಧ್ಯದೆ |_ ಸೆಣಸುಶಿವನೊಡೆ| ನೀನು ಗೆಲ್ಲೊಡೆಶಿವೆಯ ಕೈಳೊಳ್ಳಿದಕೆ ನಿಮ್ಮೊಳಗೆ || ನಾನು ಮಧ್ಯಸ್ಥಾನವಾಂಪೆನು | ಮಾನಿಯೆನ್ನುತೆ ಸ್ಕಾ ನದಲ್ಲಿಡೆ ಚರದೊಳಿಕ್ರರು ಕಾದಿಸೆಣಸಿದೆವು .. . . . . || ೨೨ || ಪರಕುಧಾವಿಸಿ ಬರುವ ಗುರಡೆ ನಾಂಟುತಲವಗೆ ಹಿಂಸೆಯ! ಮರೆಯೊಳಾಡರಿಸುತ್ತೆ ಬಲವನವಂಗೆ ತಳ್ಗೆ ಸಿತು || ಮರಳಿ ಪಾರ್ವನು ಶಿವನೆ | ಗೆಲ್ಪನು| ದುರುಳ ! _ ದೀವಿಯನಿತ್ತು ಜೀವಿಸು| ಒನಿದೆ ಶೂಲದಬಾಯ್ಗೆ ಸಿಲ್ರುತೆ »3ಯಬೇಡೆಂದ || ೨೩ | ಓಳನು ಳೇಳುತೆ ಧಯರೊಳುಳದನು| ಮುಳೆದು ಶಿವೆಯನು ಕ್ವೈಳಿದು ನೋದನುಬಳೆಕ ನೋಷಿ | ಗಳಿಗೆಮಾತ್ರದೆ ನೀನು ಗಿಲಿದು ತಪ್ಪಿಸಿಸೆರೆಯನೆನಗಂ| . ಮನೆಖೆ.ಲ್ಲಹುದು ನೀನಾರು || ೨೪ || ನುತ ಪೇಳ್ಳಾಕಿವೆಯ ಮಾತಿಗೆ| ತೊನೆದುಪತರ್ರನು ತನ್ನ ರೂಪದ| ಈ`ನತೆಮೆರೆಯಿಸಿ ಗೌರಬೆಕ್ಳ ಸಮೆಯ್ದಿ ಬಗೆಯೊಳಗೆ || ವಿನತಳಾಗಿಯೆ ನಾಲ್ಕು ಶೋಳಿನ| ವಿನುತ ಸಿಂಹಾಸೀನ ಸುಮುಖನ| ಧನುವನಾಂತನ ನೋಡಿ ನಲಿದಿರೆ ಬಳಿಕ ಗಣಪತಿಯು || ೨೫1 || ಮೇನಕಾತ್ಕ ಬೆ ಳೇಳಜಾಡ್ಬರು; ಮೌನಿಮುಷ್ಖರು ಜಂತುನಿವತೆಂ| ಧ್ಯಾನದಿಂದೆ ವಿರೋಧದಿಂದಲಿ ಭವವದಾಂಟುವರು || ನಾನು ಸಿಂಧುರ ದೈತ್ಯಹನನಳೆ| ಮಾನಿನೀಮಣ ನಿನ್ಷರ ಒತರದೆ| ಸಾನುರಾಗದೊಳೊಗೆವೆನಿನೆ ನಾವಿ ಐಂದೆನೀಸ್ಮಳಕೆ || ೨೬ || 349 ಶೆ) ಸಾ ೦ತಶಢರ್ನಎಂತಗ೯ ತವರ ಕ್ಲಿಕ್ ಈ ಒಂಧತ್ರನೆಯ ಪ್ರಕರಣಫು ಮುಗಿಮದು.. ಹತ್ತನೆಯ ಪ )ಈರಣ. ಸೊ ಗಿರಿಟೆಯುರಿಕರೊಳೆಂಗೆಮು ಗೆನನು ವರಗಣಾನನಿರಿದು ಧೈಶ್ಮನ ; ಸುರ ಪಾಕ್ಪರೆಕಾಯ್ತೆ ನೆನ್ನುತೆ ಗುಹಗೆ ಶಿವನೊರೆದ; ರಸಿಯೊಳೆಲ್ಲ್ಗರ ವಸುಥೆಯೊಡೆಯರ ವೀರಮುಖ್ಖರ| ಹೊಸೆದು ಬಾಧಿಸಿ ಮತ್ತೆ ಪಾರ್ರರ || ಅಸುಗಳೆದು ಪೆಣ್ಗ ಳನಪಹರಿಸಿ| ವನತಿಗಗ್ಗಿ ಯನಿತ್ಕಿ ಮುರಿದನು] ವಸಗಿಯಜ್ಜ್-ಮಹೀಜ-ಕಾನಾರಾದಿಮಂಟಪವ || ೧ ||
ಕಾಧುಬರೀ ಸರಗ್ಸರಹ ಶ್ ಒ ಮುರಿದು, ಸುರರಿಗೆ ವರವುರೋಡಾಶವನು ವಿಬುಧರು| ವಿರಿರು ಚಿಂತಿಸಿ ಬಿದಿಯ ಸನಿಯಳೆ ಸಾರಚಬೇಗದಲಿ || ಜೆಪ್ನೆಯೆಲ್ಲ್ರವ| ನೊರೆದು ಲೋಳೇಶಾಜ್ಞಿ ಯಿಂದಲಿ] ನವರುತುತಿಸಿದರು ಸ || ೨ || ಮೂರು ಮೂರ್ತಿಯನೊಂದಿಯೆಲ್ಲಗಳೆ| ಕಾರಕಣಂಗಡ ಪಂಡಧೂಶದ| ಸೂರಡಂರ್ರರ ಋಳ್ತ್ನಗಣಗಳಪತ್ತುದಿಳ್ಳು ಗಳ || ಗುಷ್ಯಯಕರ್ಕಳ| ಧಾರುಣಯೊಳಿಹ ಮತರ್ಶೃಪಶುಗಳ| ವಾರಕುತ್ಪತ್ತಿಸ್ಥಿ ಕಿಲಿಯಳ ನು *$²ರಣನು || & || ತಿಗುಣರೂಪವನೆ ನಿನೆಗೆ ನಮಿಸೆವು| ವಿಗುಣನು ನಾವು ವಿಧುವೇ ಜಗದೆ ಒಳುತರಕಾಯೆ ನಾನಾ ರೂಪವನು ಧಲನೆ || ಮಿಗಿಲು ಧೆರ್ಮೆಳೆ ಲೋನಗೆಂಯೈವ| ವಿಗಡಸಿಂಧುರನಿವನ ನೇಶತ| ಕ್ಲೊ ಗೆಯಿಸಿರ್ವೆ ? ದೇವ ! ೪ ನಂ ಕೆಂದು ಸಳಲಪತಿನುದು || ೪ || ಎಂದು ರೋದಿಪ ದೇವನಿಕರನ| ನಂದು ಕರುಣ ಸಿದ್ಧ ಗಣವರನ| ಮಂದಹರ್ಷದೊಳವತುಸಿ ಕಲೈಮುಗಿದ ದೇವರಿಗೆ || ಸುಂದರೋಕಿಯನಿದನು ಭಕ್ಶಿಗ| ೪೨ರ ಪನಿಸಲು ನೋವುದೇನೋ ಬೃಂದಮಿದಳಂ ದುಃವಿಶವುನಸ್ಮುತಿಯ ವಿಸರಳ್ಕೆ || ಈ || ಪರಮನುತಿಯನು ಚೌತಿದಿನಗೊಳು| ಪರ ಮೆಭೆಕ್ಶಿಯೊಳನ್ನ ಮುಂದೆಯೆ ಧರದಿ ಪರಿಪರ ದಮಃಮ೭`ರೋಗೆಂಗಳನು ಶತೊಲಗಸುವೆ |] ಕರುಣದಿಂದಲೆ ಕಾಮಿತಾಥˆವ| ರಿರದೆಕೊಡುನೆನು ನಾನು ಗೌರಿಯ; ಶರಳನಾಗುತೆ ವುಹ್ಟಿ ಕೊಳ್ನೆನು ದೈತೃನಿಂಧುತನ || ೬ || ನಾಮದೆ| ಮೆರೆವೆನೆಲ್ಲೆಡಯಲ್ಲಿ ಬೀಗನೆ| ದುರುಳ ದೈತ್ಯನಕೊಂದು ನಿಮ್ಮೆಯ ಪದನನಿತ್ತ್ರವಿನು || ತೆರಳುವುದು ನೀವೆಂದು ಗೆಣಪತಿ| ಋಯೊರೆದು ಗಿರಿಜಿಯ!| ಗರುಧಕಿಳದನು ಧರಿನಲ್ರವೆತಾರಾಂಶರಂಗಳನು || ೩ || ಬಸಿರು ಗಿನಿಜೆಗೆ ಒಳೆಯಲಾನಂ| ದಿಸಿದಳಾಕೆಯ ರೊಕ್ಕೆ ಗುಹನೆಹ| ರಿಸದೊಳೆನ್ನೊಡನಾಗನುಡಿದಳು ಕೇಳು ಶಂ˜ಳರನೆ[ | ರಸೆಯ ಬನದೊಳು ವಿಹರಿಸ| ಲೊಸೆದ್ದು ನಿನ್ನೊ ಡಿರಯ್ಯ ಮಾಗಿಹ| ವಸತಿಯೇರ್ಪಡಿಸೀಗ ಮೆಚ್ಪಿ ರೆನೀನು ತಿರೆಯೊಳಗೆ || ೮ ||
@ ಈ ಬೆನಳನಮಹಿನು ಸತಿಯವಾಕೃವ ಳೇಳ್ಳುಮೋದಿಸಿ| ಸೇರಿಸಿ; ನುತನೆ! ನಂದಿಯನೇರಿ ನಡೆಡೆನು ಧರೆಗೆ ಗೆಣವೆರಸಿ || ಹಿಶದೆಬಳಸುತ ರಮ್ಮ ವಿವಿನಷ| ಗತಿಯಕಾಣದೆ ಬಳಲಿಯೊಂದೆಡೆ| ವಿಶಶವಿಪಿನವ ಳಂಡೆನದರಾವರಿಯ ವೇಳುವೆನು || € || ಕರುಸಮೂಹದೆ ಖಗದವಿಸರದೆ ಹರಿತರಳ್ಳು ಗಳೆಂದೆ ನಾನಾ| ಪರಿಯ ಮೃಗಗಣದಿಂದೆ ಕೆರೆಳೊಳಸಳಳಳೊಳ್ಳದಲಿ || ಫಿರಿರು ಸಂಪಗೆಜಾಜೆಯಿಂ ತಾ| ವರೆನೊರಲಹಸುವುಷ್ಪವೃಳ್ತ ರೆ! ಪರಧ್ಬತಾದಿ ಗೆಳಿಂದೆ ನವಿಗೆಯಿಸ ಸಿದಶ್ಶುಪೆರ್ಳಳದಿಂ || ೧೦ || ಇನಿಯೆಮಾವಣ್ಣಂದೆ ಜಂಬ] ರನಿವಹೆಂಗಳಿನಲ್ಲಿ ಮೆರೆವಾ| ಫೆನದ ಸಿರಿಫೆಲದಿಂರಿ ಜಂಬೂವಿನಸೆ ತರು ಗಳಲಿ || ವಿನುಶ ಚಂದನದಿಂದ ಬನವು ತಿಂದುಕ ಳಲ್ಪವೃಳ್ಳ ದ| ಓನಗೆಳಿಂಗಲಿ ಮೆರೆವತಾಣದೊಳಿರ್ಡೆ ಸತಿಯೊಡನೆ || ಗಿಗಿ || ಗಣಗಳೆಲ್ಲ ವು ಗಾನಗೈದುವು| ಕುಣದ ರೆಲ್ಲರರ್ಘನದೆ ಬನದೊಳು ಗೆಣಗಳಿಂದಲಿ ಗಿರಿಬೆಯಿಂದಲಿ ಕೂಡಿನಾನಲ್ಲಿ |] ತಣಿದು, ಸೊಗೆಯಿಪ ಒಳ್ಳಿವನೆಯೊಳು| ಮುಣುಶಲಿರ್ಡೆನು ಸೊಗವನಾ ದು| ರ್ಗುಣಿ ಗಜಾಸುರನೆನ್ಟ್ರನ ಧಕ್ತನು ವುದನು ಮುರಿದಿಟ್ಟ || ೧೨ || ಮುಕುತಿಗಾಕಿಪ ಬಳುತನಾಗಿಯೆ` ನೆನೆದು ಜಾತಿಯ] ನಿಕಟದಲ್ಲಿಯೆ ಜನಿಸುವೆನ್ನ ನೆ ನೋಡಿಕುಂಜವನು || | ಯವಿಳವೆಂದೆನೆ ಕೇಳ್ಳುತಾಗುಪ!| ನುಳುತುಕದೊಳೆಂತು ಗಜನಾದನು ನಿನ್ನ ಕಿಂಕರನು || ೧೩ || ನೆನೆದನೆಹಗೈತನ್ನ ಜಾತಿಯ| ದನುಜನಿಂತಣ ಧವದೊಳಾರವ| `ನೆನಗೆ ವೇಳೆನೆ ಸುತನವೂತನು €ಕೇಳಿತಂಕರನು || ತನುಜಕೇಳ್ಳಿ ಸಾವಧಾನರೆ| | ಜನಪನಾದನು ಲೋಕವಾಲಕನಾಗಿ ರೀತಿಯಲಿ || ೧೪ |] ನಡೆದು ಸಿರಿಚುನು ಸಾರ್ವೃರೂನನ| ಪಡೆದು ಕಾನ್ಯಯದೆ ಳೋವಿದನೆನಿಸಿ| ಕಈ \ ಛಹ್ಯಜಃಣಾನಿ, |
ಕಾದಂಬರೀ ಸಂಗ್ರಹ ಫಿ @ ರೊಡವಿಯಲ್ಲಿ ಮಹೀಶನೆಂಬುವ| ವೊಡವಿವಾಲಕನಾಗಿ ಲೋಕಡೆ| ಪಡೆದು ಜಸವಂತನ್ನ ನೆಲಸಿರಲು || ೧೫ || ಗುರುವುಸುರವುರ ದತ್ತ ಣಂದಲಿ| ಬರಲುಕಂಡನು ಬಳಿಕ ವಿಧಿಯಿಂ| ಗುರುವನರ್ಚಿಸಲವನು ನಲಿಯುತ ನರಪನಿನಗೆಣೆವರ್ಪದೊರೆಗಳ್ | ತಿರೆಯೊಳೊರ್ವರು ಮಿಲ್ಲಸಗ್ಗದೆ | ಮೆರೆಗು ನಿನ್ನಯಒಸವು || ೧೬ || ಅರಸಳೇಳೆಂದೊರೆಯೆ ಜೀವನು| ನರಪನಾಲಿಸಿ ಗುರುವೆನಿನ್ನ ಯ| ಹರಿಳೆಸತ್ಕವಿದೆಂದಿಗಳ್ಳು ಮೊ ಪೇಳುಗೀಷ್ಪರತಿಯೆ || ದೊರೆಯನುಡಿಯನು ಕೇಳ್ಳುಜೇವನು!ಕರಿಯಜನುಮವ ಪಡೆದು ನೀನವ| ಶರಿಸಲಂದಿನ ಕಾಲಕಂನಿಚ ಮಳ್ಳು ಮಾನುಡಿಯು || ೧೭ | ನಿನಗೆ ಮುಕ್ತಿಯನಿರದೆ ಕೊಡುವನು <ಳೇಳೆನುತೊರೆಗು| ನುಕವುಕೋಹಿತನಮರನಗೆರಿಗೆ ತೆಂಳೆಓಳಿಕಿತ್ತ|] ದೆ ಧರಣಪಾಲಳಕ ನಾಡನಾಳು | ತ್ರಿರೆ ಕೃವಾನ್ಶಿತನಾಗಿ ಮಾರ್ಗದಿ | ಪೊರಮಡುತ್ತಿರಲೊಮ್ಮೆ ನಾರದಮುನಿಯು ನೋಡಿದನು || ೧೮ || ನಿರುಕಿಸುತ್ತಂ ಗಣನೆವೂಡರದೆ| ತೆರಳೆ ನರಪನು ಮುನಿಯು ಕೋಫಿಸಿ| ದೊರೆಯೆಗರ್ನದೆ ನಡದೆಯೆದರಿಂ ನೀನು ಕರಿಯಾಗು!| ಮರಳಿ ಜನ್ಮಾಂತರರೊಳುದಿಸುವೆ; ವರಗಜಾಸುರನೆಂದು ಮೆರೆಯುವೆ| ಧರದೊಳಾಗಲೆ ಶಿವನಿವಾಸಸ್ಮಾ ನ ಮಹ.ದಿಂದು || ೧೯ || ಮುನಿಯುಶಾಪವ ನಿತ್ತುನಿಡೆಯ | ಲ್ವನಿತರೊಳಗೆ ಮಹೇಶಕಾಜನು| ನೆನೆದು ಜೀವನ (1) ದೇವಮುನಿಯಾ ನುಡಿಗೆಬಿರಗಾದ || ದಿನವು ಕಳೆಯಲು ಬಳಿಳ ಮರಣವ| ಜನವನೊಂದಿಯೆ ಬನದಬಳೆಯೊಳ್ | ಜನುಮವಾಂತನು ಪಿಡಿಯ()ಬಸಿರೊಳು ಕಂದಕೇಳೆಂದ || ೨೦ || ಮೊಗದೊಳು| ಧರಿಸಿ ಮಾನುತರೂಪ ಮಂಳಿದೆಡೆ | ಸುರನರೋರಗೆಕಲ್ಲಿ ತನಗೆಣೆಯಿಲ್ಲ ಮೆನೆಮೆರೆದು |] ತಿರುಗುತೊಕ್ಮೆಯೆನತ್ತು ಗುಡಿಯನು| ಮುರಿದನರಿದುಂನೆನೆಯುತಿರ್ದನು| ಗುರುವ ಮಾತನು || ೨೧ || < & ,- - ಎ- ², ² ೪೭% ² ಟಿ ೭-೮ (\) ಬ್ರಹಸ್ಪತಿ (3) ಹೆಕ್ಣಾ ನೆ
ಜ್ಞಿ & ಟೆನಕನಮಹಿಮೆ ಮುರಿಯೆಮಂಡನವಾಗರೈತಶ್ಕನು| ಸುರರು ಮನುಒರು ನಾಗ ನಿರುಕಿಸುತ್ತಲಿ ಧೀತಿಯಾಂತಕು ಬಳಿಕ || ದುರುಳನಾಟಳೆ ಹೆದರುತೆನ್ನೊಳು| ನುರಿದಳೇಶನೆ ಕುಂಜರಾನನ| ನಕಶರೀರವನಾಂಶ ನೊರ್ರನು ಮುರಿಯೆಮಂಡಶವ || ೨೨ | ಬೆದರಿ ಗಣಗಳು ಪತ್ತುದಿಕ್ಸಿಗೆ!| ಚಡರಿ ಫೋದುವು ಸಲಹುನೀನೆನೆ| ಸುದತಿವಾಕೃವ ಕೇಳಿ ಜಪನವನು ಮಾಣ್ಣು ಫೊರಮಟ್ಟು || ಗೆರರಿ ಹದದ ಮದವಕಾರುತೆ ಕಣ್ಣಮುಡ್ಡುತೆ ಮೃತ್ಯುವಶನಾದ || ೨೩ || ಕನುವು ನೋಗೆಶಿವದಾಯನನಮ್ಪೊಂ| ಡೆನುತ ಹರಣವ ಕಳೆರೆನತುಭ! 5ನು ತಿಳಿಡಗನು, ಧಳಕ,ಹನನಕೆನಾನು ಒಬಲುನೊಂದು || ಮನಗ ಬಯಳೆಯ ತಿಳಿಸುಬೇಗನೆ| ವಿನುತವಕರವನು #ಕೊಡುವೆನೆಂದೆನೆ; ನೆನೆರು ಜಾತಿಯಬಳಿಕ ಮುಕ್ತಿಯ ನೀಡುನೀನೆಂದ || ೨೪ || ನಿನ್ನ ಹನ್ತದೆ ಮರಣವಾಂತೆನು| ನಿನ್ನ ದರ್ಶನವಾಯ್ತು ಳೊನೆಯೊಳ್ | ಮುನ್ನ ಗುರುನಾರದರೊರೆದೆರೊಲು ದಿಟವಿದಾಯ್ತೆಂದ || ನನ್ನ. ಧಳ್ತನ ನುಡಿಯೆ ಲಾಲಿಸು] ತಿನ್ನು ನಿನಗಿತ್ತೆನೆನತುಪದವಿ| ಯನ್ನು ಶೆರಳೆಂದೊರೆದೆನಲ್ಲಿಂದವನು || ೨೫ || ವ ಮೊಗವದಿವಿಚರು| ಕಳಚಿಕೊಂಡರು ಸವ್ಮುಹೂಡ್ದಿನು| ಗೆಳೆಸಿಕೊಂಡೆನು ಕೃತ್ತಿವಾಸನೆನಿಪ್ಷರನಾವುವನು || ಇಳೆಯೊಳೀಗಲು ಭಕುತನೇಹದೆ| ತಿಳಿದು ಮಾಳ್ತರು ಮೊಗದ ಫೂಜಿಯ | ನಿಳಯ ದಲ್ಲಿಯೆ ನಾನು ಭವರೋಗಕ್ಕೆ ವೈದ್ಯಳನು || ೨೬ ಅದಡಳೆಸಾರ್ದೆನು ವೈದ್ಯನಾಥಾ| ಭಿದವ ನಾರಿದನಸುರನೊರಗೆಲು] ಮುದದೆಬಂಗುವು ಧೂತಗಣಗಳು ಬಳಿಕಮಂಟಪವ || ಪದೆದುನಿರ್ಕಿಸಿ ಬಳಿಕಮಲ್ಲಿಯೆ| ಸುದತಿವೆರುದ್ಬನು ಮಹೇಶನೆ| ನೆದನುಜಾತಿಯ ಧರ್ಮ ಕೀಲದೆ || ೨೭ || ಇಲ್ಲಿ ಗೆ. ಸ್ಕಾಂದರುರಾಣಾಂಶರ್ಗತಮೂರ ವಿನಾಯಕಮಹಾಮಹಿಮೆಯೋಳ್ ಹಶ್ನೆಯಪ್ರ ಕರಂಐವು ಮುಗಿದುದು.
ಕರಾರ ೨ಬರೀ ಸಂಗ್ರಹ ಗಿ ಹನ್ನೊಂದನೆಯ ಪ )ಕರಣವು. ಸೊ|| ಗಿರಿಜೆಯುದರರೆ ಪುಟ್ಟಿ ಬೆನಕನು ವರಗಜಾನನನಾಗಿ ದೈಶ್ಶ ನ | ನಿಕಡೆಳೆ೩ಎ೨ರನು ಮೂರುಜಗವನ‡ ಕಾನುನಾಲಿಸಿಈ; ಸಿಂಧುರಾಷ್ಮಿನು ತನ್ನ ಮನೆಯೊಳು| ಚಂದದಿಂ ಕುಳಿತೊಮ್ಮೆ ಹೆಮ್ನೆಯೊ| ಕಂದು `ಒಓರ್ತಿನು ತಿರ್ದ ವನಾತಂ ತಾನೆ || ಶನ್ನ ಯ| ಸಂದಕೀರ್ತಿಯು ಪರಿದುಕೋಳಿಳು| ವೊಲ್ವಿ ಧಿಯವರವುಂಸುಖಿದೆ ಲಭಿಸಿದುದು || ೧ || ಸರಸಿಜಾನನ ವಿಷ್ಣುಕಿವರನು| ಭರದಿಇಳ್ಗೆ ಣೆ^ಮ್ನೆನನಗೆಗೆ; ತಿರೆಯೊಳಾರ್ಬಿ ಗೆಲ್ಡೆಮೂಜಗವ || ಸುರಕನರೋರಗ ಜಂಶುಮುಪಖದಿಂ| ಮರಣಮಿ ಫ್ರುದರೊಇ` | ರುರುಳ ನಾಗೆಸ ನುಡಿಯನೊಂದನು ತಾನು ಕ4ದೆನು || ೨ || ದುರುಳ ನಿನ್ನ ಮರುಳರು| ಥರಣಇಬೊಳ್ಶನ್ನ ನೆನಾಗಳಿ ಕೊ| ? ನಿಜೇಜ್ಮಿಗಳಿಂದೆ || ಗಿರಿಬೆಯುದರದೆ ನಿನ್ನ ಮರಣ೨| ನರವೆನಿಪ್ಲಾ ಗರ್ಭ ಮಿರ್ಕೆನ| ಒರಿದು ದನುಜನುಳಕರಳಿಖಿಡಿಯಿರಿ || #4 || ಮೂರುಲೋಕರೊಳೆನ್ನ ಕೊಲ್ಯರ| ದಾರುವುಟ್ಟೈ ಬಾರಿನೆಂಗಡ ವೊಡೆಯೊಳಿವಾ? ಗಭˆಪಿಂಡೆವನು || ಕ್ರೂ ರಬುದ್ಧಿ ಯನಾಂತು ಗರ್ಜಿಸಿ| ಪಾರಿಳೈಲಾಸಾದ್ರಿನಿಕಟಳೆ| ಥೀಕಕಾಣದಿ ಶಕಿವೆಯ ನಲೆದನು ಸುತ್ತಿ ಬನೆಒಬವವ || ೪ || ತಿರುತಿರುಗಿ ಬನಬನವ ಕೊನೆಯೊಳ್ | ಪಂಯಗೊಡದಾ ಒನದೆ ವುಲಗಿಹ| ಗಿರಿಜಿಯಂ ಮೇಗೆನ್ನ ನೀಕ್ಸಿಸಿ ಮಾಯೆಯಿಂದವನು || ಮರುತ ರೂಪವಧರಿಸಿ ಫೊಕ್ಕ್ರನು| ದರದೊಳಲ್ದಯೆ ನವಿಣಿ ಮಂಡಿಸಿ] ಶಿರವ ಕರದೊಳು ಪಿಡಿದು ಒಂದನು ಫಾರಗಿಸಿಂಧೂರ || ೫ || ೧
ಬೆನಳ್ನಮಹಮೆ ತೆರಳುಶಲ್ಲಿಂ ವಿಂಧ್ಯಪರ್ವತ| ಧನೆಯೊಳೊಗೆಯಲ್ ವನುಚನಾಗಳ್ | ಶಿರವ, ಬಳಿಕಾತಲೆಯು ಬೇಗನೆನೋಗಿ ನರ್ಬದಿಯ || ದುರಿತಕಾನನದವೆಯತೀರದ್ | ಳುರುಳೆ ಬೇಗ ಗೆಗೇಶಕುಂಡೆಕ, | ಕರಮೆನಕ್ನ ದೆಯುಪಲಮೆಲ್ಲ್ ತಂ ಕುಂಡದುರಲಗಳು || ಓ | ಒಡನೆಕಿಸುಗೆಲ್ಲಾ ಗಿಯವುಗಳೆ | ಪೊಡವಿಯೊಳ್ತುಧಿತಂಗಳಾದುವು| ಬಿಡದಿ ಶೋಣಗಣೇಶ ನಾಮರೆ ಪಕವುನಾವನಡಿ | ನಡದರೀತಿಯ ನರಿಯದಿದೆವು| ಳಡಿದು ಳೈತ್ಸವನೆನೆರು ಈಡವಿಧಂಕನಾಸುತೆಯು ಮಾನುಂಸುಗಿರೆವೇನೆಂಜೆ || ೭ || ಶರಳಕೇಳ್ಳೈ ಬಳಿಕ ರಕ್ಶರಸ| ತೆರಳೆ, ತನ್ನಯ ಬಳಿಕಾಂ| ಗಿನಿಜಿವೋಗುವ ಬೆಳ್ಳಿವೆ ನವುತ ) ಟ್ಟ, ದಿನವುತುಂಬಿಹುದು || ಕರಮೆನಿನ್ನಯ ಬಯಳಸಂರುದು| ತೆಂಳು ಮನೆಗೆಂದೇರಿ ನಂದಿಯ] ಪರಮ ಇಳೈಲಾಸಳ್ವೆ ಬಂದಿವು ನಾನು ಗಿರಬಾತೆ || ಲೆ || ಸಿರಂದ`ಇರಿವೆಸು ರತ್ತ ಮೆರೆವಚೌಭುಜನೆಸ್ತಶತ್ತಿಯ| ಧರನಸೈಬ್ತಿನಿ೪ನ ದೇವನ| ಸುಬುದ್ದಿ ಯುಳ್ತನ || ೪ || ಕರದೊಳಾಯುಧ ಧೆರನನೆನದಾ| ಗಿಳಿಜೆ, ನಾನೆಕೃತಾರ್ಧೆ ಧನ್ಮೆಯ; | ಕರಣಗೋಚರನಾಗ ದಿರ್ವಿನ ವಿಗೌಲನೀರನನ || ತಿಕೆಯ್ಯಸೃಸ್ಮಿಸ್ಥಿತಿಗೆ ನಾಶಕೆ| ಮೀ. ಆನೆ ವರನಿದಾನನ ಮಿಕಿಸಿದೆ “6 ಕ್ರಿಸ್“ ಕಫೆ ಇ. ‹ 3 ನು ಈಣ್ಗಳರಣರಲಿ || ೧೦ || ಏನುತಮಾತಮಾ ಶ್ಲೇಸ ಹರ್ಷದಿ| ವ.ನವ್ರ ಮುಳುಗಿರೆ ದೇಹಭಾವದ| ಶತನಗೆಮರೆದಿರೆ 7ಇಲಯೇವಿಯು, ಡೀ, ತಾತತಂಡೆ |] ಘನನಿನಾಯಳ ನಾಗನುಡಿವನು| ಜನರಿನಿನ್ನೆಯ ಫಪೊಸಯೊಳಾನೇ| ಇ ನ್ = ಜನಿಸಿನಿನ್ನ 9 ಕೊಲ್ನೆದುಷ್ಟರನು || ೧೧ || ನೆಲದಭಾರವ ನಿಳಿವೆಮಾತೆಯೆ| ಫಲಿಕುನೊಳ್ಳೆಯ ತನವು ಲೋಳೆ | ಸಲುವುದಾಹ್ಲಾದ ನಿನಗೆಂದದ ನಾಡಿಮರೆಯಾದ || ನಲವನೊಂದಿಯೆ ಬಳಿಕವಿತತ್ಲಿ ಸಿ| ತಲೆಯನುಳೆದಾ ಈರುಷರೂಪವ| ಕಲರಿಕಂಡಳು ಗಿರಿಜಿವುರುಗಿದಳಾಗ ದೈನ್ಬದೊಳು || ೧೨ ||
ಕಾದಂಬರೀ ಸಂಗ್ರಹ ಉ ಪ್ ಎನ್ನ ತನುಜನ ನಾರುಳಳ್ದರೊ| ಭಿನ್ನ ವುಸ್ತಕ ಸುತನನಿರಿಸು| ಮುನ್ನ ವಧಮುಖ ನಸ್ಮದೀಯಾತ್ಮ್ರ ಒನುತಾನಾದ || ಕನ್ನ ಮಾತ್ಸಿ ಸೆ ಕಾಣದಿರ್ಪೆನು| ತನ್ನ ಶೊರೆದವನೆತ್ತ ನೋದನ ದಿನ್ನು ಕನಸಿನ ವಾಯೆವವೆಮು ಮೋಹವೈದಿದೆನೊ || ೧೩ || ಸ್ನಾಮಿ! ಹಾ! ದೇವೇಶಿಶಿವನೇ! | ನೇಮವೇನಾಯ್ತಾನುಕೆಟ್ಟಿನು | ನೋಮಶೀಖರ ದೈ ತೃಒಂಧವ ನೇಳೆತೆನ್ಪಿಸಿದೆ || ಕಾಮದಾತನೆ ನಿನ್ನನುಡಿಯೇ| ನೈಮಹಾತ್ಮ ನೆ! ಮಾತದೆನ್ನು ಮ| ನೀಮ‰ಯೊಳಗೆ ದುಃಪಿತೀಡಾಗಿಬಶು #ಕಣಳಡೆ || ೧೪ || ಎಂದು ಶೋತಿವಸತಿಯಸನಿಯ#| ಅಂಡಿ! ಸಂದಳಥಯನು ಕಳ್ಳುಪುತ್ರನ ಶೊಡಿಯಮೇಲಿಟ್ಟು || ಅಂದುಶೋಕಿನ ಕಂಡುನನ್ನು ತ| ನಂದಿಯೊರೆದನನಿಷ್ಟ್ಯಮಾಗಿಹು| ದಿಂದುದೀವತೆಗಳ್ಲೆ ಶೋರ್ಫುದು ತಳ್ಶುದೆಂದೊರೆದ || ೧೫ || ಅದಳೆನಮ್ಮ ತಿಯಿತ್ತು ನಂದಿಯೆ| ಯದಿತಿಸುತರನಃ ಬೇಗಬರವೇ | ಳುದೆನೆ ಕೀಘ್ರ ದೊಳ೪,ಬರ ನರೆ ಗೋಗಿಸಜಿಯೊಂಗೆ | ಪದೆದು ದೆ:ವಸುವೂಜ್ಯನಾಗುತ| ಬುದನುಹೋತ್ಸ್ಯವ ರೊಳಿರೆಶಳ್ರನು | ಮದನು ನೋಡುತ ಮಣದು ನೇಳ್ವನು ನಂದಿಯವರೊಡನೆ || ೧ಓ || ಸುರರೆ! ಶಿವನನುನೆಯೊಳ್ | ತಲೆಯನುಳೆದೇ| ಗಿರಿಬೆಯುದರದಿ ಚಾರುರೂಪದೊಳ ಫುಲ್ಬ ಪನು|| ತಿಶುವನು| ಮರುಗುತಿರ್ಪನು ಶಿವೆಯುಮಳುವಳ್ | ೪ರದೊಳಯ್ಸಂದಿವರ ಸಂತ್ಮೈಸುವ್ರದು [| ೧೭ || ಬನಲುನಂದಿಯ ಮಾತನಾವಿಸಿ| ಘನಫುರಂದರ ನೇರಯಾನೆಯ| ವ್ನದಿಚಿಂತೆಯನಾತತು ನತೆದಿಮನ ಕಿವನಮಂದಿರವ || ವಿನುಶವಾಹನವೇರುತದಿತಿಯ| ತನುಒನುದೃನ ತನುಜಳೇಳರ್ಘಾದಿಯಿಂದಲಿ ಸುರತನರ್ಜಿಸಿದೆ || ೧೮ || ಒಬಳಿಕಶಳರನು ವಿದಿಯೆಕರೆದನು| ಜಳಜಫುತ್ರನ ಗರ್ಭಗೈಹದಿಂ| ಘಳೆಲನಾತಿಶುವಿಲ್ಲಿ ಗೊಯ್ನುದು ನೋಲ್ಕಿನಿರ್ಜರರು | ಮಿಳಿಶರಾಗುತೆ ತಮ್ಮ ಬುದ್ಧಿ ತಿಳೆದಮಯೊಳ್ಳೂಲ ಹೇತುವ| ಪಿಳಿಪತೆಂದೆನಲಒನು, ಮಲಗಿಸಿದ || ೧೪ ]]
ಬೆನಳನಯುಹಿಮೆ ನಿರುಕಿಸುತ್ತಲಿಸುರರು ಮಗುವನು| ಶರಧಿಮಧ್ಯದೊಳೊಗೆಯ ಬೇಕೆನು| ತೊರೆದರನಿಬರು, ಲೊಮ್ಮ ನಾಲಿಸಿ ದೇವರಿದಿರಿನೊಳು || ಒಕೆದೆನೀವರಿ ಎಲೆಲೆಶಿಶುವೇ!| ಧುವೆಯೇಳೆವಿಮಸ್ತಕತ್ವವ| ಪರನನಾಗಿಯು ರೀನುಕೋಳ#ಕಾಧಾಕಬಹುರೂಪ || ೨೦ || ದುರಿತಹಾರಿಯನೇಳಕರೂವನು| ಕಕುಣಿಸೀಗಾನಂರವೆಮಗೆನೆ| ಶಿರವನುಳಿದಾ ಶಿಹುವನೆತ್ತ9 ವಿದಿಯೆಳಂಡವೆಯೊ |] ಧಕಡಿಸೇಳೆಂದೆನಲು ಶೌರಿಯು| ಕಿವಿಯನೀಯಗೆ| ತರಳನೀನೊರೆ ನಿನ್ನ ತತ್ವವನೆಲ್ಲ ವೆಮಗೀಗ || ೨ಗಿ || ನಮಗಗೋಡರ, ನಿನಗೆತಿಳಿಯದ| ಸಮೆಯ ವಿಲ್ಲ ವದೇಕೆನುಡಿಯೈ ನಮಿಸಿಬೇಡುವೆ ನೆಂಬಬೊಮ್ಮನ ನುಡಿಯನಾಲಿಸುತ || ಅಮರನಾಧವನಿನಾಯಕಂತಾ| ನೆ ಮರುಗುತ್ತಜಗೆನುಡಿದನು ಬಿದಿ| ಸಿ || ೨೨ || ನೀನು ಮೆಚ್ಪಿ ಸಿದೆ ಮಶ್ತೆವುಟಿ ±ನೀಗಳು- ಮಿತ್ತಗೌ ತ್ತ ಗೌರಿಯ ಸೇವೆಗೆಯ್ನೆನು ಮತ್ತಸಿಂಧುರನನ್ನು || ಚಿತ್ತವೃತ್ತಿಯ ನರದುಬೊಮ್ಮ ನು] ಚಿಶ್ತದಿಎಳ್ನಲಿದಾಗ ನುಡಿಸಿದೆಯಿಯನೇನೆಂಬೆ || ೨೩ | ಐ4%, ಕಿಪ್ಪರಕ್ಸ್ಮಣೆಗಾಗಿ ಜನಿಸಿದೆ| ಮೊಗವತೋರ್ಫುದ| ನಿಷ್ಕರವಂಶೊಲಗಿವುದು ಮಾಳ್ಳುದು ನಮಗೆ ಶಿಣ . ವಿಧಿಯಬಾತೆರಗೊಳರ್ಧನ| ಸಿನ್ಟಿಸಿವಿವುಸ್ತಕರ ತಿಶುವ್ರಿಂ| ಶ್ರೇಷ್ತನಿತ್ತಿಹೆಮುನ್ನ ವಕವಮಹೀಶರಾಯಋರಿಗೆ || ೨೪ || ಕರಿಯಜನ್ಮದೆ ಜನಿಸಿಯವನೀ| ಈಶರನೆ ಹೆಸ್ತದೆ ಮುಳ್ತನಾದಾ| ಶೆರದೊಳೆಲ್ಲ್ವು ಸತ್ತ ಮಾದುವ್ರವವನಮಸ್ತ್ರಕವು | ಮೆರೆಮೆ ತರನಿಂಕೂಜ್ಯಮಿರ್ಘಿದು | ಧರಿಸಲರನಾನೊಗೆದೆ ನೆನಗದು ವಡನರಾಗುವುದು || ೨೫ || ಐನಲುಳಳ್ಳಾಗುರುವು ನಿನದವಾಲಿಸಿಮುಶ್ತೆ ಶಿಶುವೇ; ವಿನತಿಗೆಯೈನು ನನುವಿಶೃನು ವಿಜ್ಣನೀಶ್ವರನು || ಇನಮಃಖ‰ಱಶಗೆ ನಾನುಕೊಟ್ಟಾ | ಮನದಮೆಚ್ಸು ಗೆಯೆಹಗೆತಿಳಿದಿಯೋ| ವಿನುತನಿನ್ ಯ ಪರಮರೂನನ್ರ ನಮ ನನ ಗಗೋಡರವು || ಹ ||
ಕಾಕಂಟರೀ ಸಂಗ್ರಹ ಕ್ರಚ್ಗ ಮೌನದಿಂದಿಕ| ಲಂದು ನಾಕದನೊರೆದ ಬೊಮ್ಮನೆ| ಯೊಂದು ನಿಮಿತಷಂ ಸುಮ್ಮ ನಿರ್ವುದು ಶಿಶುವಳೇಳುವೆನು || ಎಂದುನಾರದ | ಕಂದನೀತಲೆ ಯುಳಿದರೆಂತುಬು| ಕಂಧರೊಡ್ಛೇದವನು ಗೈದವರಾರು ಪವೇಳೆಂದ || ೨೭ || ಮುನಿಯಮಾಶನು ಳೇಳ್ಪುಬಾಲನು| ವಿನುತನಾರರಮೊಡನೆ ಪೇಳ್ಸನು] ವಿನಶನಾಗಿಯೆ ದುಷ್ಪಯಸಿಂಧುರನೆಂಬ ದೈತ್ಯನುತಾಂ || ಸಹ ತಂ ಟೂ ಜೆಟ್ರ ಮ ಹಮ ಜ - ² 5 ೪ ಕ ರ ಬೆ ಅನಿಲರೂಪವ ನೊಂದಿಗಿರಿಜೆಯ | ತನುವೊಳೊಳ್ಕೈ ವನೆನ್ನ್ನ ಶಿರವನು| ತನಗೆಯಸ್ಕ್ಯಮು ಮಾಸದಲ್ಲಿಯೆ ಚಿವ್ರಟಿಹಾಯ್ಕಿ ದನು || ೨೮ || ಸುಕವಿರೋಧಿಯನೀಗ ಳೊಲ್ವೆನು ಕರಿಯಮೊಗವನು ಪರಮವೌನಿಯು ಮತ್ತವುವನೊಡನಿಂತು ವೇಳಿದನು || ಶಕಳಮೊಗವನು ನಾವುಜೋಡಿಸ| ಲನಿದು, ನಿನ್ಕಯ ಮೈಮೆಯಿಂರಳೆ| ಧರಿಸಬೀಕೆನುತೊತೆದು ಮೆಲ್ಲ ರುನೋಡುತಿರಲಿಂಗ || ೨೯ || ಗಿರಿಜೆಯಣುಗನು ವೂರ್ಣದೇಹವ| ಧರಿಸಿ ವಾರಣವದನನಾಗುತೆ| ವರಕಿರೀಟದೆಕರ್ಣಳುಂಡಲ ಬಾತುಯುಗ್ಮಗೊಳು || ಮೆರೆದು ಪಳ್ಳದೆ ಸಿದ್ಧಿ ಬುದ್ಧಿಯ | ರಿರದೆ ನೆರೆಯೆಲು ಕಂಡುದಿವಿಆರು | ಹರಿಸವಾಂಶುಗಜಾಸ್ಳನಿನ್ನು ಶೆ ಕರೆದು ನುತಿಸಿದರು || &೦ || ಸುರನರೋರಗರೆಲ್ಲ. ಮೊದಲೊಳು| ಫೂಜಿಸಲು ನೆಕವುಸಿದ್ಧಿಳಕುಮೆಡರು ಗೋವುದು || ==, ಇ ಸತ ೪ 00 035 ನಿರುತಮೆಂದರು ಕುಂಚರಾಸ್ಕ್ರನ| ನಿರು ಕಿಸುತ್ತಾಂತಿನೆಯು ತೊರೆದು ದುಃಖವೆ ನಾನು ಬೆನಕನ ಬೀಗ ಭವೆಸಿದಿವ್ರು || ೩೧ || ಕವಿಟಿ ಏಟಿ ವಾತಗೆ ಫಾಲಚಿಂದ್ರನ| ಪೆಟ್ ವಾಶಶಿಯಂತೆ ಸೊಗೆಯಿಸೆ| ಸಿಟಗೊಡೆಯನು ಪೂಜಿಸಿತ್ತನು ವಿಕಟನಾಮವನು. \, ನು ಪೂಜಿಸಿತ್ತ್ನು ವಿಕಟನಾಮವನು || ಪುಟ್ಟಮಗುವಿಗೆ ಒಳಿಕಮಾಡಿದ| ರಟ್ಟು ಖಾಸದೊಳಾರ್ತಿಗಳನಾ| ಪಟ್ಟ ವಣೆಯೊಳು <ಈಎರಿಸಿತ್ತಲು ಹಾಡಿಹನಿಸಿದರು || ೩೨ || ಹರಿಸವಾಂತಮರಾಳೆ ತಮಶವಮ| ಗಿರರೆ ಜೋದರು ತಮ್ಮ ಧಾಮಕೆ| ವರಗಣಾಸ್ಕ್ರನು ನೆಭಣಚೌತಿಯದಿನದಿ ಫುಟ್ಟಿದನು || ತಿರೆಯಒನರಿಗಿ ವಿಘ್ನ ವೆಲ್ಲ ವ| ಹರಿಸಿ ಮಾಳ್ನು ಬೀಗಶುಧವೆ| ಲ್ಲರಿದನಾಲಿಸಿ ಪಡೆಗೆ ತಮ್ಮಯ ವಾಂಲಛಿತಾಥˆವನು || ೩೩ || ಕ್ರಂಕು ಸ್ಕಾಂದವುರಾನಾಂಶಗಳಶವಾರ ಔಶಿನಾಯಳಕಮಹಾಮಹಿನೆಯೊಳ್ ಹುಸ್ಸೊ ಪ್ರಕರಣವು ಮುಗಿದುದು.
ಜೆನಕ್ನುಹಿತೆ) ಹನ್ನೆರಡನೆಯ ಹೆ )/ಕರಣವು. ಸಂ|| ಳುವರಳೇಳೈ ಸಿಂಧುರಾಷ್ಯನ ಬವರದಿಂದಲಿ ಗೆರೆ ಗಇಪನು | ] ಗಜಮುಖಾಭಿದ ದೇವನೊಗೆದನ| ಗಚೆಯು ದರಡೊರೆಗುತ್ತೆನಾರರೆ! ನಿಜರದೊಳರಿದುಂ ಸಿಂಧುರಾಲ್ಗನ ಮನೆಗೆ ತಾಂಪೋಗಿ || ವೃಜಿನಗ್ಬಿತ್ಕನ ನುತಿಸಿವುಂಡಿಸ| ಯಜೆನದಾಸನದಲ್ಲಿ ಬಳಿಳದಿ] ತಿಜನೆ | ನಿನಗೆ ಸಮಾನರಿರ್ಪರೆ ಮೂರುಜಗದೊಳಗೆ || ೧ || ವರವನಿಶ್ತನು ನಿನಗೆ ಬೊಮ್ಮನು| ಡರಿಸದಿರ್ದೊಡೆ ಜಪಸಮಾಧಿಯ | ಪರಮಶೂರನು ನೀನು ಮೆಂದಿನಲದೆನು ಕೇಳುತ್ತ || ಸುರಮಣಿಯೆ ಕೇಳೇಕೆಬಂದವೆ| ಯೊರೆನಿದಾನವ ಸಾವೆಧಾನಡೆ ತಿಳಿಸುನೀನೆಂದ || ೨ || ಬನಲು ಸಿಂಧುರನದನು ಳೇಳಿಯೆ| ಮುನಿಯು ನುಡಿದಂಸ್ತೇಜ್ಛೆ ಯಿಂದಲಿ] ಟ್ಮಿ \ ಇಗೆಳ್ಳಾಇನ್ ಮೆ.. @ 1೩೯೭೩ \ 75 ‰. ಸ್ಪೈ ಆ ಹೆಮಿಸ್ 1 ಓಕ್ ೪ ಆ^ಆ ೧ ೪ಲ್ಲಲ ಆ “ಜ್ , =7೪ ಆಜ್. © ಆ ೫೨ 1ಜ್% 197೫೫೯೬೯. 5%, {{ “ಹ, 1 ಕ್ 1 ಒ | 8 % 54 ಈ, | ನಿನ ಮಹ ನು ಏಣ್ ಮ ಜ್ರೆ ನನ ಚೌ ² | ಮನೆಯೊಳುದಿಸಿಹನಾತ್ಕ್ರಜಾತನು ವಿಗತಮಸ್ತಕನು || & || ಮುಂದೆ ಓರ್ರುದ| ಫಳವನಡೆವ್ರದನೆಲ್ಲ ನೊರೆವರದು| || ೫ ೩| “ರೂ ಘನ ಸೇರಿತು £ ೯35 ೪ ೧ ಮಎಳ| ಗು ಗೊ ತು ನೊ ಶಂ ಳಿಲನ್ನೆ ಘ ಮಿಳೆಯೊಳೆಂತೊಗೆದವನೊ ಕಾಗಣೆನೆನುತ್ತೆ ಚೆಸಗೊಂಡ || ೪ ||| ನುಡಿಯು ಕಿವಿಯೊಳು ವಜ್ರದಂತೆವೊ| ಲಿಡಿಯೆ ದೃತ್ಯ3 ಪೋ ದನು ಯೆಳ ರಂಗೊಂಡವೆನು ನಾರರಗೆ || ಒಓಡಿಯಕಾರುತ €ಣ್ಗಳಿಂದಲಿ| ಫತಿಷಿಘಡಿಸುತಂ ತೋಲರಿಸವನನು| ಮಡಿಪನಾತನು ಮೆನ್ಷನಾಗಸನುಡಿಯ ತೆರದೊಳಗೆ || ೫ ||
5೨ರ ಬರೀ ಸಂಗ್ರಹ ಓ ² ತರಗೊಎಳಸದೊಳಿರಿವೆನವನನು| ಭರದಿ ತೋರಂಫುದಿಲ್ಲ ದಿರ್ದೊಡೆ| ವರಮುನೀಶ್ತರನಿನ್ನ ನೀಗಳ ಮುಗಿಸಿಕೊಳ್ಳುವೆನು || ತೆರಳು ನೀನೆನೆ ಕಳ್ಣು ಮುನಿಪಂ| ಯೊರೆದನಸುರಗರೇಳೆ ದುಹಿಣನ| ೨5೫ ನೆನೆ ಅಗೋದೆ ಎಂದು ಪೇಲಳ್ಬನ ಚಂರ್ರಚೂಡನ ಸತಿಯನೊಂದಿಯೆ] ನಿಂದು ನುಡಿದನು ಸಿಂಧುರ ನಿನ್ನ ತಮುಒನನು || ಬರ್ಪೆನು| ವಂದಮತಿಯೆಂದು ನಿಜಲೋಳ | ಕೃ ೦ದು ನಡೆದನು ನಗುತ ನಾರದನೇಳೆಬಳೆಕಾಗ || ೩ || ಕರಳಿ ಸಿಂಧುರ «ನಲಿ ಪಾರುತ| ಸುರನರೋರಗೆರಿಲ್ಲ ರಂಚಟುವ| ಶೆರದೆ ಮಾರುತ ವೇ“ದಿಂದಲೆ ಒಂದು ಗಿಲವರಳೆ || ಈರಗೆ ಬಾರೈಪಗೆಯೆ ಬೇಗನೆ| ಹರಿಯು ಳಲಿಯನುನುಂಗುವಂತೆಯೆ ನಿನ್ನ ನುಂಗುವೆನು || ಲೆ || ಧುರಕೆ ಮೊರುಲೋಳಮೆ೩| ೪ರುವರಾದೊಡ ಬಹುದುಶೂರರು| 3 ಆ ತೊರಯೆ ಹೆರಣವನೆಂದು ದೈತ್ಯೆನು ಪೇಳಿ ಗಬಮುಮವಿನು || ಕರದೆ ನಾಲ್ತ ರೊಳಾಂತುವೈದುವ| ಹಲಯ ನಾದವವೂಡಿ ದುರುಳನೆ ! | ಒಓರಿಡೆ ಒಬಗ್ಳ್ಳವೆ ? ಛ ವೀರರು ತಾವೆ ನುಷಿಯು ರೆ ? || ೪ || ಬಲವನಾಂತಿರೆ ತೂಲಸನೀಗಳೆ| ಏಲನೆಮರ್ದಿಪೆ ನಿನ್ನ ಡಿಲದೆ ಬಾರೈಯೆಂದು ಮೂದಳಿಸಲ್ಕ ಸಿಂಧೂರ || ಅಲಿತಬಾಲನೆ ಗಿರಿಬೆಯೆ| ಮೊಲೆಯ ಪಾಲನು | ಗೆಲವುದಕ್ಕ್ರದು ಮಡಿವೆ ? ನೀನೆಂದ || ೧೦ || ಗಿನಿಜಿಯಂಗಣದಲ್ಲಿ ಬೇಲಿ4| ತೆರಳು ನೀನೇಕೆ ಮೆತಿಯುವೆಯೆನೆ!| ದುರುಳ ಸಿಂಧುರನೊಡನೆ ನುಡಿದನು ಗಣಪಛಿಕ್ಕರಿಸಿ || ಕರಿದು ದೀಪವು ತವುವನೆಲ್ಲವ| ಮತ್ತಗಒವನು| ಭರದೊಳಂಕುಶದಿಂದ ತಾಡಿಸುವೆ || ೧೧ || ಪನಿಕಿಸುತ್ತಿರು ನನ್ನ ಳುತುಕವ| ನಿರದೆ ನೀನೆಂಯೊರೆದು ಬಿನಳನು| ಸಾಸಿರಪಾದನಾಗುತ್ತ || ಧರದೆ ತಾಳ್ದನು ವಿಶ್ವರೂಪವ| ನಿರದೆ ಬಳಿಕಿದನೆಲ್ಲ ಮಾಸ್ಕದೊ| ಳೆರಡುಭಧುಒದಿಂ ದೂರುಯುಗ್ಮಗೊಳಂಘ್`ಯುಗಳದಲಿ || ೧೨
ಜ್ ಒಟೆನಕನಮಹಿಮೆ ಧರಣಿದೇವರು ಬಾಹುಚರ್ಳಳು| ವಿರಿದು ವೈಶ್ಯರು ಶೂರ್ರರೊಗೆದರು; ನೇಶ್ರಚಿಶ್ತದೊಳು || ಧರದೆ ಜನಿಸಿತು. ಜೀವವಾಯುವು| ಪರಮ ಜೊಮ್ಮನಕಿ`ವಯ ದೆಸೆಯಿಂ| ಮರುಶಮಿತ್ರನು ಮೊಗದಿ ನಭಗಳು ನಾಭಿಯೆಡೆಯಿಂರ || ೧೩ || ಶಿರದಿದಿವವುಂತಿರೆಯು ಪದದಿಂ| ಪರಿದು ವಾಗಳ್ದಿಕ್ಳು ಕ`ವಿಯಿಂ| ಗಿನಿಗಳೇಳುಂ ಬನವು ಸೆಪ್ತದ್ನೀಪನಾಗೆರವು || ತರದೊಳೇಳುಂ ಋಷಿಗಳೊಗೆದರು] ಭರದೊಳಿಪುತ್ತೊಂದು ಸೂಳಿನೊ! || ೧೪ || ತೋರಿದುವು ಸಿ ಯೋವಿಹರಿಸಿದುದಿಲ್ಲ ಳಿರಡಿ ಸೃಷ್ಟಿ ಕೂರದೇಹವ ಕಂಡನಾಸಿಂ| ಧೂರಬೇಗನೆ ಶರಕದೊಳ್ | ವೀರಗಣನನ ವರಗೆಜಾನನನಿತ್ತ ಸಿಂಧುರನ || ಸಾಕವೆಲ್ಲವ ನೀಗಿ ಬಳಿಕಾ| ಕವ್ರಿರನಸುವನೆ ವೀರಿರಕುಶದ| ಧಾರೆಯೊಳ್ಳುಳಿ ದೆನೆಯೆಗಂದರಿ ಘೆಸಿದಂತಾಯ್ತು || ೧೫ || ಮಡಿಯೆ ಸಿಂಧುರ ದೈತ್ಯನಲ್ಲಿಗೆ| ಗಡಣದಿಂದಲಿ ಸುರರು ಬಂದರು! ಜಡಜಣಾಶನು ಹರಿಯು ಮಾನುಂಬಂದಿವಾಸ್ಕ್ಗಳಳೆ || ಸ 7 ಸ @ | ಗಡಣದಿದಿರಿಗೆ ನುತಿಸಿಡೆಂಸ್ತ್ರವರಾಜವೆಂಬುದನು | || ೧೬ || ಅಜನು ತೀರ್ಥೋದಕದೊಳನುವಿಂ| ಗಜಮುಮಿಂರ್ಧೆವನು ಕೊಟ್ಟನು] ಧಜಿನದನು ಡ ವರುಣನನುವಿಂವಾಶಧರತಾನು| ನಿಒದ ಧಕ್ತಿಯೊಳಿಶ್ತವಾಶಕವ| ಶರಧಿಯಿತ್ತುದು] ಕಂಜವಾನುಂ ಪೊಜಿಸತ್ತೆನು ಶೂಲವಾಶರಿಗೆ || ೧೭ || ಸುರಳಣಂಬವು ಭೆಜೆಸಿಗೆಣರನ | ಸುಕಮಹೀರುಹ ಕುಸುಮಮಾಲೆಯ| ಕರಿಮು ಮಿಂಗೊಲಿದಿಯೆ ನಿಜ್ಜ್ರದುಂದುಭಿಯಬಸ ಮೊಳಗೆ | ಸುಕರಸತಿಯರು ನರ್ತಿಸುತ್ತಿರೆ| ಹರಿಸದಿಂದಲಿ ದೇವಋಖುತಿಗಳ್ | ಪರವಶಂಗಕರಿರೆ ಗಜಾಸ್ಯನು ತಾನು ಮೈಗಳೆದ || ೧ || ಪ್ರಸವಕಾಲದೊಳಿದನು ಕೇಳ್ತಡೊಡೆ| ಫ್ರಸವಿಪರ್ನಾ ರಿಯರು ಸೊಗೆದಿಂ | ಬಸಿರಬಾಲನು ಸೂಳ್ರ್ ಬುದ್ಧಿಯೊಳೆಸವ ಯಾತೆಯೊಳು || ಒಸೆದು ನೆನೆಯಲು ವಿಜಯಮಕ್ಶುಂ| ರಸೆಯ ಜನಗಳ್ವೇಳೆ ಕೋರಿಕೆ 7 ಮೂರನೆಯ ಜನಿಮೆರೆಗಿಗಣಪತಕಿಯ || ೧೯ || ಇಂಕುಸ್ಕಾಂದರುರಾಣಾಂಶರ್ಗತವೂವ ವೆಂಬ ಹನ್ನೆಕಡನೆಯ ಪ್ರಕರಣವು ಮುಗಿದರು.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ